ads

Search This Blog

Friday, 10 January 2025

೨೦೨೫ ರ ಜನೇವರಿ ೧೨, ೧೩ ಮತ್ತು ೧೪ ರಂದು ಸ್ವಾಭಿಮಾನಿ ಶರಣ ಮೇಳ ಸಚಿವ ಸತೀಶ ಜಾರಕಿಹೊಳಿ ಅವರಿಂದ ಉದ್ಘಾಟನೆ


ಹುನಗುಂದ : ಕೂಡಲಸಂಗಮ ಕ್ರಾಸ್ ಹತ್ತಿರ ಹೂವನೂರಿನಲ್ಲಿ ಜನೇವರಿ ೧೨, ೧೩ ಮತ್ತು ೧೪ ರಂದು ಮೂರನೇ ವರ್ಷದ ಸ್ವಾಭಿಮಾನಿ ಶರಣ ಮೇಳವು ಭಕ್ತಿ ಸಂಭ್ರಮದಿಂದ ನಡೆಯಲಿದ್ದು, ಕರ್ನಾಟಕ ಸರಕಾರದ ಲೋಕೋಪಯೋಗಿ ಸಚಿವರಾದ ಸತೀಶ ಜಾರಕಿಹೊಳಿಯವರು ಬಸವ ಜ್ಯೋತಿ ಬೆಳಗಿಸಿ ದಿನಾಂಕ : ೧೩ ರಂದು ಶಿವ (ಸೋಮ) ವಾರ ಬೆಳಿಗ್ಗೆ ೧೧ ಗಂಟೆಗೆ ಉದ್ಘಾಟಿಸಲಿದ್ದಾರೆ ಎಂದು ಉತ್ಸವ ಸಮಿತಿಯ ಅಧ್ಯಕ್ಷರು ಮತ್ತು ಬೆಂಗಳೂರಿನ ಚನ್ನಬಸವೇಶ್ವರ ಜ್ಞಾನಪೀಠದ ಪೂಜ್ಯಶ್ರೀ ಜಗದ್ಗುರು ಡಾ. ಚನ್ನಬಸವಾನಂದ ಸ್ವಾಮೀಜಿ ತಿಳಿಸಿದರು.

ಶರಣ ಮೇಳದ ಸಮಾರಂಭ ಆಯೋಜನೆಯ ವೇದಿಕೆಯ ಕಾರ್ಯವನ್ನು ಪರಿಶೀಲನೆ ಮಾಡಿರುವ ಪೂಜ್ಯ ಡಾ ಚನ್ನಬಸವಾನಂದ. ಸ್ವಾಮಿಜಿ. ರಾಷ್ಟ್ರೀಯ ಅಶೋಕ ಬೆಂಡಿಗೇರಿ. ಕಲ್ಮೇಶ ಲಿಂಗಾಯತ ಇದ್ದರು.

ಇಂದು ಹುನಗುಂದದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಕಲಬುರಗಿಯ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಬಸವ ಧ್ವಜಾರೋಹಣ ಮಾಡಲಿದ್ದಾರೆ. ಬಸವ ತತ್ವ ಚಿಂತಕರಾದ ಕಲಬುರ್ಗಿಯ ಶರಣೆ ಮೀನಾಕ್ಷಿ ಬಾಳಿ ಉಪನ್ಯಾಸ ನೀಡಲಿದ್ದಾರೆ ಎಂದು ತಿಳಿಸಿದರು. ಸಮ್ಮುಖವನ್ನು ಕ್ರಾಂತಿ ಗಂಗೋತ್ರಿ ಮಹಿಳಾಗಣದ ರಾಷ್ಟ್ರೀಯ ಅಧ್ಯಕ್ಷರಾದ ಪೂಜ್ಯ ಸದ್ಗುರು ಮಾತೆ ಸತ್ಯಾದೇವಿಯವರು ವಹಿಸಲಿದ್ದು, ಕುಣಿಗಲ್ ಅರೆಶಂಕರ ಮಠದ ಶ್ರೀ ಸಿದ್ಧರಾಮ ಚೈತನ್ಯ ಸ್ವಾಮಿಗಳು, ಚಿಕ್ಕಮಗಳೂರಿನ ವಿಶ್ವಧರ್ಮ ಪೀಠದ            ಶ್ರೀ ಜಯಬಸವಾನಂದ ಸ್ವಾಮಿಗಳು, ಮಂಡ್ಯದ ಓಂಕಾರೇಶ್ವರ ಸ್ವಾಮಿಗಳು, ಚಳ್ಳಕೆರೆಯ ಗುರು ಸ್ವಾಮಿಗಳು, ಧಾರವಾಡದ ಶ್ರೀ ಅಬ್ದುಲ್ ರಜಾಕ ಖಾದ್ರಿ ಸೂಫಿ ಸಂತರು ಸಾನಿಧ್ಯ ವಹಿಸಲಿದ್ದಾರೆ. ಚಿಕ್ಕಮಗಳೂರು ರಾಷ್ಟ್ರೀಯ ಬಸವದಳದ ಗಣನಾಯಕರಾದ ಬಾಣೂರು ಚನ್ನಪ್ಪ ಅಧ್ಯಕ್ಷತೆ ವಹಿಸುವರು.

ಕಬುರ್ಗಿಯ ನಿವೃತ್ತ ಕೆ.ಎ.ಎಸ್. ಅಧಿಕಾರಿ ಎಸ್. ದಿವಾಕರ, ಬಸವತತ್ವ ಚಿಂತಕ ಶ್ರೀಶೈಲ ಜಿ. ಮಸೂತಿ ಬೆಂಗಳೂರು ಹಾಗೂ ಸದಾಶಿವ ಹಚ್ಚಡದ್ ಚಿಕ್ಕೋಡಿ ಅನುಭಾವ ನೀಡಲಿದ್ದಾರೆ. ಮುಂಬೈ ಮಹಾನಗರ ಪಾಲಿಕೆಯ ಮಾಜಿ ಮಹಾಪೌರ ಶಶಿಕಾಂತ ಬಿರಾಜದಾರ, ಹೈದ್ರಾಬಾದಿನ ವೆನ್ನ ಈಶ್ವರಪ್ಪ, ಸಂಗಮೇಶ್ವರಜಿ, ಸೋಲಾಪೂರದ ವಿಜಯಕುಮಾರ ಹತ್ತೂರೆ, ನವದೆಹಲಿಯ ವೈಜನಾಥ ಬಿರಾದಾರ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ದಿನಾಂಕ: ೧೨ ರಂದು ಬೆಳಿಗ್ಗೆ ೧೦-೩೦ ಗಂಟೆಗೆ ಲಿಂಗಾಯತ ಧರ್ಮ ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷ ಶಿವರಾಜ ಪಾಟೀಲ ಅತಿವಾಳ ಅವರ ಅಧ್ಯಕ್ಷತೆಯಲ್ಲಿ ಚಿಂತಾಗೋಷ್ಠಿ-೧ ನಡೆಯಲಿದೆ. ಬಸವಧರ್ಮ ಪೀಠದ ವಿವಾದ ಬಗೆಹರಿಸಿಕೊಂಡು ಒಂದಾಗುವ ಕುರಿತು ಮತ್ತು ಧರ್ಮಗ್ರಂಥ ಬಿಡುಗಡೆ, ಲಿಂಗಾಯತ ಸ್ವತಂತ್ರ ಧರ್ಮದ ಮಾನ್ಯತೆಗಾಗಿ ಮುಂದೆ ರೂಪಿಸಬೇಕಾದ ಹೋರಾಟದ ಕುರಿತು ಚರ್ಚೆ ನಡೆಯಲಿದೆ. ಸಂಜೆ ೫-೦೦ ಗಂಟೆಗೆ ಚಿಂತಾಗೋಷ್ಠಿ-೨ ನಡೆಯಲಿದ್ದು, ರಾಷ್ಟ್ರೀಯ ಬಸವದಳದ ರಾಜ್ಯಾಧ್ಯಕ್ಷ ಬಸವರಾಜ ಪಾಟೀಲ ಶಿವಪುರ, ವಿಷಯ ಮಂಡನೆ ಮಾಡಲಿದ್ದಾರೆ. ಅಧ್ಯಕ್ಷತೆಯನ್ನು ಶೆಗುಣಸಿ ರಾಷ್ಟ್ರೀಯ ಬಸವದಳದ ಅಧ್ಯಕ್ಷ ಮೋಹನ ಕರೆಪ್ಪನವರ ವಹಿಸಲಿದ್ದಾರೆ. ಉದ್ಘಾಟನೆಯನ್ನು ಲಿಂಗಾಯತ ಸಮನ್ವಯ ಸಮಿತಿಯ ರಾಜ್ಯ ಸಂಚಾಲಕ ಶ್ರೀಕಾಂತ ಸ್ವಾಮಿಯವರು ಉದ್ಘಾಟಿಸುವರು. ಪಿರಗೊಂಡ ಪಾಟೀಲ ವಿಜಯಪುರ ಧ್ವಜಾರೋಹಣ ಮಾಡಲಿದ್ದಾರೆ. ದಿನಾಂಕ: ೧೩ ರಂದು ಸಾಯಂಕಾಲ ೪ ರಿಂದ ೬ ಗಂಟೆಯವರೆಗೆ ಮಕ್ಕಳ ಗೋಷ್ಠಿ ನಡೆಯಲಿದ್ದು, ಸಂಜೆ ೬-೦೦ ಗಂಟೆಗೆ ರಾಷ್ಟ್ರೀಯ ಬಸವದಳದ ಸಮಾವೇಶ ಪ್ರಾರಂಭವಾಗುವುದು. ಕಲಬುರ್ಗಿ ಯುನೈಟೆಡ್ ಆಸ್ಪತ್ರೆಯ ಮಾಲೀಕರಾದ ಡಾ. ವಿಕ್ರಮ ಸಿದ್ಧಾರೆಡ್ಡಿ ಉದ್ಘಾಟನೆ ಮಾಡುವರು. ಶರಣ ಸಾಹಿತಿಗಳಾದ ಸಚ್ಚಿದಾನಂದ ಚಟ್ನಳ್ಳಿ, ಕಲಬುರ್ಗಿಯ ಸರಕಾರಿ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯರಾದ ಇಂದುಮತಿ ಪಾಟೀಲ, ಬೀದರಿನ ಸಿದ್ಧವೀರ ಸಂಗಮದ ಅವರು ಉಪನ್ಯಾಸ ನೀಡಲಿದ್ದಾರೆ. ಹಿರಿಯೂರಿನ ಶರಣ ತಾರಕನಾಥ ಅಧ್ಯಕ್ಷತೆ ವಹಿಸುವರು. 

ದಿನಾಂಕ: ೧೪ ಬಸವ ಕ್ರಾಂತಿಯ ದಿನದಂದು ಲಿಂಗಾಯತ ಧರ್ಮ ಸಂಸ್ಥಾಪನ ದಿನಾಚರಣೆ ನಿಮಿತ್ಯ ಸಮುದಾಯ ಪ್ರಾರ್ಥನೆ, ವಚನ ಪಠಣ, ಸಾಮೂಹಿಕ ಇಷ್ಟಲಿಂಗಪೂಜೆ ಹಾಗೂ ಶರಣವ್ರತಧಾರಿಗಳಿಗೆ ಆಶೀರ್ವಾದ ಮಾಡುವ ಕಾರ್ಯಕ್ರಮ ಇರುತ್ತದೆ. ಪೂಜ್ಯಶ್ರೀ ಅಭಿನವ ಗುರುಲಿಂಗಾರೂಢರು ಹೂವನೂರ, ಮಲಕನಕೊಪ್ಪ ಅಕ್ಕಮಹಾದೇವಿ ಮಠದ ಮಾತೆ ಶಾಂತಾದೇವಿಯವರು ಮತ್ತು ಮುಕ್ತಿನಾಥಯ್ಯ ಮಠ ದೂಮನಸೂರಿನ ಶ್ರೀ ಶಂಕರಲಿoಗ ಸ್ವಾಮಿಗಳು ಮತ್ತು ಸಾನಿಧ್ಯ ವಹಿಸಿದ ಎಲ್ಲಾ ಪೂಜ್ಯರು ಉದ್ಘಾಟನೆ ನೆರವೇರಿಸಲಿದ್ದಾರೆ. ಮಾಜಿ ಸಚಿವ ಮುರಗೇಶ ನಿರಾಣಿ ಅವರ ಧರ್ಮಪತ್ನಿ ಕಮಲಮ್ಮ ಮುರಗೇಶ ನಿರಾಣಿ ಅವರು ಬಸವ ಧ್ವಜಾರೋಹಣ ಮಾಡುವರು. ದಾಸೋಹಿಗಳಾದ ಶರಣೆ ಲೇಪಾಕ್ಷಮ್ಮ ವೀರಭದ್ರಗೌಡರು ಇವರಿಂದ ಗುರುಬಸವ ಪೂಜೆ ನಡೆಯಲಿದೆ. ಕು. ತರಂಗಿಣಿ ಕಲ್ಮೇಶ ರಾಷ್ಟ್ರೀಯ ಬಸವದಳ ಚಿತ್ರದುರ್ಗ, ಕು. ವಾಣಿ – ಕು. ವಚನ ಸಾಹಿತ್ಯ ಸಂತೋಷ ಕಟಾಳೆ ರಾಷ್ಟ್ರೀಯ ಬಸವದಳ ಕಲಬುರಗಿ, ಕು. ಕಾವೇರಿ ಶಿವಕುಮಾರ ಕಟಗಿ ರಾಷ್ಟ್ರೀಯ ಬಸವದಳ ಧಾರವಾಡ ಇವರಿಂದ ವಚನ ನೃತ್ಯ ನಡೆಯಲಿದೆ. ಶರಣೆ ಹರ್ಷಿತಾ ಶಿವರುದ್ರ ದಂಪತಿಗಳು ಜನ್ಯಾ ಆರ್ಕೆಸ್ಟಾç, ಮೈಸೂರು, ಶರಣೆ ಅಕ್ಕಮಹಾದೇವಿ ಶಿವಾನಂದ ಸ್ವಾಮಿ ರಾಷ್ಟ್ರೀಯ ಬಸವದಳ ಬೀದರ ಇವರಿಂದ ವಚನ ಗಾಯನ ನಡೆಯಲಿದೆ. ಅದೇ ರೀತಿ ಶರಣ ಭೀಮರಾವ ಬಿರಾದಾರ ಮತ್ತು ತಂಡದವರು ರಾಷ್ಟಿಯ ಬಸವದಳ ಹೈದ್ರಾಬಾದ, ಶರಣ ರೇಣುಕಪ್ಪನವರು ರಾಷ್ಟ್ರೀಯ ಬಸವದಳ ಬಿಡದಿ, ಶರಣ ಮಹಾದೇವಪ್ಪ ಗುಗ್ಗರಿ ಹಾಗೂ ಸಂಗಡಿಗರು ಭಜನಾ ಮಂಡಳಿ ಅಬ್ಬಿಗೇರಿ ಇವರಿಂದ ವಚನ ಭಜನೆ ನಡೆಯಲಿದೆ. 

ಹೀಗೆ ಮೂರು ದಿನಗಳ ಕಾಲ ನಡೆಯಲಿರುವ ಉತ್ಸವಕ್ಕೆ ಆಗಮಿಸುವ ಎಲ್ಲ ಭಕ್ತರಿಗಾಗಿ ವಸತಿ ಮತ್ತು ಪ್ರಸಾದದ ವ್ಯವಸ್ಥೆಯನ್ನು ಸ್ವಾಭಿಮಾನಿ ಶರಣಮೇಳ ಉತ್ಸವ ಸಮಿತಿ ವತಿಯಿಂದ ಮಾಡಲಾಗಿದೆ. ಸುಮಾರು ೫೦ ಸಾವಿರ ಬಸವ ಭಕ್ತರು ಭಾಗವಹಿಸುವ ನಿರೀಕ್ಷೆ ಇದೆ. ಕರ್ನಾಟಕ, ಮಹಾರಾಷ್ಟ, ತೆಲಂಗಾಣ, ತಮಿಳುನಾಡು, ಆಂಧ್ರಪ್ರದೇಶ ರಾಜ್ಯಗಳ ಬಸವ ಭಕ್ತರು ಲಿಂಗಾಯತ ಬಾಂಧವರು ಸಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಉತ್ಸವ ಸಮಿತಿಯ ಕಾರ್ಯದರ್ಶಿ ಪೂಜ್ಯ ಮಾತೆ ಸತ್ಯಾದೇವಿಯವರು ತಿಳಿಸಿದರು. ಕರ್ನಾಟಕ ರಾಜ್ಯ ರಾಷ್ಟ್ರೀಯ ಬಸವದಳದ ಉಪಾಧ್ಯಕ್ಷರಾಗಿರುವ ಅಶೋಕ ಬೆಂಡಿಗೇರಿ ಪ್ರಚಾರ ಸಮಿತಿಯ ಅಧ್ಯಕ್ಷರಾಗಿರುವ ಚಿತ್ರದುರ್ಗದ ಕಲ್ಮೇಶ ಲಿಂಗಾಯತ ಅವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು. 




ಭವಿಷ್ಯದಲ್ಲಿ ಆಹಾರ ಪೌಷ್ಟಿಕಾಂಶದ ಭದ್ರತೆ ಸಾಧಿಸಲು ಸ್ಮಾರ್ಟ್ ಕೃಷಿಗೆ ಬದಲಾಗಬೇಕು: ಡಾ.ಎಸ್.ವಿ.ಸುರೇಶ


 ಕೃಷಿಯಲ್ಲಿ ಕೃತಕ ಬುದ್ಧಿಮತ್ತೆ ಬಳಕೆ ರಾಷ್ಟೀಯ ಸಮ್ಮೇಳನ

ರಾಯಚೂರು : ದೇಶದಲ್ಲಿ ಹೆಚ್ಚುತ್ತಿರುವ ಜನಸಂಖ್ಯೆಗೆ ಭವಿಷ್ಯದಲ್ಲಿ ಆಹಾರ ಮತ್ತು ಪೌಷ್ಟಿಕಾಂಶದ ಭದ್ರತೆಯನ್ನು ಸಾಧಿಸಲು ನಾವು ಸ್ಮಾರ್ಟ್ ಕೃಷಿಗೆ ಬದಲಾಗಬೇಕಾಗಿದೆ ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಗೌರವಾನ್ವಿತ ಕುಲಪತಿಗಳಾದ ಡಾ. ಎಸ್. ವಿ. ಸುರೇಶ ಅವರು ಹೇಳಿದರು.

ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯವು ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯ, ದಕ್ಷಿಣ ವಲಯ ಭಾರತೀಯ ವಿಸ್ತರಣಾ, ಶಿಕ್ಷಣ ಸಂಘ, ಬೆಂಗಳೂರು ಹಾಗೂ ಹೈದರಾಬಾದ ಮತ್ತು ಬೆಂಗಳೂರುಗಳಲ್ಲಿ ಸ್ಥಿತ ಭಾರತೀಯ ಕೃಷಿ ಅನುಸಂಧಾನ ಪರಿಷತ್ತಿನ ಕೃಷಿ ತಾಂತ್ರಿಕ ವರ್ಗಾವಣೆ ಸಂಸ್ಥೆಗಳ ಸಹಯೋಗದೊಂದಿಗೆ ಏರ್ಪಡಿಸಿದ್ದ ಕೃಷಿ ಮತ್ತು ಕೃಷಿ ಅವಲಂಬಿತ ವಿಸ್ತರಣಾ ಚಟುವಟಿಕೆಗಳಲ್ಲಿ ಕೃತಕ ಬುದ್ಧಿಮತ್ತೆಯ ಬಳಕೆಯ ಕುರಿತು ಜನವರಿ 9ರಂದು ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಶ್ರೀ ಜಗಜ್ಯೋತಿ ಬಸವೇಶ್ವರ ಪ್ರೇಕ್ಷಾಗೃಹದಲ್ಲಿ ಆರಂಭವಾದ ಎರಡು ದಿನಗಳ ರಾಷ್ಟೀಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

ಕೃತಕ ಬುದ್ಧಿಮತ್ತೆಯು ಸ್ಮಾರ್ಟ್ ಕೃಷಿಗಳಲ್ಲಿ ಒಂದಾಗಿದ್ದು, ಇದು ನೈಜ ಸಮಯದಲ್ಲಿ ಪರಿಹಾರಗಳನ್ನು ರೈತರಿಗೆ ತಲುಪಿಸಲು ಸಹಾಯ ಮಾಡುತ್ತದೆ. ಆದಾಗ್ಯೂ, ಸಣ್ಣ ಮತ್ತು ಅತಿಸಣ್ಣ ರೈತರಿಗೆ ಈ ಕೃತಕ ಬುದ್ಧಿಮತ್ತೆಯು ಹೊಂದಾಣಿಕೆಯಾಗುತ್ತದೆಯೇ ಎಂಬ ಪ್ರಶ್ನೆಗಳು ಹುಟ್ಟುತ್ತಿವೆ ಹಾಗೂ ಈ ಸಮಸ್ಯೆಗಳನ್ನು ನಾವೆಲ್ಲರೂ ಸೇರಿ ಸಂಶೋಧನೆ ಕೈಗೊಂಡು ಪರಿಹಾರಿಸಬೇಕಾಗಿದೆ. ಕೃತಕ ಬುದ್ಧಿಮತ್ತೆ ಪರಿಕಲ್ಪನೆಯ ಬಳಕೆಯ ಬಗ್ಗೆ ರೈತರನ್ನು ಸಬಲೀಕರಣಗೊಳಿಸಲು ವಿಸ್ತರಣಾ ವೃತ್ತಿಪರರು ಇದರ ಬಗ್ಗೆ ಜ್ಞಾನ ಮತ್ತು ಕೌಶಲ್ಯವನ್ನು ಹೊಂದಿದಾಗ ಮಾತ್ರ ರೈತರನ್ನು ಪ್ರೇರೇಪಿಸಬಹುದಾಗಿದೆ. ಈ ನಿಟ್ಟಿನಲ್ಲಿ ನಾವುಗಳು ಇನ್ನೂ ಮುಂದೆ ಸಾಗಬೇಕಾಗಿದೆ ಎಂದು ತಿಳಿಸಿದರು.

ಬದಲಾವಣೆಯೊಂದಿಗೆ ನಮ್ಮನ್ನು ನಾವು ಬದಲಾಯಿಸಿಕೊಂಡಗ ಮಾತ್ರ ಹೆಚ್ಚಿನ ದಕ್ಷತೆಯನ್ನು ಸಾಧಿಸಬಹುದು ಹಾಗೂ ಸವಾಲುಗಳಿಗೆ ತಕ್ಕ ಪರಿಹಾರಗಳನ್ನು ಕಂಡುಕೊಳ್ಳಬಹುದು ಎಂದ ಅವರು, ಈ ಸಂದರ್ಭದಲ್ಲಿ 1965ರಲ್ಲಿ ಹಸಿರು ಕ್ರಾಂತಿಯ ಪ್ರಾರಂಭ ನಂತರದ ಪರಿಣಾಮದ ಉದಾಹರಣೆಯನ್ನು ಅವರು ಉಲ್ಲೇಖಿಸಿದರು.

ಅಧ್ಯಕ್ಷತೆ ವಹಿಸಿದ್ದ ಗೌರವಾನ್ವಿತ ಕುಲಪತಿಗಳಾದ ಡಾ.ಎಂ.ಹನುಮಂತಪ್ಪ ಅವರು ಮಾತನಾಡಿ, ಕೃಷಿ ವಿಸ್ತರಣೆ ಕೆಲಸವು ಸಂಕೀರಣ ಹಾಗೂ ಕಠಿಣವಾಗಿದ್ದು ಇವುಗಳನ್ನು ಕೋವಿಡ್-19 ರ ಸಮಯದಲ್ಲಿ ನಾವೆಲ್ಲರೂ ಕಲಿತದ್ದಾಗಿದೆ ಎಂದರು. ರೈತರ ಅಗತ್ಯವನ್ನು ಆಧರಿಸಿ ರಾಯಚೂರು ಕೃಷಿ ವಿಶ್ವವಿದ್ಯಾಲಯವು ಕೃತಕ ಬುದ್ಧಿಮತ್ತೆ ಸಂಬಂಧಿತ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಿದೆ ಮತ್ತು ಅವುಗಳಲ್ಲಿ ಇ-ಸ್ಯಾಪ್ ತಂತ್ರಜ್ಞಾನವು ಹೆಸರುವಾಸಿಯಾಗಿದ್ದು ಸದ್ಯಕ್ಕೆ ಇದನ್ನು ಕರ್ನಾಟಕ ಮತ್ತು ನೆರೆ-ಹೊರೆಯ ರಾಜ್ಯಗಳು ಅಳವಡಿಸಿವೆ. ಭವಿಷ್ಯದಲ್ಲಿ ಕೃಷಿಯಲ್ಲಿ ದಕ್ಷತೆ ಮತ್ತು ಹೆಚ್ಚಿನ ಉತ್ಪಾದಕತೆಯನ್ನು ಸಾಧಿಸುವಲ್ಲಿ ಕೃತಕ ಬುದ್ಧಿಮತ್ತೆಯ ಬೆಳವಣಿಗೆಗೆ ಸಾಕಷ್ಟು ಅವಕಾಶಗಳಿವೆ ಎಂದು ತಿಳಿಸಿದರು.

ಮುಖ್ಯ ಅತಿಥಿ, ಭಾರತೀಯ ಕೃಷಿ ಅನುಸಂಧಾನ ಪರಿಷತ್ತಿನ ವಿಸ್ತರಣಾ ವಿಭಾಗದ ಸಹಾಯಕ ಮಹಾನಿರ್ದೇಶಕರಾದ ಡಾ. ಆರ್. ರಾಯ್, ಬರ‍್ಮನ್ ಅವರು ಮಾತನಾಡಿ, ಕೃಷಿ ವ್ಯವಸ್ಥೆಯಲ್ಲಿ ಬ್ಲಾಕ್ ಚೈನ್ ತಂತ್ರಜ್ಞಾನ, ದತ್ತಾಂಶಗಳನ್ನು ಆಧಾರಿಸಿ ಅಭಿವೃದ್ಧಿಗೊಂಡ ಕೃತಕ ಬುದ್ಧಿಮತ್ತೆಯ ಬಳಕೆಯ ಬಗ್ಗೆ ತಿಳಿಸಿದರು. ಇದು ಕೃಷಿ ವಲಯವನ್ನು ಉತ್ತಮ ರೀತಿಯಲ್ಲಿ ನಿರ್ವಹಿಸಲು ಸಹಾಯ ಮಾಡುತ್ತದೆ. ಆದ್ದರಿಂದ, ರೈತರಿಗೆ ಇದರ ಬಗ್ಗೆ ಜ್ಞಾನ ಮತ್ತು ಕೌಶಲ್ಯವನ್ನು ನೀಡುವುದು ಅತ್ಯವಶ್ಯವಾಗಿದೆ ಎಂದರು.

ರಾಯಚೂರು ಕೃಷಿ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯ ಗೌರವಾನ್ವಿತ ಸದಸ್ಯರಾದ ತಿಮ್ಮಪ್ಪ ಸೋಮಪ್ಪ ಚವಡಿ ಅವರು ಕೃಷಿ ಉತ್ಪನ್ನಗಳ ಉತ್ತಮ ಬೆಲೆ ನಿಗದಿಯಾಗಬೇಕು ಎಂದು ಇದೆ ವೇಳೆ ಒತ್ತಾಸೆ ಮಾಡಿದರು. ಭವಿಷ್ಯದಲ್ಲಿ ಕೃತಕ ಬುದ್ಧಿಮತ್ತೆ ಈ ನಿಟ್ಟಿನಲ್ಲಿಯೂ ಸಹ ಸಹಾಯ ಮಾಡುತ್ತದೆ ಎಂದು ತಿಳಿಸಿದರು.

ರಾಯಚೂರು ಕೃಷಿ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯ ಸದಸ್ಯರಾದ ಡಿ.ಮಲ್ಲಿಕಾರ್ಜುನ ಅವರು ಕೃಷಿಯಲ್ಲಿ ನಿಖರತೆಯನ್ನು ಸುಧಾರಿಸಲು ಕೃತಕ ಬುದ್ಧಿಮತ್ತೆ ಖಂಡಿತವಾಗಿ ಸಹಾಯ ಮಾಡುತ್ತದೆ ಮತ್ತು ಎಲ್ಲಾ ವರ್ಗದ ರೈತರು ಈ ಹೊಸ ತಂತ್ರಜ್ಞಾನದ ಬಗ್ಗೆ ಗಮನಹರಿಸಬೇಕಾಗಿದೆ ಎಂದು ಹೇಳಿದರು.

ಸಮ್ಮೇಳನದ ಸಂಘಟನಾ ಕಾರ್ಯದರ್ಶಿ ಡಾ. ಎಸ್. ಬಿ. ಗೌಡಪ್ಪ ಸ್ವಾಗತಿಸಿದರು ಮತ್ತು ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಡಾ. ಸಿ. ನಾರಾಯಣ ಸ್ವಾಮಿ ವಂದಿಸಿದರು.

ಈ ಸಂದರ್ಭದಲ್ಲಿ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯ ಗೌರವಾನ್ವಿತ ಸದಸ್ಯರು, ಅಧಿಕಾರಿಗಳು, ದೇಶದಾದ್ಯಂತ ಆಗಮಿಸಿದ ಪ್ರತಿನಿಧಿಗಳು ಮತ್ತು ವಿದ್ಯಾರ್ಥಿಗಳನ್ನೊಳಗೊಂಡAತೆ 300 ಕ್ಕೂ ಹೆಚ್ಚು ಗಣ್ಯರು ಮತ್ತು ಪ್ರತಿನಿಧಿಗಳು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಜಿಲ್ಲಾಮಟ್ಟದ ಏಕಗವಾಕ್ಷಿ ಸಮಿತಿ ಸಭೆ : 68.30 ಕೋಟಿ ರೂ.ಮೊತ್ತದ ಬಂಡವಾಳ ಹೂಡಿಕೆಯ ಹೊಸ ಯೋಜನೆಗಳ ಮಂಜೂರಾತಿಗೆ ಅನುಮೋದನೆ


ರಾಯಚೂರು : ಜಿಲ್ಲಾಮಟ್ಟದ ಏಕಗವಾಂಕ್ಷಿ ಸಮಿತಿ ಸಭೆಯು ಜಿಲ್ಲಾಮಟ್ಟದ ಏಕಗವಾಕ್ಷಿ ಸಮಿತಿಯ ಅಧ್ಯಕ್ಷರು ಆಗಿರುವ ಜಿಲ್ಲಾಧಿಕಾರಿಗಳಾದ ನಿತೀಶ್ ಕೆ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜನವರಿ 9ರಂದ ನಡೆಯಿತು.

100 ಲಕ್ಷ ರೂ ವೆಚ್ಚದಲ್ಲಿ ಕ್ಯಾಟಲ್ ಫೀಡ್ ಹೆಚ್ಚುವರಿಯಾಗಿ ಕ್ಯಾಟಲ್ ಫೀಡ್ ಹಾಗೂ ಆಯಿಲ್ ಮಿಲ್ಲಿಂಗ್ ಚಟುವಟಿಕೆ, 55 ಲಕ್ಷ ರೂ ವೆಚ್ಚದಲ್ಲಿ ವೇರ್‌ಹೌಸ್ ಹೆಚ್ಚುವರಿಯಾಗಿ ಫ್ಲೆಯಾಸ್ ಬ್ರಿಕ್ಸ್ ತಯಾರಿಕೆ ಚಟುವಟಿಕೆ, 540 ಲಕ್ಷ ರೂ. ವೆಚ್ಚದಲ್ಲಿ ಕಾಟನ್ ಜಿನ್ನಿಂಗ್ ಅಂಡ್ ಸೀಡ್ಸ್ ಪ್ರೊಸಸ್ಸಿಂಗ್ ಚಟುವಟಿಕೆ, 1446 ಲಕ್ಷ ರೂ ವೆಚ್ಚದಲ್ಲಿ ರೈಸ್ ಮಿಲ್ಲಿಂಗ್ ಚಟುವಟಿಕೆ, 1481 ಲಕ್ಷ ರೂ. ವೆಚ್ಚದಲ್ಲಿ ಆಯಿಲ್ ರಿಫೈನರಿ ಚಟುವಟಿಕೆ, 1050 ಲಕ್ಷ ರೂ ವೆಚ್ಚದಲ್ಲಿ ರೈಸ್ ಮಿಲ್ಲಿಂಗ್ ಚಟುವಟಿಕೆ, 303 ಲಕ್ಷ ರೂ ವೆಚ್ಚದಲ್ಲಿ ವೇಸ್ಟ್ ಆಯಿಲ್ ರಿಸೈಕ್ಲಿಂಗ್ ಚಟುವಟಿಕೆ, 400 ಲಕ್ಷ ರೂ ವೆಚ್ಚದಲ್ಲಿ ಗ್ರೌನ್ ನೆಟ್ ಡಿಕಾರ್ಟಿಕೇಟಿಂಗ್ ಚಟುವಟಿಕೆ, 1455 ಲಕ್ಷ ರೂ ವೆಚ್ಚದಲ್ಲಿ ರೈಸ್ ಮಿಲ್ಲಿಂಗ್ ಚಟುವಟಿಕೆ ಸೇರಿದಂತೆ ಹೊಸ ಯೋಜನೆಯ ಮಂಜೂರಾತಿಯ ಬಗ್ಗೆ ಜಿಲ್ಲಾಮಟ್ಟದ ಏಕಗವಾಕ್ಷಿ ಸಮಿತಿಯ ಸದಸ್ಯ ಕಾರ್ಯದರ್ಶಿಗಳು ಆಗಿರುವ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರು ಸಭೆಗೆ ವಿವರಿಸಿದರು. ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ ಒಟ್ಟು 68.30 ಕೋಟಿ ರೂ.ಗಳ ಬಂಡವಾಳ ಹೂಡಿಕೆಯ ಹೊಸ ಯೋಜನೆಗಳ ಮಂಜೂರಾತಿಗೆ ಸಭೆಯಲ್ಲಿ ಅನುಮೋದಿಸಲಾಯಿತು.

ಸಭೆಯಲ್ಲಿ ಜಿಲ್ಲೆಯಲ್ಲಿ ಹೊಸ ಕೈಗಾರಿಕಾ ಪ್ರದೇಶಕ್ಕಾಗಿ ಗುರುತಿಸಿರುವ ಜಮೀನು ಸ್ವಾಧೀನಕ್ಕಾಗಿ ಶೀಫಾರಸ್ಸು ಮಾಡುವ ಬಗ್ಗೆ, ಕೆಐಎಡಿಬಿಯಿಂದ ನಿರ್ಮಿಸಲಾದ ವಸತಿ ಗೃಹ ಮತ್ತು ನಿವೇಶನಗಳ ಹಂಚಿಕೆ, ದೇವದುರ್ಗ ವಿಶ್ವ ಮಳಿಗೆಗಳ ಹಂಚಿಕೆ, ರಾಯಚೂರು ಇಂಡಸ್ಟ್ರಿಯಲ್ ಏರಿಯಾ ಮತ್ತು ಗ್ರೋಥ್ ಸೆಂಟರನಲ್ಲಿರುವ ಘಟಕಗಳಿಗೆ ನೀರು ಸರಬರಾಜು ಮಾಡುವ ಬಗ್ಗೆ, ಕೆಎಸ್‌ಎಸ್‌ಐಡಿಸಿ ನಿವೇಶನಗಳ ಹಂಚಿಕೆ, ಮೆಗಾ ಪಾರ್ಕ್ ಸ್ಥಾಪನೆ, ರೈಸ್ ಕ್ಲಸ್ಟರ್ ಸ್ಥಾಪನೆಯ ಸಲುವಾಗಿ ಸುಮಾರು 10 ಎಕರೆ ಜಮೀನು ಒದಗಿಸುವ ಕುರಿತು, ಮೇ:ವಿಕಾಸ್ ಇಂಡಸ್ಟ್ರಿಸ್

ಕೈಗಾರಿಕಾ ಪ್ರದೇಶ ಮಾನವಿ ಇವರಿಗೆ ರೆಡಿಪ್ಲಾಸ್ಟ್ ತಯಾರಿಕೆಯ ಸಲುವಾಗಿ ಸರ್ಕಾರದ ನಿಯಮಗಳ ಪ್ರಕಾರ ಮರಳು ಹಂಚಿಕೆಯ ಕುರಿತು, ಯೋಜನಾ ಮಂಜೂರಾತಿ ಮತ್ತು ಚಟುವಟಿಕೆಯ ಬದಲಾವಣೆಯ ಬಗ್ಗೆ, ರಾಯಚೂರು ಕಾಟನ್ ಮಿಲ್ರ‍್ಸ ಅಸೋಸಿಯನ್ ರಾಯಚೂರು ಅವರ ಪತ್ರ, ಮೇ:ರಾಜೇಂದ್ರ ಇಂಡಸ್ಟ್ರಿಸ್ ಪ್ಲಾಟ್ ನಂ.6 ಯರಮರಸ್ ಇಂಡಸ್ಟಿçಯಲ್ ಏರಿಯಾ ರಾಯಚೂರು ಅವರ ಪತ್ರ, ಕೆಐಎಡಿಬಿಯಲ್ಲಿ ಖಾಲಿ ಇರುವ ನಿವೇಶನದ ಹಂಚಿಕೆ ಸೇರಿದಂತೆ ನಾನಾ ವಿಷಯಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.

ದೇವದುರ್ಗ ಕೈಗಾರಿಕಾ ಪ್ರದೇಶದ ಬಗ್ಗೆ ಜಮೀನಿನ ಚಕ್‌ಬಂದಿ ಹಾಗೂ ಹಂಚಿಕೆಗೆ ಲಭ್ಯವಾಗುವ ಜಮೀನು ಮತ್ತು ರಾಯಚೂರು ಗ್ರೋಥ್ ಸೆಂಟರನಲ್ಲಿರುವ ಜಮೀನು ಒತ್ತುವರಿಯ ಬಗ್ಗೆ ಸಹ ಸಭೆಯಲ್ಲಿ ಚರ್ಚಿಸಲಾಯಿತು. ಹಂತಹಂತವಾಗಿ ಸರ್ವೆ ಕಾರ್ಯಕೈಗೊಂಡು ಯಾವ ಕಡೆಗಳಲ್ಲಿ ಜಮೀನು ಒತ್ತುವರಿಯಾಗಿದೆ ಎಂಬುದನ್ನು ಸರಿಯಾಗಿ ಗುರುತಿಸಬೇಕು. ಕೆಐಎಡಿಬಿಯಿಂದ ನಿರ್ಮಿಸಲಾದ ನಿವೇಶನಗಳ ಹಂಚಿಕೆ ಪ್ರಕ್ರಿಯೆಗಾಗಿ ಸ್ಕ್ರಿನಿಂಗ್ ಕಮೀಟಿ ರಚಿಸಿ ಅಧಿಸೂಚನೆ ಹೊರಡಿಸಿ ಕೆಐಎಡಿಬಿಯಿಂದ ನಿರ್ಮಿಸಲಾದ ನಿವೇಶನಗಳ ಹಂಚಿಕೆ ಪ್ರಕ್ರಿಯೆಯನ್ನು ತುರ್ತಾಗಿ ನಡೆಸಲು ಜಿಲ್ಲಾಧಿಕಾರಿಗಳು ಇದೆ ವೇಳೆ ನಿರ್ದೇಶನ ನೀಡಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಶಶಿಕಾಂತ್ ಶಿವಪೂರೆ, ರಾಯಚೂರು ಜಿಲ್ಲಾ ವಾಣಿಜ್ಯೋದ್ಯಮ ಸಂಘದ ಅಧ್ಯಕ್ಷರು, ರಾಯಚೂರು ಜಿಲ್ಲಾ ಕಾಟನ್ ಜಿನ್ನರ್ಸ್ ಅಸೋಸಿಯೇಶನ್ ಅಧ್ಯಕ್ಷರು, ರೈಸ್ ಮಿಲ್ಲರ್ಸ ಓನರ್ಸ್ ಅಸೋಶಿಯೇಶನ್ ಅಧ್ಯಕ್ಷರು, ಕೆಐಎಡಿಬಿಯ ಬಳ್ಳಾರಿ ಮತ್ತು ರಾಯಚೂರು ಕಾರ್ಯನಿರ್ವಾಹಕ ಅಭಿಯಂತರರು, ಕೆಎಸ್‌ಎಸ್‌ಐಡಿಸಿಯ ಸಹಾಯಕ ಪ್ರಧಾನ ವ್ಯವಸ್ಥಾಪಕರು, ರಾಯಚೂರು ಜಿಲ್ಲಾ ಕೆಎಸ್‌ಪಿಸಿಬಿಯ ಪರಿಸರ ಅಭಿಯಂತರರು, ರಾಯಚೂರು ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು, ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕರು, ಕೆಎಸ್‌ಎಫ್‌ಸಿಯ ಸಹಾಯಕ ಪ್ರಧಾನ ವ್ಯವಸ್ಥಾಪಕರು, ಕೃಷಿ ಇಲಾಖೆಯ ಜಂಟಿ ನಿರ್ದೇಶಕರು, ಕಾರ್ಖಾನೆಯ ಸಹಾಯಕ ನಿರ್ದೇಶಕರು, ಕೈಮಗ್ಗ ಮತ್ತು ಜವಳಿ ಇಲಾಖೆಯ ಸಹಾಯಕ ನಿರ್ದೇಶಕರು, ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ಜಿಲ್ಲಾ ಅಧಿಕಾರಿಗಳು, ಕೆಯುಡಬ್ಲೂö್ಯಎಸ್‌ಎಸ್‌ಬಿಯ ಕಾರ್ಯನಿರ್ವಾಹಕ ಅಭಿಯಂತರರು, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಭೂವಿಜ್ಞಾನಿ ಸೇರಿದಂತೆ ಇತರರು ಇದ್ದರು

ಜಿಪಂ ಸಿಇಓ ಅವರಿಂದ ಜಲಜೀವನ್ ಮಿಷನ್ ಯೋಜನೆಯ ಬಹುಗ್ರಾಮ ಕುಡಿವ ನೀರಿನ ಕಾಮಗಾರಿಗಳ ಕ್ಷೇತ್ರ ಭೇಟಿ; ಪರಿಶೀಲನೆ



ರಾಯಚೂರು :- ಜಿಲ್ಲೆಯ ಲಿಂಗಸುಗೂರು ತಾಲೂಕಿನಲ್ಲಿ ಜಲ ಜೀವನ್ ಮಿಷನ್ ಯೋಜನೆಯಡಿ ಅನುಷ್ಠಾನಗೊಳಿಸುತ್ತಿರುವ ಡಿಬಿಟಿಎಮ್‌ವಿಎಸ್ ಬಹುಗ್ರಾಮ ಕುಡಿಯುವ ನೀರಿನ ಕಾಮಗಾರಿಗಳ ಭೌತಿಕ ಪ್ರಗತಿಯನ್ನು ರಾಯಚೂರು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಹುಲ್ ತುಕಾರಾಮ ಪಾಂಡ್ವೆ ಅವರು ಜನವರಿ 8ರಂದು ನಾರಾಯಣಪುರ ಜಲಾಶಯಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಜಲ ಜೀವನ್ ಮಿಷನ್ ಯೋಜನೆಯಡಿ ನಾರಾಯಣಪುರ ಜಲಾಶಯದ ಹಿನ್ನೀರಿನ ಭಾಗದಲ್ಲಿ ಇನ್‌ಟೆಕ್ ಕಂ ಜಾಕ್‌ವೆಲ್ ಹೆಡ್‌ವರ್ಕ್ ಸಂಪರ್ಕ ಸೇತುವೆಯನ್ನು ವೀಕ್ಷಿಸಿ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಗುಣಮಟ್ಟದೊಂದೊಗೆ ಪೂರ್ಣಗೊಳಿಸಲು ಸೂಚಿಸಿದರು. ಚಿತ್ತಾಪೂರ ಗ್ರಾಮದ ನಾರಾಯಣಪೂರ ಜಲಾಶಯದ ವ್ಯಾಪ್ತಿಯಲ್ಲಿ ಕೈಗೊಂಡಿರುವ 160 ಎಂಎಲ್ಡಿ ನೀರು ಸಂಸ್ಕರಣಾ ಘಟಕನ ಏರೇಟರ್, ಕ್ಲಾರಿಫ್ಲೋಕ್ಯುಲೇಟರ್, ಶೋಧನೆ, ಕ್ಲೋರಿನೇಷನ್ 16 ಶೋಧನೆ ಹಾಸಿಗೆ ಪೂರ್ಣಗೊಳಿಸಿರುವುದನ್ನು ಹಾಗೂ ನಿರ್ಮಾಣದ ವಿವಿಧ ಹಂತಗಳಲ್ಲಿರುವ ವಿವಿಧ ಘಟಕಗಳ ಕಾಮಗಾರಿಗಳನ್ನು ಪರಿಶೀಲಿಸಿದರು. ನಂತರ ನಾಗರಾಳ ಹಾಗೂ ನರಕಲದಿನ್ನಿ ಮಾರ್ಗದಲ್ಲಿ ಕೈಗೊಂಡ ಎಂಎಸ್ ಪೈಪ್ಲೈನ್ ಅಳವಡಿಕೆ ಕಾಮಗಾರಿ ಹಾಗೂ ಸದರಿ ಯೋಜನೆಯಡಿ ಕಾನಾಪುರ ಹಟ್ಟಿ ಗ್ರಾಮದಲ್ಲಿ ನಿರ್ಮಾಣ ಮಾಡಲಾದ ಪ್ರಿಕಾಸ್ಟ್ ಒಎಚ್ಟಿ ಕಾಮಗಾರಿಗಳನ್ನು ಪರಿಶೀಲಿಸಿದರು. ಮುಂದುವರೆದು ಮುದಗಲ್ ಗ್ರಾಮದ ಹತ್ತಿರ ಗುತ್ತಿಗೆದಾರರ ಕ್ಯಾಂಪಗೆ ಭೇಟಿ ನೀಡಿ ಈ ಕ್ಯಾಂಪ್ ನಲ್ಲಿ ಯೋಜನೆಗೆ ಅವಶ್ಯಕವಿರುವ ಪ್ರಿಕಾಸ್ಟ್ ಟ್ಯಾಂಕ್ ಕಾಸ್ಟಿಂಗ್ ಕಾಮಗಾರಿಯನ್ನು ಪರಿಶೀಲಿಸಿದರು. ನಂತರ ಮುದಗಲ್ ಕ್ಯಾಂಪಿನಲ್ಲಿ ಎಸ್‌ಎನ್ಸಿ-ವಿಇಐಪಿಎಲ್-ಎಸ್ಪಿಎಂಎಲ್-ಜೆವಿ ಪ್ರಾಜೆಕ್ಟ್ನ ತಾಂತ್ರಿಕ ಅಧಿಕಾರಿಗಳೊಂದಿಗೆ ಯೋಜನೆಯ ಭೌತಿಕ ಪ್ರಗತಿ ಹಾಗೂ ಅನುಷ್ಠಾನದ ಬಗ್ಗೆ ಪ್ರಾತ್ಯಕ್ಷಿತೆ ಮೂಲಕ ಮಾಹಿತಿ ಪಡೆಯಲಾಯಿತು. ತಾಂತ್ರಿಕ ಬೆಂಬಲ ಹಾಗೂ ಗುಣಮಟ್ಟ ನಿಯಂತ್ರಣ ಏಜೆನ್ಸಿ ಪಿ.ಎಮ್.ಸಿ., ಇ.ಜಿ.ಐ.ಎಸ್. ಇಂಡಿಯಾ ಕನ್ಸಲ್ಟಿಂಗ್ ಇಂಜಿನಿಯರ್ಸ್ ಪ್ರೈವೆಟ್ ಲಿಮಿಟೆಡ್ ರಿಂದ ಮಾಹಿತಿ ಪಡೆಯಲಾಯಿತು. ಪಿಎಂಸಿ, ಇಜಿಐಎಸ್ ಇಂಡಿಯಾ ಕನ್ಸಲ್ಟಿಂಗ್ ಇಂಜಿನಿಯರ್ಸ್ ಪ್ರೈವೇಟ್ ಲಿಮಿಟೆಡ್ ಹೆಡ್ವರ್ಕ್ ನಲ್ಲಿ ಜ್ಯಾಕ್ವೆಲ್ ಕಮ್ ಪಂಪ್ಹೌಸ್ ಎಲ್ಲ 22 ಪೈಲಿಂಗ್ ಕಾಮಗಾರಿಗಳನ್ನು ಫೂರ್ಣಗೊಳಿಸಿರುವುದನ್ನು ಪರಿವೀಕ್ಷಿಸಲಾಯಿತು. ಸಂಪರ್ಕ ಸೇತುವೆ ಪ್ರಗತಿ, ಡಬ್ಲೂಟಿಪಿ ಅಡಿ ವಿವಿಧ ರಚನಾತ್ಮಕ ಘಟಕಗಳ ನಿರ್ಮಾಣದ ವಿವಿಧ ಹಂತಗಳ ಪ್ರಗತಿ, ಪೈಪ್‌ಲೈನ್ ಸೇರಿದಂತೆ ನಾನಾ ಕಾಮಗಾರಿಗಳ ಪ್ರಗತಿ ಪರಿಶೀಲಿಸಿದರು. ಪ್ರಗತಿ ಹಂತದಲ್ಲಿರುವ ಬಾಕಿ ವಿವಿಧ ಕಾಮಗಾರಿಗಳನ್ನು ಗುಣಮಟ್ಟದೊಂದಿಗೆ ಶೀಘ್ರವಾಗಿ ಫೂಣಗೊಳಿಸಲು ಇದೆ ವೇಖೆ ಸಿಇಓ ಅವರು ಸೂಚನೆ ನೀಡಿದರು.







Shodhavani Kannada Daily 10-01-2025

https://drive.google.com/file/d/1HAX4ZO4QGmKGvXU7F2dYyhcDpSR7QtoL/preview?

ಪ್ರೇಮ ಕಾಶ್ಮೀರದಲ್ಲಿ ರಕ್ತದೋಕುಳಿ; ಹಿಂದೂಗಳೇ ಟಾರ್ಗೆಟ...!

  ಪ್ರೇಮ ಕಾಶ್ಮೀರದಲ್ಲಿ ರಕ್ತದೋಕುಳಿ; ಹಿಂದೂಗಳೇ ಟಾರ್ಗೆಟ್. ಭೂಲೋಕದ ಸ್ವರ್ಗವೆಂದೇ ಕರೆಯುವ ಜಮ್ಮು-ಕಾಶ್ಮೀರದ ಪೆಹಲ್ಗಾಮ್ ಸಮೀಪದ ಬೈಸರನ್ ಹುಲ್ಲುಗಾವಲಿನಲ್ಲಿ ಪಾಕ್ ಪ್...