ಕಲಬುರಗಿ -ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಅರೋಗ್ಯ ವ್ಯವಸ್ಥೆ ಸುಧಾರಣೆ ನಿಟ್ಟಿನಲ್ಲಿ ಸರ್ಕಾರ ಪಣ ತೊಟ್ಟಿದ್ದು, ಇದಕ್ಕೆ ಇಂದಿನ ಜಯದೇವ ಆಸ್ಪತ್ರೆ ಲೋಕಾರ್ಪಣೆ ಸಾಕ್ಷಿಯಾಗಿದೆ. ಮುಂದಿನ ೨ ವರ್ಷದಲ್ಲಿ ಕಲಬುರಗಿಯನ್ನು ಹೆಲ್ತ್ ಹಬ್ ಮಾಡಲಾಗುವುದು ಎಂದು ರಾಜ್ಯದ ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಖಾತೆ ಸಚಿವ ಡಾ. ಶರಣಪ್ರಕಾಶ ಆರ್. ಪಾಟೀಲ ಹೇಳಿದರು.
ರವಿವಾರ ಕಲಬುರಗಿ ನಗರದ ನೂತನವಾಗಿ ನಿರ್ಮಿಸಿರುವ ೩೭೧ ಹಾಸಿಗೆ ಸಾಮರ್ಥ್ಯದ ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಆಸ್ಪತ್ರೆಯ ಕಲಬುರಗಿ ಶಾಖಾ ಆಸ್ಪತ್ರೆಯನ್ನು ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ೩೭೧ ಹಾಸಿಗೆಯ ಶ್ರೀ ಜಯದೇವ ಹೃದ್ರೋಗ ಆಸ್ಪತ್ರೆ ಕಾರ್ಪೊರೇಟ್ ಆಸ್ಪತ್ರೆ ಮೀರಿಸುವ ಗುಣಮಟ್ಟದ ಸೇವೆ ಇಲ್ಲಿ ಸಾರ್ವಜನಿಕರಿಗೆ ಲಭ್ಯವಾಗಲಿದೆ ಎಂದರು.
ಮುAದಿನ ಮೂರು ತಿಂಗಳಲ್ಲಿ ಜಿಮ್ಸ್ ಆಸ್ಪತ್ರೆಯಲ್ಲಿ ನಿರ್ಮಾಣವಾಗುತ್ತಿರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಉದ್ಘಾಟಿಸಿ ಸಾರ್ವಜನಿಕರಿಗೆ ಅರ್ಪಿಸಲಾಗುತ್ತಿದೆ. ಹಳೇ ಜಿಲ್ಲಾ ಆಸ್ಪತ್ರೆ ಕೆಡವಿ ಅಲ್ಲಿ ೧೦೦ ಹಾಸಿಗೆಯ ತಾಯಿ-ಮಕ್ಕಳ ಆಸ್ಪತ್ರೆ ನಿರ್ಮಿಸಲಾಗುವುದು. ಜಿಮ್ಸ್ ಆವರಣದಲ್ಲಿಯೇ ೫೦ ಹಾಸಿಗೆಯ ಕ್ರಿಟಿಕಲ್ ಕೇರ್ ಯೂನಿಟ್, ಸುಟ್ಟು ಗಾಯಗಳ ಘಟಕ ಸ್ಥಾಪಿಸಲಾಗುತ್ತಿದೆ. ಇದಲ್ಲದೆ ಗುಲಬರ್ಗಾ ವಿ.ವಿ.ಯಲ್ಲಿ ೧೦ ಎಕರೆ ಜಮೀನಿನಲ್ಲಿ ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆಯನ್ನು ನಿರ್ಮಿಸಲಾಗುತ್ತಿದ್ದು, ಒಟ್ಟಾರೆ ಕಲಬುರಗಿಯನ್ನು ಹೆಲ್ತ್ ಹಬ್ ಮಾಡುವ ನಮ್ಮ ಪ್ರಯತ್ನ ಮುಂದುವರೆದಿದೆ ಎಂದು ಡಾ.ಶರಣಪ್ರಕಾಶ ಪಾಟೀಲ ವಿವರಿಸಿದರು.
ಡಾ.ಮಲ್ಲಿಕಾರ್ಜುನ ಖರ್ಗೆ ಅವರ ಪ್ರಯತ್ನದಿಂದಾಗಿ ಬಂದ ೩೭೧ ಕಾಯ್ದೆಯ ಜಾರಿಯ ಫಲವಾಗಿ ಇವೆಲ್ಲಾ ಅಭಿವೃದ್ದಿ ಕೆಲಸ ಜಿಲ್ಲೆ ಮತ್ತು ಪ್ರದೇಶದಲ್ಲಿ ಸಾಗಿದೆ. ಕಾಯ್ದೆ ಜಾರಿಯಿಂದ ಇಲ್ಲಿಯವರೆಗೆ ೮ ಸಾವಿರ ವೈದ್ಯಕೀಯ ಸೀಟ್ ಪ್ರವೇಶಾತಿ ನಮ್ಮ ಭಾಗದ ಮಕ್ಕಳಿಗೆ ಸಿಕ್ಕಿದೆ. ೮೦ ಸಾವಿರ ಜನರಿಗೆ ಉದ್ಯೋಗ ದೊರೆತಿದೆ. ೧ ಲಕ್ಷ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದ ಅವಕಾಶ ದೊರೆತಂತಾಗಿದೆ. ಕೆ.ಕೆ.ಆರ್.ಡಿ.ಬಿ. ಮಂಡಳಿಯಿAದ ಪ್ರದೇಶದ ಅಭಿವೃದ್ಧಿಗೆ ಇದೂವರೆಗೆ ೧೮ ಸಾವಿರ ಕೋಟಿ ರೂ. ಖರ್ಚು ಮಾಡಲಾಗಿದೆ ಎಂದರು.
ಅರಣ್ಯ, ಜೀವಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಮಾತನಾಡಿ ಪ್ರದೇಶದಲ್ಲ್ಲಿ ಆರೋಗ್ಯ ಸುಧಾರಣೆ ನಿಟ್ಟಿನಲ್ಲಿ ಇದು ಮೈಲಿಗಲ್ಲಾಗಿದೆ. ಹಿಂದೆಲ್ಲ ಹೃದ್ರೋಗ ಸಮಸ್ಯೆ ಎದುರಾದಲ್ಲಿ ಬೀದರದವರು ಹೈದ್ರಾಬಾದ್ಗೆ, ಕಲಬುರಗಿಯವರು ಸೋಲಾಪೂರ್ ಹೋಗಬೇಕಿತ್ತು. ಕಲಬುರಗಿಯಲ್ಲಿ ಜಯದೇವ ಆಸ್ಪತ್ರೆ ನಿರ್ಮಾಣದಿಂದ ಈ ತಾಪತ್ರಯ ತಪ್ಪಲಿದೆ. ಈ ಭಾಶಗದಲ್ಲಿ ಬೇರೆ ಭಾಗಕ್ಕೆ ಹೋಲಿಸಿದಾಗ ತಾಯಿ-ಶಿಶು ಮರಣ ಪ್ರಮಾಣ ತುಸು ಹೆಚ್ಚಿಸದೆ. ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿಯೂ ನಾವು ಹಿಂದುಳಿದಿದ್ದು, ಇಂತಹ ಉನ್ನತ ಆರೋಗ್ಯ-ಶಿಕ್ಷಣ ಸಂಸ್ಥೆಗಳು ಅದರ ನಿವಾರಣೆಗೆ ಅನುಕೂಲವಾಗಲಿವೆ ಎಂದರು.
ಕಲ್ಯಾಣ ಪ್ರದೇಶಕ್ಕೆ ಕೆ.ಕೆ.ಆರ್.ಡಿ.ಬಿ. ಬದ್ದ: ಜೇವರ್ಗಿ ಶಾಸಕ ಮತ್ತು ಕೆ.ಕೆ.ಆರ್.ಡಿ.ಬಿ. ಅಧ್ಯಕ್ಷ ಡಾ. ಅಜಯಸಿಂಗ್ ಮಾತನಾಡಿ, ಮಂಡಳಿಯ ೩೦೨ ಕೋಟಿ ರೂ. ನೆರವಿನಿಂದ ಕಲಬುರಗಿ ಜಯದೇವ ಆಸ್ಪತ್ರೆ ನಿರ್ಮಿಸಲಾಗಿದೆ. ಇದಲ್ಲದೆ ತಾಯಿ-ಮಗು ಆಸ್ಪತ್ರೆ, ಕ್ಯಾನ್ಸರ್ ಆಸ್ಪತ್ರೆ, ಸುಟ್ಟು ಗಾಯಗಳ ಘಟಕದ ನಿರ್ಮಾಣಕ್ಕೂ ಅನುದಾನ ನೀಡಿದೆ. ಇತ್ತೀಚೆಗೆ ಕಲಬುರಗಿಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಕಿ ಆರೋಗ್ಯ ಇಲಾಖೆಗೆ ಸಂಬAಧಿಸಿದAತೆ ೮೫೭ ಕೋಟಿ ರೂ. ಮೊತ್ತದ ಕಾಮಗಾರಿಗಳಿಗೆ ಒಪ್ಪಿಗೆ ನೀಡಿದ್ದು, ಇದರಲ್ಲಿ ಕ.ಕ.ಭಾಗದಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ ನಿರ್ಮಾಣ ಮತ್ತು ಮೇಲ್ದರ್ಜೇ, ಅಂಬುಲೆನ್ಸ್ ವಾಹನ ಸೌಕರ್ಯ ಕಲ್ಪಿಸಲು ೩೧೯ ಕೋಟಿ ರೂ. ಹಣ ಮಂಡಳಿ ನೀಡಲಿದೆ. ಪ್ರದೇಶದಲಿಲ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರ ಸುಧಾರಣೆ ಅಕ್ಷರ ಮತ್ತು ಆರೋಗ್ಯ ಆವಿಷ್ಕಾರ ಕಾರ್ಯಕ್ರಮ ರೂಪಿಸಲಾಗಿದೆ ಎಂದರು.
ತೊಗರಿಗೆ ಪರಿಹಾರ ಕೊಡಿ: ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಲಬುರಗಿ ದಕ್ಷಿಣ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಮಾತನಾಡಿ, ೩೭೧ ಹಾಸಿಗೆಯ ಆಸ್ಪತ್ರೆ ತಮ್ಮ ಕ್ಷೇತ್ರದಲ್ಲಿ ಉದ್ಘಾಟನೆಗೊಳ್ಳುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದ ಅವರು, ಜಿಲ್ಲೆಯಲ್ಲಿ ವಿಚಿತ್ರ ರೋಗದಿಂದ ಸುಮಾರು ೨ ಲಕ್ಷ ಹೆಕ್ಟೇರ್ ತೊಗರಿ ಬೆಳೆ ನಾಶವಾಗಿದೆ. ಕಳೆದ ವರ್ಷ ತೊಗರಿ ನೆಟೆ ರೋಗಕ್ಕೆ ತಾವೇ ೧೪೧ ಕೋಟಿ ರೂ. ಪರಿಹಾರ ನೀಡಿದ್ದು, ಈ ವರ್ಷದ ವಿಚಿತ್ರ ರೋಗಕ್ಕೆ ಪರಿಹಾರ ಘೋಷಿಸಿ ರೈತರ ನೆರವಿಗೆ ಧಾವಿಸಬೇಕೆಂದು ಸಿ.ಎಂ. ಸಿದ್ದರಾಮಯ್ಯ ಅವರಲ್ಲಿ ಮನವಿ ಮಾಡಿಕೊಂಡರು.
ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ಕೆ.ಎಸ್.ರವಿಂದ್ರನಾಥ ಪ್ರಸ್ತಾವಿಕವಾಗಿ ಮಾತನಾಡಿ ಪ್ರಸ್ತುತ ಬೆಂಗಳೂರಿನ ಮುಖ್ಯ ಶಾಖೆ ಮತ್ತು ಉಪ ಕೇಂದ್ರ ಹಾಗೂ ಮೈಸೂರು ಶಾಖೆಯಲ್ಲಿ ೧,೭೫೦ ಹಾಸಿಗೆ ಜೊತೆಗೆ ಕಲಬುರಗಿಯ ಈ ಆಸ್ಪತ್ರೆ ೩೭೧ ಹಾಸಿಗೆ ಸೇರಿದಂತೆ ಒಟ್ಟಾರೆ ಆಸ್ಪತ್ರೆಯ ಹಾಸಿಗೆ ಸಂಖ್ಯೆ ೨,೦೦೦ ದಾಟಿದೆ. ದೇಶದ ಅತಿ ದೊಡ್ಡ ಹೃದ್ರೋಗ ಸಂಸ್ಥೆಯಾಗಿ ಮತ್ತು ಆಗ್ನೇಯ ಏಷ್ಯಾದ ಅತಿದೊಡ್ಡ ಹೃದ್ರೋಗ ಆಸ್ಪತ್ರೆಯಾಗಿ ಜಯದೇವ ಆಸ್ಪತ್ರೆ ಗುರುತಿಸಿಕೊಂಡಿದ್ದು, ಇಲ್ಲಿ ಅತ್ಯಾಧುನಿಕ ಸೌಲಭ್ಯದೊಂದಿಗೆ ಬಿ.ಪಿ.ಎಲ್ ರೋಗಿಗಳಿಗೆ ಉಚಿತ ಮತ್ತು ಎ.ಪಿ.ಎಲ್. ರೋಗಿಗಳಿಗೆ ಶೇ.೩೦ರ ರಿಯಾಯಿತಿ ದರದೊಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.
ಕಲ್ಯಾಣ ಭಾಗದ ಅರೋಗ್ಯ ಮುಕುಟ "ಜಯದೇವ": ಕಲ್ಯಾಣ ಕರ್ನಾಟಕ ಭಾಗದ ಕಲಬುರಗಿಯನ್ನು ಮೆಡಿಕಲ್ ಹಬ್ ಮಾಡುವ ರಾಜ್ಯ ಸರ್ಕಾರದ ಉದ್ದೇಶಕ್ಕೆ ನೂತನ ಜಯದೇವ ಆಸ್ಪತ್ರೆ ಮುಕುಟವಾಗಿ ಎದ್ದು ನಿಂತಿದೆ. ೩೨೭.೧೭ ಕೋಟಿ ರೂ. ಮೊತ್ತದ ಈ ಯೋಜನೆಗೆ ೩೦೨ ಕೋಟಿ ರೂ. ನೀಡುವ ಮೂಲಕ ಪ್ರದೇಶದ ಅರೋಗ್ಯ ಆವಿಷ್ಕಾರಕ್ಕೆ ಕೆ.ಕೆ.ಆರ್.ಡಿ.ಬಿ. ಮಂಡಳಿ ಮುಂಚೂಣಿಯಲ್ಲಿ ನಿಂತಿದೆ.
ನೂತನ ಆಸ್ಪತ್ರೆಯಲ್ಲಿ ಕಾರ್ಡಿಯೋಲಾಜಿ, ಕಾರ್ಡಿಯಾ ಥೋರಾಸಿಕ್ ಸರ್ಜರಿ, ವಿಶೇಷವಾಗಿ ವಸ್ಕುಲರ್ ಸರ್ಜರಿ, ಮಕ್ಕಳ ಹೃದ್ರೋಗ ವಿಭಾಗ, ರೇಡಿಯೋಲಾಜಿ ವಿಭಾಗ ಒಳಗೊಂಡಿದೆ. ೩ ಕ್ಯಾತಲ್ಯಾಬ್, ೩ ಅಪರೇಷನ್ ಥಿಯೇಟರ್, ೧ ಹೈಬ್ರಿಡ್ ಓ.ಟಿ. ಇರಲಿದೆ. ಸಿ.ಟಿ.ಸ್ಕ್ಯಾನ್, ಎಕ್ಸ್ರೇ, ೧.೫ಟಿ ಇ.ಎಂ.ಆರ್.ಐ., ಅಲ್ಟಾçಸೋನೋಗ್ರಾಫಿ, ಹೈಟೆಕ್ ಪೆಥಾಲೋಜಿ ಬ್ಲಡ್ ಬ್ಯಾಂಕ್ ಸೇವೆಗಳು ರೋಗಿಗಳಿಗೆ ಲಭ್ಯವಿರಲಿದೆ. ೧೦೫ ಐ.ಸಿ.ಸಿ.ಯು ಬೆಡ್, ೧೨೦ ಜನರಲ್ ಬೆಡ್ (ಸೆಮಿ ಸ್ಪೆಷಲ್ ವಾರ್ಡ್, ಸ್ಪೆಷಲ್ ವಾರ್ಡ್, ಡೀಲಕ್ಸ್ ವಾರ್ಡ್), ೧೨ ರಿಕವರಿ ಬೆಡ್, ೧೨ ಪೋಸ್ಟ್ ಆಪರೇಟಿವ್ ಬೆಡ್ ಸೇರಿದಂತೆ ೩೭೧ಜೆ ಕಾಯ್ದೆ ದಶಮಾನೋತ್ಸವದ ಸವಿನೆನಪಿಗೆ ಕಲಬುರಗಿಯಲ್ಲಿ ಈ ಶಾಖಾ ಆಸ್ಪತ್ರೆ ೩೭೧ ಹಾಸಿಗೆ ಆಸ್ಪತ್ರೆಯೆಂದು ಘೋಷಿಸಿದ್ದು, ಒಟ್ಟಾರೆ ೩೭೧ ಹಾಸಿಗೆ ಆಸ್ಪತ್ರೆಯಾಗಿ ಪರಿವರ್ತಿಸಲಾಗಿದೆ.
No comments:
Post a Comment