ads
Search This Blog
Friday, 9 October 2015
Tuesday, 29 September 2015
kannada welfare society hyderabad telangana state
ಹೈದ್ರಾಬಾದ್ನಲ್ಲಿ ಕನ್ನಡ ಭವನ ನಿರ್ಮಾಣಕೆ ಎಲ್ಲ ನಗರದ ಕನ್ನಡಿಗರ ಸಲಹೆ-ಸೂಚನೆಗಳನ್ನು ಸದಾ ಬಯಸುತ್ತೇವೆ, ತಾವುಗಳೊಂದಿಗೆ ನಾವು ಒಂದು ಒಳ್ಳೆಯ ಕಾರ್ಯಕ್ಕೆ ಕೈ ಹಾಕಿದು ತಾವುಗಳು ಹುರಿದುಂಬಿಸಬೇಕು ಎಂದು ತಮ್ಮೆಲ್ಲರಲ್ಲಿ ವಿನಮ್ರವಾಗಿ ಮನವಿ ಮಾಡುತ್ತೇವೆ, ಇ ಕಾರ್ಯದಲ್ಲಿ ಯಾರು ಎರಡು ಬಗೆಯಬಾರದು ಎಂದು ಕೋರುತ್ತೇವೆ,
ಎಲ್ಲ ಕನ್ನಡಿಗರಿಗೂ ಧನ್ಯವಾದಗಳು
ತಮ್ಮ ವಿಶ್ವಾಸಿ
ಅಧ್ಯಕ್ಷರು ಕನ್ನಡ ವೆಲ್ಫೇರ್ ಸೊಸೈಟಿ ಹೈದರಾಬಾದ ನಮಸ್ಕಾರ ಕನ್ನಡಿಗರೇ ಹೈದ್ರಾಬಾದ್ನಲ್ಲಿ ಕನ್ನಡ ಭವನ್ ನಿರ್ಮಾಣ ಮಾಡಬೇಕೆಂದು ಇಂದು ಮುಖ್ಯಮಂತ್ರಿ ಕಾರ್ಯಾಲಯದಲ್ಲಿ ಮುಖ್ಯಮಂತ್ರಿ ಕೆ. ಚಂದ್ರಷೆಖರ ರಾವ್ ಗೆ ಕನ್ನಡ ನಿಯೋಗವನ್ನು ಭೇಟಿಮಾಡಿ ಮನವಿಯನ್ನು ಸಲ್ಲಿಸಲಾಯಿತು, ಅದಕ್ಕೆ ಕೆಸಿಅರ್ ಒಳ್ಳೆಯ ರೀತಿಯಿಂದ ಸ್ಪಂದಿಸಿದರು, ಕನ್ನಡ ವೆಲ್ಫೇರ್ ಸೊಸೈಟಿ ನಿಯೋಗವನ್ನು ಇಂದು ಭೆತಿಯಾಗಿದ್ರು, ಎಲ್ಲ ಸದಸ್ಯರಿಗೂ ಧನ್ಯವಾದಗಳು
ಅಧ್ಯಕ್ಷ್ಯರು ಕನ್ನಡ ವೆಲ್ಫೇರ್ ಸೊಸೈಟಿ ಹೈದರಾಬಾದ
ಎಲ್ಲ ಕನ್ನಡಿಗರಿಗೂ ಧನ್ಯವಾದಗಳು
ತಮ್ಮ ವಿಶ್ವಾಸಿ
ಅಧ್ಯಕ್ಷರು ಕನ್ನಡ ವೆಲ್ಫೇರ್ ಸೊಸೈಟಿ ಹೈದರಾಬಾದ ನಮಸ್ಕಾರ ಕನ್ನಡಿಗರೇ ಹೈದ್ರಾಬಾದ್ನಲ್ಲಿ ಕನ್ನಡ ಭವನ್ ನಿರ್ಮಾಣ ಮಾಡಬೇಕೆಂದು ಇಂದು ಮುಖ್ಯಮಂತ್ರಿ ಕಾರ್ಯಾಲಯದಲ್ಲಿ ಮುಖ್ಯಮಂತ್ರಿ ಕೆ. ಚಂದ್ರಷೆಖರ ರಾವ್ ಗೆ ಕನ್ನಡ ನಿಯೋಗವನ್ನು ಭೇಟಿಮಾಡಿ ಮನವಿಯನ್ನು ಸಲ್ಲಿಸಲಾಯಿತು, ಅದಕ್ಕೆ ಕೆಸಿಅರ್ ಒಳ್ಳೆಯ ರೀತಿಯಿಂದ ಸ್ಪಂದಿಸಿದರು, ಕನ್ನಡ ವೆಲ್ಫೇರ್ ಸೊಸೈಟಿ ನಿಯೋಗವನ್ನು ಇಂದು ಭೆತಿಯಾಗಿದ್ರು, ಎಲ್ಲ ಸದಸ್ಯರಿಗೂ ಧನ್ಯವಾದಗಳು
ಅಧ್ಯಕ್ಷ್ಯರು ಕನ್ನಡ ವೆಲ್ಫೇರ್ ಸೊಸೈಟಿ ಹೈದರಾಬಾದ
೯೯೪೯೧೧೭೯೨೪, ೯೬೭೬೦೫೬೬೬೫,
Saturday, 29 August 2015
srisail news
ಶ್ರೀಶೈಲದಲ್ಲಿ ನೂತನ "ಭಕ್ತ ನಿವಾಸ"ಕ್ಕೆ ಯಡಿಯೂರಪ್ಪನವರಿಂದ ಚಾಲನೆ
ಪೀಠಗಳ ಅಭಿವೃದ್ಧಿಯಿಂದ ಸಮಾಜದ ಏಳ್ಗೆ
-----ಬಿ. ಎಸ್. ಯಡಿಯೂರಪ್ಪ
-----ಬಿ. ಎಸ್. ಯಡಿಯೂರಪ್ಪ
ಶ್ರೀಶೈಲಂ (ಆಂಧ್ರ ಪ್ರದೇಶ)- ಮಠ-ಪೀಠಗಳು ಸಮಾಜದ ಧಾರ್ಮಿಕ ಕೇಂದ್ರಗಳಾಗಿ ಅವು ಸದಾ ಸಮಾಜಮುಖಿಯಾಗಿ ಕೆಲಸ ಮಾಡುವುದರಿಂದ ಅವುಗಳ ಸರ್ವಾಂಗೀಣ ವಿಕಾಸವಾದರೆ ಸಮಾಜದ ಏಳ್ಗೆಯಾಗಲು ಸಾಧ್ಯ ಎಂದು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದರು.
ಶ್ರೀಶೈಲದಲ್ಲಿ ಶ್ರೀಶೈಲ ಜಗದ್ಗುರು ಸೂರ್ಯಸಿಂಹಾಸನ ಮಹಾಪೀಠದ ಶ್ರೀ ಜಗದ್ಗುರು ಪಂಡಿತಾರಾಧ್ಯ ಸೇವಾ ಸಮಿತಿ(ರಿ) ಮೂಲಕ ನಿರ್ಮಿಸಲಾದ ಶ್ರೀ ಜಗದ್ಗುರು ಉಮಾಪತಿ ಪಂಡಿತಾರಾಧ್ಯ ಭಕ್ತ ನಿವಾಸ ಕಟ್ಟಡವನ್ನು ನಾಮಫಲಕ ಅನಾವರಣಗಳಿಸುವ ಮೂಲಕ ಉದ್ಘಾಟಿಸಿ ನಂತರ ನಡೆದ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು.
ಪೀಠದ ಹಾಗೂ ಸಮಾಜದ ಸರ್ವಾಂಗೀಣ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಪ್ರಸ್ತುತ ಜಗದ್ಗುರುಗಳವರಿಗೆ ನಾವೆಲ್ಲರೂ ಕೈಜೋಡಿಸಬೇಕಾಗಿದೆ ಎಂದ ಅವರು ವೀರಶೈವರು ಭಾಷಾ ಭೇದವನ್ನು ಮರೆತು ರಾಷ್ಟ್ರೀಯವಾಗಿ ಒಗ್ಗಟ್ಟಾಗಬೇಕೆಂದು ತಿಳಿಸಿದರು. ಕರ್ನಾಟಕದಲ್ಲಿ ರೈತರಲ್ಲಿ ಮಳೆಯಿಲ್ಲದೇ ಕಂಗಾಲಾಗಿದ್ದಾರೆ. ಕಾರಣ ಅವರಲ್ಲಿ ಆತ್ಮವಿಶ್ವಾಸ ತುಂಬಲು ಮುಂಬರುವ ದಿನಗಳಲ್ಲಿ ಉತ್ತರ ಕರ್ನಾಟಕದಲ್ಲಿ ರೈತ ಚೈತನ್ಯಯಾತ್ರೆ ಕೈಕೊಳ್ಳವುದಾಗಿ ಹೇಳಿದರು.
ಸಮಾರಂಭದ ಸಾನಿಧ್ಯವಹಿಸಿದ ಶ್ರೀ ಶ್ರೀಶೈಲ ಜಗದ್ಗುರು ಡಾ ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಾಹಾಸ್ವಾಮಿಗಳು ಆಶೀರ್ವಚನ ನೀಡುತ್ತ ಶ್ರೀಶೈಲ ಪೀಠದ ಮೇಲೆ ಮೂವತ್ತು ವರ್ಷಗಳವರೆಗೆ ವಿರಾಜಮಾನರಾದ ಲಿಂಗೈಕ್ಯ
ಶ್ರೀಶೈಲ ಜಗದ್ಗುರು ಉಮಾಪತಿ ಪಂಡಿತಾರಾಧ್ಯ ಶಿವಾಚಾರ್ಯ ಮಾಹಾಸ್ವಾಮಿಗಳ ವೇವೆ ಸ್ಮರಣೀಯವಾಗಿರುವುದರಿಂದ ನೂತನ ಭಕ್ತ ನಿವಾಸದ ಕಟ್ಟಡಕ್ಕೆ ಅವರ ಹೆಸರನ್ನು ನಾಮಕರಣ ಮಾಡಲಾಗಿದೆ. ೫೦ ಅಡಿ ಉದ್ದ ೮೩ ಅಡಿ ಅಗಲ ವಿಸ್ತೀರ್ಣದಲ್ಲಿ ನಾಲ್ಕು ಮಹಡಿಗಳಲ್ಲಿ ನಿರ್ಮಾಣಗೊಂಡ ಈ ಕಟ್ಟಡದಲ್ಲಿ ಮಹಾದಾಸೋಹ ಮಂಟಪ, ಸಾಮೂಹಿಕ ಇಷ್ಟಲಿಂಗ ಮಹಾಪೂಜಾ ಮಂಟಪ, ಮೂವತ್ತು ಪೂರ್ಣ ಸುಸಜ್ಜಿತ ಕೋಠಡಿ ಹಾಗೂ ಜಗದ್ಗುರುಗಳ ನಿವಾಸಗಳನ್ನು ನಿರ್ಮಿಸಲಾಗಿದೆ ಎಂದು ತಿಳಿಸಿದ ಅವರು ಈ ಯಡಿಯೂರಪ್ಪನವರು ಮುಖ್ಯಮಂತ್ರಿಗಳಿದ್ದಾಗ ನೀಡಿದ ಅನುದಾನ ಹಾಗೂ ಭಕ್ತರ ಸಹಕಾರಗಳಿಂದ ಈ ಎಲ್ಲ ವಿಕಾಸಗಳನ್ನು ಮಾಡಲು ಸಾಧ್ಯವಾಗಿದೆ ಎಂದರು. ಮುಂಬರುವ ದಿನಗಳಲ್ಲಿ ಬಡವರಿಗೆ ಹಾಗೂ ಸಾಮಾನ್ಯ ಜನರಿಗೆ ಕೂಡ ಅನುಕೂಲವಾಗಲೆಂಬ ದೃಷ್ಟಿಯಿಂದ ಒಂದು "ಡಾರ್ಮೆಟರಿ ಹಾಲ" ನಿರ್ಮಿಸಲಾಗುವದು ಹಾಗೂ ಅದನ್ನು ಕ್ಷೇತ್ರಕ್ಕೆ ಆಗಮಿಸುವ ಸರ್ವೇ ಸಾಮಾನ್ಯ ಜನರಿಗೆ ಉಚಿತವಾಗಿ ನೀಡುವ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು. ಇದಲ್ಲದೇ ಸಮಾಜದ ಸರ್ವಾಂಗೀಣ ವಿಕಾಸದ ಉದ್ದೇಶದಿಂದ "ಶ್ರೀಶೈಲ ಮಲ್ಲಿಕಾರ್ಜುನ ಸಮಾಜೋತ್ಥಾನ(S M S) ಟ್ರಸ್ಟ್ " ಎಂಬ ಹೆಸರಿನಿಂದ ಒಂದು ಸಂಸ್ಥೆಯನ್ನು ನೋಂದಣಿ ಮಾಡಿಸಲಾಗಿದ್ದು, ಇದರ ಮೂಲಕ ಆಂದ್ರ ಪ್ರದೇಶ, ತೆಲಂಗಾಣ, ಕರ್ನಾಟಕ, ಮಾಹಾರಷ್ಟ್ರ ರಾಜ್ಯಗಳಲ್ಲಿ ಆ ಯಾ ಭಗದಲ್ಲಿ ಅಗತ್ಯವಿರುವ ಸಾಮಾಜಿಕ ಸೇವಾ ಕಾರ್ಯಗಳನ್ನು ಪ್ರಾರಂಭಿಸುವ ಯೋಜನೆಯಿದೆ ಎಂದು ಹೇಳಿದರು.
ಈ ಸಮಾರಂಭದಲ್ಲಿ ಬೆಂಗಳೂರಿನ ವೀರಶೈವ ವಿದ್ಯಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷರಾದ ಬಿ ಎಸ್ ಪರಮಶಿವಯ್ಯನವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಜಮಖಂಡಿ ಕಲ್ಯಾಣಮಠದ ಶ್ರೀಗಳು ಮತ್ತು ಮುತ್ತಿನಕಂಥಿ ಮಠದ ಶ್ರೀಗಳು, ಜೈನಾಪುರದ ಶ್ರೀಗಳು ಧರ್ಮ ಸಂದೇಶ ನೀಡಿದರು.
ಬೆಂಗಳೂರಿನ ಗುರುಸ್ವಾಮಿ, ಹೈದ್ರಾಬಾದದ ದೀಪಾವಳಿ ಬಾಬುರಾವ, ಶ್ರೀಶೈಲ ದೇವಸ್ಥಾನದ ಪ್ರಧಾನಾರ್ಚಕ ಪೀಠಂ ಮಲ್ಲಿಕಾರ್ಜುನ ಶಾಸ್ತ್ರಿಗಳು, ಬೀದರದ ರಾಜಶೇಖರ ಸ್ವಾಮಿ ಗೋರಟಾ ಮುಂತಾದವರು ಮಾತನಾಡಿದರು.
ಇದೇ ಸಂದರ್ಭದಲ್ಲಿ ಶ್ರೀಶೈಲ ಪೀಠದಲ್ಲಿ ಅನೇಕ ಜಂಗಮ ವಟುಗಳಿಗೆ ಅಯ್ಯಾಚಾರ ಹಾಗೂ ಭಕ್ತರಿಗೆ ಲಿಂಗದೀಕ್ಷಾ ಕಾರ್ಯಕ್ರಮವು ಕೂಡ ವಿಧಿವತ್ತಾಗಿ ನೆರವೇರಿತು
ಈ ಎಲ್ಲ ಕಾರ್ಯಕ್ರಮಗಳಲ್ಲಿ ಬರ್ದಿಪುರದ ಶ್ರೀಗಳು, ಶಹಾಪೂರದ ಶ್ರೀಗಳು, ಕರಬಂಟನಾಳದ ಶ್ರೀಗಳು, ಬೆಂಗಳೂರಿನ ಮಹೇಶ ಪರಮಶಿವಯ್ಯ, ಸತೀಶ ಆರಾಧ್ಯ, ಹೈದ್ರಾಬಾದದ ವೀರಶೈವ ಮುಖಂಡರಾದ ನೇತಿ ಜ್ಞಾನೇಶ್ವರ, ನೇತಿ ಮಹೇಶ್ವರ, ನೇತಿ ಶ್ರೀಶೈಲಂ, ಮಡುಪು ವೀರಮಲ್ಲೇಶ, ಜಗದೇವ ಹಿರೇಮಠ, ಪಿ ರುದ್ರಮಾದೇವಿ ಮತ್ತು ಶರಣಪ್ಪಗಾರು, ಉಪಸ್ಥಿತರಿದ್ದರು.
ಶ್ರೀಶೈಲ ಪೀಠದ ಆಡಳಿತಾಧಿಕಾರಿ ಎಮ್ ಎಸ್ ಬಸವರಾಜ ಸ್ವಾಮಿ ಸ್ವಾಗತಿಸಿದರು. ಸುಜಾತಮ್ಮ ಗಂಗಾಧರ ಶಾಸ್ತ್ರಿ ಪ್ರಾರ್ಥಿಸಿದರು. ವೀರಶೈವ ಗುರುಕುಲದ ವೇದ ವಿದ್ಯಾರ್ಥಿಗಳು ವೇದಘೋಷ ಮಾಡಿದರು.
ಶ್ರೀಶೈಲದಲ್ಲಿ ಶ್ರೀಶೈಲ ಜಗದ್ಗುರು ಸೂರ್ಯಸಿಂಹಾಸನ ಮಹಾಪೀಠದ ಶ್ರೀ ಜಗದ್ಗುರು ಪಂಡಿತಾರಾಧ್ಯ ಸೇವಾ ಸಮಿತಿ(ರಿ) ಮೂಲಕ ನಿರ್ಮಿಸಲಾದ ಶ್ರೀ ಜಗದ್ಗುರು ಉಮಾಪತಿ ಪಂಡಿತಾರಾಧ್ಯ ಭಕ್ತ ನಿವಾಸ ಕಟ್ಟಡವನ್ನು ನಾಮಫಲಕ ಅನಾವರಣಗಳಿಸುವ ಮೂಲಕ ಉದ್ಘಾಟಿಸಿ ನಂತರ ನಡೆದ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು.
ಪೀಠದ ಹಾಗೂ ಸಮಾಜದ ಸರ್ವಾಂಗೀಣ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಪ್ರಸ್ತುತ ಜಗದ್ಗುರುಗಳವರಿಗೆ ನಾವೆಲ್ಲರೂ ಕೈಜೋಡಿಸಬೇಕಾಗಿದೆ ಎಂದ ಅವರು ವೀರಶೈವರು ಭಾಷಾ ಭೇದವನ್ನು ಮರೆತು ರಾಷ್ಟ್ರೀಯವಾಗಿ ಒಗ್ಗಟ್ಟಾಗಬೇಕೆಂದು ತಿಳಿಸಿದರು. ಕರ್ನಾಟಕದಲ್ಲಿ ರೈತರಲ್ಲಿ ಮಳೆಯಿಲ್ಲದೇ ಕಂಗಾಲಾಗಿದ್ದಾರೆ. ಕಾರಣ ಅವರಲ್ಲಿ ಆತ್ಮವಿಶ್ವಾಸ ತುಂಬಲು ಮುಂಬರುವ ದಿನಗಳಲ್ಲಿ ಉತ್ತರ ಕರ್ನಾಟಕದಲ್ಲಿ ರೈತ ಚೈತನ್ಯಯಾತ್ರೆ ಕೈಕೊಳ್ಳವುದಾಗಿ ಹೇಳಿದರು.
ಸಮಾರಂಭದ ಸಾನಿಧ್ಯವಹಿಸಿದ ಶ್ರೀ ಶ್ರೀಶೈಲ ಜಗದ್ಗುರು ಡಾ ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಾಹಾಸ್ವಾಮಿಗಳು ಆಶೀರ್ವಚನ ನೀಡುತ್ತ ಶ್ರೀಶೈಲ ಪೀಠದ ಮೇಲೆ ಮೂವತ್ತು ವರ್ಷಗಳವರೆಗೆ ವಿರಾಜಮಾನರಾದ ಲಿಂಗೈಕ್ಯ
ಶ್ರೀಶೈಲ ಜಗದ್ಗುರು ಉಮಾಪತಿ ಪಂಡಿತಾರಾಧ್ಯ ಶಿವಾಚಾರ್ಯ ಮಾಹಾಸ್ವಾಮಿಗಳ ವೇವೆ ಸ್ಮರಣೀಯವಾಗಿರುವುದರಿಂದ ನೂತನ ಭಕ್ತ ನಿವಾಸದ ಕಟ್ಟಡಕ್ಕೆ ಅವರ ಹೆಸರನ್ನು ನಾಮಕರಣ ಮಾಡಲಾಗಿದೆ. ೫೦ ಅಡಿ ಉದ್ದ ೮೩ ಅಡಿ ಅಗಲ ವಿಸ್ತೀರ್ಣದಲ್ಲಿ ನಾಲ್ಕು ಮಹಡಿಗಳಲ್ಲಿ ನಿರ್ಮಾಣಗೊಂಡ ಈ ಕಟ್ಟಡದಲ್ಲಿ ಮಹಾದಾಸೋಹ ಮಂಟಪ, ಸಾಮೂಹಿಕ ಇಷ್ಟಲಿಂಗ ಮಹಾಪೂಜಾ ಮಂಟಪ, ಮೂವತ್ತು ಪೂರ್ಣ ಸುಸಜ್ಜಿತ ಕೋಠಡಿ ಹಾಗೂ ಜಗದ್ಗುರುಗಳ ನಿವಾಸಗಳನ್ನು ನಿರ್ಮಿಸಲಾಗಿದೆ ಎಂದು ತಿಳಿಸಿದ ಅವರು ಈ ಯಡಿಯೂರಪ್ಪನವರು ಮುಖ್ಯಮಂತ್ರಿಗಳಿದ್ದಾಗ ನೀಡಿದ ಅನುದಾನ ಹಾಗೂ ಭಕ್ತರ ಸಹಕಾರಗಳಿಂದ ಈ ಎಲ್ಲ ವಿಕಾಸಗಳನ್ನು ಮಾಡಲು ಸಾಧ್ಯವಾಗಿದೆ ಎಂದರು. ಮುಂಬರುವ ದಿನಗಳಲ್ಲಿ ಬಡವರಿಗೆ ಹಾಗೂ ಸಾಮಾನ್ಯ ಜನರಿಗೆ ಕೂಡ ಅನುಕೂಲವಾಗಲೆಂಬ ದೃಷ್ಟಿಯಿಂದ ಒಂದು "ಡಾರ್ಮೆಟರಿ ಹಾಲ" ನಿರ್ಮಿಸಲಾಗುವದು ಹಾಗೂ ಅದನ್ನು ಕ್ಷೇತ್ರಕ್ಕೆ ಆಗಮಿಸುವ ಸರ್ವೇ ಸಾಮಾನ್ಯ ಜನರಿಗೆ ಉಚಿತವಾಗಿ ನೀಡುವ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು. ಇದಲ್ಲದೇ ಸಮಾಜದ ಸರ್ವಾಂಗೀಣ ವಿಕಾಸದ ಉದ್ದೇಶದಿಂದ "ಶ್ರೀಶೈಲ ಮಲ್ಲಿಕಾರ್ಜುನ ಸಮಾಜೋತ್ಥಾನ(S M S) ಟ್ರಸ್ಟ್ " ಎಂಬ ಹೆಸರಿನಿಂದ ಒಂದು ಸಂಸ್ಥೆಯನ್ನು ನೋಂದಣಿ ಮಾಡಿಸಲಾಗಿದ್ದು, ಇದರ ಮೂಲಕ ಆಂದ್ರ ಪ್ರದೇಶ, ತೆಲಂಗಾಣ, ಕರ್ನಾಟಕ, ಮಾಹಾರಷ್ಟ್ರ ರಾಜ್ಯಗಳಲ್ಲಿ ಆ ಯಾ ಭಗದಲ್ಲಿ ಅಗತ್ಯವಿರುವ ಸಾಮಾಜಿಕ ಸೇವಾ ಕಾರ್ಯಗಳನ್ನು ಪ್ರಾರಂಭಿಸುವ ಯೋಜನೆಯಿದೆ ಎಂದು ಹೇಳಿದರು.
ಈ ಸಮಾರಂಭದಲ್ಲಿ ಬೆಂಗಳೂರಿನ ವೀರಶೈವ ವಿದ್ಯಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷರಾದ ಬಿ ಎಸ್ ಪರಮಶಿವಯ್ಯನವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಜಮಖಂಡಿ ಕಲ್ಯಾಣಮಠದ ಶ್ರೀಗಳು ಮತ್ತು ಮುತ್ತಿನಕಂಥಿ ಮಠದ ಶ್ರೀಗಳು, ಜೈನಾಪುರದ ಶ್ರೀಗಳು ಧರ್ಮ ಸಂದೇಶ ನೀಡಿದರು.
ಬೆಂಗಳೂರಿನ ಗುರುಸ್ವಾಮಿ, ಹೈದ್ರಾಬಾದದ ದೀಪಾವಳಿ ಬಾಬುರಾವ, ಶ್ರೀಶೈಲ ದೇವಸ್ಥಾನದ ಪ್ರಧಾನಾರ್ಚಕ ಪೀಠಂ ಮಲ್ಲಿಕಾರ್ಜುನ ಶಾಸ್ತ್ರಿಗಳು, ಬೀದರದ ರಾಜಶೇಖರ ಸ್ವಾಮಿ ಗೋರಟಾ ಮುಂತಾದವರು ಮಾತನಾಡಿದರು.
ಇದೇ ಸಂದರ್ಭದಲ್ಲಿ ಶ್ರೀಶೈಲ ಪೀಠದಲ್ಲಿ ಅನೇಕ ಜಂಗಮ ವಟುಗಳಿಗೆ ಅಯ್ಯಾಚಾರ ಹಾಗೂ ಭಕ್ತರಿಗೆ ಲಿಂಗದೀಕ್ಷಾ ಕಾರ್ಯಕ್ರಮವು ಕೂಡ ವಿಧಿವತ್ತಾಗಿ ನೆರವೇರಿತು
ಈ ಎಲ್ಲ ಕಾರ್ಯಕ್ರಮಗಳಲ್ಲಿ ಬರ್ದಿಪುರದ ಶ್ರೀಗಳು, ಶಹಾಪೂರದ ಶ್ರೀಗಳು, ಕರಬಂಟನಾಳದ ಶ್ರೀಗಳು, ಬೆಂಗಳೂರಿನ ಮಹೇಶ ಪರಮಶಿವಯ್ಯ, ಸತೀಶ ಆರಾಧ್ಯ, ಹೈದ್ರಾಬಾದದ ವೀರಶೈವ ಮುಖಂಡರಾದ ನೇತಿ ಜ್ಞಾನೇಶ್ವರ, ನೇತಿ ಮಹೇಶ್ವರ, ನೇತಿ ಶ್ರೀಶೈಲಂ, ಮಡುಪು ವೀರಮಲ್ಲೇಶ, ಜಗದೇವ ಹಿರೇಮಠ, ಪಿ ರುದ್ರಮಾದೇವಿ ಮತ್ತು ಶರಣಪ್ಪಗಾರು, ಉಪಸ್ಥಿತರಿದ್ದರು.
ಶ್ರೀಶೈಲ ಪೀಠದ ಆಡಳಿತಾಧಿಕಾರಿ ಎಮ್ ಎಸ್ ಬಸವರಾಜ ಸ್ವಾಮಿ ಸ್ವಾಗತಿಸಿದರು. ಸುಜಾತಮ್ಮ ಗಂಗಾಧರ ಶಾಸ್ತ್ರಿ ಪ್ರಾರ್ಥಿಸಿದರು. ವೀರಶೈವ ಗುರುಕುಲದ ವೇದ ವಿದ್ಯಾರ್ಥಿಗಳು ವೇದಘೋಷ ಮಾಡಿದರು.
Sunday, 23 August 2015
12th sept 2015 in hyd umasri program
ಎಲ್ಲ ಕನ್ನಡಾಭಿಮಾನಿಗಳಿಗೆ ನಮಸ್ಕಾರ ಕನ್ನಡಿಗರೇ ಬರುವ ತಿಂಗಳು ಸೆಪ್ಟೆಂಬರ್ ೧೨ ರಂದು ಕರ್ನಾಟಕ ಬರಹಗಾರರ ಮತ್ತು ಕಲಾವಿದರ ಸಂಘ ತೆಲಂಗಾಣ ರಾಜ್ಯದ ಉದ್ಘಾಟನೆ, ಹಾಗೂ ಕನ್ನಡ ವೆಲ್ಫೇರ್ ಸೊಸೈಟಿ ಹೈದರಾಬಾದ ಕನ್ನಡ ಕೂಟದ ದಶಮಾನೋತ್ಸವ ಸಮಾರಂಭಕ ಕರ್ನಾಟಕ ಸರ್ಕಾರದ ಕನ್ನಡ ಸಂಸ್ಕ್ರತಿ ಮಂತ್ರಿಗಳಾದ ನಟಿ ಉಮಾಶ್ರಿಯವರು ಹಾಗೂ ರಾಜಕೀಯ ನಾಯಕರು ಆಗಮಿಸುತ್ತಲಿದು, ಹೈದ್ರಾಬಾದ್ನಲ್ಲಿ ವಾಸವಾಗಿರುವ ಕನ್ನಡಿಗರು ಇ ಸಮಾರಂಭಕೆ ಆಗಮಿಸಿ ಯಶಸ್ವಿಗೊಳಿಸಬೇಕಾಗಿ ವಿನಂತಿ,
ಧನ್ಯವಾದಗಳು
ತಮ್ಮ ವಿಶ್ವಾಸಿ
ಧರ್ಮೇಂದ್ರ ಪೂಜಾರಿ ಬಗ್ದೂರಿ
ಅಧ್ಯಕ್ಷರು; ಕನ್ನಡ ವೆಲ್ಫೇರ್ ಸೊಸೈಟಿ(ರೀ)ಹ್ಯದರಾಬಾದ ಕನ್ನಡ ಕೂಟ,
ಅಧ್ಯಕ್ಷರು ; ಕರ್ನಾಟಕ ಬರಹಗಾರರ ಮತ್ತು ಕಲಾವಿದರ ಸಂಘ ತೆಲಂಗಾಣ ಘಟಕ
ಧನ್ಯವಾದಗಳು
ತಮ್ಮ ವಿಶ್ವಾಸಿ
ಧರ್ಮೇಂದ್ರ ಪೂಜಾರಿ ಬಗ್ದೂರಿ
ಅಧ್ಯಕ್ಷರು; ಕನ್ನಡ ವೆಲ್ಫೇರ್ ಸೊಸೈಟಿ(ರೀ)ಹ್ಯದರಾಬಾದ ಕನ್ನಡ ಕೂಟ,
ಅಧ್ಯಕ್ಷರು ; ಕರ್ನಾಟಕ ಬರಹಗಾರರ ಮತ್ತು ಕಲಾವಿದರ ಸಂಘ ತೆಲಂಗಾಣ ಘಟಕ
Saturday, 8 August 2015
Subscribe to:
Posts (Atom)
ಪ್ರೇಮ ಕಾಶ್ಮೀರದಲ್ಲಿ ರಕ್ತದೋಕುಳಿ; ಹಿಂದೂಗಳೇ ಟಾರ್ಗೆಟ...!
ಪ್ರೇಮ ಕಾಶ್ಮೀರದಲ್ಲಿ ರಕ್ತದೋಕುಳಿ; ಹಿಂದೂಗಳೇ ಟಾರ್ಗೆಟ್. ಭೂಲೋಕದ ಸ್ವರ್ಗವೆಂದೇ ಕರೆಯುವ ಜಮ್ಮು-ಕಾಶ್ಮೀರದ ಪೆಹಲ್ಗಾಮ್ ಸಮೀಪದ ಬೈಸರನ್ ಹುಲ್ಲುಗಾವಲಿನಲ್ಲಿ ಪಾಕ್ ಪ್...
.jpg)
-
ಹೈದರಾಬಾದ್ : ಇಂದು ಬೆಳಿಗ್ಗೆ ಬೀದರನಲ್ಲಿ ನಡೆದ ಎಟಿಎಂ ದರೋಡೆಕೋರರೆ ನಗರದ ಅಫ್ಜಲಗಂಜನಲ್ಲಿರುವ ರೋಷನ ಟ್ರಾವೆಲ್ ಕಛೆರಿಯಲ್ಲಿ ಪೊಲೀಸ್ ಮತ್ತು ದರೋಡೆಕೋರ ಮಧ್ಯೆ ಗುಂಡಿನ ...
-
ಬೀದರ್: ಎಟಿಎಂಗೆ ಹಣ ಹಾಕಲು ಬಂದ ಬ್ಯಾಂಕ್ ಸಿಬ್ಬಂದಿ ಮೇಲೆ ಹಾಡಹಗಲೇ ಗುಂಡಿನ ದಾಳಿ ನಡೆಸಿರುವ ಘಟನೆಯೊಂದು ಬೀದರ್ನ ಎಸ್ಬಿಐ ಮುಖ್ಯ ಕಚೇರಿ ಮುಂದೆ ಗುರುವಾರ ನಡೆದಿದೆ. ...
-
ಶೋಧವಾಣಿ ಜಾಲಲೋಕ ಹೈದರಾಬಾದ್ : ಸಂಘಟಿತ ಹೋರಾಟ ಇಂದಿನ ದಿನಮಾನದ ಜರೂರು ಹೊರನಾಡು ಗಡಿನಾಡಿನ ಕನ್ನಡಿಗರ ಹಿತಕಾಯಲು ಯಾರೂ ಇಲ್ಲವೆನ್ನುವ ಅನಾಥಪ್ರಜ್ಞೆ ಸರಿಯಲ್ಲ. ಭಾಷೆಯ...