ಬೀದರ್ : ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದಿಂದ ಮುಂಬರುವ ೨೦೨೫ರ ಜನೆವರಿ ೧೧ ಮತ್ತು ೧೨ ರಂದು ಬೀದರ ನಗರದ ಪೂಜ್ಯ ಶ್ರೀ ಡಾ|| ಚನ್ನಬಸವ ಪಟ್ಟದೇವರ ಜಿಲ್ಲಾ ರಂಗಮ0ದಿರದಲ್ಲಿ ನಡೆಯಲಿರುವ ವಿಭಾಗ ಮಟ್ಟದ ತತ್ವಪದಕಾರರ ಸಮಾವೇಶ ಮತ್ತು ಭಜನೆ ಸ್ಪರ್ದೆ ಕಾರ್ಯಕ್ರಮಗಳ ಸ್ವಾಗತ ಸಮಿತಿಯ ಅಧ್ಯಕ್ಷರನ್ನಾಗಿ ಖ್ಯಾತ ಉದ್ಯಮಿ, ಬಸವತತ್ವ ಚಿಂತಕರು, ಸಮಾಜ ಸೇವಕರು, ದಿ ಗ್ರೇನ್ ಐಂಡ್ ಸೀಡ್ಸ್ ಮರ್ಚಂಟ್ಸ್ ಅಸೋಶಿಯೆಶನ್ ಜಿಲ್ಲಾಧ್ಯಕ್ಷ ಬಸವರಾಜ ಧನ್ನೂರ್ ಅವರನ್ನು ನೇಮಕ ಮಾಡಲಾಗಿರುವುದು.
ಒಕ್ಕೂಟದ ಕೇಂದ್ರ ಸಮಿತಿಯ ಗೌರವ ಅಧ್ಯಕ್ಷರು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಡಾ|| ಮಾತಾ ಬಿ. ಮಂಜಮ್ಮ ಜೋಗುತಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಬಸವರಾಜ ಧನ್ನೂರ ಅವರನ್ನು ಸ್ವಾಗತ ಸಮಿತಿಯ ಅಧ್ಯಕ್ಷರನ್ನಾಗಿ ಮಾಡಲು ನಿರ್ಣಯಿಸಲಾಗಿತ್ತು, ಅದರಂತೆ ಇಂದು ಅವರಿಗೆ ಸ್ವಾಗತಿಸಲಾಯಿತು.
ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ಸಂಸ್ಥಾಪಕ ಅಧ್ಯಕ್ಷರಾದ ವಿಜಯಕುಮಾರ ಸೋನಾರೆ ಅವರ ನೇತೃತ್ವದಲ್ಲಿ ಧನ್ನೂರ ಅವರ ನಿವಾಸಕ್ಕೆ ತೆರಳಿ ಅವರ ಒಪ್ಪಿಗೆ ಪಡೆದು ಸನ್ಮಾನಿಸಿ, ಗೌರವಿಸಿ ಸ್ವಾಗತಿಸಲಾಯಿತು. ನಂತರ ಮಾನತಾಡಿದ ಬಸವರಾಜ ಧನ್ನೂರ ಅವರು ನಮ್ಮ ಭವ್ಯ ಭಾತರದ ಸಂಸ್ಕೃತಿ, ಪರಂಪರೆ, ಸಂಸ್ಕಾರ, ಜಾನಪದ, ತತ್ವಪದ ಹಾಡುಗಾರಿಕೆ ಅಳಿಸಿಹೊಗುತ್ತಿರುವ ಸಂದರ್ಭ ದಲ್ಲಿ ಅವುಗಳಿಗೆ ಸಂರಕ್ಷಿಸಿ ಇಂದಿನ ಯುವ ಶಕ್ತಿ ಪಡೆಗೆ ಅರುಹಿ ಸುಂದರ ಸುಭದ್ರ ಸಮಾಜ ನಿರ್ಮಿಸುವಂತಾಗಲು ಒಕ್ಕೂಟದ ಈ ಕಾರ್ಯಕ್ರಮಗಳು ದೇಶಕ್ಕೆ ಮಾದರಿಯಾಗಲಿವೆ ಎಂದು ಹೇಳಿದರು.
ವಿಜಯಕುಮಾರ ಸೋನಾರೆ ಮಾತನಾಡಿ, ಏಳು ಜಿಲ್ಲೆಗಳ ಕಲಾವಿದರು ಈ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ತತ್ವಪದ, ಭಜನೆ ಮತ್ತು ಜಾನಪದ ಗೀತೆಗಳನ್ನು ಹಾಡಲಿದ್ದಾರೆ. ಭಜನೆ ಸ್ಪರ್ದೇಯಲ್ಲಿ ಕಡಕೋಳ ಮಡಿವಾಳಪ್ಪ, ಸಂತ ಶಿಶುನಾಳ ಶರೀಫರು ಕನಕದಾಸರು ಮತ್ತು ಪುರಂದರದಾಸರುಗಳು ರಚಿತ ಸಾಹಿತ್ಯದ ಹಾಡುಗಳನ್ನು ಮಾತ್ರ ಈ ಸ್ಪರ್ದೇಯಲ್ಲಿ ಕಲಾವಿದರು ಹಾಡಬೇಕು. ಸ್ಪರ್ದೇಯ ಪ್ರಥಮ ವಿಜೇತ ತಂಡಕ್ಕೆ ೫೦ ಸಾವಿರ ರೂಪಾಯಿ, ದ್ವೀತಿಯ ತಂಡಕ್ಕೆ ೨೫ ಸಾವಿರ ಮತ್ತು ತೃತಿಯ ಸ್ಥಾನ ಪಡೆಯುವ ತಂಡಕ್ಕೆ ೧೫ ಸಾವಿರ ರೂಪಾಯಿ ನಗದು ಬಹುಮಾನ ನೀಡಲಾಗುವುದು ಎಂದು ತಿಳಿಸದ ಅವರು ಹಿಂದಿನಿ0ದಲೂ ಭಜನೆ ಪದಗಳು ಹಿರಿಯ ಕಲಾಜೀವಿಗಳು ಹಾಡುತ್ತಲೇ ಬಂದಿದ್ದಾರೆ. ಅವರುಗಳಲ್ಲಿ ಅದೇಷ್ಟೋ ಸಂಖ್ಯೆಯಲ್ಲಿ ಮರೆಯಾಗಿದ್ದಾರೆ. ಅಳಿದುಳಿದ ಕಲಾವಿದರಿಗೆ ಪ್ರೋತ್ಸಾಹ ನೀಡಿ ಇಂದಿನ ಯುವ ಕಲಾವಿದರು ಪ್ರೇರಣೆಗೊಂಡು ಭಜನೆ ಹಾಡುಗಳನ್ನು ಹಾಡುವಂತೆ ಮಾದರಿಯನ್ನಾಗಿ ಮಾಡುವ ಈ ಕಾರ್ಯಕ್ರಮಗಳ ಉದ್ದೇಶವಾಗಿದೆ ಎಂದರು.
ಈ ಸಂದರ್ಭದಲ್ಲಿ ಪೃಥ್ವಿರಾಜ್ ಎಸ್, ಸುನೀಲಕುಮಾರ ಕುಲಕರ್ಣಿ, ನಾಗಶೆಟ್ಟಿ ಧರಮಪೂರ್, ಸುನೀಲ ಭಾವಿಕಟ್ಟಿ, ಸೇರಿದಂತೆ ಇತರರು ಇದ್ದರು.
No comments:
Post a Comment