ads

Search This Blog

Monday, 23 December 2024

ರೈತರ ಬೆಳೆಗೆ ಮೌಲ್ಯ ಕಟ್ಟಬಹುದು. ಶ್ರಮ ಅಮೂಲ್ಯವಾದದು. ರೈತನಿಗೆ ಸಕ್ಕರೆ ಕೊಡುವ ಮೂಲಕ ಅಕ್ಕರೆಯ ಅಭಿನಂದನೆ - ಶಿವರಾಜ ಅಂಡಗಿ


        ಕಲಬುರಗಿ  : ಇ0ದು ಡಿಸೆಂಬರ್ ೨೩ "ರಾಷ್ಟಿಯ ರೈತರ ದಿನಾಚರಣೆ" ನಿಮಿತ್ಯ ಜಗದ ಹಸಿವು ನೀಗಿಸುವ ಹಸಿದ ಹೊಟ್ಟಯ ಅನ್ನದಾತ, ಬೆವರಿನ ಶ್ರಮ ಮಣ್ಣಿನ ಮಮತೆಯ ಮಕ್ಕಳಾದ ರೈತರು ಹಗಲು-ಇರಳು, ಮಳೆ, ಬಿಸಿಲು ಗಾಳಿ ಚಳಿ ಎನ್ನದೇ ನಮ್ಮೆಲ್ಲರ ಆಹಾರ ಉತ್ಪಾದನೆ ಮಾಡುವ ಮೂಲಕ ಹೊಲದಲ್ಲಿ ಕಾರ್ಯ ನಿರ್ವಹಿಸುತ್ತಿರುವ ರೈತರಿಗೆ ಸಕ್ಕರೆ ಕೊಡುವ ಮೂಲಕ ಕಲಬುರಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶೀಗಳಾದ ಶ್ರೀ ಶಿವರಾಜ ಅಂಡಗಿಯವರು ರೈತರಿಗೆ ಗೌರವಿಸಿ ಅಭಿನಂದಿಸಿದರು.


ಎರಡು ದಿನಗಳ ಹಿಂದೆ ಸಕ್ಕರೆಯ ನಾಡು ಅಕ್ಕರೆಯ ಬೀಡು ಮಂಡ್ಯ ಜಿಲ್ಲೆಯಲ್ಲಿ ನಡೆದ ೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿದ ನಮಗೆಲ್ಲರಿಗೂ ಅಕ್ಕರೆಯ ಸಕ್ಕರೆಯ ಉಡಗೊರೆ ಕೊಟ್ಟು ಗೌರವಿಸಿದ್ದಾರೆಂದು ಸ್ಮರಿಸಿಕೊಳ್ಳುತ್ತಾ ಈ ವರ್ಷ ಎಲ್ಲಾ ಬೆಳೆಗಳು ಚೆನ್ನಾಗಿ ಬೆಳೆದು ಉತ್ತಮ ಬೆಲೆ ಬಂದು ರೈತರ ಆರ್ಥಿಕ ಪರಿಸ್ಥಿತಿ ಸುಧಾರಿಸಿ ರೈತ ಸಮುದಾಯಕ್ಕೆ ಸಂತೋಷ ಒದಗಿಸಲಿ ಎಂದು ಹಾರೈಸಿ ಶುಭಾಶಯ ಕೋರಿದ್ದಾರೆ.



No comments:

ಪ್ರೇಮ ಕಾಶ್ಮೀರದಲ್ಲಿ ರಕ್ತದೋಕುಳಿ; ಹಿಂದೂಗಳೇ ಟಾರ್ಗೆಟ...!

  ಪ್ರೇಮ ಕಾಶ್ಮೀರದಲ್ಲಿ ರಕ್ತದೋಕುಳಿ; ಹಿಂದೂಗಳೇ ಟಾರ್ಗೆಟ್. ಭೂಲೋಕದ ಸ್ವರ್ಗವೆಂದೇ ಕರೆಯುವ ಜಮ್ಮು-ಕಾಶ್ಮೀರದ ಪೆಹಲ್ಗಾಮ್ ಸಮೀಪದ ಬೈಸರನ್ ಹುಲ್ಲುಗಾವಲಿನಲ್ಲಿ ಪಾಕ್ ಪ್...