ads

Search This Blog

Tuesday, 21 January 2025

ತುಬಚಿ- ಬಬಲೇಶ್ವರ ಏತ ನೀರಾವರಿ ಯೋಜನೆ 3,048 ಎಕರೆ ಸ್ವಾಧೀನ, ಹಣ ಬಿಡುಗಡೆಗೆ ಸೂಚನೆ: ಎಂ.ಬಿ.ಪಾಟೀಲ

ವಿಜಯಪುರ ಜ. 21 : ವಿಜಯಪುರ ಜಿಲ್ಲೆಯ ತುಬಚಿ- ಬಬಲೇಶ್ವರ ಏತ ನೀರಾವರಿ ಯೋಜನೆಯ ಕಾಮಗಾರಿ ಮುಗಿದು, ಕಾಲುವೆಗಳಲ್ಲಿ ನೀರು ಹರಿಯುತ್ತಿದೆ. ಆದರೂ ತಾಂತ್ರಿಕ ಕಾರಣಗಳಿಂದಾಗಿ 3,048 ಎಕರೆ ಭೂಸ್ವಾಧೀನ ಪ್ರಕ್ರಿಯೆ ಮುಗಿದಿಲ್ಲ. ಈ ಸಂಬಂಧ ಕೂಡಲೇ ಅಗತ್ಯ ಕ್ರಮವಹಿಸಿ, 457 ಕೋಟಿ ರೂಪಾಯಿ ಬಿಡುಗಡೆ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಅವರು ಕರ್ನಾಟಕ ನೀರಾವರಿ ನಿಗಮದ ಅಧಿಕಾರಿಗಳಿಗೆ ಸೂಚಿಸಿದರು.

ಭೂಸ್ವಾಧೀನ ಪ್ರಕ್ರಿಯೆ ನೆನಗುದಿಗೆ ಬಿದ್ದಿರುವ ಬಗ್ಗೆ ವಿಧಾನಸೌಧದ ತಮ್ಮ ಕಚೇರಿಯಲ್ಲಿ ಸಂಬಂದಪಟ್ಟ ಎಲ್ಲ ಅಧಿಕಾರಿಗಳ ಸಭೆ ನಡೆಸಿದ ಸಚಿವರು, ಭೂಸ್ವಾಧೀನಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಈ ಯೋಜನೆಯಿಂದ 52,700 ಎಕರೆಗೆ ನೀರಾವರಿ ಸೌಲಭ್ಯ ಸಿಗಲಿದೆ. ಇದರಲ್ಲಿ 37,200 ಎಕರೆ ಜಮೀನು ನಾನು ಪ್ರತಿನಿಧಿಸುವ ಬಬಲೇಶ್ವರ ಕ್ಷೇತ್ರದ ವ್ಯಾಪ್ತಿಯಲ್ಲೇ ಇದೆ. ಈಗಾಗಲೇ ವಿತರಣಾ ಕಾಲುವೆ, ಉಪಕಾಲುವೆ, ಹೊಲಗಾಲುವೆ ಕಾಮಗಾರಿಗಳೆಲ್ಲ ಮುಗಿದು ನೀರು ಹರಿಯುತ್ತಿದೆ. ಇದರ ಪ್ರಯೋಜನ ರೈತರಿಗೂ ಆಗುತ್ತಿದೆ ಎಂದು ಹೇಳಿದರು.

ಈ ಯೋಜನೆಗೆ ಅಗತ್ಯ ಜಮೀನು ಬಿಟ್ಟುಕೊಡುವಂತೆ ರೈತರಿಗೆ ಮನವಿ ಮಾಡಿಕೊಂಡಿದ್ದೆ. ರೈತರು ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದರು. ಅಂಥವರಿಗೆ ಈಗ ಪರಿಹಾರ ಹಣ ನೀಡಲು ಸಬೂಬು ಹೇಳುತ್ತಿರುವುದು ಸರಿಯಲ್ಲ. ಆದಷ್ಟು ಬೇಗ ಪ್ರಕ್ರಿಯೆ ಮುಗಿಯಬೇಕು ಎಂದು ಅವರು ಸೂಚಿಸಿದ್ದಾರೆ.

ಭೂಸ್ವಾಧೀನಾಧಿಕಾರಿ ಹಾಗೂ ನೀರಾವರಿ ನಿಗಮದ ಅಧಿಕಾರಿಗಳ ನಡುವೆ ಸಮನ್ವಯದ ಕೊರತೆ ಇದೆ. ಇದನ್ನು ನಾನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ತಾಂತ್ರಿಕ ವಿಷಯಗಳ ನೆಪವೊಡ್ಡಿ ರೈತರಿಗೆ ಅನ್ಯಾಯ ಮಾಡಲು ಬಿಡುವುದಿಲ್ಲ ಎಂದು ರೇಗಿದರು.

ವಿಜಯಪುರ ಜಿಲ್ಲಾಧಿಕಾರಿ ಟಿ.ಭೂಬಾಲನ್, ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ರಾಜೇಶ ಅಮೀನ್ಬಾವಿ, ನಿಗಮದ ಮುಖ್ಯ ಆಡಳಿತಾಧಿಕಾರಿ ಔದರಂ, ವಿಶೇಷ ಜಿಲ್ಲಾಧಿಕಾರಿ ಹರ್ಷ ಶೆಟ್ಟಿ, ಸೂಪರಿಂಟೆಂಡೆಂಟ್ ಎಂಜಿನಿಯರ್ ಬಿ.ಎ.ನಾಗರಾಜ ಸೇರಿದಂತೆ ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.


ಅಂತರರಾಷ್ಟ್ರೀಯ ವಾಣಿಜ್ಯ ಮೇಳ ಸಾವಯವ ಮತ್ತು ಸಿರಿಧಾನ್ಯ - ೨೦೨೫ ಸಾವಯವ ಕೃಷಿಗೆ ಹೆಚ್ಚಿನ ಪ್ರಚಾರ ಅಗತ್ಯ– ಎನ್.ಚೆಲುವರಾಯಸ್ವಾಮಿ

ಬೆಂಗಳೂರು : ರ‍್ನಾಟಕ ರ‍್ಕಾರವು ಸುಮಾರು ೨ ದಶಕಗಳಿಂದ ಸಾವಯವ ಕೃಷಿಯನ್ನು ಉತ್ತಮ ರ‍್ಯಾಯ ಪದ್ದತಿಯಾಗಿ ಉತ್ತೇಜಿಸಲು ಪ್ರಾರಂಭಿಸಿದೆ. ಸ್ವಾವಲಂಬನೆ, ಗ್ರಾಮೀಣಾಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆಗೆ ಒತ್ತು ನೀಡಲು ೨೦೦೪ ರಲ್ಲಿ ಪ್ರತ್ಯೇಕ ಸಾವಯವ ಕೃಷಿ ನೀತಿಯನ್ನು ಹೊರತರಲಾಗಿರುತ್ತದೆ. ಈ ನೀತಿಯಡಿಯಲ್ಲಿ ರಾಜ್ಯಾದ್ಯಂತ ವಿವಿಧ ಸಾವಯವ ಕೃಷಿ ಉತ್ತೇಜನಾ ಕರ‍್ಯಕ್ರಮಗಳಾದ ಸಾವಯವ ಗ್ರಾಮ, ಪ್ರಮಾಣೀಕರಣ, ಸಂಸ್ಕರಣೆ ಮುಂತಾದ ಸಾವಯವ ಕೃಷಿ ಪ್ರಚಾರ ಕರ‍್ಯಕ್ರಮಗಳನ್ನು ಪ್ರಾರಂಭಿಸಲಾಗಿರುತ್ತದೆ ಎಂದು ಕೃಷಿ ಸಚಿವ ಎನ್.ಚೆಲುವರಾಯಸ್ವಾಮಿ ತಿಳಿಸಿದರು.

ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು, ಸಿರಿಧಾನ್ಯಗಳಿಗೆ ಹೆಚ್ಚಿನ ಒತ್ತು ನೀಡಿ ೨೦೧೭ರಲ್ಲಿ ಪರಿಷ್ಕೃತ ಸಾವಯವ ನೀತಿಯನ್ನು ಹೊರತರಲಾಗಿದ್ದು, ಅಂದಿನಿಂದ, ರಾಜ್ಯ ರ‍್ಕಾರವು ಸಾಂಪ್ರದಾಯಿಕ ಮತ್ತು ಸಾವಯವ ಸಿರಿಧಾನ್ಯಗಳನ್ನು "ಪ್ರಜ್ಞಾವಂತ ಆಹಾರ"ವಾಗಿ ಉತ್ತೇಜಿಸಲಾಗುತ್ತಿದೆ ಎಂದು ತಿಳಿಸಿದರು.

ರ‍್ನಾಟಕ ರ‍್ಕಾರವು ೨೦೧೭ ರಲ್ಲಿ ಆಯೋಜಿಸಿದ ಮೊದಲ ಆವೃತ್ತಿಯ ಸಾವಯವ ಮತ್ತು ಸಿರಿಧಾನ್ಯ ವಾಣಿಜ್ಯ ಮೇಳದ ಮೂಲಕ ರಾಜ್ಯವು ಸಾವಯವ ಮತ್ತು ಸಿರಿಧಾನ್ಯಗಳ ಪ್ರಚಾರದಲ್ಲಿ ದೇಶದಲ್ಲಿಯೇ ಮುಂಚೂಣಿಯಲ್ಲಿರುತ್ತದೆ. ತದನಂತರ ಎರಡನೇ, ಮೂರನೇ, ನಾಲ್ಕನೇ ಮತ್ತು ಐದನೇ ಆವೃತ್ತಿಗಳನ್ನು ಕ್ರಮವಾಗಿ ೨೦೧೮, ೨೦೧೯, ೨೦೨೩ ಮತ್ತು ೨೦೨೪ ರಲ್ಲಿ ಯಶಸ್ವಿಯಾಗಿ ಆಯೋಜಿಸಲಾಗಿರುತ್ತದೆ.

ಇದೇ ಆಸಕ್ತಿಯನ್ನು ಮುಂದಿನ ಮಟ್ಟಕ್ಕೆ ಕೊಂಡೊಯ್ಯಲು ಮತ್ತೊಮ್ಮೆ ಆರನೇ ಆವೃತ್ತಿಯ ಅಂತರರಾಷ್ಟ್ರೀಯ ವಾಣಿಜ್ಯ ಮೇಳ ಸಾವಯವ ಮತ್ತು ಸಿರಿಧಾನ್ಯ -೨೦೨೫ ನ್ನು ಜನವರಿ ೨೩ ರಿಂದ ೨೫ ರಂದು ಬೆಂಗಳೂರಿನ ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ಆಯೋಜಿಸಲಾಗಿರುತ್ತದೆ. ಈ ಮೇಳವು ರೈತರು, ರೈತ ಗುಂಪುಗಳು, ದೇಶೀಯ ಮತ್ತು ಅಂತರರಾಷ್ಟ್ರೀಯ ಕಂಪನಿಗಳು, ಸಾವಯವ ಮತ್ತು ಸಿರಿಧಾನ್ಯ ವಲಯದ ಕೇಂದ್ರ ಮತ್ತು ರಾಜ್ಯ ಸಂಸ್ಥೆಗಳನ್ನು ಒಗ್ಗೂಡಿಸುವುದರ ಜೊತೆಗೆ ಹೊಸ ಅವಕಾಶಗಳನ್ನು ಅನ್ವೇಷಿಸುವ ಮತ್ತು ಪರಿಣಾಮಕಾರಿಯಾಗಿ ಮಾರುಕಟ್ಟೆ ಸಂರ‍್ಕಗಳನ್ನು ಕಲ್ಪಿಸುವ ವೇದಿಕೆಯಾಗಿದೆ.

ಸಾವಯವ ಮತ್ತು ಸಿರಿಧಾನ್ಯಗಳನ್ನು ಜನಪ್ರಿಯಗೊಳಿಸುವುದರ ಜೊತೆಗೆ ರೈತರಿಗೆ - ಆಹಾರ, ಮೇವು, ಇಂಧನವಾಗಿ ಬಹು ಉಪಯೋಗ ಮತ್ತು ಬರಗಾಲದಲ್ಲಿ ರೈತರಿಗೆ ಉತ್ತಮ ರ‍್ಯಾಯ ನರ‍್ವಹಣಾ ತಂತ್ರ. ಗ್ರಾಹಕರಿಗೆ - ಪೌಷ್ಟಿಕಾಂಶ ಮತ್ತು ಆರೋಗ್ಯ ಸಮಸ್ಯೆಗಳ ನಿವಾರಣೆ (ಕಬ್ಬಿಣ, ಸತು, ಫೆÇೀಲಿಕ್ ಆಮ್ಲ, ಕ್ಯಾಲ್ಸಿಯಂ ಕೊರತೆ ನೀಗಿಸಲು ಮುತ್ತು ಮಧುಮೇಹ ನಿಯಂತ್ರಣ), ಪರಿಸರಕ್ಕೆ - ಕಡಿಮೆ ನೀರಿನ ಅವಶ್ಯಕತೆ ಹೊಂದಿರುತ್ತದೆ. ಅತ್ಯಂತ ಶುಷ್ಕ ವಾತಾವರಣದಲ್ಲಿ ಬದುಕಬಲ್ಲವು. ಹವಾಮಾನ ಬದಲಾವಣೆಗೆ ಹೊಂದಿಕೊಳ್ಳುತ್ತವೆ. ಈ ಉದ್ದೇಶಗಳನ್ನು ಸಾಧಿಸುವಲ್ಲಿ ಗಮನರ‍್ಹ ಮೈಲುಗಲ್ಲುಗಳಾಗಿ ಪರಿಣಮಿಸಿವೆ.

ಸಾವಯವ ಮತ್ತು ಸಿರಿಧಾನ್ಯಗಳನ್ನು "ಭವಿಷ್ಯದ ಪೀಳಿಗೆಯನ್ನು ಪೆÇೀಷಿಸುವ ಸಾಂಪ್ರದಾಯಿಕ ಪ್ರಜ್ಞಾವಂತ ಆಹಾರ" ಎಂದು ಜನಪ್ರಿಯಗೊಳಿಸುವುದು ಮತ್ತು ಭವಿಷ್ಯಕ್ಕಾಗಿ ಪಾರಂಪರಿಕ ದೇಸಿ ತಳಿಗಳನ್ನು ಬೆಳೆಸಿ ಸಂರಕ್ಷಿಸುವುದು ರಾಜ್ಯ ರ‍್ಕಾರದ ಧ್ಯೇಯೋದ್ದೇಶವಾಗಿದೆ.

ಪ್ರಸ್ತುತ ರಾಜ್ಯದ ಒಟ್ಟು ಸಿರಿಧಾನ್ಯ ಪ್ರದೇಶ - ೧೮.೩೭ ಲಕ್ಷ ಹೆಕ್ಟೇರ್, ಪ್ರಮುಖ ಸಿರಿಧಾನ್ಯಗಳು. ೧೮.೦೬ ಲಕ್ಷ ಹೆಕ್ಟೇರ್ (ರಾಗಿ - ೮.೨೭ ಲಕ್ಷ ಹೆಕ್ಟೇರ್, ಜೋಳ - ೮.೧೧ ಲಕ್ಷ ಹೆಕ್ಟೇರ್ ಮತ್ತು ಸಜ್ಜೆ - ೧.೬೮ ಲಕ್ಷ ಹೆಕ್ಟೇರ್) ಹಾಗೂ ಕಿರು/ಸಿರಿಧಾನ್ಯಗಳು - ೦.೩೧ ಲಕ್ಷ ಹೆಕ್ಟೇರ್ (ನವಣೆ, ಸಾಮೆ, ಕೊರಲೆ, ಹಾರಕ, ಬರಗು ಮತ್ತು ಊದಲು).

ಸಾವಯವ ಮತ್ತು ಸಿರಿಧಾನ್ಯಗಳ ಪೆÇ್ರೀತ್ಸಾಹಕ್ಕೆ ರಾಜ್ಯ ರ‍್ಕಾರವು ಹಲವು ಪರ‍್ವಭಾವಿ ಕರ‍್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿರುತ್ತದೆ.

೨೦೨೪ ನೇ ಡಿಸೆಂಬರ್ ೧೩ ರಂದು ಬೆಳಗಾವಿಯ ಸುರ‍್ಣಸೌಧದಲ್ಲಿ ಆಯೋಜಿಸಲಾಗಿದ್ದ   ಅuಡಿಣಚಿiಟಿ ಖಚಿiseಡಿ ಕರ‍್ಯಕ್ರಮದಲ್ಲಿ ಸನ್ಮಾನ್ಯ ಮುಖ್ಯಮಂತ್ರಿಯವರು ಅಂತರರಾಷ್ಟ್ರೀಯ ವಾಣಿಜ್ಯ ಮೇಳದ ಅನಾವರಣ ಕರ‍್ಯಕ್ರಮಕ್ಕೆ ಚಾಲನೆ ನೀಡಿರುತ್ತಾರೆ.

"ಸಿರಿಧಾನ್ಯ ಮತ್ತು ಮರೆತುಹೋದ ಖಾದ್ಯಗಳಿಗೆ ಸಂಬಂಧಿಸಿದಂತೆ ಸರ‍್ವಜನಿಕರು ಅವರ ಸೃಜನಶೀಲ ಪ್ರತಿಭೆಯನ್ನು ಪ್ರರ‍್ಶಿಸಲು ಅವಕಾಶ ಮತ್ತು ಸ್ರ‍್ಧಾತ್ಮಕ ವಾತಾವರಣದಲ್ಲಿ ಅನುಭವವನ್ನು ಹಂಚಿಕೊಳ್ಳಲು ವೇದಿಕೆಯನ್ನು ಒದಗಿಸುವ ಮುಖ್ಯ ಉದ್ದೇಶದೊಂದಿಗೆ ಜನವರಿ ೭ ಮತ್ತು ೮  ರಂದು ಸ್ರ‍್ಪ್ ಕ್ಯುಲಿನರಿ ಅಕಾಡೆಮಿ, ಬೆಂಗಳೂರು ಇಲ್ಲಿ ಜಿಲ್ಲಾಮಟ್ಟದ ಸಿರಿಧಾನ್ಯ ಹಾಗೂ ಮರೆತು ಹೋದ ಖಾದ್ಯಗಳ ಪಾಕ ಸ್ರ‍್ಧೆಯಲ್ಲಿ ವಿಜೇತರಾದ ಸ್ರ‍್ಧಿಗಳಿಗೆ ರಾಜ್ಯ ಮಟ್ಟದ ಪಾಕ ಸ್ರ‍್ಧೆಯನ್ನು ಆಯೋಜಿಸಲಾಗಿತ್ತು.

“ಸಿರಿಧಾನ್ಯಗಳು: ಸುಸ್ಥಿರ ಭವಿಷ್ಯಕ್ಕಾಗಿ ಮಹತ್ವದ ಧಾನ್ಯಗಳು” ಶರ‍್ಷಿಕೆಯಡಿ ಪ್ಯಾನಲ್ ರ‍್ಚೆಯನ್ನು ಕ್ರಿಸ್ತು ಜಯಂತಿ ಕಾಲೇಜು ಬೆಂಗಳೂರು ಇವರ ಸಹಯೋಗದೊಂದಿಗೆ ಜನವರಿ ೧೦ ರಂದು ಆಯೋಜಿಸಲಾಗಿದ್ದು, ಆರೋಗ್ಯ ಪರಿಣಿತರು, ಪತ್ರಿಕೋದ್ಯಮಿಗಳು, ಕ್ರೀಡಾಪಟುಗಳು, ಸಿರಿಧಾನ್ಯ ಕೃಷಿಕರು ಮತ್ತು ವಿದ್ಯರ‍್ಥಿ ಸಮುದಾಯ ರ‍್ಚೆಯಲ್ಲಿ ಭಾಗವಹಿಸಿರುತ್ತಾರೆ.

ಜನವರಿ ೧೬ ರಂದು ಮೂರು ಬಾರಿ ಗ್ರಾಮಿ ಪ್ರಶಸ್ತಿ ವಿಜೇತರು ಮತ್ತು ಕನ್ನಡದವರಾದ ರಿಕಿ ಕೇಜ್ ಇವರು ಸಂಯೋಜಿಸಲಾಗಿರುವ ಹಾಗೂ ಅಮೇರಿಕಾ ದೇಶದ ಮೂರು ಬಾರಿ ಗ್ರಾಮಿ ಪ್ರಶಸ್ತಿಯನ್ನು ಪಡೆದ ಲೋನಿ ಪರ‍್ಕ್ ರವರು ಹಾಗೂ ಸಿದ್ಧರ‍್ಥ ಬಸರೂರು ರವರು ದನಿ ನೀಡಿರುವ "ದೇಶಿ ತಳಿಗಳ" ಗೀತೆಯನ್ನು ಸನ್ಮಾನ್ಯ ಮುಖ್ಯಮಂತ್ರಿಯವರು ಬಿಡುಗಡೆಗೊಳಿಸಿದರು. ಈ ಗೀತೆಗೆ ಯು-ಟ್ಯೂಬ್‍ನಲ್ಲಿ ಇದುವರೆಗೆ ೬ ಲಕ್ಷಕ್ಕಿಂತ ಹೆಚ್ಚು ವೀಕ್ಷಣೆಯಾಗಿರುತ್ತದೆ. ಅಲ್ಲದೇ, ದೇಶಿತಳಿಗಳನ್ನು ಸಂರಕ್ಷಿಸುವಲ್ಲಿ ರಾಜ್ಯದ ಅಸಾಧಾರಣ ಹೆಜ್ಜೆಗೆ ವಿಶ್ವಸಂಸ್ಥೆಯ ಭಾಗವಾದ ಯುಎನ್‍ಸಿಸಿಡಿ ಇವರು ಉತ್ತೇಜಿತರಾಗಿದ್ದಾರೆ.

ಹೋಟೆಲ್ / ರೆಸ್ಟೋರೆಂಟ್‍ಗಳ ಆಹಾರ ಪಟ್ಟಿಯಲ್ಲಿ ಸಿರಿಧಾನ್ಯಗಳನ್ನು ಪರಿಚಯಿಸಲು, ಇತ್ತೀಚಿನ ಪೀಳಿಗೆ ಹಾಗೂ ಗ್ರಾಹಕರಲ್ಲಿ ಅಭಿರುಚಿ/ಸಕಾರಾತ್ಮಕ ಪ್ರಭಾವ ಬೀರುವಂತಹ ಪರಿಣಾಮಕಾರಿ ಮರ‍್ಗಗಳ ಕುರಿತು ರ‍್ಚಿಸುವ ಮುಖ್ಯ ಉದ್ದೇಶದೊಂದಿಗೆ "ಸಿರಿಧಾನ್ಯಗಳ ಪಾಕಶಾಸ್ತ್ರ ವಿಚಾರ ಸಂಕಿರಣ'ವನ್ನು ಎಂ.ಎಸ್.ರಾಮಯ್ಯ ಕಾಲೇಜು, ಬೆಂಗಳೂರು ಇವರ ಸಹಯೋಗದೊಂದಿಗೆ ಜನವರಿ ೧೭ ರಂದು ಆಯೋಜಿಸಲಾಗಿರುತ್ತದೆ.

ಗ್ರಾಹಕರಲ್ಲಿ ಅರಿವು ಮೂಡಿಸುವ ಉದ್ದೇಶದೊಂದಿಗೆ ಜನವರಿ ೧೯ ರಂದು ಕಬ್ಬನ್ ಪರ‍್ಕ್ ನಲ್ಲಿ "ಸಿರಿಧಾನ್ಯ ಓಟ" ವನ್ನು ಆಯೋಜಿಸಲಾಗಿದ್ದು, ಸುಮಾರು ೪೦೦೦ ಸರ‍್ವಜನಿಕರು ಭಾಗವಹಿಸಿರುತ್ತಾರೆ.

ಬೆಂಗಳೂರಿನ ಹೆಬ್ಬಾಳದಲ್ಲಿ "ಸಾವಯವ ಮತ್ತು ಸಿರಿಧಾನ್ಯ ಹಬ್" ಅನ್ನು ರೂ. ೨೦.೦೦ ಕೋಟಿ ವೆಚ್ಚದಲ್ಲಿ ನರ‍್ಮಿಸಲು ಜನವರಿ ೨೩ ರಂದು ಮುಖ್ಯಮಂತ್ರಿಯವರಿಂದ ಚಾಲನೆ ನೀಡಲು ಯೋಜಿಸಲಾಗಿದೆ.ಎಲ್ಲಾ ಜಿಲಾ ಕೇಂದ್ರಗಳಲ್ಲಿ ಸಿರಿಧಾನ್ಯ ಓಟ/ನಡಿಗೆ, ಸಿರಿಧಾನ್ಯ ಹಬ್ಬ ಹಾಗೂ ಸಿರಿಧಾನ್ಯ ಹಾಗೂ ಮರೆತುಹೋದ ಖಾದ್ಯಗಳ ಪಾಕ ಸ್ರ‍್ಧೆಯನ್ನು ಆಯೋಜಿಸಲಾಗಿರುತ್ತದೆ ಎಂದು ಸಚಿವರು ತಿಳಿಸಿದರು.

ಮೂರು ದಿನದ ಅಂತರರಾಷ್ಟ್ರೀಯ ವಾಣಿಜ್ಯ ಮೇಳ: ಈ ಮೇಳದಲ್ಲಿ ೩೦೦ ಕ್ಕೂ ಹೆಚ್ಚು ಹವಾನಿಯಂತ್ರಿತ ಸಾವಯವ ಮತ್ತು ಸಿರಿಧಾನ್ಯಗಳ ಮಳಿಗೆಗಳು ಇರಲಿವೆ. ಸಾವಯವ ಮತ್ತು ಸಿರಿಧಾನ್ಯಗಳ ಸಂಸ್ಥೆಗಳು, ಮಾರುಕಟ್ಟೆದಾರರು, ರಫ್ತುದಾರರು, ಚಿಲ್ಲರೆ ಮಾರಾಟಗಾರರು, ರೈತ ಗುಂಪುಗಳು, ಪ್ರಾಂತೀಯ ಒಕ್ಕೂಟಗಳು, ಸಾವಯವ ಪರಿಕರಗಳ ಸಂಸ್ಥೆಗಳು, ರಾಜ್ಯ ಮತ್ತು ಕೇಂದ್ರ ರ‍್ಕಾರದ ಇಲಾಖೆಗಳು ಮತ್ತು ಸಂಸ್ಥೆಗಳು ವಸ್ತು ಪ್ರರ‍್ಶನದಲ್ಲಿ ಭಾಗವಹಿಸುತ್ತಿವೆ.

ಅಂತರರಾಷ್ಟ್ರೀಯ ಸಮ್ಮೇಳನವನ್ನು ಉIZ, ಉeಡಿmಚಿಟಿಥಿ  ಹಾಗೂ  ಈiಃಐ, Sತಿiಣzeಡಿಟಚಿಟಿಜ    ಸಂಸ್ಥೆಗಳ ಸಹಯೋಗಹದೊಂದಿಗೆ  "ಖಿಡಿಚಿಟಿsಜಿoಡಿmಚಿಣioಟಿ oಜಿ ಚಿgಡಿiಜಿooಜ sಥಿsಣems ಣhಡಿough ಚಿgಡಿoeಛಿoಟogಥಿ: ಂ gಟobಚಿಟ ಚಿಟಿಜ ಡಿegioಟಿಚಿಟ ಠಿeಡಿsಠಿeಛಿಣive"  ಎಂಬ ಶರ‍್ಷಿಕೆಯಡಿ ಸಮ್ಮೇಳನದಲ್ಲಿ ೩೦ ಕ್ಕಿಂತ ಹೆಚ್ಚು ಅಂತರರಾಷ್ಟ್ರೀಯ ಮತ್ತು ರಾಷ್ಟ್ರೀಯ ಪ್ರಖ್ಯಾತ ಉಪನ್ಯಾಸಕರು ಮಾಹಿತಿ ನೀಡಲಿದ್ದಾರೆ.

ರಾಜ್ಯದ ಸಾವಯವ ಮತ್ತು ಸಿರಿಧಾನ್ಯಗಳ ಉತ್ಪನ್ನಗಳಿಗೆ ಮಾರುಕಟ್ಟೆ ಸಂರ‍್ಕ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಮೇಳದಲ್ಲಿ ಉತ್ಪಾದಕರ-ಮಾರುಕಟ್ಟೆದಾರರ ಸಮಾಲೋಚನಾ ಸಭೆಗಳನ್ನು ರ‍್ಪಡಿಸಲಾಗುತ್ತದೆ. ಬಿ೨ಬಿ ಸಭೆಗೆ ಈಗಾಗಲೇ ೧೪೧ ಕೊಳ್ಳುವವರು ಮತ್ತು ೧೨೫ ಮಾರಾಟಗಾರರು ನೋಂದಣಿ ಮಾಡಿದ್ದು ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ರಾಜ್ಯದ ಮಾರುಕಟ್ಟೆದಾರರು, ಎಫ್‍ಪಿಓ / ಒಕ್ಕೂಟಗಳು ಭಾಗವಹಿಸಲಿದ್ದಾರೆ.

ರ‍್ನಾಟಕದ ಪೆವಿಲಿಯನ್‍ನಲ್ಲಿ ರ‍್ನಾಟಕದ ಸಿರಿಧಾನ್ಯ ಮತ್ತು ಸಾವಯವ ಉತ್ಪನ್ನಗಳನ್ನು ನವೋದ್ಯಮಿಗಳು ಸಿರಿಧಾನ್ಯ / ಸಾವಯವ ರೈತ ಗುಂಪುಗಳು, ರೈತ ಉತ್ಪಾದಕ ಗುಂಪುಗಳು (ಎಫ್‍ಪಿಓಗಳು), ಪ್ರಾಂತೀಯ ಒಕ್ಕೂಟಗಳು, ಹಾಗೆಯೇ ರಾಜ್ಯ ಮತ್ತು ಕೇಂದ್ರ ರ‍್ಕಾರದ ಇಲಾಖೆಗಳು ಮತ್ತು ಸಂಸ್ಥೆಗಳು ಸೇರಿದಂತೆ ಸುಮಾರು ೧೧೫ ಮಳಿಗೆಗಳು ಇರುತ್ತವೆ. ಐಎಂಆರ್, ಸಿಎಫ್‍ಟಿಆರ್‍ಐ, ಎನ್‍ಐಎಫ್‍ಟಿಇಎಂ, ಯುಎಎಸ್‍ಬಿ ಮುಂತಾದ ಸಂಸ್ಥೆಗಳಿಂದ ಸಂಸ್ಮರಣೆ, ಮೌಲ್ಯರ‍್ಧನೆ ಹಾಗೂ ಇನ್ನಿತರೆ ತಾಂತ್ರಿಕತೆಗಳ ಪ್ರಾತ್ಯಕ್ಷಿಕೆ ಇರುತ್ತದೆ.

ರಾಜ್ಯದ ರೈತರಿಗಾಗಿ ಕನ್ನಡ ಭಾಷೆಯಲ್ಲಿ ಮೂರು ದಿನಗಳ ಕರ‍್ಯಗಾರವನ್ನು ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ ಇವರ ಸಹಯೋಗದೊಂದಿಗೆ ರೈತರ ಕರ‍್ಯಾಗಾರ ಆಯೋಜಿಸಲಾಗುತ್ತದೆ. ಈ ಕರ‍್ಯಾಗಾರದಲ್ಲಿ ಸಾವಯವ, ನೈರ‍್ಗಿಕ, ದೇಸಿ ತಳಿಗಳು, ಸಿರಿಧಾನ್ಯಗಳ ಕುರಿತು ವಿಷಯ ತಜ್ಞರು ಉಪನ್ಯಾಸ ನೀಡಲಿದ್ದಾರೆ.

ಮೂರು ದಿನಗಳ ಮೇಳದ ಅವಧಿಯಲ್ಲಿ ವಿವಿಧ ಹೋಟಲ್/ ರೆಸ್ಟೋರೆಂಟ್ ಗಳ ಮಳಿಗೆಗಳಲ್ಲಿ ವೈವಿದ್ಯಮಯ ಮತ್ತು ರುಚಿಕರವಾದ ಸಾವಯವ ಹಾಗೂ ಸಿರಿಧಾನ್ಯಗಳ ಊಟ, ಉಪಹಾರಗಳನ್ನು ಸವಿಯಲು ಸರ‍್ವಜನಿಕರಿಗೆ ಸಾವಯವ ಮತ್ತು ಸಿರಿಧಾನ್ಯ ಆಹಾರ ಮಳಿಗೆಗಳು (ಪುಡ್ ಕರ‍್ಟ್) ಅವಕಾಶ ಕಲ್ಪಿಸಿಕೊಡಲಾಗಿದೆ. ಅಲ್ಲದೇ ವಿವಿಧ ದೇಸಿ/ಗ್ರಾಮೀಣಸಾಂಸ್ಕೃತಿಕ ಕರ‍್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ತಿಳಿಸಿದರು.

ಪ್ರಸಕ್ತ ಸಾಲಿನ ಮೇಳದ ವೈಶಿಷ್ಟ್ಯ: ತಲೆಮಾರುಗಳಿಂದ ರೈತರು ತಾವು ಕಾಪಾಡಿಕೊಂಡು, ಪೆÇೀಷಿಸಿದ ದೇಶೀ ತಳಿಗಳ ಪ್ರರ‍್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಈ ದೇಶೀ ಪೆವಿಲಿಯನ್‍ನಲ್ಲಿ ರಾಜ್ಯದ ಆಯ್ದ ೧೫ ಜಿಲ್ಲೆಗಳಿಂದ ೩೦ ದೇಶೀ ತಳಿಗಳನ್ನು ಸಂರಕ್ಷಿಸುತ್ತಿರುವ ರೈತರನ್ನು ಆಹ್ವಾನಿಸಲಾಗಿದೆ. ದೇಶೀ ಪೆವಿಲಿಯನ್‍ನಲ್ಲಿ ರೈತರು ಸಂರಕ್ಷಿಸಿರುವ ವಿವಿಧ ಬೆಳೆಗಳ ಬಿತ್ತನೆ ಬೀಜ / ತೆನೆಗಳ ಪ್ರರ‍್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

ಮಣ್ಣಿನ ಲೋಕ - ಸಸ್ಯಗಳ ಬೆಳವಣಿಗೆಗೆ ಮಣ್ಣು ಪ್ರಮುಖ ಆಧಾರವಾಗಿರುವುದರಿಂದ, ರೈತರು, ಸರ‍್ವಜನಿಕರು ಮತ್ತು ವಿದ್ಯರ‍್ಥಿಗಳಲ್ಲಿ ಮಣ್ಣಿನ ಮಹತ್ವ, ಗುಣಲಕ್ಷಣಗಳು, ರ‍್ಗೀಕರಣ ಮತ್ತು ರಚನೆಯ ಕುರಿತು ಅರಿವು ಮೂಡಿಸುವುದು ಅತ್ಯಾವಶ್ಯವಾಗಿದೆ. ಈ ಉದ್ದೇಶದಿಂದ, ಮಣ್ಣಿನ ಪೆಡಾನ್ ಪೆವಿಲಿಯನ್ ಅನ್ನು ಸಾವಯವ ಮತ್ತು ಸಿರಿಧಾನ್ಯಗಳ ಅಂತರಾಷ್ಟ್ರೀಯ ವಾಣಿಜ್ಯ ಮೇಳ - ೨೦೨೫ ರಲ್ಲಿ ಪರಿಚಯಿಸಲಾಗಿದೆ. ರ‍್ನಾಟಕ ರಾಜ್ಯದ ವಿವಿಧ ಬಗೆಯ ಮಣ್ಣಿನ  moಟಿoಟiಣh   ಗಳನ್ನು ಪ್ರರ‍್ಶಿಸಲಾಗುವುದು.

ಈ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ರ‍್ಮನಿ, ಸ್ವಿಟ್ಟರ್‍ಲ್ಯಾಂಡ್, ಸ್ಪೇನ್, ಆಸ್ಟ್ರೇಲಿಯ, ಕೀನ್ಯಾ ತಾಂಜೇನಿಯ, ಇಟಲಿ, ಇಂಗ್ಲೆಂಡ್, ಪೆರು ದೇಶಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.

ಇಲಾಖೆಯ ಅಧಿಕಾರಿಗಳ ತಂಡ ಎಲ್ಲಾ ರಾಜ್ಯಗಳಿಗೆ ಭೇಟಿ ನೀಡಿ ಮೇಳದಲ್ಲಿ ಭಾಗವಹಿಸಲು ಆಹ್ವಾನಿಸಲಾಗಿದ್ದು, ೨೫ ರಾಜ್ಯಗಳು ತಮ್ಮ ಭಾಗವಹಿಸುವಿಕೆಯನ್ನು ಖಚಿತಪಡಿಸಿವೆ. ಇನ್ನೂ ೨-೩ ರಾಜ್ಯಗಳು ಭಾಗವಹಿಸುವ ನಿರೀಕ್ಷೆಯಿರುತ್ತದೆ. ಅಲ್ಲದೇ, ೮ ಹೊರ ರಾಜ್ಯಗಳ ಕೃಷಿ ಸಚಿವರು ಭಾಗವಹಿಸುವಿಕೆಯನ್ನು ಖಚಿತಪಡಿಸಿದ್ದು, ಇನ್ನೂ ೧-೨ ಸಚಿವರು ಭಾಗವಹಿಸುವ ನಿರೀಕ್ಷೆಯಿರುತ್ತದೆ ಎಂದು ತಿಳಿಸಿದರು.

ರಾಜ್ಯ, ಹೊರ ರಾಜ್ಯ ಹಾಗೂ ಅಂತರರಾಷ್ಟ್ರೀಯ ಸಿರಿಧಾನ್ಯ / ಸಾವಯವ ಉತ್ಪನ್ನಗಳ ಸಂಸ್ಥೆಗಳು, ಇಲಾಖೆಗಳು ಹೆಚ್ಚಿನ ಸಂಖ್ಯೆಯಲ್ಲಿ ಮೇಳದಲ್ಲಿ ಭಾಗವಹಿಸಲಿದ್ದು, ಹೊರ ರಾಜ್ಯಗಳ ೧೭ ಇಲಾಖೆಗಳು ಮತ್ತು ೭ ಸಂಸ್ಥೆಗಳು ಭಾಗವಹಿಸುವಿಕೆಯನ್ನು ಖಚಿತಪಡಿಸಿರುತ್ತಾರೆ ಎಂದು ಸಚಿವರು ತಿಳಿಸಿದರು.


ಗರ್ಭಿಣಿಯರ ಹೆರಿಗೆ ಪೂರ್ವ 3 ದಿನಗಳ ಮೊದಲು ವೈದ್ಯರ ನಿಗಾವಣೆಯಡಿ ಸರಳ ಹೆರಿಗೆಗೆ ಆದ್ಯತೆ: ಡಿಹೆಚ್ಒ ಡಾ.ಯಲ್ಲಾ ರಮೇಶ್ ಬಾಬು

 

ಬಳ್ಳಾರಿ : ಗರ್ಭಿಣಿಯರ ಹೆರಿಗೆಗೆ ಪೂರ್ವ 3 ದಿನಗಳ ಮೊದಲು ಜಿಲ್ಲೆಯ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ನಿಗಾವಣೆ ಅಡಿ ಸರಳ ಹೆರಿಗೆಗೆ ಆದ್ಯತೆ ನೀಡಲಾಗಿದ್ದು, ಇದು ವಿನೂತನ ಅಭಿಯಾನಯಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಲ್ಲಾ ರಮೇಶ್ ಬಾಬು ಅವರು ಹೇಳಿದರು.
ಜಿಲ್ಲಾ ಆಸ್ಪತ್ರೆಯಲ್ಲಿ ಗಂಡಾಂತರ ಗರ್ಭಿಣಿಯರ ದಾಖಲಾತಿಗಾಗಿ 5 ಹಾಸಿಗೆಗಳನ್ನು ಕಾಯ್ದಿರಿಸಿ ದಾಖಲಾದ ಗರ್ಭಿಣಿಯರಿಗೆ ಆರೋಗ್ಯ ವಿಚಾರಿಸಿ ಅವರು ಮಾತನಾಡಿದರು.


ಗರ್ಭಿಣಿಯರಿಗೆ ತನ್ನ ಕುಟುಂಬಕ್ಕೆ ಹೊಸ ಜೀವ ಸೆಲೆ ನೀಡುವ ಹೆರಿಗೆಗೆ ಯಾವುದೇ ಅಪಾಯಗಳು ಇದ್ದರೆ ತಕ್ಷಣವೇ ಗುರ್ತಿಸಿ ನಿರಂತರ ಕಾಳಜಿ ಮೂಲಕ ಎಲ್ಲಾ ಅಗತ್ಯ ಪರೀಕ್ಷೆ ಕೈಗೊಂಡು ಆರೈಕೆ ಮಾಡಿ, ಸರಳ ಹೆರಿಗೆಗೆ ಆದ್ಯತೆ ನೀಡಿ ಜೊತೆಗೆ ಉಚಿತ ಪೌಷ್ಟಿಕ ಆಹಾರ ಒದಗಿಸಲಾಗುತ್ತಿದೆ ಎಂದು ಅವರು ತಿಳಿಸಿದರು.
ಗಂಡಾಂತರ ಗರ್ಭಿಣಿಯರ ಹೆರಿಗೆಯು ಖಾಸಗಿ ಆಸ್ಪತ್ರೆಗಳಲ್ಲಿ ಹೆಚ್ಚು ಹಣ ಪಾವತಿಸಿ ಕುಟುಂಬಗಳು ಆರ್ಥಿಕವಾಗಿ ತೊಂದರೆಗೀಡಾಗುವ ಪ್ರಕರಣಗಳನ್ನು ತೊಡೆದು ಹಾಕಲು ಜಿಲ್ಲಾಡಳಿತದ ಬೆಂಬಲದಡಿ ಈ ಸೌಲಭ್ಯ ಜಿಲ್ಲೆಯ ಸಾರ್ವಜನಿಕರಿಗೆ ಕಡುಬಡವರಿಗೆ ಆಶಾದೀಪವಾಗಿದೆ ಎಂದರು.
ಚೊಚ್ಚಲು ಗರ್ಭಿಣಿ, ಎತ್ತರ ಕಡಿಮೆ, ಅಧಿಕ ರಕ್ತದೊತ್ತಡ, ರಕ್ತದಲ್ಲಿ ಕಬ್ಬಿಣಾಂಶ ಕೊರತೆ, ಅವಳಿ ಜವಳಿ ಗರ್ಭಣಿ, ವಿವಾಹವಾಗಿ ಐದಕ್ಕಿಂತ ಹೆಚ್ಚು ವರ್ಷಗಳ ನಂತರ ಗರ್ಭಿಣಿಯಾಗಿರುವುದು, ಮೊದಲ ಹೆರಿಗೆ ಸಿಸೇರಿಯನ್, ಮುಂತಾದ ಕಾರಣಗಳಿದ್ದರೆ ಆಯಾ ವ್ಯಾಪ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ತಾಲ್ಲೂಕ ಸಾರ್ವಜನಿಕ ಆಸ್ಪತ್ರೆ ಹಾಗೂ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಿಸಿ ನಿಗಾವಹಿಸುವ ಮೂಲಕ ಹೆರಿಗೆ ಅವಧಿಯಲ್ಲಿ ಕಂಡು ಬರಬಹುದಾದ ಸಂಭವನಿಯ ತೊಂದರೆಗಳನ್ನು ವೈದ್ಯರ ನಿಗಾವಣೆ ಮೂಲಕ ಗುರ್ತಿಸಿ ಸುರಕ್ಷಿತ ಹೆರಿಗೆ ಕೈಗೊಳ್ಳಲು ಸಾಧ್ಯವಾಗಲಿದೆ ಎಂದರು.
ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎನ್.ಬಸರೆಡ್ಡಿ ಮಾತನಾಡಿ ತೀವ್ರ ರಕ್ತಹೀನತೆಯಂತಹ ಸನ್ನಿವೇಶದಲ್ಲಿ ಕ್ಷೇತ್ರ ಮಟ್ಟದಲ್ಲಿ ಸ್ಥಳೀಯವಾಗಿ ನೀಡುವ ಚಿಕಿತ್ಸೆಯಾದ (ಐಎಫ್‍ಎ ಮಾತ್ರೆ, ಐರನ್ ಸುಕ್ರೋಸ್, ರಕ್ತ ಹಾಕಿಸುವಿಕೆ ) ಸುಧಾರಣೆಯಾಗದಿದ್ದಲ್ಲಿ ತಜ್ಞರ ಬಳಿ ತಪ್ಪದೇ ಕಳುಹಿಸಬೇಕು. ಅಗತ್ಯವಿದ್ದಲ್ಲಿ ಸ್ಕ್ಯಾನ್ ಮಾಡಿಸುವುದು. ಮೊದಲ ಹೆರಿಗೆ ಶಸ್ತ್ರಚಿಕಿತ್ಸೆ ಮೂಲಕವಾದಲ್ಲಿ ಪುನಃ ಗರ್ಭಿಣಿಯಾಗುವ ಅವಧಿಯನ್ನು ಕನಿಷ್ಟ 3 ವರ್ಷಕ್ಕೆ ಕಡ್ಡಾಯವಾಗಿ ಮುಂದೂಡಬೇಕು. ಅಲ್ಲದೇ ಗಾಳಿ ಸುದ್ದಿ ಮೂಲಕ ಕಬ್ಬಿಣಾಂಶ ಮಾತ್ರೆ ನುಂಗಿದರೆ, ಭ್ರೂಣ ದಪ್ಪವಾಗುತ್ತದೆ, ಕಪ್ಪು ಬಣ್ಣದ ಮಗು ಹುಟ್ಟುತ್ತದೆ ಎಂಬ ತಪ್ಪು ನಂಬಿಕೆ ನಂಬಬಾರದು ಎಂದರು.
ವೈದ್ಯರ ಸಲಹೆಯಂತೆ ಉಚಿತವಾಗಿ ನೀಡುವ ಕಬ್ಬಿಣಾಂಶ ಮಾತ್ರೆಗಳನ್ನು ಪ್ರತಿದಿನ ಒಂದರಂತೆ ಕನಿಷ್ಟ 180 ಒಂದು ವೇಳೆ ರಕ್ತಹೀನತೆಯ ಪ್ರಮಾಣ ತೀವ್ರವಾಗಿದ್ದಲ್ಲಿ ದಿನಕ್ಕೆ 2 ರಂತೆ 360 ಮಾತ್ರೆಗಳನ್ನು 6 ತಿಂಗಳ ಅವಧಿಯಲ್ಲಿ ಸೇವಿಸಬೇಕು. ಇದರ ಜೊತೆ ದೈಹಿಕವಾಗಿ ಸದೃಡವಾಗಿರಲು ಕ್ಯಾಲ್ಸಿಯಮ್ ಮಾತ್ರೆಗಳನ್ನು ಸಹ ನುಂಗಬೇಕು ಎಂದು ವಿನಂತಿಸಿದರು.
ಈ ಸಂದರ್ಭದಲ್ಲಿ ಡಿ.ಎಮ್.ಒ ಹಾಗೂ ಬಳ್ಳಾರಿ ತಾಲ್ಲೂಕ ಆರೋಗ್ಯ ಅಧಿಕಾರಿ ಡಾ.ಅಬ್ದುಲ್ಲಾ, ಜಿಲ್ಲಾ ಕುಷ್ಟರೋಗ ನಿಯಂತ್ರಣ ಅಧಿಕಾರಿ ಡಾ.ವೀರೇಂದ್ರ ಕುಮಾರ್, ಪ್ರಸೂತಿ ತಜ್ಞರಾದ ಡಾ.ಜಯಪ್ರದ, ಡಾ.ಅಶ್ರಫ್ ಡಾ.ಶ್ರೀ ಲಕ್ಷ್ಮಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಹೆಚ್ ದಾಸಪ್ಪನವರ, ಶುಶ್ರೂಷಣಾ ಮೇಲ್ವಿಚಾರಕಿ ವಿಮಲಾಕ್ಷಿ, ಶುಶ್ರೂಷಣಾಧಿಕಾರಿ ಮಾಲತಿ ಉಡುಪಿ ಸೇರಿದಂತೆ ಸಿಬ್ಬಂದಿಯವರು, ತಾಯಂದಿರು ಹಾಜರಿದ್ದರು.

ಮರಳು ಬ್ಲಾಕ್ ಹರಾಜಿಗೆ ಶೀಘ್ರ ಟೆಂಡರ್, ಜೆಜೆಎಂ ಕಾಮಗಾರಿ ತಪಾಸಣೆಗೆ ಸಮಿತಿ ರಚನೆ; ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್

ದಾವಣಗೆರೆ : ಜಿಲ್ಲೆಯಲ್ಲಿ ಹೊಸದಾಗಿ ಟೆಂಡರ್ ಪ್ರಕ್ರಿಯೆ ಮುಗಿಯದ ಕಾರಣ ಮರಳಿಗೆ ಸಮಸ್ಯೆಯಾಗಿದ್ದು ಇದರ ನಿವಾರಣೆಗಾಗಿ ಶೀಘ್ರದಲ್ಲಿ ಟೆಂಡರ್ ಕರೆದು ಗುರುತಿಸಲಾದ 24 ಬ್ಲಾಕ್‍ಗಳಲ್ಲಿ ಮರಳು ಎತ್ತಲು ಅವಕಾಶ ಕಲ್ಪಿಸಲಾಗುತ್ತದೆ ಎಂದು ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ ತಿಳಿಸಿದರು. 
 ಅವರು ಸೋಮವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯಲ್ಲಿ ಮರಳು ಬ್ಲಾಕ್‍ಗಳು ಹರಾಜು ಮಾಡದ ಕಾರಣ ಶಿವಮೊಗ್ಗದಿಂದ ಮರಳು ತರಿಸಿಕೊಳ್ಳಬೇಕಾಗಿದೆ ಮತ್ತು ಇಲ್ಲಿ ಕಾಳಸಂತೆಯಲ್ಲಿ ಮರಳು ಸಾಗಣೆ ಮಾಡಲಾಗುತ್ತದೆ. ಇದರಿಂದ ಬಡವರು, ಮಧ್ಯಮ ವರ್ಗದವರು ಮನೆ ಕಟ್ಟಿಕೊಳ್ಳಲು ಸಮಸ್ಯೆಯಾಗಿದೆ ಎಂದು ಶಾಸಕರಾದ ಡಿ.ಜಿ.ಶಾಂತನಗೌಡ ಸಭೆಯಲ್ಲಿ ಪ್ರಸ್ತಾಪಿಸಿದರು. ಈ ವೇಳೆ ಗಣಿ ಮತ್ತು ಭೂ ವಿಜ್ಞಾನ ಸಚಿವರ ಖಾತೆಗೆ ಬರುವುದರಿಂದ ಶೀಘ್ರವಾಗಿ ಟೆಂಡರ್ ಕರೆಯಬೇಕೆಂದಾಗ ಸಚಿವರು ಅಲ್ಪಾವಧಿ ಟೆಂಡರ್ ಕರೆದು ಗುರುತಿಸಲಾದ ಮರಳು ಬ್ಲಾಕ್‍ಗಳನ್ನು ಹರಾಜು ಮಾಡುವ ಮೂಲಕ ಜಿಲ್ಲೆಯ ಜನರಿಗೆ ಮರಳು ಸಿಗುವಂತೆ ಕ್ರಮವಹಿಸಲು ಜಿಲ್ಲಾಧಿಕಾರಿಗೆ ತಿಳಿಸಿದರು. 


 ಜಿಲ್ಲೆಯಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ ಗ್ರಾಮಗಳಲ್ಲಿ ಪ್ರತಿ ಮನೆಗಳಿಗೆ ನೀರಿನ ಸಂಪರ್ಕವನ್ನು ಕಲ್ಪಿಸಿದ್ದು ಹಲವು ಗ್ರಾಮಗಳಲ್ಲಿ ಯೋಜನೆ ಜಾರಿಯಾದರೂ ನೀರು ಸಿಗುತ್ತಿಲ್ಲ ಎಂದು ಶಾಸಕರಾದ ಕೆ.ಎಸ್.ಬಸವಂತಪ್ಪ ಪ್ರಸ್ತಾಪಿಸಿದರು. ಇದಕ್ಕೆ ಸಚಿವರು ಸಮಸ್ಯೆ ಇರುವ ಜೆಜೆಎಂ ಕಾಮಗಾರಿಗಳನ್ನು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳು ಆಯಾ ಶಾಸಕರೊಂದಿಗೆ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲಿಸಿ ಕ್ರಮ ಕೈಗೊಳ್ಳಲು ತಿಳಿಸಿದರು. 
 ಕಳಪೆ ಕಾಮಗಾರಿ ಮಾಡಿದ ಗ್ರಾಮ ಪಂಚಾಯಿತಿ ಪಿಡಿಓ ಮತ್ತು ಗ್ರಾಮೀಣ ಕುಡಿಯುವ ನೀರು ಸರಬರಾಜು ವಿಭಾಗದ ಇಂಜಿನಿಯರ್‍ಗಳ ಮೇಲೆ ಕ್ರಮಕ್ಕೆ ಮುಂದಾಗಿದೆ ಎಂದು ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳು ತಿಳಿಸಿದರು. 
ಆರ್.ಓ ಪ್ಲಾಂಟ್ ಪಂಚಾಯಿತಿಗೆ; ಗ್ರಾಮೀಣ ಪ್ರದೇಶದಲ್ಲಿ ಅಳವಡಿಸಲಾದ ಶುದ್ದ ಕುಡಿಯುವ ನೀರಿನ ಘಟಕಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ, ಸಕಾಲಕ್ಕೆ ರಿಪೇರಿಯಾಗುತ್ತಿಲ್ಲ ಎಂಬ ದೂರುಗಳು ಸಾಕಷ್ಟಿದ್ದು ಸರ್ಕಾರ ಇದಕ್ಕಾಗಿ ಆಯಾ ಪಂಚಾಯಿತಿಗಳಿಗೆ ಆರ್.ಓ.ಗಳ ನಿರ್ವಹಣೆ ಜವಾಬ್ದಾರಿ ನೀಡಿದ್ದು ಇದಕ್ಕಾಗಿ ಪ್ರತಿ ತಿಂಗಳು ಮೂರು ಸಾವಿರ ರೂ.ಗಳ ನಿರ್ವಹಣಾ ವೆಚ್ಚ ನೀಡಲಾಗುತ್ತದೆ. ಕುಡಿಯುವ ನೀರಿನ ಸಮಸ್ಯೆಯಾದಲ್ಲಿ 15 ನೇ ಹಣಕಾಸು ಯೋಜನೆಯಡಿ ಪಂಚಾಯಿತಿಯಿಂದ ಕೊಳವೆಬಾವಿ, ಪೈಪ್‍ಲೈನ್ ಮಾಡಲು ಅವಕಾಶ ಇದೆ ಎಂದರು. 
 ಹರಿಹರ-ಶಿವಮೊಗ್ಗ ರಸ್ತೆ ಅಭಿವೃದ್ದಿಗೆ ಕ್ರಮ; ಮರಿಯಮ್ಮನಹಳ್ಳಿ-ಶಿವಮೊಗ್ಗ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮಾಡಬೇಕೆಂದು ಮನವಿ ಮಾಡಿದ್ದು ಆದರೆ ಅನುಷ್ಟಾನವಾಗದ ಕಾರಣ ಹರಿಹರ-ಮಲೆಬೆನ್ನೂರು ರಸ್ತೆಯಲ್ಲಿ ಸಾಗುವುದೇ ಕಷ್ಟಕರವಾದ ಹಿನ್ನಲೆಯಲ್ಲಿ ಲೋಕೋಪಯೋಗಿ ಇಲಾಖೆಯ ಅನುದಾನದಲ್ಲಿಯೇ ರಸ್ತೆ ಅಭಿವೃದ್ದಿ ಅಥವಾ ದುರಸ್ಥಿಗೆ ಕ್ರಮ ಕೈಗೊಳ್ಳಲು ಲೋಕೋಪಯೋಗಿ ಇಲಾಖೆ ಇಂಜಿನಿಯರ್‍ಗೆ ಸಚಿವರು ಸೂಚನೆ ನೀಡಿದರು. 
ಶಾಲಾ ಮಕ್ಕಳಿಗೆ ಮೊಟ್ಟೆ, ಬಾಳೆಹಣ್ಣು ವಿತರಣೆಗೆ ಸೂಚನೆ; ಸರ್ಕಾರಿ ಶಾಲೆ ಹಾಗೂ ಖಾಸಗಿ ಅನುದಾನಿತ ಶಾಲೆಗಳಲ್ಲಿ ಓದುತ್ತಿರುವ 1 ರಿಂದ 10 ನೇ ತರಗತಿ ಮಕ್ಕಳಿಗೆ ವಾರದ ಎಲ್ಲಾ ದಿನಗಳು ಮೊಟ್ಟೆ, ಬಾಳೆಹಣ್ಣು ಅಥವಾ ಶೇಂಗಾ ಚಿಕ್ಕೆ ನೀಡಲು ಪ್ರತಿದಿನ ಪ್ರತಿ ವಿದ್ಯಾರ್ಥಿಗೆ ರೂ.6 ಗಳನ್ನು ಸರ್ಕಾರ ಎರಡು ದಿನ ಹಾಗೂ ಅಜೀಂ ಪ್ರೇಮ್ ಜೀ ಪೌಂಡೇಷನ್‍ನಿಂದ ಉಳಿದ ನಾಲ್ಕು ದಿನ ಪ್ರತಿ ವಿದ್ಯಾರ್ಥಿಗೆ ಮೊಟ್ಟೆ, ಮೊಟ್ಟೆ ತಿನ್ನದವರಿಗೆ ಬಾಳೆಹಣ್ಣು ಅಥವಾ ಶೇಂಗಾ ಚಿಕ್ಕಿಯನ್ನು ನೀಡಬೇಕು. ಆದರೆ ಕೆಲವು ಶಾಲೆಯಲ್ಲಿ ವಾರದಲ್ಲಿ ಎರಡು ಮೊಟ್ಟೆ ನೀಡಲಾಗುತ್ತದೆ ಎಂಬ ದೂರುಗಳಿವೆ ಎಂದು ಶಾಸಕರಾದ ಕೆ.ಎಸ್.ಬಸವಂತಪ್ಪ ಪ್ರಸ್ತಾಪಿಸಿದಾಗ ಸಚಿವರು ವಿತರಣೆ ಬಗ್ಗೆ ದೂರುಗಳು ಬಾರದಂತೆ ನೋಡಿಕೊಳ್ಳಲು ಪ್ರತಿ ದಿನ ವಿತರಣೆ ಮಾಡಿ ವೀಡಿಯೋಗಳನ್ನು ಸಂಗ್ರಹಿಸಲು ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು. 
 ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ಹುದ್ದೆ ಭರ್ತಿಗೆ ಸೂಚನೆ; ಜಿಲ್ಲೆಯಲ್ಲಿ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆಗಳು ಖಾಲಿ ಇರುವುದರಿಂದ ಸಮಸ್ಯೆಯಾಗಿದೆ. ಇದನ್ನು ಆದಷ್ಟು ಬೇಗನೇ ಸಮಸ್ಯೆಗಳನ್ನು ಇತ್ಯರ್ಥ ಮಾಡಲು ಭರ್ತಿಗೆ ಕ್ರಮವಹಿಸಲು ಜಿಲ್ಲಾಧಿಕಾರಿಗೆ ತಿಳಿಸಿದರು. 
ಜಾಹಿರಾತು ಫಲಕದ ವಿವರ ನೀಡಲು ಸೂಚನೆ; ಲೋಕೋಪಯೋಗಿ ಇಲಾಖೆಯಿಂದ ನಿರ್ಮಿಸಲಾದ ರಸ್ತೆಯ ಡಿವೈಡರ್‍ಗಳಲ್ಲಿ ಜಾಹಿರಾತು ಫಲಕಗಳನ್ನು ಅಳವಡಿಸಿದ್ದು ಇದರಿಂದ ಬರುವ ಆದಾಯ ಆಯಾ ಸ್ಥಳೀಯ ಸಂಸ್ಥೆಗಳಿಗೆ ಸೇರಬೇಕಾಗಿದೆ. ಆದರೆ ಇಲಾಖೆ ಅಧಿಕಾರಿಗಳು ಸರಿಯಾದ ಮಾಹಿತಿ ನೀಡುತ್ತಿಲ್ಲ ಎಂದು ಹರಿಹರ ಶಾಸಕರಾದ ಬಿ.ಪಿ.ಹರೀಶ್ ಪ್ರಸ್ತಾಪಿಸಿದಾಗ ಈ ಬಗ್ಗೆ ಸಮಗ್ರವಾದ ಮಾಹಿತಿ ಪಡೆದು ಕ್ರಮ ವಹಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು. 
 ಸಭೆಯಲ್ಲಿ ಚನ್ನಗಿರಿ ಶಾಸಕರಾದ ಬಸವರಾಜ್ ವಿ.ಶಿವಗಂಗಾ, ಮೇಯರ್ ಚಮನ್ ಸಾಬ್.ಕೆ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ; ಶಮ್ಲಾ ಇಕ್ಬಾಲ್, ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಜಿ.ಎಂ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ; ಸುರೇಶ್ ಬಿ.ಇಟ್ನಾಳ್, ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಉಮಾ ಪ್ರಶಾಂತ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು. 

ಅಪ್ಪಾರಾವ ಸೌದಿಗೆ ರಾಜ್ಯ ಪ್ರಶಸ್ತಿ ಪ್ರಧಾನ

 

ಬೀದರ್: ಕಲ್ಪತರು ನಾಡು, ಜಕಣಾಚಾರಿಗಳ ಬೀಡು, ಸಿದ್ದಗಂಗೆಯ ತವರೂರು ಆದ ತುಮಕೂರಿನ ಸಿದ್ದಾರ್ಥ ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ರಾಜ್ಯ ಘಟಕ ಹಾಗೂ ತುಮಕೂರು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಗಳ ಜಂಟಿ ಆಶ್ರಯದಲ್ಲಿ ಶನಿವಾರ ಹಾಗೂ ಭಾನುವಾರ ಜರುಗಿದ ೩೯ನೇ ಪತ್ರಕರ್ತರ ರಾಜ್ಯ ಸಮ್ಮೇಳನದಲ್ಲಿ ಭಾನುವಾರ ಸಂಜೆ ಪ್ರಶಸ್ತಿ ಪ್ರಧಾನ ಸಮಾರಂಭ ಜರುಗಿತ್ತು. 

ಕನ್ನಡಪ್ರಭ ದಿನಪತ್ರಿಕೆಯ ಕಲ್ಬುರ್ಗಿ ಆವೃತ್ತಿಯ ಮುಖ್ಯಸ್ಥರಾದ ಹಿರಿಯ ಪತ್ರಕರ್ತ ಅಪ್ಪಾರಾವ ಸೌದಿ ಅವರಿಗೆ ಈ ವರ್ಷದ ರಾಜಕೀಯ ವಿಮರ್ಶಾತ್ಮಕ ಅತ್ಯುತ್ತಮ ವರದಿಗೆ ಖಾದ್ರಿ ಶಾಮಣ್ಣ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ ಪ್ರಭಾಕರ್, ಶಾಸಕರಾದ ಸುರೇಶ್ ಗೌಡ,  ಸುರೇಶ ಬಾಬು, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಮುಖಂಡರಾದ ನಾಗರಾಜ, ಹಾಗೂ ಇತರೆ ರಾಜಕಾರಣಿಗಳು, ಹಿರಿಯ ಪತ್ರಕರ್ತರಾದ ಪಿ.ಸಾಯಿನಾಥ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು, ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಸಿ ಲೋಕೇಶ, ಉಪಾಧ್ಯಕ್ಷ ಭವಾನಿಸಿಂಗ್ ಠಾಕೂರ್, ಪುಂಡಲೀಕ ಬಾಳೋಜಿ, ಅಜ್ಜಮಾಡ ರಮೇಶ ಕುಟ್ಟಪ್ಪ, ಕಾರ್ಯದರ್ಶಿಗಳಾದ ಸೋಮಶೇಖರ್ ಕೆರಗೋಡು, ನಿಂಗಪ್ಪ ಚಾವಡಿ, ಮತ್ತಿಕೆರೆ ಜಯರಾಮ್, ಖಜಾಂಚಿ ವಾಸುದೇವ ಹೊಳ್ಳ, ತುಮಕೂರು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪುರುಷೋತ್ತಮ, ಪ್ರಧಾನ ಕಾರ್ಯದರ್ಶಿ ರಘುರಾಮ, ರಾಜ್ಯ ಕಾರ್ಯಕಾರಣಿ ಸಮಿತಿ ಸದಸ್ಯ ಸಿದ್ದಲಿಂಗ ಸ್ವಾಮಿ, ಬೀದರ್ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಶಿವಕುಮಾರ ಸ್ವಾಮಿ, ಜಿಲ್ಲಾ ಕಾರ್ಯಕಾರಿಣಿ ಸಮಿತಿ ಸದಸ್ಯ ಶರದ್ ಘಂಟೆ, ಪತ್ರಕರ್ತರಾದ ಪ್ರದೀಪ ಬಿರಾದಾರ್, ಶಿವಕಾಂತ ಸ್ವಾಮಿ ಹಾಗೂ ಇತರರು ಈ ಸಂದರ್ಭದಲ್ಲಿ ಹಾಜರಿದ್ದರು. ಪತ್ರಕತೇ ಸುಕನ್ಯಾ ಕಾರ್ಯಕ್ರಮ ನಿರೂಪಿಸಿದರು.

ಬೀದರ್ ಪರ್ತಕರ್ತರಿಂದ ಸೌದಿ ಸನ್ಮಾನ

ಬೀದರ್: ಜಿಲ್ಲೆಯ ಹಿರಿಯ ಪತ್ರಕರ್ತರು ಹಾಗೂ ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ರಾಷ್ಟ್ರೀಯ ಮಂಡಳಿ ಸದಸ್ಯರಾದ ಅಪ್ಪಾರಾವ ಸೌದಿ ಅವರಿಗೆ ಭಾನುವಾರ ಸಂಜೆ ತುಮಕೂರಿನಲ್ಲಿ ೩೯ನೇ ಪತ್ರಕರ್ತರ ರಾಜ್ಯ ಸಮ್ಮೇಳನದಲ್ಲಿ ಖಾದ್ರಿ ಶಾಮಣ್ಣ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು. 

ಸನ್ಮಾನ ಸ್ವೀಕರಿಸಿದ ಬಳಿಕ ಬೀದರ್ ಜಿಲ್ಲಾ ನಿಯೋಗದ ವತಿಯಿಂದ ಅಪ್ಪಾರಾವ್ ಸೌದಿ ಅವರಿಗೆ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಕುಮಾರ ಸ್ವಾಮಿ, ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಶರದ್ ಘಂಟೆ, ಸದಸ್ಯರಾದ ಪ್ರದೀಪ್ ಬಿರಾದಾರ್ ಶಿವಕಾಂತ ಸ್ವಾಮಿ ಇದ್ದರು.


ನಿರ್ಭಿಡತೆಯ ಶರಣ ಅಂಬಿಗರ ಚೌಡಯ್ಯ

 

ಭಾರತದ ಸಂವಿಧಾನ, ಸಂಸತ್ತು ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಗೆ  8 ಶತಮಾನಗಳಷ್ಟು ಹಿಂದೆಯೇ ಮುನ್ನುಡಿ ಬರೆದವರು ನಮ್ಮ 12ನೇ ಶತಮಾನದ ಬಸವಾದಿ ಶಿವಶರಣರು. ಸಮಸ್ತ ಪ್ರಜೆಗಳಿಗೆ ಜನತಂತ್ರ ವ್ಯವಸ್ಥೆಯ ಪರಮಾಧಿಕಾರ, ವ್ಯಕ್ತಿ ಸ್ವಾತಂತ್ರ್ಯ ಹಾಗೂ ಮೂಲಭೂತ ಹಕ್ಕುಗಳಿಗೆ ಸರ್ವ ಸಮಾನತೆಯೆಂಬ ಕನ್ನಡಿ ಹಿಡಿದವರೇ ಶಿವಶರಣರು. ತಮ್ಮ ವಚನಗಳ ಮೂಲಕ  ಅಂದು ಸಾರಿದ ಸಮಾನತೆಯ ಮೌಲ್ಯಗಳು ಇಂದಿಗೂ ಪ್ರಸ್ತುತವಾಗಿವೆ.12ನೇ ಶತಮಾನ ಎನ್ನುವುದು ಈಗಲೂ ನಮ್ಮನ್ನು ಭಾವನಾತ್ಮಕವಾಗಿಯೇ ಆಳುತ್ತಿದೆ. ಆಚರಣೆಗಳ ಭಾರಕ್ಕೆ ಬಗ್ಗಿ ಹೋಗಿದ್ದ ಸನಾತನ ಸಂಸ್ಕೃತಿಯಲ್ಲಿ ಬೆಳೆದಿದ್ದ ಕೀಳರಿಮೆಯನ್ನು ಅಂದು ವಚನ ಸಂಸ್ಕೃತಿಯೆಂಬ ಧಾರ್ಮಿಕ ಸಮತಾವಾದದ ಕ್ರಾಂತಿಯು ಆವರಿಸಿಕೊಂಡಿತ್ತು. ತನ್ನ ಸ್ನೇಹಮಯ ಸರಳವಾದ ಭಾಷೆಯ ಮೂಲಕ ಜನರ ನಾಡಿ ಮಿಡಿತದೊಳಗೆ ನುಗ್ಗಿ ಎಲ್ಲ ವರ್ಗಗಳ ವಿವೇಕ ಜಾಗೃತಿಯ ಕೆಲಸವನ್ನು ಕನ್ನಡ ನಾಡಿನ ಪುಣ್ಯ ಭೂಮಿಯ ವಚನ ಸಾಹಿತ್ಯವು ಪರಿಣಾಮಕಾರಿಯಾಗಿ ಕೆಲಸ ಮಾಡಿತ್ತು. ಆ ಧಾರ್ಮಿಕ ಕ್ರಾಂತಿಗೆ ಶೋಷಿತ ವರ್ಗಕ್ಕೆ ಬೆನ್ನೆಲುಬಾಗುವ ಆಶಯವಷ್ಟೇ ಇರಲಿಲ್ಲ. ಎಲ್ಲೆಡೆಯೂ ಸಮಾನತೆಯ ತತ್ವವನ್ನು, ಜಾತಿ ರಹಿತ ವ್ಯವಸ್ಥೆಯನ್ನು ನಿರ್ಮಾಣ ಮಾಡುವ ನಿಷ್ಕಳಂಕ ಕಾಳಜಿಯೂ ಶರಣರಿಗಿತ್ತು.
ಬಸವಣ್ಣ, ಅಲ್ಲಮಪ್ರಭು, ಅಂಬಿಗರ ಚೌಡಯ್ಯ,
ಅಕ್ಕಮಹಾದೇವಿ, ಮಾದಾರ ಚೆನ್ನಯ್ಯ, ಹಡಪದ ಅಪ್ಪಣ್ಣ, ಒಬ್ಬರೇ ಇಬ್ಬರೇ! ಹತ್ತಾರು ಶಿವಶರಣರು ಸಮಾಜದ ಅಂಧ ಮೂಢನಂಬಿಕೆಯ ಹೀನಪದ್ದತಿಯನ್ನು ಕಿತ್ತೊಗೆಯಲು ಪಣತೊಟ್ಟು ಸಮಾಜದ ಅಂತ:ಸತ್ವವನ್ನು ಬಡಿದೆಬ್ಬಿಸಿದ್ದರು.   ವಚನ ಸಂಸ್ಕೃತಿಯು ಸಮಾಜಕ್ಕೆ ನೀಡಿದ ಕ್ರಿಯಾತ್ಮಕ ಬೆರಗು, ಒದಗಿಸಿದ ಆರೋಗ್ಯಕರ ಬೆಳವಣಿಗೆಗೆ ನಾಂದಿಯಾಯಿತು. ಆದ್ದರಿಂದಲೇ ಹನ್ನೆರಡನೇ ಶತಮಾನದ ವಚನ ಚಳವಳಿ ಸಮಾಜದ ಮೇಲೆ ಬೀರಿದ ಪ್ರಭಾವ ಅನನ್ಯವಾದರಿಂದ, ಸಮಾಜದ ನಾನಾ ಸ್ತರದವರು ಅನುಭವಮಂಟಪದ ಮೂಲಕ ತಮ್ಮೊಳಗಿನ ಬೆಳಕನ್ನು ಕಂಡುಕೊಂಡರು, ಜನಸಾಮಾನ್ಯರಿಗೂ ಬೆಳಕಾದರು. ಆ ಕಾಲದ ಶಿವಶರಣರು ಹಾಗೂ ವಚನಕಾರರಲ್ಲೊಬ್ಬರಾದ ಅಂಬಿಗರ ಚೌಡಯ್ಯನವರು ಪ್ರಮುಖವಾಗಿ ನಮಗೆಲ್ಲರಿಗೂ ಎದ್ದು ಕಾಣುತ್ತಾರೆ. ಪ್ರಯುಕ್ತ ಶಿವಶರಣ ಅಂಬಿಗರ ಚೌಡಯ್ಯನವರ ವಚನ ಸಾಹಿತ್ಯದ ಕುರಿತ ಹಾಗೂ ಅವರ ನಿಸ್ವಾರ್ಥ ಸೇವೆಯ ಬಗ್ಗೆ ಇಲ್ಲಿ ಬರೆಯುವ ಪ್ರಯತ್ನ ಮಾಡಿರುತ್ತೇವೆ ಆತ್ಮೀಯ ಬಂಧುಗಳೇ.  
 

ಶಿವಶರಣ ಅಂಬಿಗರ ಚೌಡಯ್ಯನವರು 12ನೇ ಶತಮಾನದ ಬಸವಣ್ಣನವರ ಅನುಯಾಯಿ ಶರಣರು. ಉಳಿದೆಲ್ಲ ವಚನಕಾರರಿಗಿಂತ ಭಿನ್ನ ಹಾಗೂ ವಿಶಿಷ್ಟ ವ್ಯಕ್ತಿತ್ವ ಇವರದು. ವೃತ್ತಿಯಿಂದ ಅಂಬಿಗ, ಪ್ರವೃತ್ತಿಯಲ್ಲಿ ಅನುಭಾವಿ. ನೇರ ನಿರ್ಭೀತ ನುಡಿಗಳಿಂದ ವಚನಗಳನ್ನು ಬರೆದಿರುವುದು ಗೋಚರಿಸುತ್ತದೆ. ಬಸವಣ್ಣನವರ ಅನುಭವ ಮಂಟಪದಲ್ಲಿ ಸಮಾನ ಭೂಮಿಕೆಯ ಸಮಾತಾ ತತ್ವದಲ್ಲಿ ಸೇರಿಕೊಂಡವರು ಹಾಗಾಗಿ
ಸಾವಿರಾರು ವರ್ಷಗಳಿಂದ ಧರ್ಮ-ದೇವರುಗಳ ಬಗೆಗೆ ಜನ ಸಮೂಹದಲ್ಲಿದ್ದ ಮೂಢನಂಬಿಕೆಗಳನ್ನೆಲ್ಲ ಗುರು ಬಸವಣ್ಣನವರೊಂದಿಗೆ ಅಂಬಿಗರ ಚೌಡಯ್ಯ ಹೊಡೆದೋಡಿಸುತ್ತಲೇ ವಿಚಾರ ಪರ ವಾದ, ವಾಸ್ತವವಾದ ಅಂಶಗಳನ್ನು ಜನಮನದಲ್ಲಿ ಮೂಡಿಸಿದರು. ಧರ್ಮ-ದೇವರು ಕೇವಲ ಶ್ರೀಮಂತರ ಸೋತ್ತಾಗಿದ್ದ ಅಂದಿನ ಸಂದರ್ಭದಲ್ಲಿ ಪೂಜೆ-ಮೋಕ್ಷ ಕೇವಲ ನೇಮವಂತರ, ವೈದಿಕರ ಗುತ್ತಿಗೆಯಾಗಿದ್ದ ಸಮಯದಲ್ಲಿ ಭಾಷ್ಯಕಾರರು ಹೇಳಿದ್ದೇ ಸರಿಯೆನ್ನುವ ವ್ಯವಸ್ಥೆಯಲ್ಲಿ ಚೌಡಯ್ಯನವರು ಈ ಮೂವರನ್ನು ಕ್ರೂರ ಕರ್ಮಿಗಳೆಂದು, ಸಂದೇಹಿಗಳೆಂದು ಕಟುವಾಗಿ ಟೀಕಿಸುವುದರ ಮೂಲಕ ಇವರು ಹೋದ ದಾರಿಯಲ್ಲಿ ಯಾರೂ ಹೋಗಬಾರದೆಂದು ತಮ್ಮ ವಚನಗಳ ಮೂಲಕ ಸ್ಪಷ್ಟಪಡಿಸಿದ್ದಾರೆ. ಇವರ ವಚನಗಳು ತುಂಬಾ ಖಾರವಾಗಿರುವುದು ಅವರ ಆತ್ಮ ಬಲವನ್ನು ಹಾಗೂ ಸತ್ಯವನ್ನು ಪ್ರತಿಪಾದಿಸುವಲ್ಲಿ ಹೊಂದಿದ್ದ ಧೈರ್ಯವನ್ನು ತೋರಿಸುತ್ತದೆ.
ಹಾಗೆ ಅಂಬಿಗರ ಚೌಡಯ್ಯ ವಚನಕಾರರೆಲ್ಲರಲ್ಲಿ ಇದ್ದ ಸುಶಿಕ್ಷವಾದ ಅಭಿವ್ಯಕ್ತಿ ಮಾರ್ಗವನ್ನು ತುಳಿಯಲಿಲ್ಲ. ತನ್ನ ಹತಾಶೆ, ನೋವು, ಬೇಗುದಿ ಎಲ್ಲವನ್ನೂ ಅವರು ತನ್ನದೇ ತೀಕ್ಷ್ಣಪದಗಳ ಆಡುನುಡಿಯ ಮೂಲಕ ನಿರ್ಭಿಡೆಯಿಂದ ಬೆತ್ತಲಾಗಿಸುತ್ತಾ ಹೋದರು. ಅಲ್ಲದೇ ಎಲ್ಲಾ ವಚನಕಾರರ ಹಾದಿಯಲ್ಲಿ ತಾನು ನಡೆಯದೇ ಇಷ್ಟ ದೈವದ ಬದಲಿಗೆ ತನ್ನದೇ ಹೆಸರನ್ನು ತನ್ನ ವಚನಗಳ ಅಂಕಿತವಾಗಿ ಬಳಸಿಕೊಂಡು ಸಮಾಜದ ಓರೆಕೋರೆಗಳನ್ನು ತಿದ್ದುವ ಯತ್ನ ಮಾಡಿದ ಧಿಮಂತ ಶರಣ. ಅಂಬಿಗರ ಚೌಡಯ್ಯ ನಿಜಾರ್ಥದಲ್ಲಿ ಬಂಡಾಯ ವಚನ ಸಂಸ್ಕೃತಿಯ ಹರಿಕಾರ. ವಚನ ಸಂಸ್ಕೃತಿಯ ಆ ತರ್ಕದ ಲೆಕ್ಕಾಚಾರಗಳಿಂದ ದೂರವುಳಿದು ಗಟ್ಟಿ ಮೌಲ್ಯಗಳ, ನಿರ್ಭಿಡೆಯ ನುಡಿಗಟ್ಟುಗಳ ಮೂಲಕ ಸಮಾಜದ ಓರೆಕೋರೆಗಳನ್ನು ಬೆತ್ತಲೆಯಾಗಿಸಿದ ಚೌಡಯ್ಯನ ಆಕ್ರೋಶದ ಅಭಿವ್ಯಕ್ತಿಯ ಹಾದಿ ಇಂದಿಗೂ ನಮ್ಮನ್ನು ಬೆಚ್ಚಿಸಿ ವಿಸ್ಮಯಗೊಳಿಸುತ್ತದೆ. ಚೌಡಯ್ಯ ಈಗ ಒಂದು ಜಾತಿಯ ಸ್ವತ್ತಾಗಿ ಸೊರಗಿದ್ದಾರೆ ಮತ್ತು ಅವರಷ್ಟೇ ಅಲ್ಲ, ಎಲ್ಲ ಶರಣರೂ ಒಂದೊಂದು ಜಾತಿಗೆ ಸೀಮಿತವಾಗಿಬಿಟ್ಟಿದ್ದಾರೆ. ಆಯಾ ಜಾತಿಯ ಇಂದಿನ ಜನಸಂಖ್ಯೆಯ ಪ್ರಾಬಲ್ಯದ ಮೇಲೆ ಆಯಾ ಶರಣರ ಸಂದೇಶಗಳು ಪ್ರಸ್ತುತತೆಯ ಪ್ರಚಾರದ ಕೀರ್ತಿಯನ್ನು ಗಳಿಸಿಕೊಳ್ಳುತ್ತಿರುವುದೂ ವಿಷಾದದ ಸಂಗತಿಯಾಗಿದೆ. ಇನ್ನು ಅಂಬಿಗರ ಚೌಡಯ್ಯ ಶರಣರ ವಿಷಯದಲ್ಲಿಯಂತೂ, ಶರಣನಾಗಲು ಅವರು ದೀಕ್ಷೆ ನೀಡಿದ ಲಿಂಗಾಯತ ಧರ್ಮ ಅವರನ್ನು ಒಂದೆಡೆಗೆ ಎಳೆಯುತ್ತಿದ್ದರೆ. ಅವರು ಜನಿಸಿದ ಮೂಲಜಾತಿಯ ಬಂಧುಗಳು ಅವರನ್ನು ತಮ್ಮ ಸಾಮಾಜಿಕ ಅಸ್ತಿತ್ವದ ಕುರುಹಾಗಿ ಸ್ವೀಕರಿಸಿ ತಮ್ಮೆಡೆಗೆ ಸೆಳೆದುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಇದು ಎಲ್ಲೋ ಒಂದು ಕಡೆ ನೋವಿನ ಸಂಗತಿಯಾಗಿದೆ.
ಅದಕ್ಕಾಗಿಯೇ ಎಲ್ಲರ ಹತ್ತಿರ ಕೇಳಿಕೊಳ್ಳುವುದು ಇಷ್ಟೇ, ಚೌಡಯ್ಯ ಶಿವಶರಣರು ಸಾಗಿದ ದಾರಿಯಲ್ಲಿ ನಾವೆಲ್ಲರೂ ನಮ್ಮ - ನಮ್ಮ,  ಭೇದ ಭಾವಗಳನ್ನು ಮರೆತು ಒಗ್ಗಟ್ಟಾಗಿ, ಜೊತೆಯಾಗಿ ಸಾಗಬೇಕು. ಅವರು ತೋರಿದ ವೈಚಾರಿಕ ದಿಟ್ಟತನವನ್ನು
ನಿರ್ಭಿಡೆಯಿಂದ ತೋರಬೇಕು. ಮೂಡನಂಬಿಕೆ ಹಾಗೂ ಕಂದಾಚಾರಗಳನ್ನು ಹೋಗಲಾಡಿಸಬೇಕು. ಅಂದಾಗಲೇ ಮಾತ್ರ ನಾವೆಲ್ಲರೂ ಬಸವಾದಿ ಶರಣರ ಹಾಗೂ ಅಂಬಿಗರ ಚೌಡಯ್ಯ ಶಿವಶರಣರ ನಿಜವಾದ ವಾರಸುದಾರರಾಗಲು ಸಾಧ್ಯ.

ವಿಶ್ವಮಾನವ ಸಂದೇಶ : ಶರಣ ಚೌಡಯ್ಯನವರ ವಚನಗಳಲ್ಲಿದ್ದ ಧರ್ಮ ನಿರ್ಭಿಡತೆಯ, ಜೀವನ ಪ್ರೀತಿಯ ಆಶಯ ಅವನತಿಯೆಡೆಗೆ ಮುಖ ಮಾಡಿ ನಿಲ್ಲುತ್ತಿದೆ ಎಂದರೆ ತಪ್ಪಾಗಲಾರದು. ಜಾತಿಯೆಂಬ ವಿಷಬೀಜದ ಹೀನ ಆಚರಣೆ ಸಂಸ್ಕೃತಿಯೆಂಬ ಜೀವನತತ್ವವನ್ನೇ ಬುಡಮೇಲು ಮಾಡಲು ನಿಂತಿರುವುದು ಸ್ಪಷ್ಟವಾಗಿ ಕಾಣುತ್ತಿದೆ ಬಂಧುಗಳೆ. ಇನ್ನು, ಆಡಳಿತ ಚುಕ್ಕಾಣಿ ಹಿಡಿದ ಸರ್ಕಾರಗಳು ಚೌಡಯ್ಯನವರ ತಾತ್ವಿಕ ಸಂದೇಶಗಳನ್ನು, ಜಾತಿ-ಧರ್ಮಗಳ ಸಂಕೋಲೆಗಳಿಂದ ಮುಕ್ತಗೊಳಿಸಿ ಇಡೀ ಸಾಮಾಜಿಕ ವ್ಯವಸ್ಥೆಯೊಳಗೆ ಹರಿಸುವ ಪ್ರಾಮಾಣಿಕ ಪ್ರಯತ್ನಗಳನ್ನು ಮಾಡುತ್ತಿವೆಯೇ? ಎಂದರೆ ಅಲ್ಲಿಯೂ ಇಲ್ಲಾ ಎಂಬ ನೋವಿನ ಸಂಗತಿ ಗೊತ್ತಾಗುತ್ತದೆ. ಈ ಜಾಡಿನಲ್ಲಿ ಸಿಗುವ ಕೆಲವು ಸತ್ಯಗಳು ಇಂದಿನ ಮಟ್ಟಿಗಂತೂ ನಿರಾಶೆಯನ್ನೇ ಮೂಡಿಸುತ್ತವೆ.ಅಂಬಿಗರ ಚೌಡಯ್ಯನಂಥಹ ಮಾಹಾ ನಿಜಶರಣರ ಆ ಅಪೂರ್ವ ಸಂದೇಶಗಳು ಶತಮಾನಗಳು ಕಳೆಯುತ್ತಾ ಹೋದಂತೆ ಸಾಮಾಜಿಕ ವ್ಯವಸ್ಥೆಯಲ್ಲಿ ಗಟ್ಟಿಯಾಗುತ್ತಾ ಸಾಗಬೇಕಿತ್ತು. ಶೋಷಣೆಗೆ ಒಳಗಾದ ಸಮಾಜ ವರ್ಗದ ಅಂತಃಶಕ್ತಿ ಸ್ವಾವಲಂಬನೆಯಿಂದ ಸುಭದ್ರವಾಗಬೇಕಿತ್ತು. ವ್ಯವಸ್ಥೆಯಲ್ಲಿ ರೂಪಿತವಾದ ಜನಪರ ಕಲ್ಯಾಣ ಕಾರ್ಯಕ್ರಮಗಳು ಆ ವರ್ಗಗಳ ಅಂತರಂಗದಲ್ಲಿದ್ದ ಬೇಗುದಿಯನ್ನು ಭಸ್ಮ ಮಾಡಬೇಕಿತ್ತು. ಮತ್ತು ಇಡೀ ಸಮಾಜ, ಜಾತಿ-ವರ್ಗಗಳನ್ನು ಮೀರಿ ವಿಶ್ವಮಾನವ ಪ್ರಜ್ಞೆಯ ಉದಾರತೆಯನ್ನು ಗಳಿಸಿಕೊಳ್ಳುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಟ್ಟಿರಬೇಕಿತ್ತು. ಆದರೆ, ಇಂದಿನ ಪರಿಸ್ಥಿತಿ ನೋಡಿದಾಗ ಇಡೀ ವಚನ ಸಂಸ್ಕೃತಿಯ ಪರಿಣಾಮಗಳ ಬಗ್ಗೆ ವಿಷಾದವೆನಿಸುವ ಸಿನಿಕತೆ ಮೂಡುತ್ತದೆ.ಅಂಬಿಗರ ಚೌಡಯ್ಯ ಶರಣರ ಬಂಡಾಯ ಮನೋಧರ್ಮದ ಕ್ರಾಂತಿ ಹಾದಿಯ ವೈಭವವನ್ನಲ್ಲ. ದುಷ್ಟ ಸಮಾಜದೆಡೆಗಿನ ಅವರ ತಾರ್ಕಿಕ ವಿಚಾರಣೆಯ ದಿಟ್ಟ ಧಾಟಿಯೂ ಅಲ್ಲ. ಮನೋದಾಸ್ಯದ ವಿರುದ್ಧ, ಜಾತಿ ವ್ಯವಸ್ಥೆಯ ವಿರುದ್ಧ ತನ್ನದೇ ಕಟು ನಿಃಸ್ವಾರ್ಥ ರೀತಿಯಲ್ಲಿ ಹೋರಾಡಿ ವಿಶ್ವಮಾನವ ಸಂದೇಶವನ್ನು ಬಿತ್ತಿ ಹೋದ ಛಡಿ ಏಟಿನ ಚೌಡಯ್ಯನವರು ಇಂದಿನ ವ್ಯವಸ್ಥೆಗೆ ಅಪ್ರಸ್ತುತನಾಗುತ್ತಿದ್ದಾರೇ? ಇಂದಿನ ಅಂಬಿಗರ ಚೌಡಯ್ಯನವರ, ಕಾಲಘಟ್ಟವೊಂದರ ಸಮಾಜವನ್ನು ಹೊಸಸ್ತರಕ್ಕೆ ಕರೆದೊಯ್ದಿದ್ದ ವಚನ ಸಂಸ್ಕೃತಿಯ ವೈಫಲ್ಯದ ಒಂದು ಪಾರ್ಶ್ವವನ್ನು ಬಿಂಬಿಸುತ್ತಿದ್ದಾರೇ? ಜಗತ್ತಿನ ಮುನ್ನಡೆಯೂ ಕಾಲದ ದೃಷ್ಟಿಯಿಂದ ಹಿನ್ನೆಡೆಯನ್ನು ಕಾಣುತ್ತದೆಯೇ? ಇಂತಹ ಹಲವಾರು ಪ್ರಶ್ನೆಗಳನ್ನು ಕೇಳಿಕೊಳ್ಳುವ ಕಾಲ ಈಗ ಬಂದಿದೆ ಎನ್ನಿಸುತ್ತದೆ ಅಲ್ಲವೆ? ಹೀಗಿರುವಾಗ ನಾವು ಕೇವಲ ವಿಶ್ವಮಾನವ ಶಿವಶರಣ ಚೌಡಯ್ಯನವರ ಬಗೆ  ಮಾತನಾಡದೇ ಅವರು ಕೊಟ್ಟಿರುವ ವಚನ ಸಾಹಿತ್ಯದ ಬಗ್ಗೆ ಹೆಚ್ಚು ಮಾತನಾಡಬೇಕು. ಇದರಂತೆ ಸಕಲ್ ಜೀವಾತ್ಮರಿಗೆ ಲೇಸನ್ನು ಬಯಸಿದ ಶರಣರ ವಾಣಿಯಂತೆ ಸರ್ವರೂ ಸಾಗಬೇಕು. 

ಗೌರವ ಮಾತು: ಬಸವಾದಿ ಪ್ರಮಥರ ವಚನಗಳಲ್ಲಿರುವಂತೆ ಇವರಲ್ಲಿಯೂ ಬಸವಾನುಭವಪರವಾದ ವಚನಗಳಿದ್ದರೂ ಅವುಗಳಲ್ಲಿ ಕಂಡುಬರುವ ಸಮಕಾಲೀನ ಸಮಾಜ ವಿಡಂಬನೆಯ ವ್ಯಗ್ರದೃಷ್ಟಿ ಬೇರೆಯವರಲ್ಲಿ ವಿರಳವೆಂದೇ ಹೇಳಬಹುದು.ತೀಕ್ಷ್ಣ ವಚನಗಳಿಂದ ಶರಣರ ವಚನಕ್ರಾಂತಿಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದವರು ಅಂಬಿಗರ ಚೌಡಯ್ಯ ಶರಣರು. ವೈಚಾರಿಕತೆಯ  ಕಾಯಕ ತತ್ವದ ಹರಿಕಾರರಾಗಿ ಅವರ ಬದುಕು ಸಾಗಿತ್ತು, ಸತ್ಯದ ಸನ್ಮಾರ್ಗದಲ್ಲಿ ಸಾಗಿ ಲೋಕಕ್ಕೆ ಮಾದರಿಯಾಗಿದ್ದಾರೆ. ಸನ್ನಡತೆ,ಪ್ರಮಾಣಿಕತೆ,ಸ್ನೇಹ ಮಯ ಜೀವನ, ಸಮತಾವಾದದ ಮೌಲ್ಯಗಳನ್ನು ಜಾಗತಿಕ ಪ್ರಪಂಚಕ್ಕೆ ಸಾರಿ,ಬಸವಾದಿ ಶರಣರ ಆಶಯದಂತೆ ಬಾಳಿದವರು. ಬಸವ ಬಾನಂಗಳದಲ್ಲಿ ಶ್ರೇಷ್ಠ ಶಿವಶರಣರೆಂಬ ಅಮೂಲ್ಯ ನಕ್ಷತ್ರಗಳಲ್ಲಿ  ಒಂದಾಗಿ ಮಿನುಗಿದವರು ನಮ್ಮ ಮಾಹಾನ್ ನಿಜ ಶಿವಶರಣ ಅಂಬಿಗರ ಚೌಡಯ್ಯ ಶಿವಶರಣರು.

ಲೇಖಕರು:ಸಂಗಮೇಶ ಎನ್ ಜವಾದಿ, 


Monday, 20 January 2025

ಮಹಾಕುಂಭ ಮೇಳದಲ್ಲಿ ದಿಢೀರ್ ಪ್ರತ್ಯಕ್ಷ! ಮುಗಿಯುತ್ತಿದ್ದಂತೆ ಅದೃಶ್ಯರಾಗುವ ನಾಗಸಾಧುಗಳು ಯಾರು?

ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಮಹಾಕುಂಭ ಮೇಳ ಆರಂಭವಾಗಿದೆ. ಮಹಾಕುಂಭವು ವಿಶ್ವದ ಅತ್ಯಂತ ದೊಡ್ಡ ಧಾರ್ಮಿಕ ಹಬ್ಬ. ಈ ಮಹಾನ್ ಉತ್ಸವದಲ್ಲಿ ಭಾಗವಹಿಸಲು ದೇಶ ಮತ್ತು ವಿದೇಶಗಳಿಂದ ಕೋಟ್ಯಂತರ ಜನರು ಬರುತ್ತಾರೆ. ಲಕ್ಷಾಂತರ ನಾಗಾ ಸಾಧುಗಳು ಕುಂಭಮೇಳದಲ್ಲಿ ಭಾಗಿಯಾಗುತ್ತಾರೆ. ಆದರೆ ಲಕ್ಷಾಂತರ ನಾಗಾ ಸಾಧುಗಳು ಕುಂಭಮೇಳಕ್ಕೆ ಎಲ್ಲಿಂದ ಹೇಗೆ ಬರುತ್ತಾರೆ ಮತ್ತು ಅವರು ಮುಗಿದ ತಕ್ಷಣ ಅವರು ಹೇಗೆ ಅಗೋಚರರಾಗುತ್ತಾರೆ? ಎಂಬುದೇ ಒಂದು ರಹಸ್ಯ.

ಈ ಬಾರಿ ಲಕ್ಷಾಂತರ ನಾಗಾ ಸಾಧುಗಳು ಮಹಾಕುಂಭದಲ್ಲಿ ಸೇರಿದ್ದಾರೆ. ಅವರು ಹೇಗೆ ಬರುತ್ತಾರೆ ಮತ್ತು ಎಲ್ಲಿ ಹೋಗುತ್ತಾರೆ ಎಂಬುದರ ಬಗ್ಗೆ ಸಾಮಾನ್ಯರಿಗೆ ಸುಳಿವು ಸಹ ಇಲ್ಲ. ಅವರ ಆಗಮನ ಮತ್ತು ನಿರ್ಗಮನದ ಬಗ್ಗೆ ತಿಳಿದಿರುವ ಮನುಷ್ಯನೇ ಇರಲಾರನು. ಕುಂಭ ಮೇಳದ ಸಮಯದಲ್ಲಿ ಇದ್ದಕ್ಕಿಂತೆ ಲಕ್ಷ ಲಕ್ಷ ಸಂಖ್ಯೆಯ ನಾಗಾ ಸಾಧುಗಳು ಪ್ರವೇಶ ಹೇಗೆ ಸಾಧ್ಯ? ಪ್ರಯಾಗ್ ರಾಜ್‌ನಲ್ಲಿ ನಡೆಯಲಿರುವ ಮಹಾಕುಂಭಕ್ಕೆ ನಾಗಾ ಸಾಧುಗಳು ಈಗಾಗಲೇ ಬಂದಾಗಿದೆ. ಅವರು ಎಲ್ಲಿಂದ ಬಂದಿದ್ದಾರೆ ಎಂಬುದು ಇನ್ನೂ ರಹಸ್ಯ. ಅದನ್ನು ಪತ್ತೆಹಚ್ಚುವುದೂ ಅಸಾಧ್ಯ.

ಒಂದು ಅಂದಾಜಿನ ಪ್ರಕಾರ, ನಾಗಾ ಸಾಧುಗಳು ಕುಂಭಮೇಳದಲ್ಲಿ ಉತ್ತರಾಖಂಡ, ಹಿಮಾಚಲ ಪ್ರದೇಶ ಮತ್ತು ಗುಜರಾತ್ ಬೆಟ್ಟಗಳಿಂದ ಬರುತ್ತಾರೆ ಎನ್ನುವ ಒಂದು ನಂಬಿಕೆ ಇದೆ. ಕೆಲವು ನಾಗಾಗಳು ಬಟ್ಟೆ ಧರಿಸಿ ಕುಂಭ ಮೇಳವನ್ನು ಪ್ರವೇಶಿಸಿದರೆ, ಬಹುತೇಕರು ನಗ್ನರಾಗಿಯೇ ಇರುತ್ತಾರೆ. ಅವರು ತಮ್ಮ ಬಗ್ಗೆ ಯಾರಿಗೂ ಹೇಳುವುದಿಲ್ಲ. ಅವರ ಗುರುತು ಯಾವಾಗಲೂ ನಿಗೂಢವಾಗಿಯೇ ಉಳಿಯುತ್ತದೆ.  ಕುಂಭ ಮುಗಿದ ನಂತರ ನಾಗಾ ಸಾಧುಗಳು ಕಣ್ಮರೆಯಾಗುತ್ತಾರೆ. ತಜ್ಞರ ಪ್ರಕಾರ ಕೇವಲ ಊಹೆಯ ಮೂಲಕ ಉತ್ತರಿಸಿದ್ದಾರೆ. ಕುಂಭ ಮುಗಿದ ತಕ್ಷಣ  ನಾಗಾ ಸಾಧುಗಳು ರಹಸ್ಯವಾದ  ಗುಹೆಗಳಿಗೆ ಹೋಗುತ್ತಾರೆ ಎಂದು ಹೇಳುತ್ತಾರೆ. 

ಇವರು ನೆಲೆಸುವ ಗುಹೆಗಳೂ ರಹಸ್ಯವಾಗಿವೆ. ಬಹುಷ್ಯ ಅಲ್ಲಿ ಬೇರೆ ಮನುಷ್ಯರಾರೂ ಸಂಚರಿಸದAಥ ನಿರ್ಜನ ಹಿಮಾವೃತ ಪ್ರದೇಶಗಳಲ್ಲಿ ಇವರ ಗುಹೆಗಳಿವೆಂತೆ.  ಗುಹೆಗಳಲ್ಲಿ ಕೆಲವು ವರ್ಷಗಳ ಕಾಲ ಉಳಿದು ತಪಸ್ಸು ಮಾಡುತ್ತಾರೆ. ನಂತರ ಗುಹೆಯನ್ನು ಬದಲಾಯಿಸುತ್ತಾರೆ. ಅವರು ಎಲ್ಲಿ ವಾಸಿಸುತ್ತಿದ್ದಾರೆ ಎಂಬುದರ ನಿಖರವಾದ ವಿಳಾಸವನ್ನು ಹೇಳುವುದು ಕಷ್ಟ. ಕಾಲಕಾಲಕ್ಕೆ, ನಾಗಾ ಸಾಧುಗಳು ಒಂದರಿAದ ಇನ್ನೊಂದಕ್ಕೆ, ಎರಡರಿಂದ ಮೂರಕ್ಕೆ ಮತ್ತು ಮೂರರಿಂದ ನಾಲ್ಕನೇ ಗುಹೆಗಳಿಗೆ ಬದಲಾಗುತ್ತಲೇ ಇರುತ್ತಾರೆ. ಜನರ ಸಂಪರ್ಕವಿಲ್ಲದೇ ತಪಸ್ಸು ಮತ್ತು ಸಿದ್ಧಿ ಮಾತ್ರ ಇವರ ಗುರಿ. ಅಪ್ಪಟ ಹಿಂದೂ ಧರ್ಮದ ಆರಾಧಕರು ಮತ್ತು ರಕ್ಷಕರು ಎಂದು ಹೇಳುತ್ತಾರೆ.

ಹಿಮಾವ್ರತ ಪ್ರದೇಶದ ಗುಹೆಗಳಲ್ಲಿ ವಾಸಿಸುವ ಈ ನಾಗಾ ಸಾಧುಗಳ ಆಹಾರವೇನು? ಈ ಪ್ರಶ್ನೆ ಅನೇಕ ಜನರ ಮನಸ್ಸಿನಲ್ಲಿ ಮೂಡಬಹುದಾದ ಸಹಜವಾದ ಪ್ರಶ್ನೆ. ನಾಗಾ ಸಾಧುಗಳು ಭೋಲೆ ಬಾಬಾ ಅವರ ಭಕ್ತಿಯಲ್ಲಿ ಲೀನರಾಗಿರುತ್ತಾರೆ.  ನಾಗಾ ಸಾಧುಗಳು ವಿವಿಧ ವಸ್ತುಗಳನ್ನು ತಿನ್ನುತ್ತಾರೆ. ಅಂದರೆ ಅವರು ವಾಸಿಸುವ ಗುಹೆಗಳ ಅಕ್ಕಪಕ್ಕದಲ್ಲಿ ದೊರೆಯುವ ಗಿಡಮೂಲಿಕೆಗಳು, ಕಂದುಮೂಲ ಹಣ್ಣುಗಳು ಇತ್ಯಾದಿಗಳೇ ಇವರ ಆಹಾರ. ನಾಗಾ ಸಾಧುಗಳು ಅನೇಕ ಕಾಡುಗಳಲ್ಲಿ ಅಲೆದಾಡುತ್ತಾ ತಮ್ಮ ಜೀವನವನ್ನು ಕಳೆಯುತ್ತಾರೆ. ಮತ್ತು ಕುಂಭ ಅಥವಾ ಮಹಾಕುಂಭ ಸಂದರ್ಬಗಳಲ್ಲಿ ಮಾತ್ರ ಭಾಗವಹಿಸಲು ಇಲ್ಲಿ ಬಂದು ಸೇರುತ್ತಾರೆ. 

ನಾಗಾ ಸಾಧುಗಳು ತಪಸ್ವಿ ಯೋಧರು! : ಮಹಾನಿರ್ವಾಣಿ ಅಖಾಡದ ನಾಗಾ ಸಾಧುಗಳು ಸಮರವಾದವು ಮನುಷ್ಯನಲ್ಲಿ ಸನ್ಯಾಸಿಗಳ ಸಂಪ್ರದಾಯಗಳೊAದಿಗೆ ಸಂಬAಧ ಹೊಂದಿದೆ ಮತ್ತು ದೂರದ ಪೂರ್ವದ ಸನ್ಯಾಸಿಗಳು ಮತ್ತು ವಿಶೇಷವಾಗಿ ಚೀನಾ, ಜಪಾನ್ ಮತ್ತು ಕೊರಿಯಾ ಅವರು ಅಭಿವೃದ್ಧಿಪಡಿಸಿದ ಸಮರ ಕಲೆಗಳಿಗೆ ಇವರು ಹೆಸರುವಾಸಿಯಾಗಿದ್ದಾರೆ. ಭಾರತದಲ್ಲಿಯೂ ಸಹ ಉಗ್ರಗಾಮಿ ತಪಸ್ವಿಗಳು ಸುದೀರ್ಘ ಇತಿಹಾಸ ಹೊಂದಿದ್ದಾರೆ ಮತ್ತು ಭಾರತೀಯ ಸನ್ಯಾಸತ್ವವನ್ನು ದೊಡ್ಡ ರೀತಿಯಲ್ಲಿ ಪ್ರಭಾವಿಸಿದ ನಾಗಾ ಸಂಸ್ಥೆಯಾಗಿ ಸಂಘಟಿತರಾದವರು. ನಾಗ ಎಂಬ ಪದವು ಬೆತ್ತಲೆತನವನ್ನು ಸೂಚಿಸುತ್ತದೆ. ಇದು ತ್ಯಜಿಸುವಿಕೆಯನ್ನೂ ಸೂಚಿಸುತ್ತದೆ. ಪ್ರತಿ ಶೈವ ಸನ್ಯಾಸದ ದೀಕ್ಷೆಯಲ್ಲಿನ ಅತ್ಯಗತ್ಯ ವಿಧಿಯು ಒಬ್ಬರ ಬಟ್ಟೆಯನ್ನು ತೆಗೆದುಹಾಕಿ ಮತ್ತು ಏಳು ಹೆಜ್ಜೆಗಳನ್ನು ಸಂಪೂರ್ಣವಾಗಿ ಬೆತ್ತಲೆಯಾಗಿ ನಡೆಯುವುದನ್ನು ಒಳಗೊಂಡಿರುತ್ತದೆ. ಆದ್ದರಿಂದ ಒಬ್ಬನು ತನ್ನ ದೇಹವನ್ನು ಮುಚ್ಚಿಕೊಳ್ಳಲು ಕಾರಣವಾದ ಸಾಮಾಜಿಕ ಸ್ಥಿತಿ ಮತ್ತು ಬಂಧನವನ್ನು ಮುರಿಯುತ್ತಾನೆ.  ಭಾರತದ ಬ್ರಿಟಿಷ್ ಆಡಳಿತಗಾರರು ಸಾಮಾನ್ಯವಾಗಿ ಈ ಪದ್ಧತಿಯನ್ನು ನಿಗ್ರಹಿಸಿದರು. ಆದರೆ ಅವರು ನಾಗಾ ಸಾಧುಗಳ ಉಗ್ರತೆಯನ್ನು ತಡೆಯಲು ಸಾಧ್ಯವಾಗಲೇ ಇಲ್ಲ ಮತ್ತು ಕುಂಭಮೇಳದ ಸಮಯದಲ್ಲಿ ಸಂಪೂರ್ಣವಾಗಿ ಬೆತ್ತಲೆಯಾಗಿ ಬೀದಿಗಳಲ್ಲಿ ಮೆರವಣಿಗೆಯಲ್ಲಿ ತೆರಳಲು ಅವಕಾಶ ನೀಡಿದರು.

ನಾಗಾ ಸಾಧುಗಳ ಜೀವನವು ಧೈರ್ಯ, ಸ್ವಾತಂತ್ರ‍್ಯ ಮತ್ತು ಅಸಾಧಾರಣ ಶಿಸ್ತಿನದ್ದಾಗಿದೆ. ನಾಗಾ ಸಾಧುಗಳು ತೀವ್ರತರವಾದ ತಾಪಮಾನವನ್ನು ಸಹಿಸಿಕೊಳ್ಳಬಲ್ಲ ಶಕ್ತಿಶಾಲಿ ಯೋಗ ದೇಹಗಳನ್ನು ಹೊಂದಿದ್ದಾರೆ. ಶೀತದ ವಿರುದ್ಧ ಅವರ ಏಕೈಕ ರಕ್ಷಣೆ ಮತ್ತು ಅವರ ಆಧ್ಯಾತ್ಮಿಕ ಶಕ್ತಿಗಳು ಮತ್ತು ವಿಭೂತಿ (ಪವಿತ್ರ ಬೂದಿ) ಅವರು ದೇಹದಾದ್ಯಂತ ಮುಕ್ತವಾಗಿ ಅನ್ವಯಿಸುತ್ತಾರೆ. ಹೆಚ್ಚಿನ ನಾಗಾ ಸಾಧುಗಳು ರುದ್ರಾಕ್ಷ ಮಾಲೆ (ಪವಿತ್ರ ಶಕ್ತಿಯ ಮಣಿಗಳು) ಮತ್ತು ಕಬ್ಬಿಣದ ಬಳೆ (ಕಡ) ಧರಿಸುತ್ತಾರೆ ಮತ್ತು ಡಮರುಗ (ಪರಮಶಿವನ ಡ್ರಮ್) ಮತ್ತು ಕಾಮಂದಳು (ನೀರಿನ ಮಡಕೆ) ಅನ್ನು ಜೊತೆಗೆ ಒಯ್ಯುತ್ತಾರೆ. ಪ್ರತಿ ದಿನ ಪೂಜಿಸಲ್ಪಡುವ ಅಖಾಡಾ ಸಂಸ್ಕೃತಿಯ ಭಾಗವಾಗಿರುವ ರಕ್ಷಣಾ ಆಯುಧಗಳು ಮಾತ್ರ ಅವರ ಇತರ ಅಲಂಕಾರಗಳಾಗಿವೆ.

ನಾಗಾ ಸಾಧುಗಳನ್ನು ಅವರ ಪವಿತ್ರ ತ್ರಿಶೂಲ (ಶಿವನ ತ್ರಿಶೂಲ), ಕೋಲು, ಕತ್ತಿ, ಶಂಖ ಮತ್ತು ಇತರ ಸಂಗೀತ ವಾದ್ಯಗಳಿಂದ ಗುರುತಿಸಬಹುದು. ಅವರು ಅವಿವಾಹಿತರು ಅಥವಾ ವಿಧವೆಯರು ಅಥವಾ ಸಂಕ್ಷಿಪ್ತವಾಗಿ ಕುಟುಂಬದ ಜವಾಬ್ದಾರಿಗಳಿಂದ ಮುಕ್ತಿ ಹೊಂದಿದವರನ್ನು ಮಾತ್ರ ತಮ್ಮ ಮಡಿಲಿಗೆ ಒಪ್ಪಿಕೊಳ್ಳುತ್ತಾರೆ. ಈ ಕ್ರಮಕ್ಕೆ ದೀಕ್ಷೆಯ ಸಮಯದಲ್ಲಿ, ಸಾಮಾನ್ಯ ತಪಸ್ವಿಯನ್ನು ವಸ್ತ್ರಧಾರಿ (ಬಟ್ಟೆ ಧರಿಸಿದವರು) ಎಂದು ಕರೆಯಲಾಗುತ್ತದೆ. ಅವನು ತನ್ನ ಎಲ್ಲಾ ಹಿರಿಯ ತಪಸ್ವಿಗಳ ಸೇವೆ ಮಾಡುತ್ತಾನೆ. ಮೂರು ವರ್ಷಗಳ ಪರೀಕ್ಷೆಯ ನಂತರ, ಅವರು ಉನ್ನತ ದರ್ಜೆಗೆ ಬಡ್ತಿ ಹೊಂದುತ್ತಾರೆ. ವಸ್ತ್ರಧಾರಿ ನಾಗಾ ತಪಸ್ವಿ ಪೂರ್ಣ ಪ್ರಮಾಣದ ನಾಗಶಿಪ್ ಪಡೆಯಲು ಯಾವುದೇ ನಿರ್ದಿಷ್ಟ ಸಮಯದ ಮಿತಿಯಿಲ್ಲ. ಒಬ್ಬ ಅಭ್ಯರ್ಥಿಯು ನಾಗಾ ಅಖಾಡಾಕ್ಕೆ  ಪ್ರವೇಶಿಸಿದ ಎರಡು ವರ್ಷಗಳಲ್ಲಿ ನಾಗಾಶಿಪ್ ಸ್ಥಿತಿಗೆ ಬಡ್ತಿ ಪಡೆಯಬಹುದು ಅಥವಾ ಈ ಸ್ಥಿತಿಯನ್ನು ತಲುಪಲು ಅವನು ಹನ್ನೆರಡು ವರ್ಷಗಳನ್ನೂ ತೆಗೆದುಕೊಳ್ಳಬಹುದು. ಕುಂಭ ಸಭೆಯ ಸಮಯದಲ್ಲಿ ನಾಗಾಗಳ ದೀಕ್ಷಾ ಸಮಾರಂಭಗಳು ನಿರಂತರವಾಗಿ ನಡೆಯುತ್ತವೆ. ವಿವಿಧ ಅಖಾರಗಳ ಮಂಡಲೇಶ್ವರರು (ಮುಖ್ಯ ಸನ್ಯಾಸಿಗಳು) ತಮ್ಮ ಪರೀಕ್ಷಾ ಅವಧಿಯನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳನ್ನು ಮಂಗಳಕರ ಸಮಯದಲ್ಲಿ ಆಯ್ಕೆ ಪ್ರಾರಂಭಿಸುತ್ತಾರೆ. ನಾಗಾಗಳ ವ್ಯವಹಾರಗಳನ್ನು ಅಷ್ಟ ಪರಿಷದ್ (ಎಂಟು ಸದಸ್ಯರ ಕೌನ್ಸಿಲ್) ಎಂಬ ಸಂಸ್ಥೆಯು ನಡೆಸುತ್ತದೆ. ಈ ಪರಿಷತ್ತಿನ ಅಧ್ಯಕ್ಷರನ್ನು ಪ್ರತಿ ತಿಂಗಳು ಆಯ್ಕೆ ಮಾಡಲಾಗುತ್ತದೆ. ಅಷ್ಟ ಪರಿಷತ್ ಸಮಿತಿಯ ಚುನಾವಣೆ ವರ್ಷಕ್ಕೊಮ್ಮೆ ನಡೆಯುತ್ತದೆ.

ರಾಷ್ಟ್ರ ರಕ್ಷಕರು:  ನಾಗಾ ಸಾಧುಗಳು ಮತ್ತೊಂದು ಕಾರಣಕ್ಕಾಗಿ ಪ್ರಸಿದ್ಧರಾಗಿದ್ದುದು ಆಯುಧಗಳನ್ನು ಪ್ರಯೋಗಿಸುವ ಅವರ ಕೌಶಲ್ಯ. ಖಂಡಿತವಾಗಿಯೂ ಸಾಧುವಿನ ಅತ್ಯಂತ ಮೂಲಭೂತ ಆಯುಧವನ್ನು ಅವನ ಸಿಬ್ಬಂದಿ ಎಂದು ಪರಿಗಣಿಸಬಹುದು. ಆದರೆ ೨೦೦ ನೇ ಶತಮಾನದಿಂದ  ೫೦೦ ನೇ ಶತಮಾನದ ವರೆಗಿನ ಅವಧಿಯಲ್ಲಿ ಋಷಿ ಪತಾಂಜಲಿಯು ನಿಜವಾದ ಆಯುಧಗಳನ್ನು, ನಿರ್ದಿಷ್ಟವಾಗಿ ಕಬ್ಬಿಣದ ಲ್ಯಾನ್ಸ್ ಅನ್ನು ಮೊದಲು ಪ್ರಸ್ತಾಪಿಸಿದರು. ತಪಸ್ವಿ . ೭ ನೇ ಶತಮಾನದ ಸಂಸ್ಕೃತ ಗದ್ಯದ ಮಾಸ್ಟರ್ ಬಾಣಭಟ್ಟನು ತನ್ನ ಚಕ್ರವರ್ತಿ ಹರ್ಷವರ್ಧನನ ಜೀವನ ಚರಿತ್ರೆಯಲ್ಲಿ ಯುದ್ಧದಂತಹ ಶೈವ ತಪಸ್ವಿಗಳನ್ನು ಸರಿಯಾಗಿ ವಿವರಿಸುತ್ತಾನೆ ಮತ್ತು ಅವರು ತಮ್ಮ ಸಮರ ಸಾಮರ್ಥ್ಯವನ್ನು ಆಧ್ಯಾತ್ಮಿಕ ಉದ್ದೇಶಗಳಿಗಾಗಿ ಹೇಗೆ ಬಳಸಿಕೊಂಡರು. ಶಸ್ತ್ರಾಸ್ತ್ರ ಮತ್ತು ಸಮರ ಕಲೆಗಳೊಂದಿಗೆ ಸಂಬAಧ ಹೊಂದಿದ ಮೊದಲ ಪಂಥವೆAದರೆ ಶೈವ ಕಪಾಲಿಕರು. ಈ ಪಂಗಡಗಳ ಸಶಸ್ತ್ರ ತಪಸ್ವಿಗಳ ರೆಜಿಮೆಂಟ್‌ಗಳು ರಾಷ್ಟ್ರವನ್ನು ರಕ್ಷಿಸುವಲ್ಲಿ ರಾಜರನ್ನು ರಕ್ಷಿಸಿದವು ಎಂಬುದಕ್ಕೆ ೧೩ ನೇ ಶತಮಾನದ ಹಿಂದಿನ ಪುರಾವೆಗಳಿವೆ ಮತ್ತು ಮಾರ್ವಾರ್ (ವಾಯುವ್ಯ ಭಾರತ) ದೇವಾಲಯದ ಪ್ರಧಾನ ಅರ್ಚಕನು ಊಳಿಗಮಾನ್ಯ ಅಧಿಪತಿಗಳು ಹೊಂದಿದ್ದಕ್ಕಿAತ ದೊಡ್ಡದಾದ ಬೆಟಾಲಿಯನ್ ಅನ್ನು ನಿರ್ವಹಿಸುತ್ತಿದ್ದನು.  ಭಾರತದ ಹಲವಾರು ಮೊಘಲ್ ಆಕ್ರಮಣಗಳ ವಿರುದ್ಧ ನಾಗಾಗಳು ಹಿಂದೂ ನಂಬಿಕೆಯ ಸೈನಿಕರ ಪಾತ್ರವನ್ನು ವಹಿಸಿಕೊಂಡರು. ಇದೇ ಉದ್ದೇಶದಿಂದ ಅಲ್ಲಿ ಸಾಧುಗಳನ್ನು ಶಸ್ತ್ರಸಜ್ಜಿತ ಮುಸ್ಲಿಂ ಫಕೀರರು ಹೆಚ್ಚಾಗಿ ಕಡಿಯುತ್ತಿದ್ದರು. 

ಅವರು ಅಹ್ಮದ್ ಷಾ ಅಬ್ದಾಲಿ ವಿರುದ್ಧ ಗೋವರ್ಧನನ್ನು ರಕ್ಷಿಸಲು ಹೋರಾಡಿದರು. ವರ್ಷ ೧೭೫೯ ರಲ್ಲಿ ಸಾವಿರಾರು ನಾಗಾ ಸಾಧುಗಳನ್ನು ಕಳೆದುಕೊಂಡ ನಂತರ, ಸಾಧುಗಳು ತಮ್ಮ ಪ್ರಾಣವನ್ನು ಹೊರತುಪಡಿಸಿ ಕಳೆದುಕೊಳ್ಳಲು ಯಾವುದೇ ಆಸ್ತಿಯನ್ನು ಹೊಂದಿಲ್ಲದ ಕಾರಣ ಅಬ್ದಾಲಿ ಹಿಂತೆಗೆದುಕೊAಡರು. ಆಫ್ಘನ್ನರ ಪ್ರಧಾನ ಜನರಲ್, ಸರ್ದಾರ್ ಖಾನ್; ಗೋಕುಲ್ (ಭಾರತದಲ್ಲಿ ಉತ್ತರ ಪ್ರದೇಶ) ಮೇಲೆ ದಾಳಿಯನ್ನು ಪ್ರಾರಂಭಿಸಿತು. ಆದಾಗ್ಯೂ, ಆಕ್ರಮಣಕಾರಿ ಆಫ್ಘನ್ನರ ದುಷ್ಕೃತ್ಯಗಳಿಂದ ಕದಡಿದ ಸಾವಿರಾರು ಯೋಧರು, ನಾಗಾ ಸನ್ಯಾಸಿಗಳು ದಾರಿಯನ್ನು ತಡೆದರು. ಕತ್ತಿಗಳು, ಬೆಂಕಿಕಡ್ಡಿಗಳು ಮತ್ತು ಫಿರಂಗಿಗಳನ್ನು ಹಿಡಿದ ಕಠೋರ ನಾಗಾ ಸಾಧುಗಳು ಧರ್ಮ ರಕ್ಷಣೆಗಾಗಿ ತಮ್ಮ ಅಲೆದಾಡುವ ಬ್ಯಾಂಡ್‌ಗಳನ್ನು ಒಟ್ಟುಗೂಡಿಸಿ ಹೋರಾಡಿದ್ದು ಐತಿಹಾಸಿಕವಾದುದು.

ಹದಿನೇಳನೇ ಶತಮಾನದ ಮಧ್ಯಭಾಗದಲ್ಲಿ, ಸಾಧುಗಳು ಮತ್ತು ಬಗೆಬಗೆಯ ಪವಿತ್ರ ಪುರುಷರ ತಂಡಗಳು ದೊಡ್ಡ ಗುಂಪುಗಳಾಗಿ ಒಗ್ಗೂಡಿಸಲ್ಪಟ್ಟವು. ಆಗಾಗ್ಗೆ ೧೦,೦೦೦ ಕ್ಕಿಂತ ಹೆಚ್ಚು ಬಲಶಾಲಿಗಳು - ಅವರು ದೇವಾಲಯಗಳು, ಪ್ರಯಾಣದ ಮಾರ್ಗಗಳು ಮತ್ತು ಪಟ್ಟಣಗಳು ಮತ್ತು ಪ್ರತಿಸ್ಪರ್ಧಿ ಸೈನ್ಯಗಳಿಗೆ ರಕ್ಷಣೆ ನೀಡುವ ಕೆಲಸ ಮಾಡಿದರು. ಅನೇಕ ಶತಮಾನಗಳವರೆಗೆ ಸನ್ಯಾಸಿಗಳು ಮತ್ತು ಶಿಷ್ಯರು ಉತ್ತರ ಭಾರತದ ಕ್ರಾಂತಿಗಳ ನಡುವೆ ಶಸ್ತ್ರಾಸ್ತ್ರಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸಿದರು ಮತ್ತು ಮೊಘಲ್ ಸಾಮ್ರಾಜ್ಯದ ಪತನದ ಸಮಯದಲ್ಲಿ ಅವರು ಗಂಭೀರ ಶಕ್ತಿಯಾಗಿ ಹೊರಹೊಮ್ಮಿದರು.

ಅವರ ಪ್ರಮುಖ ನಾಯಕರಲ್ಲಿ ಒಬ್ಬರಾದ ರಾಜೇಂದ್ರ ಗಿರಿ ಗೋಸೈನ್ ಅವರು ಶೌರ್ಯದ ಖ್ಯಾತಿಯನ್ನು ಹೊಂದಿದ್ದರು. ಅವರ ನಾಗಾಗಳ ತಂಡವು ಅವರ ಹತ್ತು ಪಟ್ಟು ಹೆಚ್ಚು ಸಂಖ್ಯೆಯ ಶತ್ರುಗಳನ್ನು ಸಂಪೂರ್ಣವಾಗಿ ನಾಶಪಡಿಸಲು ರೋಷದಿಂದ ಹೋರಾಡುತ್ತದೆ. ನಂತರದ ಕಾಲದಲ್ಲಿ ಹಿಮ್ಮತ್ ಬಹದ್ದೂರ್ ಅನುಪ್ಗೀರ್ ಗೊಸೈನ್ ನೇತೃತ್ವದ ಕೆಲವು ದೊಡ್ಡ ತಂಡಗಳು ಉತ್ತರ ಭಾರತದ ಬಯಲು ಪ್ರದೇಶದಾದ್ಯಂತ ಬೃಹತ್ ಸೈನ್ಯವನ್ನು ಮುನ್ನಡೆಸಿದವು ಎಂಬುದು ಇತಿಹಾಸ. ಪ್ರಸಿದ್ಧ ಅಫಘಾನ್ ಅಶ್ವಸೈನ್ಯವು ನಾಗಾಗಳ ವಿರುದ್ಧ ಕಾಡು ಮತ್ತು ಅಜಾಗರೂಕ ಪ್ರತಿರೋಧ ಎದುರಿಸಲು ಪ್ರಾರಂಭಿಸಿತು. ಹಿಂದೂ ಪವಿತ್ರ ಪುರುಷರು ಪ್ರದರ್ಶಿಸಿದ ತಮ್ಮ ಸ್ವಂತ ಜೀವನದ ಸಂಪೂರ್ಣ ನಿರ್ಲಕ್ಷ್ಯವು ಆರಂಭಿಕ ಆಫ್ಘನ್ ದಾಳಿಕೋರರನ್ನು ಸೋಲಿಸಿ ಹಿಮ್ಮೆಟ್ಟುವಂತೆ ಮಾಡಿದ್ದು ಇದೇ ನಾಗಾ ಸಾಧುಗಳ ಸೈನ್ಯ.

ಭಾರತದ ಸನಾತನ ಸಂಸ್ಕೃತಿಯ ರಕ್ಷಣೆಗಾಗಿ ನಾಗಾ ಸಾಧುಗಳ ಹೋರಾಟ ಮರೆಯಲಾಗದು. ಕಾಶಿ ವಿಶ್ವನಾಥ ಮಂದಿರ ಮತ್ತು ರಾಮಮಂದಿರದ ಮೇಲೆ ಯವನರ ದಾಳಿಯ ಸಂದರ್ಭದಲ್ಲಿ ಸೈನ್ಯದೊಂದಿಗೆ ಕೈಜೋಡಿಸಿ ಹೋರಾಡಿ ಜೀವ ತೆತ್ತವರು ನಾಗಾ ಸಾಧುಗಳು. ಅಷ್ಟೇ ಏಕೆ ಇತ್ತೀಚೆಗೆ ಅಂದರೆ ೧೯೮೯ರಲ್ಲಿ ಅಯೋಧ್ಯೆ ರಾಮಮಂದಿರ ಹೋರಾಟ ಸಂದರ್ಭದಲ್ಲಿ ಮುಲಯಂಸಿAಗ್ ಯಾದವ ಸರ್ಕಾರದ ಗುಂಡಿನೇಟಿಗೆ ಸತ್ತವರಲ್ಲಿ ಸುಮಾರು ೨೦೦ಕ್ಕೂ ಹೆಚ್ಚು ನಾಗಾ ಸಾಧುಗಳೇ ಆಗಿದ್ದರು ಎಂದು ದಾಖಲೆಗಳೇ ಹೇಳುತ್ತವೆ. ಹೀಗಾಗಿ ಶಿವನ ಪರಮ ಭಕ್ತರಾದ ನಾಗಾ ಸಾಧುಗಳು ರಾಷ್ಟç ರಕ್ಷಣೆಯೊಂದಿಗೆ ಸನಾತನ ಧರ್ಮ ರಕ್ಷಕರಾಗಿಯೂ ಕಾರ್ಯ ನಿರ್ವಹಿಸಿದರು. ಈಗಲೂ ಅವರ ಮೂಲ ಉದ್ದೇಶವೇ ಸನಾತನ ಧರ್ಮ ರಕ್ಷಣೆ. ಅದೇ ಕಾರಣಕ್ಕಾಗಿ ಕುಂಭ ಮೇಳ, ಅರ್ಧ ಕುಂಭ ಮೇಳ, ಪೂರ್ಣ ಕುಂಭ ಮೇಳ ಮತ್ತು ಮಹಾ ಕುಂಭ ಮೇಳಗಳಿಗೆ ಆಗಮಿಸಿ ಧರ್ಮ ಪ್ರಸಾರ ಮಾಡುತ್ತಾರೆ. ನಾಗಾಗಳ ಸಂಖ್ಯೆ ಹೆಚ್ಚಿಸಿಕೊಳ್ಳಲು ಈ ಸಂದರ್ಭಗಳಲ್ಲಿ ಹೊಸ ಸೈನಿಕ (ಅನುಯಾಯಿ)ಗಳನ್ನು ಆಯ್ಕೆ ಮಾಡಿಕೊಂಡು ತಮ್ಮ ಅದೃಶ್ಯ ಸ್ಥಳಗಳಿಗೆ ಹೋಗುತ್ತಾರೆ.

 -ಎಸ್ ಆರ್. ಮಣೂರ ಹಿರಿಯ ಪತ್ರಕರ್ತರು


ಪ್ರೇಮ ಕಾಶ್ಮೀರದಲ್ಲಿ ರಕ್ತದೋಕುಳಿ; ಹಿಂದೂಗಳೇ ಟಾರ್ಗೆಟ...!

  ಪ್ರೇಮ ಕಾಶ್ಮೀರದಲ್ಲಿ ರಕ್ತದೋಕುಳಿ; ಹಿಂದೂಗಳೇ ಟಾರ್ಗೆಟ್. ಭೂಲೋಕದ ಸ್ವರ್ಗವೆಂದೇ ಕರೆಯುವ ಜಮ್ಮು-ಕಾಶ್ಮೀರದ ಪೆಹಲ್ಗಾಮ್ ಸಮೀಪದ ಬೈಸರನ್ ಹುಲ್ಲುಗಾವಲಿನಲ್ಲಿ ಪಾಕ್ ಪ್...