ವಿವೇಕ ದೀಪಕ ವಾಲಿ ಫೌಂಡೆಶನ್ದಿ0ದ ೨೦೨೫ರ ಕ್ಯಾಲೆಂಡರ್ ಬಿಡುಗಡೆ
ಬೀದರ : ಈ ಹಿಂದೆ ಕೋವಿಡ್ ಸಂದರ್ಭದಲ್ಲಿ ಜನಜೀವನ ರಕ್ಷಣೆ ಕಾರ್ಯಕ್ರಮಗಳಲ್ಲಿ ಮುಂಚೂಣಿಯಲ್ಲಿ ನಿಂತು ಆಹೋರಾತ್ರಿ ಶ್ರಮಿಸಿದ ಕೋವಿಡ್ ಯುದ್ಧ ಸೇನಾನಿ ಪ್ರಶಸ್ತಿ ಪುರಸ್ಕೃತ, ಯುವ ಉದ್ಯಮಿ ವಿವೇಕ ದೀಪಕ ವಾಲಿ ಅವರ ಕಾರ್ಯ ಶ್ಲಾಘನೀಯ ಮತ್ತು ಸ್ವಾಗತಾರ್ಹವಾಗಿದೆ. ಪ್ರತಿ ವರ್ಷದಂತೆ ಈ ವರ್ಷವೂ ಸಹ ತಮ್ಮ ಕುಲದೇವತಾ ಹೊನ್ನಿಕೇರಿ ಸಿದ್ದೇಶ್ವರ ದೇವರ ಹೆಸರಿನ ೨೦೨೫ರ ದಿನದರ್ಶಿಕೆ ಹೊರತಂದಿರುವುದು ಹರ್ಷದ ಸಂಗತಿಯಾಗಿದೆ ಎಂದು ಹಿರಿಯ ರಘುನಾಥ ರೊಟ್ಟೆ ಗುರೂಜಿ ಹಲ್ಲಾಳಿ ಹೇಳಿದರು.
ಅವರು ಇಂದು ಬೀದರ ಜಿಲ್ಲಾ ಕೆಂದ್ರದಿAದ ೧೨ ಕಿ. ಮೀ. ಅಂತರದಲ್ಲಿರುವ ಭಾಲ್ಕಿ ತಾಲ್ಲೂಕಿನ ಸುಕ್ಷೇತ್ರ ಹೊನ್ನಿಕೇರಿ ಸಿದ್ದೇಶ್ವರ ದೇವಾಲಯದ ಆವರಣದಲ್ಲಿ ಏರ್ಪಡಿಸಿದ ಸರಳ ಸಮಾರಂಭದಲ್ಲಿ ವಿವೇಕ ದೀಪಕ ವಾಲಿ ಎಂಟರಪ್ರೆöÊಜೆಸ್ ಮುದ್ರಿತ ಶ್ರೀ ಹೊನ್ನಿಕೇರಿ ಸಿದ್ದೇಶ್ವರ ನಾಮದ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡಿ ಮಾತನಾಡುತಿದ್ದರು.
ಇನ್ನೋರ್ವ ಹಿರಿಯ ನಾರಾಯಣರಾವ ಬಸವಂತರಾವ ಹುಲ್ಲ್ಯಾಳ, ದೈವಿ ಕಾರ್ಯಕ್ಕೆ ಪ್ರಶಂಸೆ ಮಾಡಿದರು. ವಿವೇಕ ದೀಪಕ ವಾಲಿ ಅಭಿಮಾನಿ ಬಳಗದ ಮುಖಂಡ ಪುಷ್ಪಕ ಭಗುಸಿಂಗ್ ಜಾಧವ ಮಾತನಾಡಿ ವಾಲಿರವರು ಯುವಕರ ಕಣ್ಮಣಿಯಾಗಿದ್ದಾರೆ ಅಪ್ಪಟ ದೇಶಭಕ್ತ, ರಾಷ್ಟçಪ್ರೇಮಿ, ಸಹೋದರತ್ವದ ಮನೋಭಾವನೆಯ ಚಿನ್ನದ ಕನ್ನಡಿಗರಾಗಿದ್ದು, ಈ ವರ್ಷವೂ ಸಹ ಹತ್ತು ಸಾವಿರ ದಿನದರ್ಶಿಕೆಗಳನ್ನು ಮುದ್ರಿಸಿ ಉಚಿತವಾಗಿ ನೀಡುತ್ತಿರುವುದು ಅವರ ಸೇವೆ ಇತರರಿಗೆ ಮಾದರಿಯಾಗಿದೆ ಎಂದರು. ರಮೇಶ ಮಿರ್ಜಾಪುರ ಮಾತನಾಡಿ, ಕನ್ನಡ ಭಾಷೆ, ನೆಲ, ಜಲ, ಸಂರಕ್ಷಣೆಗೆ ಯುವ ಉತ್ಸಾಹಿ ತರುಣ ವಿವೇಕ ದೀಪಕ ವಾಲಿ ಅವರು ಕಂಕಣಬದ್ಧರಾಗಿ ದುಡಿಯುತ್ತಿದ್ದಾರೆ ಎಂದರು. ಪ್ರಧಾನ ಅರ್ಚಕರಾದ ಶಿವಾನಂದ ಸ್ವಾಮಿ ವಿಶೇಷ ಪೂಜೆ ಅರ್ಚನೆ, ಅಭಿಷೇಕ ಮಾಡಿ ಶುಭ ಹಾರೈಸಿದರು.
ಈ ಸರಳ ಕಾರ್ಯಕ್ರಮದಲ್ಲಿ ಸಿದ್ಧಣ್ಣ ಯಳಸಂಗಿ, ದೀಪಕ ಅಷ್ಟಗಿಕರ್, ನಾಗಶೆಟ್ಟಿ ಧರಮಾಪುರ, ಆನಂದ ಕಂದಗೂಳೆ, ಮನೀಷ ಕುಲಕರ್ಣಿ, ಸಚಿನ ಎಂ.ಜೆ., ಆಕಾಶ ಕೋಡಗೆ, ಪುನೀತ, ಶಿವಪ್ರಸಾದ, ಕಾರ್ತಿಕ, ಸೌರವ ಜವಳಿ, ಸೇರಿದಂತೆ ಅನೇಕರಿದ್ದರು.
No comments:
Post a Comment