ಸಿಕ್ಸಟಿಯಲ್ಲಿ ಸಿಕ್ಸಪ್ಯಾಕ್..ತೆಲಗುನಾಡಿನಲ್ಲಿ ಕನ್ನಡಿಗನ ಕಸರತ್ತು....
ªÀgÀ¢;-zsÀªÉÄðÃAzÀæ ¥ÀÆeÁj §UÀÆÝj
ಹೈದರಾಬಾದ್; 22 -ಇತ್ತಿಚಿಗೆ ಯುವ ಜನತೆ ಹೆಚ್ಚಾಗಿ ಹೆಲ್ಥ್ ಕಾನ್ಶಿಯಸ್ ಆಗ್ತಿದ್ದಾರೆ ಅನ್ನೊ ಮಾತು ಸುಳ್ಳಲ್ಲಾ..ಹಾಗೆ ಪ್ರಾಕ್ಟಿಕಲ್ ಆಗಿ ದೇಹ ದಂಡಿಸಿ ದೃಡಕಾಯ ಮಾಡಿಕೊಳ್ಳಿ ಅಂದ್ರೇ ಮಾತ್ರ,ಜಿಮ್ ಹತ್ರಕ್ಕೆ ಸುಳಿಯೊ ಯುವಕರು ತುಂಬಾನೆ ಕಡಿಮೆ..ಆದ್ರೇ,ಆ ಹಿರಿಕ ಮಾತ್ರ ಹಾಗಲ್ಲಾ ಬಿಡಿ..ಸಂಧ್ಯಾ ಕಾಲದಲ್ಲಿ ದೇವರ ಧ್ಯಾನ ಮಾಡ್ಕೊಂಡು ಕಾಲ ಕಳೆಯೊ ವಯಸ್ಸಿನಲ್ಲಿ,ಆತನಲ್ಲಿ ಇನ್ನಿಲ್ಲದ ಚೈತನ್ಯ ತುಂಬಿ ತುಳುಕುತ್ತಿದೆ..ವಯಸ್ಸು ಅವರತ್ತರ ಹತ್ರಯಿದ್ರು,ಬಾಡಿ ವರ್ಕೌಟ್ ಮಾತ್ರ ಮರೆಯೊದಿಲ್ಲಾ..ಈ ಏಜ್ನಲ್ಲಿ ಸಿಕ್ಸ ಪ್ಯಾಕ್ ಮಾಡೊಕೆ ಡಿಸೈಡ್ ಮಾಡಿರುವ ಆ ಹಿರಿಯ ನಾಗರಿಕ,ಜಾಗತಿಕವಾಗಿ ಮತ್ತೊಂದು ದಾಖಲೆ ಬರೊಕೆ ತಯಾರಿ ನಡೆಸುತ್ತಿದ್ದಾರೆ...
fêÀ£ÀzÀ°è C¸ÁzsÀåªÁzÀÄzÀÄ AiÀiÁªÀÅzÀÄ
EgÀ¨ÁgÀzÀÄ JA§ÄzÉà EªÀgÀ ¸ÁzsÀ£É, ©ÃzÀgÀ£À°è CAvÀgÀgÁ¶ÖçÃAiÀÄ ªÀÄlÖzÀ°è QæÃqÁ
PÉëÃvÀæzÀ°è ¥ÀzÀPÀ ¥ÀqÉ¢gÀĪÀªÀgÀÄ ¥Àæ¢Ã¥À KPÉÊPÀ ªÀåQÛAiÀiÁVzÀÄ «±ÉõÀªÁVzÉ,
ªÀiÁgÀÄPÀmÉÖAiÀÄ PÉëÃvÀæzÀ°è JwÛzÀ PÉÊ,
PÀ£ÁðlPÀ
gÁeÉÆåÃvÀìªÀ ¸ÀAzÀ¨sÀðzÀ°è PÀ£ÁðlPÀ PÉÊæ¸ÀÛ gÀPÀët ªÉâPÉAiÀÄÄ 2013gÀ°è
PÀ£ÁðlPÀ PÉʸÀÛ gÀvÀß ¥Àæ±À¹ÛAiÀÄ£ÀÄß ªÀiÁf ¥ÉưøÀ C¢üPÁj J¸Àn ¸ÁAUÀ°AiÀÄ£À
¤ÃrzÀgÀÄ, Qæ¸ÀªÀĸÀ GqÀÄUÉÆgÉAiÀÄ£ÀÄß AiÀiÁªÀÅzÉà eÁw zsÀªÀÄð JA§ ªÉÄgÉAiÀÄ£ÀÄß
«Äj »AzÀÆ, ªÀÄĹèA, PÉÊæ¸ÀÛ, J¯Áè ªÀÄvÀzsÀªÀÄð ¨ÁAzsÀªÀjUÉ ªÀ¸ÀÛçªÀ£ÀÄß
¤ÃqÀÄvÁÛgÉ,
ಹೆಸರು ಪ್ರದೀಪ್ಕುಮಾರ್...ಇವರ ವಯಸ್ಸು ಬರೊಬ್ಬರಿ 56..ಇದು ಬಹುತೇಕರ ಪಾಲಿಕೆ ಲೈಫ್ನ ರಿಟೈರ್ಮೇಂಟ್ ಹಂತ ಅಂತಾನೆ ಹೇಳಬಹುದು..ಆದ್ರೇ,ಪ್ರದೀಪ್ಕುಮಾರ್ ಗೆ ಆಗಿರುವ ಐವತ್ತಾರು ವಯಸ್ಸು ಕೇವಲ ಹೆಸರಿಗೆ ಮಾತ್ರ ಇದ್ದಂತಿದೆ.. ದೇಹಕ್ಕು ಆ ವಯಸ್ಸು ಟಚ್ ಮಾಡಿಲ್ಲಾ..ಮನಸ್ಸಿನ ಹತ್ರಾನೂ ಆ ವಯಸ್ಸು ಸುಳಿದಿಲ್ಲಾ..ಹೀಗಾಗಿ ಮಿಸ್ಟರ್ ಪ್ರದೀಪ್ ಕುಮಾರ್ ಇನ್ನೂ ಯಂಗ್ ಌಂಡ್ ಎನರ್ಜಿಟಿಕ್ ಆಗಿದ್ದಾರೆ..ನವಯುವಕರನ್ನ ನಾಚಿಸುವಂತಿದ್ದಾರೆ..ನಿತ್ಯ ಚಟುವಟಿಕೆಯಿಂದ ಇರುವ ಪ್ರದೀಪ್ ತಮ್ಮ ಐವತ್ತಾರನೆ ವಯಸ್ಸಿನಲ್ಲು ದೇಹ ದಂಡಿಸುತ್ತಿದ್ದಾರೆ..ಅತಿಭಾರ ಎತ್ತುವ ಸ್ಪರ್ದೆ ಅಂದರೆ,ಇವರಿಗೆ ಇನ್ನಿಲ್ಲದ ಹುಚ್ಚು..ಕ್ರಿಡೆಯಲ್ಲಿ ಏನಾನ್ನಾದ್ರು ಸಾಧನೆ ಮಾಡ್ಲೇಬೇಕು ಅಂತಾ ಕಂಕಣಕಟ್ಟಿರುವ ಪ್ರದೀಪ್ ಕುಮಾರ್,ಅಂತರಾಷ್ಟ್ರೀಯ ಮಟ್ಟದಲ್ಲಿ ಮಿಂಚಲು ತಯಾರಿ ನಡೆಸಿದ್ದಾರೆ..ಈ ವಯಸ್ಸಲ್ಲಿ ಇದೇಲ್ಲಾ ಬೇಕಾ ಅಂತಾ ಹಿಯಾಳಿಸಿದವರಿಗೆ ಸರಿಯಾದ ಉತ್ತರ ಕೊಡಲು ದಷ್ಟಪುಷ್ಟವಾದ ಮೈಕಟ್ಟನ್ನ ಬೆಳೆಸುತ್ತಿದ್ದಾರೆ..ಮಾಸ್ಟರ್3 ಅಂತರಾಷ್ಟ್ರೀಯ ಚಾಂಪಿಯನ್ಶಿಪ್ನಲ್ಲಿ ಪಾಲ್ಗೊಳ್ಳಲು ಭರದ ತಯಾರಿ ನಡೆಸಿದ್ದಾರೆ..ನಿತ್ಯ ಮುಂಜಾನೆ ಸೂರ್ಯ ಏಳೊದಕ್ಕು ಮುಂಚೆನೆ ಕಸರತ್ತು ಮಾಡಲು ಜಿಮ್ನತ್ತ ಹೆಜ್ಜೆ ಹಾಕ್ತಾರೆ..ಮೋದಲು ಬಂದವರೇ ವಾರ್ಮಪ್ ಮಾಡಿದವರೇ ವೇಟ್ ಲಿಫ್ಟಿಂಗ್ಗಾಗಿ ತಯಾರಿ ನಡೆಸ್ತಾರೆ..ಅತಿಭಾರ ಎತ್ತುವ ಸ್ಪರ್ಧೆಯಲ್ಲಿ ಭಾಗವಹಿಸಬೇಕಾದ್ರೇ ಮೂರು ರೀತಿಯ ಪ್ರಕ್ರಿಯೇಯಲ್ಲಿ ಪಾಲ್ಗೊಳ್ಳಬೇಕಾಗುತ್ತೆ..ಸ್ಕ್ಯಾಟ್,ಬೆಂಚ್ಪ್ರೇಸ್ ಮತ್ತು ಡೆಡ್ಲಿಫ್ಟ್..ಸ್ಕ್ಯಾಟ್ ಅಂದ್ರೇ ಸಾಮರ್ಥ್ಯದ ತೂಕವನ್ನ ಹಿಂಬದಿಯಿಂದ ಹೆಗಲಮೇಲೆ ಹೊರುವುದು..ಹಾಗೇ ಬೆಂಚ್ಪ್ರೇಸ್ ಅಂದ್ರೇ,ಕಾಲು ನೆಲಕ್ಕೆ ಚಾಕಿಸಿ ಅಂಗಾತ ಮಲಗಿ ಭಾರವನ್ನು ಎತ್ತುವುದು..ಇನ್ನೂ ಡೆಡ್ಲಿಫ್ಟ್ ಅಂದ್ರೇ,ಭಾರವನ್ನು ಎದ್ದುನಿಂತು ಮುಂಬದಿಯಿಂದ ಮೋಣಕಾಲಿನವರೆಗೆ ಎತ್ತುವುದು..ಈ ಮೂರು ಭಾರಯತ್ತುವ ಅಭ್ಯಾಸವನ್ನು ಪ್ರದೀಪ್ ಚಾಚುತಪ್ಪದೆ ಮಾಡ್ತಾರೆ..ಕೋಚ್ ಪ್ರೇಮ್ ನಿರ್ದೇಶನದಲ್ಲಿ ಭಾರಎತ್ತುವ ಪ್ರಾಕ್ಟಿಸ್ ನಿತ್ಯ ಮಾಡ್ತಿದ್ದಾರೆ ಪ್ರದೀಪ್ಕುಮಾರ್..
¥Àæ¢Ã¥À CªÀgÀÄ ¸ÁªÀiÁfPÀªÁV
PÁAiÀÄð¤ªÀð»¸ÀÄvÀÛ¯Éà ªÀiÁ£À«AiÀÄ ªÀiË®åUÀ½UÉ MvÀÄÛPÉÆlÄÖ DAzsÀæ¥ÀæzÉñÀ,
PÀ£ÁðlPÀzÀ ©ÃzÀgÀ f¯ÉèAiÀÄ°è »AzÀƽzÀ ªÀUÀðUÀ¼À §qÀªÀjUÉ ºÀ§âzÀ ¸ÀAzÀ¨sÀðUÀ¼À°è
GqÀÄUÉÆgÉUÀ¼À£ÀÄß ¤Ãr ªÀiÁ£À«ÃAiÀÄvÉ ªÉÄgÉAiÀÄÄvÁÛgÉ ¥Àæw ªÀµÀð Qæ¸ÀªÀĸï
DZÀgÀuÉAiÀÄ ¨ÁAzsÀªÀjUÉ MAzÀÄ ªÀiÁzÀjAiÀiÁVgÀĪÀÅzÀ£ÀÄß £ÁªÀÅ £ÉÆÃqÀÄvÉÛêÉ,
ಮಾಸ್ಟರ್ ತ್ರಿ ಅಂದ್ರೇ,ಅರವತ್ತು ವಯಸ್ಸಿನವರಿಗಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಏರ್ಪಡಿಸುವ ಭಾರಎತ್ತುವ ಸ್ಪರ್ದೆ ಎಂದರ್ಥ.. ಸ್ಕ್ಯಾಟ್,ಬೆಂಚ್ಪ್ರೇಸ್ ಮತ್ತು ಡೆಡ್ಲಿಫ್ಟ್ ಈ ಮೂರು ವಿಧಗಳಲ್ಲಿ ಪ್ರದೀಪ್ಕುಮಾರ್ ಬರೊಬ್ಬರಿ 480ಕೆಜಿವರೆಗು ಭಾರ ಎತ್ತುವ ಸಾಮರ್ಥ್ಯ ಹೊಂದಿದ್ದಾರೆ...ನಿತ್ಯ ಪ್ರಾಕ್ಟಿಸ್ನಲ್ಲಿ ಇದಕ್ಕಿಂತ ಹೆಚ್ಚಿಗೆ ವೇಟ್ ಲಿಫ್ಟಿಂಗ್ ಮಾಡಬೇಕು ಅಂತಾ ಬೆವರುಸುರಿಸುತ್ತಿದ್ದಾರೆ..ಕೋಚ್ ಪ್ರೇಮ್,ಇವರ ವಯಸ್ಸನ್ನ ಗಮನಿಸಿ ಜಾಗರುಕತೆಯಿಂದ ಟ್ರೈನಿಂಗ್ ನೀಡುತ್ತಿದ್ದಾರೆ..ಪ್ರದೀಪ್ಕುಮಾರ್ ಮುಂದೆ ಯಾರಾದ್ರು ಯುವಕರು,ಅವರನ್ನ ಎನುಕರಿಸಿದ್ರೇ,ಅವರಿಗಿಂತ ಜಾಸ್ತಿ ಕಸರತ್ತು ಪ್ರದರ್ಶಿಸಿ ಹುಡುಗರೇ ಸುಸ್ತಾಗುವಂತೆ ಮಾಡ್ತಾರೆ..ದಿನಾ ದೇಹ ದಂಡಿಸಿ,ಈಡಿ ಬಾಡಿಯನ್ನ ಮಾಂಸ ಖಂಡಗಳಿಂದ ಕಟ್ಟುಮಸ್ತಾಗಿ ತಯಾರು ಮಾಡಿದ್ದಾರೆ..ಕೆಲವೊಂದಿಷ್ಟು ವರ್ಕೌಟ್ಗಳನ್ನ ಬೇಡ ಅಂದ್ರು ಪ್ರದೀಪ್ ಬಿಡೊದಿಲ್ಲಾ..ತನ್ನ ಗುರಿ ಮುಟ್ಟೊವರೆಗು ತಾನು ವಿರಮಿಸುವುದಿಲ್ಲಾ ಅಂತಾ ಕಸರತ್ತು ಮಾಡ್ತಾನೆ ಇರ್ತಾರೆ..ಮೈಮೇಲಿನ ಟೀಶರ್ಟ ಬೆವರಿನಿಂದ ತೊಯ್ದುಹೊಗುವವರೆಗು ದೇಹ ದಂಡಿಸ್ತಾರೆ ಪ್ರದೀಪ್ ಕುಮಾರ್..
ಪ್ರದೀಪ್ಕುಮಾರ್ ಕೇವಲ ಭಾರಎತ್ತುವ ಸ್ಪರ್ಧೆಗೆ ಮಾತ್ರ ತಯಾರಾಗುತ್ತಿಲ್ಲಾ..ಅವರಿಗೆ ಮತ್ತೊಂದು ಗುರಿ ಕೂಡಾ ಇದೆ. ಎಸ್,ಅದೇ ಸಿಕ್ಸ ಪ್ಯಾಕ್...ಹೌದು,ಪ್ರದೀಪ್ ಕುಮಾರ್ ಕೋಚ್ ಪ್ರೇಮ್,ನ್ಯಾಶ್ನಲ್ ಬಾಡಿ ಬಿಲ್ಡರ್ ಚಾಂಪಿಯನ್..3ಬಾರಿ ಚಾಂಪಿಯನ್ ಪಟ್ಟ ಗಿಟ್ಟಿಸಿದವರು ಪ್ರೇಮ್..ಈಗ ಗುರುವಿಗೆ ಪ್ರದೀಪ್ಕುಮಾರ್ ಸೆಡ್ಡು ಹೊಡೆದಿದ್ದಾರೆ..ತಾನು ಸಿಕ್ಸ ಪ್ಯಾಕ್ ಮಾಡ್ಲೇ ಬೇಕು ಅಂತಾ ಪಟ್ಟುಹಿಡಿದಿದ್ದಾರೆ..ಈ ವರ್ಷ ಅಂತ್ಯದೊಳಗೆ ತಾನು ಪರಿಪೂರ್ಣವಾಗಿ ಬಾಡಿಯನ್ನ ಬಾಡಿವುಡ್ ಬ್ಯಾಡ್ ಬಾಯ್ ಸಲ್ಲುಮಿಯಾ ನಾಚಿಸುವಂತೆ ಸಿಕ್ಸಪ್ಯಾಕ್ ರಡಿ ಮಾಡೊದಾಗಿ ಶಪಥ ಮಾಡಿದ್ದಾರೆ ಪ್ರದೀಪ್ ಕುಮಾರ್..ಮತ್ತೊಂದು ಇಂಟರಸ್ಟಿಂಗ್ ಏನು ಗೊತ್ತಾ ಪ್ರದೀಪ್ಕುಮಾರ್ ಒಮ್ಮೆ ಕಮಿಟ್ ಆದ್ರೇ,ಮುಗಿತಂತೆ..ಸಾಧನೆ ಮಾಡೊವರೆಗು ಬಿಡೊ ಆಸಾಮಿ ಅಲ್ಲವಂತೆ ಅಂತಾ ಜಿಮ್ ನಲ್ಲಿ ಪ್ರತಿಯೊಬ್ಬರು ಹೇಳ್ತಾರೆ..ಈಗಾಗ್ಲೆ ಸಿಕ್ಸಪ್ಯಾಕ್ಗಾಗಿ ಏನೇಲ್ಲಾ ಕರಸತ್ತು ಮಾಡ್ಬೇಕೊ ಅದನ್ನೇಲ್ಲಾ ಶುರುಮಾಡಿದ್ದಾರೆ.. ಬೈಸೆಪ್,ಟ್ರೈಸೆಪ್ ಸಖತ್ ಆಗಿ ರಡಿ ಮಾಡಿಕೊಂಡಿದ್ದಾರೆ..ಬುಜಭಾಗ ಬಾಹುಬಲಿ ರೀತಿಯಲ್ಲಿ ಸಿದ್ದವಾಗ್ತಿದೆ..ಕಾಫ್,ಫೈಯ್ಸ್, ಶೋಲ್ಡರ್,ಚೆಸ್ಟ್ ಮತ್ತು ಅಬ್ಡಾಮನ್ ತಿದ್ದಲು ದಿನಾ 3ಗಂಟೆಗಳ ಕಾಲ ಜಿಮ್ನಲ್ಲೆ ಪ್ರದೀಪ್ ಕಾಲ ಕಳಿತಾರೆ..ಥಾಯ್ಸ್,ಬ್ಯಾಕ್ ಗಾಗಿ ಕೋಚ್ ಪ್ರೇಮ್,ಸಾಕಷ್ಟು ಶ್ರಮವಹಿಸುತ್ತಿದ್ದಾರೆ..ಪ್ರದೀಪ್ಕುಮಾರ್ ಕನಸು ನನಸು ಮಾಡಲು ಪ್ರೇಮ್ ಸಾಥ್ ನೀಡಿ ಪ್ರೋತ್ಸಾಹಿಸುತ್ತಿದ್ದಾರೆ..ಈ ವಯಸ್ಸಿನವರು ಮನೆಯಲ್ಲಿ ಕೂರೊರೆ ಹೆಚ್ಚು..ಇಂಥವರನ್ನ ಪ್ರೋತ್ಸಾಹಿಸಿದ್ರೇ,ಇವರನ್ನು ನೊಡಿ ಯುವಕರು ಪ್ರೇರಿತಗೊಳ್ಳತ್ತಾರೆ ಅಂತಾರೆ ಪ್ರೇಮ್..
ಹೈದರಾಬಾದ್ನಲ್ಲಿ ಸ್ವಂತ ಜಿಮ್......
ಹೈದರಾಬಾದ್ನ ಚಂದಾನಗರ್ ಪ್ರದೇಶದಲ್ಲಿ ಪ್ರದೀಪ್ಕುಮಾರ್ ವಾಸವಾಗಿದ್ದಾರೆ..ದೇಹದಾರ್ಡ್ಯ ಮತ್ತು ಭಾರವೆತ್ತುವ ಕ್ರಿಡೆಗಳೆಂದ್ರೇ ಸಿಕ್ಕಾಪಟ್ಟೆ ಆಸಕ್ತಿ..ಜೀವನ ಅಂದ್ರೇ,ಬರೀ ಊಟಕ್ಕಾಗಿ ಉದ್ಯೊಗ ಮಾಡಿ,ರಿಟೈರ್ ಆದ ಮೇಲೆ ದೇವರ ಧ್ಯಾನ ಮಾಡೊದಷ್ಟೇ ಲೈಫ್ ಅಲ್ಲಾ..ಇದನ್ನ ಬಿಟ್ಟು ಜೀವನದಲ್ಲಿ ಸಾಧನೆ ಮಾಡೊದು ತುಂಬಾನೆ ಇದೆ ಅಂತಾ ಫಿಲಾಸಫಿಯನ್ನ ಪ್ರದೀಪ್ ಕುಮಾರ್ ಕೆವಲ ಹೇಳೊದಷ್ಟೇ ಅಲ್ಲಾ,ಅದನ್ನ ಮಾಡಿ ತೊರಿಸ್ತಾರೆ..ತೊರಿಸ್ತಿದ್ದಾರೆ..ತಮ್ಮ ಪ್ರದೇಶದಲ್ಲಿ ಯಾವುದು ಜಿಮ್ಇಲ್ಲಾ..ಇಲ್ಲಿನ ಯುವಕರಿಗು ಆರೊಗ್ಯದ ಬಗ್ಗೆ ಆಸಕ್ತಿ ಮೂಡಿಸಿದಂತಾಗುತ್ತೆ ಅಂತಾ ಪ್ರದೀಪ್ ಕುಮಾರ್ ಸ್ವಂತ ಜಿಮ್ ಪ್ರಾರಂಭಿಸಿದ್ರು..ಅವರು ವರ್ಕೌಟ್ ಮಾಡೊಕೆ ಶುರುಮಾಡಿದ್ರು...ಅವರನ್ನು ನೊಡಿ ಸುತ್ತಮುತ್ತಲಿನ ಯುವಕರು ಪ್ರೇರಿತಗೊಂಡು ಜಿಮ್ ಜಾಯಿನ್ ಮಾಡಿದ್ರು..ತುಂಬಾ ಕಡಿಮೆ ಶುಲ್ಕ ಪಡೆದು,ಬಡಯುವಕರಿಗೆ ಉಚಿತವಾಗಿ ಕೂಡಾ ಜಿಮ್ನಲ್ಲಿ ಪ್ರವೇಶ ಕೊಟ್ಟಿದ್ದಾರೆ..ಪ್ರದೀಪ್ ತನ್ನೊಂದಿಗೆ ಇತರ ಸುಮಾರು,20 ಯುವಕರನ್ನ ಕೊಚ್ ಪ್ರೇಮ್ ನೇತ್ರತ್ವದಲ್ಲಿ ಚಾಂಪಿಯನ್ ಮಾಡಿದ ಹೆಗ್ಗಳಿಗೆ ಪ್ರದೀಪ್ ಕುಮಾರ್ಗೆ ಸೇರುತ್ತೆ..
ಪ್ರದೀಪ್ ಅರಸಿ ಬಂದ ಪದಕ ಪಾರಿತೊಷಕಗಳು......
ಪ್ರದೀಪ್ ಕುಮಾರ್ ಯಶಸ್ಸಿನ ಪಯಣ ಇಷ್ಟಕ್ಕೆ ಮುಗಿಯೊದಿಲ್ಲಾ..ಜಿಮ್ ಪ್ರಾರಂಭಿಸಿ,20 ಯುವಕರನ್ನ ಚಾಂಪಿಯನ್ ಮಾಡಿ ತಾನು ಕೂಡಾ ಚಾಂಪಿಯನ್ ಆದ ಘಟನೆ ನಡೆದದ್ದು ಒಂದೆರಡಲ್ಲಾ..ಆಂದ್ರದ ವಿಶಾಖಪಟ್ನಂನಲ್ಲಿ ನಡೆದ ಪವರ್ಲಿಫ್ಟಿಂಗ್ ಸ್ಪರ್ಧೆಯಲ್ಲಿ ಒಟ್ಟು 430 ಕೆಜಿ ಭಾರಎತ್ತುವ ಮೂಲಕ ಚಾಂಪಿಯನ್ ಆದ್ರು..ಅಲ್ಲಿಂದ ಪ್ರದೀಪ್ಕುಮಾರ್ ಹಿಂದೆ ತಿರುಗಿ ನೊಡಲೇ ಇಲ್ಲಾ..ತಮ್ಮ ಈಳಿ ವಯಸ್ಸಿನಲ್ಲಿ ಎಲ್ಲರು ಹುಬ್ಬೆರಿಸುವಂತಹ ಸಾಧನೆಗೆ ಮುನ್ನುಡಿ ಬರೆದ್ರು ಪ್ರದೀಪ್..ನ್ಯಾಷನಲ್ ಲೆವಲ್ಗೆ ಆಯ್ಕೆಯಾದ ಪ್ರದೀಪ್,ಅಸ್ಸಾಂನಲ್ಲಿ ನಡೆದ ಅಖಿತ ಭಾರತ ಭಾರ ಎತ್ತುವ ಸ್ಪರ್ಧೆಯಲ್ಲಿ ಭಾಗವಹಿಸಿದ್ರು..ಅಲ್ಲಿ ಚಿನ್ನದ ಪದಕ ಬಾಚಿಕೊಂಡು ಬಂದವರು ಕುಮಾರ್..2010ರಲ್ಲಿ ಅಂತರಾಷ್ಟ್ರೀಯ ಮಟ್ಟದ ಪಂದ್ಯಾವಳಿಯಲ್ಲಿ ಭಾಗವಹಿಸುವ ಸೌಭಾಗ್ಯ ದೊರೆಯಿತು..ಮಂಗೊಲಿಯಾದಲ್ಲಿ ನಡೆದ ಏಷಿಯಾ ಚಾಂಪಿಯನ್ಶಿಪ್ನಲ್ಲಿ ಪ್ರದೀಪ್ ಪಾಲ್ಗೊಂಡಿದ್ರು .ಯಾವ ಕೊಚ್ ಸಹಾಯ ಇಲ್ಲದೇ ಚಾಂಪಿಯನ್ಶಿಪ್ನಲ್ಲಿ ಭಾಗವಹಿಸಿ ಕಂಚಿನ ಪದಕ ಗಳಿಸುವಲ್ಲಿ ಯಶಸ್ವಿಯಾದ್ರು..ಮಂಗೋಲಿಯಾದಲ್ಲಿ ಭಾರತಕ್ಕೆ ಕಿರ್ತಿ ಪತಾಕೆ ಹಾರಿಸಿದ್ರು..ದೇಶದ ವಿವಿದ ರಾಜ್ಯದಲ್ಲಿ ನಡೆದ ಅನೇಕ ಪವರ್ಲಿಫ್ಟಿಂಗ್ ಸ್ಪರ್ಧೆಗಳಲ್ಲಿ ಪ್ರದೀಪ್ ಭಾಗವಹಿಸುತ್ತಾ ಸಾಕಷ್ಟು ಪದಕಗಳನ್ನ ಬಾಚಿಕೊಂಡಿದ್ದಾರೆ..
ಪ್ರದೀಪ್ಕುಮಾರ್ ಕನ್ನಡದ ಕಂದ........
ಅಂದಹಾಗೆ,ನಿಮಗೆ ಈ ವಿಚಾರ ಹೇಳಲೇಬೇಕು..ಪ್ರದೀಪ್ ಕುಮಾರ್,ಕನ್ನಡದ ಹೆಮ್ಮೆಯ ಪುತ್ರ..ಬಿದರ್ ಜಿಲ್ಲೆಯ ಹಳ್ಳದಕೇರಿಯ ಕಂದ..ಪ್ರಾಥಮಿಕ ಮತ್ತು ಪ್ರೌಡ ಶಿಕ್ಷಣ ಬಿದರ್ನಲ್ಲೆ ಮುಗಿಸಿ ನಂತರ ಹೈದರಾಬಾದ್ನಲ್ಲಿ ಪದವಿ,ಮುಂಬೈಯಲ್ಲಿ ಸ್ನಾತಕೊತ್ತರ ಪದವಿ ಪಡೆದಿವರು..1983 ಪದವಿಯಲ್ಲಿ ಎನ್ಸಿಸಿಯಲ್ಲಿ ತೊರಿದ ಅಪ್ರತಿಮ ಸಾಧನೆಯಿಂದ ಅಂದಿನ ಪ್ರಧಾನಿ ಮಂತ್ರಿ ಇಂದಿಯಾಗಾಂಧಿ,ಪ್ರದೀಪ್ಕುಮಾರ್ಗೆ ಸತ್ಕರಿಸಿದ್ರು..ನಂತರ ಹೈದರಾಬಾದ್ನಲ್ಲಿ,ಎಚ್ಬಿಎಲ್ ಬ್ಯಾಟರೀಸ್ ಸೇರಿದಂತೆ ಇತರೆ ಅಂತರಾಷ್ಟ್ರೀಯ ಕಂಪನಿಗಳಲ್ಲಿ ಉನ್ನತ ಹುದ್ದೆಯಲ್ಲಿ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ..ತಮ್ಮ ಬಿಡುವಿಲ್ಲದ ಸಮಯದಲ್ಲು ಕ್ರಿಡೆಯಲ್ಲಿ ಎಲ್ಲರಿಗೆ ಮಾದರಿಯಾಗುವಂತಹ ಕ್ರಿಡಾಪಟು ಆಗಿ ಮೆರೆದಿದ್ದಾರೆ..ದೇಶ ಸುತ್ತಬೇಕು ಅಂತಾ ಆಶೆಯಿಟ್ಕೊಂಡು ಲಾರಿ ಡ್ರೈವರ್ ಆಗಬೇಕು ಅನ್ಕೊಂಡಿದ್ದ ಪ್ರದೀಪ್,ಇವತ್ತು ಅಂತರಾಷ್ಟ್ರೀಯ ಪವರ್ಲಿಫ್ಟರ್ ಆಗಿ ಮಿಂಚುತ್ತಿದ್ದಾರೆ..ಹಾಗೇ ವಿವಿದ ಕಂಪನಿಗಳ ಸಹಾಯದಿಂದ ತಾವೂ ಅನ್ಕೊಂಡಂತೆ ದೇಶ ವಿದೇಶವೇಲ್ಲಾ ಸುತ್ತಿಬಂದಿದ್ದಾರೆ ಮಾಸ್ಟರ್ ಪ್ರದೀಪ್ ಕುಮಾರ್.. ಗ್ರಾಫಿಕ್ಸ..
ಸಾಮಾಜಿಕ ಕಾರ್ಯದಲ್ಲು ಎತ್ತಿದ ಕೈ.....
ತಾನು ಹುಟ್ಟಿದ ಗ್ರಾಮದ ಜನರಿಗೆ ಏನಾದ್ರು ಸಹಾಯ ಮಾಡ್ಬೇಕು ಅಂತಾ ಪ್ರದೀಪ್ಕುಮಾರ್ ತುಡಿತ..ತನ್ನ ಗಳಿಕೆಯಲ್ಲೆ ಪ್ರತಿವರ್ಷ ಕ್ರಿಸ್ಮಸ್ ದಿನಾ ಹಳ್ಳದಕೇರಿಯ ನೂರಾರು ಮಂದಿಗೆ ಹೊಸ ಬಟ್ಟೆಯನ್ನ ಕೊಡುಗೆಯಾಗಿ ನೀಡ್ತಾರೆ..ಮನೆಮಂದಿಗೆಲ್ಲಾ ಹೊಚ್ಚಹೊಸ ಬಟ್ಟೆ ಕೊಡಿಸಿ,ತಮ್ಮ ಜತೆ ಅವರೇಲ್ಲಾ ಖುಷಿಯಾಗಿ ಹಬ್ಬ ಆಚರಿಸುವಂತೆ ಮಾಡ್ತಿದ್ದಾರೆ..ಒಮ್ಮೆ ಪ್ರದೀಪ್ಕುಮಾರ್ ಬಳಿ ಹಣ ಇಲ್ಲದಿದ್ದಾಗ್ಲು,ಸಾಲ ಮಾಡಿ ಸಹಾಯ ಮಾಡಿದ ಸಾಕಷ್ಟು ಉದಾಹರಣೆ ಕೂಡಾ ಇದೆ..ಪ್ರದೀಪ್ಕುಮಾರ್,ಅವರ ಪತ್ನಿ ಸತ್ಯವತಿದೇವಿ ಸಾಮಾಜಿಕ ಕಾರ್ಯದಲ್ಲಿ ಸಾಥ್ ನೀಡ್ತಾರೆ..
ಬಿದರ್ನಲ್ಲಿ ತಂದೆ ತಾಯಿಯನ್ನ ಕಳ್ಕೊಂಡ,ಏಡ್ಸನಿಂದ ಸಾವನ್ನಪ್ಪಿದ ಅನಾಥರಾದ ಮಕ್ಕಳನ್ನ ಕರೆದಂತು ಸಾಕುತಿದ್ದಾರೆ..15 ಅನಾಥ ಹೆಣ್ಣುಮಕ್ಕಳನ್ನ ಪ್ರದೀಪ್ ಮತ್ತು ಸತ್ಯವತಿ ದಂಪತಿ ತಮ್ಮ ಮಕ್ಕಳಂತೆ ನೊಡಿಕೊಳ್ಳುತ್ತಿದ್ದಾರೆ... ಪ್ರದೀಪ್ಕುಮಾರ್ಗೆ ಪುತ್ರ ರೋಹನ್ ಮತ್ತು ಪುತ್ರಿ ಶ್ವೇತಾಕಿರ್ತಿ ತಂದೆಯ ಯಾವುದೇ ಕಾರ್ಯಕ್ಕೆ ಜೋತೆಯಾಗಿರ್ತಾರೆ..ಮಗಳು ಶ್ವೇತಾಕೀರ್ತಿ ಕೆನಡಾದಲ್ಲಿ ವೈದ್ಯಕೀಯ ಸ್ನಾತಕೊತ್ತರ ಪದವಿ ಮಾಡ್ತಿದ್ದಾಳೆ..ಒಂದ್ಕಡೆ ಕುಟುಂಬ ನಿರ್ವಹಣೆ ಮತ್ತೊಂದ್ಕಡೆ ಕರ್ತವ್ಯ ಜವಬ್ದಾರಿ ಇನ್ನೊಂದ್ಕಡೆ ಕ್ರಿಡಾಸಕ್ತಿ ಇಟ್ಕೊಂಡು ಪ್ರದೀಪ್ಕುಮಾರ್ ಮುಂದೆ ಸಾಗುತ್ತಿದ್ದಾರೆ..ಈ ವರ್ಷ ಅಂತ್ಯದೊಳಗೆ ಸಿಕ್ಸ ಪ್ಯಾಕ್ ಮಾಡಿ ಬಾಡಿ ಬಿಲ್ಡರ್ ಸ್ಪರ್ದೆಯಲ್ಲಿ ಭಾಗವಹಿಸಲು ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ..ಕನ್ನಡಿಗ ಪ್ರದೀಪ್ ಕುಮಾರ್,ಇಷ್ಟೇಲ್ಲಾ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ತೊರಿದ್ರು,ರಾಜ್ಯ ಸರಕಾರದಿಂದ ಗುರುತಿಸುವ ಕಾರ್ಯ ನಡೆದಿಲ್ಲಾ..ನಮ್ಮವ ಪ್ರದೀಪ್ನನ್ನ ನಾವು ಬೆಂಬಲಿಸಿದ್ದೆ ಆದ್ರೇ ಕುಮಾರ್ ಖಂಡಿತ ಕರ್ನಾಟಕಕ್ಕೆ ಮತ್ತೊಂದು ಕಿರಿಟ ತೊಡಿಸುವಲ್ಲಿ ಸೆಕ್ಸಸ್ ಆಗ್ತಾರೆ ಅನ್ನೊದರಲ್ಲಿ ಎರಡು ಮಾತಿಲ್ಲಾ...
No comments:
Post a Comment