ads

Search This Blog

Tuesday, 24 December 2024

ಸಿ.ಟಿ.ರವಿ ಕೇಸ್: ಸಭಾಪತಿಗಳು ಅನುಮತಿ ನೀಡಿದರೆ ಸ್ಥಳ ಮಹಜರು -ಗೃಹ ಸಚಿವ ಡಾ.ಜಿ ಪರಮೇಶ್ವರ್

 ಬೆಂಗಳೂರು: ಸ್ಥಳ ಮಹಜರು ನಡೆಸಲು ಅನುಮತಿ ನೀಡುವಂತೆ ಪೊಲೀಸರು ಮನವಿ ಮಾಡಿದ್ದಾರೆ. ಸಭಾಪತಿಗಳು ಅನುಮತಿ ಇಲ್ಲದೆ ಸದನದ ಮಹಜರು ಮಾಡಲು ಸಾಧ್ಯವಿಲ್ಲ ಎಂದು ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರು ಸೋಮವಾರ ಹೇಳಿದರು.

ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸ್ಥಳ ಮಹಜರಿಗೆ ಪೊಲೀಸರು ಅನುಮತಿ ಕೇಳಿದ್ದಾರೆ. ಪರಿಷತ್ ಅಧ್ಯಕ್ಷರ ಅನುಮತಿ ಇಲ್ಲದೆ ಮಾಡಲಾಗುವುದಿಲ್ಲ. ಪರಿಷತ್ತಿಗೆ ತನ್ನದೇ ಆದ ನಿಯಮಗಳಿದ್ದು, ಪೊಲೀಸರು ಆ ಚೌಕಟ್ಟಿನಲ್ಲಿ ಕೆಲಸ ಮಾಡುತ್ತಾರೆ ಎಂದು ಹೇಳಿದರು.



ಪರಿಷತ್ತಿನ ನಕಲಿ ವಿಡಿಯೋಗಳ ಕುರಿತು ಸಭಾಧ್ಯಕ್ಷರು ಪೊಲೀಸರಿಗೆ ಪತ್ರ ಬರೆದಿದ್ದಾರೆಂಬ ಪ್ರಶ್ನೆಗೆ ಉತ್ತರಿಸಿ, ಪೊಲೀಸರು ವಿಡಿಯೋಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಡಿಸಬಹುದು. ಪೊಲೀಸ್ ಅಧಿಕಾರಿಗಳು ತಮ್ಮ ಕಾರ್ಯವಿಧಾನಗಳನ್ನು ಅನುಸರಿಸಬೇಕಾಗಿರುವುದರಿಂದ ಪ್ರತಿಯೊಂದ ಕ್ಕೂ ಸರ್ಕಾರವನ್ನು ಕೇಳಬೇಕಾಗಿಲ್ಲ. ಪೊಲೀಸ್ ಆಯುಕ್ತರೊಂದಿಗೆ ಸಮಾ ಲೋಚಿಸಿ ಸ್ಥಳದಲ್ಲೇ ನಿರ್ಧಾರಗಳನ್ನು ತೆಗೆದುಕೊಂಡು ಸರ್ಕಾರ ಕೇಳಿದರೆ ವರದಿ ಸಲ್ಲಿಸಬಹುದು ಎಂದು ಹೇಳಿದರು.

ಪೊಲೀಸರು ಡಿಸಿಎಂ ಡಿಕೆ ಶಿವಕುಮಾರ್ ಮತ್ತು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ನಿರ್ದೇಶನದಂತೆ ವರ್ತಿಸುತ್ತಿದ್ದಾರೆ ಎಂಬ ಬಿಜೆಪಿ ನಾಯಕರ ಆರೋಪಕ್ಕೆ ಪ್ರತಿಕ್ರಿಯಿಸಿ, ಅವರ ಬಳಿ ಮಾಹಿತಿಗಳಿದ್ದರೆ ನೀಡಲಿ, ಪರಿಶೀಲನೆ ಮಾಡು ತ್ತೇವೆಂದು ತಿಳಿಸಿದರು.

ಇಂತಹ ಸನ್ನಿವೇಶಗಳಲ್ಲಿ ಪೊಲೀಸರು ಸಿಎಂಂ ಹಾಗೂ ಗೃಹ ಸಚಿವ ಸೂಚನೆಗಳನ್ನು ಅನುಸರಿಸುತ್ತಾರೆ. ಈ ವಿಚಾರಗಳಲ್ಲಿ ಪೊಲೀಸರು ಕೂಡ ಜವಾಬ್ದಾರರಾಗಿರುವುದರಿಂದ ಅವರು ಇತರರ ಮಾತನ್ನು ಕೇಳುವುದಿಲ್ಲ. ಇತರರ ಮಾತು ಕೇಳಿದ್ದೇ ಆದರೆ, ಅವರನ್ನು ಅವರು ಸಮರ್ಥಿಸಿಕೊಳ್ಳಬೇಕು ಎಂದರು.

No comments:

ಪ್ರೇಮ ಕಾಶ್ಮೀರದಲ್ಲಿ ರಕ್ತದೋಕುಳಿ; ಹಿಂದೂಗಳೇ ಟಾರ್ಗೆಟ...!

  ಪ್ರೇಮ ಕಾಶ್ಮೀರದಲ್ಲಿ ರಕ್ತದೋಕುಳಿ; ಹಿಂದೂಗಳೇ ಟಾರ್ಗೆಟ್. ಭೂಲೋಕದ ಸ್ವರ್ಗವೆಂದೇ ಕರೆಯುವ ಜಮ್ಮು-ಕಾಶ್ಮೀರದ ಪೆಹಲ್ಗಾಮ್ ಸಮೀಪದ ಬೈಸರನ್ ಹುಲ್ಲುಗಾವಲಿನಲ್ಲಿ ಪಾಕ್ ಪ್...