ads

Search This Blog

Friday, 20 December 2024

ಅಮಿತ್‌ ಶಾ ತಲೆದಂಡಕ್ಕೆ ಆಗ್ರಹ|ಜೇವರ್ಗಿ ಸಂಪೂರ್ಣ ಸ್ತಬ್ಧ...

 ಅಮಿತ್‌ ಶಾ ತಲೆದಂಡಕ್ಕೆ ಆಗ್ರಹ ಜೇವರ್ಗಿ ಸಂಪೂರ್ಣ ಸ್ತಬ್ಧ...

 ಶಾ ಚಿತ್ರಪಟಕ್ಕೆ,ಪಾದರಕ್ಷೆ ಸೇವೆ. ಡಾ.ಅಂಬೇಡ್ಕರ್ ನಮ್ಮ ದೇವರು

ಜೇವರ್ಗಿ :  ಸಾಮಾಜಿಕ ನ್ಯಾಯದ ದೃಷ್ಟಿಕೋನವನ್ನು ಸಂಸತ್ತಿ ನಲ್ಲಿಯೇ ಕಡೆಗಣಿಸಿ ಮಾತನಾಡಿರುವ ಗೃಹಸಚಿವ ಅಮಿತ್ ಶಾ ತಕ್ಷಣ ರಾಜೀನಾಮೆ ನೀಡಬೇಕು.ನಮಗೆ ಎಲ್ಲವನ್ನೂ ಕೊಟ್ಟ ಮಹಾನ್ ವಿಶ್ವ ಚೇತನ ಅಂಬೇಡ್ಕರ್ ರವರು ನಮ್ಮ ದೇವರು ಎಂದು ಹೇಳಿ ಘರ್ಜಿಸಿದರು.




     ಪಟ್ಟಣದ ರಿಲಯನ್ಸ್ ಪೆಟ್ರೊಲ್ ಬಂಕ್ ನಿಂದ ಬಸವೇಶ್ವರ ವೃತ್ತದವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ಅಮಿತ್ ಶಾ ವಿರುದ್ದ ಘೋಷಣೆ ಕೂಗಿದರು. ಬಸವೇಶ್ವರ ವೃತ್ತದ ಬಳಿ ಟೈರ್ ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿ,ಈ ಕೂಡಲೇ ಶಾ ರವರ ತಲೆದಂಡ ಆಗಲೇಬೇಕು ಎಂದು ಆಗ್ರಹಿಸಿದರು.
 
ಬಂದ್ ನಿಮಿತ್ಯ ಪಟ್ಟಣದ ಅಂಗಡಿ ಮುಗ್ಗಟ್ಟುಗಳನ್ನು ಬಂದ್ ಮಾಡಲಾಗಿತ್ತು.  ಅಮಿತ್ ಶಾ ಅವರ ಹೇಳಿಕೆಯು ಜಾತಿ ದೌರ್ಜನ್ಯದಿಂದ ಬಳಲುತ್ತಿರುವ ಲಕ್ಷಾಂತರ ಜನರ ಪ್ರತಿರೋಧವನ್ನೂ ಹತ್ತಿಕ್ಕುವಂತಿದೆ. ಅಂಬೇಡ್ಕರ್ ಅವರ ನಿತ್ಯ ಸ್ಮರಣೆಯನ್ನು ವ್ಯಸನವೆಂದು ಹೇಳುತ್ತಿರುವ ಅಮಿತ್ ಶಾ ಅವರ ದ್ವೇಷ ಹಾಗೂ ಮನುವಾದಿತ್ವ ಎತ್ತಿತೋರಿಸುತ್ತಿದೆ. ಅಲ್ಲದೆ ಅಂಬೇಡ್ಕ‌ರ್ ಅವರ ಸಮ ಸಮಾಜದ ಮತ್ತು ನ್ಯಾಯಯುತ ಸಮಾಜದ ಪರಿಕಲ್ಪನೆಯ ಬಗೆಗೆ ಅವರಿಗಿರುವ ಭಾವನೆಯ ಸತ್ಯವನ್ನು ಬಹಿರಂಗಪಡಿಸಿದೆ ಎಂದು ಪ್ರತಿಭಟನಾಕಾರರು ಕೆಂಡ ಕಾರಿದರು.

ಅಂಬೇಡ್ಕರ್‌ಬರೆದ ಸಂವಿಧಾನದ ಮೇಲೆ ಪ್ರಮಾಣ ಮಾಡಿ ಜನಪ್ರತಿನಿಧಿಯಾಗಿರುವ ಗೃಹ ಸಚಿವ ಅಮಿತ್ ಶಾ ಅವರು ಡಾ.ಅಂಬೇಡ್ಕರ್ ಅವರ ಬಗ್ಗೆ ವ್ಯಂಗ್ಯವಾಡಿರುವುದು ಅಕ್ಷಮ್ಯ ಅಪರಾಧ.ಕೂಡಲೇ ಅವರ ತಲೆದಂಡ ಆಗಬೇಕು ಮತ್ತು ಸಾರ್ವಜನಿಕವಾಗಿ ಕ್ಷಮೆ ಕೊರಬೇಕು ಎಂದು ತಹಸೀಲ್ದಾರ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು.

** ಮುಖ್ಯಾಂಶಗಳು  **

 * ಜೇವರ್ಗಿ ಸಂಪೂರ್ಣ ಸ್ತಬ್ಧ

** ಡಾ ಬಿ ಅರ್ ಅಂಬೇಡ್ಕರ್ ನಮ್ಮ ದೇವರು‌ ಎಂಬ ಘೋಷಣೆ ಮುಗಿಲು ಮುಟ್ಟಿತು

**ಅಮಿತ್ ಶಾ ವಿರುದ್ಧ ಆಕ್ರೋಶದ ಸಿಡಿಗುಂಡುಗಳು ಸಿಡಿಸಿದ ಯುವಕರು.

* ಅಮಿತ್ ಶಾ ಚಿತ್ರಪಟಕ್ಕೆ ಪಾದರಕ್ಷೆ ಸೇವೆ.

** ಅಮಿತ್ ಶಾ ಕೂಡಲೇ ರಾಜಿನಾಮೆ ಕೊಡಬೇಕು. ಇಲ್ಲವೇ ತಲೆದಂಡ ಮಾಡಿ.

** ಶಾ ರವರು, ವಿಶ್ವ ಚೇತನ, ವಿಶ್ವ ಜ್ಞಾನ ಭಂಡಾರಿಗೆ ಅವಹೇಳನ.ಇದು ಕ್ಷಮಿಸುವ ಮಾತೆ ಇಲ್ಲ.

** ಬಸ್ ಇಲ್ಲದ ಬಸ್ ನಿಲ್ಲಾಣವಾಯಿತು ಜೇವರ್ಗಿ ಬಸ್ ನಿಲ್ದಾಣ.

** ಪರದಾಡಿದ ಪ್ರಯಾಣಿಕರು. ಕುಡಿಯುವ ನೀರು ಸಿಗದ ಪರಿಸ್ಥಿತಿ.

** ಅಂಗಡಿ ಮುಗ್ಗಟ್ಟುಗಳು ಸ್ವಯಂಪ್ರೇರಿತ ಬಂದ್.

* ಮುದುವೆ ಮುಂಜಿ ಕಾರ್ಯಕ್ಕೂ ತಟ್ಟಿದ ಬಂದ್ ಬಿಸಿ.

** ಮಧ್ಯಾನ್ಹ 3 ಗಂಟೆಯ ವರೆಗೆ ಬಂದ್ ಬಿಸಿ.



ಅಮಿತ್‌ ಶಾ ತಲೆದಂಡಕ್ಕೆ ಆಗ್ರಹ ಜೇವರ್ಗಿ ಸಂಪೂರ್ಣ ಸ್ತಬ್ಧ...

   ಈ ಸಂದರ್ಭದಲ್ಲಿ ಶಾಂತಪ್ಪ ಕೂಡಲಗಿ, ಚಂದ್ರಶೇಖರ್ ಹರನಾಳ, ಸುಭಾಷ ಚನ್ನೂರ, ಮಲ್ಲಣ್ಣ ಕೊಡಚಿ, ಶ್ರೀಮಂತ ಧನ್ನಕರ್, ರಾಜಶೇಖರ ಶಿಲ್ಪಿ, ಶ್ರೀ ಹರಿ ಕರಕಿಹಳ್ಳಿ, ರಾಯಪ್ಪ ಬಾರಿಗಿಡ, ರವಿ ಕುರಳಗೇರಾ, ಸಿದ್ರಾಮ ಕಟ್ಟಿ, ಶಾಂತಪ್ಪ ಯಲಗೋಡ, ಶರಣಬಸವ ಕಲ್ಲಾ, ರವಿಚಂದ್ರ ಗುತ್ತೇದಾರ,ಪತ್ರಕರ್ತ ಧನರಾಜ ರಾಠೋಡ ಮುತ್ತಕೋಡ, ನಿಜಲಿಂಗ ದೊಡ್ಮನಿ, ದವಲಪ್ಪ ಮದನ, ಗಿರೀಶ ತುಂಬಗಿ, ಬಿ.ಹೆಚ್.ಮಾಲಿಪಾಟೀಲ, ಮೋದಿನ ಇನಾಮದಾರ, ಭೀಮಾಶಂಕರ ಬಿಲ್ಲಾಡ, ರಾಜಶೇಖರ ಮುತ್ತಕೋಡ,ಚಂದ್ರಶೇಖರ ನೇರಡಗಿ, ಹರಿಶ್ಚಂದ್ರ ಕೊಡಚಿ, ಸೂರ್ಯಕಾಂತ ಡೂಗನಕರ್, ಬಸವರಾಜ ಇಂಗಳಗಿ, ಯಮನೇಶ ಅಂಕಲಗಿ, ವಿಶ್ವರಾದ್ಯ ಗೋಪಾಲಕರ್, ಅಬ್ದುಲ್ ಘನಿ, ಮಹಾದೇವ ಕೋಳಕೂರ,ಮೌನೇಶ ಕೊಂಬಿನ್ ಸೇರಿದಂತೆ ನೂರಾರು ಜನ ಭಾಗವಹಿಸಿದ್ದರು. ಪಿಎಸ್ ಐ ಗಜಾನಂದ ಬಿರಾದಾರ ನೇತೃತ್ವದಲ್ಲಿ ಬಿಗೀ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು.

No comments:

ಪ್ರೇಮ ಕಾಶ್ಮೀರದಲ್ಲಿ ರಕ್ತದೋಕುಳಿ; ಹಿಂದೂಗಳೇ ಟಾರ್ಗೆಟ...!

  ಪ್ರೇಮ ಕಾಶ್ಮೀರದಲ್ಲಿ ರಕ್ತದೋಕುಳಿ; ಹಿಂದೂಗಳೇ ಟಾರ್ಗೆಟ್. ಭೂಲೋಕದ ಸ್ವರ್ಗವೆಂದೇ ಕರೆಯುವ ಜಮ್ಮು-ಕಾಶ್ಮೀರದ ಪೆಹಲ್ಗಾಮ್ ಸಮೀಪದ ಬೈಸರನ್ ಹುಲ್ಲುಗಾವಲಿನಲ್ಲಿ ಪಾಕ್ ಪ್...