ads

Search This Blog

Friday, 20 December 2024

ಪುರಸಭೆ ಕಾರ್ಮಿಕರ ಕಾರ್ಯಕ್ಕೆ ಗೌರವಿಸಿ - ಡಾ.ಶೈಲಜಾ ತಳವಾಡೆ

 ರೋಟರಿ ಕ್ಲಬ್ ವತಿಯಿಂದ ಬ್ಲಾö್ಯಂಕೆಟ್ ವಿತರಣೆ

ಪುರಸಭೆ ಕಾರ್ಮಿಕರ ಕಾರ್ಯಕ್ಕೆ  ಗೌರವಿಸಿ - ಡಾ.ಶೈಲಜಾ ತಳವಾಡೆ

ಭಾಲ್ಕಿ : ಚಳಿ,ಮಳೆ,ಗಾಳಿ ,ಬಿಸಿಲು ಲೆಕ್ಕಿಸದೆ ಪ್ರತಿನಿತ್ಯ ಪಟ್ಟಣದ ಸ್ವಚ್ಛತೆ ಕಾಪಾಡುವ ಪುರಸಭೆ ಕಾರ್ಮಿಕರನ್ನು ಎಲ್ಲರೂ ಗೌರವಿಸಿ ಅವರಿಗೆ ಪ್ರೋತ್ಸಾಹಿಸಬೇಕು ಎಂದು ಸ್ತಿ ರೋಗತಜ್ಞೆ ಡಾ.ಶೈಲಜಾ ತಳವಾಡೆ ಅಭಿಪ್ರಾಯಪಟ್ಟರು.


ಬಿಎಸ್‌ಕೆ ಕ್ರಿಕೆಟ್ ಪಂದ್ಯ ಗೆದ್ದು ಟ್ರೋಫಿ 

ಪಟ್ಟಣದ ಬಿಯಾಣಿ ದಾಲಮಿಲ್ ಆವರಣದಲ್ಲಿ ಭಾಲ್ಕಿ ರೋಟರಿ ಕ್ಲಬ್ ವತಿಯಿಂದ ಬೀದರನಲ್ಲಿ ನಡೆದ ರೋಟರಿ ಕಲ್ಯಾಣ ವಲಯ ಕ್ರಿಕೇಟ್ ಪಂದ್ಯಾವಳಿಯಲ್ಲಿ  ವಿಜೇತ `ಭಾಲ್ಕಿ ಸುಪರ್ ಕಿಂಗ್' (ಬಿಎಸ್‌ಕೆ) ವ್ಯವಸ್ಥಾಪಕ ತಂಡದವರಿAದ ಹಮ್ಮಿಕೊಂಡ ಪುರಸಭೆ ಕಾರ್ಮಿಕರಿಗೆ ಬ್ಲಾö್ಯಂಕೆಟ್ ವಿತರಣಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ಪಟ್ಟಣದ ಓಣಿಗಳನ್ನು ಸ್ವಚ್ಛಗೊಳಿಸಿ ಎಲ್ಲರ ಮನೆ-ಮನ ತಿಳಿಗೊಳಿಸುವ ಕಾರ್ಯ ಮಾಡುತ್ತಿರುವ ಪೌರ ಕಾರ್ಮಿಕರ ಕಾರ್ಯಕ್ಕೆ  ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗಿದೆ.ಆ ನಿಟ್ಟಿನಲ್ಲಿ  ರೋಟರಿ ಕ್ಲಬ್ ಆಫ್ ಭಾಲ್ಕಿ ಫೋರ್ಟ್ನವರು ಕಾರ್ಮಿಕರ ಸೇವೆ ಗುರುತಿಸಿ ಮಾಡುವ ಜನಪಯೋಗಿ ಕಾರ್ಯ ಶ್ಲಾಘನೀಯವಾಗಿದೆ ಎಂದರು.

ಬಿಎಸ್‌ಕೆ ಪೋಷಕ ಉದ್ಯಮಿ ಜೈಕಿಶನ ಬಿಯಾಣಿ ಮಾತನಾಡಿ, ಜಿಲ್ಲೆಯ ೦೮ ರೋಟರಿ ಕ್ಲಬ್‌ನವರು ಕ್ರಿಕೆಟ್ ಪಂದ್ಯಾವಳಿ ಆಯೋಜಿಸಿ ಕ್ಯಾನ್ಸರ್ ಪೀಡಿತರ ನೆರವಿಗಾಗಿ  ೧೨ ಲಕ್ಷ ನಿಧಿ ಸಂಗ್ರಹಿಸಿದ ಕಾರ್ಯ ಇತರರಿಗೆ ಮಾದರಿಯಾಗಿದೆ.ಮಕ್ಕಳ ತಜ್ಞ  ಡಾ.ವಸಂತ ಪವಾರ ಮಾತನಾಡಿ,ಸತತ ಪರಿಶ್ರಮ ಮತ್ತು ಕೌಶಲ್ಯತನದಿಂದ ಆಟ ಪ್ರದರ್ಶನ ಮಾಡಿ  ಬಿಎಸ್‌ಕೆ ಕ್ರಿಕೆಟ್ ಪಂದ್ಯ ಗೆದ್ದು ಟ್ರೋಫಿ ಮತ್ತು ನಗದು ೩೧ ಸಾವಿರ ರೂ.ತನ್ನ ಮಡಿಲಿಗೆರಿಸಿಕೊಂಡಿದ್ದು ಹೆಮ್ಮೆಯ ವಿಷಯ ಎಂದರು.

ಬಿಎಸ್‌ಕೆ ಸಹಪೋಷಕರಾದ ಯೋಗೇಶ ಅಷ್ಟೂರೆ ಅವರು,ಬಿಎಸ್‌ಕೆ ಜಿಲ್ಲೆಯ ಕ್ರಿಕೆಟ್ ಪಂದ್ಯಾವಳಿಯಲ್ಲಿ ಸತತ ಮೂರು ತಂಡದವರಿಗೆ ಸೋಲಿಸಿ ಸೋಲಿಲ್ಲದ ಸರ್ದಾರ ಆಗಲು ಮಾಜಿ ಸಚಿವ ರಾಜಶೇಖರ ಪಾಟೀಲ್ ,ಎಮ್‌ಎಲ್‌ಸಿ ಭೀಮರಾವ ಪಾಟೀಲ್ ಹಾಗೂ ಎಲ್ಲ ರೋಟರಿಯನ್ ಅವರ ಪ್ರೇರಣೆ ಮತ್ತು ಮಾರ್ಗದರ್ಶನ ಕಾರಣ  ಎಂದು ಹೇಳಿ ತಮ್ಮ ಮನದಾಳದ ಮಾತು ಹೊರ ಹಾಕಿದರು.

ಮಾಜಿ ಎಜಿ ಡಾ.ಅಮೀತ ಅಷ್ಟೂರೆ ಅವರು,ಕ್ಯಾಪ್ಟನ್ ಶಾಂತನು ಕುಲಕರ್ಣಿ ,ಉಪಕ್ಯಾಪ್ಟನ್ ಅಶ್ವೀನ ಭೋಸ್ಲೆ ,ಆಲ್‌ರೌಂಡರ್ ಅವಿನಾಶ ಮುಲ್ಗೆ, ಸೇರಿದಂತೆ ಎಲ್ಲ ಕ್ರಿಕೆಟ್ ಪಟುಗಳ  ಆಟ ನೋಡುಗರಲ್ಲಿ  ರೋಮಾಂಚನವುAಟು ಮಾಡಿತು ಎಂದರು.

ರೋಟರಿ ಅಧ್ಯಕ್ಷ ಸಂಜಯಕುಮಾರ ಪಂಡರಗೆರೆ ಅಧ್ಯಕ್ಷತೆ ವಹಿಸಿದ್ದರು.

ಸನ್ಮಾನ:ಇದೇ ಸಂದರ್ಭದಲ್ಲಿ ಯುವಮುಖಂಡ ಚನ್ನಬಸವ ಬಳತೆ ಸಂಚಾಲಿತ ಸಮೃದ್ಧಿ ಎಂಟರಪ್ರೆöಜೆಸ್ ವತಿಯಿಂದ ಕಾಶಿನಾಥ ಅವರ ಉಪಸ್ಥಿತಿಯಲ್ಲಿ ಬಿಎಸ್‌ಕೆ ಸುಪರ ಚಾಂಪಿಯನ್ ತಂಡದವರಿಗೆ ಗೌರವಿಸಲಾಯಿತು.

ರೋಟರಿ ಕಾರ್ಯದರ್ಶಿ ದತ್ತುಕುಮಾರ ಮೆಹಕ್ರೆ,ಖಜಾಂಚಿ ಡಾ.ಸಜ್ಜಲ್ ಬಳತೆ,ಜಿಲ್ಲಾ ಅಂಕಿತಾಧಿಕಾರಿ ಡಾ.ಸಂತೋಷ ಕಾಳೆ,ಡಾ.ಯುವರಾಜ ಜಾಧವ,ಡಾ.ನಿತೀನ ಪಾಟೀಲ್,ಡಾ.ಶಶಿಕಾಂತ ಭೂರೆ,ಡಾ.ವಿಲಾಸ ಕನಸೆ,ಅವಿನಾಶ ಮುಲ್ಗೆ,ಡಾ.ಶರತ ತುಕದೆ,ಶಾಂತನು ಕುಲಕರ್ಣಿ,ಡಾ.ಧನರಾಜ ಹುಲಸೂರೆ,ನ್ಯಾಯವಾದಿ ಸಂಜಯ ನಾಯಕ್,ಡಾ.ಶ್ರೀರಂಗ ಬಿರಾದಾಋ,ಡಾ.ಗುಂಡೆರಾವ ಶೆಡೋಳೆ,ಸೋಮನಾಥ ,ಕಾಶಿನಾಥ ಸೇರಿದಂತೆ ಪುರಸಭೆ ಕಾರ್ಮಿಕರು ಉಪಸ್ಥಿತರಿದ್ದರು. ಪ್ರಾಚಾರ್ಯ ಅಶೋಕ ರಾಜೋಳೆ ನಿರೂಪಿಸಿ,ವಂದಿಸಿದರು.



No comments:

ಪ್ರೇಮ ಕಾಶ್ಮೀರದಲ್ಲಿ ರಕ್ತದೋಕುಳಿ; ಹಿಂದೂಗಳೇ ಟಾರ್ಗೆಟ...!

  ಪ್ರೇಮ ಕಾಶ್ಮೀರದಲ್ಲಿ ರಕ್ತದೋಕುಳಿ; ಹಿಂದೂಗಳೇ ಟಾರ್ಗೆಟ್. ಭೂಲೋಕದ ಸ್ವರ್ಗವೆಂದೇ ಕರೆಯುವ ಜಮ್ಮು-ಕಾಶ್ಮೀರದ ಪೆಹಲ್ಗಾಮ್ ಸಮೀಪದ ಬೈಸರನ್ ಹುಲ್ಲುಗಾವಲಿನಲ್ಲಿ ಪಾಕ್ ಪ್...