ads

Search This Blog

Tuesday, 24 December 2024

ಉದ್ಯೋಗ,ಮತ್ತು ಶಿಕ್ಷಣದಲ್ಲಿ ಮಾತ್ರ ಬೆಳವಣೆಗೆ ಕೈಗಾರಿಕಾ ಕ್ಷೇತ್ರದಲ್ಲಿ ಬದಲಾವಣೆ ಕಾಣಬೇಕು


ಕಲಬುರಗಿ : ಜಿಲ್ಲೆಯಾದ್ಯಂತ ಉದ್ಯೋಗ  ಮತ್ತು ಶಿಕ್ಷಣದಲ್ಲಿ ಮಾತ್ರ ಬೆಳವಣೆಯಾಗುತ್ತಿದ್ದು, ಕೈಗಾರಿಕಾ ಕ್ಷೇತ್ರದಲ್ಲಿ ಬದಲಾವಣೆಯನ್ನು ಕಾಣುತ್ತಿಲ್ಲ ಪ್ರ‍್ರತ್ಯೇಕ ಕಲ್ಯಾಣ ಕರ್ನಾಟಕ ಕೈಗಾರಿಕಾ ನೀತಿಯನ್ನು ಜಾರಿಗೊಳಿಸಬೇಕು   ಎಂದು  ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ ಶಶಿಕಾಂತ್ ಜಿ. ಪಾಟೀಲ್ ಅವರು ಹೇಳಿದರು.

 ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆಯ ಸಭಾಂಗಣದಲ್ಲಿ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಕರ್ನಾಟಕ ಸರ್ಕಾರ, ಜಿಲ್ಲಾ ಕೈಗಾರಿಕಾ ಕೇಂದ್ರ ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನಾ ಕೇಂದ್ರ (ವಿ.ಟಿ.ಪಿ.ಸಿ) ಹಾಗೂ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ ಸಹಯೋಗದಲ್ಲಿ "ಎಂ.ಎಸ್.ಎA.ಇ.ಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸುವುದು ಮತ್ತು ವೇಗಗೊಳಿಸುವುದು" ( ಆರ್‌ಎಎಂಪಿ ) ಯೋಜನೆಯಡಿಯಲ್ಲಿ  ಲೀನ್ ಯೋಜನೆ ಮತ್ತು ಝಡ್.ಇ.ಡಿ. ಹಾಗೂ ರಫ್ತು ಕುರಿತು ಒಂದು ದಿನದ ಅರಿವು ಮೂಡಿಸುವ ಕಾರ್ಯಕ್ರಮಕ್ಕೆ ಉದ್ಫಾಟಿಸಿ ಮಾತನಾಡಿದರು.


ಪಿ.ಎಂ. ಮಿತ್ರ ಅಡಿಯಲ್ಲಿ ಟೇಕ್ಸಟೈಲ್ ಪಾರ್ಕ  ಸ್ಥಾಪಿಸಬೇಕಾಗಿತ್ತು.ಒಂದೂವರೆಗೆ ವರ್ಷ ಅಯಿತ್ತು ರಾಜ್ಯ ಸರ್ಕಾರದಿಂದ ಅಭಿವೃದ್ಧಿ ಕಾಣುತ್ತಿಲ್ಲ  ಕೈಗಾರಿಕಾ ಜಾಗೃತಿ ಕಾರ್ಯಕ್ರಮಗಳು ಮಾಡಿದರೆ ಸಾಲದು  ಎಂದರು.

ಮುಂದಿನ ನಮ್ಮ ಕೈಗಾರಿಕೆ ವಲಯದಲ್ಲಿ ಆಗಲಿ ವಾಣಿಜ್ಯ ವಲಯದಲ್ಲಿ ಒತ್ತನ್ನ ಕೊಡಬೇಕು ಯಾವ ರೀತಿ ದೇಶಕ್ಕೆ  ರೈತರು ಬೆಳವಣೆಯಾಗುತ್ತಾರೆ ಅದೇ ರೀತಿಯಾಗಿ ಕೈಗಾರಿಕಾ ಕ್ಷೇತ್ರದಲ್ಲಿ ಬೆಳೆವಣಿಯಾಗಬೇಕು ಎಂದು ಅವರು ಹೇಳಿದರು.

ಜಿಲ್ಲಾ ಕೈಗಾರಿಕಾ ಕೇಂದ್ರ ಜಂಟಿ ನಿರ್ದೇಶಕ ಸುರೇಖಾ ಮುನೋಳ್ಳಿ ಮಾತನಾಡಿ, ಕಲಬುರಗಿ ಜಿಲ್ಲೆಯಿಂದ ಸ್ಥಳೀಯ ತಯಾರಿಸಿದ ವಸ್ತುಗಳನ್ನು ಮತ್ತು ಸ್ಥಳೀಯವಾಗಿ ಬೆಳೆಯುವ ಉತ್ಪಾದನೆಗಳು ರಫ್ತು ಮಾಡಲು ಮತ್ತು ಅದನ್ನು ಹೆಚ್ಚಿನ ಪ್ರಮಾಣದಲ್ಲಿ ರಫ್ತು ಮಾಡಲು ಹೆಚ್ಚಿಸುವ ನಿಟ್ಟಿನಲ್ಲಿ ಇಲಾಖೆ ಕೈಗಾರಿಕೆ ಉದ್ದಿಮೆದಾರರು ಶ್ರಮಿಸಬೇಕಾಗುತ್ತದೆ ಎಂದರು.

ಕಲಬುರಗಿ ಶಾಖಾ ಕಛೇರಿ ವಿ.ಟಿ.ಪಿ.ಸಿ. ಸಹಾಯಕ ನಿರ್ದೇಶಕ ಜಾಫರ್ ಖಾಸಿಂ ಅನ್ಸಾರಿ ಅವರು ಮಾತನಾಡಿ, ವಿಟಿಪಿಸಿ ಯ ಶಾಖಾ ಕಛೇರಿಯನ್ನು ಸರ್ಕಾರವು ಸ್ಥಾಪಿಸು ತ್ತ್ತಿದೆ, ಇತ್ತೀಚೆಗೆ ಕಲ್ಯಾಣ ಕರ್ನಾಟಕ ಕಂದಾಯ ಭಾಗದ ಶಾಖಾ ಕಛೇರಿಯ ಕಲಬುರಗಿಯಲ್ಲಿ ಪ್ರಾರಂಭಿಸಿದೆ ಈ ಭಾಗದ ಜನರಿಗೆ ವಿಶೇಷವಾಗಿ ರಫ್ತುದಾರರಿಗೆ ಸಹಾಯವಾಗಲಿದೆ ಎಂದು ಹೇಳಿದರು.

ಕೈಗಾರಿಕಾ ಉಪನಿರ್ದೇಶಕ ಅಬ್ದುಲ್ ಅಜೀಮ್ ಜಿಲ್ಲಾ ಕೈಗಾರಿಕಾ ಕೇಂದ್ರ ಇವರ ಆರ್‌ಎಎಂಪಿ ಯೋಜನೆ ಬಗ್ಗೆ ವಿವರಿಸಿದರು. ಅಧ್ಯಕ್ಷತೆಯನ್ನು ಕಾಸಿಯಾ ಅಧ್ಯಕ್ಷರಾದ ಎಂ.ಜಿ. ರಾಜಗೋಪಾಲ್ ವಹಿಸಿ ಎಂ.ಎಸ್.ಎA.ಇ. ಕೈಗಾರಿಕೆಗಳು ತಮ್ಮ ಲಾಭವನ್ನು ಹೆಚ್ಚಿಸಲು ರಫ್ತುಗಳು  ರಫ್ತುಗೆ ಒತ್ತು ನೀಡಬೇಕೆಂದು  ಪ್ರಾಸ್ತಾವಿಕವಾಗಿ ಮಾತನಾಡಿದರು.

ಲೀನ್ ಯೋಜನೆ ಬಗ್ಗೆ ಡಾ ಜಗದೀಶ ಅವರು  ವಿಶೇಷ ಉಪನ್ಯಾಸ ನೀಡಿದರು.  ಝಡ್.ಇ.ಡಿ, ಬಗ್ಗೆ ಈರಪ್ಪಾ ಉಪನ್ಯಾಸ ನೀಡಿದರು. ರಫ್ತು ಬಗ್ಗೆ ಸತೀಶ ಕೋಟಾ ಅವರು ಉಪನ್ಯಾಸ ನೀಡಿದರು. ಈ ಕಾರ್ಯಾಗಾರದಲ್ಲಿ  ಗೌರವ ಪ್ರಧಾನ ಸುರೇಶ ಎನ್ ಸಾಗರ್, ಕಲಬುರಗಿ  ಗ್ರಾಮೀಣ ಜಂಟಿಕಾರ್ಯದರ್ಶಿ ಸತೀಶ್ ಎನ್., ಜಿಲ್ಲಾಭಿವೃದ್ಧಿ ಸಮಿತಿ ಉಪಸಮಿತಿ ಅಧ್ಯಕ್ಷ ಚನ್ನಬಸ್ಸಯ್ಯ ಜಿ. ನಂದಿಕೋಲ್ ಸೇರಿದಂತೆ ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕ ಸಂಸ್ಥೆ, ಸಣ್ಣ ಕೈಗಾರಿಕೆಗಳ ಮಾಲೀಕರ ಸಂಘ ಗುಲಬರ್ಗ ದಾಲಾ ಮಿಲ್ಲರ್ಸ್, ಅಸೋಸಿಯೇಷನ್, ಗುಲಬರ್ಗ ಇಂಡಿಸ್ಟಿçÃಯಲ್ ಎಸ್ಟೇಟ್ ಮ್ಯಾನುಫ್ಯಾಕ್ಚರ್ಸ್, ಅಸೋಸಿಯೇಷನ್, ಗುಲಬರ್ಗ ಕೈಗಾರಿಕಾ ವಸಾಹತು ಮಾಲೀಕರ ಸಂಘ, ಕಲಬುರಗಿ ಲೇಡಿಸ್ ಅಸೋಸಿಯೇಷನ್ ಮ್ಯಾನುಫ್ಯಾಕ್ಚರ್ಸ್ ಮ್ಯಾನುಫ್ಯಾಕ್ಚರ್ಸ ಪಾರ್ಕ್ದಲ್ಲಿ ಭಾಗವಹಿಸಿದ್ದರು.



 

 





No comments:

ಪ್ರೇಮ ಕಾಶ್ಮೀರದಲ್ಲಿ ರಕ್ತದೋಕುಳಿ; ಹಿಂದೂಗಳೇ ಟಾರ್ಗೆಟ...!

  ಪ್ರೇಮ ಕಾಶ್ಮೀರದಲ್ಲಿ ರಕ್ತದೋಕುಳಿ; ಹಿಂದೂಗಳೇ ಟಾರ್ಗೆಟ್. ಭೂಲೋಕದ ಸ್ವರ್ಗವೆಂದೇ ಕರೆಯುವ ಜಮ್ಮು-ಕಾಶ್ಮೀರದ ಪೆಹಲ್ಗಾಮ್ ಸಮೀಪದ ಬೈಸರನ್ ಹುಲ್ಲುಗಾವಲಿನಲ್ಲಿ ಪಾಕ್ ಪ್...