ads

Search This Blog

Saturday, 26 April 2025

ಪ್ರೇಮ ಕಾಶ್ಮೀರದಲ್ಲಿ ರಕ್ತದೋಕುಳಿ; ಹಿಂದೂಗಳೇ ಟಾರ್ಗೆಟ...!


 ಪ್ರೇಮ ಕಾಶ್ಮೀರದಲ್ಲಿ ರಕ್ತದೋಕುಳಿ; ಹಿಂದೂಗಳೇ ಟಾರ್ಗೆಟ್.

ಭೂಲೋಕದ ಸ್ವರ್ಗವೆಂದೇ ಕರೆಯುವ ಜಮ್ಮು-ಕಾಶ್ಮೀರದ ಪೆಹಲ್ಗಾಮ್ ಸಮೀಪದ ಬೈಸರನ್ ಹುಲ್ಲುಗಾವಲಿನಲ್ಲಿ ಪಾಕ್ ಪ್ರಚೋದಿತ ಉಗ್ರಗಾಮಿಗಳು ಹಿಂದೂಗಳನ್ನು ಆಯ್ಕೆ ಮಾಡಿ ಗುಂಡಿಟ್ಟು ಕೊಂದಿದ್ದಾರೆ. ಅಷ್ಟು ಮಾತ್ರವಲ್ಲದೇ ಕಲ್ಮಾ ಪಠಿಸು ಎಂದು ಹೇಳುವ ಮೂಲಕ ಕಲ್ಮಾ ಬಾರದ ಮುಸ್ಲಿಮೇತರ ಹಿಂದೂಗಳನ್ನು ಅವರ ಪತ್ನಿ ಮಕ್ಕಳ ಕಣ್ಣೆದುರಲ್ಲೇ ಗುಂಡಿಟ್ಟು ಕೊಂದು ಶಾಂತಿದೂತರೆAದು ಹೇಳಿಕೊಳ್ಳುವವರು ಕ್ರೌರ್ಯದ ಅಟ್ಟಹಾಸ ಮೆರೆದಿದ್ದಾರೆ. ಉಗ್ರರ ದಾಳಿಯಲ್ಲಿ ೨೭ ಜನರು ಮೃತಪಟ್ಟಿದ್ದು, ೨೦ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಮೃತಪಟ್ಟವರಲ್ಲಿ ೨೫ ಜನರು ಹಿಂದೂಗಳಾಗಿದ್ದರೆ, ಈರ್ವರು ವಿದೇಶಿ ಪ್ರಜೆಗಳು ಸೇರಿದ್ದಾರೆ. ಪಹಲ್ಗಾಮ್ ಕಾಶ್ಮೀರ ಕಣಿವೆಯಲ್ಲಿ ಅತ್ಯಂತ ಜನಪ್ರಿಯ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಸಮ್ಮರ್ ಟೈಮ್‌ನಲ್ಲಂತೂ ಈ ಕಾಶ್ಮೀರಕ್ಕೆ ಭೇಟಿ ನೀಡೋ ಪ್ರವಾಸಿಗರ ಸಂಖ್ಯೆ ಅಧಿಕ. ಹೊಸದಾಗಿ ಮದುವೆಯಾದ ಜೋಡಿ ಹನಿಮೂನ್‌ಗೆ ಎಲ್ಲಿಗೆ ಹೋಗ್ತೀರಾ? ಎಂದು ಯಾರಾದ್ರು ಕೇಳಿದ್ರೆ, ಹಿಂದೆ ಮುಂದೆ ಯೋಚಿಸದೇ ಹೇಳೋ ಭಾರತದ ಏಕೈಕ ಸ್ಥಳ ಅಂದ್ರೆ ಅದು ಕಾಶ್ಮೀರ. ಪ್ರವಾಸಿಗರ ಸ್ವರ್ಗವಾಗಿದ್ದ ಕಾಶ್ಮೀರ ಕಳೆದ ಮಂಗಳವಾರ ಕೆಲವೇ ಕ್ಷಣಗಳಲ್ಲಿ ನರಕವಾಗಿ ಹೋಗಿತ್ತು. ಹಸಿರು ತುಂಬಿರೋ ಪಹಲ್ಗಾಮ್‌ನಲ್ಲಿ ರಕ್ತದೋಕಳಿ ನಡೆದಿತ್ತು. ಭಯೋತ್ಪಾದಕರು ಪ್ರವಾಸಿಗರ ನೆತ್ತರು ಹರಿಸಿದ್ದರು. ಏಪ್ರಿಲ್ ೨೨ರಂದು ಪಹಲ್ಗಾಮ್‌ನ ಬೈಸರನ್‌ಗೆ ೧೦೦೦ ಮಂದಿ ಪ್ರವಾಸಿಗರು ಆಗಮಿಸಿದ್ದರು ಎನ್ನಲಾಗಿದೆ. ಇಲ್ಲಿಗೆ ಯಾವುದೇ ವಾಹನಗಳು ಹೋಗೋದಿಲ್ಲ. ಒಂದು ನಡೆದುಕೊಂಡೇ ಹೋಗಬೇಕು. ಇಲ್ಲವೇ ಕುದುರೆ ಸವಾರಿ ಮೂಲಕ ಈ ಜಾಗಕ್ಕೆ ತಲುಪಬೇಕು. ಈ ಭೂಲೋಕದ ಸ್ವರ್ಗದಲ್ಲಿ ಪ್ರವಾಸಿಗರು ಸಂತೋಷದಿAದ ನಲಿಯುತ್ತಿರುವಾಗ, ಮಧ್ಯಾಹ್ನ ೧.೩೦ ರ ಸುಮಾರಿಗೆ ಭಯೋತ್ಪಾದಕರ ಗುಂಪೊAದು ಹೆಚ್ಚಿನ ಸಂಖ್ಯೆಯ ಪ್ರವಾಸಿಗರನ್ನು ಗುಂಡಿಕ್ಕಿ ಕೊಂದಾಗ ದುರಂತ ಸಂಭವಿಸಿತು. ಹಸಿರು ಹುಲ್ಲುಗಾವಲಿನಲ್ಲಿ ಕೆಂಪು ರಕ್ತದೋಕುಳಿ ಚೆಲ್ಲ್ಲಾಡಿತು. ಪ್ರವಾಸಕ್ಕೆ ತೆರಳಿದ್ದ ಮೂವರು ಕನ್ನಡಿಗರೂ ಉಗ್ರರ ಗುಂಡೇಟಿಗೆ ಬಲಿಯಾಗುವ ಮೂಲಕ ಕೆಲವೇ ಕ್ಷಣಗಳಲ್ಲಿ ಭೂಲೋಕದ ಸ್ವರ್ಗ ನರಕ ಸದೃಶವಾಯಿತು. ಪಹಲ್ಗಾಮ್‌ನಲ್ಲಿ ಭಯೋತ್ಪಾದಕರ ದಾಳಿಯಲ್ಲಿ ೨೬ ಪ್ರವಾಸಿಗರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಸೆಕ್ಯೂರಿಟಿ ಲ್ಯಾಪ್ಸ್ ಮತ್ತು ಇಂಟೆಲಿಜೆನ್ಸ್ ಫೇಲ್ಯೂಅರ್ ಆರೋಪಗಳು ಕೇಳಿಬಂದಿವೆ. ಆದರೆ, ಅಲ್ಲಿ ಉಗ್ರರು ಗುರಿ ಮಾಡಿದ್ದು ಕೇವಲ ಹಿಂದೂಗಳನ್ನು ಮಾತ್ರ ಅಂದರೆ ಮುಸ್ಲಿಮೇತರರನ್ನು ಎಂಬುದು ಟೀಕಾಕಾರರಿಗೆ ಕಾಣಿಸುತ್ತಿಲ್ಲವೇ? ಇದು ಅತ್ಯಂತ ದುರ್ದೈವದ ಸಂಗತಿ. ಇದರ ಹಿಂದಿನ ಸಂಕೀರ್ಣತೆಯನ್ನು ಅರ್ಥಮಾಡಿಕೊಳ್ಳದೆ ಟೀಕೆ ಮಾಡುವುದು ಸರಿಯಲ್ಲ. ಈ ಕೆಲಸವನ್ನು ಉನ್ನತ ಶಿಕ್ಷಣ, ಅನುಭವ ಮತ್ತು ಕೌಶಲ್ಯ ಹೊಂದಿರುವ ತಜ್ಞರೇ ಮಾಡುತ್ತಿದ್ದಾರೆ. ಸ್ಥಳೀಯರ ಸಹಕಾರವಿಲ್ಲದೇ ಈ ದಾಳಿ ನಡೆಯಲು ಸಾಧ್ಯವಿತ್ತೇ? ಎಂಬುದರ ಬಗ್ಗೆ ಗಮನ ಹರಿಸಬೇಕು. ಇಂಥ ಸಮರ್ಥನೆಯ ಹೇಳಿಕೆಗಳಿಂದಲೇ ದುರ್ಘಟನೆಗಳು ಮೇಲಿಂದ ಮೇಲೆ ನಡೆಯುತ್ತಿವೆ ಮತ್ತು ಮುಂದೆಯೂ ನಡೆಯುತ್ತವೆ ಎಂಬುದರಲ್ಲಿ ಅನುಮಾನವಿಲ್ಲ. ಜಮ್ಮು-ಕಾಶ್ಮೀರಕ್ಕೆ ನೀಡಿದ್ದ ಸಂವಿಧಾನದ ವಿಧಿ-೩೭೦ ವಿಶೇಷ ಸ್ಥಾನಮಾನ ತೆರವುಗೊಳಿಸಿದ ನಂತರ ಕಾಶ್ಮೀರ ಸಹಜ ಸ್ಥಿತಿಗೆ ಬಂದಿದೆ ಅಂತ ಅಂದುಕೊಳ್ಳುವಾಗಲೇ ಈ ಭೀಕರ ಘಟನೆ ನಡೆದಿದೆ. ಕೆಲವರು ಸೆಕ್ಯೂರಿಟಿ ಲ್ಯಾಪ್ಸ್ ಎಂದು ಆರೋಪಿಸಿದ್ದಾರೆ. ಇನ್ನೂ ಕೆಲವರು ಇಂಟಲಿಜೆನ್ಸ್ ಬ್ಯುರೋ ಫೇಲ್ ಆಗಿದೆ ಅಂತಿದ್ದಾರೆ. ಮತ್ತೆ ಕೆಲವರು ೩೭೦ ತೆರವುಗೊಳಿಸಿದ್ದರಿಂದಲೇ ಈ ಘಟನೆ ನಡೆದಿದೆ. ಇನ್ನೂ ಕೆಲವು ಬುದ್ಧಿ ಜೀವಿಗಳು `ಕೊಂದವರು ಮುಸ್ಲಿಮರಲ್ಲ, ಸತ್ತವರು ಹಿಂದುಗಳಲ್ಲ. ಕೊಂದವರು ಉಗ್ರರು, ಸತ್ತವರು ಅಮಾಯಕರು' ಎಂದರೆ, ಅಪ್ರಬುದ್ಧ ರಾಜಕಾರಣಿಯೊಬ್ಬರು ಉಗ್ರರು ಹಿಂದೂ ಎಂದು ಕೇಳಲೇ ಇಲ್ಲ ಎಂದು ವಾದಿಸುತ್ತ ತಮ್ಮ ಬುದ್ಧಿವಂತಿಕೆ ಪ್ರದರ್ಶಿಸುತ್ತಿದ್ದಾರೆ. ಆದರೆ, ಅಸಲಿಗೆ ಏನಾಗಿದೆ ಅನ್ನೋದರ ಸಂಪೂರ್ಣ ಮಾಹಿತಿಯೇ ಇವರಿಗಿಲ್ಲ. ಇವರು ಅಲ್ಲಿಗೆ ಹೋಗಿಲ್ಲ. ಏನೂ ಗೊತ್ತಿಲ್ಲದೇ ಕುಳಿತಲ್ಲೇ ಇವರು ಹೇಳುವುದೆಲ್ಲವೂ ಕೇವಲ ಪ್ರಚಾರಕ್ಕೆ ಮತ್ತು ತಮ್ಮ ತುಷ್ಠೀಕರಣವನ್ನು ಮುಂದುವರೆಸಲೋಸುಗ ಎಂಬುದು ಸ್ಪಷ್ಟ. ಪಹಲ್ಗಾಮ್ ಸೈನ್ಯಕ್ಕೆ ಮುಖ್ಯ ಕೇಂದ್ರ! ಕಾಶ್ಮೀರದ ಪಹಲ್ಗಾಮ್ ಸೈನ್ಯಕ್ಕೆ ಮುಖ್ಯ ಕೇಂದ್ರವಾಗಿದೆ. ಏಕೆಂದರೆ ಇಲ್ಲಿಂದ ಜೊಜಿಲಾ ಪಾಸ್‌ಗೆ ಹೋಗುವ ದಾರಿ ಶುರುವಾಗುತ್ತದೆ. ಈ ಮಾರ್ಗದ ಮೂಲಕ ಸೈನ್ಯವು ಲಡಾಖ್‌ನ ವಿವಿಧ ಭಾಗಗಳಿಗೆ ಶಸ್ತ್ರಾಸ್ತ್ರಗಳು, ಮದ್ದು-ಗುಂಡುಗಳು ಮತ್ತು ಇತರ ಸರಕುಗಳನ್ನು ಸಾಗಿಸುತ್ತದೆ. ಜೊತೆಗೆ, ಸೈನ್ಯವು ಬೈಸರನ್ ಹುಲ್ಲುಗಾವಲಿನಲ್ಲಿ ಒಂದು ಸಣ್ಣ ತಂಡವನ್ನು ನಿಯೋಜಿಸಿದೆ. ಈ ತಂಡವು ಅಲ್ಲಿನ ಕಾಡುಗಳಲ್ಲಿ ಭಯೋತ್ಪಾದಕರ ಚಲನವಲನಗಳ ಮೇಲೆ ನಿಗಾ ಇಡುತ್ತದೆ. ಆದರೆ, ಕಾಶ್ಮೀರದಲ್ಲಿ ಸರ್ಕಾರದ ಬದಲಾವಣೆಯಾದ ಮೇಲೆ ರಾಜ್ಯ ಸರ್ಕಾರ ಎಲ್ಲ ಕಡೆಯಲ್ಲೂ ತನ್ನ ಸೆಕ್ಯೂರಿಟಿಯನ್ನು ಕಡಿಮೆ ಮಾಡಿತ್ತು ಅನ್ನೋದು ಕೂಡ ಸತ್ಯ. ಇನ್ನು ಅಮರನಾಥ ಯಾತ್ರೆ ಸಮಯದಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ಭದ್ರತೆ ನಿಯೋಜನೆಗೊಳ್ಳುತ್ತದೆ. ಪಹಲ್ಗಾಮ್‌ನಲ್ಲಿ ಇಷ್ಟು ಭದ್ರತೆಯ ನಡುವೆಯೂ ಕೂಡ ಈ ಹಿಂದೆಯೂ ದಾಳಿಯಾಗಿತ್ತು. ೨೦೦೦ರ ದಾಳಿಯೊಂದರಲ್ಲಿ ೩೦ ಜನರು ಸಾವನ್ನಪ್ಪಿದರು. ೬೦ ಜನರು ಗಾಯಗೊಂಡಿದ್ದರು. ೨೦೦೨ರಲ್ಲಿ ನಡೆದ ಮತ್ತೊಂದು ದಾಳಿಯಲ್ಲಿ ೧೧ ಜನರು ಮೃತಪಟ್ಟರು. ೨೦೧೭ರಲ್ಲಿ ಅಮರನಾಥ ಯಾತ್ರೆಯಿಂದ ವಾಪಸಾಗುತ್ತಿದ್ದ ೮ ಯಾತ್ರಿಕರ ಮೇಲೆ ಭಯೋತ್ಪಾದಕರು ದಾಳಿ ಮಾಡಿ ಕೊಂದಿದ್ದರು. ಕಳೆದ ವರ್ಷ ಉಗ್ರರ ಗುಂಡಿನ ದಾಳಿಯಲ್ಲಿ ಪ್ರವಾಸಿ ದಂಪತಿಗಳು ಗಾಯಗೊಂಡಿದ್ದರು. ೧೯೯೫ರಲ್ಲಿ ಆರು ವಿದೇಶಿ ಪ್ರವಾಸಿಗರನ್ನು ಅಪಹರಿಸಲಾಗಿತ್ತು. ಒಬ್ಬ ನಾರ್ವೇಜಿಯನ್‌ನ್ನು ಕೊಲ್ಲಲಾಗಿತ್ತು. ಉಳಿದವರು ಪತ್ತೆಯಾಗಲಿಲ್ಲ. ೩೭೦ ತೆರವುಗೊಳಿಸಿದ ಮೇಲೆ ನಡೆದಿದೆ ಎನ್ನುವವರಿಗೆ ಈ ಎಲ್ಲ ಘಟನೆಗಳು ನಡೆಯುವಾಗ ೩೭೦ ಅಸ್ತಿತ್ವದಲ್ಲಿತ್ತು ಎಂಬುದನ್ನು ತಿಳಿದುಕೊಳ್ಳಬೇಕು. ವಾಸ್ತವದಲ್ಲಿ ೩೭೦ ತೆರವುಗೊಳಿಸಿದ ನಂತರ ರಾಷ್ಟçಪತಿ ಆಡಳಿತ ಹೇರಿ, ಉಗ್ರ ಚಟುವಟಿಕೆಗಳನ್ನು ಸಾಕಷ್ಟು ನಿಯಂತ್ರಣಕ್ಕೆ ತರಲಾಗಿತ್ತು. ಈ ಸಂದರ್ಭದಲ್ಲಿ ನಾಗರಿಕರ ಸಾವು ನೋವುಗಳು ಸಂಭವಿಸಲಿಲ್ಲ. ಬದಲಾಗಿ ನಾಲ್ಕು ವರ್ಷಗಳ ಅವಧಿಯಲ್ಲಿ ೮೪೩ ಉಗ್ರರನ್ನು ರಕ್ಷಣಾ ಪಡೆಯವರು ಹೊಡೆದುರುಳಿಸಿದ್ದರೆ, ನಾಲ್ಕು ವರ್ಷಗಳಲ್ಲಿ ೨೨ ಯೋಧರೂ ಹುತಾತ್ಮರಾಗಿ, ಕಾಶ್ಮೀರದ ಸುರಕ್ಷೆಯನ್ನು ಕಾಪಾಡಿದ್ದರು. ಕಾಶ್ಮೀರದಲ್ಲಿ ಸಂಪೂರ್ಣ ಶಾಂತಿ ನೆಲೆಸಲು ಕನಿಷ್ಠ ೧೦ರಿಂದ ೧೫ ವರ್ಷಗಳ ಅವಧಿ ಬೇಕಾಗಬಹುದೆಂದು ಅಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಿದ ತಜ್ಞರು ಅಂದಾಜಿಸಿದ್ದರು. ಅಲ್ಲಿಯವರೆಗೂ ಚುನಾಯಿತ ಸರ್ಕಾರ ಅಗತ್ಯವಿಲ್ಲ. ಭದ್ರತಾ ಪಡೆಗಳು ಮತ್ತು ರಾಷ್ಟçಪತಿ ಆಡಳಿತವೇ ಇರುವುದರಿಂದ ೧೫ ವರ್ಷಗಳಲ್ಲಿ ಜನರ ಮನಃಸ್ಥಿತಿ ಬದಲಾಗಬಹುದು. ಅಭಿವೃದ್ಧಿಗೆ ದಾರಿಮಾಡಿಕೊಟ್ಟು ಪ್ರವಾಸೋದ್ಯಮದ ಸ್ವರ್ಗವನ್ನು ಅಲ್ಲಿ ಸೃಷ್ಟಿಸಬಹುದು. ಕಳೆದ ಹಲವು ದಶಕಗಳಿಂದ ನೊಂದು ಬೆಂದ ಕಾಶ್ಮೀರಿಗಳಿಗೆ ಕೈತುಂಬ ಉದ್ಯೋಗ ದೊರೆಯುವಂತಾಗಿ, ಅವರ ಆರ್ಥಿಕ ಸ್ಥಿತಿಯೂ ಸುಧಾರಣೆಯೊಂದಿಗೆ ಉಗ್ರರ ಆಮಿಷಗಳಿಗೆ ಸುಲಭವಾಗಿ ಬಲಿಬೀಳುವದಿಲ್ಲ ಎಂಬುದು ಲೆಕ್ಕಾಚಾರವಾಗಿತ್ತು. ಈ ಬಗ್ಗೆ ಅಂತರ್‌ರಾಷ್ಟಿçÃಯ ತಂಡವೊAದು ಕೂಡ ಸಮೀಕ್ಷೆ ನಡೆಸಿ, ಜನರ ಮಾನಸಿಕತೆ ಬದಲಾಯಸುವುದು ತುಂಬ ಅಗತ್ಯ. ಭಾರತ ವಿರೋಧಿ ಭಾವನೆ ನೆಲೆಯೂರಿದೆ. ಅದು ಮೊದಲು ತೊಲಗಿದಾಗ ಕಾಶ್ಮೀರ ಭೂಲೋಕದ ಸ್ವರ್ಗವಾಗುತ್ತದೆ ಎಂದು ತಂಡ ಅಭಿಪ್ರಾಯಪಟ್ಟಿತ್ತು. ಧ್ವದಜ ಹಾರಿಸುವುದೂ ಕಷ್ಟ ಹೌದು ಒಂದು ಕಾಲಕ್ಕೆ ಅಲ್ಲಿ ಭಾರತದ ಧ್ವಜ ಹಾರಿಸುವುದು ಕಷ್ಟವಾಗಿತ್ತು. ನಿತ್ಯ ಗುಂಡುಗಳ ಗರ್ಜನೆ, ರಕ್ತದೋಕುಳಿಯಿಂದ ಕಾಶ್ಮೀರ ರಕ್ತಸಿಕ್ತವಾಗಿತ್ತು. ಅದನ್ನು ಹೋಗಲಾಡಿಸಲು ಜನರ ಮನಃಸ್ಥಿತಿ ಬದಲಾಗಲು ಸಾಕಷ್ಟು ಕಾಲಾವಧಿ ಅಗತ್ಯ ಎಂಬುದು ಸತ್ಯ. ೩೭೦ ತೆರವುಗೊಳಿಸಿದ ನಂತರ ವಾಸ್ತವದಲ್ಲಿ ಕಾಶ್ಮೀರದಲ್ಲಿ ಶಾಂತಿ ನೆಲೆಸಿತ್ತು. ಶಾಲಾ-ಕಾಲೆಜುಗಳು, ವ್ಯಾಪಾರ ವಹಿವಾಟುಗಳು ಆರಂಭವಾಗಿದ್ದವು. ಪ್ರವಾಸೋದ್ಯಮವೇ ಪ್ರಮುಖ ಆದಾಯವಾಗಿರುವ ಕಾಶ್ಮೀರಕ್ಕೆ ಸಾಕಷ್ಟು ಪ್ರವಾಸಿಗರು ಭೇಟಿ ನೀಡತೊಡಗಿದ್ದರು. ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಸ್ವಾತಂತ್ರೊö್ಯÃತ್ಸವ, ಗಣರಾಜ್ಯೋತ್ಸವ ಧ್ವಜಾರೋಹಣ ಮತ್ತು ಜನಗಣ ಮನ ಹಾಡುವಂಥ ಪರಿಸ್ಥಿತಿ ನಿರ್ಮಾಣವಾಗಿದ್ದು ನಿಜ. ಇನ್ನೂ ಸಂಪೂರ್ಣ ಸಹಜ ಸ್ಥಿತಿಗೆ ಬರುವ ಮೊದಲೇ ಇಷ್ಟು ಬೇಗ ಅಳಿಸಿಹೋಗುತ್ತದೆಂದು ಯಾರೂ ಅಂದುಕೊAಡಿರಲಿಲ್ಲ. ಇದಕ್ಕೆ ಪ್ರಮುಖ ಕಾರಣ ರಾಜಕಾರಣಿಗಳು. ಅವರಿಗೆ ಅಧಿಕಾರವಿಲ್ಲದೇ ಜೀವಿಸಲಾರರು. ಕಾಶ್ಮೀರ ಹೊತ್ತಿ ಉರಿಯುವಾಗ ವಿದೇಶಗಳಿಗೆ ಹಾರಿ, ಜನರನ್ನು ಉರಿಯಲು ಬಿಟ್ಟು ಹೋದವರು, ೩೭೦ ತೆರವುಗೊಳಿಸಿದ ನಂತರ ಕಾಶ್ಮೀರದಲ್ಲಿ ಚುನಾವಣೆ ನಡೆಸಿ ಎಂದು ದುಂಬಾಲು ಬಿದ್ದರು. ಚುನಾವಣೆ ನಡೆಸಿ ಅಲ್ಲಿ ಪ್ರಜಾಪ್ರಭುತ್ವದ ಸ್ಥಾಪನೆಗೆ ಸರ್ಕಾರ ಬದ್ಧವಾಗಿದೆ ಎಂದು ಅನೇಕ ಬಾರಿ ಭರವಸೆ ನೀಡಿದ್ದರೂ, ಕೆಲವರು ನ್ಯಾಯಾಲಯದ ಮೊರೆ ಹೋದರು. ಇನ್ನು ನಮ್ಮ ನ್ಯಾಯಾಲಯ ಚುನಾವಣೆ ಯಾವಾಗ ನಡೆಸುತ್ತೀರಿ? ಎಂದು ಮೇಲಿಂದ ಮೇಲೆ ಚಾಟಿ ಬೀಸತೊಡಗಿದಾಗ, ಕೊನೆಗೂ ಕಾಶ್ಮೀರದಲ್ಲಿ ಚುನಾವಣೆ ನಡೆದು ಚುನಾಯಿತ ಸರ್ಕಾರ ಅಧಿಕಾರಕ್ಕೆ ಬಂದಿತು. ಈ ಚುನಾಯಿತ ಸರ್ಕಾರ ಅಧಿಕಾರಕ್ಕೆ ಬಂದ ನಂತರವೇ ಭಯದ ವಾತಾವರಣ ನಿವಾರಣೆಯ ಹೆಸರಿನಲ್ಲಿ ಸರ್ಕಾರ ಭದ್ರತಾ ಪಡೆಗಳನ್ನು ಕಡಿತಗೊಳಿಸಿತು. ಅದರ ಪರಿಣಾಮವೇ ಇಂದು ಮತ್ತೆ ರಕ್ತದೋಕುಳಿ ಮರುಕಳಿಸಿದೆ. ಎಲ್ಲರೂ ಕೆಟ್ಟವರಲ್ಲ ಕಾಶ್ಮೀರದಲ್ಲಿರುವ ಮುಸ್ಲಿಮರೆಲ್ಲರೂ ಮತಾಂಧರು ಎಂದು ಹೇಳುವಂತಿಲ್ಲ. ನಿರಂತರ ಉಗ್ರ ಚಟುವಟಿಕೆಗಳಿಂದ ಅಲ್ಲಿ ನಿರುದ್ಯೋಗ ಸಮಸ್ಯೆ ಬಹುದೊಡ್ಡ ಪ್ರಮಾಣದಲ್ಲಿ ತಾಂಡವವಾಡುತ್ತಿದೆ. ಹೀಗಾಗಿ ಕೆಲವರು ಉಗ್ರರ ಆಮಿಷಗಳಿಗೆ ಮತ್ತು ಬೆದರಿಕೆಗಳಿಗೆ ಒಳಗಾಗುವ ಸಾಧ್ಯತೆ ಇಲ್ಲದಿಲ್ಲ. ಪೆಹಲ್ಗಾಮ್ ಘಟನೆಯಲ್ಲಿ ಪ್ರವಾಸಿಗರ ರಕ್ಷಣೆಗೆ ಉಗ್ರರಿಂದ ಬಂದೂಕು ಕಿತ್ತುಕೊಳ್ಳಲು ಹೋಗಿ ಘೋಡಾವಾಲಾ ಮುಸ್ಲಿಮ್ ಯುವಕನೊಬ್ಬ ಪ್ರಾಣ ಕಳೆದುಕೊಂಡ ಘಟನೆಯೇ ಇದಕ್ಕೆ ಸಾಕ್ಷಿ. ಈ ಜನರಿಗೆ ಉಪಜೀವನಕ್ಕೆ ಉದ್ಯೋಗ ಬಹಳ ಮುಖ್ಯ ಎಂಬುದು ಇಲ್ಲಿ ಸ್ಪಷ್ಟವಾಗುತ್ತದೆ. ಆದರೆ, ಕಾಶ್ಮೀರದಲ್ಲಿ ಆಡಳಿತ ಸೂತ್ರ ಹಿಡಿದಿರುವವರಿಗೆ ಇದೆಲ್ಲಕ್ಕಿಂತ ಮುಖ್ಯ ಅಧಿಕಾರ ಮಾತ್ರ. ಅಲ್ಲಿ ಶಾಂತಿ ನೆಲೆಸುವ ಬಗ್ಗೆ ಅವರೆಂದೂ ತಲೆಕೆಡೆÀಸಿಕೊಂಡಿಲ್ಲ. ಬದಲಾಗಿ ಮೇಲಿಂದ ಮೇಲೆ ಅಲ್ಲಿನ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ವಿವಾದಾತ್ಮಕ ಹೇಳಿಕೆಗಳ ಮೂಲಕ ತಮ್ಮ ಬೇಳೆ ಬೇಯಿಸಿಕೊಳ್ಳಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು. ೩೭೦ನೇ ವಿಧಿ ರದ್ದತಿಯ ನಂತರ, ಜಮ್ಮು ಮತ್ತು ಕಾಶ್ಮೀರದಲ್ಲಿ ಭದ್ರತಾ ಪಡೆಗಳು ಮತ್ತು ಗುಪ್ತಚರ ಸಂಸ್ಥೆಗಳ ಸನ್ನದ್ಧತೆಯನ್ನು ಪರಿಶೀಲಿಸಲು ಏಪ್ರಿಲ್ ೮ ರಂದು ಅಮಿತ್ ಶಾ ಶ್ರೀನಗರದಲ್ಲಿ ಉನ್ನತ ಮಟ್ಟದ ಭದ್ರತಾ ಸಭೆ ಕೂಡ ನಡೆಸಿದ್ದರು. ಈ ಸಭೆಯಲ್ಲಿ ಕೇಂದ್ರ ಗೃಹ ಕಾರ್ಯದರ್ಶಿ ಗೋವಿಂದ್ ಮೋಹನ್, ಗುಪ್ತಚರ ಬ್ಯೂರೋ ನಿರ್ದೇಶಕ ತಪನ್ ದೇಕಾ, ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಮತ್ತು ಡಿಜಿಪಿ ಪ್ರಭಾತ್ ಭಾಗವಹಿಸಿದ್ದರು. ಕಾಶ್ಮೀರಕ್ಕೆ ಬರುವ ಪ್ರವಾಸಿಗರಿಗೆ ಯಾವುದೇ ತೊಂದರೆಯಾಗದAತೆ ಕ್ರಮ ವಹಿಸಲು ಈ ಸಭೆಯಲ್ಲಿ ಚರ್ಚೆಯಾಗಿತ್ತು. ಇಂಟೆಲಿಜೆನ್ಸ್ ಫೇಲ್ಯೂರ್ ಎಂಬ ಪದವನ್ನು ಸುಲಭವಾಗಿ ಬಳಸಿ ಟೀಕೆ ಮಾಡುವವರಿಗೆ ಇದು ಉತ್ತರವಾಗಿದೆ. ಗುಪ್ತಚರ ಕಾರ್ಯಾಚರಣೆ ಎಷ್ಟು ಸಂಕೀರ್ಣ ಎಂಬುದನ್ನು ವಿವರಿಸುತ್ತದೆ. ಇದನ್ನು ಸರಿಯಾಗಿ ಅರ್ಥಮಾಡಿಕೊಳ್ಳದೆ ಯಾರೂ ವೈಫಲ್ಯ ಎಂದು ಕರೆಯಲಾಗದು. ಇಸ್ರೇಲ್‌ನಂಥ ಗುಪ್ತದಳ ವಿಶ್ವದಲ್ಲೇ ಇಲ್ಲ ಎಂಬ ಮಾತಿದೆ. ಆದರೂ ಅಲ್ಲಿ ಹಮಾಸ್ ದಾಳಿ ನಡೆಸಿದ್ದು ಹೇಗೆ? ಗುಪ್ತಚರ ಸಂಗ್ರಹಣೆಯು ವಿಜ್ಞಾನವಲ್ಲ, ಬದಲಿಗೆ ಊಹೆ ಮತ್ತು ತಾಂತ್ರಿಕ ಕೌಶಲ್ಯ ಆಧಾರಿತವಾಗಿದೆ. ಒಂದು ದಾಳಿಯನ್ನು ತಡೆಯಲು ಎಲ್ಲಾ ತುಣುಕುಗಳನ್ನು ಸರಿಯಾದ ಸಮಯದಲ್ಲಿ ಸರಿಯಾಗಿ ಜೋಡಿಸಬೇಕು. ಆದರೆ, ೫೦೦-೬೦೦ ದಾಳಿಗಳನ್ನು ತಡೆದರೂ, ಒಂದು ದಾಳಿ ಯಶಸ್ವಿಯಾಗದಿದ್ರೆ ಅದು `ವೈಫಲ್ಯ' ಎಂದು ನಮ್ಮ ಪ್ರಬುದ್ಧ ಜೀವಿಗಳು ಕರೆಯುತ್ತಾರೆ. ಪಾಕಿಸ್ತಾನ ವಿರುದ್ಧ ಈಗಾಗಲೇ ಕೇಂದ್ರ ಸರ್ಕಾರ ಅನೇಕ ಕ್ರಮಗಳನ್ನು ಘೋಷಿಸಿದೆ. ಸಾಧ್ಯವಾದರೆ, ದಾಳಿ ನಡೆಸಲೂ ಸಿದ್ಧತೆಗಳನ್ನು ಮಾಡಿಕೊಂಡಿದೆ. ಬಹುತೇಕ ವಿಪಕ್ಷಗಳು ಸರ್ಕಾರದ ಕ್ರಮಗಳಿಗೆ ತಮ್ಮ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದದ್ರೂ, ಅಪ್ರಬುದ್ಧ ನಾಯಕರಿನ್ನೂ ತಮ್ಮ ತುಷ್ಠೀಕರಣದ ಹೇಳಿಕೆಗಳ ಮೂಲಕ ಗೊಂದಲ ಉಂಟು ಮಾಡುತ್ತಿರುವುದು ದೇಶದ ಸುರಕ್ಷೆ ದೃಷ್ಟಿಯಿಂದ ಒಳ್ಳೆಯದಲ್ಲ ಎಂಬುದನ್ನು ಅರಿತುಕೊಳ್ಳಬೇಕಾಗಿದೆ. ಇಸ್ರೇಲಿನಿಂದ ಭಾರತೀಯ ರಾಜಕಾರಣಿಗಳು ಪಾಠ ಕಲಿಯಬೇಕು. ಇಲ್ಲವಾದರೆ, ಒಂದು ದಿನ ಯಾರು ಬೇಕಾದರೂ ಉಗ್ರರಿಗೆ ಬಲಿಯಾಗಬಹುದು. ಅವರಿಗೆ ತಮ್ಮವರೆಂದು ಯಾರೂ ಇಲ್ಲ ಎಂಬುದನ್ನು ಅರಿಯಬೇಕಿದೆ.
-ಎಸ್ ಆರ್. ಮಣೂರ ಹಿರಿಯ ಪತ್ರಕರ್ತರು

Friday, 21 March 2025

ಮಾರ್ಚ್ ೨೨, ೨೩ ರಂದು ಮಹಾದಂಡನಾಯಕರ ಸ್ಮರಣೋತ್ಸವ ಸಚಿವ ಡಾ. ಶರಣಪ್ರಕಾಶ ಪಾಟೀಲರಿಂದ ಉದ್ಘಾಟನೆ: ಶ್ರೀಕಾಂತ ಸ್ವಾಮಿ

 

ಬೀದರ: ಬಸವ ತತ್ವವನ್ನು ನಾಡಿನಾದ್ಯಂತ ಪಸರಿಸಿ, ಜನಮನಕ್ಕೆ ತಲುಪಿಸಿದ ವಿಶ್ವದ ಪ್ರಥಮ ಮಹಿಳಾ ಮಹಾಜಗದ್ಗುರು ಬಸವಾತ್ಮಜೆ ಮಾತೆ ಮಹಾದೇವಿಯವರ ೬ನೇ ಸಂಸ್ಮರಣೆ ಹಾಗೂ ಲಿಂಗಾನ0ದ ಸ್ವಾಮಿಗಳ ಸ್ಮರಣೆ ಪ್ರಯುಕ್ತ ನಗರದಲ್ಲಿ ಆಯೋಜಿಸಿದ ಮಹಾದಂಡನಾಯಕರ ಸ್ಮರಣೋತ್ಸವ ಕಾರ್ಯಕ್ರಮವನ್ನು ವೈದ್ಯಕೀಯ ಸಚಿವ ಡಾ. ಶರಣಪ್ರಕಾಶ ಪಾಟೀಲ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ ಎಂದು ಮಹಾದಂಡನಾಯಕರ ಸ್ಮರಣೋತ್ಸವದ ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಶ್ರೀಕಾಂತ ಸ್ವಾಮಿ ತಿಳಿಸಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಶುಕ್ರವಾರ ಕರೆದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ರಾಷ್ಟ್ರೀಯ ಬಸವ ದಳ, ಲಿಂಗಾಯತ ಧರ್ಮ ಮಹಾಸಭಾ, ಲಿಂಗಾಯತ ಸಮಾಜ ಮತ್ತು ಕ್ರಾಂತಿ ಗಂಗೋತ್ರಿ ಅಕ್ಕನಾಗಲಾಂಬಿಕಾ ಮಹಿಳಾ ಗಣದ ಸಂಯುಕ್ತಾಶ್ರಯದಲ್ಲಿ ಮಾರ್ಚ್ ೨೨ ಮತ್ತು ೨೩ ರಂದು ಎರಡು ದಿವಸಗಳ ಕಾಲ ನಗರದ ಪಾಪನಾಶ ದೇವಸ್ಥಾನದ ಸಮೀಪವಿರುವ ಸ್ವಾಮಿ ಸಮರ್ಥ ಸಭಾಮಂಟಪದಲ್ಲಿ ಮಹಾದಂಡನಾಯಕರ ಸ್ಮರಣೋತ್ಸವ ಆಯೋಜಿಸಲಾಗಿದೆ.
ಲಿಂಗಾಯತ ಧರ್ಮಕ್ಕೆ ಮಾತಾಜಿ ಕೊಡುಗೆ ಅಪಾರ. ದೇಶದಾದ್ಯಂತ ನೂರಾರು ಬಸವ ಧರ್ಮ ಸಮ್ಮೇಳನ, ಲಿಂಗಾಯತ ಧರ್ಮ ಸಮ್ಮೇಳನ, ಶರಣ ಮೇಳ, ಕಲ್ಯಾಣ ಪರ್ವ, ಗಣಮೇಳ, ಬಸವೋತ್ಸವ, ಶರಣೋತ್ಸವ ಆಯೋಜಿಸಿ ಗೌಣವಾಗಿದ್ದ ಬಸವಾದಿ ಶರಣರ ಸಂದೇಶಗಳನ್ನು ಜನಸಾಮಾನ್ಯರಲ್ಲಿ ಬಿತ್ತಿ ಬೆಳಗಿದ್ದಾರೆ ಎಂದರು.
ರಾಷ್ಟ್ರೀಯ ಬಸವ ದಳದ ಕೇಂದ್ರ ಸಮಿತಿ ಅಧ್ಯಕ್ಷರಾದ ಪೂಜ್ಯ ಶ್ರೀ ಜಗದ್ಗುರು ಡಾ. ಚನ್ನಬಸವಾನಂದ ಸ್ವಾಮೀಜಿಯವರ ದಿವ್ಯ ನೇತೃತ್ವದಲ್ಲಿ ನಡೆಯಲಿದ್ದು, ಮಾರ್ಚ್ ೨೨ ರಂದು ಬೆ. ೧೦-೩೦ಕ್ಕೆ ಉದ್ಘಾಟನಾ ಸಮಾರಂಭ ಜರುಗಲಿದೆ. ಸಾನಿಧ್ಯವನ್ನು ಹುಲಸೂರಿನ ಪೂಜ್ಯ ಶ್ರೀ ಡಾ. ಶಿವಾನಂದ ಮಹಾಸ್ವಾಮಿಗಳು, ಬಸವಕಲ್ಯಾಣದ ಪೂಜ್ಯ ಸಿದ್ಧರಾಮ ಬೆಲ್ದಾಳ ಶರಣರು, ರಾಮಕೃಷ್ಣ ವಿವೇಕಾನಂದ ಆಶ್ರಮದ ಪೂಜ್ಯ ಜ್ಯೋತಿರ್ಮಯಾನಂದ ಸ್ವಾಮೀಜಿ, ಪೂಜ್ಯ ಓಂಕಾರೇಶ್ವರ ಸ್ವಾಮೀಜಿ ವಹಿಸಲಿದ್ದು, ಸಮ್ಮುಖವನ್ನು ಬಸವ ಮಂಟಪದ ಪೂಜ್ಯ ಮಾತೆ ಸತ್ಯಾದೇವಿ ವಹಿಸಲಿದ್ದಾರೆ. ವೈದ್ಯಕೀಯ ಸಚಿವ ಡಾ. ಶರಣಪ್ರಕಾಶ ಪಾಟೀಲ ಉದ್ಘಾಟಿಸಲಿದ್ದಾರೆ. ಧ್ವಜಾರೋಹಣವನ್ನು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪೌರಾಡಳಿತ ಮತ್ತು ಹಜ್ ಸಚಿವ ರಹಿಂಖಾನ್, ಸಂಸದ ಸಾಗರ ಖಂಡ್ರೆ ಆಗಮಿಸಲಿದ್ದಾರೆ. ಅಧ್ಯಕ್ಷತೆಯನ್ನು ಸ್ವಾಗತ ಸಮಿತಿ ಅಧ್ಯಕ್ಷರು ಹಾಗೂ ಶಾಸಕರಾದ ಡಾ. ಶೈಲೇಂದ್ರ ಬೆಲ್ದಾಳೆ ವಹಿಸಲಿದ್ದಾರೆ. ಅತಿಥಿಗಳಾಗಿ ಜಿಲ್ಲೆಯ ಎಲ್ಲಾ ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರು ಆಗಮಿಸಲಿದ್ದಾರೆ. ಗುರುಬಸವ ಪೂಜೆಯನ್ನು ದಾಸೋಹ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಜೈಲರ್ ಮಾಡಲಿದ್ದಾರೆ. ಪ್ರಮುಖ ಉಪಸ್ಥಿತಿಯನ್ನು ವಿವಿಧ ರಾಜ್ಯಗಳ ಹಾಗೂ ಜಿಲ್ಲೆಗಳ ಪ್ರಮುಖರು ವಹಿಸಲಿದ್ದಾರೆ.
ಮಾರ್ಚ್ ೨೨ ರಂದು ಸಾ. ೪ ಗಂಟೆಗೆ ಅನುಭಾವಗೋಷ್ಠಿ-೧ ನಡೆಯಲಿದೆ. ಉದ್ಘಾಟನೆಯನ್ನು ಚಿಕ್ಕಮಗಳೂರಿನ ಪೂಜ್ಯ ಶ್ರೀ ಜಯಬಸವಾನಂದ ಸ್ವಾಮೀಜಿ ಮಾಡಲಿದ್ದಾರೆ. ಸಮ್ಮುಖವನ್ನು ಧುಮ್ಮನಸೂರಿನ ಮುಕ್ತಿನಾಥ ಮಠದ ಶಂಕರಲಿ0ಗ ಸ್ವಾಮಿಗಳು, ಉದಗೀರದ ಹಾವಗಿಸ್ವಾಮಿ ಮಠದ ಪೂಜ್ಯ ಶಂಭುಲಿAಗೇಶ್ವರ ಸ್ವಾಮೀಜಿ, ಹಿರನಾಗಾಂವ ಮಠದ ಪೂಜ್ಯ ಜಯೇಂದ್ರ ಸ್ವಾಮಿಗಳು, ಬೆಳಗಾವಿಯ ಪೂಜ್ಯ ಅಕ್ಕನಾಗಲಾಂಬಿಕಾ ಮಾತಾಜಿ ವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ಬೆಂಗಳೂರಿನ ನಿ. ಪ್ರಾಧ್ಯಾಪಕ ಹಾಗೂ ಚಿಂತಕ ಶ್ರೀಶೈಲ ಮಸೂತೆ ವಹಿಸಲಿದ್ದಾರೆ. ಉಪನ್ಯಾಸವನ್ನು ಶಹಾಪುರದ ಬಸವ ತತ್ವ ಚಿಂತಕ ವಿಶ್ವಾರಾಧ್ಯ ಸತ್ಯಂಪೇಟೆ, ಶಿರಗುಪ್ಪದ ಚಿಂತಕ ಬಸವರಾಜಪ್ಪ ವೆಂಕಟಾಪುರ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ನಿ.ಕೆಎಎಸ್ ಅಧಿಕಾರಿ ಎಸ್.ದಿವಾಕರ್, ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ, ಡಾ. ಗುರಮ್ಮಾ ಸಿದ್ದಾರೆಡ್ಡಿ, ಶಕುಂತಲಾ ಬೆಲ್ದಾಳೆ ಸೇರಿದಂತೆ ಜಿಲ್ಲೆಯ ಪ್ರಮುಖರು ಆಗಮಿಸಲಿದ್ದಾರೆ. ಗುರುಬಸವ ಪೂಜೆಯನ್ನು ಹಾವಶೆಟ್ಟಿ ಪಾಟೀಲ ಮಾಡಲಿದ್ದಾರೆ ಎಂದರು.
ಮಾರ್ಚ್ ೨೩ ರಂದು ಬೆ. ೯ಗಂಟೆಗೆ ನಗರದ ಬಸವೇಶ್ವರ ವೃತ್ತದಿಂದ ವಚನ ಸಾಹಿತ್ಯದ ಹಾಗೂ ಮಹಾದಂಡನಾಯಕರ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಲಿದೆ. ಮೆರವಣಿಗೆಗೆ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಚಾಲನೆ ನೀಡಲಿದ್ದು, ಧ್ವಜಾರೋಹಣ ಹಿರಿಯ ಶರಣ ಕಾಶಿನಾಥ ಪಾಟೀಲ ಮಾಡಲಿದ್ದಾರೆ. ಉಪಸ್ಥಿತಿಯನ್ನು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸೋಮಶೇಖರ ಬಿರಾದಾರ ಚಿದ್ರಿ ವಹಿಸಲಿದ್ದಾರೆ. ಗುರುಬಸವ ಪೂಜೆಯನ್ನು ಡಾ. ಸುರೇಶ ಪಾಟೀಲ ಮಾಡಲಿದ್ದಾರೆ ಎಂದು ಹೇಳಿದರು.
ಮಾರ್ಚ್ ೨೩ ರಂದು ಮ. ೧೨ ಗಂಟೆಗೆ ಅನುಭಾವಗೋಷ್ಠಿ-೨ ನಡೆಯಲಿದೆ. ಉದ್ಘಾಟನೆಯನ್ನು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಮಿತಿಯ ಗೌರವಾಧ್ಯಕ್ಷ ಈಶ್ವರ ಬಿ ಖಂಡ್ರೆ ಮಾಡಲಿದ್ದಾರೆ. ಧ್ವಜಾರೋಹಣ ಮಾಜಿ ಬುಡಾ ಅಧ್ಯಕ್ಷ ಬಾಬು ವಾಲಿ ಮಾಡಲಿದ್ದು, ಅಧ್ಯಕ್ಷತೆ ಚಿತ್ರದುರ್ಗದ ತಾರಕನಾಥ ವಹಿಸಲಿದ್ದಾರೆ. ದಿವ್ಯ ಸಮ್ಮುಖವನ್ನು ಕೂಡಲ ಸಂಗಮದ ಶ್ರೀ ಲಿಂಗಾರೂಢರು, ಚಳ್ಳಕೆರೆಯ ಗುರುಸ್ವಾಮಿಗಳು ವಹಿಸಲಿದ್ದಾರೆ ಎಂದು ಶ್ರೀಕಾಂತ ಸ್ವಾಮಿ ತಿಳಿಸಿದರು.
ಬೆಂಗಳೂರಿನ ಬಸವ ಗಂಗೋತ್ರಿಯ ಚನ್ನಬಸವೇಶ್ವರ ಜ್ಞಾನಪೀಠದ ಪೀಠಾಧ್ಯಕ್ಷ ಪೂಜ್ಯ ಶ್ರೀ ಜಗದ್ಗುರು ಡಾ. ಚನ್ನಬಸವಾನಂದ ಸ್ವಾಮೀಜಿ ಮಾತನಾಡಿ ಲಿಂಗಾಯತ ಧರ್ಮಕ್ಕೆ ಒಂದು ಹೊಸ ಚೌಕಟ್ಟನ್ನು ಹಾಕಿಕೊಟ್ಟವರು ಮಾತಾಜಿ. ಸ್ವತಂತ್ರ ಧರ್ಮದ ಮಾನ್ಯತೆಗಾಗಿ ಹಗಲಿರುಳು ಶ್ರಮಿಸಿದ್ದು ಅವರ ಹಿರಿಮೆ ಗರಿಮೆಗೆ ಸಾಕ್ಷಿಯಾಗಿದೆ. ಹೀಗಾಗಿ ಅವರ ಹೆಸರಿನ ಮೇಲೆ ಬಸವಾತ್ಮಜೆ ಪ್ರಶಸ್ತಿಯನ್ನು ಧಾರವಾಡದ ಸುಜಾತಾ ಬಸವರಾಜ ಯರಗಟ್ಟಿ ಅವರಿಗೆ ನೀಡಲಾಗುತ್ತಿದೆ. ಲಿಂಗಾನ0ದ ಶ್ರೀ ಪ್ರಶಸ್ತಿಯನ್ನು ಖವಟಕೊಪ್ಪದ ಹಿರಿಯ ಶರಣ ಅಶೋಕ ನಾವಿ ಅವರಿಗೆ ಪ್ರದಾನ ಮಾಡಲಾಗುತ್ತಿದೆ. ಈ ಕಾರ್ಯಕ್ರಮದಲ್ಲಿ ಮಹಾರಾಷ್ಟç, ತೆಲಂಗಾಣ ಆಂಧ್ರಪ್ರದೇಶ ಹಾಗೂ ಕರ್ನಾಟಕದ ಹಲವು ಜಿಲ್ಲೆಗಳಿಂದ ಸಾವಿರಾರು ಶರಣರು ಭಾಗವಹಿಸಲಿದ್ದಾರೆ. ಜಿಲ್ಲೆಯ ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಪ್ರಾರ್ಥಿಸಿದರು.
ಬಸವ ಮಂಟಪದ ಪೂಜ್ಯ ಶ್ರೀ ಸದ್ಗುರು ಸತ್ಯಾದೇವಿ ಮಾತಾಜಿ ಮಾತನಾಡಿ ಹಿರಿಯ ಪತ್ರಕರ್ತರಾದ ಖಾದ್ರಿ ಶಾಮಣ್ಣ ಪ್ರಶಸ್ತಿ ಪುರಸ್ಕೃತರಾದ ಅಪ್ಪಾರಾವ ಸೌದಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಶಶಿಕಾಂತ ಶೆಂಬೆಳ್ಳಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಡಿಕೆ ಗಣಪತಿ ಅವರನ್ನು ಸನ್ಮಾನಿಸಲಾಗುತ್ತಿದೆ. ನೃತ್ಯಾಂಗನೆ ತಂಡದ ಪೂರ್ಣಚಂದ್ರ ಮೈನಾಳೆ ಹಾಗೂ ಕೀರ್ತಿ ಘೂಳೆ, ವಾಣಿಶ್ರೀ ಮತ್ತು ವಚನ ಜ್ಯೋತಿ ಕಟಾಳೆ, ಸಮೃದ್ದಿ ಲಾಧಾ ಅವರಿಂದ ವಚನ ನೃತ್ಯ, ಮಂಡ್ಯದ ಶಿವು ಜನ್ಯ ಅವರಿಂದ ವಚನ ಗಾಯನ, ಕಲ್ಯಾಣರಾವ ಬಂಬುಳಗಿ ಅವರಿಂದ ವಚನ ಭಜನೆ ಜರುಗಲಿದೆ ಎಂದು ತಿಳಿಸಿದರು.
   ಸುದ್ದಗೋಷ್ಠಿಯಲ್ಲಿ ಅಕ್ಕನಾಗಲಾಂಬಿಕಾ ಮಾತಾಜಿ ಬೆಳಗಾವಿ, ಅಕ್ಕಮಹಾದೇವಿ ಮಾತಾಜಿ, ಓಂಕಾರೇಶ್ವರ ಸ್ವಾಮೀಜಿ, ಶಿವರಾಜ ಪಾಟೀಲ ಅತಿವಾಳ, ಶಿವಶರಣಪ್ಪ ಪಾಟೀಲ, ಮಲ್ಲಿಕಾರ್ಜುನ ಶಾಪುರ, ವಿಶ್ವನಾಥ ಪಾಟೀಲ, ಶಿವು ಜನ್ಯ, ಮಲ್ಲಿಕಾರ್ಜುನ ಬುಕ್ಕಾ, ರವಿಕಾಂತ ಬಿರಾದಾರ, ಬಸವರಾಜ ಸಂಗಮದ, ಬಸವಂತರಾವ ಬಿರಾದಾರ ಉಪಸ್ಥಿತರಿದ್ದರು.

Wednesday, 19 March 2025

ಶಂಕರಾಚಾರ್ಯ ಪೀಠಗಳಿಂದ ಸನಾತನ ಹಿಂದು ಧರ್ಮಕ್ಕೆ ಬಹುದೊಡ್ಡ ಕೊಡುಗೆ

  ಬೀದರ: ಶಂಕರಾಚಾರ್ಯರು ಸನಾತನ ಧರ್ಮದ ಸಂರಕ್ಷಣೆ ಸಂವರ್ಧನೆ ಕಾರ್ಯ ಕೈಗೊಂಡ ಯೋಗಿಗಳಲ್ಲಿ ಅಗ್ರಗಣ್ಯರಾಗಿದ್ದಾರೆ. ಇವರ ಜೀವನ ಇದಕ್ಕಾಗಿ ಸಮರ್ಪಿತ ಜೀವನವಾಗಿದೆ. ಕ್ರಿ.ಶ. ೭ ಮತ್ತು ೮ನೇ ಶತಮಾನದಲ್ಲಿ ಹಿಂದು ಧರ್ಮದಲ್ಲಿ ವಿಪ್ಲವ ಘಟಿಸಿದಾಗ ಅದರ ನಿವಾರಣೆಗಾಗಿ ಅವತರಿಸಿ ಬಂದ ದೇವಸ್ವರೂಪಿ ಇವರಾಗಿದ್ದಾರೆ. ಅವರು ಕೇವಲ ೩೨ ವರ್ಷ ಬದುಕಿದ್ದರೂ ಮೂರು ಸಲ ಭಾರತ ಪರ್ಯಟನೆ ಮಾಡಿದ್ದಾರೆ. ಭಾರತದ ನಾಲ್ಕೂ ದಿಕ್ಕುಗಳಲ್ಲಿ ಪೀಠ ಸ್ಥಾಪಿಸಿ, ಧರ್ಮ ಸಂರಕ್ಷಣೆ ಗೈದಿದ್ದಾರೆ ಎಂದು ಶೃಂಗೇರಿ ಶಾರದ ಪೀಠಾಧೀಶರಾದ ವಿದುಶೇಖರ ಸ್ವಾಮಿ ಹೇಳಿದರು. ಅವರು ಬೀದರನ ರಾಂಪೂರೆ ಕಾಲೋನಿಯಲ್ಲಿರುವ ಸತ್ಯನಾರಾಯಣ ಮಂದಿರದಲ್ಲಿ ಜರುಗಿದ ಶೃಂಗೇರಿಯ ಸನಾತನ ಧರ್ಮ ವಿಜಯ ಯಾತ್ರಾ ಹಾಗೂ ಶೃಂಗೇರಿ ಶಾಖಾ ಪೀಠದ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಹೇಳಿದರು.

ಮುಂದುವರೆದು, ಶಂಕರಾಚಾರ್ಯರು ಗೈದ ಧರ್ಮಕಾರ್ಯ ಚೇತೋಹಾರಿಯಾಗಿದೆ. ಸನಾತನ ಧರ್ಮಕ್ಕೆ ಸ್ಪೂರ್ತಿದಾಯಕವಾಗಿದೆ. ಸನಾತನ ಶಕ್ತಿ ಮತ್ತು ಅದರ ವೈಭವ ಜನಮಾನಸದಲ್ಲಿ ಅಚ್ಚಳಿಯದಂತೆ ಉಳಿಯಲು ಛಾಪು ಮೂಡಿಸಿದ್ದಾರೆ. ಅವರು ಸ್ಥಾಪಿಸಿದ ೪ ಪೀಠಗಳು ಸನ್ಯಾಸತ್ವದ ಗುರುಪರಂಪರೆಯಿ0ದ ಕೂಡಿದ್ದಾಗಿವೆ. ಭಾರತದ ಸನಾತನ ಧರ್ಮದ ಅಳವಡಿಕೆಗೆ ಬೆಳವಣಿಗೆಗೆ ಬೇಕಾಗುವ ಮಾರ್ಗೋಪಾಯಗಳು ಈ ಪೀಠಗಳು ನಿರಂತರ ಮಾಡುತ್ತಾ ಬಂದಿವೆ. ಶೃಂಗೇರಿ ಶಾರದಾ ಪೀಠದ ೩೬ನೇ ಆಚಾರ್ಯರಾದ ಭಾರತಿ ತೀರ್ಥ ಶ್ರೀಗಳು ಈ ಆಚಾರ್ಯ ಪೀಠಕ್ಕೆ ತಮ್ಮ ಮಾನವೀಯ ಕಾರ್ಯಗಳಿಂದಾಗಿ ಘನತೆ ತಂದವರಾಗಿದ್ದಾರೆ. ಅವರು ಈ ಹಿಂದೆ ಬೀದರಕ್ಕೂ ಬಂದು ಹೋಗಿದ್ದಾರೆ. ಅವರ ಪ್ರಭಾವದಿಂದಾಗಿಯೇ ಇಲ್ಲಿನವರು ಇಲ್ಲಿ ಶೃಂಗೇರಿ ಪೀಠದ ಶಾಖೆ ಪ್ರತಿಷ್ಠಾಪನೆಗೆ ಒಲವು ತೋರಿದ್ದಾರೆ. ಅವರೆಲ್ಲರ ಇಚ್ಛೆಯಂತೆ ಇಲ್ಲೀಗ ಶೃಂಗೇರಿ ಪೀಠದ ಮಂದಿರಕ್ಕೆ ಶಿಲನ್ಯಾಸವಾಗುತ್ತಿದೆ. ಇದಕ್ಕೆ ಕೈ ಜೋಡಿಸಿದ ಬೀದರನ ಸಜ್ಜನರ ಸನಾತನ ಶೃದ್ಧಾಳುಗಳ ಕಾರ್ಯಕ್ಕೆ ಶಾರದಾ ಪೀಠ ಸಂತುಷ್ಟವಾಗಿದೆ. ಬೀದರನಲ್ಲಿ ಬರುವ ದಿನಗಳಲ್ಲಿ ಇಲ್ಲಿ ಶಂಕರಾಚಾರ್ಯರ ಮತ್ತು ಶಾರದಾ ಮಾತೆಯ ಮಂದಿರಗಳು ಸ್ಥಾಪನೆಗೊಂಡು, ಇಲ್ಲೂ ಶಾರದಾ ಪೀಠದ ಧರ್ಮ ಕಾರ್ಯಗಳು ಆರಂಭವಾಗಲಿವೆ. ಶಾರದಾ ಪೀಠದ ಯತಿವರಣ್ಯರು, ಆಚಾರ್ಯರು ಮೇಲಿಂದ ಮೇಲೆ ಇಲ್ಲಿಗೆ ಆಗಮಿಸಿ, ಇಲ್ಲಿನ ಶೃದ್ಧಾಳುಗಳನ್ನು ಉದ್ಧರಿಸುವ ಕಾರ್ಯ ಮುಂದೆ ನಿರಂತರ ಮಾಡಲಿದ್ದಾರೆ. ಭವಿಷ್ಯದಲ್ಲಿ ಬೀದರನ ಈ ಕ್ಷೇತ್ರ ಸನಾತನ ಧರ್ಮದ ಮಹಾನ್ ಶಕ್ತಿ ಕ್ಷೇತ್ರವಾಗಿ ಕಂಗೊಳಿಸಲಿದೆ ಎಂದರು.

ಶ0ಕರಾಚಾರ್ಯರ ಬೋಧೆಗಳು ಜೀವನ ಉದ್ಧರಿಸುವ ಬೋಧೆಗಳಾಗಿವೆ. ಶಂಕರಾಚಾರ್ಯರ ಅನುಯಾಯಿಗಳು ಸನಾತನ ಧರ್ಮದಂತೆ ಜೀವನ ಸಾಗಿಸುವುದರಿಂದ ಸತ್ಕಾರ್ಯಗಳು, ಸದ್ವಿಚಾರಗಳು ಇಲ್ಲಿ ಹೆಚ್ಚಾಗಲಿವೆ. ಮಂಗಲ ಕಾರ್ಯಗಳು ಇಲ್ಲಿ ನಿತ್ಯ ನಡೆಯಲಿವೆ. ಶಂಕರಾಚಾರ್ಯರು ಹಲವಾರು ಗ್ರಂಥಗಳನ್ನು ರಚಿಸಿದ್ದಾರೆ. ಅದರಲ್ಲಿ ಮನುಷ್ಯನ ಯಶಸ್ವಿ ಜೀವನಕ್ಕೆ ಅನುಸರಿಸಬೇಕಾದ ಮಾರ್ಗೋಪಾಯಗಳನ್ನು ಹೇಳಿದ್ದಾರೆ. ಅವನ್ನು ಪಾಲನೆ ಮಾಡುವುದರಿಂದ ಪುಣ್ಯ ಪ್ರಾಪ್ತಿಯಾಗುತ್ತದೆ. ಜೀವನ ಸಾರ್ಥಕವಾಗುತ್ತದೆ ಎಂದರು. ಶಂಕರಾಚಾರ್ಯರು ಸ್ಥಾಪಿಸಿದ ಈ ನಾಲ್ಕು ಆಮ್ನಾಯ ಪೀಠಗಳ ಮೂಲ ಉದ್ದೇಶ ಸನಾತನ ಧರ್ಮಜಾಗೃತಿ ಧರ್ಮಪಾಲನೆಯಾಗಿದೆ. ಈ ಪೀಠದ ಕಾರ್ಯಗಳು ವೇದೋಕ್ತ, ಶಾಸ್ತ್ರೋಕ್ತವಾಗಿ ನಡೆಯುತ್ತವೆ. ಅವು ಜನರಲ್ಲಿ ಸನಾತನ ಧರ್ಮದ ತಿರುಳನ್ನು ಹಾಸುಹೊಕ್ಕಾಗಿಸುತ್ತವೆ ಎಂದರು.

ಮಾನವನ ಮೂಲ ಆಶಯ ಸುಖ, ಪುಣ್ಯಪ್ರಾಪ್ತಿ, ಜೀವನ್ಮುಕ್ತತೆಯೇ ಆಗಿದೆ. ಶಂಕರಾಚಾರ್ಯರ ಪೀಠಗಳು ಒಳ್ಳೆಯ ಜೀವನಕ್ಕಾಗಿ ಒಳ್ಳೆಯ ಮಾರ್ಗ ತೋರುತ್ತವೆ. ಈ ಪೀಠಗಳ ಆಚಾರ್ಯರ ಸಂಪರ್ಕಕ್ಕೆ ಬಂದವರು ತಾವಾಗಿಯೇ ಬದಲಾಗಿ, ಶಾಸ್ತೊçÃಕ್ತ, ಪ್ರಾಮಾಣಿಕ ಹಾಗೂ ಸೇವಾಜೀವನ ಅನುಸರಿಸುತ್ತಾರೆ. ಇವತ್ತು ಕೆಲವರು ಒಳ್ಳೆಯ ಕಾರ್ಯಗಳಲ್ಲಿ ಕುತರ್ಕ ಮಾಡುವವರು ವಿಘ್ನತಾರುವವರು ಇರುತ್ತಿದ್ದಾರೆ. ಇವರಿಂದ ಎಚ್ಚರಿಕೆಯಿಂದಿರಬೇಕು ಎಂದರು. ದೇವರು ಎಲ್ಲರಿಗೂ ಒಂದೊ0ದು ಸಾಮರ್ಥ್ಯ ಕೊಟ್ಟಿರುತ್ತಾನೆ. ಆ ಸಾಮರ್ಥ್ಯ ಸದ್ಬಳಕೆ ಮಾಡಿಕೊಂಡು, ಸಾತ್ವಿಕ ಕಾರ್ಯಗಳಿಗೆ ವಿನಿಯೋಗಿಸಬೇಕು. ಅದಕ್ಕೆ ದೇವರ ಬಲ ರಕ್ಷೆ ಕೂಡ ಇರುತ್ತದೆ. ಶಾರದಾ ಪೀಠದ ಈ ಸ್ಥಾಪನೆಗೆ ಭೂಮಿ ನೀಡಿದ ಪ್ರಭು ಮೈಲಾಪೂರ ಅವರ ಕಾರ್ಯ ಶಾರದಾ ಪೀಠಕ್ಕೆ ಮೆಚ್ಚುಗೆಯ ಕಾರ್ಯವಾಗಿದೆ. ಇವರ ತ್ಯಾಗ ಸೇವೆ ಮಾದರಿಯಾಗಿದೆ. ಈ ಕಾರ್ಯಕ್ಕೆ ಕೈಜೋಡಿಸಿದ ಎಲ್ಲರಿಗೂ ಶಾರದಾಂಬೆಯ ಕೃಪೆ ಪ್ರಾಪ್ತಿಯಾಗಲಿದೆ ಎಂದರು.

ನಾವು ಒಳ್ಳೆಯ ಇಚ್ಛೆಗಳನ್ನು ಇಟ್ಟುಕೊಂಡರೆ ಅದರಿಂದೇನೂ ಪ್ರಯೋಜನವಿಲ್ಲ. ಒಳ್ಳೆಯ ಇಚ್ಛೆಯ ಜೊತೆ ಒಳ್ಳೆಯ ಕಾರ್ಯಗಳನ್ನು ಮಾಡುತ್ತಿರಬೇಕು. ವಿದ್ಯಾರ್ಥಿ ತನ್ನ ಪರೀಕ್ಷೆಯಲ್ಲಿ ಒಳ್ಳೆಯ ರೀತಿಯಿಂದ ಪಾಸಾಗಬೇಕಾದರೆ ಆತನಿಗೆ ಸೆಲೆಬಸ್‌ನ ಅರಿವಿರಬೇಕು ಮತ್ತು ಆತನ ಹಿಂದೆ ದಕ್ಷ ಶಿಕ್ಷಕನಿರಬೇಕಾಗುತ್ತದೆ. ಹಾಗೆಯೇ ಮನುಷ್ಯನು ತನ್ನ ಜೀವನದ ಪರೀಕ್ಷೆಗಳಲ್ಲೂ ಪಾಸಾಗಬೇಕಾದರೆ ಒಳ್ಳೆಯ ಮಾರ್ಗೋಪಾಯಗಳು ಹೇಳುವ ಮಾರ್ಗದರ್ಶಕ ಗುರುಗಳು ಬೇಕಾಗುತ್ತಾರೆ. ಆಗಲೇ ಜೀವನದಲ್ಲಿ ಯಶಸ್ಸು ಸಾಧ್ಯವಾಗುತ್ತದೆ. ಈ ಕೆಲಸ ಶಂಕರಾಚಾರ್ಯರ ಪೀಠಾಚಾರ್ಯರು ತಮ್ಮ ಅನುಯಾಯಿಗಳಿಗಾಗಿ ನಿರಂತರ ಮಾಡುತ್ತಾ ಬರುತ್ತಿದ್ದಾರೆ. ಬೀದರನಲ್ಲಿ ಈ ಪೀಠದ ಸ್ಥಾಪನೆಯಿಂದಾಗಿ ಇಲ್ಲಿ ಶಾಸ್ತ್ರೋಕ್ತ, ವೇದೋಕ್ತ ಸನಾತನಧರ್ಮ ಪಾಲಿಸುವವರ ಶೃದ್ಧಾಳುಗಳ ಸಂಖ್ಯೆ ಹೆಚ್ಚಾಗಲಿದ್ದು, ಇಲ್ಲಿನವರ ಮಾನಸಿಕ, ಬೌದ್ಧಿಕ ಹಾಗೂ ಭೌತಿಕ ಅಭಿವೃದ್ಧಿಗೆ ಇದು ಕಾರಣವಾಗುತ್ತದೆ ಎಂದರು.

ಸನಾತನ ಧರ್ಮದ ಅಪಪ್ರಚಾರದ ಹಿಂದೆ ಅಜ್ಞಾನ ಸ್ವಾರ್ಥ ಮತ್ತು ದುರುದ್ದೇಶಗಳಿರುತ್ತವೆ. ಅದನ್ನು ಅರ್ಥ ಮಾಡಿಕೊಳ್ಳಬೇಕು. ಗುರುಗಳಾದವರು ಜಗದ್ಗುರುಗಳಾದವರು ಒಳ್ಳೆ ಕಾರ್ಯಗಳ ಬೋಧೆ ಮಾಡಬೇಕು ಹಾಗೂ ಅದರಂತೆ ನಡೆಯಬೇಕಾದುದು ಅವಶ್ಯಕವಾಗಿರುತ್ತದೆ ಎನ್ನುವುದನ್ನು ಎಲ್ಲರೂ ಅರಿಯಬೇಕು ಎಂದರು. ಸನಾತನ ಧರ್ಮದ ಪಾಲನೆಯಿಂದಾಗಿ ಭಾರತದ ಅಭಿವೃದ್ಧಿ ಹಾಗೂ ವಿಶ್ವದ ಅಭಿವೃದ್ಧಿಯಾಗಲಿದೆ. ಇದು ಎಲ್ಲರ ಒಳಿತನ್ನು ಬಯಸುವ ಧರ್ಮವಾಗಿದೆ. ಇದು ಮನುಷ್ಯನಲ್ಲಿ ಅಸುರ ಶಕ್ತಿ ನಾಶಗೊಳಿಸಿ, ದೇವಶಕ್ತಿ ಪ್ರತಿಷ್ಠಾಪಿಸುತ್ತದೆ ಎಂದರು. ಪ್ರಸಕ್ತ ದಿನ ಮಾನದಲ್ಲಿ ಸನಾತನ ಧರ್ಮದ ಸುವರ್ಣಕಾಲ ತರಲೋಸುಗ ಸನಾತನ ಧರ್ಮ ವಿಜಯಯಾತ್ರೆ ರಾಜ್ಯಾದ್ಯಂತ ಶಾರದಾ ಪೀಠದಿಂದ ಆರಂಭಿಸಲಾಗಿದೆ. ಸನಾತನ ಶಕ್ತಿಗೆ ನಾವೆಲ್ಲ ಹೆಮ್ಮೆಪಟ್ಟುಕೊಂಡು, ಕಂಕಣ ಬದ್ಧರಾಗಬೇಕು. ಇದಕ್ಕಾಗಿ ಬದ್ಧತೆಯಿಂದ ಶ್ರಮಿಸಬೇಕು. ತಾವು ಈ ಅಭಿಯಾನದಲ್ಲಿ ಭಾಗಿಯಾಗಬೇಕು ಮತ್ತು ತಮ್ಮ ಸಂಪರ್ಕದವರಿಗೂ ಭಾಗಿಯಾಗಿಸಬೇಕು. ಇದರಲ್ಲಿ ಎಲ್ಲರ ಶ್ರೇಯವೂ ಅಡಗಿದೆ ಎಂದರು.

ಕಾರ್ಯಕ್ರಮದಲ್ಲಿ ಪ್ರಸ್ತಾವಿಕವಾಗಿ ಮಾತನಾಡಿದ ಸತ್ಯನಾರಾಯಣ ಮಂದಿರದ ಪ್ರಧಾನ ಅರ್ಚಕರಾದ ಶ್ರೀ ನರಸಿಂಹ ದಿಕ್ಷಿತರು ಮಾತಾಡುತ್ತಾ ಬೀದರ ಪುರಾಣೇತಿಹಾಸಿಕ ಕಾಲದಿಂದಲೂ ದೇವಭೂಮಿಯಾಗಿದೆ. ಇಲ್ಲಿ ಬಹಳಷ್ಟು ಯೋಗಿಪುರುಷರು, ಸಂತ ಮಹಾಂತರು ಆಗಿ ಹೋಗಿದ್ದಾರೆ. ಸಾಕ್ಷಾತ್ ಪಂಢರಪೂರದ ವಿಠಲನೇ ಬೀದರಗೆ ಬಂದು, ತನ್ನ ಶಿಷ್ಯ ದಾಮೋಧರ ಪಂತ್‌ಗೆ ರಕ್ಷಣೆ ಗೈದಿದ್ದಾರೆ. ದತ್ತಾತ್ರೇಯ ಚತುರ್ಥ ಅವತಾರರಾದ ಮಾಣಿಕಪ್ರಭುಗಳು ಬೀದರನಲ್ಲಿ ವಿಶ್ವರೂಪ ದರ್ಶನ ಗೈದಿದ್ದಾರೆ. ಇಲ್ಲಿನ ನರಸಿಂಹಕ್ಷೇತ್ರ ಪಾಪನಾಶಕ್ಷೇತ್ರ ಕ್ಷೇತ್ರಗಳಿಗೆ ದೈವಿಕ ಹಿನ್ನೆಲೆ ಇದೆ. ಗುರುನಾನಕರು ಕೂಡ ಬೀದರನಲ್ಲಿ ನೆಲೆಸಿ ಹೋಗಿದ್ದಾರೆ. ಇದು ಸೌಹಾರ್ದತೆಗೆ ಹೆಸರಾದ ನೆಲವಾಗಿದೆ. ಹಿಂದು ಧರ್ಮದ ಕಾರ್ಯದಲ್ಲಿ ಬಹುದೊಡ್ಡ ಪಾತ್ರ ವಹಿಸುತ್ತಿರುವ ಈ ಶೃಂಗೇರಿ ಪೀಠವು ಬೀದರನಿಂದ ದೂರವಿದ್ದು, ಅದು ಈಗ ಬೀದರನಲ್ಲೂ ಸ್ಥಾಪನೆಯಾಗುತ್ತಿದ್ದರಿಂದ ಇಲ್ಲಿನ ಅನುಯಾಯಿಗಳಿಗೆ ಸಂತಸವನ್ನುAಟು ಮಾಡಿದೆ ಎಂದರು. ವಿದುಶೇಖರರು ಇಲ್ಲಿಗೆ ಆಗಮಿಸಿ ಇಲ್ಲಿನ ಅನುಯಾಯಿಗಳಿಗೆ ದರ್ಶನವಿಯ್ಯುತ್ತಿರುವುದು ಮತ್ತು ಇಲ್ಲಿ ಶಾರದಾಪೀಠದ ಮಂದಿರ ಸ್ಥಾಪಿಸುತ್ತಿರುವುದು ಹರ್ಷವನ್ನುಂಟು ಮಾಡಿದೆ ಎಂದರು. ಇಲ್ಲಿ  ಸತ್ಯನಾರಾಯಣ ಮಂದಿರ ಸ್ಥಾಪನೆಯಾದಾಗ ಆರಂಭದಲ್ಲಿ ೧೦ ಆಕಳುಗಳನ್ನಿಟ್ಟು ಗೋಶಾಲೆ ಆರಂಭಿಸಲಾಗಿತ್ತು. ಈಗ ಇಲ್ಲಿ ೧೫೦ ಆಕಳುಗಳಿರುವ ಬೃಹತ್ ಗೋಶಾಲೆ ಇಲ್ಲಿ ಕಾಣಬಹುದಾಗಿದೆ. ಹಾಗೆಯೇ ಮುಂದಿನ ದಿನಗಳಲ್ಲಿ ಶಾರದಾ ಮಂದಿರ ಇಲ್ಲಿ ಬೃಹತ್ತಾಗಿ ಕಾರ್ಯನಿರ್ವಹಿಸುವುದರಲ್ಲಿ ಸಂದೇಹವಿಲ್ಲ ಎಂದರು.

ಕಾರ್ಯಕ್ರಮದಲ್ಲಿ ರೇಖಾ ಅಪ್ಪಾರಾವ ಸೌದಿಯವರಿಂದ ಭಕ್ತಿಯ ಸ್ವಾಗತ ಗೀತೆ ಜರುಗಿತು.  ಗೀತಾ ಭಟ್‌ರ ತಂಡದಿ0ದ ಗೀತಾಪಾರಾಯಣ ನಡೆಯಿತು. ಕಾರ್ಯಕ್ರಮದ ಮುಂಚೆ ಎಂ.ಎಸ್. ಫಂಕ್ಷನ್ ಹಾಲ್‌ನಿಂದ ಸತ್ಯನಾರಾಯಣ ಮಂದಿರದವರೆಗೆ ವಿದುಶೇಖರರ ಶೋಭಾಯಾತ್ರೆ ವಿಜೃಂಭಣೆಯಿ0ದ ಜರುಗಿತು. ಶೋಭಾಯಾತ್ರೆಯಲ್ಲಿ ಸಾಧುಘಾಟನ ಪಾಂಡುರ0ಗ ಮಹಾರಾಜರ ತಂಡದಿ0ದ ಚಕ್ರಿ ಭಜನೆ, ನರ್ಮದಾ ದೇಶಪಾಂಡೆಯವರಿ0ದ ಭಜನೆ ಹಾಗೂ ಜೈಪ್ರದಾ ಪ್ರಕಾಶ ಕುಲಕರ್ಣಿ ತಂಡದವರು ಕಳಸಹೊತ್ತು ಸಾಗಿದರು. ಈ ಶೋಭಾಯಾತ್ರೆಯಲ್ಲಿ ಜಗನ್ನಾಥ ಮಂದಿರದ ಹಾಗೂ ಚಿದಂಬರಾಶ್ರಮದ ಪ್ರಮುಖರು ಪಾಲ್ಗೊಂಡಿದರು. ಕಾರ್ಯಕ್ರಮದಲ್ಲಿ ಪಂಡಿತರಿ0ದ ವೇದ ಪಠಣ ನಡೆಯಿತು ಹಾಗೂ ಕೋಲಾಟ ಜರುಗಿದವು. ಕಾರ್ಯಕ್ರಮದಲ್ಲಿ ಪ್ರಮುಖರಾದ ಡಾ. ಶೈಲೇಂದ್ರ ಬೆಲ್ದಾಳೆ ಪರಿವಾರದವರಿಗೆ ಹಾಗೂ ಸೂರ್ಯಕಾಂತ ನಾಗಮಾರಪಳ್ಳಿ ಪರಿವಾರದವರಿಗೆ ಸತ್ಕರಿಸಲಾಯಿತು. 

ಕಾರ್ಯಕ್ರಮದಲ್ಲಿ ರಮೇಶ ಕುಲಕರ್ಣಿ, ಶಾಮಕಾಂತ ಕುಲಕರ್ಣಿ, ಬಾಬುರಾವ ಕುಲಕರ್ಣಿ, ರಾಮಕೃಷ್ಣ ಸಾಳೆ, ರವಿ ಸ್ವಾಮಿ, ಪ್ರಭು ಮೈಲಾಪೂರ, ವೆಂಕಟೇಶ ಮೋರಖಂಡಿಕರ್, ಹಣಮಯ್ಯ ಅರ್ಥಮ್, ಎನ್.ಆರ್. ವರ್ಮಾ, ವಸಂತ ಪಟೇಲ್, ಭೀಮಸೇನ್ ಸಿನಿಯಾಲ್, ಶಂಕರ ಕೊಟರ್ಕಿ, ರಮೇಶ ಗೋಯಲ್, ಜಾಧವ ಪಟೇಲ್, ಪ್ರಮೋದ ಗಾದೆವಾರ, ಸೂರ್ಯಕಾಂತ ಕುಲಕರ್ಣಿ, ದಿನಕರರಾವ ಕುಲಕರ್ಣಿ, ರಾಜಶೇಖರ ಹಣಕುಣಿ,  ಸಂಜು ಜೋಶಿ ಹಳ್ಳಿಖೇಡ ಬಿ, ವನಮಾಲಾ ಕುಲಕರ್ಣಿ, ನಿರ್ಮಲಾ ದೇಶಪಾಂಡೆ, ಮತ್ತೀತರರಿದ್ದರು. ಹರೀಶ ಕುಲಕರ್ಣಿ ಸ್ವಾಗತ,  ಕಲ್ಪನಾ ದೇಶಪಾಂಡೆ, ವಂದಿಸಿದರು.



ನಾವು ಎಷ್ಟೇ ಕಲಿತರು ಕೌಶಲ್ಯ ಬೇಕು - ಸಾಹಿತಿ ಕಾ.ತ. ಚಿಕ್ಕಣ್ಣ

       ಕೊಪ್ಪಳ : ನಾವು ಎಷ್ಟೇ ಕಲಿತರು ನಮ್ಮಲ್ಲಿ ಕೌಶಲ್ಯ ಇರಬೇಕು ಅದು ನಮ್ಮ ಜೀವನ ರೂಪಿಸುತ್ತದೆ. ಉನ್ನತ ಶಿಕ್ಷಣದಲ್ಲಿ ಕೌಶಲ್ಯ ಶಿಕ್ಷಣಕ್ಕೆ ಒತ್ತು ನೀಡಬೇಕು ಎಂದು ಹಿರಿಯ ಸಾಹಿತಿಗಳು ಹಾಗೂ ಬೆಂಗಳೂರಿನ ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರದ ಅಧ್ಯಕ್ಷ ಕಾ.ತ. ಚಿಕ್ಕಣ್ಣ ಹೇಳಿದರು.

ಅವರು ಕೊಪ್ಪಳ ನಗರದ ಸಾಹಿತ್ಯ ಭವನದಲ್ಲಿ ಹಮ್ಮಿಕೊಂಡಿದ್ದ ಕೊಪ್ಪಳ ವಿಶ್ವವಿದ್ಯಾಲಯದ ದ್ವಿತೀಯ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸ್ಥಳೀಯರಿಗೆ ಸುಲಭವಾಗಿ ಶಿಕ್ಷಣ ಸಿಗಬೇಕಾದರೆ ವಿಶ್ವವಿದ್ಯಾಲಯಗಳು ಬೇಕು. ವಿಶ್ವವಿದ್ಯಾಲಯಗಳು ಇಂದಿನ ತಂತ್ರಜ್ಞಾನ ಯುಗದಲ್ಲಿ ಸ್ಪರ್ಧೆ, ಪೈಪೋಟಿ ಜೊತೆಗೆ ವಿದ್ಯಾರ್ಥಿಗಳ ಬದುಕನ್ನು ಅರಳಿಸುವ ಶಿಕ್ಷಣ ಕೊಡಬೇಕು. ಕೊಪ್ಪಳ ವಿಶ್ವವಿದ್ಯಾಲಯದ ದ್ವಿತೀಯ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮ ಹೆಮ್ಮೆಯಿಂದ ಉದ್ಘಾಟಿಸಿದ್ದೇನೆ. ಈ ಭಾಗದಲ್ಲಿ ಬಿಸಿಲು ಹೆಚ್ಚಿದ್ದರು ಸಾಂಸ್ಕೃತಿಕವಾಗಿ ಬಹಳ ಶ್ರೀಮಂತವಾಗಿದೆ ಎಂದು ಹೇಳಿದರು.
ರಾಜಕೀಯ ಇರುವುದು ಸೇವೆಗಾಗಿ ಆದರೆ ಇಂದಿನ ದಿನಮಾನಗಳಲ್ಲಿ ಅದು ಹಿಂದೆ ಸರಿದು ಅಧಿಕಾರ ಮುಂದೆ ಬಂದಿದೆ. ಹೀಗಾದರೆ ಹಸಿ-ಹಸಿಯಾದ ತೀರ್ಮಾನಗಳಾಗುತ್ತವೆ. ವಿಶ್ವವಿದ್ಯಾಲಯಗಳಲ್ಲಿ ರಾಜಕೀಯ ಆಗಭಾರದು. ಒಂದು ದೇಶದ ಅಭಿವೃದ್ಧಿ ಅಲ್ಲಿಯ ಶಿಕ್ಷಣದ ಮೇಲೆ ನಿಂತಿರುತ್ತದೆ ಎಂದು ಹೇಳಿದರು.
ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿ ಪ್ರೋ. ಬಿ.ಡಿ. ಕುಂಬಾರ ಅವರು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ  ಭಾಗವಹಿಸಿ ಮಾತನಾಡಿ, ವಿಶ್ವವಿದ್ಯಾಲಯ ಇರುವುದರಿಂದ ಈ ಭಾಗದ ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಹೊಸ ವಿಶ್ವವಿದ್ಯಾಲಯಗಳನ್ನು ನಡೆಸಿಕೊಂಡು ಹೋಗುವುದು ಸಾಮಾನ್ಯ ಕೆಲಸ ಅಲ್ಲ. ಆದರೂ ಕಳೆದ 2 ವರ್ಷಗಳಿಂದ ಪ್ರೋ. ಬಿ.ಕೆ. ರವಿ ಅವರು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿರುವುದು ಅವರ ಕಾಳಜಿ ತೋರಿಸುತ್ತದೆ. ಹಿಂದುಳಿದ ಜಿಲ್ಲೆಯ ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲು ಅವರು ದೃಡ ಸಂಕಲ್ಪಮಾಡಿದ್ದಾರೆ ಎಂದು ಹೇಳಿದರು.
ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೋ. ಜಯಕರ ಎಸ್.ಎಂ ಅವರು ಮಾತನಾಡಿ, ಈ ಭಾಗದ ಬೆಳವಣಿಗೆ ಹಾಗೂ ಪರಿವರ್ತನೆಗೆ ವಿಶ್ವವಿದ್ಯಾಲಯದ ಪಾತ್ರ ಬಹಳ ಮುಖ್ಯ ಇದೆ. ನಮ್ಮ ದೇಶ ಯುವಕರು ಹೆಚ್ಚಿರುವ ದೇಶವಾಗಿದೆ. ಯುವಕರಿಗೆ ಒಳ್ಳೆಯ ಮೌಲ್ಯಾಧಾರಿತ ಶಿಕ್ಷಣ ನೀಡಿದರೆ ಅವರು ಒಂದು ಒಳ್ಳೆಯ ಉದ್ಯೋಗವನ್ನು ಸೃಷ್ಟಿಸುತ್ತಾರೆ. ಕೊಪ್ಪಳ ವಿಶ್ವವಿದ್ಯಾಲಯ ಇತ್ತಿಚೆಗೆ ಆರಂಭವಾದರು ದೇಶದ ವಿವಿಧ ಸಂಸ್ಥೆಗಳೊಂದಿಗೆ ಒಡಂಬಡಿಕೆ ಮಾಡಿಕೊಂಡು ಮುನ್ನಡೆಯುತ್ತಿದೆ. ನಮ್ಮ ಬೆಂಗಳೂರು ವಿಶ್ವವಿದ್ಯಾಲಯ ತಮ್ಮೊಂದಿಗೆ ಸದಾ ಇರುತ್ತದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿ ಪ್ರೋ. ಬಿ.ಕೆ.ರವಿ ಮಾತನಾಡಿ, ಕೊಪ್ಪಳ ವಿಶ್ವವಿದ್ಯಾಲಯ 2 ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮ ಮಾಡುತ್ತಿದ್ದೆವೆ. ಕಳೆದ ಎರಡು ವರ್ಷಗಳಿಂದ ಹಲವಾರು ಶೈಕ್ಷಣಿಕ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿದ್ದೆವೆ. ಇದಕ್ಕೆ ಕೊಪ್ಪಳದ ಅನೇಕ ಹಿರಿಯ ಚೇತನರು. ಜನಪ್ರತಿನಿಧಿಗಳು. ಜಿಲ್ಲೆಯ ಜನ ಬಂಡೆಯಂತೆ ನಿಂತು ಕೆಲಸ ಮಾಡಲು ನಮಗೆ ಶಕ್ತಿ ಕೊಟ್ಟಿದ್ದಾರೆ. ಕೊಪ್ಪಳ ವಿಶ್ವವಿದ್ಯಾಲಯಕ್ಕೆ ಬೆಂಬಲ ನೀಡಿದ ಎಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸುತ್ತೆನೆ ಎಂದರು.
ಈ ಭಾಗದಲ್ಲಿ ಹೆಚ್ಚು ಹೆಣ್ಣು ಮಕ್ಕಳು ಶಾಲೆಗೆ ಬರುತ್ತಿಲ್ಲ. ಕೊಪ್ಪಳ ವಿಶ್ವವಿದ್ಯಾಲಯ ಆರಂಭವಾದ ನಂತರ ಹೆಣ್ಣು ಮಕ್ಕಳ ಕಲಿಕೆ ಹೆಚ್ಚಾಗಿದೆ. ಶಿಕ್ಷಣ ಬಲಪಡಿಸುವ ಸಾಮಾಜಿಕ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಬಹುಧರ್ಮ, ಸಂಸ್ಕತಿ, ಭಾಷೆ ಪರಂಪರೆಯ ದೇಶ ನಮ್ಮದು. ಮಹಿಳಾ ಸಬಲೀಕರಣಕ್ಕೆ ವಿಶೇಷ ಒತ್ತು ನೀಡಬೇಕಿದೆ. ಓದುವ ವಿಷಯದಲ್ಲಿ ಆಳವಾದ ಜ್ಞಾನ ಇದ್ದರೆ ನೇಮಕಾತಿ ಆದೇಶ ಪತ್ರ ನಿಮ್ಮ ಮನೆಬಾಗಿಲಿಗೆ ಬರುತ್ತದೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕಠಿಣ ಪರಿಶ್ರಮ, ಗುರು ತೋರಿದ ಮಾರ್ಗದಲ್ಲಿ ತಾವು ನಡೆದರೆ ತಮ್ಮ ತಂದೆ-ತಾಯಿಯವರ ಕನಸು ನನಸು ಮಾಡುತ್ತಿರಾ. ವಿಶ್ವವಿದ್ಯಾಲಯಗಳು ಬುದ್ದಿ ಜೀವಿಗಳನ್ನು ಸೃಷ್ಟಿಸುವ ಹಾಗೂ ಅಂಬೇಡ್ಕರ್ ಸಂವಿಧಾನದ ಆಶಯದಂತೆ ಸಮ ಸಮಾಜ ನಿರ್ಮಾಣದ  ಜವಾಬ್ದಾರಿಯುತ ಕೆಲಸ ಮಾಡುತ್ತವೆ. ಕೊಪ್ಪಳ ವಿಶ್ವವಿದ್ಯಾಲಯದಲ್ಲಿ ಹೊಸ-ಹೊಸ ಕೋರ್ಸುಗಳನ್ನು ಆರಂಭಿಸುತ್ತಿದ್ದೆವೆ. ಸಂಶೋಧನೆಗೂ ಒತ್ತು ನೀಡಲಾಗುತ್ತಿದೆ. ಕೊಪ್ಪಳ ವಿಶ್ವವಿದ್ಯಾಲಯ ಜಾಗತಿಕ ಮಟ್ಟದಲ್ಲಿ ಬೆಳೆಯಲು ಜಿಲ್ಲೆಯ ಜನರ ಬೆಂಬಲ ಸಹಕಾರ ಅತ್ಯಗತ್ಯವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪದ್ಮಶ್ರೀ ಪ್ರಶಸ್ತಿ ಭಾಜನರಾದ ಶ್ರೀ ಭೀಮವ್ವ ದೊಡ್ಡಬಾಳಪ್ಪ ಶಿಳ್ಳೆಕ್ಯಾತರ ಇವರಿಗೆ ಕೊಪ್ಪಳ ವಿಶ್ವವಿದ್ಯಾಲಯದ ವತಿಯಿಂದ ಗೌರವ ಸನ್ಮಾನ ನೆರವೇರಿಸಲಾಯಿತು. ಪತ್ರಿಕೋದ್ಯಮ ಸಂವಹನ ವಿಭಾಗದ ವಿಧ್ಯಾರ್ಥಿಗಳು ಹೊರತಂದ ಕಲ್ಯಾಣ ವಾಣಿ ಪತ್ರಿಕೆಯ ವಿಶೇಷ ಸಂಚಿಕೆ ಹಾಗೂ ಕೆ.ಯು.ಕೆ. ನ್ಯೂಸ್ ಲೋಗೊ ಗಣ್ಯರಿಂದ ಬಿಡುಗಡೆಗೊಳಿಸಲಾಯಿತು. ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ.ಕೆ.ರವಿ ಅವರು ಎಲ್ಲರಿಗೂ ಸಂವಿಧಾನದ ಪೀಠಿಕೆಯನ್ನು ಬೋಧಿಸಿದರು. ಕೊಪ್ಪಳ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಕೋಲಾರದ ಕುಲಪತಿ ಪ್ರೋ. ನಿರಂಜನ ವಾನಳ್ಳಿ. ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ಮೈಸೂರು ಕುಲಪತಿ ಪ್ರೋ. ನಾಗೇಶ ವಿ. ಬೆಟ್ಟಕೋಟೆ. ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ ಬಳ್ಳಾರಿ ಕುಲಪತಿ ಪ್ರೋ. ಮುನಿರಾಜು ಎಂ. ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ ಗದಗ ಕುಲಪತಿ ಪ್ರೋ. ಸುರೇಶ ವಿ. ನಾಡಗೌಡರ. ಭಾಷೆ ಮತ್ತು ಸಾಹಿತ್ಯ ಶಾಲೆ ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯ ಬೆಂಗಳೂರಿನ ನಿರ್ದೆಶಕರಾದ ಪ್ರೋ. ಕೆ.ವೈ. ನಾರಾಯಣ ಸ್ವಾಮಿ. ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ ಬಳ್ಳಾರಿ ಕುಲಸಚಿವರಾದ ಎಸ್.ಎನ್.ರುದ್ರೇಶ ಅವರು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ ಬಳ್ಳಾರಿ ಮೌಲ್ಯಮಾಪನ ಕುಲಸಚಿವರಾದ ಪ್ರೋ. ಎನ್.ಎಂ.ಸಾಲಿ. ಕೊಪ್ಪಳ ವಿಶ್ವವಿದ್ಯಾಲಯದ ಪ್ರಭಾರಿ ಕುಲಸಚಿವರಾದ ಪ್ರೋ. ಕೆ.ವಿ. ಪ್ರಸಾದ್. ಕೊಪ್ಪಳ ವಿಶ್ವವಿದ್ಯಾಲಯದ ಸಿಂಡಿಕೇಟ್ ಹಾಗೂ ಅಕಾಡೆಮಿಕ್ ಕೌನ್ಸಿಲ್ ಸದಸ್ಯರು. ಎಲ್ಲಾ ಬೋಧಕ. ಬೋಧಕೇತರ ಸಿಬ್ಬಂದಿಗಳು. ವಿವಿಧ ಕಾಲೇಜುಗಳಿಂದ ಆಗಮಿಸಿದ ಪ್ರಾಂಶುಪಾಲರು. ಸಂಶೋಧನಾ ವಿಧ್ಯಾರ್ಥಿಗಳು. ಸ್ನಾತಕೋತ್ತರ ಪದವಿಗಳ ವಿದ್ಯಾರ್ಥಿ ಹಾಗೂ ವಿಧ್ಯಾರ್ಥಿನಿಯರು ಸೇರಿದಂತೆ ಇತರೆ ಹಲವಾರು ಜನರು ಉಪಸ್ಥಿತರಿದ್ದರು.

Wednesday, 5 March 2025

ಏಪ್ರಿಲ್ 5 ಹಾಗೂ 6 ರಂದು ತೃತೀಯ ಶರಣ ಸಮಾಗಮ. ಶರಣ ಜ್ಞಾನ ಶಿಬಿರ. ಶರಣೆ ದಾನಮ್ಮ ಉತ್ಸವಕ್ಕೆ ಪೂಜ್ಯ ಬಸವಪ್ರಭು ಸ್ವಾಮಿ ಕರೆ


ಬಸವಕಲ್ಯಾಣ : ಬರುವ ಏಪ್ರಿಲ್ ತಿಂಗಳ ಮೊದಲನೆಯ ವಾರದಲ್ಲಿ ಎರಡು ದಿನಗಳ ಶರಣ ಸಮಾಗಮ ಹಾಗೂ ಶರಣೆ ದಾನಮ್ಮ ಉತ್ಸವವನ್ನು ಪ್ರತಿ ವರ್ಷ ದಂತೆ ಈ ವರ್ಷ ಸಹ ಎರಡು ದಿನ ಶರಣ ಜ್ಞಾನ ಶಿಬಿರವನ್ನು ಆಯೋಜನೆ ಮಾಡಲಾಗಿದೆ ಎಂದು ಪೂಜ್ಯ ಬಸವಪ್ರಭು ಸ್ವಾಮಿಜಿಯರು ತಿಳಿಸಿದರು.

       ಅವರು ಶೋಧವಾಣಿಯೊಂದಿಗೆ ಮಾತನಾಡುತ್ತ ವಿವರ ಮಾಹಿತಿ ನೀಡಿದರು. ಎರಡು ದಿನಗಳ ಕಾಲ ಅನೇಕ ಸಂಸ್ಕಾರ ಮತ್ತು ಸಂಸ್ಕೃತಿ ಹಿನ್ನೆಲೆ ಇಟ್ಟುಕೊಂಡು   ಗುಣ ತೀರ್ಥ ವಾಡಿಯ ಕಲ್ಯಾಣ ಮಹಾಮನೆಯಲ್ಲಿ ಏಪ್ರಿಲ್ ೫ ಹಾಗೂ ೬ ರಂದು ತೃತೀಯ ಶರಣ ಸಮಾಗಮ ಹಾಗೂ ದಾನಮ್ಮ ಉತ್ಸವ ನಡೆಯುತ್ತದೆ ಎಂದು ಪೂಜ್ಯ ರು ನುಡಿದರು.

     ಈ ವರ್ಷ ಅನೇಕ ಸಾಮಾಜಿಕ ಹಾಗೂ ಸಾಹಿತಿಕವಾಗಿ ಸೇವೆ ಸಲ್ಲಿಸಿದವರನ್ನು ಗುರುತಿಸಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ. ಈ ಸಮಾರಂಭದಲ್ಲಿ ಕರ್ನಾಟಕದ ಅನೇಕ ಜಿಲ್ಲೆಯಿಂದ ಮತ್ತು ಮಹಾರಾಷ್ಟ್ರ. ತೆಲಂಗಾಣ ರಾಜ್ಯದಿಂದ ಸಹ ಶರಣರು ಪಾಲ್ಗೊಳ್ಳಲಿದ್ದಾರೆ ಎಂದು ಪೂಜ್ಯ ಬಸವಪ್ರಭು ಸ್ವಾಮಿ ಜಿಯವರು ತಿಳಿಸಿದರು. 

       ಈ ಉತ್ಸವಕ್ಕೆ ದಾನಮ್ಮ ಜ್ಯೋತಿ ಯಾತ್ರೆಯನ್ನು ಮೆರಗು ನೀಡಲಿದೆ. ೧೩ ವರ್ಷಗಳ ಕಾಲ ನಿರಂತರವಾಗಿ ಗುಡ್ಡಾಪುರ ಶರಣೆ ದಾನಮ್ಮ ಜ್ಯೋತಿ ಯಾತ್ರೆಯನ್ನು  ಜ್ಯೋತಿ ಹೊತ್ತಿಸಿಕೊಂಡು ಬೀದರ. ಕಲಬುರಗಿ. ವಿಜಯಪುರ. ಸೋಲಾಪುರ. ಸಾಂಗಲಿ ಕೊಲ್ಲಾಪುರ.ಮೂಲಕ ಬಸವಕಲ್ಯಾಣ ಕಲ್ಯಾಣ ಮಹಾಮನೆಗೆ ಬರುತ್ತದೆ ಈ ಜ್ಯೋತಿ ಯಾತ್ರೆ ಯಲ್ಲಿ ಭಕ್ತರು ಭಕ್ತಿ ನಿಷ್ಠೆ ಶ್ರದ್ಧೆ ಆಸಕ್ತಿ ಹೊಂದಿ ಈ ಸಮಾರಂಭದಲ್ಲಿ ಸಾವಿರಾರು ಭಕ್ತರು ಭಾಗವಹಿಸಲಿದ್ದಾರೆ ಎಂದು ನುಡಿದರು.

     ಈ ಉತ್ಸವದಲ್ಲಿ ಅನೇಕ ಹಿರಿಯ ಸಾಹಿತಿಗಳು. ಜನ ನಾಯಕರು. ಬಸವ ಅನುಯಾಯಿಗಳು ಪಾಲ್ಗೊಂಡು ದಾನಮ್ಮನ ಭಕ್ತಿಗೆ ಕೃಪೆಯಾಗಲಿದ್ದಾರೆ‌ ಹಾಗೂ ಈ ಎರಡು ದಿನಗಳ ಉತ್ಸವದಲ್ಲಿ ಭಕ್ತರು ಹೆಚ್ಚಿನ ಪ್ರಮಾಣದಲ್ಲಿ ಆಗಮಿಸಿ ಯಶಸ್ವಿಗೊಳ್ಳಿಸಬೇಕೆಂದು ಪೂಜ್ಯ ಬಸವಪ್ರಭು ಸ್ವಾಮಿಜಿ ಮನವಿ ಮಾಡಿದರು.

Monday, 3 March 2025

ಮರಾಠಾ ಸಮಾಜದ ಅಭಿವೃದ್ಧಿಗೆ ಶ್ರಮಸುವೆ: ಸಾಗರ ಖಂಡ್ರೆ

 

ಬೀದರ: ಮರಾಠಾ ಸಮಾಜದ ಅಭಿವೃದ್ಧಿಗೆ ನಾನು ನಿರಂತರವಾಗಿ ಶ್ರಮಿಸುವೆ. ಮರಾಠಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನವನ್ನು ಬೀದರ ಜಿಲ್ಲೆಗೆ ನೀಡಬೇಕೆಂದು ಹೈಕಮಾಂಡ್ ಮಟ್ಟದಲ್ಲಿ ಚರ್ಚಿಸಲು ಪ್ರಯತ್ನಿಸುವೆ ಎಂದು ಲೋಕಸಭಾ ಸದಸ್ಯರಾದ ಸಾಗರ ಖಂಡ್ರೆ ತಿಳಿಸಿದರು.
ಸಕಲ ಮರಾಠಾ ಸಮಾಜದ ವತಿಯಿಂದ ಪ್ರತಾಪ ನಗರದ ಸರ್ಕಾರಿ ನೌಕರರ ಸಮುದಾಯ ಭವನದ ಸಭಾಂಗಣದಲ್ಲಿ ಆಯೋಜಿಸಿದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಕ್ಷತ್ರೀಯ ಮರಾಠಾ ಸಮುದಾಯದ ಭವನ ನಿರ್ಮಾಣ ಅರ್ಧಕ್ಕೆ ನಿಂತಿದ್ದು, ಕೂಡಲೇ ಈ ಭವನಕ್ಕೆ ಸಂಸದರ ಅನುದಾನದಲ್ಲಿ ರೂ. ೨೫ ಲಕ್ಷ ನೀಡುವುದಾಗಿ ಭರವಸೆ ನೀಡಿದರು.


ಸಮಾಜವನ್ನು ಸಮಾಜದ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಈ ಮರಾಠಾ ಸಮಾಜವನ್ನು ೨ಎ ಪ್ರವರ್ಗಕ್ಕೆ ಸೇರಿಸಬೇಕಾಗಿರುವುದು ಅತಿ ಅವಶ್ಯಕತೆಯಿದೆ. ಹಾಗಾಗಿ ಲೋಕಸಭೆಯಲ್ಲಿ ಈ ಕುರಿತು ಅಧಿವೇಶನದ ಸಂದರ್ಭದಲ್ಲಿ ಧ್ವನಿ ಎತ್ತುತ್ತೇನೆ ಎಂದು ಸಂಸದ ಸಾಗರ ಖಂಡ್ರೆ ತಿಳಿಸಿದರು. ಬೀದರ ನಗರದಲ್ಲಿ ಮರಾಠಾ ಸಮುದಾಯ ಭವನಕ್ಕೆ ೨ ಎಕರೆ ಜಮೀನು ನೀಡಬೇಕೆಂಬ ಬೇಡಿಕೆ ಈಡೇರಿಸುವೆ ಜೊತೆಗೆ ಪ್ರತಿಯೊಂದು ತಾಲೂಕಿನಲ್ಲಿ ಶಿವಸೃಷ್ಟಿ ಹೆಸರಿನ ಶಿವಾಜಿ ಮಹಾರಾಜರ ಸಾಧನೆಗಳನ್ನು ತಿಳಿಸುವ ವಸ್ತುಪ್ರದರ್ಶನ ನಿರ್ಮಾಣ ಮಾಡಲು ಪ್ರಯತ್ನಿಸುವೆ ಎಂದು ಸಾಗರ ಖಂಡ್ರೆ ಹೇಳಿದರು.
ಅಭಿನಂದನಾ ಸಮಾರಂಭದ ಸ್ವಾಗತ ಸಮಿತಿ ಅಧ್ಯಕ್ಷರಾದ ಅಶೋಕಕುಮಾರ ಕಣಜಿಕರ್ ಅವರು ಸಂಸದ ಸಾಗರ ಖಂಡ್ರೆಯವರಿಗೆ ಹಲವು ಬೇಡಿಕೆಗಳುಳ್ಳ ಮನವಿ ಪತ್ರವನ್ನು ಸಲ್ಲಿಸಿದರು.
ವಿಧಾನ ಪರಿಷತ್ ಸದಸ್ಯರಾದ ಡಾ. ಎಂ.ಜಿ.ಮೂಳೆ ಮಾತನಾಡಿ ಮರಾಠಾ ಸಮಾಜವನ್ನು ೨ಎಗೆ ಸೇರ್ಪಡೆ ಮಾಡಬೇಕು. ಕರ್ನಾಟಕ ಮರಾಠ ಅಭಿವೃದ್ಧಿ ನಿಗಮಕ್ಕೆ ಅಧ್ಯಕ್ಷ ಸ್ಥಾನದ ಭರ್ತಿ ಮಾಡಬೇಕು. ಮರಾಠಾ ಸಮುದಾಯದ ಮಕ್ಕಳು ಉನ್ನತ ವ್ಯಾಸಂಗಕ್ಕಾಗಿ ವಿದೇಶಕ್ಕೆ ತೆರಳಿದರೆ ನಿಗಮದ ವತಿಯಿಂದ ರೂ. ೫೦ ಲಕ್ಷ ಅನುದಾನವಿದೆ. ಈಗಾಗಲೇ ಬೀದರ ಜಿಲ್ಲೆಯ ಒಬ್ಬ ವಿದ್ಯಾರ್ಥಿಗೆ ಹಣ ಬಿಡುಗಡೆ ಸರ್ಕಾರ ಮಾಡಿದೆ. ಹೀಗಾಗಿ ಅವಶ್ಯಕತೆ ಇರುವ ವಿದ್ಯಾರ್ಥಿಗಳು ಅರ್ಜಿ ಭರ್ತಿ ಮಾಡಿ ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು. ಮರಾಠ ನಿಗಮ ಮಂಡಳಿ ವತಿಯಿಂದ ಅನೇಕ ಸೌಲಭ್ಯಗಳನ್ನು ಸಮಾಜದ ಜನರಿಗೆ ಸರ್ಕಾರ ನೀಡುತ್ತಿದ್ದು, ಸಮಾಜದ ಜನರು ಈ ಕುರಿತು ತಿಳಿದುಕೊಂಡು ಸದುಪಯೋಗ ಪಡೆದುಕೊಳ್ಳಬೇಕು. ಅರ್ಥವಾಗದಿದ್ದರೆ ನಾನು ಜನರಿಗೆ ಮಾರ್ಗದರ್ಶನ ಮಾಡಲು ಸದಾ ಸಿದ್ಧನಿದ್ದೇನೆ ಎಂದು ಮೂಳೆ ತಿಳಿಸಿದರು.
ಬೆಂಗಳೂರಿನ ಪೂಜ್ಯ ಶ್ರೀ ಜಗದ್ಗುರು ವೇದಾಚಾರ್ಯ ಮಂಜುನಾಥ ಭಾರತಿ ಸ್ವಾಮೀಜಿ ಮಾತನಾಡಿ ಮರಾಠ ಸಮಾಜದ ಇದೊಂದು ಕ್ಷತ್ರೀಯ ಸಮಾಜವಾಗಿದ್ದು, ಇದು ಎಲ್ಲರನ್ನೂ ಇಂಬಿಟ್ಟುಕೊAಡು ಸಮಾನತೆಯಿಂದ ಸಾಗುವ ಸಮಾಜವಾಗಿದೆ. ಎಲ್ಲರೂ ಐಕ್ಯತೆಯಿಂದ ಬದುಕಬೇಕು. ಪರಸ್ಪರ ಪ್ರೀತಿ ವಿಶ್ವಾಸ ಮತ್ತು ನಂಬಿಕೆಯಿAದ ಸಮಾಜದ ಏಳ್ಗೆಗೆ ಶ್ರಮಿಸಬೇಕು. ಪ್ರತಿಯೊಬ್ಬರೂ ತಮ್ಮ ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಬೇಕು. ಸದಾ ಜಾಗೃತರಾಗಿ ಸಮಾಜದ ಸೇವೆಯ ಜೊತೆಗೆ ಸ್ವಯಂ ಏಳ್ಗೆಗೆ ಸಮಯ ನೀಡಬೇಕೆಂದು ತಿಳಿಸಿದರಲ್ಲದೆ, ಕಾರವಾರ ಜಿಲ್ಲೆಯ ಹಳಿಯಾಳ ತಾಲೂಕಿನಲ್ಲಿ ಶ್ರೀಹರಿ ಛತ್ರಪತಿ ಶಿವಾಜಿ ಮಹಾರಾಜ ಗುರುಕುಲ ಸ್ಥಾಪಿಸಲಾಗುತ್ತಿದೆ. ಅಲ್ಲಿ ಸಮಾಜದ ಮಕ್ಕಳಿಗೆ ಶಿಕ್ಷಣ, ಸಂಗೀತ, ವೇದಾಂತ, ಸಂಸ್ಕೃತ, ಸಂಸ್ಕಾರ, ಭಾಷಾ ಜ್ಞಾನ ಸೇರಿದಂತೆ ಮಕ್ಕಳ ಏಳ್ಗೆಗೆ ಬೇಕಾಗುವ ಸಂಸ್ಕಾರ ಇಲ್ಲಿ ನೀಡಲಾಗುವುದು ಎಂದು ತಿಳಿಸಿದರು.
ವೇದಿಕೆ ಮೇಲೆ ಕರ್ನಾಟಕ ಕ್ಷತ್ರೀಯ ಮರಾಠಾ ಪರಿಷತ್ ಅಧ್ಯಕ್ಷ ದಿಗಂಬರರಾವ ಮಾನಕಾರಿ, ಸ್ವಾಗತ ಮತ್ತು ಸತ್ಕಾರ ಸಮಿತಿ ಕಾರ್ಯದರ್ಶಿ ವೆಂಕಟರಾವ ಮಾಯಿಂದೆ, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಬಾಬುರಾವ ಮಾನಕಾರಿ, ಸಕಲ ಮರಾಠಾ ಸಮಾಜದ ಮುಖಂಡರಾದ ಜನಾರ್ಧನ ಬಿರಾದಾರ, ಪಂಚಶೀಲ ಪಾಟೀಲ, ಜನಾರ್ಧನ ವಾಘಮಾರೆ, ಸಕಲ ಮರಾಠಾ ಸಮಾಝದ ಸಂಯೋಜಕರಾದ ಪ್ರದೀಪ ಬಿರಾದಾರ, ಪ್ರಮುಖರಾದ ಪ್ರಕಾಶ ಪಾಟೀಲ, ಕಿರಣ ಬಿರಾದಾರ, ತಾತ್ಯಾರಾವ ಪಾಟೀಲ ಬಸವಕಲ್ಯಾಣ, ರಘುನಾಥರಾವ ಜಾಧವ್, ಪಾಂಡುರAಗ ಕಣಜಿ, ಮೀನಾಕ್ಷಿ ಕಾಳೆ, ಹಣಮಂತರಾವ ಚವ್ಹಾಣ, ಸತೀಶ ಪಾಟೀಲ, ಕಿಶನರಾವ ಪಾಟೀಲ, ಬನಸಿಲಾಲ್ ಬೊರೊಳೆ, ನಾರಾಯಣ ಪಾಟೀಲ, ವಿದ್ಯಾವಾನ್ ಪಾಟೀಲ, ಶಾಹುರಾಜ್ ಪವಾರ್, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಇದೇ ವೇಳೆ ಲೋಕಸಭಾ ಸದಸ್ಯ ಸಾಗರ ಖಂಡ್ರೆ ಹಾಗೂ ವಿಧಾನ ಪರಿಷತ್ ಸದಸ್ಯರಾದ ಡಾ. ಎಂ.ಜಿ.ಮೂಳೆ ಅವರನ್ನು ಸಕಲ ಮರಾಠಾ ಸಮಾಜದ ವತಿಯಿಂದ ಅದ್ಧೂರಿಯಾಗಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲೆಯ ಮರಾಠಾ ಸಮಾಜದ ಸುಮಾರು ೫ ಸಾವಿರಕ್ಕೂ ಅಧಿಕ ಜನರು ಪಾಲ್ಗೊಂಡಿದ್ದರು.

Sunday, 2 March 2025

ಭಾರತ ಸಾಂಸ್ಕೃತಿಕ ಇತಿಹಾಸಕ್ಕೆ ಕೋಲಿ ಜನಾಂಗದ ಕೊಡುಗೆ ಅಪಾರವಾಗಿದೆ.


 ಬಸವಕಲ್ಯಾಣ : ಕೋಲಿ ಜನಾಂಗ ಶ್ರಮಜೀವಿಗಳ, ಸಾಹಸಿಗಳ ಜನಾಂಗವಾಗಿದೆ. ಕಾಯಕ, ದಾಸೋಹ ಪ್ರಧಾನ ಜನಾಂಗವಾಗಿದೆ. ಜ್ಞಾನ ಶೌರ್ಯ ಸಾಹಸಗಳು ಇವರಲ್ಲಿ ರಕ್ತಗತವಾಗಿ ಹಾಸುಹೊಕ್ಕಾಗಿವೆ. ಅಧ್ಯಾತ್ಮದಲ್ಲೂ ಈ ಜನಾಂಗದವರ ಸಿದ್ಧಿ ಸಾಧನೆ ಸೇವೆಗಳು ಮಾದರಿಯಾಗಿವೆ ಎಂದು ಭಾಲ್ಕಿಯ ಬಸವಲಿಂಗ ಪಟ್ಟದ್ದೇವರು ಹೇಳಿದರು. ಅವರು ಬಸವಕಲ್ಯಾಣ ಹತ್ತಿರದ ಸಸ್ತಾಪೂರ ಬಂಗ್ಲಾದಲ್ಲಿರುವ ಅಂಬಿಗರ ಚೌಡಯ್ಯ ಜಾಗೃತ ಪೀಠದ ಜಾತ್ರಾ ಮಹೋತ್ಸವದಲ್ಲಿ ದಿವ್ಯಸಾನಿಧ್ಯವಹಿಸಿ ಮಾತನಾಡುತ್ತಿದ್ದರು. ಮುಂದುವರೆದು, 12ನೇ ಶತಮಾನದಲ್ಲಿ ಅಂಬಿಗರ ಚೌಡಯ್ಯ ಶರಣ ಸಂಕುಲದಲ್ಲಿ ನಿಜ ಶರಣರಾಗಿ ಗುರುತಿಸಿಕೊಂಡಿದ್ದ. ಆತನ ವಚನಗಳು ಸತ್ಯ ನೇರ ದಿಟ್ಟ ನೈಜತನಕ್ಕೆ ಸಾಕ್ಷಿಯಾಗಿವೆ. ಹಾಗಾಗಿಯೇ ಆತನ ವಚನಗಳು ಪ್ರಭಾವಕಾರಿಯಾಗಿವೆ. ಓದುಗರ ಮೇಲೆ ದಟ್ಟ ಪರಿಣಾಮ ಬೀರುತ್ತವೆ ಎಂದರು. ಸ್ವತಂತ್ರö್ಯ್ರ ನಂತರ ಶಿಕ್ಷಣ ಸಂಘಟನೆ ಹೋರಾಟದಲ್ಲಿ ಈ ಜನಾಂಗ ಹಿಂದೆ ಬಿದ್ದಿದ್ದರಿಂದ, ಈ ಜನಾಂಗ ನಿರ್ಲಕ್ಷಕ್ಕೊಳಪಟ್ಟು ಹಿನ್ನಡೆಯನ್ನು ಅನುಭವಿಸಿದೆ. ಬಸವಕಲ್ಯಾಣದ ಸಸ್ತಾಪೂರ ಬಂಗ್ಲಾದಲ್ಲಿ ಸ್ಥಾಪನೆಗೊಂಡ ಈ ಅಂಬಿಗರ ಚೌಡಯ್ಯ ಜಾಗೃತ ಪೀಠದ ಪೀಠಾಧಿಪತಿಗಳಾದ ರತ್ನಕಾಂತ ಶಿವಯೋಗಿಗಳ ಕೆಲಸ ಕಾರ್ಯಗಳು ಜನಾನುರಾಗಿ ದೇವಾನುರಾಗಿ ಆಗಿವೆ. ಹಾಗಾಗಿಯೇ ಈ ಮಠ ನಾಲ್ಕಾರು ವರ್ಷಗಳಲ್ಲೇ ಅದ್ವಿತೀಯವಾದ ಬೆಳವಣಿಗೆ ಕಂಡಿದೆ. ಬಾಗಲಕೋಟೆ ಬಿಜಾಪುರ ಕಲಬುರಗಿ ಬೀದರನಲ್ಲಿ ರತ್ನಕಾಂತ ಶಿವಯೋಗಿಗಳು ದಣಿವರಿಯದೇ ಓಡಾಡಿ ಜನರನ್ನು ಸಂಘಟಿಸಿ ಸರಿದಾರಿಗೆ ತರುತ್ತಿದ್ದಾರೆ. ಶರಣರ ಸಂತರ ಆಶಯಗಳನ್ನು ಈಡೇರಿಸುತ್ತಿದ್ದಾರೆ. ಹಾಗಾಗಿ ಕಲ್ಯಾಣ ನಾಡಿನವರಾದ ನಾವೆಲ್ಲಾ ಇವರಿಗೆ ಸಾಥ್ ನೀಡುವುದು ಜರೂರಾಗಿದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ತೊನಸನಳ್ಳಿ ಅಲ್ಲಮಪ್ರಭು ಮಠಾಧೀಶರಾದ ಡಾ. ಮಲ್ಲಣಪ್ಪ ಸ್ವಾಮಿಗಳು ಮಾತನಾಡುತ್ತಾ, ಇತಿಹಾಸದಲ್ಲಿ ವೇದವ್ಯಾಸ ಅಗಸ್ತö್ಯ ವಾಲ್ಮಿಕಿರಂತಹ ಅಸಂಖ್ಯ ಋಷಿಮುನಿಗಳು ಈ ಜನಾಂಗದಲ್ಲಿ ಆಗಿ ಹೋಗಿದ್ದಾರೆ. ಈಗಲೂ ಯಾನಾಗುಂದಿಯ ಮಾತೆ ಮಾಣಿಕೇಶ್ವರಿ ಹಾಗೂ ಬಿಜಾಪೂರ ಜಿಲ್ಲೆಯ ದೂಡಿಹಾಳದ ಸಮರ್ಥ ಸದ್ಗುರು ಭೀಮಾಶಂಕರರAತಹ ಅನೇಕ ಯೋಗಿ, ಯೋಗಿಣಿಯರು ಈ ಜನಾಂಗದಲ್ಲಿ ಈಗಲೂ ಆಗಿ ಹೋಗುತ್ತಿದ್ದಾರೆ. ದಿವ್ಯ ಜ್ಞಾನಿಗಳು, ದಿವ್ಯ ಯೋಗಿಗಳನ್ನು ನೀಡಿದ ಶ್ರೇಯ ಈ ಜನಾಂಗಕ್ಕಿದೆ. ಭಾರತದ ಸಾಂಸ್ಕೃತಿಕವಾದ ಇತಿಹಾಸ ಬೆಳವಣಿಗೆಯಲ್ಲಿ ಈ ಜನಾಂಗದ ಕೊಡುಗೆ ಅಪಾರವಾದುದಾಗಿದೆ. ಹಾಗಾಗಿ ಈ ಜನಾಂಗದವರು ತಮ್ಮ ಇತಿಹಾಸ ಮತ್ತು ತಮ್ಮ ಚರಿತ್ರೆಯ ಬಗ್ಗೆ ಆಳವಾದ ತಿಳುವಳಿಕೆ ಹೊಂದಿ, ತಮ್ಮ ಜನಾಂಗದ ಬಗ್ಗೆ ಹೆಮ್ಮೆ ಪಡಬೇಕು ಮತ್ತು ತಮ್ಮ ಇತಿಹಾಸ ಪುರುಷರ ಹಾದಿಯಲ್ಲಿ ಸಾಗಬೇಕು. ರತ್ನಕಾಂತ ಶಿವಯೋಗಿಗಳು ಮೌನಸಾಧಕರು ಮತ್ತು ಮಿತಭಾಷಿಗರು ಆಗಿದ್ದಾರೆ. ಇವರು ಏಕಾಂತ ಪ್ರೀಯರು, ಪೂಜಾನಿಷ್ಠರು ಆಗಿದ್ದಾರೆ. ತಾವು ಸ್ಥಾಪಿಸಿದ ಈ ಪೀಠಕ್ಕೆ ಜಾಗೃತ ಆಶ್ರಮವೆಂದು ಸೂಕ್ತ ಹೆಸರಿಟ್ಟು ಕಾರ್ಯತತ್ಪರಾಗಿದ್ದಾರೆ. ಬಿಜಾಪುರದಿಂದ ಕಲ್ಯಾಣದ ಈ ನೆಲಕ್ಕೆ ಬಂದು ಇವರು ಸಾಮಾಜಿಕ ಕ್ರಾಂತಿಗೈಯುತ್ತಿರುವುದು ಸಕಾಲಿಕವಾದುದಾಗಿದೆ. ಇವರ ಜನಜಾಗೃತಿ ಮತ್ತು ಸಮಾಜದ ಅಭಿವೃದ್ಧಿ ಕಾರ್ಯಗಳು ನಿರಂತರವಾಗಿ ನಡೆಯುತ್ತಿವೆ. ಇವರು ಸ್ವತ: ಕ್ರಿಯಾಶೀಲರು ಸಜ್ಜನ ಸಾತ್ವಿಕರು ಸಚ್ಚಾರಿತ್ರö್ಯರು ಆಗಿದ್ದಾರೆ. ತಮ್ಮ ಸಂಪರ್ಕದ ಎಲ್ಲರಿಗೂ ತಮ್ಮ ಈ ಮಾರ್ಗ ಅನುಸರಿಸಲು ಪ್ರೇರೇಪಿಸುತ್ತಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ಮಾತನಾಡಿದ ರತ್ನಕಾಂತ ಶಿವಯೋಗಿಗಳು ಮಾತನಾಡುತ್ತಾ, ಈ ಮಠದ ಬೆಳವಣಿಗೆಯಲ್ಲಿ ಅನೇಕರ ಅನನ್ಯವಾದ ಯೋಗದಾನವಿದೆ. ಈ ಮಠ ದೇಶಪ್ರೇಮ ಸಂಸ್ಕೃತಿಪ್ರೇಮ ಜಾಗೃತಿಗೊಳಿಸುವ ಮಠವಾಗಿದೆ. ಈ ಮಠದ ಒಡನಾಟಕ್ಕೆ ಬಂದವರು ತಾವು ಒಳ್ಳೆಯವರಾಗಿ ಬದಲಾಗುತ್ತಿದ್ದಾರಲ್ಲದೇ, ಬೇರೆಯವರಿಗೂ ಒಳ್ಳೆಯರನ್ನಾಗಿಸಲು ಪ್ರಯತ್ನಿಸುತ್ತಿದ್ದಾರೆ. ಈ ಮಠ ಆಧುನಿಕ ಕಲ್ಯಾಣದಲ್ಲಿ ಅದ್ಭುತ ಕಲ್ಯಾಣಕರ ಕೆಲಸ ಮಾಡುತ್ತಲಿದೆ. ಇದರ ಜನೋಪಯೋಗಿ ಕಾರ್ಯಗಳು ಸಮಾಜದಲ್ಲಿ ಸತ್ಪರಿಣಾಮ ಬೀರುವಂತಹವುಗಳಾಗಿವೆ. ಸರ್ವರ ಕಲ್ಯಾಣವಾಗಬೇಕೆಂಬುದು ಈ ಮಠದ ಸದಾಶಯವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ನಾಗನಾಥ ಚಾಮಲೆ ಇವರು ಮಾತನಾಡುತ್ತಾ ಈಗಿನ ಕಾಲದಲ್ಲಿ ಯುವಜನರು ಆಧುನಿಕ ಆಶಾಪಾಶಗಳಿಗೆ ಬಲಿಬಿದ್ದು, ತಮ್ಮ ಜೀವನ ದುರಂತವಾಗಿಸಿಕೊಳ್ಳುತ್ತಿದ್ದಾರೆ. ತಮ್ಮ 30 ವರ್ಷ ವಯಸ್ಸಿನ ಒಳಗಡೆಯೇ ಅಪಘಾತ ಆಘಾತಕ್ಕೊಳಪಟ್ಟು ಸಾವನ್ನಪ್ಪಿ ತಮ್ಮ ಮನೆತನವನ್ನು ಕಷ್ಠನಷ್ಠಕೀಡು ಮಾಡುತ್ತದ್ದಾರೆ. ಈಗಿನ ಯುವಕರು ದುಶ್ಚಟಗಳು, ದುರ್ವ್ಯವಹಾರಗಳಿದಾಗಿ ಇವರು ಮುಂದೆ ಬರಲು ಆಗುತ್ತಿಲ್ಲ. ಹಾಗಾಗಿ ಸಮಾಜದ ಹಿರಿಯ ಬಾಂಧವರು ತಮ್ಮ ಪೀಳಿಗೆಯ ದುಶ್ಚಟಗಳನ್ನು, ಹಿಂಸೆಗಳನ್ನು, ದ್ವೇಷಗಳನ್ನು ಅಜ್ಞಾನವನ್ನು ತೊಲಗಿಸಿಕೊಂಡು ಮನೆಯೊಳಗಡೆ ಮನೆ ಹೊರಗಡೆ ಶಾಸ್ತೊçÃಕ್ತ ಜೀವನ ನಡೆಸಬೇಕು ಎಂದರು.

ಅತಿಥಿಗಳಾಗಿ ಆಗಮಿಸಿದ ಸಾಹಿತಿ ರುಕ್ಮೊದ್ದೀನ್ ಇಸ್ಲಾಂಪೂರ ಅವರು ಮಾತನಾಡುತ್ತಾ, ರತ್ನಾಕರ ಶಿವಯೋಗಿಗಳು ಜ್ಞಾನಿಗಳನ್ನು ಸಾಧಕರನ್ನು ಕಲಾವಿದರನ್ನು ಅಪಾರವಾಗಿ ಪ್ರೀತಿಸುತ್ತಾರೆ ಗೌರವಿಸುತ್ತಾರೆ ಆಶ್ರಯವಿಯುತ್ತಾರೆ. ಇವರಿಂದಾಗಿ ಅನೇಕರು ದುಶ್ಚಟ ದುರ್ಭಾವ ತೊರೆದು ಸರಿ ದಾರಿ ಹಿಡಿದಿದ್ದಾರೆ. ಇಲ್ಲಿನ ಪರಿಸರ ಅಧ್ಯಾತ್ಮ ಸಾಧನೆಗೆ ಯೋಗ್ಯ ಸ್ಥಳವಾಗಿದೆತಿ ಈ ಪೀಠವಿರುವ ಸ್ಥಳದಲ್ಲಿ ಲಾಲಧರಿ ಶ್ರೀಗಳು ಕಠೀಣ ತಪಸ್ಸು ಗೈದಿದ್ದಾರೆ. ಈ ಅಂಬಿಗರ ಚೌಡಯ್ಯ ಮಠದ ಹತ್ತಿರದಲ್ಲೇ ಬಂದವರ ಓಣಿ ಎನ್ನುವ ಐತಿಹಾಸಿಕ ಸುಕ್ಷೇತ್ರವಿದೆ. ರತ್ನಕಾಂತ ಶಿವಯೋಗಿಗಳು ತಪೋನಿಷ್ಠರಾಗಿದ್ದಾರೆ ಅಧ್ಯಾಯನಶೀಲರಾಗಿದ್ದಾರೆ. ಇವರಲ್ಲಿ ಅಪರಿಮಿತವಾದ ಸಂಘಟನಾಶಕ್ತಿ ವಾಕ್‌ಶಕ್ತಿ ಯೋಗಶಕ್ತಿ ಇದೆ. ಇವರ ಈ ಕಲ್ಯಾಣ ಪರಿಸರದಲ್ಲಿ ನೆಲೆ ನಿಂತು ಸತ್ಕಾರ್ಯ ಗೈಯುತ್ತಿರುವುದು ಶ್ಲಾಘ್ಯವಾದುದಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ ಸಮಾಜ ಮುಖಂಡರಾದ ತುಕಾರಾಮ ರೊಡ್ಡೆ ರವರು ಮಾತನಾಡುತ್ತಾ, ವಾಲ್ಮಿಕಿ ಜನಾಂಗದವರು ಮುಂದೆ ಬರಬೇಕಾದರೆ ತಮ್ಮ ಮನೆಗಳನ್ನು ಸಂಸ್ಕಾರ ಕೇಂದ್ರಗಳನ್ನಾಗಿಸಿಕೊಳ್ಳಬೇಕು. ತಮ್ಮ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸಬೇಕು. ಮನೆಯಲ್ಲಿ ನಿರಂತರ ಪೂಜೆ, ಪುನಸ್ಕಾರಗಳು ಗೈಯಬೇಕು. ಮತ್ತು ಮನೆಯಲ್ಲಿ ಗ್ರಂಥಾಲಯ ಇಟ್ಟುಕೊಳ್ಳಬೇಕು. ಅಧ್ಯಾತ್ಮಿಕಕೇಂದ್ರಗಳಿಗೆ ಸತ್ಸಂಗಗಳಿಗೆ ಕಲಾಕೇಂದ್ರಗಳಿಗೆ ಶಿಕ್ಷಣಕೇಂದ್ರಗಳಿಗೆ ಹಾಜರಾಗಿ ಸದಾ ಸೇವೆ ಸಲ್ಲಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ರತ್ನಕಾಂತ ಶಿವಯೋಗಿಗಳಿಗೆ ಮುದ್ರಿಕಾ ಷಣ್ಮುಖಪ್ಪ ಬೊಕ್ಕೆ ದಂಪತಿಗಳಿ0ದ ಕಡಿಸಕ್ಕರೆಯಲ್ಲಿ ತುಲಾಭಾರ ನಡೆಯಿತು ಹಾಗೂ ವಿದ್ಯಾವತಿ ಸೋಮು ಪರಂಡೆ ದಂಪತಿಗಳಿ0ದ ಹಣದಿಂದ ತುಲಾಭಾರ ನಡೆಯಿತು.

ಕಾರ್ಯಕ್ರಮದಲ್ಲಿ ಖ್ಯಾತ ಸಂಗೀತ ಕಲಾವಿದರಾದ ಸುಭಾಷ ಕಲಖೋರಾ, ಮಾರುತಿ ಚಿಕನಾಗಾಂವ ವಾಡಿ ರವರಿಂದ ಸಂಗೀತ ಕಾರ್ಯಕ್ರಮ ನಡೆಯಿತು. ವಿದ್ಯಾರ್ಥಿಗಳಿಂದ ಕೋಲಾಟ, ನೃತ್ಯ ನಡೆದವು. ಕಾರ್ಯಕ್ರಮದಲ್ಲಿ ಉನ್ನತ ಶಿಕ್ಷಣದಲ್ಲಿ ಸಾಧನೆಗೈದ ಜಯಶ್ರೀ ಹಣಮಂತ ದೇವುಬಾ ಗದ್ಲೆಗಾಂವ(ಬಿ), ಅಕ್ಷತಾ ತುಕಾರಾಮ ರೊಡ್ಡೆ, ಮಹೇಶ್ವರಿ ಮಾಣಿಕರಾವ ಗೋರಮುಡೆರವರಿಗೆ ಸತ್ಕರಿಸಲಾಯಿತು, ಹಾಗೂ ವಿವಿಧ ಕ್ಷೇತ್ರದ ಸಾಧಕರನ್ನು, ಸೇವಕರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಸಸ್ತಾಪೂರದ ಬಂಗ್ಲಾದ ಯಲ್ಲಾಲಿಂಗ ಮಠದ ಮಾತಾ ಮಹಾದೇವಿ, ಹಳ್ಳಿಖೇಡ (ಕೆ) ವಾಲ್ಮೀಕಿರಾಮ ಮಹಾರಾಜ, ಕೌಡಿಯಾಳ (ಎಸ್)ನ ಭಾಗ್ಯವಂತಿ ದೇವಿ, ನಗರಸಭೆ ಅಧ್ಯಕ್ಷ ಸಗಿರೊದ್ದೀನ್,ಉಪಾಧ್ಯಕ್ಷರಾದ ಲಕ್ಷಿö್ಮಬಾಯಿ ಭೀಮಾಪುಲೆ, ಅಝರ ಅಲಿ, ಪಿಂಟು ಜಮಾದಾರ, ಸಿದ್ರಾಮ ದೇವಬಾ, ಪೀರಪ್ಪಾ ಶಣಮೆ, ಪ್ರಕಾಶ ನಾಗೂರೆ, ವಾಲ್ಮಿಕಿ ಕೊಂಡಗೆ, ಸಂಜುಕುಮಾರ ಸುಣಗಾರ, ಮಲ್ಲಿಕಾರ್ಜುನ ನರನಾಳ, ಬಾಬುರಾವ ಚೆಂಗಟಾ, ತಿಮ್ಮಣ್ಣಾ ಮುಸ್ತಾಪೂರ, ಅನೀಲಕುಮಾರ  ಯರಬಾಗ, ದತ್ತು ಪದ್ಮೆ, ಗೋವಿಂದ ಚಾಮಲೆ, ಚನ್ನವೀರ ಜಮಾದಾರ, ಮಲ್ಲಿಕಾರ್ಜುನ ಬೊಕ್ಕೆ, ಗೋವಿಂದ ಗುರೂಜಿ, ದಿಲಿಪ ಗಿರಗಂಟೆ, ರಾಮಣ್ಣಾ ಮಂಠಾಳೆ, ಚಂದ್ರಕಾAತ ಮೇತ್ರೆ ಮುಂತಾದವರು

ಪ್ರೇಮ ಕಾಶ್ಮೀರದಲ್ಲಿ ರಕ್ತದೋಕುಳಿ; ಹಿಂದೂಗಳೇ ಟಾರ್ಗೆಟ...!

  ಪ್ರೇಮ ಕಾಶ್ಮೀರದಲ್ಲಿ ರಕ್ತದೋಕುಳಿ; ಹಿಂದೂಗಳೇ ಟಾರ್ಗೆಟ್. ಭೂಲೋಕದ ಸ್ವರ್ಗವೆಂದೇ ಕರೆಯುವ ಜಮ್ಮು-ಕಾಶ್ಮೀರದ ಪೆಹಲ್ಗಾಮ್ ಸಮೀಪದ ಬೈಸರನ್ ಹುಲ್ಲುಗಾವಲಿನಲ್ಲಿ ಪಾಕ್ ಪ್...