ಅಧಿಕಾರಕ್ಕಾಗಿ ಕೃಷ್ಣಾ ಮೇಲ್ದಂಡೆ ಯೋಜನೆ ಬಳಸಿಕೊಳ್ತಾ ಕಾಂಗ್ರೆಸ್?
ನದಿ ಎಂದರೆ ಕಾವೇರಿ, ಕರ್ನಾಟಕವೆಂದರೆ ಬೆಂಗಳೂರು. ಇದು ನಮ್ಮ ಸರ್ಕಾರಗಳ ನಡೆಯಾಗಿದೆ. ಉತ್ತರ ಕರ್ನಾಟಕದ ಜನತೆ ಕೂಪ ಮಂಡೂಕಗಳು. ಅವರಿಗೆ ಏನು ಬೇಕೆಂದೇ ಗೊತ್ತಾಗುವದಿಲ್ಲ ಎಂಬ ಧೋರಣೆ. ಇದುವರೆಗೂ ಎಲ್ಲ ಸರ್ಕಾರಗಳೂ ಇದನ್ನೇ ಅನುಸರಿಸುತ್ತ ಬಂದಿರುವುದರಿAದಲೇ ಉತ್ತರ ಕರ್ನಾಟಕ ಹಿಂದುಳಿದಿದೆ. ಪ್ರತಿ ಅಧಿವೇಶನದಲ್ಲೂ ಉತ್ತರ ಕರ್ನಾಟಕದ ಬಗ್ಗೆ ಚರ್ಚೆ ನಡೆಯುತ್ತದೆ. ಇದು ಕೇವಲ ಚರ್ಚೆಗೆ ಮಾತ್ರ ಸೀಮಿತವಾಗಿದೆ. ಮುಖ್ಯವಾಗಿ ಉತ್ತರ ಕರ್ನಾಟಕದ ಗ್ರಾಮೀಣ ಜನರ ಆರ್ಥಿಕ ಅಭಿವೃದ್ಧಿಯಾಗಬೇಕಾದರೆ ನೀರಾವರಿ ಯೋಜನೆಗಳು ಪೂರ್ಣಗೊಳ್ಳಬೇಕು. ಯೋಜನೆಗಳ ನೀರು ರೈತರ ಭೂಮಿಗೆ ಹರಿಯಬೇಕು. ಇದುವರೆಗೂ ನಡೆದ ಅನೇಕ ಸದನಗಳ ಚರ್ಚೆಯಲ್ಲಿ ಇದು ಸಾಕಾರಗೊಂಡಿಲ್ಲ. ಅಧಿಕಾರಕ್ಕಾಗಿ ಕೃಷ್ಣಾ ಮೇಲ್ದಂಡೆ ಯೋಜನೆ ಬಳಸಿಕೊಂಡೇ ಎಲ್ಲ ಸರ್ಕಾರಗಳೂ ಅಧಿಕಾರ ಹಿಡಿಯುತ್ತ ಬಂದಿವೆಯೇ ಹೊರತು, ಅನುಷ್ಠಾನಕ್ಕಾಗಿ ಪ್ರಾಮಾಣಿಕ ಪ್ರಯತ್ನ ಮಾಡಿಲ್ಲ, ಮಾಡುತ್ತಿಲ್ಲ.
ಅಧಿಕಾರಕ್ಕಾಗಿ ಕೃಷ್ಣಾ ಮೇಲ್ದಂಡೆ ಯೋಜನೆ ಬಳಸಿಕೊಳ್ತಾ ಕಾಂಗ್ರೆಸ್?
ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ತನ್ನ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ಕಾಂಗ್ರೆಸ್ ಬಳಸಿಕೊಂಡಿತ್ತು ಎಂಬುದು ಬಿಜೆಪಿ ಆರೋಪ. ಇದೇ ಆರೋಪವನ್ನು ಹಿಂದೆ ಬಿಜೆಪಿ ಅಧಿಕಾರದಲ್ಲಿದ್ದಾಗ ಕಾಂಗ್ರೆಸ್ ಕೂಡ ಮಾಡಿತ್ತು. ಜನರನ್ನು ಯಾಮಾರಿಸಲು ಚುನಾವಣೆಗಳು ಬಂದಾಗ, `ಕಾಂಗ್ರೆಸ್ ನಡಿಗೆ-ಕೃಷ್ಣೆಯ ಕಡೆಗೆ' ಎಂಬ ಪಾದಯಾತ್ರೆ ಹಮ್ಮಿಕೊಂಡು, ಜನರಿಗೆ ಭರವಸೆಗಳ ಮಹಾಪೂರವನ್ನೇ ಹರಿಸಿದ್ದು ಸುಳ್ಳಲ್ಲ. ಅಧಿಕಾರ ಹಿಡಿದ ನಂತರ, ಕೇವಲ ಪುಟಗಟ್ಟಲೇ ನೀಡುವ ಜಾಹೀರಾತುಗಳಲ್ಲಿ, ಸಾರ್ವಜನಿಕ ಸಭೆಗಳಲ್ಲಿ ನುಡಿದಂತೆ ನಡೆದಿದ್ದೇವೆ ಎಂದು ಕೊಚ್ಚಿಕೊಳ್ಳುತ್ತಿದ್ದ ಕಾಂಗ್ರೆಸ್ ನಾಯಕರೂ ಈಗ ಕೃಷ್ಣಾ ಮೇಲ್ದಂಡೆ ಯೋಜನೆ ವಿಚಾರದಲ್ಲಿ ಅಕ್ಷರಶಃ ತದ್ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ ಎಂಬುದರಲ್ಲಿ ಎರಡು ಮಾತಿಲ್ಲ.
ಅಂದು ಚುನಾವಣೆಗೆ ಮೊದಲು ಕೃಷ್ಣೆಯ ಕಡೆಗೆ-ನಮ್ಮ ನಡಿಗೆ ಹೋರಾಟ ಕೈಗೊಂಡು ಕೃಷ್ಣಾ ಮೇಲ್ದಂಡೆ ಯೋಜನೆಗಳನ್ನು ಪೂರ್ಣಗೊಳಿಸಲು ವಾರ್ಷಿಕ ಹತ್ತು ಸಾವಿರ ಕೋಟಿ ಅನುದಾನ ನೀಡುತ್ತೇನೆ ಎಂದು ಭಾಷಣ ಬಿಗಿದಿದ್ದರು. ಐದು ವರ್ಷದಲ್ಲಿ ಐವತ್ತು ಸಾವಿರ ಕೋಟಿ ನೀಡುವ ವಾಗ್ದಾನ ಮಾಡಿದ್ದರು. ಕೃಷ್ಣಾ ಮೇಲ್ದಂಡೆಗೆ ವಾರ್ಷಿಕ ಹತ್ತು ಸಾವಿರ ಕೋಟಿ ಅನುದಾನ ಅಸಾಧ್ಯ ಎಂದು ಪತ್ರಿಕೆಗಳೇ ಬರೆದಿದ್ದವು. ಅದಕ್ಕೆ ಕೂಡಲಸಂಗಮದಲ್ಲಿ ನಿಂತು ಭಾಷಣ ಮಾಡಿದ್ದ ಕಾಂಗ್ರೆಸ್ ನಾಯಕರು, ಮಾಧ್ಯಮಗಳನ್ನೇ ತರಾಟೆಗೆ ತೆಗೆದುಕೊಂಡು, ನಮಗೆ ಅನುದಾನ ನೀಡಲು ಸಾಧ್ಯವಿದೆ ಎಂದು ಪ್ರತಿಪಾದಿಸಿದ್ದರು. ಆದರೆ, ಅಧಿಕಾರಕ್ಕೆ ಬಂದ ನಂತರ ಸರ್ಕಾರ ಕೃಷ್ಣೆಯನ್ನು ಸಂಪೂರ್ಣ ಮರೆತರು.
ನಾವು ಅಧಿಕಾರಕ್ಕೆ ಬಂದರೆ ಪ್ರತಿ ವರ್ಷ ಕೃಷ್ಣಾ ಮೇಲ್ದಂಡೆ ಯೋಜನೆಗೆ ೧೦ ಸಾವಿರ ಕೋಟಿ ರೂ ಮೀಸಲಿಡುತ್ತೇವೆ. ಐದು ವರ್ಷಗಳಲ್ಲಿ ೫೦ ಸಾವಿರ ಕೋಟಿ ರೂ ವೆಚ್ಚ ಮಾಡಿ ಯೋಜನೆ ಪೂರ್ಣಗೊಳಿಸುತ್ತೇವೆ ಎಂದು ಕೂಡಲಸಂಗಮನಾಥನ ಮೇಲೆ ಆಣೆ ಪ್ರಮಾಣ ಕೂಡ ಮಾಡಿದ್ದರು. ಅಲ್ಲದೆ ಕಾಯಿಕಟ್ಟಿ ಕಾಂಗ್ರೆಸ್ ನಾಯಕರು ಪ್ರಮಾಣ ಕೂಡ ಮಾಡಿದ್ದರು. ಚುನಾವಣಾ ಪ್ರಚಾರಕ್ಕೆ ಆಗಮಿಸಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ ಈ ಮಾತನ್ನು ಪುನರುಚ್ಛರಿಸಿದ್ದರು.
ಘೋಷಣೆಗಳು ಮಾತ್ರ
ಆದರೆ, ಈ ಘೋಷಣೆಗಳು ಅಧಿಕಾರಕ್ಕೆ ಬಂದ ನಂತರ ಸರ್ಕಾರ ಎಲ್ಲವನ್ನೂ ಮರೆತಿದೆ. ಸರ್ಕಾರ ಬೇಡಿಕೆ ಪೂರೈಸಿದ್ದೆಂದರೆ ಗ್ಯಾರಂಟಿ ಯೋಜನೆಗಳನ್ನು ಮಾತ್ರ. ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದಿಂದ ಸಾರಿಗೆ ಸಂಸ್ಥೆ ಸೊರಗುವಂತೆ ಮಾಡಿದ್ದು, ಸಾರಿಗೆ ಸಂಸ್ಥೆಗೆ ಸರ್ಕಾರದಿಮದ ಬರಬೇಕಾಧ ಸಾವಿರಾರು ಕೋಟಿ ರೂ ಇನ್ನೂ ಬಆಕಿ ಉಳಿಸಿಕೊಂಡಿದೆ. ಇನ್ನು ಉಚಿತ ವಿದ್ಯುತ್ ಯೋಜನೆಯೂ ಇದಕ್ಕೆ ಹೊರತಲ್ಲ. ಉಚಿತ ವಿದ್ಯುತ್ ಯೋಜನೆಯಿಂದ ಸಾವಿರ ಕೋಟಿ ನಷ್ಟವಾಗುತ್ತಿದೆ ಎಂದು ಸ್ವತಃ ಇಂಧನ ಸಚಿವರೇ ಹೇಳಿಕೊಂಡಿದ್ದಾರೆ. ಇನ್ನು ಭಾಗ್ಯ ಲಕ್ಷಿö್ಮ ಯೋಜನೆಯಡಿ ಮಾಸಿಕ ೨ ಸಾವಿರ ರೂ ನಾಲ್ಕಾರು ತಿಂಗಳ ವರೆಗೂ ಬರುತ್ತಿಲ್ಲ ಎಂಬುದು ಮಹಿಳೆಯರ ಗೋಳು. ಅತ್ತು ಕೇಜಿ ಅಕ್ಕಿ ಯೋಜನೆಯ ಬದಲಾಗಿ ಐದು ಕೆಜಿ ಹಣ ನೀಡುವದಾಗಿ ಸರ್ಕಾರ ಘೋಷಣೆ ಮಾಡಿದ್ದು, ಅದೂ ಕೂಡ ನಿಯಮಿತವಾಗಿ ಸಂದಾಯವಾಗುತ್ತಿಲ್ಲ. ಈ ಗ್ಯಾರಂಟಿ ಯೋಜನೆಗಳನ್ನು ಜನರು ಕೇಳಿದ್ದರೆ? ಅಧಿಕಾರಕ್ಕಗಿ ಘೋಷಣೆ ಮಾಡಿ ಸರ್ಕಾರ ಆರ್ಥಿ ಹೊರೆ ನಿಭಾಯಿಸಲಾಗದೇ ಹೆಣಗಾಡುವಂತಾಗಿದೆ.
ಬಜೆಟ್ ಮಂಡನೆ ಮಾಡುವಾಗ ಮಾತ್ರ ವಿವಿಧ ಯೋಜನೆಗಳಿಗೆ ಹಣ ಘೋಷಣೆ ಮಾಡಲಾಗುತ್ತದೆ. ಕೃಷ್ಣಾ ಮೇಲ್ದಂಡೆ ಯೋಜನೆಯ ನೀರಾವರಿಗೆ ವಾರ್ಷಿಕ ೧೦ ಸಾವಿರ ಕೋಟಿ ಪ್ರಸ್ತಾಪಿಸಲಾಗುತ್ತದೆ. ಇದು ಬಜೆಟ್ ಪುಸ್ತಕಕದಲ್ಲಿ ಮಾತ್ರ ಉಳಿಯುತ್ತದೆ. ಬಜೆಟ್ ಘೋಷಣೆಯ ನಂತರ ಹಣ ಬಿಡುಗಡೆ ಬಗ್ಗೆ ವಿರೋಧ ಪಕ್ಷಗಳೂ ಧ್ವನಿ ಎತ್ತುವದಿಲ್ಲ. ಆಡಳಿತ ಪಕ್ಷಗಳು ಹಣ ಬಿಡುಗಡೆ ಮಾಡುವದಿಲ್ಲ. ಸರ್ಕಾರ ಅಧಿಕಾರಕ್ಕೆ ಬಂದು ಒಂದೂವರೆ ವರ್ಷ ಕಳೆದಿದೆ. ಒಂದು ವರ್ಷದ ಹತ್ತು ಸಾವಿರ ರೂ ಬಿಡುಗಡೆಯಾಗಿದೆಯೇ? ಕಳೆದ ಒಂದೂವರೆ ವರ್ಷದಲ್ಲಿ ಕೃಷ್ಣಾ ಯೋಜಯೂ ಸೇರಿದಂತೆ ಉತ್ತರ ಕರ್ನಾಟಕದ ಯಾವುದೇ ನೀರಾವರಿ ಪ್ರದೇಶದ ಅಚ್ಚುಕಟ್ಟು ಪ್ರದೇಶಗಳಲ್ಲಿ ಹೆಚ್ಚುವರಿ ಎಷ್ಟು ಹೆಕ್ಟರ್ ಪ್ರದೇಶ ನೀರಾವರಿಗೆ ಒಳಪಡಿಸಲಾಗಿದೆ? ಇದಕ್ಕೆ ಸರ್ಕಾರದ ಬಳಿ ಉತ್ತರವೇ ಇಲ್ಲ.
ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ರಾಜ್ಯದ ಎಲ್ಲ ನೀರಾವರಿ ಯೋಜನೆಗಳಿಗೆ ೫೦ ಸಾವಿರ ಕೋಟಿ ನೀಡುವುದಾಗಿ ಹೇಳಿದ್ದೆವು, ಕೃಷ್ಣಾ ಯೋಜನೆಯೊಂದಕ್ಕೆ ಹೇಳಿದ್ದಲ್ಲ ಎಂದು ತಮ್ಮ ಹೇಳಿಕೆಯನ್ನೇ ಸರ್ಕರ ತಿರುಚಿತು. ನುಡಿದಂತೆ ನಡೆದಿದ್ದೇವೆ ಎನ್ನುವುದು ಸರ್ಕಾರದ ಟ್ಯಾಗ್ ಲೈನ್ ಅಷ್ಟೇ. ಅದರಲ್ಲಿ ನಿಜಾಂಶ ಇಲ್ಲವೇ ಇಲ್ಲ. ಗ್ಯಾರಂಟಿ ಯೋಜನೆಗಳಲ್ಲೂ ಷರತ್ತುಗಳನ್ನು ಹಾಕಿ ಯೋಜನೆಗಳನ್ನು ಸೀಮಿತಗೊಳಿಸಿ. ಅದೂ ಫಲಾನುಭವಿಗಳಿಗೆ ತಲುಪದಂತೆ ನೋಡಿಕೊಳ್ಳಲಾಗುತ್ತಿದೆ.
ಉತ್ತರ ಕರ್ನಾಟಕದ ಆಮಿಷ
ಬೆಳಗಾವಿ ಸುವರ್ಣ ಸೌಧದಲ್ಲಿ ನಡೆದ ಚಳಿಗಾಲ ಅಧಿವೇಷನದ ಮೂರು ದಿನಗಳ ವರೆಗೆ ಉತ್ತರ ಕರ್ನಾಟಕದ ಸಮಸ್ಯೆಗಳ ಕುರಿತು ಮಾತ್ರ ಚರ್ಚೆಗೆ ಮೀಸಲು ಎಂದು ಸರ್ಕಾರ ದೊಡ್ಡದಾಗಿ ಹೇಳಿಕೊಂಡಿತು. ಇದೇನು ಉತ್ತರ ಕರ್ನಾಟಕ್ಕೆ ಮಾಡುವ ಉಪಕಾರವೇ? ಇವರ ಕರ್ತವ್ಯವಲ್ಲವೇ? ಬರೀ ಚರ್ಚೆ ಮಾಡಿದರೆ ಸಾಕೆ? ಚರ್ಚೆಯ ವಿಷಗಳು ಅನುಷ್ಠಾನಕ್ಕೆ ಬರಬೇಡವೇ? ಹಿಂದೆ ಅನೇಕ ಬಾರಿ ಬೆಳಗಾವಿ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಚರ್ಚೆಗಳು ನಡೆದಿವೆ. ಇದುವರೆಗೂ ಯಾವ ನಿರ್ಣಯಗಳೂ ಅನುಷ್ಠಾನಕ್ಕೆ ಬಂದಿಲ್ಲ. ಕೇವಲ ಉತ್ತರ ಕರ್ನಾಟಕವೆಂದು ಆಮಿಷವೊಡ್ಡುತ್ತ ಬರಲಾಗುತ್ತಿದೆ.
ಪ್ರಸ್ತುತ ಅಧಿವೇಶನದಲ್ಲಿ ಬಾಣಂತಿಯರ ಸಾವು, ಶಿಕ್ಷಣ ಇಲಾಖೆಯ ಅಧೋಗತಿ, ಸಂಪರ್ಕ ರಸ್ತೆಗಳು, ಮಕ್ಕಳ ಅಪೌಷ್ಠಿಕತೆ, ಆರೋಗ್ಯ ಇಲಾಖೆ ಮತ್ತು ನೀರಾವರಿ ಇಲಾಖೆ ಯಾವುದೇ ಒಂದೇ ಒಂದು ಸಮಸ್ಯೆ ¨ಗೆಹರಿಸಲು ಸಾಧ್ಯವಾಗಿಲ್ಲ. ಗ್ಯಾರಂಟಿ ಯೋಜನೆಗಳಿಂದಾಗಿ ನಮ್ಮನ್ನು ಆಯ್ಕೆ ಮಾಡಿದ ಕ್ಷೇತ್ರಕ್ಕೆ ಯಾವುದೇ ಒಂದೇ ಒಂದು ಕೆಲಸ ಮಾಡಲು ಸಾದ್ಯವಾಗುತ್ತಿಲ್ಲ. ಜನರಿಗೆ ಭರವಸೆ ನೀಡಿ ಆಯ್ಕೆಯಾಗಿದ್ದೇವೆ. ಅವರ ಭರವಸೆಗಳನ್ನು ಈಡೇರಿಸಲು ಸಾಧ್ಯವಾಗುತ್ತಿಲ್ಲ ಎಂದು ಆಡಳಿತ ಪಕ್ಷದ ಶಾಸಕರೇ ಬಹಿರಂಗ ಸಭೆಗಳಲ್ಲಿ ಮತ್ತು ಶಾಸಕಾಂಗ ಪಕ್ಷದ ಸಭೆಗಳಲ್ಲೂ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಆದರೂ ಅಭಿವೃದ್ಧಿಯತ್ತ ಸರ್ಕಾರದ ದೃಷ್ಟಿ ಹೋಗುತ್ತಿಲ್ಲ. ಇದರ ಪರಿಣಾಮ ಮುಂದಿನ ದಿನಗಳಲ್ಲಿ ಎದುರಿಸಬೇಕಾಗುತ್ತದೆ ಎಂಬ ಅರಿವು ಕೂಡ ಇಲ್ಲದಿರುವುದು ಅಚ್ಚರಿಯ ಸಂಗತಿ.
ಬಲಿಷ್ಠ ಆಡಳಿತ ಪಕ್ಷ ಇರುವಾಗ ಅಷ್ಟೇ ಬಲಿಷ್ಠವಾದ ವಿರೋಧ ಪಕ್ಷವೂ ಅಗತ್ಯ. ೧೯೮೨ರ ಗಉಂಡೂರಾವ್ ಸರ್ಕಾರ ಅಧಿಕಾರದಲ್ಲಿದ್ದಾಗ ಕೆಲವೇ ಜನರಿದ್ದ ಬಿಜೆಪಿ ಎ.ಕೆ.ಸುಬ್ಬಯ್ಯ ನೇತೃತ್ವದಲ್ಲಿ ಪ್ರಬಲ ಹೋರಾಟ ನಡೆಸುವ ಮೂಲಕ ಒಂದು ಸರರ್ಕಾವೇ ಚುನಾವಣೆಯಲ್ಲಿ ಬಿದ್ದುಹೋಗುವಂತೆ ಮಡಿದ್ದರು. ಆದರೆ ಈಗ ೬೫ ಶಾಸಕರನ್ನು ಹೊಂದಿರುವ ದೊಡ್ಡ ವಿರೋಧ ಪಕ್ಷವಿದ್ದರೂ, ಜನರ ಪರವಾಗಿ ಧ್ವನಿ ಎತ್ತುವ ತಾಕತ್ತು ತೋರುತ್ತಿಲ್ಲ. ಸರ್ಕಾರದ ಅನೇಕ ಹಗರಣಗಳು ಬೆಳಕಿಗೆ ಬಂದಿದ್ದರೂ, ಅವುಗಳನ್ನೆತ್ತಿಕೊಂಡು ಹೋರಾಟ ಮಾಡುವ ಶಕ್ತಿ ಮತ್ತು ಜನರ ಪರವಾಗಿ ಹೋರಾಟದ ಧ್ವನಿಯನ್ನು ವಿರೋಧ ಪಕ್ಷಗಳು ಕಳೆದುಕೊಂಡಿವೆ.
ಕರ್ನಾಟಕವೆಂದರೆ ಎಲ್ಲಿದೆ?
ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕ ಎಂಬ ಭೇದ ಮೊದಲಿಂದಲೂ ಎಲ್ಲ ಪಕ್ಷಗಳು ಅನುಸರಿಸಿಕೊಂಡು ಬಂದಿವೆ. ರಾಜ್ಯದಲ್ಲಿ ಯಾವುದೇ ಸರ್ಕಾರ ಅದಿಕಾರಕ್ಕೆ ಬಂದರೂ, ಕರ್ನಾಟಕ ಎಂದರೆ ಬೆಂಗಳೂರು, ನೀರಾವರಿ ಎಂದರೆ ಕಾವೇರಿ ನೀರು ಮಾತ್ರ. ಎಲ್ಲ ಅಭಿವೃದ್ಧಿ ಯೋಜನೆಗಳೂ ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಿಗೆ ಮಾತ್ರ ಸೀಮಿತವಾಗಿರುತ್ತವೆ. ಕಾವೇರಿ ವಿವಾದ ಹುಟ್ಟಿಕೊಂಡಾಗ ಇಡೀ ಕರ್ನಾಟಕ್ಕೇ ಬೆಂಕಿ ಬಿದ್ದಂತೆ ಬೊಬ್ಬೆ ಹೊಡೆಯಲಾಗುತ್ತದೆ. ಆದರೆ, ಉತ್ತರ ಕರ್ನಾಟಕವನ್ನು ಇಷ್ಟೊದು ವ್ಯವಸ್ಥಿತವಾಗಿ ತುಳಿದು ಹೊಸಕಿ ಹಾಕುತ್ತಿದ್ದರೂ, ಉತ್ತರ ಕರ್ನಾಟಕದಿಂದ ಆಯ್ಕೆಯಾದ ಪ್ರತಿನಿಧಿಗಳು ಮತ್ತು ಶಾಸಕರು ಧ್ವನಿ ಎತ್ತುವದಿಲ್ಲ.
ದಶಕಗಳಿಂದ ಯಾವುದೇ ಸರ್ಕಾರ ಅಧಿಕಾರಕ್ಕೆ ಬಂದರೂ, ಉತ್ತರ ಕರ್ನಾಟಕದ ಪ್ರತಿನಿಧಿಗಳು ಸಚಿವರಾಗಿರುತ್ತಾರೆ. ತಮ್ಮ ಜವಾಬ್ದಾರಿಗಳನ್ನು ನಿರ್ವಹಿಸದೇ, ತಮ್ಮದೇ ಸರ್ಕಾರ ಅಧಿಕಾರದಲ್ಲಿದ್ದರೂ, ತಮ್ಮ ಪ್ರದೇಶ ಹಿಂದುಳಿದಿದೆ ಎಂದು ಅಂಗಲಾಚುವ ದಯನೀಯ ಸ್ಥಿತಿ ನಮ್ಮ ಉತ್ತರ ಕರ್ನಾಟಕದ ಪ್ರತಿನಿಧಿಗಳದ್ದಾಗಿದೆ. ಇಷ್ಟೊಂದು ಅಸಹಾಯಕ ಮತ್ತು ಅಸಮರ್ತ ನಾಯಕರಿಂದ ಯಾವುದೇ ಅಭಿವೃದ್ಧಿ ಕೆಲಸಗಳು ನಿರೀಕ್ಷಿಸಲು ಸಾಧ್ಯವೇ? ಮಾತೆತ್ತಿದರೆ ಪ್ರತ್ಯೇಕ ರಾಜ್ಯವೆಂದು ಕೂಗುವವರು, ತಾವು ಅದಿಕಾರದಲ್ಲಿದ್ದಾಗ ಏನು ಮಾಡಿದರು ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು. ಎಂಥವನ್ನು ಆಯ್ಕೆ ಮಾಡಿದೆವಲ್ಲ ಎಂದು ಜನರು ಪಶ್ಚಾತ್ತಾಪ ಪಡುವಂಥ ಸ್ಥಿತಿ ಹಲವು ವರ್ಷಗಳಿಂದಲೂ ಮುಂದುವರೆಯುತ್ತ ಬಂದಿದೆ. ಎಲ್ಲದಕ್ಕೂ ಒಂದು ಅಂತ್ಯ ಎಂಬುದಿರುತ್ತದೆ. ಈ ಬಗ್ಗೆ ನಮ್ಮ ಚುನಾಯಿತ ಪ್ರತಿನಿಧಿಗಳು ಬೇಗ ಎಚ್ಚೆತ್ತುಕೊಂಡಷ್ಟೂ ರಾಜ್ಯದ ಭವಿಷ್ಯದ ದೃಷ್ಟಿಯಿಂದ ಒಳ್ಳೆಯದು.
No comments:
Post a Comment