ads
Search This Blog
Friday, 21 March 2025
ಮಾರ್ಚ್ ೨೨, ೨೩ ರಂದು ಮಹಾದಂಡನಾಯಕರ ಸ್ಮರಣೋತ್ಸವ ಸಚಿವ ಡಾ. ಶರಣಪ್ರಕಾಶ ಪಾಟೀಲರಿಂದ ಉದ್ಘಾಟನೆ: ಶ್ರೀಕಾಂತ ಸ್ವಾಮಿ
Wednesday, 19 March 2025
ಶಂಕರಾಚಾರ್ಯ ಪೀಠಗಳಿಂದ ಸನಾತನ ಹಿಂದು ಧರ್ಮಕ್ಕೆ ಬಹುದೊಡ್ಡ ಕೊಡುಗೆ
ಬೀದರ: ಶಂಕರಾಚಾರ್ಯರು ಸನಾತನ ಧರ್ಮದ ಸಂರಕ್ಷಣೆ ಸಂವರ್ಧನೆ ಕಾರ್ಯ ಕೈಗೊಂಡ ಯೋಗಿಗಳಲ್ಲಿ ಅಗ್ರಗಣ್ಯರಾಗಿದ್ದಾರೆ. ಇವರ ಜೀವನ ಇದಕ್ಕಾಗಿ ಸಮರ್ಪಿತ ಜೀವನವಾಗಿದೆ. ಕ್ರಿ.ಶ. ೭ ಮತ್ತು ೮ನೇ ಶತಮಾನದಲ್ಲಿ ಹಿಂದು ಧರ್ಮದಲ್ಲಿ ವಿಪ್ಲವ ಘಟಿಸಿದಾಗ ಅದರ ನಿವಾರಣೆಗಾಗಿ ಅವತರಿಸಿ ಬಂದ ದೇವಸ್ವರೂಪಿ ಇವರಾಗಿದ್ದಾರೆ. ಅವರು ಕೇವಲ ೩೨ ವರ್ಷ ಬದುಕಿದ್ದರೂ ಮೂರು ಸಲ ಭಾರತ ಪರ್ಯಟನೆ ಮಾಡಿದ್ದಾರೆ. ಭಾರತದ ನಾಲ್ಕೂ ದಿಕ್ಕುಗಳಲ್ಲಿ ಪೀಠ ಸ್ಥಾಪಿಸಿ, ಧರ್ಮ ಸಂರಕ್ಷಣೆ ಗೈದಿದ್ದಾರೆ ಎಂದು ಶೃಂಗೇರಿ ಶಾರದ ಪೀಠಾಧೀಶರಾದ ವಿದುಶೇಖರ ಸ್ವಾಮಿ ಹೇಳಿದರು. ಅವರು ಬೀದರನ ರಾಂಪೂರೆ ಕಾಲೋನಿಯಲ್ಲಿರುವ ಸತ್ಯನಾರಾಯಣ ಮಂದಿರದಲ್ಲಿ ಜರುಗಿದ ಶೃಂಗೇರಿಯ ಸನಾತನ ಧರ್ಮ ವಿಜಯ ಯಾತ್ರಾ ಹಾಗೂ ಶೃಂಗೇರಿ ಶಾಖಾ ಪೀಠದ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಹೇಳಿದರು.
ಮುಂದುವರೆದು, ಶಂಕರಾಚಾರ್ಯರು ಗೈದ ಧರ್ಮಕಾರ್ಯ ಚೇತೋಹಾರಿಯಾಗಿದೆ. ಸನಾತನ ಧರ್ಮಕ್ಕೆ ಸ್ಪೂರ್ತಿದಾಯಕವಾಗಿದೆ. ಸನಾತನ ಶಕ್ತಿ ಮತ್ತು ಅದರ ವೈಭವ ಜನಮಾನಸದಲ್ಲಿ ಅಚ್ಚಳಿಯದಂತೆ ಉಳಿಯಲು ಛಾಪು ಮೂಡಿಸಿದ್ದಾರೆ. ಅವರು ಸ್ಥಾಪಿಸಿದ ೪ ಪೀಠಗಳು ಸನ್ಯಾಸತ್ವದ ಗುರುಪರಂಪರೆಯಿ0ದ ಕೂಡಿದ್ದಾಗಿವೆ. ಭಾರತದ ಸನಾತನ ಧರ್ಮದ ಅಳವಡಿಕೆಗೆ ಬೆಳವಣಿಗೆಗೆ ಬೇಕಾಗುವ ಮಾರ್ಗೋಪಾಯಗಳು ಈ ಪೀಠಗಳು ನಿರಂತರ ಮಾಡುತ್ತಾ ಬಂದಿವೆ. ಶೃಂಗೇರಿ ಶಾರದಾ ಪೀಠದ ೩೬ನೇ ಆಚಾರ್ಯರಾದ ಭಾರತಿ ತೀರ್ಥ ಶ್ರೀಗಳು ಈ ಆಚಾರ್ಯ ಪೀಠಕ್ಕೆ ತಮ್ಮ ಮಾನವೀಯ ಕಾರ್ಯಗಳಿಂದಾಗಿ ಘನತೆ ತಂದವರಾಗಿದ್ದಾರೆ. ಅವರು ಈ ಹಿಂದೆ ಬೀದರಕ್ಕೂ ಬಂದು ಹೋಗಿದ್ದಾರೆ. ಅವರ ಪ್ರಭಾವದಿಂದಾಗಿಯೇ ಇಲ್ಲಿನವರು ಇಲ್ಲಿ ಶೃಂಗೇರಿ ಪೀಠದ ಶಾಖೆ ಪ್ರತಿಷ್ಠಾಪನೆಗೆ ಒಲವು ತೋರಿದ್ದಾರೆ. ಅವರೆಲ್ಲರ ಇಚ್ಛೆಯಂತೆ ಇಲ್ಲೀಗ ಶೃಂಗೇರಿ ಪೀಠದ ಮಂದಿರಕ್ಕೆ ಶಿಲನ್ಯಾಸವಾಗುತ್ತಿದೆ. ಇದಕ್ಕೆ ಕೈ ಜೋಡಿಸಿದ ಬೀದರನ ಸಜ್ಜನರ ಸನಾತನ ಶೃದ್ಧಾಳುಗಳ ಕಾರ್ಯಕ್ಕೆ ಶಾರದಾ ಪೀಠ ಸಂತುಷ್ಟವಾಗಿದೆ. ಬೀದರನಲ್ಲಿ ಬರುವ ದಿನಗಳಲ್ಲಿ ಇಲ್ಲಿ ಶಂಕರಾಚಾರ್ಯರ ಮತ್ತು ಶಾರದಾ ಮಾತೆಯ ಮಂದಿರಗಳು ಸ್ಥಾಪನೆಗೊಂಡು, ಇಲ್ಲೂ ಶಾರದಾ ಪೀಠದ ಧರ್ಮ ಕಾರ್ಯಗಳು ಆರಂಭವಾಗಲಿವೆ. ಶಾರದಾ ಪೀಠದ ಯತಿವರಣ್ಯರು, ಆಚಾರ್ಯರು ಮೇಲಿಂದ ಮೇಲೆ ಇಲ್ಲಿಗೆ ಆಗಮಿಸಿ, ಇಲ್ಲಿನ ಶೃದ್ಧಾಳುಗಳನ್ನು ಉದ್ಧರಿಸುವ ಕಾರ್ಯ ಮುಂದೆ ನಿರಂತರ ಮಾಡಲಿದ್ದಾರೆ. ಭವಿಷ್ಯದಲ್ಲಿ ಬೀದರನ ಈ ಕ್ಷೇತ್ರ ಸನಾತನ ಧರ್ಮದ ಮಹಾನ್ ಶಕ್ತಿ ಕ್ಷೇತ್ರವಾಗಿ ಕಂಗೊಳಿಸಲಿದೆ ಎಂದರು.
ಶ0ಕರಾಚಾರ್ಯರ ಬೋಧೆಗಳು ಜೀವನ ಉದ್ಧರಿಸುವ ಬೋಧೆಗಳಾಗಿವೆ. ಶಂಕರಾಚಾರ್ಯರ ಅನುಯಾಯಿಗಳು ಸನಾತನ ಧರ್ಮದಂತೆ ಜೀವನ ಸಾಗಿಸುವುದರಿಂದ ಸತ್ಕಾರ್ಯಗಳು, ಸದ್ವಿಚಾರಗಳು ಇಲ್ಲಿ ಹೆಚ್ಚಾಗಲಿವೆ. ಮಂಗಲ ಕಾರ್ಯಗಳು ಇಲ್ಲಿ ನಿತ್ಯ ನಡೆಯಲಿವೆ. ಶಂಕರಾಚಾರ್ಯರು ಹಲವಾರು ಗ್ರಂಥಗಳನ್ನು ರಚಿಸಿದ್ದಾರೆ. ಅದರಲ್ಲಿ ಮನುಷ್ಯನ ಯಶಸ್ವಿ ಜೀವನಕ್ಕೆ ಅನುಸರಿಸಬೇಕಾದ ಮಾರ್ಗೋಪಾಯಗಳನ್ನು ಹೇಳಿದ್ದಾರೆ. ಅವನ್ನು ಪಾಲನೆ ಮಾಡುವುದರಿಂದ ಪುಣ್ಯ ಪ್ರಾಪ್ತಿಯಾಗುತ್ತದೆ. ಜೀವನ ಸಾರ್ಥಕವಾಗುತ್ತದೆ ಎಂದರು. ಶಂಕರಾಚಾರ್ಯರು ಸ್ಥಾಪಿಸಿದ ಈ ನಾಲ್ಕು ಆಮ್ನಾಯ ಪೀಠಗಳ ಮೂಲ ಉದ್ದೇಶ ಸನಾತನ ಧರ್ಮಜಾಗೃತಿ ಧರ್ಮಪಾಲನೆಯಾಗಿದೆ. ಈ ಪೀಠದ ಕಾರ್ಯಗಳು ವೇದೋಕ್ತ, ಶಾಸ್ತ್ರೋಕ್ತವಾಗಿ ನಡೆಯುತ್ತವೆ. ಅವು ಜನರಲ್ಲಿ ಸನಾತನ ಧರ್ಮದ ತಿರುಳನ್ನು ಹಾಸುಹೊಕ್ಕಾಗಿಸುತ್ತವೆ ಎಂದರು.
ಮಾನವನ ಮೂಲ ಆಶಯ ಸುಖ, ಪುಣ್ಯಪ್ರಾಪ್ತಿ, ಜೀವನ್ಮುಕ್ತತೆಯೇ ಆಗಿದೆ. ಶಂಕರಾಚಾರ್ಯರ ಪೀಠಗಳು ಒಳ್ಳೆಯ ಜೀವನಕ್ಕಾಗಿ ಒಳ್ಳೆಯ ಮಾರ್ಗ ತೋರುತ್ತವೆ. ಈ ಪೀಠಗಳ ಆಚಾರ್ಯರ ಸಂಪರ್ಕಕ್ಕೆ ಬಂದವರು ತಾವಾಗಿಯೇ ಬದಲಾಗಿ, ಶಾಸ್ತೊçÃಕ್ತ, ಪ್ರಾಮಾಣಿಕ ಹಾಗೂ ಸೇವಾಜೀವನ ಅನುಸರಿಸುತ್ತಾರೆ. ಇವತ್ತು ಕೆಲವರು ಒಳ್ಳೆಯ ಕಾರ್ಯಗಳಲ್ಲಿ ಕುತರ್ಕ ಮಾಡುವವರು ವಿಘ್ನತಾರುವವರು ಇರುತ್ತಿದ್ದಾರೆ. ಇವರಿಂದ ಎಚ್ಚರಿಕೆಯಿಂದಿರಬೇಕು ಎಂದರು. ದೇವರು ಎಲ್ಲರಿಗೂ ಒಂದೊ0ದು ಸಾಮರ್ಥ್ಯ ಕೊಟ್ಟಿರುತ್ತಾನೆ. ಆ ಸಾಮರ್ಥ್ಯ ಸದ್ಬಳಕೆ ಮಾಡಿಕೊಂಡು, ಸಾತ್ವಿಕ ಕಾರ್ಯಗಳಿಗೆ ವಿನಿಯೋಗಿಸಬೇಕು. ಅದಕ್ಕೆ ದೇವರ ಬಲ ರಕ್ಷೆ ಕೂಡ ಇರುತ್ತದೆ. ಶಾರದಾ ಪೀಠದ ಈ ಸ್ಥಾಪನೆಗೆ ಭೂಮಿ ನೀಡಿದ ಪ್ರಭು ಮೈಲಾಪೂರ ಅವರ ಕಾರ್ಯ ಶಾರದಾ ಪೀಠಕ್ಕೆ ಮೆಚ್ಚುಗೆಯ ಕಾರ್ಯವಾಗಿದೆ. ಇವರ ತ್ಯಾಗ ಸೇವೆ ಮಾದರಿಯಾಗಿದೆ. ಈ ಕಾರ್ಯಕ್ಕೆ ಕೈಜೋಡಿಸಿದ ಎಲ್ಲರಿಗೂ ಶಾರದಾಂಬೆಯ ಕೃಪೆ ಪ್ರಾಪ್ತಿಯಾಗಲಿದೆ ಎಂದರು.
ನಾವು ಒಳ್ಳೆಯ ಇಚ್ಛೆಗಳನ್ನು ಇಟ್ಟುಕೊಂಡರೆ ಅದರಿಂದೇನೂ ಪ್ರಯೋಜನವಿಲ್ಲ. ಒಳ್ಳೆಯ ಇಚ್ಛೆಯ ಜೊತೆ ಒಳ್ಳೆಯ ಕಾರ್ಯಗಳನ್ನು ಮಾಡುತ್ತಿರಬೇಕು. ವಿದ್ಯಾರ್ಥಿ ತನ್ನ ಪರೀಕ್ಷೆಯಲ್ಲಿ ಒಳ್ಳೆಯ ರೀತಿಯಿಂದ ಪಾಸಾಗಬೇಕಾದರೆ ಆತನಿಗೆ ಸೆಲೆಬಸ್ನ ಅರಿವಿರಬೇಕು ಮತ್ತು ಆತನ ಹಿಂದೆ ದಕ್ಷ ಶಿಕ್ಷಕನಿರಬೇಕಾಗುತ್ತದೆ. ಹಾಗೆಯೇ ಮನುಷ್ಯನು ತನ್ನ ಜೀವನದ ಪರೀಕ್ಷೆಗಳಲ್ಲೂ ಪಾಸಾಗಬೇಕಾದರೆ ಒಳ್ಳೆಯ ಮಾರ್ಗೋಪಾಯಗಳು ಹೇಳುವ ಮಾರ್ಗದರ್ಶಕ ಗುರುಗಳು ಬೇಕಾಗುತ್ತಾರೆ. ಆಗಲೇ ಜೀವನದಲ್ಲಿ ಯಶಸ್ಸು ಸಾಧ್ಯವಾಗುತ್ತದೆ. ಈ ಕೆಲಸ ಶಂಕರಾಚಾರ್ಯರ ಪೀಠಾಚಾರ್ಯರು ತಮ್ಮ ಅನುಯಾಯಿಗಳಿಗಾಗಿ ನಿರಂತರ ಮಾಡುತ್ತಾ ಬರುತ್ತಿದ್ದಾರೆ. ಬೀದರನಲ್ಲಿ ಈ ಪೀಠದ ಸ್ಥಾಪನೆಯಿಂದಾಗಿ ಇಲ್ಲಿ ಶಾಸ್ತ್ರೋಕ್ತ, ವೇದೋಕ್ತ ಸನಾತನಧರ್ಮ ಪಾಲಿಸುವವರ ಶೃದ್ಧಾಳುಗಳ ಸಂಖ್ಯೆ ಹೆಚ್ಚಾಗಲಿದ್ದು, ಇಲ್ಲಿನವರ ಮಾನಸಿಕ, ಬೌದ್ಧಿಕ ಹಾಗೂ ಭೌತಿಕ ಅಭಿವೃದ್ಧಿಗೆ ಇದು ಕಾರಣವಾಗುತ್ತದೆ ಎಂದರು.
ಸನಾತನ ಧರ್ಮದ ಅಪಪ್ರಚಾರದ ಹಿಂದೆ ಅಜ್ಞಾನ ಸ್ವಾರ್ಥ ಮತ್ತು ದುರುದ್ದೇಶಗಳಿರುತ್ತವೆ. ಅದನ್ನು ಅರ್ಥ ಮಾಡಿಕೊಳ್ಳಬೇಕು. ಗುರುಗಳಾದವರು ಜಗದ್ಗುರುಗಳಾದವರು ಒಳ್ಳೆ ಕಾರ್ಯಗಳ ಬೋಧೆ ಮಾಡಬೇಕು ಹಾಗೂ ಅದರಂತೆ ನಡೆಯಬೇಕಾದುದು ಅವಶ್ಯಕವಾಗಿರುತ್ತದೆ ಎನ್ನುವುದನ್ನು ಎಲ್ಲರೂ ಅರಿಯಬೇಕು ಎಂದರು. ಸನಾತನ ಧರ್ಮದ ಪಾಲನೆಯಿಂದಾಗಿ ಭಾರತದ ಅಭಿವೃದ್ಧಿ ಹಾಗೂ ವಿಶ್ವದ ಅಭಿವೃದ್ಧಿಯಾಗಲಿದೆ. ಇದು ಎಲ್ಲರ ಒಳಿತನ್ನು ಬಯಸುವ ಧರ್ಮವಾಗಿದೆ. ಇದು ಮನುಷ್ಯನಲ್ಲಿ ಅಸುರ ಶಕ್ತಿ ನಾಶಗೊಳಿಸಿ, ದೇವಶಕ್ತಿ ಪ್ರತಿಷ್ಠಾಪಿಸುತ್ತದೆ ಎಂದರು. ಪ್ರಸಕ್ತ ದಿನ ಮಾನದಲ್ಲಿ ಸನಾತನ ಧರ್ಮದ ಸುವರ್ಣಕಾಲ ತರಲೋಸುಗ ಸನಾತನ ಧರ್ಮ ವಿಜಯಯಾತ್ರೆ ರಾಜ್ಯಾದ್ಯಂತ ಶಾರದಾ ಪೀಠದಿಂದ ಆರಂಭಿಸಲಾಗಿದೆ. ಸನಾತನ ಶಕ್ತಿಗೆ ನಾವೆಲ್ಲ ಹೆಮ್ಮೆಪಟ್ಟುಕೊಂಡು, ಕಂಕಣ ಬದ್ಧರಾಗಬೇಕು. ಇದಕ್ಕಾಗಿ ಬದ್ಧತೆಯಿಂದ ಶ್ರಮಿಸಬೇಕು. ತಾವು ಈ ಅಭಿಯಾನದಲ್ಲಿ ಭಾಗಿಯಾಗಬೇಕು ಮತ್ತು ತಮ್ಮ ಸಂಪರ್ಕದವರಿಗೂ ಭಾಗಿಯಾಗಿಸಬೇಕು. ಇದರಲ್ಲಿ ಎಲ್ಲರ ಶ್ರೇಯವೂ ಅಡಗಿದೆ ಎಂದರು.
ಕಾರ್ಯಕ್ರಮದಲ್ಲಿ ಪ್ರಸ್ತಾವಿಕವಾಗಿ ಮಾತನಾಡಿದ ಸತ್ಯನಾರಾಯಣ ಮಂದಿರದ ಪ್ರಧಾನ ಅರ್ಚಕರಾದ ಶ್ರೀ ನರಸಿಂಹ ದಿಕ್ಷಿತರು ಮಾತಾಡುತ್ತಾ ಬೀದರ ಪುರಾಣೇತಿಹಾಸಿಕ ಕಾಲದಿಂದಲೂ ದೇವಭೂಮಿಯಾಗಿದೆ. ಇಲ್ಲಿ ಬಹಳಷ್ಟು ಯೋಗಿಪುರುಷರು, ಸಂತ ಮಹಾಂತರು ಆಗಿ ಹೋಗಿದ್ದಾರೆ. ಸಾಕ್ಷಾತ್ ಪಂಢರಪೂರದ ವಿಠಲನೇ ಬೀದರಗೆ ಬಂದು, ತನ್ನ ಶಿಷ್ಯ ದಾಮೋಧರ ಪಂತ್ಗೆ ರಕ್ಷಣೆ ಗೈದಿದ್ದಾರೆ. ದತ್ತಾತ್ರೇಯ ಚತುರ್ಥ ಅವತಾರರಾದ ಮಾಣಿಕಪ್ರಭುಗಳು ಬೀದರನಲ್ಲಿ ವಿಶ್ವರೂಪ ದರ್ಶನ ಗೈದಿದ್ದಾರೆ. ಇಲ್ಲಿನ ನರಸಿಂಹಕ್ಷೇತ್ರ ಪಾಪನಾಶಕ್ಷೇತ್ರ ಕ್ಷೇತ್ರಗಳಿಗೆ ದೈವಿಕ ಹಿನ್ನೆಲೆ ಇದೆ. ಗುರುನಾನಕರು ಕೂಡ ಬೀದರನಲ್ಲಿ ನೆಲೆಸಿ ಹೋಗಿದ್ದಾರೆ. ಇದು ಸೌಹಾರ್ದತೆಗೆ ಹೆಸರಾದ ನೆಲವಾಗಿದೆ. ಹಿಂದು ಧರ್ಮದ ಕಾರ್ಯದಲ್ಲಿ ಬಹುದೊಡ್ಡ ಪಾತ್ರ ವಹಿಸುತ್ತಿರುವ ಈ ಶೃಂಗೇರಿ ಪೀಠವು ಬೀದರನಿಂದ ದೂರವಿದ್ದು, ಅದು ಈಗ ಬೀದರನಲ್ಲೂ ಸ್ಥಾಪನೆಯಾಗುತ್ತಿದ್ದರಿಂದ ಇಲ್ಲಿನ ಅನುಯಾಯಿಗಳಿಗೆ ಸಂತಸವನ್ನುAಟು ಮಾಡಿದೆ ಎಂದರು. ವಿದುಶೇಖರರು ಇಲ್ಲಿಗೆ ಆಗಮಿಸಿ ಇಲ್ಲಿನ ಅನುಯಾಯಿಗಳಿಗೆ ದರ್ಶನವಿಯ್ಯುತ್ತಿರುವುದು ಮತ್ತು ಇಲ್ಲಿ ಶಾರದಾಪೀಠದ ಮಂದಿರ ಸ್ಥಾಪಿಸುತ್ತಿರುವುದು ಹರ್ಷವನ್ನುಂಟು ಮಾಡಿದೆ ಎಂದರು. ಇಲ್ಲಿ ಸತ್ಯನಾರಾಯಣ ಮಂದಿರ ಸ್ಥಾಪನೆಯಾದಾಗ ಆರಂಭದಲ್ಲಿ ೧೦ ಆಕಳುಗಳನ್ನಿಟ್ಟು ಗೋಶಾಲೆ ಆರಂಭಿಸಲಾಗಿತ್ತು. ಈಗ ಇಲ್ಲಿ ೧೫೦ ಆಕಳುಗಳಿರುವ ಬೃಹತ್ ಗೋಶಾಲೆ ಇಲ್ಲಿ ಕಾಣಬಹುದಾಗಿದೆ. ಹಾಗೆಯೇ ಮುಂದಿನ ದಿನಗಳಲ್ಲಿ ಶಾರದಾ ಮಂದಿರ ಇಲ್ಲಿ ಬೃಹತ್ತಾಗಿ ಕಾರ್ಯನಿರ್ವಹಿಸುವುದರಲ್ಲಿ ಸಂದೇಹವಿಲ್ಲ ಎಂದರು.
ಕಾರ್ಯಕ್ರಮದಲ್ಲಿ ರೇಖಾ ಅಪ್ಪಾರಾವ ಸೌದಿಯವರಿಂದ ಭಕ್ತಿಯ ಸ್ವಾಗತ ಗೀತೆ ಜರುಗಿತು. ಗೀತಾ ಭಟ್ರ ತಂಡದಿ0ದ ಗೀತಾಪಾರಾಯಣ ನಡೆಯಿತು. ಕಾರ್ಯಕ್ರಮದ ಮುಂಚೆ ಎಂ.ಎಸ್. ಫಂಕ್ಷನ್ ಹಾಲ್ನಿಂದ ಸತ್ಯನಾರಾಯಣ ಮಂದಿರದವರೆಗೆ ವಿದುಶೇಖರರ ಶೋಭಾಯಾತ್ರೆ ವಿಜೃಂಭಣೆಯಿ0ದ ಜರುಗಿತು. ಶೋಭಾಯಾತ್ರೆಯಲ್ಲಿ ಸಾಧುಘಾಟನ ಪಾಂಡುರ0ಗ ಮಹಾರಾಜರ ತಂಡದಿ0ದ ಚಕ್ರಿ ಭಜನೆ, ನರ್ಮದಾ ದೇಶಪಾಂಡೆಯವರಿ0ದ ಭಜನೆ ಹಾಗೂ ಜೈಪ್ರದಾ ಪ್ರಕಾಶ ಕುಲಕರ್ಣಿ ತಂಡದವರು ಕಳಸಹೊತ್ತು ಸಾಗಿದರು. ಈ ಶೋಭಾಯಾತ್ರೆಯಲ್ಲಿ ಜಗನ್ನಾಥ ಮಂದಿರದ ಹಾಗೂ ಚಿದಂಬರಾಶ್ರಮದ ಪ್ರಮುಖರು ಪಾಲ್ಗೊಂಡಿದರು. ಕಾರ್ಯಕ್ರಮದಲ್ಲಿ ಪಂಡಿತರಿ0ದ ವೇದ ಪಠಣ ನಡೆಯಿತು ಹಾಗೂ ಕೋಲಾಟ ಜರುಗಿದವು. ಕಾರ್ಯಕ್ರಮದಲ್ಲಿ ಪ್ರಮುಖರಾದ ಡಾ. ಶೈಲೇಂದ್ರ ಬೆಲ್ದಾಳೆ ಪರಿವಾರದವರಿಗೆ ಹಾಗೂ ಸೂರ್ಯಕಾಂತ ನಾಗಮಾರಪಳ್ಳಿ ಪರಿವಾರದವರಿಗೆ ಸತ್ಕರಿಸಲಾಯಿತು.
ಕಾರ್ಯಕ್ರಮದಲ್ಲಿ ರಮೇಶ ಕುಲಕರ್ಣಿ, ಶಾಮಕಾಂತ ಕುಲಕರ್ಣಿ, ಬಾಬುರಾವ ಕುಲಕರ್ಣಿ, ರಾಮಕೃಷ್ಣ ಸಾಳೆ, ರವಿ ಸ್ವಾಮಿ, ಪ್ರಭು ಮೈಲಾಪೂರ, ವೆಂಕಟೇಶ ಮೋರಖಂಡಿಕರ್, ಹಣಮಯ್ಯ ಅರ್ಥಮ್, ಎನ್.ಆರ್. ವರ್ಮಾ, ವಸಂತ ಪಟೇಲ್, ಭೀಮಸೇನ್ ಸಿನಿಯಾಲ್, ಶಂಕರ ಕೊಟರ್ಕಿ, ರಮೇಶ ಗೋಯಲ್, ಜಾಧವ ಪಟೇಲ್, ಪ್ರಮೋದ ಗಾದೆವಾರ, ಸೂರ್ಯಕಾಂತ ಕುಲಕರ್ಣಿ, ದಿನಕರರಾವ ಕುಲಕರ್ಣಿ, ರಾಜಶೇಖರ ಹಣಕುಣಿ, ಸಂಜು ಜೋಶಿ ಹಳ್ಳಿಖೇಡ ಬಿ, ವನಮಾಲಾ ಕುಲಕರ್ಣಿ, ನಿರ್ಮಲಾ ದೇಶಪಾಂಡೆ, ಮತ್ತೀತರರಿದ್ದರು. ಹರೀಶ ಕುಲಕರ್ಣಿ ಸ್ವಾಗತ, ಕಲ್ಪನಾ ದೇಶಪಾಂಡೆ, ವಂದಿಸಿದರು.
ನಾವು ಎಷ್ಟೇ ಕಲಿತರು ಕೌಶಲ್ಯ ಬೇಕು - ಸಾಹಿತಿ ಕಾ.ತ. ಚಿಕ್ಕಣ್ಣ
ಕೊಪ್ಪಳ : ನಾವು ಎಷ್ಟೇ ಕಲಿತರು ನಮ್ಮಲ್ಲಿ ಕೌಶಲ್ಯ ಇರಬೇಕು ಅದು ನಮ್ಮ ಜೀವನ ರೂಪಿಸುತ್ತದೆ. ಉನ್ನತ ಶಿಕ್ಷಣದಲ್ಲಿ ಕೌಶಲ್ಯ ಶಿಕ್ಷಣಕ್ಕೆ ಒತ್ತು ನೀಡಬೇಕು ಎಂದು ಹಿರಿಯ ಸಾಹಿತಿಗಳು ಹಾಗೂ ಬೆಂಗಳೂರಿನ ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರದ ಅಧ್ಯಕ್ಷ ಕಾ.ತ. ಚಿಕ್ಕಣ್ಣ ಹೇಳಿದರು.
Wednesday, 5 March 2025
ಏಪ್ರಿಲ್ 5 ಹಾಗೂ 6 ರಂದು ತೃತೀಯ ಶರಣ ಸಮಾಗಮ. ಶರಣ ಜ್ಞಾನ ಶಿಬಿರ. ಶರಣೆ ದಾನಮ್ಮ ಉತ್ಸವಕ್ಕೆ ಪೂಜ್ಯ ಬಸವಪ್ರಭು ಸ್ವಾಮಿ ಕರೆ
ಬಸವಕಲ್ಯಾಣ : ಬರುವ ಏಪ್ರಿಲ್ ತಿಂಗಳ ಮೊದಲನೆಯ ವಾರದಲ್ಲಿ ಎರಡು ದಿನಗಳ ಶರಣ ಸಮಾಗಮ ಹಾಗೂ ಶರಣೆ ದಾನಮ್ಮ ಉತ್ಸವವನ್ನು ಪ್ರತಿ ವರ್ಷ ದಂತೆ ಈ ವರ್ಷ ಸಹ ಎರಡು ದಿನ ಶರಣ ಜ್ಞಾನ ಶಿಬಿರವನ್ನು ಆಯೋಜನೆ ಮಾಡಲಾಗಿದೆ ಎಂದು ಪೂಜ್ಯ ಬಸವಪ್ರಭು ಸ್ವಾಮಿಜಿಯರು ತಿಳಿಸಿದರು.
ಅವರು ಶೋಧವಾಣಿಯೊಂದಿಗೆ ಮಾತನಾಡುತ್ತ ವಿವರ ಮಾಹಿತಿ ನೀಡಿದರು. ಎರಡು ದಿನಗಳ ಕಾಲ ಅನೇಕ ಸಂಸ್ಕಾರ ಮತ್ತು ಸಂಸ್ಕೃತಿ ಹಿನ್ನೆಲೆ ಇಟ್ಟುಕೊಂಡು ಗುಣ ತೀರ್ಥ ವಾಡಿಯ ಕಲ್ಯಾಣ ಮಹಾಮನೆಯಲ್ಲಿ ಏಪ್ರಿಲ್ ೫ ಹಾಗೂ ೬ ರಂದು ತೃತೀಯ ಶರಣ ಸಮಾಗಮ ಹಾಗೂ ದಾನಮ್ಮ ಉತ್ಸವ ನಡೆಯುತ್ತದೆ ಎಂದು ಪೂಜ್ಯ ರು ನುಡಿದರು.
ಈ ವರ್ಷ ಅನೇಕ ಸಾಮಾಜಿಕ ಹಾಗೂ ಸಾಹಿತಿಕವಾಗಿ ಸೇವೆ ಸಲ್ಲಿಸಿದವರನ್ನು ಗುರುತಿಸಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ. ಈ ಸಮಾರಂಭದಲ್ಲಿ ಕರ್ನಾಟಕದ ಅನೇಕ ಜಿಲ್ಲೆಯಿಂದ ಮತ್ತು ಮಹಾರಾಷ್ಟ್ರ. ತೆಲಂಗಾಣ ರಾಜ್ಯದಿಂದ ಸಹ ಶರಣರು ಪಾಲ್ಗೊಳ್ಳಲಿದ್ದಾರೆ ಎಂದು ಪೂಜ್ಯ ಬಸವಪ್ರಭು ಸ್ವಾಮಿ ಜಿಯವರು ತಿಳಿಸಿದರು.
ಈ ಉತ್ಸವಕ್ಕೆ ದಾನಮ್ಮ ಜ್ಯೋತಿ ಯಾತ್ರೆಯನ್ನು ಮೆರಗು ನೀಡಲಿದೆ. ೧೩ ವರ್ಷಗಳ ಕಾಲ ನಿರಂತರವಾಗಿ ಗುಡ್ಡಾಪುರ ಶರಣೆ ದಾನಮ್ಮ ಜ್ಯೋತಿ ಯಾತ್ರೆಯನ್ನು ಜ್ಯೋತಿ ಹೊತ್ತಿಸಿಕೊಂಡು ಬೀದರ. ಕಲಬುರಗಿ. ವಿಜಯಪುರ. ಸೋಲಾಪುರ. ಸಾಂಗಲಿ ಕೊಲ್ಲಾಪುರ.ಮೂಲಕ ಬಸವಕಲ್ಯಾಣ ಕಲ್ಯಾಣ ಮಹಾಮನೆಗೆ ಬರುತ್ತದೆ ಈ ಜ್ಯೋತಿ ಯಾತ್ರೆ ಯಲ್ಲಿ ಭಕ್ತರು ಭಕ್ತಿ ನಿಷ್ಠೆ ಶ್ರದ್ಧೆ ಆಸಕ್ತಿ ಹೊಂದಿ ಈ ಸಮಾರಂಭದಲ್ಲಿ ಸಾವಿರಾರು ಭಕ್ತರು ಭಾಗವಹಿಸಲಿದ್ದಾರೆ ಎಂದು ನುಡಿದರು.
ಈ ಉತ್ಸವದಲ್ಲಿ ಅನೇಕ ಹಿರಿಯ ಸಾಹಿತಿಗಳು. ಜನ ನಾಯಕರು. ಬಸವ ಅನುಯಾಯಿಗಳು ಪಾಲ್ಗೊಂಡು ದಾನಮ್ಮನ ಭಕ್ತಿಗೆ ಕೃಪೆಯಾಗಲಿದ್ದಾರೆ ಹಾಗೂ ಈ ಎರಡು ದಿನಗಳ ಉತ್ಸವದಲ್ಲಿ ಭಕ್ತರು ಹೆಚ್ಚಿನ ಪ್ರಮಾಣದಲ್ಲಿ ಆಗಮಿಸಿ ಯಶಸ್ವಿಗೊಳ್ಳಿಸಬೇಕೆಂದು ಪೂಜ್ಯ ಬಸವಪ್ರಭು ಸ್ವಾಮಿಜಿ ಮನವಿ ಮಾಡಿದರು.
Monday, 3 March 2025
ಮರಾಠಾ ಸಮಾಜದ ಅಭಿವೃದ್ಧಿಗೆ ಶ್ರಮಸುವೆ: ಸಾಗರ ಖಂಡ್ರೆ
Sunday, 2 March 2025
ಭಾರತ ಸಾಂಸ್ಕೃತಿಕ ಇತಿಹಾಸಕ್ಕೆ ಕೋಲಿ ಜನಾಂಗದ ಕೊಡುಗೆ ಅಪಾರವಾಗಿದೆ.
ಕಾರ್ಯಕ್ರಮ ಉದ್ಘಾಟಿಸಿದ ತೊನಸನಳ್ಳಿ ಅಲ್ಲಮಪ್ರಭು ಮಠಾಧೀಶರಾದ ಡಾ. ಮಲ್ಲಣಪ್ಪ ಸ್ವಾಮಿಗಳು ಮಾತನಾಡುತ್ತಾ, ಇತಿಹಾಸದಲ್ಲಿ ವೇದವ್ಯಾಸ ಅಗಸ್ತö್ಯ ವಾಲ್ಮಿಕಿರಂತಹ ಅಸಂಖ್ಯ ಋಷಿಮುನಿಗಳು ಈ ಜನಾಂಗದಲ್ಲಿ ಆಗಿ ಹೋಗಿದ್ದಾರೆ. ಈಗಲೂ ಯಾನಾಗುಂದಿಯ ಮಾತೆ ಮಾಣಿಕೇಶ್ವರಿ ಹಾಗೂ ಬಿಜಾಪೂರ ಜಿಲ್ಲೆಯ ದೂಡಿಹಾಳದ ಸಮರ್ಥ ಸದ್ಗುರು ಭೀಮಾಶಂಕರರAತಹ ಅನೇಕ ಯೋಗಿ, ಯೋಗಿಣಿಯರು ಈ ಜನಾಂಗದಲ್ಲಿ ಈಗಲೂ ಆಗಿ ಹೋಗುತ್ತಿದ್ದಾರೆ. ದಿವ್ಯ ಜ್ಞಾನಿಗಳು, ದಿವ್ಯ ಯೋಗಿಗಳನ್ನು ನೀಡಿದ ಶ್ರೇಯ ಈ ಜನಾಂಗಕ್ಕಿದೆ. ಭಾರತದ ಸಾಂಸ್ಕೃತಿಕವಾದ ಇತಿಹಾಸ ಬೆಳವಣಿಗೆಯಲ್ಲಿ ಈ ಜನಾಂಗದ ಕೊಡುಗೆ ಅಪಾರವಾದುದಾಗಿದೆ. ಹಾಗಾಗಿ ಈ ಜನಾಂಗದವರು ತಮ್ಮ ಇತಿಹಾಸ ಮತ್ತು ತಮ್ಮ ಚರಿತ್ರೆಯ ಬಗ್ಗೆ ಆಳವಾದ ತಿಳುವಳಿಕೆ ಹೊಂದಿ, ತಮ್ಮ ಜನಾಂಗದ ಬಗ್ಗೆ ಹೆಮ್ಮೆ ಪಡಬೇಕು ಮತ್ತು ತಮ್ಮ ಇತಿಹಾಸ ಪುರುಷರ ಹಾದಿಯಲ್ಲಿ ಸಾಗಬೇಕು. ರತ್ನಕಾಂತ ಶಿವಯೋಗಿಗಳು ಮೌನಸಾಧಕರು ಮತ್ತು ಮಿತಭಾಷಿಗರು ಆಗಿದ್ದಾರೆ. ಇವರು ಏಕಾಂತ ಪ್ರೀಯರು, ಪೂಜಾನಿಷ್ಠರು ಆಗಿದ್ದಾರೆ. ತಾವು ಸ್ಥಾಪಿಸಿದ ಈ ಪೀಠಕ್ಕೆ ಜಾಗೃತ ಆಶ್ರಮವೆಂದು ಸೂಕ್ತ ಹೆಸರಿಟ್ಟು ಕಾರ್ಯತತ್ಪರಾಗಿದ್ದಾರೆ. ಬಿಜಾಪುರದಿಂದ ಕಲ್ಯಾಣದ ಈ ನೆಲಕ್ಕೆ ಬಂದು ಇವರು ಸಾಮಾಜಿಕ ಕ್ರಾಂತಿಗೈಯುತ್ತಿರುವುದು ಸಕಾಲಿಕವಾದುದಾಗಿದೆ. ಇವರ ಜನಜಾಗೃತಿ ಮತ್ತು ಸಮಾಜದ ಅಭಿವೃದ್ಧಿ ಕಾರ್ಯಗಳು ನಿರಂತರವಾಗಿ ನಡೆಯುತ್ತಿವೆ. ಇವರು ಸ್ವತ: ಕ್ರಿಯಾಶೀಲರು ಸಜ್ಜನ ಸಾತ್ವಿಕರು ಸಚ್ಚಾರಿತ್ರö್ಯರು ಆಗಿದ್ದಾರೆ. ತಮ್ಮ ಸಂಪರ್ಕದ ಎಲ್ಲರಿಗೂ ತಮ್ಮ ಈ ಮಾರ್ಗ ಅನುಸರಿಸಲು ಪ್ರೇರೇಪಿಸುತ್ತಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ಮಾತನಾಡಿದ ರತ್ನಕಾಂತ ಶಿವಯೋಗಿಗಳು ಮಾತನಾಡುತ್ತಾ, ಈ ಮಠದ ಬೆಳವಣಿಗೆಯಲ್ಲಿ ಅನೇಕರ ಅನನ್ಯವಾದ ಯೋಗದಾನವಿದೆ. ಈ ಮಠ ದೇಶಪ್ರೇಮ ಸಂಸ್ಕೃತಿಪ್ರೇಮ ಜಾಗೃತಿಗೊಳಿಸುವ ಮಠವಾಗಿದೆ. ಈ ಮಠದ ಒಡನಾಟಕ್ಕೆ ಬಂದವರು ತಾವು ಒಳ್ಳೆಯವರಾಗಿ ಬದಲಾಗುತ್ತಿದ್ದಾರಲ್ಲದೇ, ಬೇರೆಯವರಿಗೂ ಒಳ್ಳೆಯರನ್ನಾಗಿಸಲು ಪ್ರಯತ್ನಿಸುತ್ತಿದ್ದಾರೆ. ಈ ಮಠ ಆಧುನಿಕ ಕಲ್ಯಾಣದಲ್ಲಿ ಅದ್ಭುತ ಕಲ್ಯಾಣಕರ ಕೆಲಸ ಮಾಡುತ್ತಲಿದೆ. ಇದರ ಜನೋಪಯೋಗಿ ಕಾರ್ಯಗಳು ಸಮಾಜದಲ್ಲಿ ಸತ್ಪರಿಣಾಮ ಬೀರುವಂತಹವುಗಳಾಗಿವೆ. ಸರ್ವರ ಕಲ್ಯಾಣವಾಗಬೇಕೆಂಬುದು ಈ ಮಠದ ಸದಾಶಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ನಾಗನಾಥ ಚಾಮಲೆ ಇವರು ಮಾತನಾಡುತ್ತಾ ಈಗಿನ ಕಾಲದಲ್ಲಿ ಯುವಜನರು ಆಧುನಿಕ ಆಶಾಪಾಶಗಳಿಗೆ ಬಲಿಬಿದ್ದು, ತಮ್ಮ ಜೀವನ ದುರಂತವಾಗಿಸಿಕೊಳ್ಳುತ್ತಿದ್ದಾರೆ. ತಮ್ಮ 30 ವರ್ಷ ವಯಸ್ಸಿನ ಒಳಗಡೆಯೇ ಅಪಘಾತ ಆಘಾತಕ್ಕೊಳಪಟ್ಟು ಸಾವನ್ನಪ್ಪಿ ತಮ್ಮ ಮನೆತನವನ್ನು ಕಷ್ಠನಷ್ಠಕೀಡು ಮಾಡುತ್ತದ್ದಾರೆ. ಈಗಿನ ಯುವಕರು ದುಶ್ಚಟಗಳು, ದುರ್ವ್ಯವಹಾರಗಳಿದಾಗಿ ಇವರು ಮುಂದೆ ಬರಲು ಆಗುತ್ತಿಲ್ಲ. ಹಾಗಾಗಿ ಸಮಾಜದ ಹಿರಿಯ ಬಾಂಧವರು ತಮ್ಮ ಪೀಳಿಗೆಯ ದುಶ್ಚಟಗಳನ್ನು, ಹಿಂಸೆಗಳನ್ನು, ದ್ವೇಷಗಳನ್ನು ಅಜ್ಞಾನವನ್ನು ತೊಲಗಿಸಿಕೊಂಡು ಮನೆಯೊಳಗಡೆ ಮನೆ ಹೊರಗಡೆ ಶಾಸ್ತೊçÃಕ್ತ ಜೀವನ ನಡೆಸಬೇಕು ಎಂದರು.
ಅತಿಥಿಗಳಾಗಿ ಆಗಮಿಸಿದ ಸಾಹಿತಿ ರುಕ್ಮೊದ್ದೀನ್ ಇಸ್ಲಾಂಪೂರ ಅವರು ಮಾತನಾಡುತ್ತಾ, ರತ್ನಾಕರ ಶಿವಯೋಗಿಗಳು ಜ್ಞಾನಿಗಳನ್ನು ಸಾಧಕರನ್ನು ಕಲಾವಿದರನ್ನು ಅಪಾರವಾಗಿ ಪ್ರೀತಿಸುತ್ತಾರೆ ಗೌರವಿಸುತ್ತಾರೆ ಆಶ್ರಯವಿಯುತ್ತಾರೆ. ಇವರಿಂದಾಗಿ ಅನೇಕರು ದುಶ್ಚಟ ದುರ್ಭಾವ ತೊರೆದು ಸರಿ ದಾರಿ ಹಿಡಿದಿದ್ದಾರೆ. ಇಲ್ಲಿನ ಪರಿಸರ ಅಧ್ಯಾತ್ಮ ಸಾಧನೆಗೆ ಯೋಗ್ಯ ಸ್ಥಳವಾಗಿದೆತಿ ಈ ಪೀಠವಿರುವ ಸ್ಥಳದಲ್ಲಿ ಲಾಲಧರಿ ಶ್ರೀಗಳು ಕಠೀಣ ತಪಸ್ಸು ಗೈದಿದ್ದಾರೆ. ಈ ಅಂಬಿಗರ ಚೌಡಯ್ಯ ಮಠದ ಹತ್ತಿರದಲ್ಲೇ ಬಂದವರ ಓಣಿ ಎನ್ನುವ ಐತಿಹಾಸಿಕ ಸುಕ್ಷೇತ್ರವಿದೆ. ರತ್ನಕಾಂತ ಶಿವಯೋಗಿಗಳು ತಪೋನಿಷ್ಠರಾಗಿದ್ದಾರೆ ಅಧ್ಯಾಯನಶೀಲರಾಗಿದ್ದಾರೆ. ಇವರಲ್ಲಿ ಅಪರಿಮಿತವಾದ ಸಂಘಟನಾಶಕ್ತಿ ವಾಕ್ಶಕ್ತಿ ಯೋಗಶಕ್ತಿ ಇದೆ. ಇವರ ಈ ಕಲ್ಯಾಣ ಪರಿಸರದಲ್ಲಿ ನೆಲೆ ನಿಂತು ಸತ್ಕಾರ್ಯ ಗೈಯುತ್ತಿರುವುದು ಶ್ಲಾಘ್ಯವಾದುದಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ ಸಮಾಜ ಮುಖಂಡರಾದ ತುಕಾರಾಮ ರೊಡ್ಡೆ ರವರು ಮಾತನಾಡುತ್ತಾ, ವಾಲ್ಮಿಕಿ ಜನಾಂಗದವರು ಮುಂದೆ ಬರಬೇಕಾದರೆ ತಮ್ಮ ಮನೆಗಳನ್ನು ಸಂಸ್ಕಾರ ಕೇಂದ್ರಗಳನ್ನಾಗಿಸಿಕೊಳ್ಳಬೇಕು. ತಮ್ಮ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸಬೇಕು. ಮನೆಯಲ್ಲಿ ನಿರಂತರ ಪೂಜೆ, ಪುನಸ್ಕಾರಗಳು ಗೈಯಬೇಕು. ಮತ್ತು ಮನೆಯಲ್ಲಿ ಗ್ರಂಥಾಲಯ ಇಟ್ಟುಕೊಳ್ಳಬೇಕು. ಅಧ್ಯಾತ್ಮಿಕಕೇಂದ್ರಗಳಿಗೆ ಸತ್ಸಂಗಗಳಿಗೆ ಕಲಾಕೇಂದ್ರಗಳಿಗೆ ಶಿಕ್ಷಣಕೇಂದ್ರಗಳಿಗೆ ಹಾಜರಾಗಿ ಸದಾ ಸೇವೆ ಸಲ್ಲಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ರತ್ನಕಾಂತ ಶಿವಯೋಗಿಗಳಿಗೆ ಮುದ್ರಿಕಾ ಷಣ್ಮುಖಪ್ಪ ಬೊಕ್ಕೆ ದಂಪತಿಗಳಿ0ದ ಕಡಿಸಕ್ಕರೆಯಲ್ಲಿ ತುಲಾಭಾರ ನಡೆಯಿತು ಹಾಗೂ ವಿದ್ಯಾವತಿ ಸೋಮು ಪರಂಡೆ ದಂಪತಿಗಳಿ0ದ ಹಣದಿಂದ ತುಲಾಭಾರ ನಡೆಯಿತು.
ಕಾರ್ಯಕ್ರಮದಲ್ಲಿ ಖ್ಯಾತ ಸಂಗೀತ ಕಲಾವಿದರಾದ ಸುಭಾಷ ಕಲಖೋರಾ, ಮಾರುತಿ ಚಿಕನಾಗಾಂವ ವಾಡಿ ರವರಿಂದ ಸಂಗೀತ ಕಾರ್ಯಕ್ರಮ ನಡೆಯಿತು. ವಿದ್ಯಾರ್ಥಿಗಳಿಂದ ಕೋಲಾಟ, ನೃತ್ಯ ನಡೆದವು. ಕಾರ್ಯಕ್ರಮದಲ್ಲಿ ಉನ್ನತ ಶಿಕ್ಷಣದಲ್ಲಿ ಸಾಧನೆಗೈದ ಜಯಶ್ರೀ ಹಣಮಂತ ದೇವುಬಾ ಗದ್ಲೆಗಾಂವ(ಬಿ), ಅಕ್ಷತಾ ತುಕಾರಾಮ ರೊಡ್ಡೆ, ಮಹೇಶ್ವರಿ ಮಾಣಿಕರಾವ ಗೋರಮುಡೆರವರಿಗೆ ಸತ್ಕರಿಸಲಾಯಿತು, ಹಾಗೂ ವಿವಿಧ ಕ್ಷೇತ್ರದ ಸಾಧಕರನ್ನು, ಸೇವಕರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಸಸ್ತಾಪೂರದ ಬಂಗ್ಲಾದ ಯಲ್ಲಾಲಿಂಗ ಮಠದ ಮಾತಾ ಮಹಾದೇವಿ, ಹಳ್ಳಿಖೇಡ (ಕೆ) ವಾಲ್ಮೀಕಿರಾಮ ಮಹಾರಾಜ, ಕೌಡಿಯಾಳ (ಎಸ್)ನ ಭಾಗ್ಯವಂತಿ ದೇವಿ, ನಗರಸಭೆ ಅಧ್ಯಕ್ಷ ಸಗಿರೊದ್ದೀನ್,ಉಪಾಧ್ಯಕ್ಷರಾದ ಲಕ್ಷಿö್ಮಬಾಯಿ ಭೀಮಾಪುಲೆ, ಅಝರ ಅಲಿ, ಪಿಂಟು ಜಮಾದಾರ, ಸಿದ್ರಾಮ ದೇವಬಾ, ಪೀರಪ್ಪಾ ಶಣಮೆ, ಪ್ರಕಾಶ ನಾಗೂರೆ, ವಾಲ್ಮಿಕಿ ಕೊಂಡಗೆ, ಸಂಜುಕುಮಾರ ಸುಣಗಾರ, ಮಲ್ಲಿಕಾರ್ಜುನ ನರನಾಳ, ಬಾಬುರಾವ ಚೆಂಗಟಾ, ತಿಮ್ಮಣ್ಣಾ ಮುಸ್ತಾಪೂರ, ಅನೀಲಕುಮಾರ ಯರಬಾಗ, ದತ್ತು ಪದ್ಮೆ, ಗೋವಿಂದ ಚಾಮಲೆ, ಚನ್ನವೀರ ಜಮಾದಾರ, ಮಲ್ಲಿಕಾರ್ಜುನ ಬೊಕ್ಕೆ, ಗೋವಿಂದ ಗುರೂಜಿ, ದಿಲಿಪ ಗಿರಗಂಟೆ, ರಾಮಣ್ಣಾ ಮಂಠಾಳೆ, ಚಂದ್ರಕಾAತ ಮೇತ್ರೆ ಮುಂತಾದವರು
ಲಿಂಗಸುಗೂರಲ್ಲಿ ನೂತನ ನ್ಯಾಯಾಲಯದ ಕಟ್ಟಡ ಲೋಕಾರ್ಪಣೆ; ಇ-ಸೇವಾ ಕೇಂದ್ರದ ಕಟ್ಟಡಕ್ಕೆ ಶಂಕುಸ್ಥಾಪನೆ
ಮಾರ್ಚ್ ೨೨, ೨೩ ರಂದು ಮಹಾದಂಡನಾಯಕರ ಸ್ಮರಣೋತ್ಸವ ಸಚಿವ ಡಾ. ಶರಣಪ್ರಕಾಶ ಪಾಟೀಲರಿಂದ ಉದ್ಘಾಟನೆ: ಶ್ರೀಕಾಂತ ಸ್ವಾಮಿ
ಬೀದರ: ಬಸವ ತತ್ವವನ್ನು ನಾಡಿನಾದ್ಯಂತ ಪಸರಿಸಿ, ಜನಮನಕ್ಕೆ ತಲುಪಿಸಿದ ವಿಶ್ವದ ಪ್ರಥಮ ಮಹಿಳಾ ಮಹಾಜಗದ್ಗುರು ಬಸವಾತ್ಮಜೆ ಮಾತೆ ಮಹಾದೇವಿಯವರ ೬ನೇ ಸಂಸ್ಮರಣೆ ಹಾಗೂ ಲಿಂಗಾ...

-
ಹೈದರಾಬಾದ್ : ಇಂದು ಬೆಳಿಗ್ಗೆ ಬೀದರನಲ್ಲಿ ನಡೆದ ಎಟಿಎಂ ದರೋಡೆಕೋರರೆ ನಗರದ ಅಫ್ಜಲಗಂಜನಲ್ಲಿರುವ ರೋಷನ ಟ್ರಾವೆಲ್ ಕಛೆರಿಯಲ್ಲಿ ಪೊಲೀಸ್ ಮತ್ತು ದರೋಡೆಕೋರ ಮಧ್ಯೆ ಗುಂಡಿನ ...
-
ಬೀದರ್: ಎಟಿಎಂಗೆ ಹಣ ಹಾಕಲು ಬಂದ ಬ್ಯಾಂಕ್ ಸಿಬ್ಬಂದಿ ಮೇಲೆ ಹಾಡಹಗಲೇ ಗುಂಡಿನ ದಾಳಿ ನಡೆಸಿರುವ ಘಟನೆಯೊಂದು ಬೀದರ್ನ ಎಸ್ಬಿಐ ಮುಖ್ಯ ಕಚೇರಿ ಮುಂದೆ ಗುರುವಾರ ನಡೆದಿದೆ. ...
-
ಶೋಧವಾಣಿ ಜಾಲಲೋಕ ಹೈದರಾಬಾದ್ : ಸಂಘಟಿತ ಹೋರಾಟ ಇಂದಿನ ದಿನಮಾನದ ಜರೂರು ಹೊರನಾಡು ಗಡಿನಾಡಿನ ಕನ್ನಡಿಗರ ಹಿತಕಾಯಲು ಯಾರೂ ಇಲ್ಲವೆನ್ನುವ ಅನಾಥಪ್ರಜ್ಞೆ ಸರಿಯಲ್ಲ. ಭಾಷೆಯ...