ads

Search This Blog

Monday, 23 December 2024

ಅಲ್ಲು ಅರ್ಜುನ್​ ಪ್ರಕರಣ: ತನಿಖೆಯ ಸಂಪೂರ್ಣ ಮಾಹಿತಿ ನೀಡಿದ ಪೊಲೀಸ್​​

 ಬಹುನಿರೀಕ್ಷಿತ 'ಪುಷ್ಪ-2' ಬಿಡುಗಡೆಯ ಹಿಂದಿನ ರಾತ್ರಿ ನಡೆದ ಕಾಲ್ತುಳಿತದಲ್ಲಿ ಮಹಿಳಾ ಅಭಿಮಾನಿ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರಿದಿದೆ. ಹೈದರಾಬಾದ್​ನ ಪ್ರಸಿದ್ಧ ಸಂಧ್ಯಾ ಥಿಯೇಟರ್‌ನಲ್ಲಿ ಕಾಲ್ತುಳಿತ ಸಂಭವಿಸಿ ರೇವತಿ ಎಂಬ ಅಭಿಮಾನಿ ಸಾವನ್ನಪ್ಪಿದ ಘಟನೆಯ ವಿವರಣೆಯನ್ನು ನಗರ ಪೊಲೀಸ್ ಆಯುಕ್ತ ಸಿ ವಿ ಆನಂದ್ ಒದಗಿಸಿದ್ದಾರೆ.

ನಗರದ ಆ್ಯನುವಲ್​​ ಕ್ರೈಮ್​​ ರಿವ್ಯೂವ್​​ ಮೀಟಿಂಗ್​​ನಲ್ಲಿ ಮಾತನಾಡಿದ ಅವರು, ಸಿಸಿಟಿವಿ ಫುಟೇಜ್​​, ಸೋಷಿಯಲ್​ ಮೀಡಿಯಾ ಕ್ಲಿಪ್ಸ್ ಹಾಗೂ ಮೀಡಿಯಾ ಕವರೇಜ್​​ ಸೇರಿದಂತೆ ಸಾಕ್ಷಿಗಳನ್ನು ಸಂಗ್ರಹಿಸಲು ಪೊಲೀಸರು 10,000ಕ್ಕೂ ಹೆಚ್ಚು ವಿಡಿಯೋಗಳನ್ನು ವಿಶ್ಲೇಷಿಸಿದ್ದಾರೆ ಎಂದು ಬಹಿರಂಗಪಡಿಸಿದರು.

ನಟ ಅಲ್ಲು ಅರ್ಜುನ್ ಮುಖ್ಯಭೂಮಿಕೆಯಲ್ಲಿರುವ ಸಿನಿಮಾದ ಸ್ಪೆಷಲ್​​ ಸ್ಕ್ರೀನಿಂಗ್​​ ವೇಳೆ ಈ ಘಟನೆ ಸಂಭವಿಸಿದೆ. ನಟನ ಉಪಸ್ಥಿತಿಯು ಥಿಯೇಟರ್‌ಗೆ ಹೆಚ್ಚಿನ ಸಂಖ್ಯೆಯ ಅಭಿಮಾನಿಗಳನ್ನು ಆಕರ್ಷಿಸಿತು. ಕಾಲ್ತುಳಿತದಿಂದ ರೇವತಿ ಸಾವನ್ನಪ್ಪಿದ್ದು, ಅವರ ಮಗ ಶ್ರೀತೇಜ್‌ಗೆ ಗಂಭೀರ ಗಾಯಗಳಾಗಿವೆ. ಘಟನೆಯ ಪ್ರಮುಖ ಕ್ಷಣಗಳುಳ್ಳ 10 ನಿಮಿಷಗಳ ವಿಡಿಯೋವನ್ನು ಆಯುಕ್ತರು ಹಂಚಿಕೊಂಡಿದ್ದಾರೆ. ಜೊತೆಗೆ ಘಟನೆಯನ್ನು ಅರ್ಥ ಮಾಡಿಕೊಳ್ಳಲು ವೀಕ್ಷಕರನ್ನು ಒತ್ತಾಯಿಸಿದ್ದಾರೆ.

ಆರಂಭಿಕ ಎಚ್ಚರಿಕೆ ಕೊಡುವಲ್ಲಿ ನಿರ್ಲಕ್ಷ್ಯ

  • ಫೆಬ್ರವರಿ 2ರಂದು, ಥಿಯೇಟರ್ ಮ್ಯಾನೇಜರ್ ಈವೆಂಟ್​​ ಆಯೋಜಿಸಲು ಅನುಮತಿಗಾಗಿ ಸ್ಥಳೀಯ ಪೊಲೀಸರಿಗೆ ಮನವಿ ಸಲ್ಲಿಸಿದ್ದರು.
  • ಫೆಬ್ರವರಿ 3 ರಂದು, ಪೊಲೀಸರು ಥಿಯೇಟರ್‌ಗೆ ಭೇಟಿ ನೀದ್ದಾರೆ. ಪರಿಸ್ಥಿತಿಯನ್ನು ಗಮನಿಸಿದ್ದಾರೆ. ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರ ಆಗಮನದಿಂದ ಆಗುವ ಸಂಭಾವ್ಯ ಸಮಸ್ಯೆಗಳನ್ನು ಅವಲೋಕಿಸಿ, ಅಲ್ಲು ಅರ್ಜುನ್‌ಗೆ ಆಹ್ವಾನ ನೀಡದಂತೆ ಸಲಹೆ ನೀಡಿದ್ದರು.


No comments:

ಪ್ರೇಮ ಕಾಶ್ಮೀರದಲ್ಲಿ ರಕ್ತದೋಕುಳಿ; ಹಿಂದೂಗಳೇ ಟಾರ್ಗೆಟ...!

  ಪ್ರೇಮ ಕಾಶ್ಮೀರದಲ್ಲಿ ರಕ್ತದೋಕುಳಿ; ಹಿಂದೂಗಳೇ ಟಾರ್ಗೆಟ್. ಭೂಲೋಕದ ಸ್ವರ್ಗವೆಂದೇ ಕರೆಯುವ ಜಮ್ಮು-ಕಾಶ್ಮೀರದ ಪೆಹಲ್ಗಾಮ್ ಸಮೀಪದ ಬೈಸರನ್ ಹುಲ್ಲುಗಾವಲಿನಲ್ಲಿ ಪಾಕ್ ಪ್...