ads

Search This Blog

Saturday, 21 December 2024

ಈ ರಾಜ್ಯದಲ್ಲಿ ಏನೇ ನಡೆದರೂ ನಾವೇ ಹೊಣೆಯೇ? ಒಂದು ಸುಳ್ಳು ಮುಚ್ಚಿಕೊಳ್ಳಲು ನೂರು ಸುಳ್ಳು: ಡಿ. ಕೆ. ಶಿ

 

ಈ ರಾಜ್ಯದಲ್ಲಿ ಏನೇ ನಡೆದರೂ ನಾವೇ ಹೊಣೆಯೇ? ಒಂದು ಸುಳ್ಳು ಮುಚ್ಚಿಕೊಳ್ಳಲು ನೂರು ಸುಳ್ಳು: ಡಿ. ಕೆ. ಶಿ

ಬೆಂಗಳೂರು: ಈ ರಾಜ್ಯದಲ್ಲಿ ಏನೇ ನಡೆದರೂ ಡಿ.ಕೆ. ಶಿವಕುಮಾರ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಕಾರಣವೇ? ಎಲ್ಲದಕ್ಕೂ ನಾನೇ ಹೊಣೆಯೇ? ಸಿ.ಟಿ. ರವಿ ಅವರ ವಿಚಾರದಲ್ಲಿ ಸರ್ಕಾರದ ಹಸ್ತಕ್ಷೇಪವಿಲ್ಲ" ಎಂದು ಡಿಸಿಎಂ ಡಿ. ಕೆ. ಶಿವಕುಮಾರ್ ಅವರು ಹೇಳಿದರು.



ಡಿಸಿಎಂ ಡಿ. ಕೆ. ಶಿವಕುಮಾರ್


ಕೆಪಿಸಿಸಿ ಕಚೇರಿಯಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಮಾಧ್ಯಮಗಳ ಪ್ರಶ್ನೆಗೆ ಶುಕ್ರವಾರ ಪ್ರತಿಕ್ರಿಯೆ ನೀಡಿದರು. ಸಿ.ಟಿ. ರವಿ ಅವರ ಮೇಲೆ ಪೊಲೀಸ್ ಕ್ರಮ ತೆಗೆದುಕೊಳ್ಳುವ ವೇಳೆ ಡಿ.ಕೆ.ಶಿವಕುಮಾರ್ ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಪ್ರಭಾವ ಬೀರಿದ್ದಾರೆ ಎನ್ನುವ ಬಿಜೆಪಿಯವರ ಆರೋಪಕ್ಕೆ ಅವರು ಈ ರೀತಿ ತಿರುಗೇಟು ನೀಡಿದರು. ಕ್ರಮ ತೆಗೆದುಕೊಳ್ಳಲು ಪೊಲೀಸರಿದ್ದಾರೆ, ಕಾನೂನಿದೆ. ಅವರು ಯಾವ, ಯಾವ ಸೆಕ್ಷನ್ ಗಳನ್ನು ಹಾಕಿದ್ದಾರೆ ಎಂಬುದು ನಮಗೆ ತಿಳಿದಿಲ್ಲ. ಇದರಲ್ಲಿ ನಮ್ಮ ಯಾವ ಹಸ್ತಕ್ಷೇಪವೂ ಇಲ್ಲ. ಅವರುಂಟು, ಕಾನೂನು ಹಾಗೂ ಪೊಲೀಸರುಂಟು" ಎಂದರು.

ಜಾಮೀನು ಸಿಕ್ಕಿರುವುದು ಮೊದಲ ಗೆಲುವು ಎಂದು ಸಿ.ಟಿ. ರವಿ ಅವರು ಹೇಳಿದ್ದಾರೆ ಎಂದಾಗ, "ತಾಯಿಗೆ, ಹೆಣ್ಣು ಕುಲಕ್ಕೆ, ನಮ್ಮ ಸಂಸ್ಕೃತಿಗೆ ಆಗಿರುವ ಅವಮಾನದ ಬಗ್ಗೆ ಮೊದಲು ಉತ್ತರ ನೀಡಲಿ" ಎಂದು ತಿರುಗೇಟು ನೀಡಿದರು.“ಬಿಜೆಪಿ ನಾಯಕ ಸಿ.ಟಿ ರವಿ ಅವರ ಹೇಳಿಕೆ ಇಡೀ ಹೆಣ್ಣು ಕುಲಕ್ಕೆ ಮಾಡಲಾದ ದೊಡ್ಡ ಅಪಮಾನ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದರು. ಈ ವ್ಯಕ್ತಿಯಿಂದ ಇಂತಹ ಪ್ರವೃತ್ತಿ ಇದೇ ಮೊದಲಲ್ಲ. ಸಿದ್ದರಾಮಯ್ಯ ಅವರು, ಜಯಮಾಲ, ಸೇರಿದಂತೆ ನಮ್ಮ ನಾಯಕರ ಬಗ್ಗೆ ಈ ಹಿಂದೆ ಅನೇಕ ಬಾರಿ ಹೀನಾಯವಾಗಿ ಮಾತನಾಡಿದ್ದಾರೆ. ಸಿ.ಟಿ. ರವಿ ಅವರ ಹೇಳಿಕೆ ಹಾಗೂ ನಡತೆ ಸರಿಯೋ ತಪ್ಪೋ ಎಂದು ಬಿಜೆಪಿಯ ಎಲ್ಲಾ ನಾಯಕರು ಹೇಳಲಿ. ಪೊಲೀಸರ ವಿಚಾರ ನಂತರ ಮಾತನಾಡೋಣ. ಅದನ್ನು ಬಿಟ್ಟು ಪೊಲೀಸರ ಮೇಲೆ ದೂರು ನೀಡುವುದಲ್ಲ. ಪೊಲೀಸರು ತಪ್ಪು ಮಾಡಿದ್ದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳೋಣ” ಎಂದು ತಿಳಿಸಿದರು.

ಚಿಕ್ಕಮಗಳೂರು ಮಾತ್ರವಲ್ಲ, ದೇಶವನ್ನೇ ಬಂದ್ ಮಾಡಲಿ. ಆತ ಮಾಡಿರುವುದು ಘನಕಾರ್ಯವೇ? ಘನಕಾರ್ಯ ಮಾಡಿ ಧೀರಾದಿ ಧೀರನಂತೆ ಬಂದ್ ಮಾಡುತ್ತಾರಾ ಮಾಡಿಕೊಳ್ಳಲಿ” ಎಂದು ತಿಳಿಸಿದರು.

ನೀವು ಜೀವ ಬೆದರಿಕೆ ಒಡ್ಡಿದ್ದೀರಿ ಎಂದು ಬಿಜೆಪಿ ಆರೋಪ ಮಾಡುತ್ತಿದೆ ಎಂದು ಕೇಳಿದಾಗ, “ನಾನು ಆ ಜಾಗದಲ್ಲೇ ಇರಲಿಲ್ಲ. ಪರಿಷತ್ ನಲ್ಲಿ 10 ಪ್ರಶ್ನೆಗೆ ಉತ್ತರ ನೀಡಿ, ಮುಖ್ಯಮಂತ್ರಿಗಳ ಸೂಚನೆ ಮೇರೆಗೆ ನಾನು ವಿಧಾನಸಭೆ ಕಲಾಪಕ್ಕೆ ಹೋದೆ. ನಂತರ ಈ ಘಟನೆ ನಡೆದಿದೆ. ನಂತರ ನಾನು ಮತ್ತೆ ಪರಿಷತ್ತಿಗೆ ಹೋದೆ. ಜೀವ ಬೆದರಿಕೆ ಒಡ್ಡಿದ್ದರೆ ತನಿಖೆ ಮಾಡಲಿ. ಎಲ್ಲಾ ವಿಡಿಯೋ ದಾಖಲೆ ಇದೆಯಲ್ಲ. ಜೀವ ಬೆದರಿಕೆ ಹಾಕಿದ್ದರೆ ಕ್ರಮ ಕೈಗೊಳ್ಳಲಿ. ನಾನು ಏನು ದೊಡ್ಡವನಲ್ಲ. ನಾನು ತಪ್ಪು ಮಾಡಿದ್ದರೆ ಕಾನೂನು ಶಿಕ್ಷೆ ನೀಡಲಿದೆ” ಎಂದರು.

Friday, 20 December 2024

ಶೋಷಿತರ ದನಿ ಡಾ.ಚನ್ನಬಸವ ಪಟ್ಟದ್ದೇವರು.

ಶೋಷಿತರ ದನಿ ಡಾ.ಚನ್ನಬಸವ ಪಟ್ಟದ್ದೇವರು.

ವೈಚಾರಿಕ ಚಿಂತಕರು, ನೂತನ ಅನುಭವ ಮಂಟಪದ ರೂವಾರಿ,ಕಾಯಕ ನಿಷ್ಠೆ-ದಾಸೋಹ ಮನೋಧರ್ಮದ ಕರುಣಾ ಮೂರ್ತಿ,ಅನಾಥರ - ನೊಂದವರ ದನಿ, ಅವರ ಬಾಳಿನ ಬೆಳಕು,ಗಡಿ ಭಾಗದಲ್ಲಿ ಕನ್ನಡ ಉಳಿಸಿ - ಬೆಳೆಸಿದ ಕನ್ನಡ ಭಾಷಾ
ಪ್ರೇಮಿ,ವಚನ ಸಾಹಿತ್ಯ ತತ್ವಗಳನ್ನು ಸಾಗರದಾಚೆಗೂ ಕೊಂಡೊಯ್ದ ಮೇಧಾವಿ ಸಂತರ ಸಂತ, ಸರಳತೆಯನ್ನು ಮೈಗೂಡಿಸಿಕೊಂಡ ಸ್ನೇಹ ಜೀವಿ, ಸರ್ವರನ್ನೂ ಸಮಾನತೆಯಿಂದ ಕಂಡ ಸಮತಾವಾದಿ, ನುಡಿದಂತೆ ನಡೆದು,
ಜಗತ್ತಿಗೆ ಮಾದರಿಯಾಗಿ ಬದುಕಿ, ಇತರರಿಗೆ ಆದರ್ಶ ಚೇತನರಾಗಿ ಬಾಳಿದ ನಮ್ಮ ಹೆಮ್ಮೆಯ ಕಲ್ಯಾಣದ ಪ್ರಜ್ವಲ್ ಜ್ಯೋತಿ ಭಾಲ್ಕಿ ಹಿರೇಮಠ ಸಂಸ್ಥಾನದ ಪರಮ ಪೂಜ್ಯ ಶ್ರೀ ಡಾ. ಚನ್ನಬಸವ ಪಟ್ಟದ್ದೇವರ ನಿಸ್ವಾರ್ಥ ಸೇವೆ ಅನನ್ಯವಾದುದು.




ಡಾ.ಚನ್ನಬಸವ ಪಟ್ಟದ್ದೇವರು.

ಪರಮ ಪೂಜ್ಯ ಡಾ.ಚನ್ನಬಸವ ಪಟ್ಟದೇವರನ್ನು  21ನೇಯ ಶತಮಾನದ ಮಾಹಾಶಿವಶರಣರು,  ಸಾಮಾಜಿಕ ಸಮಾನತೆ, ದೀನ ದಲಿತರ, ಶೋಷಿತರ, ಬಡವರ - ನೊಂದವರ ದನಿಯಾಗಿ ಹಗಲಿರುಳು ದುಡಿದು, ಬಸವಾದಿ ಶರಣರ ಹಾದಿಯಲ್ಲಿ ಸಾಗುವ ಕಾಯಕವನ್ನು ನಿತ್ಯ ನಿರಂತರವಾಗಿ ಮಾಡಿಕೊಂಡು ಬಂದಿರುತ್ತಾರೆ. ಅಂತೆಯೇ  ಗಡಿಭಾಗದಲ್ಲಿ ಕನ್ನಡ ಭಾಷೆ ಅವನತಿಯ ಹಂತದಲ್ಲಿ ಇದ್ದಾಗ ಕನ್ನಡವನ್ನು  ಉಳಿಸಿ ಬೆಳೆಸುವಲ್ಲಿ ಇವರ ಶ್ರಮ ದೊಡ್ಡದು. ಕನ್ನಡತನವನ್ನು ಸಂರಕ್ಷಣೆ ಮಾಡಿ,ಕನ್ನಡ ಭಾಷೆಗೆ ಹೊಸ ಆಯಾಮ ನೀಡಿದವರು. ಕನ್ನಡ ಭಾಷಾ ಸಾಹಿತ್ಯ ಲೋಕಕ್ಕೆ ಮರೆಯಲಾಗದ ಹೃದಯಸ್ಪರ್ಶಿ ಸೇವೆಯನ್ನು  ಸಲ್ಲಿಸಿದ್ದಾರೆ.ಕನ್ನಡವನ್ನು ವಿಶ್ವ ಭಾಷೆಗಳಿಗೆ ಸಮಾನವಾಗಿ ಬೆಳೆಸುವ ನಿಟ್ಟಿನಲ್ಲಿ ಇವರ ಅನುಪಮ ಸೇವೆ ಎಂದೆಂದಿಗೂ ಮರೆಯಲಾಗದು.
ಇದಲ್ಲದೇ ಈ ಭಾಗದ ಶರಣರ ಸಮಾಜಿಕ ಸಾಮರಸ್ಯದ ಸೇತುವೆಗಳಾದ ಸಾಹಿತ್ಯ, ಸಂಸ್ಕೃತಿ, ಶಿಕ್ಷಣ,ಸಂಗೀತ ಸೇರಿದಂತೆ ಮೊದಲಾದ ಜನಪರ ಕ್ಷೇತ್ರಗಳಿಗೆ ಹೆಚ್ಚು ಒತ್ತು ಕೊಟ್ಟು ಜನಸಾಮಾನ್ಯರ ದನಿಗೆ ದನಿಯಾಗಿ, ಅವರುಗಳ ಮಾನಸಿಕ ನೆಮ್ಮದಿಗೆ ಕಾರಣೀಭೂತರಾಗಿದ್ದಾರೆ. ಹೀಗೆ ಹತ್ತು ಹಲವು ಸಮಾಜಿಕವಾಗಿ ತಮ್ಮನ್ನು ತಾವು ತೊಡಗಿಸಿಕೊಂಡು ಪ್ರೇರಣೆದಾಯಕ ಕೆಲಸಗಳನ್ನು ಮಾಡಿದ್ದಾರೆ.
ಅಂದಹಾಗೆ ಎಂತಹದೇ ಕಷ್ಟದ  ಸಮಯದಲ್ಲಿಯೋ ನಾಡು ನುಡಿ – ಭಾಷೆ, ಸಂಸ್ಕೃತಿಯ, ಆಚಾರ - ವಿಚಾರಗಳ ಬಂದಾಗ, ಯಾವುದೇ ರೀತಿಯಲ್ಲಿ ರಾಜಿ ಮಾಡಿಕೊಳ್ಳದೇ - ಸ್ವಾರ್ಥಕ್ಕೆ ಬಲಿಯಾಗದೆ ಆತ್ಮಸಾಕ್ಷಿಯಗಿ, ಕೆಲಸ ಕಾರ್ಯಗಳು ಮಾಡಿಕೊಂಡು ಬಂದಿದ್ದಾರೆ. ಉದಾಹರಣೆಗೆ ಹೇಳಬೇಕಾದರೆ ಹೊರಗೆ ಉರ್ದು ಫಲಕ ಹಾಕಿ,ಒಳಗಡೆ ಕನ್ನಡ ಕಲಿಸಿದ್ದು ಯಾರು ಮರೆಯುವಂತಿಲ್ಲ. ಇದು  ಐತಿಹಾಸಿಕ ಘಟನೆ ಅಲ್ಲವೇ ?  ಇದು ಇವರು ಕರ್ನಾಟಕ ರಾಜ್ಯಕ್ಕೆ, ಕನ್ನಡ ಬಾಷಾ ಲೋಕಕ್ಕೆ ಸಲ್ಲಿಸಿದ ಬಹು ದೊಡ್ಡ ಕನ್ನಡದ ಸೇವೆ ಅಂದರೆ ತಪ್ಪಾಗಲಾರದು. 

ಕಲ್ಯಾಣ ಕರ್ನಾಟಕ : ಈ ಭಾಗದ ವಿಮೋಚನೆಗಾಗಿ ಸಹ ಹೋರಾಟ ಮಾಡಿದಾರೆ. ಕರ್ನಾಟಕ ಏಕೀಕರಣಕಾಗಿ ಹಗಲಿರುಳು ದುಡಿದಿದ್ದಾರೆ. ಕರ್ನಾಟಕ ರಾಜ್ಯ ಸಮಗ್ರಹ ಅಭಿವೃದ್ಧಿಗಾಗಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅಭಿವೃದ್ಧಿ ಕೈಂಕರ್ಯಗಳು ಮಾಡಿರುತ್ತಾರೆ. ಅದೇ ರೀತಿ ನೆಲ,ಜಲ, ಕನ್ನಡ ಭಾಷಾಭಿಮಾನವನ್ನು  ಜನಸಾಮಾನ್ಯರ ಮನದಾಳದಲ್ಲಿ ಬಿತ್ತುವ ಕಾಯಕವನ್ನು ನಿರಂತರವಾಗಿ ಮಾಡಿರುತ್ತಾರೆ. ಜೊತೆಗೆ ವಚನ ಸಾಹಿತ್ಯ ತತ್ತ್ವದ ಸಾರವನ್ನು ಜನಸಮುದಾಯಕ್ಕೆ ಧಾರೆಯೆರೆದು, ಕೃಷಿ ಕಾಯಕ ಮಾಡಿಕೊಂಡು ಕಲ್ಯಾಣ ಕರ್ನಾಟಕ ಭಾಗಕ್ಕೆ ತಮ್ಮದೇ ಆದಂತಹ ವಿಶಿಷ್ಟ ಛಾಪನ್ನು ಮೂಡಿಸಿದ್ದಾರೆ.
ಸಮಾನತೆ ದನಿ ಪರಮ ಪೂಜ್ಯ ಶ್ರೀ: ಅಂದಿನ ಸಮಾಜದಲ್ಲಿ ದಲಿತರಿಗೆ ಸಮಾನತೆಯ ಭಾಗ್ಯ ಇರಲಿಲ್ಲ, ಹಾಗೆ ಮೇಲ್ವರ್ಗದ ಜನರ ಗಲ್ಲಿಗಳಲ್ಲಿ  ಕುಡಿಯುವ ನೀರನ್ನು ಉಪಯೋಗಿಸಲು ಸಹ ಬೀಡುತ್ತಿರಲಿಲ್ಲಾ - ಕೊಡುತ್ತಿರಲಿಲ್ಲ ಹಾಗಾಗಿ ಇದನ್ನು ಕಂಡ ಪಟ್ಟದ್ದೇವರು ಇಂತಹ ಹೀನ ಪದ್ಧತಿಗೆ ತೀಲಾಂಜಲಿ ನೀಡಬೇಕೆಂಬ ಉದ್ದೇಶದಿಂದ
ದಲಿತರನ್ನು ತಮ್ಮ ಮಠಕ್ಕೆ ಕರೆಯಿಸಿ ಮೊಟ್ಟ ಮೊದಲ ಬಾರಿಗೆ (ಶ್ರೀಮಠದ) ಬಾವಿಯ ನೀರನ್ನು  (ದಲಿತರ)ಮನೆಗೆ ಒಯ್ಯಲು ಮತ್ತು ಕುಡಿಯಲು ಕೊಟ್ಟರು,ಕೊಡುವ ಮೂಲಕ  ಭಾಲ್ಕಿಯಲ್ಲಿ ಸತತವಾಗಿ ಬರಗಾಲ ಬಂದಾಗ ದಲಿತ ಬಂಧುಗಳಿಗೆ ಮಠದ ಬಾವಿಯ ನೀರು ಒಯ್ಯಲು ತಿಳಿಸಿದರು, ತಿಳಿಸುವ ಮೂಲಕ ಶರಣರ ವಾಣಿಯಂತೆ ನಡೆದರು ಜೊತೆಗೆ ದಲಿತರಿಗೆ ಲಿಂಗಾಯತ ಧರ್ಮದ ಲಿಂಗದೀಕ್ಷೆ ನೀಡಿದರು ತರುವಾಯ ಅವರೊಂದಿಗೆ ಲಿಂಗಾಯತರ ಸಂಬಂಧ ಬೆಳೆಸಲು ಶ್ರಮಿಸಿದರು ಹಾಗೂ ಶ್ರೀಗಳ ಇಷ್ಟಲಿಂಗ ಪೂಜಾ ಸಮಯದಲ್ಲಿ (ಶ್ರೀಗಳ ಕೋಣಿಯಲ್ಲಿ )ದಲಿತರಿಗೆ ಪ್ರವೇಶ ನೀಡುವ ಮೂಲಕ ಸಮಾನತೆಯನ್ನು ಮೆರೆದರು ಜೊತೆಗೆ ಸಹ ಪಂಕ್ತಿ (ಸಹಭೋಜನ)
ಭೋಜನ ಮಾಡುವ ಔರ್ದಾಯ ಮಾಡಿ ಸಮಾನತೆಗೆ ಸಾಕ್ಷಿಕರಿಸಿದ್ದರು. ಸರ್ವರೂ ಸಮಾನರು ಎನ್ನುವ ಬಸವಣ್ಣನವರ ಆಶಯಗಳನ್ನು ಜಾರಿಗೆ ತಂದ ಕೀರ್ತಿ ಇವರದಾಗಿತ್ತು ಮತ್ತು ಅವರ ಗಲ್ಲಿಗಳಿಗೆ ತೆರಳಿ ಶರಣರ ಸಂದೇಶಗಳನ್ನು ತಿಳಿಸುವ ಕಾರ್ಯ, ಅವರ ಮನೆಗಳಲ್ಲಿ ಪ್ರಸಾದ ಮಾಡುವ ಪದ್ಧತಿ,ಅವರ ಮಕ್ಕಳಿಗೆ ಉಚಿತವಾಗಿ ವಿಧ್ಯಾಭ್ಯಾಸ,  ಉದ್ಯೋಗವಕಾಶ,ಮಹಿಳೆಯರಿಗೆ ಸಮಾನ ಹಕ್ಕಿನ ಆದ್ಯತೆ,ಶ್ರೀಮಠದಲ್ಲಿ ಅವರಿಗೆ ಮುಕ್ತವಾದ ಸ್ವಾತಂತ್ರ್ಯ,ಆತ್ಮಸ್ಥೈರ್ಯ ತುಂಬಿರುವುದು ಸೇರಿ ಇತ್ಯಾದಿ ಹಲವಾರು ಕೆಲಸಗಳನ್ನು ಚಾಚೂ ತಪ್ಪದ ಮಾಡುವ ಮೂಲಕ ಶ್ರೀಮಠದ ಘನತೆಯನ್ನು ಹೆಚ್ಚಿಸಿದ್ದರು.ತರುವಾಯ
ಬಸವಾದಿ ಶರಣರ ಸನ್ಮಾರ್ಗದಲ್ಲಿ ಸಾಗುವ ಕೆಲಸದ ಜೊತೆ ಸಮಾನತೆ, ಸಹೋದರತೆ,ಸಹಬಾಳ್ವೆಗಳನ್ನು ಪ್ರಮಾಣಿಕವಾಗಿ ಜಾರಿಗೆ ತರಲು ಶ್ರಮಿಸಿದ್ದಾರೆ.ಹೀಗೆ ಅನೇಕ ಸಮಾಜಿಕ ಸಮಾನತೆಯ ಸಾರುವ ಸೇವೆಗಳ ಮೌಲ್ಯಗಳನ್ನು ಕೆಳವರ್ಗದ ಜನರಲ್ಲಿ
ಯಶಸ್ವಿಯಾಗಿ ಬಿತ್ತುವ ಕಾಯಕವನ್ನು ಅವರ ಬದುಕಿನ ಉದ್ದಕ್ಕೂ ಮಾಡಿಕೊಂಡು ಬಂದು  ಸರ್ವ ಜನಾಂಗಕ್ಕೂ ವಚನ ಸಾಹಿತ್ಯದ ಜ್ಯೋತಿಯನ್ನು ಪ್ರಜ್ವಲಿಸಿದ್ದಾರೆ. ಜನಸಾಮಾನ್ಯರ ಧ್ವನಿಯಾಗಿ, ಸಮಾನತೆಯನ್ನು ಸಾರಿದ್ದಾರೆ.
ಪೂಜ್ಯರ ಶರಣ ಸಂಸ್ಕೃತಿಡಾ. ಚನ್ನಬಸವ ಪಟ್ಟದ್ದೇವರ ಬದುಕು ಸರಳ,ಸಜ್ಜನೀಕೆಯಿಂದ ಕೂಡಿತು ,  ನಿಷ್ಠಂಳಕ ಮನಸ್ಸು, ಶರಣ ಸಂಸ್ಕೃತಿಯನ್ನು ಅಪಾರವಾಗಿ ಪ್ರೀತಿಸುತ್ತಿದ್ದ ಶ್ರೀಗಳು ನಿರಂತರ ಕೃಷಿ ಕಾಯಕ ಮಾಡುತ್ತಿದ್ದರು. ಕಾಯಕದಲ್ಲಿ ಮೇಲು ಕೀಳು ಎಣಿಸುತ್ತಿರಲ್ಲಿಲ್ಲ.ಕಾಯಕವೇ ಮನುಷ್ಯರ ಬಾಳಿನ ಬೆಳಕು ಎಂದು ತಿಳಿದುಕೊಂಡಿದ್ದರು. ಹಾಗಾಗಿ ಅವರವರ ಬುದ್ದಿ, ಶಕ್ತಿ ಅನುಸಾರವಾಗಿ ಕಾಯಕವನ್ನು ಮಾಡಿಕೊಂಡು ಬಾಳಬೇಕೆಂದು ಶ್ರೀಗಳು ಕರೆ ನೀಡುತ್ತಿದ್ದರು.
ಮಿತ ಆಹಾರದ ಶ್ರೀಗಳಾಗಿ, ಖಾದಿ ಕಾವಿಬಟ್ಟೆ ಯಾವಾಗಲೂ ಬಳಸುತಿದ್ದರು. ಎಂದು ಸಹ  ಅವರು ಆಧುನಿಕತೆಗೆ ಮಾರು ಹೋಗಲಿಲ್ಲಾ,  ಬದುಕಿನ ಕೊನೆಯ ದಿನಗಳ ವರೆಗೂ ಹಲ್ಲುಜ್ಜಲು ಬೇವಿನ ಕಡ್ಡಿಯನ್ನೇ ಬಳಸುತಿದ್ದರು. ಹೀಗೆ ಮಿತ ಆಹಾರ, ಸಾಮಾನ್ಯ ಹಾಸಿಗೆ, ಸರಳ ನಡೆ ನುಡಿ ಹೊಂದಿದ್ದ ಶ್ರೀಗಳು ತಮ್ಮೆಲ್ಲ ಜ್ಞಾನ - ಶಕ್ತಿಯನ್ನು ತಮ್ಮ ಸುತ್ತಲಿನ ಅಭಿವೃದ್ಧಿ ಕೆಲಸಕ್ಕೆ ಹಾಗು ಶರಣ ತತ್ತ್ವ ಪ್ರಸಾರಕ್ಕೆ ಬಳಸಿ ಕೊಂಡಿದ್ದು ನಮ್ಮಗೆ ಎದ್ದು ಕಾಣುತ್ತದೆ. ಅವರ ಕಾಯಕ ನಿಷ್ಠೆಯಂತು ಯಾರಿಂದಲೂ ಉಹಿಸಲು ಸಾಧ್ಯವಿಲ್ಲ. ಏಕೆಂದರೆ ತಾವೇ ಮುಂದೆ ನಿಂತು ತಲೆಯ ಮೇಲೆ ಕಲ್ಲುಗಳನ್ನು ಹೊತ್ತು ಅನುಭವ ಮಂಟಪ ಕಟ್ಟಿದ್ದಾರೆ. ಎನ್ನುವುದು ನಾವೆಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಲೇಬೇಕು. ಇಂತಹ ಸರಳ ಕಾಯಕ ಯೋಗಿಯ, ಕಾಯಕ ಸಿದ್ದಾಂತಕ್ಕೆ ನಾವೆಲ್ಲರೂ ಆತ್ಮಸಾಕ್ಷಿಯಾಗಿ ತಲೆ ಬಾಗಲೇಬೇಕು. ಪೂಜ್ಯರು ಕಾಯಕ ಬದುಕಿನ ಮೇಲೆ ಇಟ್ಟ ಗೌರವದ ನಿಷ್ಠೆ - ಕಾಳಜಿಯಿಂದ ಇಂದಿನ ಕಾಯಕವರ್ಗದವರಿಗೆ ಅವರು ಮಾರ್ಗದರ್ಶಕರು ಎಂಬುದನ್ನು ಮರೆಯುವಂತಿಲ್ಲ. ಜನಪರ ಸೇವಾ ಕಾರ್ಯಗಳು ಕೈಗೊಂಡು ಸರಳ ಬದುಕನ್ನು ಸಾಗಿಸಿದ ಮೇಧಾವಿ ಸಂತರಾಗಿದ್ದಾರೆ.
ಮಾನವೀಯ ಧ್ವನಿಯಾಗಿ ಶ್ರೀಗಳು: 12ನೆಯ ಶತಮಾನದ ಬಸವಾದಿ ಶರಣರ ಸಮತವಾದದ ಮೌಲ್ಯಾಧಾರಿತ ಸಮಾಜೋಧಾರ್ಮಿಕ ಕ್ರಾಂತಿ ಅದು ನಡೆದದ್ದು ಅನುಭವ ಮಂಟಪದ ಮೂಲಕವೇ, ಮನುಷ್ಯರ ಬದುಕಿನ ಎಲ್ಲಾ ಆಯಾಮಗಳ ಚಿಂತನೆಗಾಗಿ, ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೋಳ್ಳುವುದಕ್ಕಾಗಿ ಹುಟ್ಟಿಕೊಂಡ ಅನುಭವ ಮಂಟಪವು ಮೊದಲ ವಿಶ್ವದ ಪ್ರಜಾಸತ್ತೆಯ ಧ್ವನಿ ಮತ್ತು
ಧ್ವನಿಯಾಗಿತ್ತು, ಜಾಗತಿಕ ಮನುಕುಲ ಚರಿತ್ರೆಯ ಇತಿಹಾಸದ ಮೊದಲ ಪ್ರಜಾಪ್ರಭುತ್ವದ ಅಧ್ಯಾತ್ಮಿಕ,ಸಾಮಾಜಿಕ, ಶೈಕ್ಷಣಿಕ ಸಂಸತ್ತು ಇದಾಗಿತ್ತು, ಪ್ರತಿಯೊಬ್ಬ ಅನುಭವ ಮಂಟಪದ ಶಿವಶರಣರು,ಇಂದಿನ ಮಾನವ ಹಕ್ಕುಗಳ ಸಂಸ್ಥೆಯ ಸದಸ್ಯರಂತೆ ಮಾನವೀಯ ಮೌಲ್ಯಗಳ  
ಪ್ರತಿಪಾದಕರಾಗಿದ್ದರು ಎನ್ನುವುದು ಸುಳ್ಳಲ್ಲ,ಹಾಗಾಗಿ ಅಂದು ಉತ್ತಮ ಮನುಷ್ಯರ ಅತ್ಯುತ್ತಮ ಮಾದರಿ ಸಮಾಜ ಕಟ್ಟುವ ಮಾಹಾಶಿವಶರಣ ಕೇಂದ್ರ ಅನುಭವ ಮಂಟಪದಾಗಿತ್ತು. ಬಸವಾದಿ ಶರಣರು ಸ್ಥಾವರಕ್ಕಿಂತ ಶಿವಶರಣರಿಗೆ ಹೆಚ್ಚು ಮಹತ್ವ ನೀಡಿದರ ಫಲವಾಗಿ ವಿಶ್ವಮಾನ್ಯ ಅನುಭವ ಮಂಟಪದಂತಹ ಸಂಸ್ಥೆಯ ಕಟ್ಟಿದ ಕಟ್ಟಡದ ಸ್ಥಳಗಳ ಕುರುಹುಗಳೆ ಇಲ್ಲದಿದ್ದಾಗ ಅದಕ್ಕೆ ಮರುಚಾಲನೆ ದೊರೆತದ್ದು ಶ್ರೀ ಚನ್ನಬಸವ ಪಟ್ಟದ್ದೇವರ ಸಾರಥ್ಯದಲ್ಲಿ ಜರುಗಿದ ಪ್ರಯತ್ನದ ಫಲದಿಂದ ಬಸವ ಕಲ್ಯಾಣದಲ್ಲಿ ಮತ್ತೂಮ್ಮೆ ನೂತನ ಅನುಭವ ಮಂಟಪದ ಕನಸು ಸಾಕಾರಗೊಳಿಸಿದರು. ಹಾಗಾಗಿ 770 ಅಮರ ಗಣಂಗಳು, ಒಂದು ಲಕ್ಷದ ಮೊಂಬತ್ತಾರು ಸಾವಿರ ಶರಣರು ಸೇರಿ ಜಾತಿ,ವರ್ಗ,ವರ್ಣ ರಹಿತ ಕಲ್ಯಾಣ ರಾಜ್ಯ ನಿರ್ಮಾಣವಾಗಬೇಕೆಂಬ ಅಭಿಲಾಷೆಯಿಂದ ಕಟ್ಟಲಾದ ನೂತನ ಅನುಭವ ಮಂಟಪಕ್ಕೆ ಸ್ವತ: ತಾವೇ ಮುಂದೆ ನಿಂತು ಕಲ್ಲು, ಮಣ್ಣು ಹೋತ್ತು ಅನುಭವ ಮಂಟಪ ಕಟ್ಟಿಸಿರುವುದು ಕಾಣುತ್ತೇವೆ. ಅದಕ್ಕಾಗಿಯೇ ಇವರನ್ನು ಮಾನವೀಯತೆಯ ಧ್ವನಿಯ ಶ್ರೀಗಳು ಎಂದೇ  ಕರೆಯುವದುಂಟು.

"ಮುಗಿದು ಕೈಬಾಗಿದ ತಲೆ”  ಸಂತರು : ಪ್ರಪಂಚದ ಎಲ್ಲಾ ಜೀವಾತ್ಮರ ಘನತೆ, ಗೌರವ ಕಾಪಾಡುವುದರೊಂದಿಗೆ ಗೌರವಿಸುವುದೇ ನಿಜವಾದ ಮಾನವೀಯ - ಮನುಷ್ಯನ ಧರ್ಮ (ಗುಣ) ಹಾಗೆ  ಸ್ವಾತಂತ್ರ್ಯ, ಸಮಾನತೆ, ನ್ಯಾಯ, ನೀತಿ, ಮೌಲ್ಯಗಳನ್ನು  ಬಲವಾಗಿ ನಂಬಿ ಮಾನವೀಯ ಮೌಲ್ಯಗಳ ಸಾರಿದ ಮತ್ತು ಪ್ರೀತಿಯನ್ನು ಹಂಚಿದ ಜಗತ್ತಿನ ಮೇಧಾವಿ ಶ್ರೇಷ್ಠ ಮನುಕುಲದ ಸಂತರ ಸಂತ ಪಟ್ಟದ್ದೇವರು. ಪಟ್ಟದ್ದೇವರ ಜೀವನದ ಆದರ್ಶಗಳು ನಮ್ಮ ಬದುಕಿನ ಭಾಗವಾಗಬೇಕು. ಎಕೆಂದರೆ ಅವರು ಶರಣ ತತ್ವಗಳನ್ನು ಭೋಧಿಸಲಿಲ್ಲ. ಬದುಕಿ ತೋರಿಸಿದರು. ಪ್ರಯೋಗ ಮಾಡಿನೋಡಲಿಲ್ಲ (ಶರಣ ತತ್ವ ಮತ್ತು ಸಮಾಜ ಮುಖಿ ವಿಚಾರಗಳನ್ನು  ಮೊದಲು ಅವರ ಜೀವನದಲ್ಲಿ ಜಾರಿಗೆ ತಂರುವ ಮೂಲಕ ಇತರರಿಗೆ ಹೇಳುತ್ತಿದ್ದರು)ನುಡಿದಂತೆ ನಡೆದರು, ದೇಹದಲ್ಲಿ ಜೀವ ಇರುವವರೆಗೂ  ಒಳ್ಳೆಯ ಕೆಲಸ ಮಾಡಬೇಕೆಂದು ಜನರಿಗೆ ತಿಳಿಹೇಳಿದರು.  ಹೀಗೆ ಅವರು 109 ವಸಂತ ಕಾಲ ಕಳೆದು ಸಾವಿನ ಕೊನೆಯವರೆಗೂ ಶರಣರ ಸಂದೇಶಗಳನ್ನು ನಾಡಿನ ತುಂಬೆಲ್ಲಾ ಪ್ರಚಾರ ಗೈಯುತ್ತಾ, ಕ್ರೀಯಾಶೀಲರಾಗಿ ಬಾಳಿದರು.ಹೆಚ್ಚುಪ್ರಚಾರದ ಅಬ್ಬರವಿಲ್ಲದೇ ಹಲವಾರು ಜನಪರ ರಚನಾತ್ಮಕ ಕಾರ್ಯಗಳನ್ನು ಕೈಗೊಂಡು ಕಾರ್ಯರೂಪಕ್ಕೆ ತಂದರೂ “ಎನಗಿಂತ ಕಿರಿಯರಿಲ್ಲ ಶಿವಭಕ್ತರಿಗಿಂತ ಹಿರಿಯರಿಲ್ಲವೆಂಬತೆ” ಬದುಕಿದ ಶ್ರೀಗಳು ಜೀವನದುದ್ದಕ್ಕೂ “ಮುಗಿದು ಕೈಬಾಗಿದ ತಲೆ” ಅವರದ್ದು. ಇಡೀ ಬದುಕಿನ ಒಂದೊಂದು ಹೆಜ್ಜೆಕೂಡ ಇಂದಿನ ಸಮಾಜಕ್ಕೆ ಆದರ್ಶ ಹಾಗೂ ಅನುಕರಣೀಯವಾಗಿದೆ ಶರಣ ಬಂಧುಗಳೆ. ಅವರ ಬದುಕ್ಕನ್ನೇ ಅವರು ಪ್ರಯೋಗಕ್ಕೆ ಒಳಪಡಿಸಿಕೊಂಡರು ಎಂಬುದು ನಿಜ, ಅಂತೆಯೇ ಎಲ್ಲಾ ವರ್ಗದ ಜನರ ಪ್ರೀತಿಗೆ ಹಾಗೂ ಗೌರವಕ್ಕೆ ಭಾಜನರಾಗಿದ್ದಾರೆ.
 
ಜನ್ಮದಿನಾಚರಣೆ :  22 ಡಿಸೆಂಬರ್ 2024 ರಂದು ಪರಮ ಪೂಜ್ಯ ಡಾ. ಚೆನ್ನಬಸವ ಪಟ್ಟದ್ದೇವರು  135 ನೇ ಜನ್ಮದಿನಾಚರಣೆ ಅತ್ಯಂತ ಶ್ರದ್ಧಾ ಭಕ್ತಿಯಿಂದ ಆಚರಿಸೋಣ.  ಅವರ ದಿವ್ಯ ಸಂದೇಶವನ್ನು ಸರ್ವರಿಗೂ  ಉಣಬಡಿಸೋಣ.  







-ಲೇಖಕರು : ಸಂಗಮೇಶ ಎನ್ ಜವಾದಿ.
ಸಾಹಿತಿ,ಪತ್ರಕರ್ತರು, ಸಾಮಾಜಿಕ ಸೇವಕರು 
,ಬೀದರ ಜಿಲ್ಲೆ.

ಪ್ರೌಢಶಾಲಾ ಸಹ ಶಿಕ್ಷಕರ ಸಮಸ್ಯೆ ಪರಿಹಾರಕ್ಕೆ ಮಟ್ಟೂರ ಆಗ್ರಹ

 ಮಾಜಿ ಎಮ್‌ಎಲ್‌ಸಿ ಶರಣಪ್ಪ ಮಟ್ಟೂರ ನೇತೃತ್ವದಲ್ಲಿ ಮನವಿ ಸಲ್ಲಿಕೆ

ಪ್ರೌಢಶಾಲಾ ಸಹ ಶಿಕ್ಷಕರ ಸಮಸ್ಯೆ ಪರಿಹಾರಕ್ಕೆ ಮಟ್ಟೂರ ಆಗ್ರಹ 

ಭಾಲ್ಕಿ : ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಮಸ್ಯೆಗಳ ಪರಿಹಾರ ಮತ್ತು ವಿವಿಧ ಬೇಡಿಕೆಗಳನ್ನು ಇಡೇರಿಸುವಂತೆ ಆಗ್ರಹಿಸಿ ಮಾಜಿ ಶಾಸಕ ಶರಣಪ್ಪ ಮಟ್ಟೂರ ನೇತೃತ್ವದಲ್ಲಿ ಮುಖ್ಯಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೂಲಕ ಸಲ್ಲಿಸಲಾಯಿತು.



ಶಿಕ್ಷಕರ ಸಮಸ್ಯೆಗಳ ಪರಿಹಾರ ಮತ್ತು ವಿವಿಧ ಬೇಡಿಕೆಗಳನ್ನು ಇಡೇರಿಸುವಂತೆ ಆಗ್ರಹಿಸಿ ಮಾಜಿ ಶಾಸಕ ಶರಣಪ್ಪ ಮಟ್ಟೂರ ನೇತೃತ್ವದಲ್ಲಿ ಮುಖ್ಯಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೂಲಕ ಸಲ್ಲಿಸಲಾಯಿತು.

ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಲ್ಲಿ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ವತಿಯಿಂದ ಪ್ರೌಢಶಾಲಾ ಸಹ ಶಿಕ್ಷಕರ ಕಾನೂನು ಸಲಹೆಗಾರ ಹಾಗು ಮಾಜಿ ವಿಧಾನ ಪರಿಷತ್ ಸದಸ್ಯ ಶರಣಪ್ಪ ಮಟ್ಟೂರ ನೇತೃತ್ವದಲ್ಲಿ ಮನವಿ ಪತ್ರ ಸಲ್ಲಿಸಿ ಮಾತನಾಡಿದ ಶಿಕ್ಷಕರ ಸಂಘದ ಪದಾಧಿಕಾರಿಗಳು, ಪ್ರೌಢಶಾಲಾ ಸಹಶಿಕ್ಷಕರಿಗೆ ಕಲಿಕಾ ಆಸರೆ, ಮರುಸಿಂಚನ, ಎಫ್‌ಎಲ್‌ಎನ್, ಪ್ರತಿಬಿಂಬ ಇತ್ಯಾದಿ ಕಾರ್ಯಕ್ರಮಗಳ ಅನುಷ್ಠಾನಗಳಿಂದ ಗುಣಾತ್ಮಕ ಶಿಕ್ಷಣ ನೀಡುವಲ್ಲಿ ತೊಂದರೆಯಾಗುತ್ತಲಿದೆ. ಕಾರಣ ಶಿಕ್ಷಕರ ಮೇಲಿನ ಒತ್ತಡ ತಗ್ಗಿಸಿ, ಗುಣಾತ್ಮಕ ಕಲಿಕೆಗೆ ಒತ್ತು ನೀಡಬೇಕು. ಎಸ್‌ಎಸ್‌ಎಲ್‌ಸಿ ಪರೀಕ್ಷಾ ಪದ್ಧತಿಯಲ್ಲಿ ೩ ಹಂತದ ಪರೀಕ್ಷೆಗಳ ಬದಲು ಮೊದಲಿನಂತೆ ಎರಡು ಹಂತದ ಪರೀಕ್ಷೆಗಳನ್ನು ಆಯೋಜಿಸಬೇಕು. ಸಿಬಿಎಸ್‌ಇ, ಐಸಿಎಸ್‌ಸಿ ಪರೀಕ್ಷಾ ಫಲಿತಾಂಶ ಮಾದರಿಯಂತೆ ಆಂತರಿಕ ಅಂಗಳನ್ನು ಪರಿಗಣಿಸಿ ಫಲಿತಾಂಶ ನೀಡಬೇಕು. ಎಸ್‌ಎಸ್‌ಎಲ್‌ಸಿ ಪರೀಕ್ಷಾ ಪ್ರಶ್ನೆ ಪತ್ರಿಕೆ ವಿನ್ಯಾಸ ಸರಳೀಕರಣಗೊಳಿಸಬೇಕು. ಪರೀಕ್ಷಾ ಮೌಲ್ಯಮಾಪನ ಕಾರ್ಯ ಏಪ್ರಿಲ್ ೧೪ ರ ಒಳಗಾಗಿ ಪೂರ್ಣಗೊಳಿಸಬೇಕು. 

ಖಾಸಗಿ ಅನುದಾನಿತ ಶಾಲೆಗಳಲ್ಲಿ ೨೦೧೬ ರಿಂದ ೨೦೨೦ ರ ವರೆಗೆ ಖಾಲಿ ಇರುವ ಹುದ್ದೆಗಳನ್ನು ತುಂಬಲು ಶೀಘ್ರದಲ್ಲಿ ಅನಿಮತಿ ನೀಡುವ ಪ್ರಕ್ರಿಯೆಗೆ ಚಾಲನೆ ನೀಡಬೇಕು. ಪ್ರಾಥಮಿಕ ಶಾಲೆಯಿಂದ ಪ್ರೌಢಶಾಲೆಗೆ ಬಡ್ತಿಹೊಂದಿದ ಶಿಕಷಕರುಗಳಿಗೆ ಕಾಲಮಿತಿ ವೇತನ ಬಡ್ತಿ ನೀಡಲು ವೃಂದ ನೇಮಕಾತಿ ನಿಯಮಗಳಿಗೆ ಸಮಗ್ರ ತಿದ್ದುಪಡಿ ತರಬೇಕು. ಶಾಲಾ ಶಿಕ್ಷಣ ಇಲಾಖೆಯ ಕರ್ತವ್ಯ ನಿರ್ವಹಿಸುತ್ತಿರುವ ಪ್ರೌಢಶಾಲಾ ಶಿಕ್ಷಕರು ರಜೆ ಸಹಿತ ನೌಕರರಾಗಿದ್ದು, ಈ ಹಿಂದೆ ಜಾರಿಯಲ್ಲಿದ್ದಂತೆ ದಸರಾ ರಜೆಗಳನ್ನು ಅಕ್ಟೋಬರ್ ೨ ರಿಂದ ಅ.೨೯ ರ ರವರೆಗೆ ಮತ್ತು ಬೇಸಿಗೆ ರಜೆಗಳನ್ನು ಏಪ್ರಿಲ್ ೧೦ ರಿಂದ ಮೇ ೩೦ ರ ವರೆಗೆ ನಿಗಧಿಗೊಳಿಸುವುದು. ರಜೆಯ ಅವಧಿಯಲ್ಲಿ ತರಬೇತಿ, ಮೌಲ್ಯಮಾಪನ ಇನ್ನಿತರೆ ಕೆಲಸಗಳನ್ನು ನಿರ್ವಹಿಸಿದಲ್ಲಿ ಅದಕ್ಕೆ ಸಮಾನಾದ ಗಳಿಕೆ ರಜೆ ನೀಡಬೆಕು ಎಂಬಿತ್ಯಾದಿ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಜಿ.ಹಳ್ಳದ ಮನವಿ ಪತ್ರ ಸ್ವೀಕರಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಪ್ರೌಢಶಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ದತ್ತು ಕಾಟಕರ, ಕಾರ್ಯದರ್ಶಿ ಬಾಲಾಜಿ ಕಾಂಬಳೆ, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಹಣಮಂತ ಕಾರಾಮುಂಗೆ, ಕಿರಣಕುಮಾರ ಭಾಟಸಾಂಗವಿ, ವಿಠಲರಾವ ಬಿರಾದಾರ, ರಾಜಕುಮಾರ ಬರಸೂರೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಶಿವಕುಮಾರ ಫುಲಾರಿ, ಮಲ್ಲಿಕಾರ್ಜುನ ಕನ್ನಾಳೆ, ಸಹದೇವ ಗೌಡಗಾವೆ, ಮುಖ್ಯಶಿಕ್ಷಕ ದಿಲೀಪ ಬಿರಾದಾರ, ಮಲ್ಲಿನಾಥ ಸಜ್ಜನ ಮತ್ತಿತರರು ಇದ್ದರು.


ಪುರಸಭೆ ಕಾರ್ಮಿಕರ ಕಾರ್ಯಕ್ಕೆ ಗೌರವಿಸಿ - ಡಾ.ಶೈಲಜಾ ತಳವಾಡೆ

 ರೋಟರಿ ಕ್ಲಬ್ ವತಿಯಿಂದ ಬ್ಲಾö್ಯಂಕೆಟ್ ವಿತರಣೆ

ಪುರಸಭೆ ಕಾರ್ಮಿಕರ ಕಾರ್ಯಕ್ಕೆ  ಗೌರವಿಸಿ - ಡಾ.ಶೈಲಜಾ ತಳವಾಡೆ

ಭಾಲ್ಕಿ : ಚಳಿ,ಮಳೆ,ಗಾಳಿ ,ಬಿಸಿಲು ಲೆಕ್ಕಿಸದೆ ಪ್ರತಿನಿತ್ಯ ಪಟ್ಟಣದ ಸ್ವಚ್ಛತೆ ಕಾಪಾಡುವ ಪುರಸಭೆ ಕಾರ್ಮಿಕರನ್ನು ಎಲ್ಲರೂ ಗೌರವಿಸಿ ಅವರಿಗೆ ಪ್ರೋತ್ಸಾಹಿಸಬೇಕು ಎಂದು ಸ್ತಿ ರೋಗತಜ್ಞೆ ಡಾ.ಶೈಲಜಾ ತಳವಾಡೆ ಅಭಿಪ್ರಾಯಪಟ್ಟರು.


ಬಿಎಸ್‌ಕೆ ಕ್ರಿಕೆಟ್ ಪಂದ್ಯ ಗೆದ್ದು ಟ್ರೋಫಿ 

ಪಟ್ಟಣದ ಬಿಯಾಣಿ ದಾಲಮಿಲ್ ಆವರಣದಲ್ಲಿ ಭಾಲ್ಕಿ ರೋಟರಿ ಕ್ಲಬ್ ವತಿಯಿಂದ ಬೀದರನಲ್ಲಿ ನಡೆದ ರೋಟರಿ ಕಲ್ಯಾಣ ವಲಯ ಕ್ರಿಕೇಟ್ ಪಂದ್ಯಾವಳಿಯಲ್ಲಿ  ವಿಜೇತ `ಭಾಲ್ಕಿ ಸುಪರ್ ಕಿಂಗ್' (ಬಿಎಸ್‌ಕೆ) ವ್ಯವಸ್ಥಾಪಕ ತಂಡದವರಿAದ ಹಮ್ಮಿಕೊಂಡ ಪುರಸಭೆ ಕಾರ್ಮಿಕರಿಗೆ ಬ್ಲಾö್ಯಂಕೆಟ್ ವಿತರಣಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ಪಟ್ಟಣದ ಓಣಿಗಳನ್ನು ಸ್ವಚ್ಛಗೊಳಿಸಿ ಎಲ್ಲರ ಮನೆ-ಮನ ತಿಳಿಗೊಳಿಸುವ ಕಾರ್ಯ ಮಾಡುತ್ತಿರುವ ಪೌರ ಕಾರ್ಮಿಕರ ಕಾರ್ಯಕ್ಕೆ  ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗಿದೆ.ಆ ನಿಟ್ಟಿನಲ್ಲಿ  ರೋಟರಿ ಕ್ಲಬ್ ಆಫ್ ಭಾಲ್ಕಿ ಫೋರ್ಟ್ನವರು ಕಾರ್ಮಿಕರ ಸೇವೆ ಗುರುತಿಸಿ ಮಾಡುವ ಜನಪಯೋಗಿ ಕಾರ್ಯ ಶ್ಲಾಘನೀಯವಾಗಿದೆ ಎಂದರು.

ಬಿಎಸ್‌ಕೆ ಪೋಷಕ ಉದ್ಯಮಿ ಜೈಕಿಶನ ಬಿಯಾಣಿ ಮಾತನಾಡಿ, ಜಿಲ್ಲೆಯ ೦೮ ರೋಟರಿ ಕ್ಲಬ್‌ನವರು ಕ್ರಿಕೆಟ್ ಪಂದ್ಯಾವಳಿ ಆಯೋಜಿಸಿ ಕ್ಯಾನ್ಸರ್ ಪೀಡಿತರ ನೆರವಿಗಾಗಿ  ೧೨ ಲಕ್ಷ ನಿಧಿ ಸಂಗ್ರಹಿಸಿದ ಕಾರ್ಯ ಇತರರಿಗೆ ಮಾದರಿಯಾಗಿದೆ.ಮಕ್ಕಳ ತಜ್ಞ  ಡಾ.ವಸಂತ ಪವಾರ ಮಾತನಾಡಿ,ಸತತ ಪರಿಶ್ರಮ ಮತ್ತು ಕೌಶಲ್ಯತನದಿಂದ ಆಟ ಪ್ರದರ್ಶನ ಮಾಡಿ  ಬಿಎಸ್‌ಕೆ ಕ್ರಿಕೆಟ್ ಪಂದ್ಯ ಗೆದ್ದು ಟ್ರೋಫಿ ಮತ್ತು ನಗದು ೩೧ ಸಾವಿರ ರೂ.ತನ್ನ ಮಡಿಲಿಗೆರಿಸಿಕೊಂಡಿದ್ದು ಹೆಮ್ಮೆಯ ವಿಷಯ ಎಂದರು.

ಬಿಎಸ್‌ಕೆ ಸಹಪೋಷಕರಾದ ಯೋಗೇಶ ಅಷ್ಟೂರೆ ಅವರು,ಬಿಎಸ್‌ಕೆ ಜಿಲ್ಲೆಯ ಕ್ರಿಕೆಟ್ ಪಂದ್ಯಾವಳಿಯಲ್ಲಿ ಸತತ ಮೂರು ತಂಡದವರಿಗೆ ಸೋಲಿಸಿ ಸೋಲಿಲ್ಲದ ಸರ್ದಾರ ಆಗಲು ಮಾಜಿ ಸಚಿವ ರಾಜಶೇಖರ ಪಾಟೀಲ್ ,ಎಮ್‌ಎಲ್‌ಸಿ ಭೀಮರಾವ ಪಾಟೀಲ್ ಹಾಗೂ ಎಲ್ಲ ರೋಟರಿಯನ್ ಅವರ ಪ್ರೇರಣೆ ಮತ್ತು ಮಾರ್ಗದರ್ಶನ ಕಾರಣ  ಎಂದು ಹೇಳಿ ತಮ್ಮ ಮನದಾಳದ ಮಾತು ಹೊರ ಹಾಕಿದರು.

ಮಾಜಿ ಎಜಿ ಡಾ.ಅಮೀತ ಅಷ್ಟೂರೆ ಅವರು,ಕ್ಯಾಪ್ಟನ್ ಶಾಂತನು ಕುಲಕರ್ಣಿ ,ಉಪಕ್ಯಾಪ್ಟನ್ ಅಶ್ವೀನ ಭೋಸ್ಲೆ ,ಆಲ್‌ರೌಂಡರ್ ಅವಿನಾಶ ಮುಲ್ಗೆ, ಸೇರಿದಂತೆ ಎಲ್ಲ ಕ್ರಿಕೆಟ್ ಪಟುಗಳ  ಆಟ ನೋಡುಗರಲ್ಲಿ  ರೋಮಾಂಚನವುAಟು ಮಾಡಿತು ಎಂದರು.

ರೋಟರಿ ಅಧ್ಯಕ್ಷ ಸಂಜಯಕುಮಾರ ಪಂಡರಗೆರೆ ಅಧ್ಯಕ್ಷತೆ ವಹಿಸಿದ್ದರು.

ಸನ್ಮಾನ:ಇದೇ ಸಂದರ್ಭದಲ್ಲಿ ಯುವಮುಖಂಡ ಚನ್ನಬಸವ ಬಳತೆ ಸಂಚಾಲಿತ ಸಮೃದ್ಧಿ ಎಂಟರಪ್ರೆöಜೆಸ್ ವತಿಯಿಂದ ಕಾಶಿನಾಥ ಅವರ ಉಪಸ್ಥಿತಿಯಲ್ಲಿ ಬಿಎಸ್‌ಕೆ ಸುಪರ ಚಾಂಪಿಯನ್ ತಂಡದವರಿಗೆ ಗೌರವಿಸಲಾಯಿತು.

ರೋಟರಿ ಕಾರ್ಯದರ್ಶಿ ದತ್ತುಕುಮಾರ ಮೆಹಕ್ರೆ,ಖಜಾಂಚಿ ಡಾ.ಸಜ್ಜಲ್ ಬಳತೆ,ಜಿಲ್ಲಾ ಅಂಕಿತಾಧಿಕಾರಿ ಡಾ.ಸಂತೋಷ ಕಾಳೆ,ಡಾ.ಯುವರಾಜ ಜಾಧವ,ಡಾ.ನಿತೀನ ಪಾಟೀಲ್,ಡಾ.ಶಶಿಕಾಂತ ಭೂರೆ,ಡಾ.ವಿಲಾಸ ಕನಸೆ,ಅವಿನಾಶ ಮುಲ್ಗೆ,ಡಾ.ಶರತ ತುಕದೆ,ಶಾಂತನು ಕುಲಕರ್ಣಿ,ಡಾ.ಧನರಾಜ ಹುಲಸೂರೆ,ನ್ಯಾಯವಾದಿ ಸಂಜಯ ನಾಯಕ್,ಡಾ.ಶ್ರೀರಂಗ ಬಿರಾದಾಋ,ಡಾ.ಗುಂಡೆರಾವ ಶೆಡೋಳೆ,ಸೋಮನಾಥ ,ಕಾಶಿನಾಥ ಸೇರಿದಂತೆ ಪುರಸಭೆ ಕಾರ್ಮಿಕರು ಉಪಸ್ಥಿತರಿದ್ದರು. ಪ್ರಾಚಾರ್ಯ ಅಶೋಕ ರಾಜೋಳೆ ನಿರೂಪಿಸಿ,ವಂದಿಸಿದರು.



ಗಣರಾಜ್ಯೋತ್ಸವದ ಅಂಗವಾಗಿ ಫಲಪುಷ್ಪ ಪ್ರದರ್ಶನಕ್ಕೆ : ಧ್ವಜಾರೋಹಣದ ಮೂಲಕ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ

 ಗಣರಾಜ್ಯೋತ್ಸವದ ಅಂಗವಾಗಿ ಫಲಪುಷ್ಪ ಪ್ರದರ್ಶನಕ್ಕೆ ಅರ್ಜಿ ಆಹ್ವಾನ

ಬೆಂಗಳೂರು : ತೋಟಗಾರಿಕೆ ಇಲಾಖೆ ವತಿಯಿಂದ 2025ನೇ ಜನವರಿಯಲ್ಲಿ ಗಣರಾಜ್ಯೋತ್ಸವದ ಅಂಗವಾಗಿ 217ನೇ ಫಲಪುಷ್ಪ ಪ್ರದರ್ಶನವನ್ನು ಬೆಂಗಳೂರಿನ ಲಾಲ್‍ಬಾಗ್‍ನಲ್ಲಿ ಹಮ್ಮಿಕೊಳ್ಳಲಾಗಿದೆ.

ಪ್ರದರ್ಶನದ ಪ್ರಯುಕ್ತ ಸರ್ಕಾರಿ/ ಖಾಸಗಿ ಅಲಂಕಾರಿಕ ತೋಟಗಾರಿಕಾ ಆಸಕ್ತರು ತಮ್ಮ ಮನೆ, ಕಚೇರಿ ಅಥವಾ ಸಂಸ್ಥೆಗಳ ವ್ಯಾಪ್ತಿಯಲ್ಲಿ ಅಲಂಕಾರಿಕ ತೋಟಗಳು, ತಾರಸಿ/ ಕೈತೋಟಗಳು, ತರಕಾರಿ/ ಔಷಧಿ ಗಿಡಗಳು, ಕುಂಡಗಳಲ್ಲಿ ಬೆಳೆದ ವಿವಿಧ ಜಾತಿಯ ಗಿಡಗಳು, ಇಕೆಬಾನ, ಜಾನೂರ್, ಥಾಯ್ ಆರ್ಟ್ ಮತ್ತು ಪೂರಕ ಕಲೆಗಳಿಗೆ ಸಂಬಂಧಿಸಿದಂತೆ ಸ್ಪರ್ಧೆಗಳನ್ನು 2025 ರ ಜನವರಿ 18 ರಂದು ಹಮ್ಮಿಕೊಳ್ಳಲಾಗಿದೆ.

ಇಕೆಬಾನ, ಜಾನೂರ್, ಥಾಯ್ ಆರ್ಟ್, ತರಕಾರಿ ಕೆತ್ತನೆ ಮತ್ತು ಇತರೆ ಪೂರಕ ಕಲೆಗಳಿಗೆ ಸಂಬಂಧಿಸಿದಂತೆ ಆಸಕ್ತರು / ಪ್ರದರ್ಶಕರಿಂದ ಅರ್ಜಿಗಳನ್ನು 2025 ಜನವರಿ 6 ರಿಂದ 10 ರವರೆಗೆ ಸ್ವೀಕರಿಸಲಾಗುವುದು. ತೋಟಗಾರಿಕಾ ಜಂಟಿ ನಿರ್ದೇಶಕರು (ಯೋಜನೆ) ಲಾಲ್‍ಬಾಗ್, ಬೆಂಗಳೂರು ಕಚೇರಿಯಲ್ಲಿ ಅರ್ಜಿಗಳನ್ನು ಬೆಳಿಗ್ಗೆ 10 ರಿಂದ 5 ಗಂಟೆಯವರೆಗೆ ಅರ್ಜಿಗಳನ್ನು ಪಡೆಯಬಹುದಾಗಿದೆ.


ಹೆಚ್ಚಿನ ಮಾಹಿತಿಗಾಗಿ ಹೆಚ್.ಟಿ.ಗೀತಾ ಮೊಬೈಲ್ ಸಂಖ್ಯೆ: 9008433076 ಅಥವಾ ಕುಮಾರಿ ತಾರಕೇಶ್ವರಿ ಕೆ.ಆರ್. ಮೊಬೈಲ್ ಸಂಖ್ಯೆ: 8497048733,  ಪುಷ್ಪಲತಾ ಎಂ. ಮೊಬೈಲ್ ಸಂಖ್ಯೆ: 8904592122 ಇವರನ್ನು ಸಂಪರ್ಕಿಸುವುದು.

ವಿವಿಧ ಅಲಂಕಾರಿಕ ತೋಟಗಳ ಸ್ಪರ್ಧೆ / ಕುಂಡಗಳಲ್ಲಿ ಬೆಳೆದ ಗಿಡಗಳ ಸ್ಪರ್ಧೆಗೆ ಅರ್ಜಿಗಳನ್ನು ಜನವರಿ 8 ರಿಂದ 15 ರವರೆಗೆ ಸ್ವೀಕರಿಸಲಾಗುವುದು. ಅರ್ಜಿಗಳನ್ನು ತೋಟಗಾರಿಕಾ ಜಂಟಿ ನಿರ್ದೇಶಕರು (ತೋಟದ ಬೆಳೆಗಳು) ಲಾಲ್‍ಬಾಗ್, ಬೆಂಗಳೂರು ಕಚೇರಿಯಲ್ಲಿ ಅರ್ಜಿಗಳನ್ನು ಬೆಳಿಗ್ಗೆ 10 ರಿಂದ 5 ಗಂಟೆಯವರೆಗೆ ಪಡೆಯಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ಚುಂಚಯ್ಯ  ಮೊಬೈಲ್ ಸಂಖ್ಯೆ: 9916433061, ಎನ್.ಟಿ.ಸುಜಾತ ಮೊಬೈಲ್ ಸಂಖ್ಯೆ: 9901296270, ದೀಪಿಕ ಎಸ್.ಕೆ.  ಮೊಬೈಲ್ ಸಂಖ್ಯೆ: 7892100304 ಇವರನ್ನು ಸಂಪರ್ಕಿಸುವುದು.

ಮಳಿಗೆಗಳ ಹಂಚಿಕೆಗಾಗಿ 2024 ನೇ ಡಿಸೆಂಬರ್ 30 ರಿಂದ 2025 ನೇ ಜನವರಿ 4 ರವರೆಗೆ ಸ್ವೀಕರಿಸಲಾಗುವುದು. ಅರ್ಜಿಗಳನ್ನು ತೋಟಗಾರಿಕಾ ಜಂಟಿ ನಿರ್ದೇಶಕರು (ಹಣ್ಣುಗಳು) ಲಾಲ್‍ಬಾಗ್, ಬೆಂಗಳೂರು ಕಚೇರಿಯಲ್ಲಿ ಅರ್ಜಿಗಳನ್ನು ಬೆಳಿಗ್ಗೆ 10 ರಿಂದ 5 ಗಂಟೆಯವರೆಗೆ ಪಡೆಯಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ಶೃತಿ ಟಿ. ನಾಯ್ಕ್ ಮೊಬೈಲ್ ಸಂಖ್ಯೆ: 9036986445, ವಿಶಾಲಾಕ್ಷಿ ಮೊಬೈಲ್ ಸಂಖ್ಯೆ: 9591304675, ಉಮಾ ಮೊಬೈಲ್ ಸಂಖ್ಯೆ: 9008094261 ಇವರನ್ನು ಸಂಪರ್ಕಿಸುವಂತೆ ಲಾಲ್‍ಬಾಗ್ ಸಸ್ಯತೋಟದ ತೋಟಗಾರಿಕೆ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಧ್ವಜಾರೋಹಣದ ಮೂಲಕ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ




87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ


ಮಂಡ್ಯ / ಬೆಂಗಳೂರು  : ಸಕ್ಕರೆ ನಗರಿ ಮಂಡ್ಯದಲ್ಲಿ ಡಿ.20,21 ಮತ್ತು 22ರಂದು ಮೂರು ದಿನಗಳ ಕಾಲ ಜರುಗಲಿರುವ ಕನ್ನಡ ನುಡಿ ಜಾತ್ರೆ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಧ್ವಜಾರೋಹಣ ನೆರವೇರಿಸುವ ಮೂಲಕ ಅಧಿಕೃತವಾಗಿ ಚಾಲನೆ ನೀಡಲಾಯಿತು.

ಬೆಳಗ್ಗೆ 6.30ಕ್ಕೆ ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸಲಾಯಿತು. ಸಮ್ಮೇಳನಾಧ್ಯಕ್ಷರಾದ ಗೊ.ರು.ಚನ್ನಬಸಪ್ಪ ಅವರ ಉಪಸ್ಥಿತಿಯಲ್ಲಿ ಕೃಷಿ ಸಚಿವರು ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಮ್ಮೇಳನ ಸ್ವಾಗತ ಸಮಿತಿಯ ಅಧ್ಯಕ್ಷರಾದ ಎನ್. ಚಲುವರಾಯಸ್ವಾಮಿ ಅವರು ರಾಷ್ಟ್ರಧ್ವಜಾರೋಹಣ ಮಾಡಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಹಾಗೂ ಸಮ್ಮೇಳನ ಸ್ವಾಗತ ಸಮಿತಿಯ ಗೌರವ ಕಾರ್ಯಾಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಕನ್ನಡ ಸಾಹಿತ್ಯ ಪರಿಷತ್ತಿನ ಧ್ವಜಾರೋಹಣವನ್ನು ಹಾಗೂ ಮಂಡ್ಯ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಂಚಾಲಕಿ ಮೀರಾ ಶಿವಲಿಂಗಯ್ಯ ಅವರು ನಾಡಧ್ವಜಾರೋಹಣ ಮಾಡಿದರು.

ಶಾಸಕರುಗಳಾದ ರಮೇಶ್ ಬಾಬು ಬಂಡಿಸಿದ್ದೇಗೌಡ, ದಿನೇಶ್ ಗೂಳಿಗೌಡ, ಜಿಲ್ಲಾಧಿಕಾರಿ ಡಾ. ಕುಮಾರ, ಜಿಲ್ಲಾ ಪೆÇಲೀಸ್ ವರಿμÁ್ಠಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಆಸಿಫ್ ಸೇರಿದಂತೆ ನಾನಾ ಗಣ್ಯರು ಸ್ಕೌಟ್ಸ್ ಮತ್ತು ಗೈಡ್ಸ್, ಭಾರತ್ ಸೇವಾದಳದ ಮಕ್ಕಳು ಧ್ವಜಾರೋಹಣ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.


ಮೆರವಣಿಗೆಯಲ್ಲಿ ಸಾಗಿದ ಕಲಾತಂಡಗಳು :

ನಂದಿಧ್ವಜ, ಚಕ್ಕಡಿಗಾಡಿ, ಕೊಂಬುಕಹಳೆ, ನಾದಸ್ವರ, ಸ್ತಬ್ಧಚಿತ್ರ, ವೀರಗಾಸೆ, ತಮಟೆ, ಕಂಸಾಳೆ, ಮಹಿಳಾ ವೀರಗಾಸೆ, ಕೀಲುಕುದುರೆ, ಜಗ್ಗಲಿಗೆ ಮೇಳ, ಪೂರ್ಣಕುಂಭ, ನಗಾರಿ, ಛತ್ರಿಚಾಮರ, ಲಿಡಕರ್ ಸ್ತಬ್ಧಚಿತ್ರ, ಖಾಸಬೇಡರಪಡೆ, ಭಾಗವಂತಿಕೆ, ಹಗಲು ವೇಷ, ಅರೆವಾದ್ಯ, ಪೆಟ್ಟಿಗೆ ಮಾರಮ್ಮ, ಕೋಲಾಟ, ಗಾರುಡಿಗೊಂಬೆ, ಕರಗ, ಚಿಲಿಪಿಲಿ ಗೊಂಬೆ, ದಾಸಪ್ಪ ಜೋಗಪ್ಪ, ಬೆಂಕಿಭರಾಟೆ, ದೊಣ್ಣೆ ವರಸೆ, ಚಿಟ್ಟಲಗಿ ಮೇಳ, ಷಹನಾಯವಾದನ, ಗಾರುಡಿ ಗೊಂಬೆ, ಯಕ್ಷಗಾನ ಗೊಂಬೆ, ವಾನರಸೇನೆ, ಕರಡಿ ಮಜಲು, ದೇವಿ ವೇಷಧಾರಿ, ಕೀಲು ಕುದುರೆ, ನೃತ್ಯ, ಮರಗಾಲು, ಮುಳ್ಳು ಕುಣಿತ, ಡೊಳ್ಳು ಕುಣಿತ, ಪೂಜಾಕುಣಿತ, ಡೊಳ್ಳು ಕುಣಿತ, ಹಾಲಕ್ಕಿ ಸುಗ್ಗಿ ಕುಣಿತ, ಪಟಕುಣಿತ, ರಂಗದಕುಣಿತ, ಮಹಿಳಾ ಡೊಳ್ಳು ಕುಣಿತ, ಸೋಮನ ಕುಣಿತ, ಗೊರವರ ಕುಣಿತ, ಲಂಬಾಣಿ ನೃತ್ಯ, ಕೋಳಿ ನೃತ್ಯ, ಕೊಡವ ನೃತ್ಯ, ಜೋಗತಿ ನೃತ್ಯ, ವೀರಮಕ್ಕಳ ಕುಣಿತ, ಸತ್ತಿಗೆ ಕುಣಿತ, ದಟ್ಟಿ ಕುಣಿತ, ಹಲಗು ಕುಣಿತ, ಪಟಕುಣಿತ, ನಾಲ್ವಡಿ ಕೃಷ್ಣರಾಜ ಒಡೆಯರ್, ಕೆಂಪೇಗೌಡ, ವಿಶ್ವೇಶ್ವರಯ್ಯ ವೇಷಧಾರಿ, ಅಶ್ವಾರೋಹಿ ದಳ, ಟಾಂಗಾ ಗಾಡಿ, ಎತ್ತಿನ ಗಾಡಿ, ಸಮ್ಮೇಳನಾಧ್ಯಕ್ಷರ ಭಾವಚಿತ್ರ ಒಳಗೊಂಡ 87 ಆಟೋ ರಿಕ್ಷಾಗಳು, ಸ್ಕೌಟ್ಸ್ ಮತ್ತು ಗೈಟ್ಸ್, ಎನ್ ಸಿಸಿ, ಭಾರತ್ ಸೇವಾದಳ ತಂಡ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು.

ಹೊರರಾಜ್ಯದ ಕಲಾ ಪ್ರಕಾರಗಳು :

ತಮಿಳುನಾಡಿನ ಕರಗಂ, ಒಡಿಶಾದ ಸಂಬಲ್ಪುರಿ ಮತ್ತು ಧಾಪ್ ಬುಡಕಟ್ಟು ನೃತ್ಯ, ಮಧ್ಯಪ್ರದೇಶದ ಬಧಾಯಿ ಮತ್ತು ನೋರಾ, ಕಲಾ ಪ್ರಕಾರಗಳು ಒಳಗೊಂಡಂತೆ, ನಾನಾ ಜಿಲ್ಲೆಯ ನೂರಾರು ಕಲಾತಂಡಗಳು ಸಮ್ಮೇಳನಾಧ್ಯಕ್ಷರ ಮೆರವಣಿಗೆಯಲ್ಲಿ ಸಾಗಿದವು.

ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ತೆರಳುವ ಯಾತ್ರಾರ್ಥಿಗಳು ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳು ಬಗ್ಗೆ ಕೇರಳ ಮತ್ತು ಹೆಚ್ಚುವರಿ ಪೊಲೀಸ್ ಕೋ-ಆರ್ಡಿನೇಟರ್ ಶಬರಿಮಲೆ ಅವರು ಹೊರಡಿಸಿರುವ ಮಾರ್ಗಸೂಚಿಗಳು

ಬೆಂಗಳೂರು,   : ನವೆಂಬರ್ 15 ಮತ್ತು ಡಿಸೆಂಬರ್ 15 ರ ನಡುವೆ 23,44,490 ಅಯ್ಯಪ್ಪ ಭಕ್ತರು ಶಬರಿಮಲೆಗೆ ಭೇಟಿ ನೀಡಿದ್ದಾರೆ. ನವೆಂಬರ್ 15 ರಿಂದ ಡಿಸೆಂಬರ್ 15, 2024 ರವರೆಗೆ ಒಟ್ಟು 23,44,490 ಅಯ್ಯಪ್ಪ ಭಕ್ತರು ಶಬರಿಮಲೆಗೆ ದರ್ಶನಕ್ಕೆ ಭೇಟಿ ನೀಡಿದ್ದಾರೆ. ಕಳೆದ ವರ್ಷ ಇದೇ ಅವಧಿಯಲ್ಲಿ 19,03,321 ಭಕ್ತರು ದರ್ಶನ ಪಡೆದಿದ್ದರು. ಭಕ್ತರು ವರ್ಚುವಲ್ ಸರತಿಯಲ್ಲಿ ನಿಗದಿತ ಸಮಯಕ್ಕೆ ಬದ್ಧರಾಗದೇ ಇರುವುದರಿಂದ ಜನಸಂದಣಿಯನ್ನು ನಿರ್ವಹಿಸಲು ತೊಂದರೆಯಾಗುತ್ತಿದೆ ಎಂದು ಜಿಲ್ಲಾ ಪೊಲೀಸರು ತಿಳಿಸಿದ್ದಾರೆ.

ಭಕ್ತರು ವರ್ಚುವಲ್ ಸರತಿ ಸಾಲಿನಲ್ಲಿ ಒದಗಿಸಲಾದ ಸಮಯ ಸ್ಲಾಟ್‍ಗಳನ್ನು ಅನುಸರಿಸಿದರೆ, ಅನಗತ್ಯ ದಟ್ಟಣೆಯನ್ನು ತಪ್ಪಿಸಬಹುದು ಮತ್ತು ಸುಗಮ ದರ್ಶನವನ್ನು ಸುಗಮಗೊಳಿಸಬಹುದು. ವಿಶೇಷವಾಗಿ 22/12/2024 ರಂದು ಅರಮ್ಮನಾಳ್ ದೇವಸ್ಥಾನದಿಂದ ಪ್ರಾರಂಭವಾಗುವ ಪವಿತ್ರ ಗಂಗ ಅಂಕಿ ಮೆರವಣಿಗೆಗೆ ಸಂಬಂಧಿಸಿದ ವಿಶೇಷ ಕಾರ್ಯಕ್ರಮಗಳು ಮತ್ತು 25 ರಂದು ವಿಶೇಷ ಧಾರ್ಮಿಕ ಕ್ರಿಯೆಗಳ ಸಂದರ್ಭದಲ್ಲಿ ಯಾತ್ರಾರ್ಥಿಗಳು ವರ್ಚುವಲ್ ಸರತಿ ಬುಕಿಂಗ್ ಸಮಯವನ್ನು ಅನುಸರಿಸಲು ಜಿಲ್ಲಾ ಪೊಲೀಸರು  ಒತ್ತು ನೀಡಿದ್ದಾರೆ.

ವರ್ಚುವಲ್ ಕ್ಯೂನ ಸಮಯವನ್ನು ಅನುಸರಿಸುವುದು ಡಿಸೆಂಬರ್ 25 ಮತ್ತು 26 ರಂದು ಜನಸಂದಣಿಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ರಾಜ್ಯದೊಳಗಿನ ಯಾತ್ರಾರ್ಥಿಗಳು ಇದನ್ನು ಖಂಡಿತವಾಗಿಯೂ ಅನುಸರಿಸಬಹುದಾದರೂ, ಇತರ ರಾಜ್ಯಗಳ ಯಾತ್ರಿಕರು ಬುಕಿಂಗ್ ಸಮಯವನ್ನು ಅನುಸರಿಸುವಲ್ಲಿ ಕೆಲವು ಸವಾಲುಗಳನ್ನು ಎದುರಿಸಬಹುದು ಎಂದು ಜಿಲ್ಲಾ ಪೊಲೀಸರು  ನಿರ್ಣಯಿಸಿದ್ದಾರೆ.

ಭಕ್ತರು ದರ್ಶನಕ್ಕಾಗಿ ವರ್ಚುವಲ್ ಕ್ಯೂ ಮೂಲಕ ಬುಕ್ ಮಾಡುವುದು ಕಡ್ಡಾಯವಾಗಿದೆ.

ಸ್ಪಾಟ್ ಬುಕಿಂಗ್ ಮಿತಿಯನ್ನು 10,000 ಕ್ಕೆ ನಿಗದಿಪಡಿಸಲಾಗಿದ್ದರೂ, ಕೆಲವು ದಿನಗಳಲ್ಲಿ ಹೆಚ್ಚಿನ ಯಾತ್ರಿಕರು ಆಗಮಿಸುತ್ತಾರೆ. ವರ್ಚುವಲ್ ಕ್ಯೂ ಬುಕಿಂಗ್‍ನ ಪ್ರಸ್ತುತ ಮಿತಿ 70,000 ಆಗಿರುವುದರಿಂದ, ಈ ಮಿತಿಯೊಳಗೆ ಎಲ್ಲಾ ಯಾತ್ರಿಕರು ಆಗಮಿಸುವುದಿಲ್ಲ ಮತ್ತು ಹೀಗಾಗಿ, ಸ್ಪಾಟ್ ಬುಕಿಂಗ್ ಮಿತಿಯನ್ನು ಮೀರಿದವರೂ ಸಹ ಅಡೆತಡೆಯಿಲ್ಲದೆ ದರ್ಶನವನ್ನು ಪಡೆಯಬಹುದು.


ಶಬರಿಮಲೆ ಯಾತ್ರೆಗೆ ಸಂಬಂಧಿಸಿದಂತೆ, ಜಿಲ್ಲಾ ಪೊಲೀಸರು ಕ್ಯೂಆರ್ ಕೋಡ್ ರೂಪದಲ್ಲಿ "ಶಬರಿಮಲ ಪೊಲೀಸ್ ಗೈಡ್" ಎಂಬ ಆನ್‍ಲೈನ್ ಪೋರ್ಟಲ್ ಅನ್ನು ಸಿದ್ಧಪಡಿಸಿದ್ದಾರೆ. ತೀರ್ಥಯಾತ್ರೆಗೆ ಸಂಬಂಧಿಸಿದ ಪ್ರಮುಖ ಸ್ಥಳಗಳಲ್ಲಿ ಕ್ಯೂಆರ್ ಕೋಡ್ ಲಭ್ಯವಾಗುವಂತೆ ಮಾಡಲಾಗಿದೆ. ನಿಲಕ್ಕಲ್‍ನಲ್ಲಿರುವ ಪಾಕಿರ್ಂಗ್ ಮೈದಾನದ ಬಗ್ಗೆ ವಿವರವಾದ ಮಾಹಿತಿಯನ್ನು ವಿವಿಧ ಸ್ಥಳಗಳಲ್ಲಿ ಕ್ಯೂಆರ್ ಕೋಡ್‍ಗಳ ಮೂಲಕ ಲಭ್ಯವಾಗುವಂತೆ ಮಾಡಲಾಗಿದೆ.

ಹೆಚ್ಚುವರಿಯಾಗಿ, ಜಿಲ್ಲಾಡಳಿತವು ಚಾಟ್‍ಬಾಟ್ ಸೇವೆಯನ್ನು ಪ್ರಾರಂಭಿಸಿದೆ, ಇದನ್ನು 6238008000 ಗೆ ವಾಟ್ಸ್‍ಅಪ್ ಸಂದೇಶವನ್ನು ಕಳುಹಿಸುವ ಮೂಲಕ ಪ್ರವೇಶಿಸಬಹುದು ಈ ಸೇವೆಯು ಭಕ್ತರಿಗೆ ತುರ್ತು ವೈದ್ಯಕೀಯ ಸಹಾಯ, ದೇವಾಲಯದ ಪೂಜಾ ಸಮಯಗಳು, ಕೆ.ಎಸ್.ಆರ್.ಟಿ.ಸಿ ಬಸ್ ವೇಳಾಪಟ್ಟಿಗಳು ಮತ್ತು ಇತರ ನವೀಕರಣಗಳಂತಹ ಉಪಯುಕ್ತ ಮಾಹಿತಿಯನ್ನು ಒದಗಿಸುತ್ತದೆ.

ಯಾತ್ರಿಕರು ಅನುಸರಿಸಬೇಕಾದ ವಿಷಯಗಳು :

1. ಹತ್ತುವ ಸಮಯದಲ್ಲಿ 10 ನಿಮಿಷಗಳ ನಡಿಗೆಯ ನಂತರ 5 ನಿಮಿಷಗಳ ಕಾಲ ವಿಶ್ರಾಂತಿ ತೆಗೆದುಕೊಳ್ಳುವುದು
2. ಸನ್ನಿಧಾನಂ ತಲುಪಲು ಸಾಂಪ್ರದಾಯಿಕ ಮಾರ್ಗವನ್ನು ಬಳಸುವುದು.
3. ಪತ್ತಿನೆಟ್ಟಂಪಾಡಿಯನ್ನು ತಲುಪಲು ಸರತಿ ಸಾಲಿನ ವ್ಯವಸ್ಥೆಯನ್ನು ಅನುಸರಿಸಿ.
4. ನಡಪಂಥಲ್ ಫ್ಲೈ- ಓವರ್ ಅನ್ನು ಪ್ರಯಾಣಕ್ಕಾಗಿ ಬಳಸುವುದು.
5. ಮಲ ಮತ್ತು ಮೂತ್ರ ವಿಸರ್ಜನೆಗೆ ಶೌಚಾಲಯಗಳನ್ನು ಬಳಸುವುದು
6. ಚಾಲ್ತಿಯಲ್ಲಿರುವ ಜನಸಮೂಹದ ಪರಿಸ್ಥಿತಿಯನ್ನು ತಿಳಿದುಕೊಳ್ಳಿ ಮತ್ತು ನಂತರ ಮಾತ್ರ ಪಂಪಾದಿಂದ ಸನ್ನಿಧಾನಕ್ಕೆ ಮುಂದುವರಿಯುವುದು
7. ಡೋಲಿ ಬಳಸುವಾಗ, ದೇವಸ್ವಂ ಕೌಂಟರ್‍ನಲ್ಲಿ ಮಾತ್ರ ಪಾವತಿ ಮಾಡಿ ಮತ್ತು ರಸೀದಿಯನ್ನು ಇರಿಸಿ.
8. ಭದ್ರತಾ ಚೆಕ್ ಪಾಯಿಂಟ್‍ಗಳಲ್ಲಿ ನಿಮ್ಮನ್ನು ಭದ್ರತಾ ತಪಾಸಣೆಗೆ ಒಳಪಡಿಸಿ.
9. ಯಾವುದೇ ಸಹಾಯಕ್ಕಾಗಿ ಪೆÇಲೀಸರನ್ನು ಸಂಪರ್ಕಿಸಿ.
10. ಯಾವುದೇ ಅನುಮಾನಾಸ್ಪದ ಪಾತ್ರಗಳ ಬಗ್ಗೆ ಪೆÇಲೀಸರಿಗೆ ಮಾಹಿತಿ ನೀಡಿ.
11. ಪರವಾನಗಿ ಪಡೆದ ಮಳಿಗೆಗಳಿಂದ ಮಾತ್ರ ಖಾದ್ಯ ವಸ್ತುಗಳನ್ನು ಖರೀದಿಸಿ.
12. ಪಂಪಾ, ಸನ್ನಿಧಾನಂ ಮತ್ತು ಚಾರಣ ಮಾರ್ಗಗಳನ್ನು ಸ್ವಚ್ಛವಾಗಿಡಿ.
13. ನಿಗದಿಪಡಿಸಿದ ಪಾಕಿರ್ಂಗ್ ಸ್ಲಾಟ್‍ಗಳಲ್ಲಿ ಮಾತ್ರ ವಾಹನಗಳನ್ನು ನಿಲ್ಲಿಸಿ.
14. ತ್ಯಾಜ್ಯ ಪೆಟ್ಟಿಗೆಗಳಲ್ಲಿ ಮಾತ್ರ ತ್ಯಾಜ್ಯವನ್ನು ಹಾಕುವುದು.
15. ಅಗತ್ಯವಿದ್ದರೆ ವೈದ್ಯಕೀಯ ಕೇಂದ್ರಗಳು ಮತ್ತು ಆಮ್ಲಜನಕ ಪಾರ್ಲರ್‍ಗಳ ಸೌಲಭ್ಯಗಳನ್ನು ಪಡೆದುಕೊಳ್ಳುವುದು.
16. ಮಕ್ಕಳು, ವಯೋವೃದ್ಧರು ಮತ್ತು ಮಾಲಿಕಾಪುರಂಗಳ (ಹುಡುಗಿಯರ) ಕುತ್ತಿಗೆಗೆ ನೇತುಹಾಕಬೇಕಾದ ವಿಳಾಸ ಮತ್ತು ಸಂಪರ್ಕ ಸಂಖ್ಯೆಗಳೊಂದಿಗೆ ಗುರುತಿನ ಚೀಟಿಗಳು ಪಡೆಯುವುದು.
17. ಗುಂಪುಗಳು / ಸ್ನೇಹಿತರಿಂದ ಪ್ರತ್ಯೇಕತೆಯ ಸಂದರ್ಭದಲ್ಲಿ ಭಕ್ತರು ಪೆÇಲೀಸ್ ಸಹಾಯ ಪೆÇೀಸ್ಟ್‍ಗಳಲ್ಲಿ ವರದಿ ಮಾಡಬಹುದು.

ಈ ಕೆಳಕಂಡ ಕಾರ್ಯಗಳನ್ನು ಮಾಡಬೇಡಿ :

1. ದೇವಸ್ಥಾನದ ಆವರಣದಲ್ಲಿ ಮೊಬೈಲ್ ಬಳಸಬೇಡಿ.
2. ಪಂಪಾ, ಸನ್ನಿಧಾನಂ ಮತ್ತು ಮಾರ್ಗದಲ್ಲಿ ಧೂಮಪಾನ ಮಾಡಬೇಡಿ.
3. ಆಲ್ಕೋಹಾಲ್ ಅಥವಾ ಡ್ರಗ್ಸ್ ಸೇವಿಸಬೇಡಿ.
4. ಕ್ಯೂ ಜಂಪ್ ಮಾಡಬೇಡಿ.
5. ಸರದಿಯಲ್ಲಿರುವಾಗ ಹೊರದಬ್ಬಬೇಡಿ.
6. ಶಸ್ತ್ರಾಸ್ತ್ರಗಳು ಅಥವಾ ಇತರ ಸ್ಫೋಟಕ ವಸ್ತುಗಳನ್ನು ಒಯ್ಯಬೇಡಿ.
7. ಅನಧಿಕೃತ ಮಾರಾಟಗಾರರಿಗೆ ಮನರಂಜನೆ ನೀಡಬೇಡಿ.
8. ಶೌಚಾಲಯದ ಹೊರಗಡೆ ಮಲ ಮತ್ತು ಮೂತ್ರ ವಿಸರ್ಜನೆ ಮಾಡಬಾರದು.
9. ಯಾವುದೇ ಸೇವೆಗೆ ಹೆಚ್ಚುವರಿ ಪಾವತಿ ಮಾಡಬೇಡಿ.
10. ಯಾವುದೇ ಸಹಾಯಕ್ಕಾಗಿ ಪೆÇಲೀಸರನ್ನು ಸಂಪರ್ಕಿಸಲು ಹಿಂಜರಿಯಬೇಡಿ.
11. ತ್ಯಾಜ್ಯದ ತೊಟ್ಟಿಗಳನ್ನು ಹೊರತುಪಡಿಸಿ ಬೇರೆಡೆ ತ್ಯಾಜ್ಯವನ್ನು ಎಸೆಯಬೇಡಿ.
12. ಪತ್ತಿನೆಂಪಾಡಿಯಲ್ಲಿ ತೆಂಗಿನಕಾಯಿ ಒಡೆಯಬೇಡಿ.
13. ಗೊತ್ತುಪಡಿಸಿದ ಸ್ಥಳಗಳನ್ನು ಹೊರತುಪಡಿಸಿ ಬೇರೆಲ್ಲಿಯೂ ತೆಂಗಿನಕಾಯಿ ಒಡೆಯಬೇಡಿ
14. ಪವಿತ್ರ ಮೆಟ್ಟಿಲುಗಳನ್ನು ಹತ್ತುವಾಗ ಪಥಿನೆಂಪಾಡಿಯಲ್ಲಿ ಮಂಡಿಯೂರಿ ಕುಳಿತುಕೊಳ್ಳಬೇಡಿ.
15. ಹಿಂದಿರುಗುವ ಪ್ರಯಾಣಕ್ಕಾಗಿ ನಡಪಂಥಲ್ ಫ್ಲೈಓವರ್ ಹೊರತುಪಡಿಸಿ ಯಾವುದೇ ಮಾರ್ಗವನ್ನು ಬಳಸಬೇಡಿ.
16. ತಿರುಮುಟ್ಟಂ ಅಥವಾ ತಂತ್ರಿನಾಡದಲ್ಲಿ ಎಲ್ಲಿಯೂ ವಿಶ್ರಾಂತಿ ಪಡೆಯಬೇಡಿ.
17. ನಡಪಂಥಲ್ ಮತ್ತು ಕೆಳಗಿನ ತಿರುಮುಟ್ಟಂನಲ್ಲಿ ನೆಲದ ಮ್ಯಾಟ್‍ಗಳಿಗಾಗಿ ಮಾರ್ಗಗಳನ್ನು ಬಳಸಬೇಡಿ ಎಂದು ಉಪ ಪೆÇಲೀಸ್ ಮಹಾನಿರೀಕ್ಷಕರು, ತಿರುವನಂತಪುರಂ ಶ್ರೇಣಿ, ಕೇರಳ ಮತ್ತು ಹೆಚ್ಚುವರಿ ಪೆÇಲೀಸ್  ಕೋ-ಆರ್ಡಿನೇಟರ್ ಶಬರಿಮಲೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಣೆ ಬರಹದಲ್ಲಿ ಜೀವನವಿಲ್ಲ ಹಣೆಯ ಬೆವರಿನಲ್ಲಿ ಜೀವನವಿದೆ - ಶ್ರೀ ರಂಭಾಪುರಿ ಜಗದ್ಗುರುಗಳು

 ಹಣೆ ಬರಹದಲ್ಲಿ ಜೀವನವಿಲ್ಲ ಹಣೆಯ ಬೆವರಿನಲ್ಲಿ ಜೀವನವಿದೆ - ಶ್ರೀ ರಂಭಾಪುರಿ ಜಗದ್ಗುರುಗಳು                       ಬೇಲೂರು- ಡಿಶಂಬರ್-೨೦. ಪ್ರಯತ್ನಶೀಲ ಮನುಷ್ಯನಿಗೆ ಜಯ ನಿಶ್ಚಿತ. ಹಣದ ಕೊರತೆ ಇದ್ದರೂ ಗುಣದ ಕೊರತೆ ಇರಬಾರದು. ಹಣೆ ಬರಹದಲ್ಲಿ ಭವಿಷ್ಯವಿಲ್ಲ. ಹಣೆಯ ಬೆವರಿನಲ್ಲಿ ಉಜ್ವಲ ಭವಿಷ್ಯ ಇದೆ ಎಂಬುದನ್ನು ಮರೆಯಬಾರದೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.



ಅವರು ಶುಕ್ರವಾರ ಸಮೀಪದ ಶ್ರೀಮದ್ರಂಭಾಪುರಿ ಶಾಖಾ ಕಾರ್ಜುವಳ್ಳಿ ಹಿರೇಮಠದಲ್ಲಿ ಜರುಗಿದ ಧರ್ಮ ಸಂವರ್ಧನಾ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು. 

ನಿಜವಾದ ಸಂಬ0ಧಗಳು ಸಮಯ ಮತ್ತು ಗೌರವ ಹೊರತುಪಡಿಸಿ ಬೇರೇನನ್ನೂ ಬಯಸುವುದಿಲ್ಲ. ಎಷ್ಟೇ ಸಮಸ್ಯೆಗಳು ಬಂದರೂ ಆತ್ಮ ವಿಶ್ವಾಸದಿಂದ ಬಾಳಿದರೆ ಜಯ ನಿಶ್ಚಿತ. ಬದುಕು ಹೇಗೆ ಸಾಗಿಸುವುದೆಂದು ಭಯಪಡಬಾರದು. ಗೂಡಿನಿಂದ ಹೊರಕ್ಕೆ ಹೋಗುವ ಪಕ್ಷಿಗೆ ಕಾಳುಗಳು ಎಲ್ಲಿವೆ ಎಂದು ಗೊತ್ತಿರುವುದಿಲ್ಲ. ಆದರೂ ಹಾರುತ್ತಾ ಹೋಗಿ ತನ್ನ ಆಹಾರವನ್ನು ಪಡೆಯುತ್ತದೆ. ಮನುಷ್ಯ ಸಹ ಕ್ರಿಯಾಶೀಲನಾಗಿ ಶ್ರಮದಿಂದ ದುಡಿದರೆ ಜೀವನ ಸಮೃದ್ಧಗೊಳ್ಳುವುದರಲ್ಲಿ ಅನುಮಾನವಿಲ್ಲ. ವೀರಶೈವ ಧರ್ಮದಲ್ಲಿ ಕಾಯಕ ಜೀವನಕ್ಕೆ ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ್ದಾರೆ. ಅದೇ ದಾರಿಯಲ್ಲಿ ಶರಣರು ಶ್ರಮಿಸಿ ದುಡಿಮೆಯ ಮಹತ್ವವನ್ನು ಸಾರಿದ್ದಾರೆ. ಕಾರ್ಜುವಳ್ಳಿ ಹಿರೇಮಠದ ಸದಾಶಿವ ಶಿವಾಚಾರ್ಯ ಸ್ವಾಮಿಗಳು ಆಧ್ಯಾತ್ಮ ಜೀವಿಗಳಾಗಿದ್ದು ಭಕ್ತ ಸಮುದಾಯಕ್ಕೆ ಸಂಸ್ಕಾರ ಮತ್ತು ಮಾರ್ಗದರ್ಶನ ಮಾಡುತ್ತಿರುವುದು ಅತ್ಯಂತ ಸಂತೋಷವನ್ನು ಉಂಟು ಮಾಡಿದೆ. ಗುರು ಪರಂಪರೆಯ ಆದರ್ಶ ವಿಚಾರ ಧಾರೆಗಳನ್ನು ಜನಮನಕ್ಕೆ ಮುಟ್ಟಿಸಿದ ಶ್ರೇಯಸ್ಸು ಅವರದಾಗಿದೆ ಎಂದು ಹರುಷ ವ್ಯಕ್ತ ಪಡಿಸಿ ಶ್ರೀ ಪೀಠದಿಂದ ರೇಶ್ಮೆ ಮಡಿ ಸ್ಮರಣಿಕೆ ಫಲ ಪುಷ್ಪವಿತ್ತು ಶುಭ ಹಾರೈಸಿದರು. 

ನೇತೃತ್ವ ವಹಿಸಿದ ಕಾರ್ಜುವಳ್ಳಿ ಹಿರೇಮಠದ ಸದಾಶಿವ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಬದುಕಿನ ವಿಕಾಸಕ್ಕೆ ಆಧ್ಯಾತ್ಮದ ಅರಿವು ಮತ್ತು ಗುರು ಮಾರ್ಗದರ್ಶನ ಅವಶ್ಯಕ. ವೀರಶೈವ ಧರ್ಮದಲ್ಲಿ ಸಂಸ್ಕಾರಕ್ಕೆ ಬಹಳಷ್ಟು ಮಹತ್ವವನ್ನು ಕೊಟ್ಟಿದ್ದಾರೆ. ಲಿಂ. ರುದ್ರಮುನಿ ಶಿವಾಚಾರ್ಯ ಸ್ವಾಮಿಗಳವರ ೪೬ನೇ ವರ್ಷದ ಪುಣ್ಯ ಸ್ಮರಣೋತ್ಸವ, ಭದ್ರಕಾಳಿ ಸಮೇತ ಶ್ರೀ ವೀರಭದ್ರಸ್ವಾಮಿ ಕಲ್ಯಾಣ ಮಹೋತ್ಸವ ಹಮ್ಮಿಕೊಂಡಿದ್ದು ಸಮಾಧಾನ ತಂದಿದೆ ಎಂದ ಅವರು ಇದೇ ಸಂದರ್ಭದಲ್ಲಿ ಪಟ್ಟಾಧಿಕಾರದ ೪ನೇ ವರ್ಷದ ವರ್ಧಂತಿ ಜನ್ಮ ದಿನೋತ್ಸವ ಶ್ರೀ ರಂಭಾಪುರಿ ಜಗದ್ಗುರುಗಳ ಸಾನ್ನಿಧ್ಯದಲ್ಲಿ ಜರುಗುತ್ತಿರುವುದು ನಮ್ಮ ಸೌಭಾಗ್ಯವಾಗಿದೆ ಎಂದರು. ಕಡೇನಂದಿಹಳ್ಳಿ ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮಿಗಳು ಸಮಾರಂಭವನ್ನು ಉದ್ಘಾಟಿಸಿದರು. ನಾಗವಂದ, ಹಾರನಹಳ್ಳಿ, ಕೆಸÀವತ್ತೂರು, ತೇಜೂರು ಶ್ರೀಗಳು ಉಪಸ್ಥಿತರಿದ್ದರು. 

ಸಂಸದ ಶ್ರೇಯಸ್ ಪಟೇಲ್ ಅಧ್ಯಕ್ಷತೆ ವಹಿಸಿದ್ದರು. ಆಲೂರಿನ ಮಹೇಶ್ ಎಂ.ಎಸ್. ಇವರಿಗೆ ಧರ್ಮ ಹಿತಚಿಂತಕ ಪ್ರಶಸ್ತಿಯನ್ನು ಶ್ರೀ ರಂಭಾಪುರಿ ಜಗದ್ಗುರುಗಳು ಪ್ರದಾನ ಮಾಡಿ ಆಶೀರ್ವದಿಸಿದರು. ಇದೇ ಸಂದರ್ಭದಲ್ಲಿ ಎ.ಎನ್.ರೇಣುಕಪ್ರಸಾದ್, ಅನಿಲ್ ಬೂದಿಹಾಲ್, ಚನ್ನಬಸಪ್ಪ ಹೆದ್ದುರ್ಗ ಇವರಿಗೆ ಗೌರವ ಗುರುರಕ್ಷೆ ನೀಡಲಾಯಿತು. 

ಶಾಸಕ ಸಿಮೆಂಟ್ ಮಂಜು ಮುಖ್ಯ ಅತಿಥಿಗಳಾಗಿದ್ದರು. ಮಹೇಶ್ ಚಿಕ್ಕೊಟೆ ಸ್ವಾಗತಿಸಿದರು. ಹಾಸನ ಗ್ಯಾಸ ಮಂಜುನಾಥ ಪ್ರಾರ್ಥಿಸಿದರು. ಕು.ಮೈತ್ರಿ ಎಸ್.ಮಾದಗುಂಡಿ ಇವರಿಂದ ಭರತ ನಾಟ್ಯ ಪ್ರದರ್ಶನ, ಕಾರ್ಜುವಳ್ಳಿ ದೇವಿಕ ಕುಮಾರ್ ಇವರಿಂದ ನಿರೂಪಣೆ ನಡೆಯಿತು.


ಅಂಬೇಡ್ಕರ್ ಹೆಸರು ಹೇಳೋದು ಪ್ಯಾಷನ್ನಾ? ದೇವರು ಹೆಸರು ಹೇಳಿದರೆ ಸ್ವರ್ಗನಾ? ಕ್ಯಾ ಬಾತ್ ಹೈ ಅಮಿತ್ ಜೀ...

 ಅಂಬೇಡ್ಕರ್ ಹೆಸರು ಹೇಳೋದು ಪ್ಯಾಷನ್ನಾ? ದೇವರು ಹೆಸರು ಹೇಳಿದರೆ ಸ್ವರ್ಗನಾ? ಕ್ಯಾ ಬಾತ್ ಹೈ ಅಮಿತ್ ಜೀ...




ಸಂಸತ್ ಭವನದ ಚಳಿಗಾಲ ಅಧಿವೇಶನದಲ್ಲಿ ಸಂವಿಧಾನ ಚರ್ಚೆಯ ವಿಷಯದ ಕುರಿತು ಕೇಂದ್ರದ ಗೃಹ ಸಚಿವರಾದ ಅಮಿತ್ ಶಾ ಅವರು ತಮ್ಮ ಭಾಷಣ ವೇಳೆ ಅಂಬೇಡ್ಕರ್ ಹೆಸರು ಈಗ ಫ್ಯಾಷನ್ ಆಗಿದೆ ಎಂದೂ ಅಂಬೇಡ್ಕರ್, ಅಂಬೇಡ್ಕರ್, ಅಂಬೇಡ್ಕರ್, ಅಂಬೇಡ್ಕರ್ ಎಂದು ಹೆಸರು ಹೇಳುವ ಬದಲು ಇಷ್ಟೊಂದು ಬಾರಿ ದೇವರು ಹೆಸರು ಹೇಳಿದ್ದರೆ ಸ್ವರ್ಗಕ್ಕೆ ಹೋಗಬಹುದಿತ್ತು ಎಂದು ಹೇಳಿ ಅಂಬೇಡ್ಕರರ ಹೆಸರಿನೊಂದಿಗೆ ಅವರನ್ನು ಈ ಪರಿಯಲ್ಲಿ ಅವಮಾನಗೊಳಿಸಿದ ಅಮಿತ್ ಶಾ ಅವರ ನಡೆಗೆ ದಿಕ್ಕಾರವಿರಲಿ. ಕಾಂಗ್ರೇಸ್ ನವರನ್ನು ತೆಗಳುವ ನೆಪದಲ್ಲಿ ಆ ಮಾನವತಾವಾದಿ ಅಂಬೇಡ್ಕರ್ ಹೆಸರೇ ಬೇಕಿತ್ತಾ ನಿಮ್ಮಗಳಿಗೆ?! ನಿಮ್ಮ ರಾಜಕೀಯ ದೊಂಬರಾಟ, ಹರಕುಬಾಯಿ ಪ್ರದರ್ಶನ ಕಾರಣವಾಗಿ ದೇಶದಲ್ಲಿ ಎಂತಹ ವಿಷಬೀಜ ಬಿತ್ತಲು ಹೊರಟಿರುವಿರಿ. ದೇಶದ ಅಭಿವೃದ್ಧಿಯನ್ನು ಚರ್ಚಿಸದೆ  ಬರೀ ಒಬ್ಬರನ್ನು ಒಬ್ಬರು ಬೈಯ್ದಾಡಿಕೊಳ್ಳುತ್ತಾ, ಪ್ರತಿಭಟನೆ ಮಾಡುತ್ತಾ ವ್ಯರ್ಥ ಕಾಲಹರಣ ಮಾಡುವಿರಲ್ಲಾ? ದೇಶದ ಜ್ವಲಂತ ಸಮಸ್ಯೆಗಳಾದ ರೈತನ ಸಮಸ್ಯೆ, ನಿರುದ್ಯೋಗ ಸಮಸ್ಯೆ, ಭ್ರಷ್ಟಾಚಾರ ವ್ಯವಸ್ಥೆ ಕಡೆ ಗಮನ ಹರಿಸದೆ, ಚರ್ಚಿಸದೆ ಇಂತಹದ್ದೊಂದು ಹೇಳಿಕೆ ನೀಡಿ ಬೇರೊಂದು ಕಡೆ ಗಮನ ಸೆಳೆದು ದೇಶದ ಜನರ ಕಣ್ಣಿಗೆ ಮಣ್ಣೆರೆಚಿ, ದೇಶದ ಜನರ ಹಣವನ್ನು ಎಷ್ಟು ಹಾಳು ಮಾಡುತ್ತಿರುವಿರಲ್ಲಾ ನಿಮ್ಮ ಈ ನಡೆ ನಮ್ಮ ರಕ್ತವನ್ನು ಕುದಿಯುವಂತೆ ಮಾಡುತ್ತಿದೆ. ಈಗ ನಮ್ಮ ಪರಿಸ್ಥಿತಿ "ಬಡವನ ಕೋಪ ಅವುಡಿಗೆ ಮೂಲ ಎನ್ನುವಂತಾಗಿದೆ".

ಅಂಬೇಡ್ಕರ್ ಹೆಸರು ಹೇಳಿದರೆ ಪ್ಯಾಷನ್ನಾ? ದೇವರು ಹೆಸರು ಹೇಳಿದರೆ ಸ್ವರ್ಗಾನಾ?: 

ಅಂತೂ ನಿಮ್ಮ ಮನುವಾದಿ ಚಡ್ಡಿಗುಣ ತೋರಿಸಿ ಬಿಟ್ಟಿರಲ್ಲಾರೀ...! ದೇವಲೋಕದ ಸ್ವರ್ಗದ ಬಗ್ಗೆ; ಅಸ್ಪೃಶ್ಯರ ಕರ್ಮದ ಬಗ್ಗೆ ಹೇಳುವ 'ಮನು' ಗ್ರಂಥವನ್ನು ಅಂಬೇಡ್ಕರ್ ನೀವು ನಿಂತ ಜಾಗದಲ್ಲಿ ಸುಟ್ಟು ಎಸೆದುದನ್ನು ನೆನಪಿಸಿಕೊಳ್ಳಿ. ನಿಮಗೆ ಮನುಷ್ಯ ಧರ್ಮದ ದ್ವೇಷಿ ಮನು ದೇವರಾದರೆ; ನಮಗೆ ಮನುಷ್ಯರನ್ನು ಸ್ವತಂತ್ರಗೊಳಿಸುವ ಅಂಬೇಡ್ಕರ್ ದೇವರಾಗಬಾರದಾ? ಅವರು ಹೆಸರು ಒಂದು ಬಾರಿ ಅಲ್ಲ, ನೂರು ಬಾರಿ ಅಲ್ಲ, ನಮ್ಮ ಉಸಿರುಸಿರಿಗೂ ಅಂಬೇಡ್ಕರನ್ನು ಸ್ಮರಿಸಿದರು ಅದು ಕಡಿಮೆ. ಅಷ್ಟೊಂದು ಋಣ ನಮ್ಮ ಮೇಲೆ ಈ ದೇಶದ ಮೇಲೆ ಅಷ್ಟೇ ಏಕೆ ನಿಮ್ಮ ಮೇಲೆಯೂ ಇದೆ ಎಂಬುದನ್ನು ಮರೆಯದಿರಿ. ಬಿಟ್ಟಿ ಕೂಳು ತಿಂದು ಸ್ವೇಚ್ಛಾಚಾರದಿ ನಡೆದಾಡುವ ಕಾಲ್ಪನಿಕ ಸ್ವರ್ಗವೆಂಬುದು ಚಂದ್ರಶೇಖರನೆಂಬ ಹೆಡ್ಡನ, ಜೀವಗಳ್ಳರ ಗುಂಪಿನ ಸಂತೆ ಎಂಬುದನ್ನು ಗುರು ಬಸವಾದಿ ಪ್ರಮಥರು 12ನೇ ಶತಮಾನದಲ್ಲಿಯೇ ವಚನಗಳ ಮೂಲಕ ಹೀಗಳೆದಿದ್ದಾರೆ. ಇಂತಹ ಸ್ವರ್ಗವು ನಿಮಗೆ ಶ್ರೇಷ್ಟವಾಗುವುದಾದರೆ ಆಗಲಿ ನಮ್ಮದೇನು ತಕರಾರಿಲ್ಲ. ಆದರೆ 545ಜನಗಳನ್ನು(ಸದಸ್ಯರನ್ನು) ಯಾವುದೇ ಜಾತಿ ಮತ ಪಂಥ ಪಂಗಡ ಧರ್ಮ ಭಾಷೆ ಹೆಣ್ಣು ಗಂಡು ಬೇಧವಿಲ್ಲದೆ ಒಟ್ಟಿಗೆ ಸೇರಿಸಿ ಸಂವಿಧಾನದ ಸ್ವರ್ಗದಲ್ಲಿ ತೇಲುವಂತೆ ಮಾಡಿದ ಅಂಬೇಡ್ಕರ್ ನಮ್ಮ ದೇವರಾದರೆ, ಅವರ ಹೆಸರನ್ನು ಸಾವಿರ ಬಾರಿ ಬಳಸಿದರೆ ನಿಮಗಾಗುವ ನೋವೇನು?. ನಿಮ್ಮದೇ ಪ್ರತಿಬಿಂಬವಾಗಿರುವ ಅಥವಾ ನಿಮ್ಮ ಅಣ್ಣನೇ ಆಗಿರುವ ಕಾಂಗ್ರೇಸ್ ನವರನ್ನು ಟೀಕೆ ಮಾಡಲು ನಮ್ಮ ದೇವರ ಹೆಸರಿಗೆ(ಅಂಬೇಡ್ಕರ್) ಅಪಮಾನ ಮಾಡಿರುವುದಕ್ಕೆ ತೀವ್ರವಾಗಿ ಖಂಡಿಸುತ್ತೇವೆ ಅಲ್ಲದೆ ರಾಜನಾಮೆಗೆ ಒತ್ತಾಯಿಸುತ್ತೇವೆ. 


ದೇವರ ದೃಷ್ಟಿಯಲ್ಲಿ ಸಮಾನತೆಗಿಂತ; ಮನುಷ್ಯರ ದೃಷ್ಟಿಯಲ್ಲಿ ಸಮಾನತೆ ಬೇಕೆಂದು ತನ್ನ ಜೀವನವನ್ನೇ ಉರಿಯುವ ಕರ್ಪೂರದಂತೆ ಸವೆಸಿ ಹೋರಾಡಿ ನಿಮ್ಮನ್ನೊಳಗೊಂಡಂತೆ ನಿಮ್ಮ ಜೊತೆಗಾರ ಪ್ರಧಾನಿ ಮೋದಿಯನ್ನೊಳಗೊಂಡಂತೆ ನಿಮ್ನ ವರ್ಗದವರಿಗೆ ದೇವರ ಸ್ಥಾನ(ಅಧಿಕಾರ ಅನುಭವಿಸಲು ಅವಕಾಶ)ಕಲ್ಪಿಸಿಕೊಟ್ಟ ದಾತನನ್ನೇ ಅವಮಾನಗೊಳಿಸುತ್ತಿರುವುದಕ್ಕೆ ತಕ್ಕ ಬೆಲೆ ತೆರಲೇಬೇಕಾಗುತ್ತದೆ. 

ಹಲವಾರು ವರ್ಷಗಳಿಂದ ಜ್ವಾಲಾಮುಖಿಯಂತೆ ಕೊತಕೊತನೇ ಕುದಿಯುತ್ತಿದ್ದ ಅಂಬೇಡ್ಕರರ ಬಗೆಗಿನ ಹೊಟ್ಟೆಯೊಳಗಿನ ಕಿಚ್ಚು ಅಂತೂ ಇಂತೂ

ಕಾರಿಬಿಟ್ಟಿರುವಿರಿ ಮತ್ತು ನಿಮ್ಮ ಗೋಡ್ಸೆ ನೀತಿಯನ್ನು ಸಾಭೀತು ಮಾಡಿಬಿಟ್ಟಿರುವಿರಿ. ಎಷ್ಟು ದಿನ ಅಂತ ಇಟ್ಟುಕೊಳ್ಳಲು ಸಾಧ್ಯ ಹೇಳಿ ನಿಮ್ಮೊಳಗಿನ ಆ ಕಿಚ್ಚು. ಈಗ ನಿಮ್ಮ ಅರೆ ಪ್ರಜ್ಞಾವಸ್ಥೆಯಿಂದ ಸತ್ಯ ಹೊರಬಂದಾಗಿದೆ. 'ಕದ್ದಿರುವ ಕಳ್ಳ ತಪ್ಪೊಪ್ಪಿಕೊಂಡು ಕ್ಷಮೆ ಕೇಳಿದರೆ ಕಳ್ಳನೆಂಬ ಹಣೆ ಪಟ್ಟಿ ಅಳಿಸಲಾದೀತೆ'? 'ಅಡಿಕೆಗೆ ಹೋದ ಮಾನ ಆನೆ ಕೊಟ್ಟರೂ ಮರಳಿ ಬಂದೀತೆ'? ಈಗ ನೀವು ಸ್ಪಷ್ಟನೆ ಕೊಟ್ಟಿರುವುದು ಅಂಬೇಡ್ಕರರನ್ನು ಅಂದು ಒಪ್ಪಿಕೊಳ್ಳದ ಅಂದಿನ ಕಾಂಗ್ರೇಸ್ ನವರಿಗೆ  ಆದರೆ ಅಂಬೇಡ್ಕರವಾದಿಗಳಿಗಲ್ಲ. ನಿಮ್ಮ ಈ ಹೇಳಿಕೆ  ಈ ದೇಶದ ಜನತೆಯನ್ನು ಎರಡು ಭಾಗವಾಗಿ ಒಡೆದು ಮನುವಾದಿಗಳು, ಅಂಬೇಡ್ಕರ್ ವಾದಿಗಳು ಎಂದು ವಿಂಗಡಿಸುವಂತೆ ಮಾಡಿದೆ. ದೇಶ ವಿಭಜನೆಯ ದ್ರೋಹಿ ಎಂಬ ಪಟ್ಟಕ್ಕೆ ನಿನ್ನೆ ನೀವು ಪಾತ್ರರಾದಿರಿ. 'ಮಿಂಚಿ ಹೋದ ಕಾಲಕ್ಕೆ ಚಿಂತಿಸಿ ಫಲವೇನು' ಮನುವಾದವನ್ನು ಬೆಂಬಲಿಸಿ ಅಂಬೇಡ್ಕರ ಭಾರತವನ್ನು ಎದುರಿಸಿರಿ. ಸಂವಿಧಾನ ಶಿಲ್ಪಿ ಅಂಬೇಡ್ಕರವರ ಸಂವಿಧಾನ ನೀಡಿದ ಗೃಹ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿ ಅಧಿಕಾರದಿಂದ ಕೆಳಗಿಳಿದು ಮನುವಾದದ ಹುಳುಕುಂಡದಲ್ಲಿ ಹೊರಳಾಡಿರಿ ಎಂಬ ಎಚ್ಚರಿಕೆಯ ನಮ್ಮ ಉತ್ತರ.

ಬಹುತ್ವ ಭಾರತದ ಚಿಂತಕರು

ಪೂಜ್ಯ ಶ್ರೀ ಸದ್ಗುರು ಬಸವಪ್ರಭು ಸ್ವಾಮೀಜಿಯವರು ಕಲ್ಯಾಣ ಮಹಾಮನೆ ಮಹಾಮಠ ಗುಣತೀರ್ಥವಾಡಿ-ಬಸವಕಲ್ಯಾಣ.

ಪ್ರೇಮ ಕಾಶ್ಮೀರದಲ್ಲಿ ರಕ್ತದೋಕುಳಿ; ಹಿಂದೂಗಳೇ ಟಾರ್ಗೆಟ...!

  ಪ್ರೇಮ ಕಾಶ್ಮೀರದಲ್ಲಿ ರಕ್ತದೋಕುಳಿ; ಹಿಂದೂಗಳೇ ಟಾರ್ಗೆಟ್. ಭೂಲೋಕದ ಸ್ವರ್ಗವೆಂದೇ ಕರೆಯುವ ಜಮ್ಮು-ಕಾಶ್ಮೀರದ ಪೆಹಲ್ಗಾಮ್ ಸಮೀಪದ ಬೈಸರನ್ ಹುಲ್ಲುಗಾವಲಿನಲ್ಲಿ ಪಾಕ್ ಪ್...