ಪ್ರೇಮ ಕಾಶ್ಮೀರದಲ್ಲಿ ರಕ್ತದೋಕುಳಿ; ಹಿಂದೂಗಳೇ ಟಾರ್ಗೆಟ್.
ಭೂಲೋಕದ ಸ್ವರ್ಗವೆಂದೇ ಕರೆಯುವ ಜಮ್ಮು-ಕಾಶ್ಮೀರದ ಪೆಹಲ್ಗಾಮ್ ಸಮೀಪದ ಬೈಸರನ್ ಹುಲ್ಲುಗಾವಲಿನಲ್ಲಿ ಪಾಕ್ ಪ್ರಚೋದಿತ ಉಗ್ರಗಾಮಿಗಳು ಹಿಂದೂಗಳನ್ನು ಆಯ್ಕೆ ಮಾಡಿ ಗುಂಡಿಟ್ಟು ಕೊಂದಿದ್ದಾರೆ. ಅಷ್ಟು ಮಾತ್ರವಲ್ಲದೇ ಕಲ್ಮಾ ಪಠಿಸು ಎಂದು ಹೇಳುವ ಮೂಲಕ ಕಲ್ಮಾ ಬಾರದ ಮುಸ್ಲಿಮೇತರ ಹಿಂದೂಗಳನ್ನು ಅವರ ಪತ್ನಿ ಮಕ್ಕಳ ಕಣ್ಣೆದುರಲ್ಲೇ ಗುಂಡಿಟ್ಟು ಕೊಂದು ಶಾಂತಿದೂತರೆAದು ಹೇಳಿಕೊಳ್ಳುವವರು ಕ್ರೌರ್ಯದ ಅಟ್ಟಹಾಸ ಮೆರೆದಿದ್ದಾರೆ. ಉಗ್ರರ ದಾಳಿಯಲ್ಲಿ ೨೭ ಜನರು ಮೃತಪಟ್ಟಿದ್ದು, ೨೦ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಮೃತಪಟ್ಟವರಲ್ಲಿ ೨೫ ಜನರು ಹಿಂದೂಗಳಾಗಿದ್ದರೆ, ಈರ್ವರು ವಿದೇಶಿ ಪ್ರಜೆಗಳು ಸೇರಿದ್ದಾರೆ.
ಪಹಲ್ಗಾಮ್ ಕಾಶ್ಮೀರ ಕಣಿವೆಯಲ್ಲಿ ಅತ್ಯಂತ ಜನಪ್ರಿಯ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಸಮ್ಮರ್ ಟೈಮ್ನಲ್ಲಂತೂ ಈ ಕಾಶ್ಮೀರಕ್ಕೆ ಭೇಟಿ ನೀಡೋ ಪ್ರವಾಸಿಗರ ಸಂಖ್ಯೆ ಅಧಿಕ. ಹೊಸದಾಗಿ ಮದುವೆಯಾದ ಜೋಡಿ ಹನಿಮೂನ್ಗೆ ಎಲ್ಲಿಗೆ ಹೋಗ್ತೀರಾ? ಎಂದು ಯಾರಾದ್ರು ಕೇಳಿದ್ರೆ, ಹಿಂದೆ ಮುಂದೆ ಯೋಚಿಸದೇ ಹೇಳೋ ಭಾರತದ ಏಕೈಕ ಸ್ಥಳ ಅಂದ್ರೆ ಅದು ಕಾಶ್ಮೀರ. ಪ್ರವಾಸಿಗರ ಸ್ವರ್ಗವಾಗಿದ್ದ ಕಾಶ್ಮೀರ ಕಳೆದ ಮಂಗಳವಾರ ಕೆಲವೇ ಕ್ಷಣಗಳಲ್ಲಿ ನರಕವಾಗಿ ಹೋಗಿತ್ತು. ಹಸಿರು ತುಂಬಿರೋ ಪಹಲ್ಗಾಮ್ನಲ್ಲಿ ರಕ್ತದೋಕಳಿ ನಡೆದಿತ್ತು. ಭಯೋತ್ಪಾದಕರು ಪ್ರವಾಸಿಗರ ನೆತ್ತರು ಹರಿಸಿದ್ದರು. ಏಪ್ರಿಲ್ ೨೨ರಂದು ಪಹಲ್ಗಾಮ್ನ ಬೈಸರನ್ಗೆ ೧೦೦೦ ಮಂದಿ ಪ್ರವಾಸಿಗರು ಆಗಮಿಸಿದ್ದರು ಎನ್ನಲಾಗಿದೆ. ಇಲ್ಲಿಗೆ ಯಾವುದೇ ವಾಹನಗಳು ಹೋಗೋದಿಲ್ಲ. ಒಂದು ನಡೆದುಕೊಂಡೇ ಹೋಗಬೇಕು. ಇಲ್ಲವೇ ಕುದುರೆ ಸವಾರಿ ಮೂಲಕ ಈ ಜಾಗಕ್ಕೆ ತಲುಪಬೇಕು. ಈ ಭೂಲೋಕದ ಸ್ವರ್ಗದಲ್ಲಿ ಪ್ರವಾಸಿಗರು ಸಂತೋಷದಿAದ ನಲಿಯುತ್ತಿರುವಾಗ, ಮಧ್ಯಾಹ್ನ ೧.೩೦ ರ ಸುಮಾರಿಗೆ ಭಯೋತ್ಪಾದಕರ ಗುಂಪೊAದು ಹೆಚ್ಚಿನ ಸಂಖ್ಯೆಯ ಪ್ರವಾಸಿಗರನ್ನು ಗುಂಡಿಕ್ಕಿ ಕೊಂದಾಗ ದುರಂತ ಸಂಭವಿಸಿತು. ಹಸಿರು ಹುಲ್ಲುಗಾವಲಿನಲ್ಲಿ ಕೆಂಪು ರಕ್ತದೋಕುಳಿ ಚೆಲ್ಲ್ಲಾಡಿತು. ಪ್ರವಾಸಕ್ಕೆ ತೆರಳಿದ್ದ ಮೂವರು ಕನ್ನಡಿಗರೂ ಉಗ್ರರ ಗುಂಡೇಟಿಗೆ ಬಲಿಯಾಗುವ ಮೂಲಕ ಕೆಲವೇ ಕ್ಷಣಗಳಲ್ಲಿ ಭೂಲೋಕದ ಸ್ವರ್ಗ ನರಕ ಸದೃಶವಾಯಿತು. ಪಹಲ್ಗಾಮ್ನಲ್ಲಿ ಭಯೋತ್ಪಾದಕರ ದಾಳಿಯಲ್ಲಿ ೨೬ ಪ್ರವಾಸಿಗರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಸೆಕ್ಯೂರಿಟಿ ಲ್ಯಾಪ್ಸ್ ಮತ್ತು ಇಂಟೆಲಿಜೆನ್ಸ್ ಫೇಲ್ಯೂಅರ್ ಆರೋಪಗಳು ಕೇಳಿಬಂದಿವೆ. ಆದರೆ, ಅಲ್ಲಿ ಉಗ್ರರು ಗುರಿ ಮಾಡಿದ್ದು ಕೇವಲ ಹಿಂದೂಗಳನ್ನು ಮಾತ್ರ ಅಂದರೆ ಮುಸ್ಲಿಮೇತರರನ್ನು ಎಂಬುದು ಟೀಕಾಕಾರರಿಗೆ ಕಾಣಿಸುತ್ತಿಲ್ಲವೇ? ಇದು ಅತ್ಯಂತ ದುರ್ದೈವದ ಸಂಗತಿ. ಇದರ ಹಿಂದಿನ ಸಂಕೀರ್ಣತೆಯನ್ನು ಅರ್ಥಮಾಡಿಕೊಳ್ಳದೆ ಟೀಕೆ ಮಾಡುವುದು ಸರಿಯಲ್ಲ. ಈ ಕೆಲಸವನ್ನು ಉನ್ನತ ಶಿಕ್ಷಣ, ಅನುಭವ ಮತ್ತು ಕೌಶಲ್ಯ ಹೊಂದಿರುವ ತಜ್ಞರೇ ಮಾಡುತ್ತಿದ್ದಾರೆ. ಸ್ಥಳೀಯರ ಸಹಕಾರವಿಲ್ಲದೇ ಈ ದಾಳಿ ನಡೆಯಲು ಸಾಧ್ಯವಿತ್ತೇ? ಎಂಬುದರ ಬಗ್ಗೆ ಗಮನ ಹರಿಸಬೇಕು. ಇಂಥ ಸಮರ್ಥನೆಯ ಹೇಳಿಕೆಗಳಿಂದಲೇ ದುರ್ಘಟನೆಗಳು ಮೇಲಿಂದ ಮೇಲೆ ನಡೆಯುತ್ತಿವೆ ಮತ್ತು ಮುಂದೆಯೂ ನಡೆಯುತ್ತವೆ ಎಂಬುದರಲ್ಲಿ ಅನುಮಾನವಿಲ್ಲ.
ಜಮ್ಮು-ಕಾಶ್ಮೀರಕ್ಕೆ ನೀಡಿದ್ದ ಸಂವಿಧಾನದ ವಿಧಿ-೩೭೦ ವಿಶೇಷ ಸ್ಥಾನಮಾನ ತೆರವುಗೊಳಿಸಿದ ನಂತರ ಕಾಶ್ಮೀರ ಸಹಜ ಸ್ಥಿತಿಗೆ ಬಂದಿದೆ ಅಂತ ಅಂದುಕೊಳ್ಳುವಾಗಲೇ ಈ ಭೀಕರ ಘಟನೆ ನಡೆದಿದೆ. ಕೆಲವರು ಸೆಕ್ಯೂರಿಟಿ ಲ್ಯಾಪ್ಸ್ ಎಂದು ಆರೋಪಿಸಿದ್ದಾರೆ. ಇನ್ನೂ ಕೆಲವರು ಇಂಟಲಿಜೆನ್ಸ್ ಬ್ಯುರೋ ಫೇಲ್ ಆಗಿದೆ ಅಂತಿದ್ದಾರೆ. ಮತ್ತೆ ಕೆಲವರು ೩೭೦ ತೆರವುಗೊಳಿಸಿದ್ದರಿಂದಲೇ ಈ ಘಟನೆ ನಡೆದಿದೆ. ಇನ್ನೂ ಕೆಲವು ಬುದ್ಧಿ ಜೀವಿಗಳು `ಕೊಂದವರು ಮುಸ್ಲಿಮರಲ್ಲ, ಸತ್ತವರು ಹಿಂದುಗಳಲ್ಲ. ಕೊಂದವರು ಉಗ್ರರು, ಸತ್ತವರು ಅಮಾಯಕರು' ಎಂದರೆ, ಅಪ್ರಬುದ್ಧ ರಾಜಕಾರಣಿಯೊಬ್ಬರು ಉಗ್ರರು ಹಿಂದೂ ಎಂದು ಕೇಳಲೇ ಇಲ್ಲ ಎಂದು ವಾದಿಸುತ್ತ ತಮ್ಮ ಬುದ್ಧಿವಂತಿಕೆ ಪ್ರದರ್ಶಿಸುತ್ತಿದ್ದಾರೆ. ಆದರೆ, ಅಸಲಿಗೆ ಏನಾಗಿದೆ ಅನ್ನೋದರ ಸಂಪೂರ್ಣ ಮಾಹಿತಿಯೇ ಇವರಿಗಿಲ್ಲ. ಇವರು ಅಲ್ಲಿಗೆ ಹೋಗಿಲ್ಲ. ಏನೂ ಗೊತ್ತಿಲ್ಲದೇ ಕುಳಿತಲ್ಲೇ ಇವರು ಹೇಳುವುದೆಲ್ಲವೂ ಕೇವಲ ಪ್ರಚಾರಕ್ಕೆ ಮತ್ತು ತಮ್ಮ ತುಷ್ಠೀಕರಣವನ್ನು ಮುಂದುವರೆಸಲೋಸುಗ ಎಂಬುದು ಸ್ಪಷ್ಟ.
ಪಹಲ್ಗಾಮ್ ಸೈನ್ಯಕ್ಕೆ ಮುಖ್ಯ ಕೇಂದ್ರ!
ಕಾಶ್ಮೀರದ ಪಹಲ್ಗಾಮ್ ಸೈನ್ಯಕ್ಕೆ ಮುಖ್ಯ ಕೇಂದ್ರವಾಗಿದೆ. ಏಕೆಂದರೆ ಇಲ್ಲಿಂದ ಜೊಜಿಲಾ ಪಾಸ್ಗೆ ಹೋಗುವ ದಾರಿ ಶುರುವಾಗುತ್ತದೆ. ಈ ಮಾರ್ಗದ ಮೂಲಕ ಸೈನ್ಯವು ಲಡಾಖ್ನ ವಿವಿಧ ಭಾಗಗಳಿಗೆ ಶಸ್ತ್ರಾಸ್ತ್ರಗಳು, ಮದ್ದು-ಗುಂಡುಗಳು ಮತ್ತು ಇತರ ಸರಕುಗಳನ್ನು ಸಾಗಿಸುತ್ತದೆ. ಜೊತೆಗೆ, ಸೈನ್ಯವು ಬೈಸರನ್ ಹುಲ್ಲುಗಾವಲಿನಲ್ಲಿ ಒಂದು ಸಣ್ಣ ತಂಡವನ್ನು ನಿಯೋಜಿಸಿದೆ. ಈ ತಂಡವು ಅಲ್ಲಿನ ಕಾಡುಗಳಲ್ಲಿ ಭಯೋತ್ಪಾದಕರ ಚಲನವಲನಗಳ ಮೇಲೆ ನಿಗಾ ಇಡುತ್ತದೆ. ಆದರೆ, ಕಾಶ್ಮೀರದಲ್ಲಿ ಸರ್ಕಾರದ ಬದಲಾವಣೆಯಾದ ಮೇಲೆ ರಾಜ್ಯ ಸರ್ಕಾರ ಎಲ್ಲ ಕಡೆಯಲ್ಲೂ ತನ್ನ ಸೆಕ್ಯೂರಿಟಿಯನ್ನು ಕಡಿಮೆ ಮಾಡಿತ್ತು ಅನ್ನೋದು ಕೂಡ ಸತ್ಯ. ಇನ್ನು ಅಮರನಾಥ ಯಾತ್ರೆ ಸಮಯದಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ಭದ್ರತೆ ನಿಯೋಜನೆಗೊಳ್ಳುತ್ತದೆ.
ಪಹಲ್ಗಾಮ್ನಲ್ಲಿ ಇಷ್ಟು ಭದ್ರತೆಯ ನಡುವೆಯೂ ಕೂಡ ಈ ಹಿಂದೆಯೂ ದಾಳಿಯಾಗಿತ್ತು. ೨೦೦೦ರ ದಾಳಿಯೊಂದರಲ್ಲಿ ೩೦ ಜನರು ಸಾವನ್ನಪ್ಪಿದರು. ೬೦ ಜನರು ಗಾಯಗೊಂಡಿದ್ದರು. ೨೦೦೨ರಲ್ಲಿ ನಡೆದ ಮತ್ತೊಂದು ದಾಳಿಯಲ್ಲಿ ೧೧ ಜನರು ಮೃತಪಟ್ಟರು. ೨೦೧೭ರಲ್ಲಿ ಅಮರನಾಥ ಯಾತ್ರೆಯಿಂದ ವಾಪಸಾಗುತ್ತಿದ್ದ ೮ ಯಾತ್ರಿಕರ ಮೇಲೆ ಭಯೋತ್ಪಾದಕರು ದಾಳಿ ಮಾಡಿ ಕೊಂದಿದ್ದರು. ಕಳೆದ ವರ್ಷ ಉಗ್ರರ ಗುಂಡಿನ ದಾಳಿಯಲ್ಲಿ ಪ್ರವಾಸಿ ದಂಪತಿಗಳು ಗಾಯಗೊಂಡಿದ್ದರು. ೧೯೯೫ರಲ್ಲಿ ಆರು ವಿದೇಶಿ ಪ್ರವಾಸಿಗರನ್ನು ಅಪಹರಿಸಲಾಗಿತ್ತು. ಒಬ್ಬ ನಾರ್ವೇಜಿಯನ್ನ್ನು ಕೊಲ್ಲಲಾಗಿತ್ತು. ಉಳಿದವರು ಪತ್ತೆಯಾಗಲಿಲ್ಲ. ೩೭೦ ತೆರವುಗೊಳಿಸಿದ ಮೇಲೆ ನಡೆದಿದೆ ಎನ್ನುವವರಿಗೆ ಈ ಎಲ್ಲ ಘಟನೆಗಳು ನಡೆಯುವಾಗ ೩೭೦ ಅಸ್ತಿತ್ವದಲ್ಲಿತ್ತು ಎಂಬುದನ್ನು ತಿಳಿದುಕೊಳ್ಳಬೇಕು. ವಾಸ್ತವದಲ್ಲಿ ೩೭೦ ತೆರವುಗೊಳಿಸಿದ ನಂತರ ರಾಷ್ಟçಪತಿ ಆಡಳಿತ ಹೇರಿ, ಉಗ್ರ ಚಟುವಟಿಕೆಗಳನ್ನು ಸಾಕಷ್ಟು ನಿಯಂತ್ರಣಕ್ಕೆ ತರಲಾಗಿತ್ತು. ಈ ಸಂದರ್ಭದಲ್ಲಿ ನಾಗರಿಕರ ಸಾವು ನೋವುಗಳು ಸಂಭವಿಸಲಿಲ್ಲ. ಬದಲಾಗಿ ನಾಲ್ಕು ವರ್ಷಗಳ ಅವಧಿಯಲ್ಲಿ ೮೪೩ ಉಗ್ರರನ್ನು ರಕ್ಷಣಾ ಪಡೆಯವರು ಹೊಡೆದುರುಳಿಸಿದ್ದರೆ, ನಾಲ್ಕು ವರ್ಷಗಳಲ್ಲಿ ೨೨ ಯೋಧರೂ ಹುತಾತ್ಮರಾಗಿ, ಕಾಶ್ಮೀರದ ಸುರಕ್ಷೆಯನ್ನು ಕಾಪಾಡಿದ್ದರು.
ಕಾಶ್ಮೀರದಲ್ಲಿ ಸಂಪೂರ್ಣ ಶಾಂತಿ ನೆಲೆಸಲು ಕನಿಷ್ಠ ೧೦ರಿಂದ ೧೫ ವರ್ಷಗಳ ಅವಧಿ ಬೇಕಾಗಬಹುದೆಂದು ಅಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಿದ ತಜ್ಞರು ಅಂದಾಜಿಸಿದ್ದರು. ಅಲ್ಲಿಯವರೆಗೂ ಚುನಾಯಿತ ಸರ್ಕಾರ ಅಗತ್ಯವಿಲ್ಲ. ಭದ್ರತಾ ಪಡೆಗಳು ಮತ್ತು ರಾಷ್ಟçಪತಿ ಆಡಳಿತವೇ ಇರುವುದರಿಂದ ೧೫ ವರ್ಷಗಳಲ್ಲಿ ಜನರ ಮನಃಸ್ಥಿತಿ ಬದಲಾಗಬಹುದು. ಅಭಿವೃದ್ಧಿಗೆ ದಾರಿಮಾಡಿಕೊಟ್ಟು ಪ್ರವಾಸೋದ್ಯಮದ ಸ್ವರ್ಗವನ್ನು ಅಲ್ಲಿ ಸೃಷ್ಟಿಸಬಹುದು. ಕಳೆದ ಹಲವು ದಶಕಗಳಿಂದ ನೊಂದು ಬೆಂದ ಕಾಶ್ಮೀರಿಗಳಿಗೆ ಕೈತುಂಬ ಉದ್ಯೋಗ ದೊರೆಯುವಂತಾಗಿ, ಅವರ ಆರ್ಥಿಕ ಸ್ಥಿತಿಯೂ ಸುಧಾರಣೆಯೊಂದಿಗೆ ಉಗ್ರರ ಆಮಿಷಗಳಿಗೆ ಸುಲಭವಾಗಿ ಬಲಿಬೀಳುವದಿಲ್ಲ ಎಂಬುದು ಲೆಕ್ಕಾಚಾರವಾಗಿತ್ತು. ಈ ಬಗ್ಗೆ ಅಂತರ್ರಾಷ್ಟಿçÃಯ ತಂಡವೊAದು ಕೂಡ ಸಮೀಕ್ಷೆ ನಡೆಸಿ, ಜನರ ಮಾನಸಿಕತೆ ಬದಲಾಯಸುವುದು ತುಂಬ ಅಗತ್ಯ. ಭಾರತ ವಿರೋಧಿ ಭಾವನೆ ನೆಲೆಯೂರಿದೆ. ಅದು ಮೊದಲು ತೊಲಗಿದಾಗ ಕಾಶ್ಮೀರ ಭೂಲೋಕದ ಸ್ವರ್ಗವಾಗುತ್ತದೆ ಎಂದು ತಂಡ ಅಭಿಪ್ರಾಯಪಟ್ಟಿತ್ತು.
ಧ್ವದಜ ಹಾರಿಸುವುದೂ ಕಷ್ಟ
ಹೌದು ಒಂದು ಕಾಲಕ್ಕೆ ಅಲ್ಲಿ ಭಾರತದ ಧ್ವಜ ಹಾರಿಸುವುದು ಕಷ್ಟವಾಗಿತ್ತು. ನಿತ್ಯ ಗುಂಡುಗಳ ಗರ್ಜನೆ, ರಕ್ತದೋಕುಳಿಯಿಂದ ಕಾಶ್ಮೀರ ರಕ್ತಸಿಕ್ತವಾಗಿತ್ತು. ಅದನ್ನು ಹೋಗಲಾಡಿಸಲು ಜನರ ಮನಃಸ್ಥಿತಿ ಬದಲಾಗಲು ಸಾಕಷ್ಟು ಕಾಲಾವಧಿ ಅಗತ್ಯ ಎಂಬುದು ಸತ್ಯ. ೩೭೦ ತೆರವುಗೊಳಿಸಿದ ನಂತರ ವಾಸ್ತವದಲ್ಲಿ ಕಾಶ್ಮೀರದಲ್ಲಿ ಶಾಂತಿ ನೆಲೆಸಿತ್ತು. ಶಾಲಾ-ಕಾಲೆಜುಗಳು, ವ್ಯಾಪಾರ ವಹಿವಾಟುಗಳು ಆರಂಭವಾಗಿದ್ದವು. ಪ್ರವಾಸೋದ್ಯಮವೇ ಪ್ರಮುಖ ಆದಾಯವಾಗಿರುವ ಕಾಶ್ಮೀರಕ್ಕೆ ಸಾಕಷ್ಟು ಪ್ರವಾಸಿಗರು ಭೇಟಿ ನೀಡತೊಡಗಿದ್ದರು. ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಸ್ವಾತಂತ್ರೊö್ಯÃತ್ಸವ, ಗಣರಾಜ್ಯೋತ್ಸವ ಧ್ವಜಾರೋಹಣ ಮತ್ತು ಜನಗಣ ಮನ ಹಾಡುವಂಥ ಪರಿಸ್ಥಿತಿ ನಿರ್ಮಾಣವಾಗಿದ್ದು ನಿಜ. ಇನ್ನೂ ಸಂಪೂರ್ಣ ಸಹಜ ಸ್ಥಿತಿಗೆ ಬರುವ ಮೊದಲೇ ಇಷ್ಟು ಬೇಗ ಅಳಿಸಿಹೋಗುತ್ತದೆಂದು ಯಾರೂ ಅಂದುಕೊAಡಿರಲಿಲ್ಲ.
ಇದಕ್ಕೆ ಪ್ರಮುಖ ಕಾರಣ ರಾಜಕಾರಣಿಗಳು. ಅವರಿಗೆ ಅಧಿಕಾರವಿಲ್ಲದೇ ಜೀವಿಸಲಾರರು. ಕಾಶ್ಮೀರ ಹೊತ್ತಿ ಉರಿಯುವಾಗ ವಿದೇಶಗಳಿಗೆ ಹಾರಿ, ಜನರನ್ನು ಉರಿಯಲು ಬಿಟ್ಟು ಹೋದವರು, ೩೭೦ ತೆರವುಗೊಳಿಸಿದ ನಂತರ ಕಾಶ್ಮೀರದಲ್ಲಿ ಚುನಾವಣೆ ನಡೆಸಿ ಎಂದು ದುಂಬಾಲು ಬಿದ್ದರು. ಚುನಾವಣೆ ನಡೆಸಿ ಅಲ್ಲಿ ಪ್ರಜಾಪ್ರಭುತ್ವದ ಸ್ಥಾಪನೆಗೆ ಸರ್ಕಾರ ಬದ್ಧವಾಗಿದೆ ಎಂದು ಅನೇಕ ಬಾರಿ ಭರವಸೆ ನೀಡಿದ್ದರೂ, ಕೆಲವರು ನ್ಯಾಯಾಲಯದ ಮೊರೆ ಹೋದರು. ಇನ್ನು ನಮ್ಮ ನ್ಯಾಯಾಲಯ ಚುನಾವಣೆ ಯಾವಾಗ ನಡೆಸುತ್ತೀರಿ? ಎಂದು ಮೇಲಿಂದ ಮೇಲೆ ಚಾಟಿ ಬೀಸತೊಡಗಿದಾಗ, ಕೊನೆಗೂ ಕಾಶ್ಮೀರದಲ್ಲಿ ಚುನಾವಣೆ ನಡೆದು ಚುನಾಯಿತ ಸರ್ಕಾರ ಅಧಿಕಾರಕ್ಕೆ ಬಂದಿತು. ಈ ಚುನಾಯಿತ ಸರ್ಕಾರ ಅಧಿಕಾರಕ್ಕೆ ಬಂದ ನಂತರವೇ ಭಯದ ವಾತಾವರಣ ನಿವಾರಣೆಯ ಹೆಸರಿನಲ್ಲಿ ಸರ್ಕಾರ ಭದ್ರತಾ ಪಡೆಗಳನ್ನು ಕಡಿತಗೊಳಿಸಿತು. ಅದರ ಪರಿಣಾಮವೇ ಇಂದು ಮತ್ತೆ ರಕ್ತದೋಕುಳಿ ಮರುಕಳಿಸಿದೆ.
ಎಲ್ಲರೂ ಕೆಟ್ಟವರಲ್ಲ
ಕಾಶ್ಮೀರದಲ್ಲಿರುವ ಮುಸ್ಲಿಮರೆಲ್ಲರೂ ಮತಾಂಧರು ಎಂದು ಹೇಳುವಂತಿಲ್ಲ. ನಿರಂತರ ಉಗ್ರ ಚಟುವಟಿಕೆಗಳಿಂದ ಅಲ್ಲಿ ನಿರುದ್ಯೋಗ ಸಮಸ್ಯೆ ಬಹುದೊಡ್ಡ ಪ್ರಮಾಣದಲ್ಲಿ ತಾಂಡವವಾಡುತ್ತಿದೆ. ಹೀಗಾಗಿ ಕೆಲವರು ಉಗ್ರರ ಆಮಿಷಗಳಿಗೆ ಮತ್ತು ಬೆದರಿಕೆಗಳಿಗೆ ಒಳಗಾಗುವ ಸಾಧ್ಯತೆ ಇಲ್ಲದಿಲ್ಲ. ಪೆಹಲ್ಗಾಮ್ ಘಟನೆಯಲ್ಲಿ ಪ್ರವಾಸಿಗರ ರಕ್ಷಣೆಗೆ ಉಗ್ರರಿಂದ ಬಂದೂಕು ಕಿತ್ತುಕೊಳ್ಳಲು ಹೋಗಿ ಘೋಡಾವಾಲಾ ಮುಸ್ಲಿಮ್ ಯುವಕನೊಬ್ಬ ಪ್ರಾಣ ಕಳೆದುಕೊಂಡ ಘಟನೆಯೇ ಇದಕ್ಕೆ ಸಾಕ್ಷಿ. ಈ ಜನರಿಗೆ ಉಪಜೀವನಕ್ಕೆ ಉದ್ಯೋಗ ಬಹಳ ಮುಖ್ಯ ಎಂಬುದು ಇಲ್ಲಿ ಸ್ಪಷ್ಟವಾಗುತ್ತದೆ. ಆದರೆ, ಕಾಶ್ಮೀರದಲ್ಲಿ ಆಡಳಿತ ಸೂತ್ರ ಹಿಡಿದಿರುವವರಿಗೆ ಇದೆಲ್ಲಕ್ಕಿಂತ ಮುಖ್ಯ ಅಧಿಕಾರ ಮಾತ್ರ. ಅಲ್ಲಿ ಶಾಂತಿ ನೆಲೆಸುವ ಬಗ್ಗೆ ಅವರೆಂದೂ ತಲೆಕೆಡೆÀಸಿಕೊಂಡಿಲ್ಲ. ಬದಲಾಗಿ ಮೇಲಿಂದ ಮೇಲೆ ಅಲ್ಲಿನ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ವಿವಾದಾತ್ಮಕ ಹೇಳಿಕೆಗಳ ಮೂಲಕ ತಮ್ಮ ಬೇಳೆ ಬೇಯಿಸಿಕೊಳ್ಳಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು.
೩೭೦ನೇ ವಿಧಿ ರದ್ದತಿಯ ನಂತರ, ಜಮ್ಮು ಮತ್ತು ಕಾಶ್ಮೀರದಲ್ಲಿ ಭದ್ರತಾ ಪಡೆಗಳು ಮತ್ತು ಗುಪ್ತಚರ ಸಂಸ್ಥೆಗಳ ಸನ್ನದ್ಧತೆಯನ್ನು ಪರಿಶೀಲಿಸಲು ಏಪ್ರಿಲ್ ೮ ರಂದು ಅಮಿತ್ ಶಾ ಶ್ರೀನಗರದಲ್ಲಿ ಉನ್ನತ ಮಟ್ಟದ ಭದ್ರತಾ ಸಭೆ ಕೂಡ ನಡೆಸಿದ್ದರು. ಈ ಸಭೆಯಲ್ಲಿ ಕೇಂದ್ರ ಗೃಹ ಕಾರ್ಯದರ್ಶಿ ಗೋವಿಂದ್ ಮೋಹನ್, ಗುಪ್ತಚರ ಬ್ಯೂರೋ ನಿರ್ದೇಶಕ ತಪನ್ ದೇಕಾ, ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಮತ್ತು ಡಿಜಿಪಿ ಪ್ರಭಾತ್ ಭಾಗವಹಿಸಿದ್ದರು. ಕಾಶ್ಮೀರಕ್ಕೆ ಬರುವ ಪ್ರವಾಸಿಗರಿಗೆ ಯಾವುದೇ ತೊಂದರೆಯಾಗದAತೆ ಕ್ರಮ ವಹಿಸಲು ಈ ಸಭೆಯಲ್ಲಿ ಚರ್ಚೆಯಾಗಿತ್ತು. ಇಂಟೆಲಿಜೆನ್ಸ್ ಫೇಲ್ಯೂರ್ ಎಂಬ ಪದವನ್ನು ಸುಲಭವಾಗಿ ಬಳಸಿ ಟೀಕೆ ಮಾಡುವವರಿಗೆ ಇದು ಉತ್ತರವಾಗಿದೆ. ಗುಪ್ತಚರ ಕಾರ್ಯಾಚರಣೆ ಎಷ್ಟು ಸಂಕೀರ್ಣ ಎಂಬುದನ್ನು ವಿವರಿಸುತ್ತದೆ. ಇದನ್ನು ಸರಿಯಾಗಿ ಅರ್ಥಮಾಡಿಕೊಳ್ಳದೆ ಯಾರೂ ವೈಫಲ್ಯ ಎಂದು ಕರೆಯಲಾಗದು. ಇಸ್ರೇಲ್ನಂಥ ಗುಪ್ತದಳ ವಿಶ್ವದಲ್ಲೇ ಇಲ್ಲ ಎಂಬ ಮಾತಿದೆ. ಆದರೂ ಅಲ್ಲಿ ಹಮಾಸ್ ದಾಳಿ ನಡೆಸಿದ್ದು ಹೇಗೆ? ಗುಪ್ತಚರ ಸಂಗ್ರಹಣೆಯು ವಿಜ್ಞಾನವಲ್ಲ, ಬದಲಿಗೆ ಊಹೆ ಮತ್ತು ತಾಂತ್ರಿಕ ಕೌಶಲ್ಯ ಆಧಾರಿತವಾಗಿದೆ. ಒಂದು ದಾಳಿಯನ್ನು ತಡೆಯಲು ಎಲ್ಲಾ ತುಣುಕುಗಳನ್ನು ಸರಿಯಾದ ಸಮಯದಲ್ಲಿ ಸರಿಯಾಗಿ ಜೋಡಿಸಬೇಕು. ಆದರೆ, ೫೦೦-೬೦೦ ದಾಳಿಗಳನ್ನು ತಡೆದರೂ, ಒಂದು ದಾಳಿ ಯಶಸ್ವಿಯಾಗದಿದ್ರೆ ಅದು `ವೈಫಲ್ಯ' ಎಂದು ನಮ್ಮ ಪ್ರಬುದ್ಧ ಜೀವಿಗಳು ಕರೆಯುತ್ತಾರೆ.
ಪಾಕಿಸ್ತಾನ ವಿರುದ್ಧ ಈಗಾಗಲೇ ಕೇಂದ್ರ ಸರ್ಕಾರ ಅನೇಕ ಕ್ರಮಗಳನ್ನು ಘೋಷಿಸಿದೆ. ಸಾಧ್ಯವಾದರೆ, ದಾಳಿ ನಡೆಸಲೂ ಸಿದ್ಧತೆಗಳನ್ನು ಮಾಡಿಕೊಂಡಿದೆ. ಬಹುತೇಕ ವಿಪಕ್ಷಗಳು ಸರ್ಕಾರದ ಕ್ರಮಗಳಿಗೆ ತಮ್ಮ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದದ್ರೂ, ಅಪ್ರಬುದ್ಧ ನಾಯಕರಿನ್ನೂ ತಮ್ಮ ತುಷ್ಠೀಕರಣದ ಹೇಳಿಕೆಗಳ ಮೂಲಕ ಗೊಂದಲ ಉಂಟು ಮಾಡುತ್ತಿರುವುದು ದೇಶದ ಸುರಕ್ಷೆ ದೃಷ್ಟಿಯಿಂದ ಒಳ್ಳೆಯದಲ್ಲ ಎಂಬುದನ್ನು ಅರಿತುಕೊಳ್ಳಬೇಕಾಗಿದೆ. ಇಸ್ರೇಲಿನಿಂದ ಭಾರತೀಯ ರಾಜಕಾರಣಿಗಳು ಪಾಠ ಕಲಿಯಬೇಕು. ಇಲ್ಲವಾದರೆ, ಒಂದು ದಿನ ಯಾರು ಬೇಕಾದರೂ ಉಗ್ರರಿಗೆ ಬಲಿಯಾಗಬಹುದು. ಅವರಿಗೆ ತಮ್ಮವರೆಂದು ಯಾರೂ ಇಲ್ಲ ಎಂಬುದನ್ನು ಅರಿಯಬೇಕಿದೆ.
-ಎಸ್ ಆರ್. ಮಣೂರ ಹಿರಿಯ ಪತ್ರಕರ್ತರು