ads

Search This Blog

Saturday, 25 January 2025

ಫೈನಾನ್ಸ್ ಕಂಪನಿ ಹಾವಳಿ: ಕಿರುಕುಳ ತಾಳಲಾರದೆ ಪಲಾಯನಗೈದ ಗದಗ ಹೊಟೇಲ್ ಉದ್ಯಮಿ

 

ಗದಗ: ಮೈಕ್ರೋಫೈನಾನ್ಸ್ ಕಂಪನಿಗಳ ಕಿರುಕುಳ ತಾಳಲಾರದೆ ಗದಗ ಜಿಲ್ಲೆಯ ಅನೇಕ ಕುಟುಂಬಗಳು ಪಟ್ಟಣವನ್ನು ತೊರೆಯುತ್ತಿವೆ ಎಂದು ಜನರು ದೂರು ನೀಡುತ್ತಿದ್ದಾರೆ. ಹಣಕಾಸು ಕಂಪನಿಗಳು 50,000 ರೂ. ಸಾಲ ನೀಡುವ ಮೊದಲು 1.5 ಲಕ್ಷ ರೂ. ಮೌಲ್ಯದ ಬಾಂಡ್‌ಗಳನ್ನು ಪಡೆದುಕೊಂಡಿವೆ ಎಂದು ಆರೋಪಿಸಿವೆ.

ಇಂತದ್ದೆ ಒಂದು ಪ್ರಕರಣದಲ್ಲಿ, ಗದಗದ ಹೋಟೆಲ್ ಮಾಲೀಕರೊಬ್ಬರು ಮೈಕ್ರೋಫೈನಾನ್ಸ್ ಕಂಪನಿಯಿಂದ ಕಿರುಕುಳ ಅನುಭವಿಸುತ್ತಿದ್ದಾರೆ. ಫೈನಾನ್ಸ್ ಕಂಪನಿಯ ಕಿರುಕುಳದಿಂದ ತಮ್ಮ ಹೋಟೆಲ್‌ಗೆ ಬೀಗ ಹಾಕಿ ಕುಟುಂಬದೊಂದಿಗೆ ಬೇರೆ ಪಟ್ಟಣಕ್ಕೆ ಸ್ಥಳಾಂತರಗೊಂಡರು. ಪರಶುರಾಮ್ ಹಬೀಬ್ ಗದಗ ಪಟ್ಟಣದ ಎಪಿಎಂಸಿ ಯಾರ್ಡ್‌ನಲ್ಲಿ ಕ್ಯಾಂಟೀನ್ ಹೊಂದಿದ್ದರು. ಇತ್ತೀಚೆಗೆ ಅವರು ರಹಸ್ಯ ಸ್ಥಳದಿಂದ ತಮ್ಮ ಸ್ನೇಹಿತರಿಗೆ ವೀಡಿಯೊ ಕರೆ ಮಾಡಿ ಹಣಕಾಸು ಕಂಪನಿಯ ಚಿತ್ರಹಿಂಸೆಯನ್ನು ಸಹಿಸಲಾಗದೆ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿರುವುದಾಗಿ ಹೇಳಿದರು.

ಪ್ರತಿ ವಾರ ಬಡ್ಡಿಯನ್ನು ಪಾವತಿಸಬೇಕಾಗಿರುವುದರಿಂದ ಈಗ 60 ಲಕ್ಷ ರೂ.ಗಳ ಹೊಣೆಗಾರಿಕೆಯನ್ನು ಹೊಂದಿದ್ದೇನೆ ಎಂದು ಅವರು ಅವರಿಗೆ ತಿಳಿಸಿದರು. ಸಾಲ ಪಡೆದ ಮೊತ್ತ ಎಷ್ಟು ಎಂಬ ಪ್ರಶ್ನೆಗೆ ಅವರು ಸರಿಯಾಗಿ ಉತ್ತರಿಸಿಲ್ಲ. ಅವರ ಸಹೋದರನಿಗೂ ತಿಳಿದಿಲ್ಲ. ಮಹಿಳಾ ಕಾನ್‌ಸ್ಟೆಬಲ್‌ನ ಪತಿ ಸಾಲವನ್ನು ಮರುಪಾವತಿಸಲು ಕಿರುಕುಳ ನೀಡುತ್ತಿದ್ದಾರೆ ಎಂದು ಪರಶುರಾಮ್ ಹೇಳಿದ್ದಾರೆ. ಹಣವನ್ನು ಬೇಗ ಪಾವತಿಸದಿದ್ದರೆ ಪರಶುರಾಮ್‌ನನ್ನು ಕೊಲೆ ಮಾಡುವುದಾಗಿ ಮಹಿಳಾ ಪೊಲೀಸ್ ಪೇದೆ ಪತಿ ಬೆದರಿಕೆ ಹಾಕಿದ್ದಾರೆ ಎಂದು ಅವರು ಹೇಳಿದರು.

ಪರಶುರಾಮ್ ಅವರಿಗೆ ಸಾಲ ಇದೆ ಅಂತ ನನಗೆ ಗೊತ್ತಿತ್ತು ಮತ್ತು ಕಳೆದ ಕೆಲವು ದಿನಗಳಿಂದ ಅವರು ಆತಂಕಕ್ಕೊಳಗಾಗಿದ್ದರು. ಸಾಲಗಾರರು ತಮ್ಮನ್ನು ಕಿರುಕುಳ ನೀಡುತ್ತಿದ್ದಾರೆ ಎಂದು ಅವರು ನಮಗೆ ಹೇಳುತ್ತಿದ್ದರು. ಆದರೆ ಅವರ ಪರಿಸ್ಥಿತಿ ಇಷ್ಟೊಂದು ಕೆಟ್ಟದಾಗಿದೆ ಎಂದು ನಮಗೆ ತಿಳಿದಿರಲಿಲ್ಲ. ಅವರು ಬೇರೆ ಊರಿಗೆ ಸ್ಥಳಾಂತರಗೊಂಡಿದ್ದಾರೆ ಮತ್ತು ಯಾವುದೇ ಕರೆಗಳಿಗೆ ಉತ್ತರಿಸುತ್ತಿಲ್ಲ.

ಅವರ ಕುಟುಂಬ ಸದಸ್ಯರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದು ಚಿಂತಿತರಾಗಿದ್ದಾರೆ. ಇದು ಪರಶುರಾಮ್ ಅವರ ಪ್ರಕರಣ ಮಾತ್ರವಲ್ಲ, ಗದಗದಲ್ಲಿ ಇನ್ನೂ ಅನೇಕರು ಇದೇ ರೀತಿಯ ಪರಿಸ್ಥಿತಿಯಲ್ಲಿದ್ದಾರೆ" ಎಂದು ಪರಶುರಾಮ್ ಅವರ ಆಪ್ತ ಸ್ನೇಹಿತರೊಬ್ಬರು ಇತ್ತೀಚೆಗೆ ಪೊಲೀಸರಿಗೆ ದೂರು ನೀಡಿದ್ದಾರೆ.

ಶೋಧವಾಣಿ ಕನ್ನಡ ದಿನಪತ್ರಿಕೆ SHODHAVANI KANNADA 25-01-2025

 


CLICK FOR E-PAPERS  http://shodhavani.in/#/e-pape

ಶೋಧವಾಣಿ ಕನ್ನಡ ದಿನಪತ್ರಿಕೆ ಓದಲು ಇ ಲಿಂಕ್ ಮೇಲೆ ಕ್ಲಿಕ್ ಮಾಡಿ. ಎಲ್ಲಾ ಸುದ್ದಿಯನ್ನು ಓದಿ. ಹಾಗೇ  ದಯವಿಟ್ಟು ನಮ್ಮ ಚಾನೆಲ್ ಸದಸ್ಯರಾಗಿ ಪ್ರೋತ್ಸಾಹ ನೀಡಿ. ನಿಮ್ಮ ಆತ್ಮೀಯ ಸ್ನೇಹಿತರಿಗೆ ಲಿಂಕ್ ಶೇರ ಮಾಡಿ. ಕಾಮೆಂಟ್ ಮಾಡಿ. ಲೈಕ್ ಮಾಡಿ. ಪ್ರೋತ್ಸಾಹ ನೀಡಿ. ಧನ್ಯವಾದಗಳು

Friday, 24 January 2025

ಬ್ರಹ್ಮಪುತ್ರ ನದಿಗೆ ದೊಡ್ಡ ಆಣೆಕಟ್ಟು: ಚೀನಾ ದುಸ್ಸಾಹಸ-ಭಾರತಕ್ಕೆ ಕಂಟಕ!

 

ವಿಶ್ವದಲ್ಲೇ ಅತಿ ದೊರ‍್ಡ ಆಣೆಕಟ್ಟು ನಿರ್ಮಾಣಕ್ಕೆ ಚೀನಾ ಮುಂದಾಗಿದೆ. ಅದರಿಂದ ಜಲವಿದ್ಯುತ್ ಉತ್ಪಾದನೆ ಮಾಡಿ, ಹೆಚ್ಚು ಸಮೃದ್ಧಿ ಸಾಧಿಸುವುದು ತನ್ನ ಗುರಿ ಎಂದು ಚೀನಾ ಹೇಳಿಕೊಂಡಿದೆ. ಆದರೆ, ಅಲ್ಲಿನ ತಜ್ಞರೂ ಸೇರಿದಂತೆ ಜಾಗತಿಕ ಮಟ್ಟದ ಹಲವರು ಆ ಆಣೆಕಟ್ಟು ಜನರ ಮೇಲೆ ಮತ್ತು ಪ್ರಕೃತಿಯ ಮೇಲೆ ಬೀರಬಹುದಾದ ಪರಿಣಾಮಗಳ ಕುರಿತು ಎಚ್ಚರಿಕೆ ನೀಡಿರ‍್ದಾರೆ. ಭಾರತವೂ ಈ ಬಗ್ಗೆ ಹಿಂದೆಯೇ ಆಕ್ಷೇಪ ವ್ಯಕ್ತಪಡಿಸಿತ್ತು. ಟಿಬೆಟ್, ಬಾಂಗ್ಲಾ, ಭಾರತದ ಜನರ ಸುರಕ್ಷತೆ ಮತ್ತು ಪ್ರಕೃತಿ ವಿನಾಶದ ದೃಷ್ಟಿಯಿಂದ ಈ ಡ್ಯಾಮ್ ಅಪಾಯಕಾರಿ ಎಂದರೂ ಚೀನಾ ತನ್ನ ನಿಲುವಿನಿಂದ ಹಿಂದೆಸರಿಯುತ್ತಿಲ್ಲ.

ಬ್ರಹ್ಮಪುತ್ರ ನದಿಗೆ  ದೊಡ್ಡ ಆಣೆಕಟ್ಟು: ಚೀನಾ ದುಸ್ಸಾಹಸ-ಭಾರತಕ್ಕೆ ಕಂಟಕ!  

ಬ್ರಹ್ಮಪುತ್ರ ಭಾರತದಲ್ಲಿ ಹರಿಯುವ ಪ್ರಮುಖ ನದಿಯಲ್ಲೊಂದು. ಟಿಬೆಟ್‌ನಲ್ಲಿ ಹುಟ್ಟುವ ಈ ನದಿ, ಭಾರತ ಮತ್ತು ಬಂಗ್ಲಾ ದೇಶದ ಮೂಲಕ ಹರಿದು ಕೊನೆಗೆ ಬಂಗಾಳ ಕೊಲ್ಲಿ ಸೇರುತ್ತದೆ. ಬ್ರಹ್ಮಪುತ್ರ ನದಿಯನ್ನು ಟಿಬೆಟ್‌ನಲ್ಲಿ ಯಾರ್ಲಂಗ್ ಸಂಗ್ಪೋ ಎಂದು ಕರೆಯುತ್ತಾರೆ. ನದಿ ಕೆಳಭಾಗದಲ್ಲಿ ವಿಶ್ವದ ಅತಿ ದೊಡ್ಡ ಆಣೆಕಟ್ಟು ನಿರ್ಮಿಸಿ, ಜಲವಿದ್ಯುತ್ ಉತ್ಪಾದನೆ ಮಾಡುವುದು ಚೀನಾ ಸರ್ಕಾರದ ಯೋಜನೆ. ಭಾರತದ ಅರುಣಾಚಲ ಪ್ರದೇಶದ ಗಡಿ ಸಮೀಪ ಇದನ್ನು ನಿರ್ಮಿಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ.

ಸದ್ಯ ಚೀನಾದ ತ್ರೀ ಜಾರ್ಜಸ್ ಡ್ಯಾಮ್ (ಯಾಂಟ್ಜೆ ನದಿಗೆ ಕಟ್ಟಲಾಗಿದೆ) ಇದು ವಿಶ್ವದ ಅತಿ ದೊಡ್ಡ ಆಣೆಕಟ್ಟಾಗಿದ್ದು, ಜಲವಿದ್ಯುತ್ ಉಪಾದನೆ ಮಾಡಲಾಗುತ್ತಿದೆ. ಯಾರ್ಲಂಗ್ ಸಾಂಗ್ಪೋ ನದಿಯ ಕೆಳಭಾಗದಲ್ಲಿ ಕಟ್ಟಲಾಗುವ ಆಣೆಕಟ್ಟೆಯಿಂದ ಅದರ ಮೂರು ಪಟ್ಟು ಜಲವಿದ್ಯುತ್ ಜಲವಿದ್ಯುತ್ ಉತ್ಪಾದನೆ ಮಾಡುವುದು ಚೀನಾದ ಲೆಕ್ಕಾಚಾರ. ಚೀನಾದ ಮಾಧ್ಯಮಗಳು ಇದು ಸುರಕ್ಷಿತ ಯೋಜನೆಯಾಗಿದ್ದು, ಪರಿಸರ ಸಂರಕ್ಷಣೆಯನ್ನು ತನ್ನ ಆದ್ಯತೆಯಾಗಿಸಿಕೊಂಡಿದೆ ಎಂದು ವಿವರಿಸಿವೆ. ಈ ಯೋಜನೆಯಿಂದ ದೇಶದ ಸಮೃದ್ಧಿಯನ್ನು ಹೆಚ್ಚಿಸಲಿದ್ದು, ಬೀಜಿಂಗ್‌ನ ಶೂನ್ಯ ಇಂಗಾಲ ಹೊರಸೂಸುವಿಕೆಯ ಗುರಿಗೆ ತಕ್ಕಂತಿದೆ ಎಂದಿದೆ. ಚೀನಾದ ಕಮುನಿಸ್ಟ್ ಪಕ್ಷವು ೨೦೨೧ರಲ್ಲಿ ಬುಡುಗಡೆ ಮಾಡಿರುವ ಐದು ವರ್ಷಗಳ ಆರ್ಥಿಕ ಅಭಿವೃದ್ಧಿ ಯೋಜನೆಯಲ್ಲಿ ಈ ಆಣೆಕಟ್ಟು ಸ್ಥಾನ ಪಡೆದಿದೆ. ಟಿಬೆಟ್‌ನಲ್ಲಿ ಹಲವು ಜಲವಿದ್ಯುತ್ ಯೋಜನೆಗಳನ್ನು ಕೈಗೆತ್ತಿಕೊಳ್ಳುವ ಬಗ್ಗೆ ಚಿಂತಿಸುತ್ತಿದ್ದು, ಅವುಗಳಲ್ಲಿ ಇದೊಂದು ಎನ್ನಲಾಗುತ್ತಿದೆ.

ಜೀವ ಪ್ರಬೇಧಗಳಿಗೆ ಆಪತ್ತು : ಆದರೆ, ವಿಶ್ವದ ಅತಿ ದೊಡ್ಡ ಆಣೆಕಟ್ಟು ನಿರ್ಮಾಣ ಚೀನಾದಲ್ಲೇ ಆತಂಕ ವ್ಯಕ್ತವಾಗಿದೆ. ಬ್ರಹ್ಮಪುತ್ರ ನದಿ ಹಿಮಾಲಯದ ಗಿರಿ ಕಂದರಗಳಲ್ಲಿAದ ಹರಿದು ಬರುತ್ತದೆ. ಲಕ್ಷಾಂತರ ಜೀವಪ್ರಭೇದ, ಕೋಟ್ಯಂತರ ಜನರ ಬುದುಕಿಗೆ ಆಸರೆಯಾಗಿರುವ ನದಿ. ಕಡಿದಾದ, ಆಳ ಕಣಿವೆ ಇರುವ, ಭೂಕಂಪ ಸಂಭವನೀಯ ಪ್ರದೇಶದಲ್ಲಿ ಆಣೆಕಟ್ಟು ನಿರ್ಮಾಣಕ್ಕೆ ಅಗೆಯುವುದು ಭೂಕುಸಿತದಂಥ ಅವಗಢಗಳಿಗೆ ಕಾರಣವಾಗುತ್ತದೆ ಎಂದು ಚೀನಾದ ವಿಜ್ಞಾನಿಗಳು ಕಳವಳ ವ್ಯಕ್ತಪಡಿಸುತ್ತಿದ್ದಾರೆ. ಜತೆಗೆ ಅಮೇರಿಕದ ಗ್ರಾö್ಯಂಡ್ ಕ್ಯಾನ್ಯನ್‌ಗಿಂತಲೂ ಮೂರು ಪಟ್ಟು ಆಳವಾದ ಹಿಮಾಲದ ಕಣಿವೆಗಳಲ್ಲಿ ಆಣೆಕಟ್ಟು ನಿರ್ಮಾಣಕ್ಕೆ ಬೇಕಾದ ಅಗಾಧ ಎಂಜಿನಿಯರಿAಗ್ ಕೌಶಲ ಮತ್ತಿತರ ಅಗತ್ಯಗಳನ್ನು ಪೂರೈಸುವುದು ಹೇಗೆ? ಎನ್ನುವ ಪ್ರಶ್ನೆಗಳು ಹಟ್ಟಿಕೊಂಡಿವೆ.

ಒAದು ವೇಳೆ ಭೂಕಂಪ ತಡೆಯುವ ರೀತಿಯಲ್ಲಿ ಆಣೆಕಟ್ಟು ನಿರ್ಮಿಸಿದರೂ ಅದರಿಂದ ಉಂಟಾಗುವ ಗುಡ್ಡಗಳ ಕುಸಿತ, ಮಣ್ಣು-ಕಲ್ಲಿನ ಅನಿಯಂತ್ರಿತ ಹರಿಯುವಿಕೆ ತಡೆಯುವುದು ಸಾಧ್ಯವೇ? ಇದು ಯೋಜನೆಗೆ  ಸವಾಲೊಡ್ಡಲಿದೆ ಎಂದು ಸಿಚೌನ್ ಪ್ರಾಂತೀಯ ಭೂವಿಜ್ಞಾನ ಬ್ಯೂರೋದ ಎಂಜಿನಿಯರ್ ಒಬ್ಬರು ೨೦೨೨ರಲ್ಲೇ ಎಚ್ಚರಿಕೆ ನೀಡಿದ್ದರು. ಯಾರ್ಲಂಗ್ ಸಂಗ್ಪೋ ಟೆಇಬೆಟ್‌ನ ಅತಿ ಉದ್ದದ ನದಿ. ಟಿಬೆಟ್‌ನಲ್ಲಿ ಚೀನಾ ಈಗಾಗಲೇ ಹಲವು ಆಣೆಕಟ್ಟುಗಳನ್ನು ನಿರ್ಮಿಸಿದೆ. ೨೦೨೪ರ ಆರಂಭದಲ್ಲಿ ಆಣೆಕಟ್ಟೊಂದರ ನಿರ್ಮಾಣದಿಂದ ಜನರಿಗೆ ತೊಂದರೆಯಾಗಿ, ಹಲವು ಬೌದ್ಧ ವಿಹಾರಗಳು ಮುಳುಗಿದ್ದವು. ಅದರ ವಿರುದ್ಧ ಪ್ರತಿಭಟಿಸಿದ್ದ ಟಿಬೆಟ್ ಜನರನ್ನು ಬಂಧಿಸಿದ್ದ ಚೀನಾ ಸರ್ಕಾರ, ಅವರ ವಿರುದ್ಧ ಕಠಿಣ ಕ್ರಮ ಜರುಗಿಸಿತ್ತು. ತ್ರೀ ಜಾರ್ಜಸ್ ಡ್ಯಾಮ್ ನಿರ್ಮಾಣದಿಂದ ಟಿಬೆಟ್‌ನ ಒಂದು ಲಕ್ಷ ಮಂದಿ ನಿರ್ವಸಿತರಾಗಿದ್ದರು. ಈಗ ಚೀನಾ ಕಟ್ಟಲು ಹೊರಟಿರುವ ವಿಶ್ವದ ಅತಿ ದೊಡ್ಡ ಆಣೆಕಟ್ಟಿನ ವ್ಯಾಪ್ತಿಯಲ್ಲಿ ಹೆಚ್ಚು ಜನವಸತಿ ಇರುವ ಪ್ರದೇಶಗಳೂ ಸೇರಿವೆ. ಹೀಗಾಗಿ ಅತಿ ಹೆಚ್ಚು ಮಂದಿ ನಿರ್ವಸಿತರಾಗಬೇಕಾಗುತ್ತದೆ ಎನ್ನುವುದು `ಟಿಬೆಟ್ ವಾಚ್' ಎಂಬ ಲಂಡನ್ ಮೂಲದ ಸರ್ಕಾರೇತರ ಸಂಸ್ಥೆ ಕಳವಳ ವ್ಯಕ್ತಪಡಿಸಿದೆ.

ವಿನಾಶಕಾರಿ ಯೋಜನೆ :  ಬ್ರಹ್ಮಪುತ್ರದ ನೀರಿನಲ್ಲಿ ಭಾರತ ಮತ್ತು ಬಂಗ್ಲಾ ದೇಶಗಳಿಗೂ ಪಾಲು ಇದೆ. ಬ್ರಹ್ಮಪುತ್ರ ಸೇರಿದಂತೆ ಈ ಭಾಗದ ನದಿಗಳ ನೀರಿನ ಮೇಲೆ ನಿಯಂತ್ರಣ ಸಾಧಿಸುವ ಮೂಲಕ ಚೀನಾವು ಭಾರತದ ಆರ್ಥಿಕತೆಯ ಮೇಲೆ ತನ್ನ ಹಿಡಿತ ಬಿಗಿಗೊಳಿಸಲು ಪ್ರತ್ನಿಸುತ್ತಿದೆ ಎಂದು ಆಸ್ಟೆçÃಲಿಯಾ ಮೂಲಕ ಚಿಂತಕರ ಚಾವಡಿ `ಲೊವಿ ಇನ್ಸ್ಟಿಟ್ಯೂಟ್' ೨೦೨೦ರ ತನ್ನ ವರದಿಯಲ್ಲಿ ಅಭಿಪ್ರಯ ಪಟ್ಟಿvತ್ತು. ತನ್ನ ಆಣೆಕಟ್ಟು ಯೋಜನೆಯಿಂದ ಭಾರತ, ಬಂಗ್ಲಾದೇಶ ಸೇರಿದಂತೆ ಯಾರಿಗೂ ತೊಂದರೆಯಾಗದು ಎಂದು ಚೀನಾ ಹೇಳಿಕೊಂಡಿದೆ. ಆದರೆ, ಯೋಜನೆ ಭಾರತ ಮತ್ತು ಬಂಗ್ಲಾ ದೇಶದ ಪಾಲಿಗೆ ವಿನಾಶಕಾರಿಯಾಗಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.

ಯಾರ್ಲಂಗ್ ಸಂಗ್ಪೋ ನದಿಯ ಮೇಲ್ಭಾಗದಲ್ಲಿ ಚೀನಾ ಹಲವು ಆಣೆಕಟ್ಟುಗಳನ್ನು ಈಗಾಗಲೇ ನಿರ್ಮಿಸಿದೆ. ಈಗ ನದಿಯ ಕೆಳಭಾಗದಲ್ಲಿ ಭಾರೀ ಆಣೆಕಟ್ಟು ನಿರ್ಮಿಸಿದರೆ, ಇಡೀ ನದಿಯ ನೀರಿನ ಮೇಲೆ ಚೀನಾ ಹಿಡಿತ ಸಾಧಿಸಲಿದೆ. ಇದರಿಂದ ಭಾರತ ಮತ್ತು ಬಂಗ್ಲಾ ದೇಶದ ಆರ್ಥಿಕತೆಯ ಮೇಲೆ ಪರಿಣಾಮ ಬೀರಲಿದೆ ಎಂದು ಹೇಳಲಾಗುತ್ತಿದೆ. ಉಭಯ ರಾಷ್ಟçಗಳ ನಡುವಿನ ದ್ವಿಪಕ್ಷೀಯ ಸಂಬAಧ ಬಿಗಡಾಯಿಸಿದ ಸಂದರ್ಭಗಳಲ್ಲಿ ಭಾರತದ ಮೇಲೆ ಹಿಡಿತ ಸಾಧಿಸಲು ಈ ಆಣೆಕಟ್ಟು ಒಂದು ಸಾಧನವನ್ನಾಗಿ ಚೀನಾ ಬಳಸಬಹುದು ಎಂಬ ಅಭಿಪ್ರಯ  ರಾಜತಾಂತ್ರಿಕ ತಜ್ಞರು ವ್ಯಕ್ತಪಡಿಸಿದ್ದಾರೆ.

ನೀರಿನ ಹರಿವು ಸ್ಥಗಿತಗೊಳಿಸುವ ಸಂಚು : ಈಶಾನ್ಯ ಭಾರತ ಮತ್ತು ಬಂಗ್ಲಾ ದೇಶದ ಪಾಲಿಗೆ ಬ್ರಹ್ಮಪುತ್ರ ಜೀವ ನದಿ. ಭಾರತದ ಸಿಹಿ ನೀರಿನ ಸಂಪನ್ಮೂಲದ ಪೈಕಿ ಶೇ.೩೦ರಷ್ಟು ಬ್ರಹ್ಮಪುತ್ರ ನದಿಯ ಪಾಲಿದೆ. ¨sರತದ ಗಡಿ ಭಾಗದಲ್ಲಿ ಚೀನಾ ಆಣೆಕ್ಟು ನಿರ್ಮಿಸಿದರೆ, ಭಾರತ ಮತ್ತು ಬಂಗ್ಲಾ ದೇಶಗಳತ್ತ ನದಿ ನೀರಿನ ಹರಿವು ಕುಂಠಿತವಾಗಿ, ಬೇಸಿಗೆ ಅವಧಿಯಲ್ಲಿ ನೀರಿನ ಹರಿವು ನಿಂತು ಎರಡೂ ರಾಷ್ಟçಗಳಿಗೂ ನೀರಿನ ಕೊರತೆ ಕಾಡಬಹುದು. ಇದರಿಂದ ಕೃಷಿ ಚಟುವಟಿಕೆಗಳಿಗೂ ಹಿನ್ನೆಡೆಯಾಗಿ, ಆರ್ಥಿಕಕತೆಯ ಮೇಲೆ ಪರಿಣಾಮವಲ್ಲದೇ, ಕುಡಿಯುವ ನೀರಿನ ಸಮಸ್ಯೆಯೂ ತಲೆದೋರಬಹುದು.

ಕೆಲವು ವರ್ಷಗಳಿಂದೀಚೆಗೆ ಪ್ರತಿ ಮಳೆಗಾಲದಲ್ಲಿ ಬ್ರಹ್ಮಪುತ್ರ ನದಿಯು ಉಕ್ಕೇರಿ ಆಸ್ಸಾಮ್, ಅರುಣಾಚಲ ಪ್ರದೇಶ, ಮೇಘಾಲಯದಂತಹ ನದಿಯ ಅಚ್ಚುಕಟ್ಟು ಪ್ರದೇಶದ ರಾಜ್ಯಗಳು ಪ್ರವಾಹಕ್ಕೆ ಒಳಗಾಗುತ್ತಿವೆ. ಮುಂಗಾರು ಅವಧಿಯಲ್ಲಿ ಚೀನಾವು ಆಣೆಕಟ್ಟೆಯಿಂದ ಏಕಾಏಕಿ ನೀರು ಬಿಟ್ಟರೆ, ಭಾರತದಲ್ಲಿ ಪ್ರವಾಹ ಸ್ಥಿತಿ ಇನ್ನಷ್ಟು ಬಿಗಡಾಯಿಸಿ, ಈಶಾನ್ಯ ರಾಜ್ಯಗಳು ನೆರೆಯಿಂದ ತತ್ತರಿಸಬಹುದು ಎಂದು ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.

ಆಣೆಕಟ್ಟು ನಿರ್ಮಿಸಲು ಗುರುತಿಸಿರುವ ಜಾಗ, ಭೂಕಂಪನ ಸಂಭವನೀಯತೆ ಪ್ರದೇಶ (ಭೂಪದರ ತಟ್ಟೆಗಳು (ಟೆಕ್ಟೋನಿಕ್ ಪ್ಲೇಟ್ಸ್) ರೇಖೆಗಳು ಇಲ್ಲಿ ಹಾದು ಹೋಗಿವೆ)  ಎಂದು ಹೇಳಲಾಗಿದೆ. ಕಡಿದಾದ, ಆಳವಾದ ಕಂದಕಗಳಲ್ಲಿ ಭಾರೀ ಪ್ರಮಾಣದಲ್ಲಿ ಮಣ್ಣು ಕೊರೆಯುವುದು, ನಿರ್ಮಾಣ ಕಾಮಗಾರಿ ನಡೆಸುವುದು ಯಾವತ್ತು ಸವಾಲಿನ ಕೆಲಸ. ಇದು ಭೂಕಂಪನ, ಭೂಕುಸಿತದಂತಹ ವಿಪತ್ತಿಗೆ ಕಾರಣವಾಗಬಹುದು ಎಂದು ಚೀನಾ ವಿಜ್ಞಾನಿಗಳೇ ಎಚ್ಚರಿಕೆಸಿದ್ದಾರೆ. ಹಿಮಾಲಯದಲ್ಲಿ ಸಂಭವಿಸುವ ಯಾವುದೇ ವಿಪತ್ತು ಭಾರತದ ಮೇಲೂ ಪರಿಣಾಮ ಬೀರುತ್ತದೆ. ಇತ್ತೀಚಿನ ವರ್ಷಗಳಲ್ಲಿ ಹಿಮಾಲದ ಮೇಘಸ್ಪೋಟ, ಭೂಕುಸಿತ ಸಾಮಾನ್ಯವಾಗಿದೆ. ಇದರಿಂದ ದಿಢೀರ್ ಪ್ರವಾಹ ಉಂಟಾದ ನಿದರ್ಶನಗಳೂ ಇವೆ. ಹೀಗಿರುವಾಗ ಆಣೆಕಟ್ಟು ನಿರ್ಮಾಣ ಸಂದರ್ಭದಲ್ಲಿ ಅಥವಾ ಅನಂತರ ಯಾವುದೇ ಅವಘಡ ಜರುಗಿದರೂ ಅರುಣಾಚಲ ಪ್ರದೇಶ, ಆಸ್ಸಾಮ್ ಮೇಲೆ ಅದರ ಪರಿಣಾಮ ಆಗದೇ ಇರದು. 

`ನನ್ನ ಹಕ್ಕು' ಎಂದಿರುವ ಚೀನಾ : ಬ್ರಹ್ಮಪುತ್ರ ನದಿಯು ಭಾರತದ ಅರುಣಾಚಲ ಪ್ರದೇಶ ಮತ್ತು ಆಸ್ಸಾಮ್ ರಾಜ್ಯಗಳ ಮೂಲಕ ಹರಿಯುತ್ತದೆ. ಅರುಣಾಚಲ ಪ್ರದೇಶದ ಹಲವು ಭಾಗಗಳನ್ನು ಚೀನಾ ತನ್ನದೆಂದು ಪ್ರತಿಪಾದಿಸುತ್ತಿದೆ. ಈ ಬಗ್ಗೆ ಭಾರತದೊಂದಿಗೆ ಹಲವು ಬಾರಿ ವಾಗ್ವಾದ ನಡೆಸಿರುವದನ್ನು ಇಲ್ಲಿ ಗಮನಿಸಬಹುದು. ಚೀನಾ ಬ್ರಹ್ಮಪುತ್ರ ನದಿಯ ಮೇಲೆ ಅತಿ ದೊಡ್ಡ ಆಣೆಕಟ್ಟು ನಿರ್ಮಾಣದ ಬಗ್ಗೆ ೨೦೨೦ರಲ್ಲಿಯೇ ಭಾರತವು ಆಕ್ಷೇಪಣೆ ವ್ಯಕ್ತಪಡಿಸಿತ್ತು. ಜತೆಗೆ, ಬ್ರಹ್ಮಪುತ್ರದ ಉಪನದಿಗೆ ದೊಡ್ಡ ಆಣೆಕಟ್ಟು ನಿರ್ಮಾಣ ಆರಂಭಿಸಿತು. ಭಾರತದ ಆಕ್ಷೇಪಣೆಗೆ ಉತ್ತರಿಸಿದ್ದ ಚೀನಾ, ಯಾರ್ಲಂಗ್ ಸಗ್ಪೋ ನದಿಗೆ ಆಣೆಕಟ್ಟು ನಿರ್ಮಿಸುವುದಕ್ಕೆ ತನಗೆ ಹಕ್ಕು ಇದ್ದು, ಅದರಿಂದ ಉಂಟಗುವ ಪರಿಣಾಮಗಳ ಸಂಪೂರ್ಣ ಅರಿವೂ ಇದೆ ಎಂದು ಸಮರ್ಥಿಸಿಕೊಂಡಿತ್ತು. ಬ್ರಹ್ಮಪುತ್ರ ನದಿಯ ನೀರಿನ ಮ್ಟ, ನೀರಿನ ಲಭ್ಯತೆ ಹಾಗೂ ಮಳೆಯ ಪ್ರಮಾಣದ ಬಗ್ಗೆ ದತ್ತಾಂಶ ಹಂಚಿಕೊಳ್ಳುವ ಸಂಬAಧ ಎರಡೂ ದೇಶಗಳ ನಡುವೆ ೨೦೦೬ರಲ್ಲಿ ಒಪ್ಪಂದ ಆಗಿದೆ. ೨೦೨೩ಕ್ಕೆ ಅದು ಅಂತ್ಯಗೊAಡಿದ್ದು, ಡಿ.೧೮ರಂದು ನಡೆದಿದ್ದ ದ್ವಿಪಕ್ಷೀಯ ಮಾತುಕತೆ ಸಂದರ್ಭದಲ್ಲಿ ಈ ವಿಚಾರ ಪ್ರಸ್ತಾಪವಾಗಿದೆ ಎನ್ನಲಾಗಿದೆ.

ಆಣೆಕಟ್ಟೆಯ ನಿರ್ಮಾಣವು ಪ್ರಕೃತಿಯ ಮೇಲೆ ಗಂಭೀರ ಪರಿಣಾಮ ಬೀರಲಿದೆ. ನದಿಯ ಜೀವವೈವಿಧ್ಯಕ್ಕೆ ಧಕ್ಕೆ ತರುವುದಲ್ಲದೇ, ಹಿಮಾಲಯದ ಸೂಕ್ಷö್ಮ ಪರಿಸರ ವ್ಯವಸ್ಥೆಯನ್ನು ಹಾಳು ಮಾಡಲಿದೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.  ದೊಡ್ಡ ಆಣೆಕಟ್ಟು ಟಿಬೆಟ್‌ನ ಭೂಪ್ರದೇಶದ ಸ್ವರೂಪವನ್ನೇ ಬದಲಾಯಿಸಲಿದೆ. ಭಾರೀ ಸಂಖ್ಯೆಯ ಜನರಿಗೆ ಪುನರ್ವಸತಿ ಕಲ್ಪಿಸಬೇಕಾಗುತ್ತದೆ. ಮಣ್ಣಿನ ಸವಳಿಕೆ ಹೆಚ್ಚಾಗಿ ಹೂಳಿನ ಸಮಸ್ಯೆ ಕಾಡುತ್ತದೆ.  ಆಣೆಕಟ್ಟೆಯ ಕೆಳ ಪ್ರದೇಶಗಳಲ್ಲಿರುವ ವಿವಿಧ ಪ್ರಾಣಿಗಳ ಆವಾಸ ಸ್ಥಾನಗಳ ಮೇಲೆ ದುಷ್ಪರಿಣಾಮ ಬೀರುವುದಂತೂ ನಿಜ.

-ಎಸ್. ಆರ್. ಮಣೂರ.

ಹಿರಿಯ ಪತ್ರಕರ್ತರು ಕಲಬುರಗಿ




 


ಸುನೀತಾ ಆನಂದ ಬೀದರ ಜಿಲ್ಲೆಯ ಮೊದಲ ಮಹಿಳಾ ಛಾಯಗ್ರಾಹಕಿಗೆ ಗೌರವ ಸನ್ಮಾನ.

ಬೀದರ ಜಿಲ್ಲೆ ಹೆಮ್ಮೆ ಛಾಯಾಗ್ರಹಕಿ ಸುನೀತಾ ಆನಂದ

ಬೀದರ್ ; ಇಂದಿನ ಮೊಬೈಲ್ ಯುಗದಲ್ಲಿ ಛಾಯಾಗ್ರಾಹಕಿಯಾಗಿ ಜಿಲ್ಲೆಯಲ್ಲಿ ತಮ್ಮ ಶೈಲಿಯಲ್ಲಿ ವಿಡಿಯೋ ಗ್ರಾಫರ್ ಆಗಿ ಸೇವೆಯನ್ನು ಸಲ್ಲಿಸುತ್ತಾ ಇನ್ನೊಂದು ಕಡೆ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತ ಅಕ್ಷಯ ವೆಲ್ಫೇರ್ ಸೊಸೈಟಿಯನ್ನು ಹುಟ್ಟು ಹಾಕಿ ಸಮಾಜ ಸೇವೆ ಮಾಡುತ್ತ ಕುಟುಂಬದ ನಿರ್ವಹಣೆ ಮಾಡುತ್ತಿರುವ ಶ್ರೀಮತಿ ಸುನೀತಾ ಆನಂದ ಇಂದು ಮಾದರಿಯ ಗೃಹಿಣಿ ಎನ್ನುವುದರಲ್ಲಿ ಎರಡು ಮಾತಿಲ್ಲ..  ಒಂದು ಕಾಲದಲ್ಲಿ ಛಾಯಗ್ರಹಣ ವೃತ್ತಿ ಲಾಭದಾಯಕ ವೃತ್ತಿಯಾಗಿತ್ತು, ಸ್ಟುಡಿಯೋ ಮಾಲೀಕರು ಮತ್ತು ಅಲ್ಲಿ ನೌಕರಿ ಮಾಡುವ ಛಾಯಾಗ್ರಾಹಕರು ವೃತ್ತಿ ನಂಬಿ ಜೀವನ ಸಾಗಿಸುತಿದ್ದರು. ಆದರೆ ಪ್ರಸ್ತುತ ಸಂಧರ್ಭದಲ್ಲಿ ಸ್ಮಾರ್ಟ್ಫೋನ್ ಯುಗದಲ್ಲಿ ಅಕ್ಷರಸಹ ಸ್ಮೈಲ್ ಪ್ಲೀಸ್ ಎಂದು ಬೇರೊಬ್ಬರ ಮುಖದಲ್ಲಿ ಸದಾ ನಗುವನ್ನು ಮೂಡಿಸುವ ಛಾಯಗ್ರಾಕರ ಬದುಕು ಅತ್ಯಂತ ದುಸ್ತರವಾಗಿದೆ.

ಸಮಾರಂಭದ ಉದ್ಘಾಟನೆಯನ್ನು ಪೂಜ್ಯ ಡಾ ನಾಡೋಜ ಬಸವಲಿಂಗ ಪಟ್ಟದ್ದೆವರು ಜ್ಯೋತಿ ಬೆಳಗಿಸುವ ಮೂಲಕ ನೇರವೆರಿಸಿದರು.

ಭಾಲ್ಕಿಯಲ್ಲಿ ನಡೆದ ಸಮಾರಂಭದಲ್ಲಿ ಶ್ರೀಮತಿ ಸುನೀತಾ ಆನಂದ ಅವರಿಗೆ  ಪ್ರಶಸ್ತಿಯನ್ನು ನೀಡಿದರು. ಪೂಜ್ಯ ಡಾ. ಬಸವಲಿಂಗ ಪಟ್ಟದ್ದೆವರು. ಸಂಸದ ಸಾಗರ ಖಂಡ್ರೆ. ಶಶೀಕಲಾ ಅಶೋಕ. ನಾಗೇಶ. ಮಂಜುನಾಥ ಮೇತ್ರೆ. ಸಂತೋಷ ಸೋನಾಲೆ ಹಾಜರಿದ್ದರು.

ಛಾಯಗ್ರಾಹಕರು ಅತ್ಯಂತ ತಾಳ್ಮೆಯ ವ್ಯಕ್ತಿಗಳು, ನಮ್ಮೆಲರ ಸಂತೋಷದ ಕ್ಷಣಗಳನ್ನು ಕ್ಲಿಕೀಸಿ ನಮಗಿಂತ ಹೆಚ್ಚು ಖುಷಿಯನ್ನು ಸಂಭ್ರಮಿಸುವರು.

ಮುಖ್ಯ ಅತಿಥಿಯಾಗಿ ಬೀದರ ಸಂಸದ ಯುವ ನಾಯಕರು ಸಾಗರ ಖಂಡ್ರೆ ಆಗಮಿಸಿದರು.

    ಅವರ ಫೋಟೋ ಹಾಗೂ ವಿಡಿಯೋ ಗ್ರಾಫಿಯ ಸೇವೆಯನ್ನು ಗುರುತಿಸಿ ಪ್ರಶಸ್ತಿಗಳನ್ನು ನೀಡುತ್ತಿರುವ ಸಂಘ ಸಂಸ್ಥೆಗಳ ಕಾರ್ಯ ಅಭಿನಂದನೀಯ. ಈ ನಿಟ್ಟಿನಲ್ಲಿ ಸುನೀತಾ ಆನಂದ ಅವರಿಗೆ  ಭಾಲ್ಕಿ ಯ ಸಂಸ್ಥೆಯಾದ ಕರ್ನಾಟಕ *ಛಾಯಾಗ್ರಾಹಕರ ಸಂಘ ಮತ್ತು ಶ್ರೀ ಭಾಲ್ಕೆಶ್ವರ ಫೋಟೋಗ್ರಾಫರ್ ಅಸೋಷಿಯೇನರವರು ಹಮ್ಮಿಕೊಂಡ ವಿಶ್ವ ಛಾಯಾಗ್ರಹಣ ದಿನಾಚರಣೆಯ ಸಮಾರಂಭದಲ್ಲಿ ಸುಮಾರು ಹತ್ತು ವರುಷದಿಂದ ಬೀದರ ಮೊದಲ ಮಹಿಳಾ ಛಾಯಾಗ್ರಾಹಕಿಯಾಗಿ ಸೇವೆ ಸಲ್ಲಿಸುತ್ತಿರುವ  ಶ್ರೀಮತಿ ಸುನಿತಾ ಆನಂದರವರಿಗೆ ಸನ್ಮಾನ ಗೌರವ ನೀಡಿರುವುದು ಬೀದರ ಜಿಲ್ಲೆಗೆ  ಹೆಮ್ಮೆಯ ವಿಷಯವಾಗಿದ್ದು.  ಸುನೀತಾ ಅವರ ಸೇವೆಯನ್ನು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸಿದು ಸಮಾಜದ ಎಲ್ಲಾ ಮಹಿಳೆಯರಿಗೆ ಇದು ಮಾದರಿಯಾಗಿದೆ. ಪೂಜ್ಯ ಶ್ರೀ ನಾಡೋಜ ಡಾ!!ಬಸವಲಿಂಗ ಪಟ್ಟದೇವರು ಅಧ್ಯಕ್ಷರು ಅನುಭವ ಮಂಟಪ ಬಸವ ಕಲ್ಯಾಣ, ಶ್ರೀ ಸಾಗರ ಖಂಡ್ರೆ ಸಂಸದರು  ಲೋಕಸಭಾ ಕ್ಷೇತ್ರ ಬೀದರ್,  ಶ್ರೀಮತಿ. ಶಶಿಕಲಾ ಅಶೋಕ ಸಿಂದನಕೆರಾ ಅಧ್ಯಕ್ಷರು  ನಗರ ಸಭೆ ಭಾಲ್ಕಿ,. ಶ್ರೀ ಎಚ್. ಎಸ್. ನಾಗೇಶ್  ಅಧ್ಯಕ್ಷರು  ಕೆ. ಪಿ. ಎ.  ಬೆಂಗಳೂರು.  ಶ್ರೀ ಮಂಜುನಾಥ ಮೆತ್ರೆ. ಅಧ್ಯಕ್ಷರು  ಕೆ. ಪಿ. ಎ.  ಭಾಲ್ಕಿ, ಶ್ರೀ ಸಂತೋಷ ಸೋನಾಲೆ ಕಾರ್ಯದರ್ಶಿಕೆ. ಪಿ. ಎ.  ಭಾಲ್ಕಿ,  ಶ್ರೀ ಪವನ್ ಸಿಂಗ್ ಠಾಕೂರ್  ಅಧ್ಯಕ್ಷರು  ಕೆ. ಪಿ. ಎ. ಬೀದರ್,  ಶ್ರೀ ಮಂಜುನಾಥ ಹತ್ಗುಂದಿ ನಿರೀಕ್ಷಕರು ಕಾರ್ಮಿಕ ಇಲಾಖೆ ಭಾಲ್ಕಿ,  ಜಿಲ್ಲಾ ಹಾಗೂ ತಾಲ್ಲೂಕು  ಛಾಯಾಗ್ರಾಹಕರು ಅಪಾರ ಸಂಖ್ಯೆಯಲ್ಲಿ ಸೇರಿದರು ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ ಕಾರ್ಯದರ್ಶಿ ಓಂಕಾರ ಪಾಟೀಲ, ಸಂಗಮೇಶ ಜಾoತೆ ವೀರಭದ್ರಪ್ಪ ಉಪ್ಪಿನ ಡಾ. ಎಂ. ಜಿ. ದೇಶಪಾಂಡೆ, ಅರವಿಂದ ಕುಲಕರ್ಣಿ ವರದಿಗಾರ ಆನಂದ ಮುಂತಾದವರು ಹರುಷ ವ್ಯಕ್ತಪಡಿಸಿ ಶುಭಾಶಯಗಳನ್ನು ಕೊರಿದ್ದಾರೆ. ಸ್ವಾಗತವನ್ನು ಶ್ರೀಮತಿ ಆಶಾರಾಣಿ ಸೊನಾಳೆ ಮಾಡಿದರೆ. ರಿಪ್ಸನ ಕೋಟೆ ಪ್ರಾಸ್ತಾವಿಕ ಮಾತನಾಡಿದರು.

Thursday, 23 January 2025

ಪೂಜ್ಯ ಡಾ ಅಕ್ಕ ಗಂಗಾಂಬಿಕೆಯ ನಡೆ ಸಂಶಯಾಸ್ಪದ !

ಪೂಜ್ಯ ಡಾ ಅಕ್ಕ ಗಂಗಾಂಬಿಕೆಯ ಸಂಶಯಾಸ್ಪದ ನಡೆ ಮುಂಬರುವ ದಿನಗಳಲ್ಲಿ ಸೇಡಂನಲ್ಲಿ ಆಚರಿಸುತ್ತಿರುವ "ಭಾರತೀಯ ಸಂಸ್ಕೃತಿ ಉತ್ಸವ" ಅಕ್ಕಾ ಗಂಗಾಂಬಿಕೆ ಕಲಬುರ್ಗಿಯಲ್ಲಿ ರವಿವಾರ ವಿರೋಧ ಮಾಡಿ ಭಾಗವಹಿಸುವುದು ಬೇಡ ಎಂದು ದೊಡ್ಡ ಭಾಷಣ ಮಾಡಿ ಸೋಮವಾರ ಬೀದರದಲ್ಲಿ ಸೇಡಂ ಭಾರತೀಯ ಸಂಸ್ಕೃತಿ ಉತ್ಸವ ಪ್ರಚಾರ ವಾಹನಕ್ಕೆ ಪೂಜೆ ಸಲ್ಲಿಸಿ ಶುಭ ಕೋರಿದರು ಇದಕ್ಕೆ ಲಿಂಗಾಯತ ಸಮಾಜವು ಸಂಶಯಾಸ್ಪದವಾಗಿ ನೋಡುವಂತೆ ಮಾಡಿಕೊಟ್ಟಿದೆ. ಹೀಗಾಗಿ ಇದಕ್ಕೆ  ಸಮಾಜದಲ್ಲಿ ಯಾವುದೇ ರೀತಿಯ ಆಸ್ಪದ ನೀಡಬಾರದು ಎಂಬುದನ್ನು ಯಾರು ಮರೆಯಬಾರದು.  ಜನರು ಸಂಘಟಿತರಾಗಿ ಎಚ್ಚೆತುಕೊಳ್ಳಬೇಕು. 

ಭಾರತೀಯ ಸಂಸ್ಕೃತಿ ಉತ್ಸವ  ವಾಹನಕ್ಕೆ ಪೂಜೆ ಸಲ್ಲಿಸಿ ಗಂಗಾಂಬಿಕೆ ಚಾಲನೆ ನೀಡಿರುವುದು

ಅಕ್ಕ ಗಂಗಾಂಬಿಕೆ ಇವಾಗ ಕರ್ನಾಟಕ ರಾಜ್ಯದಲ್ಲಿ ಬಹು ಚರ್ಚಿತ ವ್ಯಕ್ತಿಯಾಗಿದ್ದಾರೆ. ದಿನಾಂಕ 19 ಜನವರಿ 2025ರಂದು ಬಹುತ್ವ ಸಂಸ್ಕೃತಿ ಭಾರತೋತ್ಸವ ಕಾರ್ಯಕ್ರಮ ಕಲಬುರ್ಗಿಯಲ್ಲಿ ಭಾಗವಹಿಸಿ ಮಾತನಾಡಿ, ಬಸವ ತತ್ವ ಸಿದ್ದಾಂತಗಳ ಮೇಲೆ ಕೆಲವು ಹಿಂದೂ ಸಂಸ್ಥೆಗಳು ಅಪಪ್ರಚಾರ ಮಾಡುತ್ತಿದ್ದಾರೆ, ಬಸವ ತತ್ವ ಸಿದ್ದಾಂತ ಹಾಳು ಮಾಡಲು ಪ್ರಯತ್ನ ಮಾಡುತ್ತಿದ್ದಾರೆ, ಅದರ ಮುಂದುವರೆದ ಭಾಗ ಸೇಡಂ ಪಟ್ಟಣದಲ್ಲಿ ಆಚರಿಸುತ್ತಿರುವ ಭಾರತೀಯ ಸಂಸ್ಕೃತಿ ಉತ್ಸವ ಆಗಿದೆ. ಆದರಿಂದ ಯಾರು ಆ ಉತ್ಸವದಲ್ಲಿ ಭಾಗವಹಿಸಬಾರದು ಎಂದು ದೊಡ್ಡ ಭಾಷಣೆ ಮಾಡಿದು ಯಾವ ಉದ್ದೇಶಕ್ಕಾಗಿ ಎಂಬುದು ಜನರ ಪ್ರಶ್ನೆಯಾಗಿದೆ. ಇಂದು ಗಂಗಾಂಬಿಕೆಯವರ ನಡೆಯನ್ನು ಸಂಶಯಕ್ಕೂ  ಎಡೆ ಮಾಡಿಕೊಟ್ಟಿದೆ.

ಮರುದಿವಸ 20 ಜನವರಿ 2025 ರಂದು ಬೀದರ ನಗರದಲ್ಲಿ ಭಾರತೀಯ ಸಂಸ್ಕೃತಿ ಉತ್ಸವ ಪ್ರಚಾರ ನಿಮಿತ್ಯ ತಯಾರು ಮಾಡಿದ್ದ ವಾಹನಕ್ಕೆ ಪೂಜೆ ಸಲ್ಲಿಸಿ ಪ್ರಾರ್ಥನೆ ಮಾಡಿ ಕಾರ್ಯಕ್ರಮ ಯಶಸ್ವಿಗಾಗಿ ಹಾರೈಸಿದ್ದಾರೆ. ಎರಡೇ ದಿನದಲ್ಲಿ ಭಿನ್ನ ಹೇಳಿಕೆ ಇದು ಒಬ್ಬ ಶರಣೆ ಅಕ್ಕ ಆಗಿದ್ದವರಿಗೆ ಶೋಭೆ ತರುವುದಿಲ್ಲ ಎಂಬುದು ಎಚ್ಚೆತುಕೊಳ್ಳಬೇಕು.. 

ಅಕ್ಕ ಗಂಗಾಂಬಿಕೆ ಶರಣೆ ಆಗಿ ಅಕ್ಕ ಅನ್ನಪೂರ್ಣ ಜೊತೆ ಸೇರಿ ಸಂಸ್ಥೆ ಕಟ್ಟಿ ಕೆಲವು ವರ್ಷ ನಂತರ ಮುನ್ನಿಸಿಕೊಂಡು ಬಸವಕಲ್ಯಾಣ ಶಿಫ್ಟ್ ಆಗಿ ಸರಕಾರಿ ಕಟ್ಟಡ ಹರಳಯ್ಯ ಗವಿ ಕಬ್ಜಾ:

ಇವರಿಗೆ ಬಸವ ತತ್ವ ಸಿದ್ದಾಂತ ಬದ್ಧತೆ ಇಲ್ಲ, ಕೇವಲ ಶೋಕಿಗಾಗಿ ಬಿಳಿ ಬಟ್ಟೆ ತೊಟ್ಟು ಪ್ರಚಾರ ಗಿಟ್ಟಿಸಿಕೊಂಡು ಕಾರ್ಯಕ್ರಮಗಳನ್ನು ಏರ್ಪಡಿಸಿ  ಹಣ ಸಂಪಾದಿಸುವ ದಾರಿ ಆಗಿದೆ. ಲಿಂಗಾನಂದ ಮಹಾಸ್ವಾಮೀಜಿ ಮತ್ತು ಮಾತಾಜಿ ಮಾತೆ ಮಹಾದೇವಿ ಶಿಷ್ಯರಾದ ಅಕ್ಕ ಗಂಗಾಂಬಿಕೆ ಬಸವ ದಳ ಜೊತೆ ನಂಟು ಮುರಿದುಕೊಂಡು ತಮ್ಮ ಸೋದರ ಅತ್ತೆಯ ಮಗಳಾದ ಪೂಜ್ಯ ಅಕ್ಕಾ ಅನ್ನಪೂರ್ಣ ತಾಯಿ ಜೊತೆಗೂಡಿ ಬಸವ ಪ್ರತಿಷ್ಠಾನ ಎನ್ನುವ ಸಂಸ್ಥೆಯನ್ನು ಸ್ಥಾಪಿಸಿದ್ದರು. ಅಕ್ಕಾ ಅನ್ನಪೂರ್ಣ ಶಿಕ್ಷಕಿಯಾಗಿದ್ದರು, ಅಕ್ಕ ಗಂಗಾಂಬಿಕೆ ಅಕ್ಕಮಹಾದೇವಿ ಕಾಲೇಜ್ ನಲ್ಲಿ ಲೆಕ್ಚರ್ ಆಗಿದ್ದಾರೆ, ಅಕ್ಕ ಅನ್ನಪೂರ್ಣ ತಮ್ಮ ನೌಕರಿ ರಾಜಿನಾಮೆ ಕೊಟ್ಟು ಸಂಪೂರ್ಣ ಬಸವ ತತ್ವ ಪ್ರಚಾರ ಮಾಡಲು ತಮ್ಮ ಜೀವನ ಅರ್ಪಿಸಿಕೊಂಡರು, ಆದರೆ ಅಕ್ಕ ಗಂಗಾಂಬಿಕೆ ಮಾತ್ರ ಕೈತುಂಬಾ ಸಂಬಳ ಕೊಡುವ ನೌಕರಿ ಬಿಡುವದು ಬೇಡ ಎಂದು ಬಿಡುವಿನಲ್ಲಿ ಮಾತ್ರ ಅಕ್ಕ ಅನ್ನಪೂರ್ಣ ಜೊತೆ ಬಸವ ತತ್ವ ಪ್ರಚಾರ ಮಾಡುವಲ್ಲಿ ಕೈಜೋಡಿಸುತ್ತಿದ್ದರು, ಇವರಿಗೆ ಅಕ್ಕಿಯ ಮೇಲು ಪ್ರೀತಿ ನೆಂಟರ ಮೇಲೆಯೂ ಪ್ರೀತಿ ಅಂದಂಗೆ ಆಯಿತು. ಸರಕಾರಿ ಸಂಬಳ ತೆಗೆದುಕೊಳ್ಳುವವರು ಯಾವುದೇ ಲಾಭದಾಯಕ ಸಂಸ್ಥೆ ಅಥವಾ ಏನ್ ಜಿ ಒ ಸ್ಥಾಪನೆ ಮಾಡುವದು ಅಪರಾಧ ಆಗಿದೆ ಯಾರಾದರೂ ಈ ಬಗ್ಗೆ ಪ್ರಕರಣ ದಾಖಲಿಸಿದರೆ ಖಂಡಿತವಾಗಿ  ಸಂಕಷ್ಟಕ್ಕೆ ಸಿಲುಕಬಹುದು. ಮಾತೇ ಮಹಾದೇವಿ ಜೊತೆ ಹೊರ ಬಂದ ಮೇಲೆ ಮಾತಾಜಿಯವರ ಶರಣ ಉದ್ಯಾನವನ್ನು ಇಬ್ಬರು ಸೇರಿ ಕಬಳಿಸಿಕೊಂಡರು, ನಿಜವಾಗಿಯೂ ಅದು ಕಾಯ್ದಿಟ್ಟ ಸರಕಾರಿ ಉದ್ಯಾನವನ ಇದೆ. ಇಬ್ಬರು ಸೇರಿ ಕೆಲವೇ ವರ್ಷಗಳಲ್ಲಿ ಶಿಷ್ಯಂದಿರ ಬಳಗ ಹಾಗೂ ಶ್ರೀಮಂತರಿಂದ ಹಣ ದಾನದ ರೂಪದಲ್ಲಿ ಪಡೆದು ಸಂಸ್ಥೆ ಹೆಮ್ಮರವಾಗಿ ಬೆಳೆಸಿ ನೂರಾರು ಕೋಟಿ ಆಸ್ತಿ ಮಾಡಿದ್ದರು, ಹಲವಾರು ಏಕ್ಕರೆ ಜಮೀನಿನಲ್ಲಿ ಬಸವ ಗಿರಿ ಅನ್ನುವ ಕಟ್ಟಡ ನಿರ್ಮಾಣ ಮಾಡಿದರು, ಜಮೀನು ಖರೀದಿ ರಿಯಲ್ ಎಸ್ಟೇಟ್ ಉದ್ಯೋಗ ಪ್ರಾರಂಭ ಆಯಿತು. ಅಕ್ಕಾ ಅನ್ನಪೂರ್ಣ ಅವರ ಪ್ರವಚನ, ಸಾಹಿತ್ಯ ಬರೆಯುವ ಪುಸ್ತಕಗಳ ಮುಖಾಂತರ ನಾಡಿನ ತುಂಬಾ ಹೆಸರಾಯಿತು, ಆವಾಗ ಅಕ್ಕ ಗಂಗಾಂಬಿಕೆ ಹೊಟ್ಟೆ ಕಿಚ್ಚು ಪ್ರಾರಂಭವಾಯಿತು , ಕೋಟಿ ಕೋಟಿ ಆಸ್ತಿ ಆದ ಮೇಲೆ ಇವರ ಮಧ್ಯ ಆಸ್ತಿ ಕಾಳಗ ಪ್ರಾರಂಭವಾಯಿತು, ಇದಕ್ಕೆ ಶಿಷ್ಯರ ಭಾಗ ಎರಡು ತುಂಡಾಗಿ ಜಗಳಕ್ಕೆ ಮತ್ತಿಷ್ಟು ಪೆಟ್ರೋಲ್ ಸುರಿದರೂ. ಅಕ್ಕಾ ಗಂಗಾಂಬಿಕೆ ಕೆಲವು ಕಿಡಿಗೇಡಿಗಳ ಮಾತಿಗೆ ಬಲಿಯಾಗಿ ಅಥವಾ ಬಸವಕಲ್ಯಾಣದಲ್ಲಿ ಹರಳಯ್ಯ ಗವಿಯ ಮೇಲೆ ಕಣ್ಣು ಬಿದ್ದು ಅದನ್ನು ಕಬಳಿಸುವ ಹುನ್ನಾರ ಮಾಡಿ ತಮ್ಮ ವಾಸವನ್ನು ಬಸವಕಲ್ಯಾಣಕ್ಕೆ ಸ್ಥಳಾಂತರಿಸಿ ಕೊಂಡರು, ಹರಳಯ್ಯ ಸಮಾಜದ ಸಂಸ್ಥೆಯಲ್ಲಿ ಇವರು ತಮ್ಮ ಸ್ವಂತ ತಾಯಿ ಸಮೇತ ವಾಸಿಸುತ್ತಿದ್ದಾರೆ. ಬಸವಕಲ್ಯಾಣದಲ್ಲಿ  ಮತ್ತೆ ತಾಯಿ ಮಗಳು ಸೇರಿ ಒಂದು ಹೊಸ ಟ್ರಸ್ಟ್ ಮಾಡಿದ್ದಾರೆ, ಅದರಲ್ಲಿ ಅಕ್ಕ ಅನ್ನಪೂರ್ಣ ಅವರಿಗೆ ಸೇರಿಸಿಕೊಂಡಿಲ್ಲ. 

ಅಕ್ಕ ಅನ್ನಪೂರ್ಣ ತಾಯಿ ಪೂಜ್ಯ ಶ್ರೀ ಪ್ರಭುದೇವರನ್ನು ಉತ್ತರ ಅಧಿಕಾರಿ ನೇಮಿಸಿದ್ದು, ಜಗಳ ಮತ್ತಿಷ್ಟು ಉಲಬಣ: 

ಅಕ್ಕ ಅನ್ನಪೂರ್ಣ ತಾಯಿ ಪ್ರಭುದೇವ ಅವರನ್ನು ತನ್ನ ಉತ್ತರ ಅಧಿಕಾರಿಯಾಗಿ ನೇಮಿಸಿ ಅವರಿಗೆ ನೌಕರಿ ಬಿಡಿಸಿ ಜಂಗಮ ದೀಕ್ಷೆ ಕೊಟ್ಟರು. ಇದಕ್ಕೆ ಅಕ್ಕ ಗಂಗಾಂಬಿಕೆ ಕೆರಳಿದರು, ಕ್ಯಾತೆ ತೆಗೆಯಲು ಪ್ರಾರಂಭ ಮಾಡಿದರು, ಪ್ರಭುದೇವ ಜಂಗಮ ಜಾತಿಯವರು ಹಾಗೂ ನಮ್ಮ ಸಂಸ್ಥೆ ಲಿಂಗಾಯತ ಮಹಿಳೆಯರ ಸಂಸ್ಥೆ ಪುರುಷರಿಗೆ, ಜಂಗಮರಿಗೆ ಅವಕಾಶ ಬೇಡ ಎಂದು ಜಗಳ ದೊಡ್ಡ ಮಟ್ಟಕ್ಕೆ ಬೆಳೆಯಿತು. ಸಂಸ್ಥೆಯಲ್ಲಿ ತಿಂದು ಉಂಡು ಕಬಳಿಸಿ ಹಣ ಸಂಪಾದನೆ ಮಾಡಿ ದಪ್ಪಗೆ ಆದ ಶಿಷ್ಯರು ಇಬ್ಭಾಗವಾಗಿ ಎರಡು ಕಡೆ ಸೇರಿ ಸಾರ್ವಜನಿಕವಾಗಿ ಜಗಳ ಕೇಳಿ ಬಂತು. ಬಸವಣ್ಣನವರ ಹೆಸರ ಮೇಲೆ ಕಟ್ಟಿಕೊಂಡ ಸಂಸ್ಥೆಯ ಪದಾಧಿಕಾರಿಗಳು  ಶ್ರೀಮಂತ ಮುಖಂಡರು ಗಂಗಾಂಬಿಕೆ ಜೊತೆ ಕೈಜೋಡಿಸಿದರು, ಅಕ್ಕ ಅನ್ನಪೂರ್ಣ ಅವರು ಬಹಳ ನಿಷ್ಠುರ ಆಗಿದ್ದರು, ಇಂತಹ ವ್ಯಕ್ತಿಗಳ ನಡಾವಳಿ ಕಂಡು ಹಾಗೂ ಸಂಸ್ಥೆಯ ಹಣ ನುಂಗಿದಕ್ಕೆ ಸಂಸ್ಥೆಯಿಂದ ದೂರ ಮಾಡಿದ್ದರು, ಅವರೆಲ್ಲರೂ ದುಷ್ಮನ ಕಾ ದುಷ್ಮನ್ ದೋಸ್ತ ಎಂದು ಕೂಡಿಕೊಂಡರು. ಬಸವ ಪ್ರತಿಷ್ಠಾನ ಕೆಲವೇ ವರ್ಷಗಳಲ್ಲಿ ಇಷ್ಟು ದೊಡ್ಡದಾಗಿ ಬೆಳೆದಿದ್ದು ಎಲ್ಲರಿಗೂ ಹೊಟ್ಟೆ ಕಿಚ್ಚಾಗಿತ್ತು. ಸಂಸ್ಥೆಯ ಶ್ರೀಮಂತ  ಶಿಷ್ಯರು ಹಣ ಹೂಡಿಕೆ ಮಾಡಿ ಅಕ್ಕ ಅನ್ನಪೂರ್ಣ ಅವರ ಹೆಸರ ಮೇಲೆ ಜಮೀನು ಖರೀದಿ ಮಾಡಿ ಬಡಾವಣೆಗಳನ್ನು ನಿರ್ಮಾಣ ಮಾಡಿ ಹಣ ಸಂಪಾದಿಸುವ ಕೆಲಸ ಮಾಡುತ್ತಿದ್ದರೂ, ಅಕ್ಕ ಅನ್ನಪೂರ್ಣ ಹತ್ತಿರ ಹಣ ಪಡೆದು ಕೆಲವರು ಉದ್ಯೋಗ ವ್ಯವಹಾರಕ್ಕೆ ದೂರಬಳಕೆ ಮಾಡಿಕೊಂಡರು, ಹಣಕಾಸು ವ್ಯವಹಾರದಲ್ಲಿ ವೈಮನಸ್ಸು ಆಗಿತ್ತು. ಎಲ್ಲರೂ ಸೇರಿ ಅಕ್ಕ ಅನ್ನಪೂರ್ಣ ಅಕ್ಕ ಗಂಗಾಂಬಿಕೆ ಜಗಳ ಜೋರು ಮಾಡಿಸಿದ್ದರು. 

ಅಕ್ಕ ಅನ್ನಪೂರ್ಣ ತಾಯಿಯ ಕ್ಯಾನ್ಸರ್ ಆಗಿ ಆರೋಗ್ಯ ತೀರಾ ಕೆಟ್ಟಿತು: 

ಅಕ್ಕ ಅನ್ನಪೂರ್ಣ ಅವರ ಆರೋಗ್ಯ ಕೆಟ್ಟಿತು, ನಾನು ಸಾಯುತ್ತೇನೆ ಅನ್ನುವ ಅಳಕು ಹುಟ್ಟಿತು, ಆದರಿಂದ ಅವರು ಎಲ್ಲರಿಗೂ ವಾಗ್ದಾನದಂತೆ ಪ್ಲಾಟ್ ಜಮೀನು ಎಲ್ಲರ ಹೆಸರಿನ ಮೇಲೆ ಮಾಡಿಕೊಟ್ಟರು, ಹಾಗೂ ಅಕ್ಕ ಗಂಗಾಂಬಿಕೆ ಮತ್ತು ಪ್ರಭುದೇವರಿಗೆ ತಮ್ಮ ಸಂಸ್ಥೆ ಹಂಚಿಕೆ ಮಾಡಿಕೊಟ್ಟರು. ಸಂಪೂರ್ಣ ಆಸ್ತಿ ನನಗೆ ಬೇಕು, ಪ್ರಭೂದೇವರನ್ನು ನಮ್ಮ ಸಂಸ್ಥೆಯಿಂದ ಹೊರ ಹಾಕಬೇಕು ಎಂದು ಅಕ್ಕ ಗಂಗಾಂಬಿಕೆ ಕ್ಯಾನ್ಸರ್ ಪೀಡಿತ ಅಕ್ಕ ಅನ್ನಪೂರ್ಣ ಮೇಲೆ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದರು, ಮತ್ತೆ ಬೇರೆಯವರ ಕುಮ್ಮಕ್ಕಿನಿಂದ ಅಕ್ಕ ಅನ್ನಪೂರ್ಣ, ಪ್ರಭುದೇವರು ಮತ್ತು ಸಂಗಡಿಗರ ಮೇಲೆ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಮೊಕದ್ದಮೆ ಹೂಡಿದ್ದರು. ಆಸ್ತಿ ಹಣ ಅಂತಸ್ತು ಮೋಹದಲ್ಲಿ ಇಬ್ಬರು ಜಂಗಮ ಶರಣ ದೀಕ್ಷೆ ಪಡೆದು ಸನ್ಯಾಸಿ ಆಗಿದ್ದು ನಗೆ ಪಾಟಲಕ್ಕೆ ಗುರಿ ಆಗಿ ಸಾರ್ವಜನಿಕರ ನಿಂದನಗೆ ಗುರಿ ಆದರು. ಇವರ ಹೇಳುತ್ತಿರುವ ಪ್ರವಚನಕ್ಕೂ ಇವರು ಆಡುತ್ತಿರುವ ಬೀದಿ ರಂಪಾಟ ಜಗಳಕ್ಕೂ ಜನ ಬೇಸತ್ತು  ಇವರು ನಿಜವಾಗಿಯೂ ಬಸವಣ್ಣನವರ ಅನುಯಾಯಿಗಳು ಎಂದು ಪ್ರಶ್ನೆ ಮಾಡುತ್ತಿದ್ದರು. ಅಕ್ಕ ಅನ್ನಪೂರ್ಣ ಅವರು ಆಸ್ಪತ್ರೆಯಲ್ಲಿ ಸಾವಿನ ಜೊತೆ ಹೋರಾಟ ಮಾಡುತ್ತಿದ್ದಾಗ ಕರುಣೆಯ ಇಲ್ಲದ ಕೆಲವು ಬೀದರ ನಗರದ ಸ್ವಯಂಘೋಷಿತ ಲಿಂಗಾಯತ ಪ್ರತಿಷ್ಠಿತ ಶ್ರೀಮಂತ  ವ್ಯಕ್ತಿಗಳು ಗಂಗಾಂಬಿಕೆ ಬೆನ್ನಿಗೆ ನಿಂತು, ದಿನ ನಿತ್ಯ ಸಭೆಗಳನ್ನು ಮಾಡಿ ಪತ್ರಿಕೆ ಹೇಳಿಕೆಗಳು ಕೊಟ್ಟು, ಸಾಯುವ ಸಂದರ್ಭದಲ್ಲಿ ಅಕ್ಕ ಅನ್ನಪೂರ್ಣ ಅವರಿಗೆ  ಕೆಟ್ಟ ಹೆಸರು ತರಲು ಸಂಪೂರ್ಣ ಪ್ರಯತ್ನ ಮಾಡಿದ್ದರು, ಅನಾರೋಗ್ಯದಲ್ಲಿದ ಅಕ್ಕಳಿಗೆ ಮತ್ತಿಷ್ಟು ಕಿರುಕುಳ ಕೊಟ್ಟರು. ಜನ ಇದನ್ನು ಕಂಡು ಕ್ಯಾನ್ಸರ್ ಪೀಡಿತ ಒಬ್ಬ ಸನ್ಯಾಸಿ ಮಹಿಳೆಗೆ ಕಿರುಕುಳ ಕೊಡುವದು ನೋಡಿ ನೊಂದು ಹೋದರು. ಕ್ಯಾನ್ಸರ್ ಗುಣಮುಖ ಆಗಿ ಬಂದ ಮೇಲೆ ಅಕ್ಕ ಗಂಗಾಂಬಿಕೆ ಅವರ ಅನುಯಾಯಿಗಳು ಸೇರಿ ಅಕ್ಕ ಅನ್ನಪೂರ್ಣ ಅವರ ಆಶ್ರಮ ಕಬಳಿಸುವ ಪ್ರಯತ್ನ ಮಾಡಿದ್ದರು, ಅಲ್ಲಿಯೂ ಇಬ್ಬರ ಮಧ್ಯೆ ಜಗಳ ಬೈಯುವದು ವಿಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿ ಲಿಂಗಾಯತ ಸಮಾಜದ ಹೆಸರು ಹಾಳು ಮಾಡಿದ್ದರು. ಸಾವಿಗಿಂತ ಮೊದಲು ಅಕ್ಕ ಅನ್ನಪೂರ್ಣ ತನ್ನ ಕೊನೆಯ ಇಚ್ಚೆಯಂತೆ ಕೂಡಲಸಂಗಮದಲ್ಲಿ ಖಾವಿ ಧರಿಸಿ ಮತ್ತೆ ಪ್ರಭುದೇವರಿಗೂ ಖಾವಿ ನೀಡಿ ಗುರು ಭೋದನೆ ಮಾಡಿದರು. 

ಅಕ್ಕ ಅನ್ನಪೂರ್ಣ ಸಾವಿನಲ್ಲಿಯೂ ರಾಜಕೀಯ ಮತ್ತು ರಂಪಾಟ: 

ಅಕ್ಕಾ ಸಾವಿನ ದಿವಸ ಕೂಡ ಪೂಜ್ಯರ ಮಠಾಧೀಶರ ಸಾರ್ವಜನಿಕರ ಎದುರೇ ರಂಪಾಟ ಆದವು. ಮರು ದಿವಸವೇ ಅಕ್ಕ ಗಂಗಾಂಬಿಕೆ ಶರಣ ಉದ್ಯಾನದಲ್ಲಿ ತಮ್ಮ ಬೆಂಬಲಿತ ಲಿಂಗಾಯತ ಮುಖಂಡರ, ಲಿಂಗಾಯತ ಶ್ರೀಮಂತರ ಹಿರಿಯರ ಸಭೆ ಕರೆದು, ಅನ್ನಪೂರ್ಣ ಅವರ ಸಂಪೂರ್ಣ ಆಸ್ತಿ ನನಗೆ ಬರಬೇಕು ಇದರ ಹೋರಾಟಕ್ಕಾಗಿ ಒಬ್ಬ ಲಿಂಗಾಯತ ಹಿರಿಯರನ್ನು ಸಂಚಾಲಕರಾಗಿ ನೇಮಿಸಿದರು. ಸಂಚಾಲಕರು ಅಕ್ಕ ಅನ್ನಪೂರ್ಣ ತಾಯಿಯವರ ಸಮಾಧಿ ಮೇಲೆ ಏನು ಕಟ್ಟಡ ಕಟ್ಟಬಾರದು ಎಂದು ಸಮಾಧಿ ಸ್ಥಳಕ್ಕೆ ಹೋಗಿ ಪ್ರಭುದೇವರು ಅವರ ಸಂಗಡಿಗರಿಗೆ ತಾಕೀತು ಮಾಡಿದರು. ಇದು ಎಂತಹ ವಿಪರ್ಯಾಸವೆಂದರೆ ಮಾತೆಗೆ ಸಾವಿನಲ್ಲಿಯೂ ರಾಜಕೀಯ ಮಾಡಿದು ನಾವು ಕಂಡಿದ್ದೇವೆ. ಇದೆಲ್ಲ ನೋಡಿದಾಗ ಇವರೆಲ್ಲ ಸನ್ಯಾಸ ದೀಕ್ಷೆ ಪಡೆದು ಬಸವ ತತ್ವ ಸಿದ್ದಾಂತ ಪ್ರಚಾರ ಮಾಡುತ್ತಿರುವದು ಕೇವಲ ಮೋಜಿಗಾಗಿ ಹಣ ಅಂತಸ್ತಿಗಾಗಿ ಎಂದು ಜನ ಛಿಮಾರಿ ಹಾಕಿದ್ದರು. 

ಬಸವ ಪರ ಸಂಘಟನೆಗಳು :  ಪೂಜ್ಯ ಅಕ್ಕ ಗಂಗಾಂಬಿಕೆಯ ಸಭೆ ಹಾಗೂ ಸಮಾರಂಭ ಬಹಿಷ್ಕಾರ :

ಪೂಜ್ಯ ಅಕ್ಕ ಗಂಗಾಂಬಿಕೆಯ ವಿರೋಧ ಅನೇಕ ಬಸವ ಪರ ಸಂಘಟನೆಗಳು ಅವರ ಸಭೆ ಹಾಗೂ ಸಮಾರಂಭಗಳಲ್ಲಿ ಭಾಗವಹಿಸುವುದಿಲ್ಲ ಎಂದು ಬಹಿಷ್ಕಾರ ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಅನೇಕ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿರುವುದು ಹಾಗೂ ಮುಂದಿನ ದಿನಗಳಲ್ಲಿ ವಚನ ವಿಜಯೋತ್ಸವದಲ್ಲಿ ಯಾರು ಭಾಗವಹಿಸಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ ಹಾಗೂ ಮುಂದಿನ ದಿನಗಳಲ್ಲಿ ಲಿಂಗಾಯತ ಸಮಾಜದ ಸಭೆಯಲ್ಲಿ ಆಹ್ವಾನಿಸಬಾರದು ಎಂದು ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಎರಡು ದಿನದಿಂದ ನಾವು ನೋಡುತ್ತಿರುವ ದೃಶ್ಯವಾಗಿದೆ.

ಇಂದು ಕೂಡ ಇಂತವರು ಲಿಂಗಾಯತ ಧರ್ಮ ಹೆಸರ ಮೇಲೆ ಬಸವ ತತ್ವ ಸಿದ್ದಾಂತ ಪ್ರಚಾರ ಮಾಡುತ್ತಿರುವದು ಕೇವಲ ದುಡ್ಡಿಗಾಗಿ ಮಾತ್ರ ಎಂಬುದಿ ಯಾರು ಮರೆಯುವಂತಿಲ್ಲ.  ಅದು ಬಿಟ್ಟು ಯಾವುದೇ ಬದ್ಧತೆಯಿಲ್ಲ, ಯಾವುದೇ ಆಚರಣೆ ಇಲ್ಲ, ನುಡಿದಂತೆ ನಡೆದು ತೋರಿಸುವ ಗುಣಗಳು ಇಲ್ಲ,  ಇಂದು ಎಲ್ಲಾ ವೇಷಧಾರಿಗಳು ಮಾತ್ರ ಸಮಾಜದಲ್ಲಿ ಬಸವಣ್ಣನವರ ಹೆಸರಿನ ಮೇಲೆ ಅವರವರ ಅಂಗಡಿಗಳು ತೆಗೆದುಕೊಂಡು ವ್ಯಾಪಾರ ಮಾಡಿಕೊಂಡು ಚನ್ನಾಗಿ ಸಂಪಾದನೆ ಮಾಡಿ ನಿಜವಾದ ಬಸವಣ್ಣನವರ ತತ್ವ ಸಿದ್ದಾಂತಕ್ಕೆ ತಿಲ್ಲಾಂಜಲಿ ಇಡುತ್ತಿರುವುದು ಲಿಂಗಾಯತ ಸಮಾಜವು ಎಂದಿಗೂ ಕ್ಷೇಮಿಸಲಾಗದ ಅಪರಾಧ.. ಮುಂದಿನ ದಿನಗಳಲ್ಲಿ ಶಿವಶರಣರ ಹಾಗೂ ವಚನ ಸಾಹಿತ್ಯ ಮತ್ತು ಬಸವಣ್ಣನವರ ತತ್ವ ಸಂದೇಶಗಳನ್ನು ಪ್ರಸಾರ. ಪ್ರಚಾರ ಮಾಡುವ ಸಮಾಜಮುಖಿ ಚಿಂತಕರಿಗೆ ಮಾತ್ರ ಅವಕಾಶವನ್ನು ನೀಡಬೇಕು ಸ್ವಾರ್ಥಿಗಳನ್ನು ನೇರವಾಗಿ ಧಿಕ್ಕರಿಸಿ ಸಮಾಜದ ಏಳಿಗೆಗಾಗಿ ಎಲ್ಲರು ಶ್ರಮಿಸಬೇಕು ಎಂಬುದು ಶೋಧವಾಣಿ ಆಶಯ..

Tuesday, 21 January 2025

ತುಬಚಿ- ಬಬಲೇಶ್ವರ ಏತ ನೀರಾವರಿ ಯೋಜನೆ 3,048 ಎಕರೆ ಸ್ವಾಧೀನ, ಹಣ ಬಿಡುಗಡೆಗೆ ಸೂಚನೆ: ಎಂ.ಬಿ.ಪಾಟೀಲ

ವಿಜಯಪುರ ಜ. 21 : ವಿಜಯಪುರ ಜಿಲ್ಲೆಯ ತುಬಚಿ- ಬಬಲೇಶ್ವರ ಏತ ನೀರಾವರಿ ಯೋಜನೆಯ ಕಾಮಗಾರಿ ಮುಗಿದು, ಕಾಲುವೆಗಳಲ್ಲಿ ನೀರು ಹರಿಯುತ್ತಿದೆ. ಆದರೂ ತಾಂತ್ರಿಕ ಕಾರಣಗಳಿಂದಾಗಿ 3,048 ಎಕರೆ ಭೂಸ್ವಾಧೀನ ಪ್ರಕ್ರಿಯೆ ಮುಗಿದಿಲ್ಲ. ಈ ಸಂಬಂಧ ಕೂಡಲೇ ಅಗತ್ಯ ಕ್ರಮವಹಿಸಿ, 457 ಕೋಟಿ ರೂಪಾಯಿ ಬಿಡುಗಡೆ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಅವರು ಕರ್ನಾಟಕ ನೀರಾವರಿ ನಿಗಮದ ಅಧಿಕಾರಿಗಳಿಗೆ ಸೂಚಿಸಿದರು.

ಭೂಸ್ವಾಧೀನ ಪ್ರಕ್ರಿಯೆ ನೆನಗುದಿಗೆ ಬಿದ್ದಿರುವ ಬಗ್ಗೆ ವಿಧಾನಸೌಧದ ತಮ್ಮ ಕಚೇರಿಯಲ್ಲಿ ಸಂಬಂದಪಟ್ಟ ಎಲ್ಲ ಅಧಿಕಾರಿಗಳ ಸಭೆ ನಡೆಸಿದ ಸಚಿವರು, ಭೂಸ್ವಾಧೀನಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಈ ಯೋಜನೆಯಿಂದ 52,700 ಎಕರೆಗೆ ನೀರಾವರಿ ಸೌಲಭ್ಯ ಸಿಗಲಿದೆ. ಇದರಲ್ಲಿ 37,200 ಎಕರೆ ಜಮೀನು ನಾನು ಪ್ರತಿನಿಧಿಸುವ ಬಬಲೇಶ್ವರ ಕ್ಷೇತ್ರದ ವ್ಯಾಪ್ತಿಯಲ್ಲೇ ಇದೆ. ಈಗಾಗಲೇ ವಿತರಣಾ ಕಾಲುವೆ, ಉಪಕಾಲುವೆ, ಹೊಲಗಾಲುವೆ ಕಾಮಗಾರಿಗಳೆಲ್ಲ ಮುಗಿದು ನೀರು ಹರಿಯುತ್ತಿದೆ. ಇದರ ಪ್ರಯೋಜನ ರೈತರಿಗೂ ಆಗುತ್ತಿದೆ ಎಂದು ಹೇಳಿದರು.

ಈ ಯೋಜನೆಗೆ ಅಗತ್ಯ ಜಮೀನು ಬಿಟ್ಟುಕೊಡುವಂತೆ ರೈತರಿಗೆ ಮನವಿ ಮಾಡಿಕೊಂಡಿದ್ದೆ. ರೈತರು ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದರು. ಅಂಥವರಿಗೆ ಈಗ ಪರಿಹಾರ ಹಣ ನೀಡಲು ಸಬೂಬು ಹೇಳುತ್ತಿರುವುದು ಸರಿಯಲ್ಲ. ಆದಷ್ಟು ಬೇಗ ಪ್ರಕ್ರಿಯೆ ಮುಗಿಯಬೇಕು ಎಂದು ಅವರು ಸೂಚಿಸಿದ್ದಾರೆ.

ಭೂಸ್ವಾಧೀನಾಧಿಕಾರಿ ಹಾಗೂ ನೀರಾವರಿ ನಿಗಮದ ಅಧಿಕಾರಿಗಳ ನಡುವೆ ಸಮನ್ವಯದ ಕೊರತೆ ಇದೆ. ಇದನ್ನು ನಾನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ತಾಂತ್ರಿಕ ವಿಷಯಗಳ ನೆಪವೊಡ್ಡಿ ರೈತರಿಗೆ ಅನ್ಯಾಯ ಮಾಡಲು ಬಿಡುವುದಿಲ್ಲ ಎಂದು ರೇಗಿದರು.

ವಿಜಯಪುರ ಜಿಲ್ಲಾಧಿಕಾರಿ ಟಿ.ಭೂಬಾಲನ್, ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ರಾಜೇಶ ಅಮೀನ್ಬಾವಿ, ನಿಗಮದ ಮುಖ್ಯ ಆಡಳಿತಾಧಿಕಾರಿ ಔದರಂ, ವಿಶೇಷ ಜಿಲ್ಲಾಧಿಕಾರಿ ಹರ್ಷ ಶೆಟ್ಟಿ, ಸೂಪರಿಂಟೆಂಡೆಂಟ್ ಎಂಜಿನಿಯರ್ ಬಿ.ಎ.ನಾಗರಾಜ ಸೇರಿದಂತೆ ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.


ಅಂತರರಾಷ್ಟ್ರೀಯ ವಾಣಿಜ್ಯ ಮೇಳ ಸಾವಯವ ಮತ್ತು ಸಿರಿಧಾನ್ಯ - ೨೦೨೫ ಸಾವಯವ ಕೃಷಿಗೆ ಹೆಚ್ಚಿನ ಪ್ರಚಾರ ಅಗತ್ಯ– ಎನ್.ಚೆಲುವರಾಯಸ್ವಾಮಿ

ಬೆಂಗಳೂರು : ರ‍್ನಾಟಕ ರ‍್ಕಾರವು ಸುಮಾರು ೨ ದಶಕಗಳಿಂದ ಸಾವಯವ ಕೃಷಿಯನ್ನು ಉತ್ತಮ ರ‍್ಯಾಯ ಪದ್ದತಿಯಾಗಿ ಉತ್ತೇಜಿಸಲು ಪ್ರಾರಂಭಿಸಿದೆ. ಸ್ವಾವಲಂಬನೆ, ಗ್ರಾಮೀಣಾಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆಗೆ ಒತ್ತು ನೀಡಲು ೨೦೦೪ ರಲ್ಲಿ ಪ್ರತ್ಯೇಕ ಸಾವಯವ ಕೃಷಿ ನೀತಿಯನ್ನು ಹೊರತರಲಾಗಿರುತ್ತದೆ. ಈ ನೀತಿಯಡಿಯಲ್ಲಿ ರಾಜ್ಯಾದ್ಯಂತ ವಿವಿಧ ಸಾವಯವ ಕೃಷಿ ಉತ್ತೇಜನಾ ಕರ‍್ಯಕ್ರಮಗಳಾದ ಸಾವಯವ ಗ್ರಾಮ, ಪ್ರಮಾಣೀಕರಣ, ಸಂಸ್ಕರಣೆ ಮುಂತಾದ ಸಾವಯವ ಕೃಷಿ ಪ್ರಚಾರ ಕರ‍್ಯಕ್ರಮಗಳನ್ನು ಪ್ರಾರಂಭಿಸಲಾಗಿರುತ್ತದೆ ಎಂದು ಕೃಷಿ ಸಚಿವ ಎನ್.ಚೆಲುವರಾಯಸ್ವಾಮಿ ತಿಳಿಸಿದರು.

ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು, ಸಿರಿಧಾನ್ಯಗಳಿಗೆ ಹೆಚ್ಚಿನ ಒತ್ತು ನೀಡಿ ೨೦೧೭ರಲ್ಲಿ ಪರಿಷ್ಕೃತ ಸಾವಯವ ನೀತಿಯನ್ನು ಹೊರತರಲಾಗಿದ್ದು, ಅಂದಿನಿಂದ, ರಾಜ್ಯ ರ‍್ಕಾರವು ಸಾಂಪ್ರದಾಯಿಕ ಮತ್ತು ಸಾವಯವ ಸಿರಿಧಾನ್ಯಗಳನ್ನು "ಪ್ರಜ್ಞಾವಂತ ಆಹಾರ"ವಾಗಿ ಉತ್ತೇಜಿಸಲಾಗುತ್ತಿದೆ ಎಂದು ತಿಳಿಸಿದರು.

ರ‍್ನಾಟಕ ರ‍್ಕಾರವು ೨೦೧೭ ರಲ್ಲಿ ಆಯೋಜಿಸಿದ ಮೊದಲ ಆವೃತ್ತಿಯ ಸಾವಯವ ಮತ್ತು ಸಿರಿಧಾನ್ಯ ವಾಣಿಜ್ಯ ಮೇಳದ ಮೂಲಕ ರಾಜ್ಯವು ಸಾವಯವ ಮತ್ತು ಸಿರಿಧಾನ್ಯಗಳ ಪ್ರಚಾರದಲ್ಲಿ ದೇಶದಲ್ಲಿಯೇ ಮುಂಚೂಣಿಯಲ್ಲಿರುತ್ತದೆ. ತದನಂತರ ಎರಡನೇ, ಮೂರನೇ, ನಾಲ್ಕನೇ ಮತ್ತು ಐದನೇ ಆವೃತ್ತಿಗಳನ್ನು ಕ್ರಮವಾಗಿ ೨೦೧೮, ೨೦೧೯, ೨೦೨೩ ಮತ್ತು ೨೦೨೪ ರಲ್ಲಿ ಯಶಸ್ವಿಯಾಗಿ ಆಯೋಜಿಸಲಾಗಿರುತ್ತದೆ.

ಇದೇ ಆಸಕ್ತಿಯನ್ನು ಮುಂದಿನ ಮಟ್ಟಕ್ಕೆ ಕೊಂಡೊಯ್ಯಲು ಮತ್ತೊಮ್ಮೆ ಆರನೇ ಆವೃತ್ತಿಯ ಅಂತರರಾಷ್ಟ್ರೀಯ ವಾಣಿಜ್ಯ ಮೇಳ ಸಾವಯವ ಮತ್ತು ಸಿರಿಧಾನ್ಯ -೨೦೨೫ ನ್ನು ಜನವರಿ ೨೩ ರಿಂದ ೨೫ ರಂದು ಬೆಂಗಳೂರಿನ ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ಆಯೋಜಿಸಲಾಗಿರುತ್ತದೆ. ಈ ಮೇಳವು ರೈತರು, ರೈತ ಗುಂಪುಗಳು, ದೇಶೀಯ ಮತ್ತು ಅಂತರರಾಷ್ಟ್ರೀಯ ಕಂಪನಿಗಳು, ಸಾವಯವ ಮತ್ತು ಸಿರಿಧಾನ್ಯ ವಲಯದ ಕೇಂದ್ರ ಮತ್ತು ರಾಜ್ಯ ಸಂಸ್ಥೆಗಳನ್ನು ಒಗ್ಗೂಡಿಸುವುದರ ಜೊತೆಗೆ ಹೊಸ ಅವಕಾಶಗಳನ್ನು ಅನ್ವೇಷಿಸುವ ಮತ್ತು ಪರಿಣಾಮಕಾರಿಯಾಗಿ ಮಾರುಕಟ್ಟೆ ಸಂರ‍್ಕಗಳನ್ನು ಕಲ್ಪಿಸುವ ವೇದಿಕೆಯಾಗಿದೆ.

ಸಾವಯವ ಮತ್ತು ಸಿರಿಧಾನ್ಯಗಳನ್ನು ಜನಪ್ರಿಯಗೊಳಿಸುವುದರ ಜೊತೆಗೆ ರೈತರಿಗೆ - ಆಹಾರ, ಮೇವು, ಇಂಧನವಾಗಿ ಬಹು ಉಪಯೋಗ ಮತ್ತು ಬರಗಾಲದಲ್ಲಿ ರೈತರಿಗೆ ಉತ್ತಮ ರ‍್ಯಾಯ ನರ‍್ವಹಣಾ ತಂತ್ರ. ಗ್ರಾಹಕರಿಗೆ - ಪೌಷ್ಟಿಕಾಂಶ ಮತ್ತು ಆರೋಗ್ಯ ಸಮಸ್ಯೆಗಳ ನಿವಾರಣೆ (ಕಬ್ಬಿಣ, ಸತು, ಫೆÇೀಲಿಕ್ ಆಮ್ಲ, ಕ್ಯಾಲ್ಸಿಯಂ ಕೊರತೆ ನೀಗಿಸಲು ಮುತ್ತು ಮಧುಮೇಹ ನಿಯಂತ್ರಣ), ಪರಿಸರಕ್ಕೆ - ಕಡಿಮೆ ನೀರಿನ ಅವಶ್ಯಕತೆ ಹೊಂದಿರುತ್ತದೆ. ಅತ್ಯಂತ ಶುಷ್ಕ ವಾತಾವರಣದಲ್ಲಿ ಬದುಕಬಲ್ಲವು. ಹವಾಮಾನ ಬದಲಾವಣೆಗೆ ಹೊಂದಿಕೊಳ್ಳುತ್ತವೆ. ಈ ಉದ್ದೇಶಗಳನ್ನು ಸಾಧಿಸುವಲ್ಲಿ ಗಮನರ‍್ಹ ಮೈಲುಗಲ್ಲುಗಳಾಗಿ ಪರಿಣಮಿಸಿವೆ.

ಸಾವಯವ ಮತ್ತು ಸಿರಿಧಾನ್ಯಗಳನ್ನು "ಭವಿಷ್ಯದ ಪೀಳಿಗೆಯನ್ನು ಪೆÇೀಷಿಸುವ ಸಾಂಪ್ರದಾಯಿಕ ಪ್ರಜ್ಞಾವಂತ ಆಹಾರ" ಎಂದು ಜನಪ್ರಿಯಗೊಳಿಸುವುದು ಮತ್ತು ಭವಿಷ್ಯಕ್ಕಾಗಿ ಪಾರಂಪರಿಕ ದೇಸಿ ತಳಿಗಳನ್ನು ಬೆಳೆಸಿ ಸಂರಕ್ಷಿಸುವುದು ರಾಜ್ಯ ರ‍್ಕಾರದ ಧ್ಯೇಯೋದ್ದೇಶವಾಗಿದೆ.

ಪ್ರಸ್ತುತ ರಾಜ್ಯದ ಒಟ್ಟು ಸಿರಿಧಾನ್ಯ ಪ್ರದೇಶ - ೧೮.೩೭ ಲಕ್ಷ ಹೆಕ್ಟೇರ್, ಪ್ರಮುಖ ಸಿರಿಧಾನ್ಯಗಳು. ೧೮.೦೬ ಲಕ್ಷ ಹೆಕ್ಟೇರ್ (ರಾಗಿ - ೮.೨೭ ಲಕ್ಷ ಹೆಕ್ಟೇರ್, ಜೋಳ - ೮.೧೧ ಲಕ್ಷ ಹೆಕ್ಟೇರ್ ಮತ್ತು ಸಜ್ಜೆ - ೧.೬೮ ಲಕ್ಷ ಹೆಕ್ಟೇರ್) ಹಾಗೂ ಕಿರು/ಸಿರಿಧಾನ್ಯಗಳು - ೦.೩೧ ಲಕ್ಷ ಹೆಕ್ಟೇರ್ (ನವಣೆ, ಸಾಮೆ, ಕೊರಲೆ, ಹಾರಕ, ಬರಗು ಮತ್ತು ಊದಲು).

ಸಾವಯವ ಮತ್ತು ಸಿರಿಧಾನ್ಯಗಳ ಪೆÇ್ರೀತ್ಸಾಹಕ್ಕೆ ರಾಜ್ಯ ರ‍್ಕಾರವು ಹಲವು ಪರ‍್ವಭಾವಿ ಕರ‍್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿರುತ್ತದೆ.

೨೦೨೪ ನೇ ಡಿಸೆಂಬರ್ ೧೩ ರಂದು ಬೆಳಗಾವಿಯ ಸುರ‍್ಣಸೌಧದಲ್ಲಿ ಆಯೋಜಿಸಲಾಗಿದ್ದ   ಅuಡಿಣಚಿiಟಿ ಖಚಿiseಡಿ ಕರ‍್ಯಕ್ರಮದಲ್ಲಿ ಸನ್ಮಾನ್ಯ ಮುಖ್ಯಮಂತ್ರಿಯವರು ಅಂತರರಾಷ್ಟ್ರೀಯ ವಾಣಿಜ್ಯ ಮೇಳದ ಅನಾವರಣ ಕರ‍್ಯಕ್ರಮಕ್ಕೆ ಚಾಲನೆ ನೀಡಿರುತ್ತಾರೆ.

"ಸಿರಿಧಾನ್ಯ ಮತ್ತು ಮರೆತುಹೋದ ಖಾದ್ಯಗಳಿಗೆ ಸಂಬಂಧಿಸಿದಂತೆ ಸರ‍್ವಜನಿಕರು ಅವರ ಸೃಜನಶೀಲ ಪ್ರತಿಭೆಯನ್ನು ಪ್ರರ‍್ಶಿಸಲು ಅವಕಾಶ ಮತ್ತು ಸ್ರ‍್ಧಾತ್ಮಕ ವಾತಾವರಣದಲ್ಲಿ ಅನುಭವವನ್ನು ಹಂಚಿಕೊಳ್ಳಲು ವೇದಿಕೆಯನ್ನು ಒದಗಿಸುವ ಮುಖ್ಯ ಉದ್ದೇಶದೊಂದಿಗೆ ಜನವರಿ ೭ ಮತ್ತು ೮  ರಂದು ಸ್ರ‍್ಪ್ ಕ್ಯುಲಿನರಿ ಅಕಾಡೆಮಿ, ಬೆಂಗಳೂರು ಇಲ್ಲಿ ಜಿಲ್ಲಾಮಟ್ಟದ ಸಿರಿಧಾನ್ಯ ಹಾಗೂ ಮರೆತು ಹೋದ ಖಾದ್ಯಗಳ ಪಾಕ ಸ್ರ‍್ಧೆಯಲ್ಲಿ ವಿಜೇತರಾದ ಸ್ರ‍್ಧಿಗಳಿಗೆ ರಾಜ್ಯ ಮಟ್ಟದ ಪಾಕ ಸ್ರ‍್ಧೆಯನ್ನು ಆಯೋಜಿಸಲಾಗಿತ್ತು.

“ಸಿರಿಧಾನ್ಯಗಳು: ಸುಸ್ಥಿರ ಭವಿಷ್ಯಕ್ಕಾಗಿ ಮಹತ್ವದ ಧಾನ್ಯಗಳು” ಶರ‍್ಷಿಕೆಯಡಿ ಪ್ಯಾನಲ್ ರ‍್ಚೆಯನ್ನು ಕ್ರಿಸ್ತು ಜಯಂತಿ ಕಾಲೇಜು ಬೆಂಗಳೂರು ಇವರ ಸಹಯೋಗದೊಂದಿಗೆ ಜನವರಿ ೧೦ ರಂದು ಆಯೋಜಿಸಲಾಗಿದ್ದು, ಆರೋಗ್ಯ ಪರಿಣಿತರು, ಪತ್ರಿಕೋದ್ಯಮಿಗಳು, ಕ್ರೀಡಾಪಟುಗಳು, ಸಿರಿಧಾನ್ಯ ಕೃಷಿಕರು ಮತ್ತು ವಿದ್ಯರ‍್ಥಿ ಸಮುದಾಯ ರ‍್ಚೆಯಲ್ಲಿ ಭಾಗವಹಿಸಿರುತ್ತಾರೆ.

ಜನವರಿ ೧೬ ರಂದು ಮೂರು ಬಾರಿ ಗ್ರಾಮಿ ಪ್ರಶಸ್ತಿ ವಿಜೇತರು ಮತ್ತು ಕನ್ನಡದವರಾದ ರಿಕಿ ಕೇಜ್ ಇವರು ಸಂಯೋಜಿಸಲಾಗಿರುವ ಹಾಗೂ ಅಮೇರಿಕಾ ದೇಶದ ಮೂರು ಬಾರಿ ಗ್ರಾಮಿ ಪ್ರಶಸ್ತಿಯನ್ನು ಪಡೆದ ಲೋನಿ ಪರ‍್ಕ್ ರವರು ಹಾಗೂ ಸಿದ್ಧರ‍್ಥ ಬಸರೂರು ರವರು ದನಿ ನೀಡಿರುವ "ದೇಶಿ ತಳಿಗಳ" ಗೀತೆಯನ್ನು ಸನ್ಮಾನ್ಯ ಮುಖ್ಯಮಂತ್ರಿಯವರು ಬಿಡುಗಡೆಗೊಳಿಸಿದರು. ಈ ಗೀತೆಗೆ ಯು-ಟ್ಯೂಬ್‍ನಲ್ಲಿ ಇದುವರೆಗೆ ೬ ಲಕ್ಷಕ್ಕಿಂತ ಹೆಚ್ಚು ವೀಕ್ಷಣೆಯಾಗಿರುತ್ತದೆ. ಅಲ್ಲದೇ, ದೇಶಿತಳಿಗಳನ್ನು ಸಂರಕ್ಷಿಸುವಲ್ಲಿ ರಾಜ್ಯದ ಅಸಾಧಾರಣ ಹೆಜ್ಜೆಗೆ ವಿಶ್ವಸಂಸ್ಥೆಯ ಭಾಗವಾದ ಯುಎನ್‍ಸಿಸಿಡಿ ಇವರು ಉತ್ತೇಜಿತರಾಗಿದ್ದಾರೆ.

ಹೋಟೆಲ್ / ರೆಸ್ಟೋರೆಂಟ್‍ಗಳ ಆಹಾರ ಪಟ್ಟಿಯಲ್ಲಿ ಸಿರಿಧಾನ್ಯಗಳನ್ನು ಪರಿಚಯಿಸಲು, ಇತ್ತೀಚಿನ ಪೀಳಿಗೆ ಹಾಗೂ ಗ್ರಾಹಕರಲ್ಲಿ ಅಭಿರುಚಿ/ಸಕಾರಾತ್ಮಕ ಪ್ರಭಾವ ಬೀರುವಂತಹ ಪರಿಣಾಮಕಾರಿ ಮರ‍್ಗಗಳ ಕುರಿತು ರ‍್ಚಿಸುವ ಮುಖ್ಯ ಉದ್ದೇಶದೊಂದಿಗೆ "ಸಿರಿಧಾನ್ಯಗಳ ಪಾಕಶಾಸ್ತ್ರ ವಿಚಾರ ಸಂಕಿರಣ'ವನ್ನು ಎಂ.ಎಸ್.ರಾಮಯ್ಯ ಕಾಲೇಜು, ಬೆಂಗಳೂರು ಇವರ ಸಹಯೋಗದೊಂದಿಗೆ ಜನವರಿ ೧೭ ರಂದು ಆಯೋಜಿಸಲಾಗಿರುತ್ತದೆ.

ಗ್ರಾಹಕರಲ್ಲಿ ಅರಿವು ಮೂಡಿಸುವ ಉದ್ದೇಶದೊಂದಿಗೆ ಜನವರಿ ೧೯ ರಂದು ಕಬ್ಬನ್ ಪರ‍್ಕ್ ನಲ್ಲಿ "ಸಿರಿಧಾನ್ಯ ಓಟ" ವನ್ನು ಆಯೋಜಿಸಲಾಗಿದ್ದು, ಸುಮಾರು ೪೦೦೦ ಸರ‍್ವಜನಿಕರು ಭಾಗವಹಿಸಿರುತ್ತಾರೆ.

ಬೆಂಗಳೂರಿನ ಹೆಬ್ಬಾಳದಲ್ಲಿ "ಸಾವಯವ ಮತ್ತು ಸಿರಿಧಾನ್ಯ ಹಬ್" ಅನ್ನು ರೂ. ೨೦.೦೦ ಕೋಟಿ ವೆಚ್ಚದಲ್ಲಿ ನರ‍್ಮಿಸಲು ಜನವರಿ ೨೩ ರಂದು ಮುಖ್ಯಮಂತ್ರಿಯವರಿಂದ ಚಾಲನೆ ನೀಡಲು ಯೋಜಿಸಲಾಗಿದೆ.ಎಲ್ಲಾ ಜಿಲಾ ಕೇಂದ್ರಗಳಲ್ಲಿ ಸಿರಿಧಾನ್ಯ ಓಟ/ನಡಿಗೆ, ಸಿರಿಧಾನ್ಯ ಹಬ್ಬ ಹಾಗೂ ಸಿರಿಧಾನ್ಯ ಹಾಗೂ ಮರೆತುಹೋದ ಖಾದ್ಯಗಳ ಪಾಕ ಸ್ರ‍್ಧೆಯನ್ನು ಆಯೋಜಿಸಲಾಗಿರುತ್ತದೆ ಎಂದು ಸಚಿವರು ತಿಳಿಸಿದರು.

ಮೂರು ದಿನದ ಅಂತರರಾಷ್ಟ್ರೀಯ ವಾಣಿಜ್ಯ ಮೇಳ: ಈ ಮೇಳದಲ್ಲಿ ೩೦೦ ಕ್ಕೂ ಹೆಚ್ಚು ಹವಾನಿಯಂತ್ರಿತ ಸಾವಯವ ಮತ್ತು ಸಿರಿಧಾನ್ಯಗಳ ಮಳಿಗೆಗಳು ಇರಲಿವೆ. ಸಾವಯವ ಮತ್ತು ಸಿರಿಧಾನ್ಯಗಳ ಸಂಸ್ಥೆಗಳು, ಮಾರುಕಟ್ಟೆದಾರರು, ರಫ್ತುದಾರರು, ಚಿಲ್ಲರೆ ಮಾರಾಟಗಾರರು, ರೈತ ಗುಂಪುಗಳು, ಪ್ರಾಂತೀಯ ಒಕ್ಕೂಟಗಳು, ಸಾವಯವ ಪರಿಕರಗಳ ಸಂಸ್ಥೆಗಳು, ರಾಜ್ಯ ಮತ್ತು ಕೇಂದ್ರ ರ‍್ಕಾರದ ಇಲಾಖೆಗಳು ಮತ್ತು ಸಂಸ್ಥೆಗಳು ವಸ್ತು ಪ್ರರ‍್ಶನದಲ್ಲಿ ಭಾಗವಹಿಸುತ್ತಿವೆ.

ಅಂತರರಾಷ್ಟ್ರೀಯ ಸಮ್ಮೇಳನವನ್ನು ಉIZ, ಉeಡಿmಚಿಟಿಥಿ  ಹಾಗೂ  ಈiಃಐ, Sತಿiಣzeಡಿಟಚಿಟಿಜ    ಸಂಸ್ಥೆಗಳ ಸಹಯೋಗಹದೊಂದಿಗೆ  "ಖಿಡಿಚಿಟಿsಜಿoಡಿmಚಿಣioಟಿ oಜಿ ಚಿgಡಿiಜಿooಜ sಥಿsಣems ಣhಡಿough ಚಿgಡಿoeಛಿoಟogಥಿ: ಂ gಟobಚಿಟ ಚಿಟಿಜ ಡಿegioಟಿಚಿಟ ಠಿeಡಿsಠಿeಛಿಣive"  ಎಂಬ ಶರ‍್ಷಿಕೆಯಡಿ ಸಮ್ಮೇಳನದಲ್ಲಿ ೩೦ ಕ್ಕಿಂತ ಹೆಚ್ಚು ಅಂತರರಾಷ್ಟ್ರೀಯ ಮತ್ತು ರಾಷ್ಟ್ರೀಯ ಪ್ರಖ್ಯಾತ ಉಪನ್ಯಾಸಕರು ಮಾಹಿತಿ ನೀಡಲಿದ್ದಾರೆ.

ರಾಜ್ಯದ ಸಾವಯವ ಮತ್ತು ಸಿರಿಧಾನ್ಯಗಳ ಉತ್ಪನ್ನಗಳಿಗೆ ಮಾರುಕಟ್ಟೆ ಸಂರ‍್ಕ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಮೇಳದಲ್ಲಿ ಉತ್ಪಾದಕರ-ಮಾರುಕಟ್ಟೆದಾರರ ಸಮಾಲೋಚನಾ ಸಭೆಗಳನ್ನು ರ‍್ಪಡಿಸಲಾಗುತ್ತದೆ. ಬಿ೨ಬಿ ಸಭೆಗೆ ಈಗಾಗಲೇ ೧೪೧ ಕೊಳ್ಳುವವರು ಮತ್ತು ೧೨೫ ಮಾರಾಟಗಾರರು ನೋಂದಣಿ ಮಾಡಿದ್ದು ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ರಾಜ್ಯದ ಮಾರುಕಟ್ಟೆದಾರರು, ಎಫ್‍ಪಿಓ / ಒಕ್ಕೂಟಗಳು ಭಾಗವಹಿಸಲಿದ್ದಾರೆ.

ರ‍್ನಾಟಕದ ಪೆವಿಲಿಯನ್‍ನಲ್ಲಿ ರ‍್ನಾಟಕದ ಸಿರಿಧಾನ್ಯ ಮತ್ತು ಸಾವಯವ ಉತ್ಪನ್ನಗಳನ್ನು ನವೋದ್ಯಮಿಗಳು ಸಿರಿಧಾನ್ಯ / ಸಾವಯವ ರೈತ ಗುಂಪುಗಳು, ರೈತ ಉತ್ಪಾದಕ ಗುಂಪುಗಳು (ಎಫ್‍ಪಿಓಗಳು), ಪ್ರಾಂತೀಯ ಒಕ್ಕೂಟಗಳು, ಹಾಗೆಯೇ ರಾಜ್ಯ ಮತ್ತು ಕೇಂದ್ರ ರ‍್ಕಾರದ ಇಲಾಖೆಗಳು ಮತ್ತು ಸಂಸ್ಥೆಗಳು ಸೇರಿದಂತೆ ಸುಮಾರು ೧೧೫ ಮಳಿಗೆಗಳು ಇರುತ್ತವೆ. ಐಎಂಆರ್, ಸಿಎಫ್‍ಟಿಆರ್‍ಐ, ಎನ್‍ಐಎಫ್‍ಟಿಇಎಂ, ಯುಎಎಸ್‍ಬಿ ಮುಂತಾದ ಸಂಸ್ಥೆಗಳಿಂದ ಸಂಸ್ಮರಣೆ, ಮೌಲ್ಯರ‍್ಧನೆ ಹಾಗೂ ಇನ್ನಿತರೆ ತಾಂತ್ರಿಕತೆಗಳ ಪ್ರಾತ್ಯಕ್ಷಿಕೆ ಇರುತ್ತದೆ.

ರಾಜ್ಯದ ರೈತರಿಗಾಗಿ ಕನ್ನಡ ಭಾಷೆಯಲ್ಲಿ ಮೂರು ದಿನಗಳ ಕರ‍್ಯಗಾರವನ್ನು ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ ಇವರ ಸಹಯೋಗದೊಂದಿಗೆ ರೈತರ ಕರ‍್ಯಾಗಾರ ಆಯೋಜಿಸಲಾಗುತ್ತದೆ. ಈ ಕರ‍್ಯಾಗಾರದಲ್ಲಿ ಸಾವಯವ, ನೈರ‍್ಗಿಕ, ದೇಸಿ ತಳಿಗಳು, ಸಿರಿಧಾನ್ಯಗಳ ಕುರಿತು ವಿಷಯ ತಜ್ಞರು ಉಪನ್ಯಾಸ ನೀಡಲಿದ್ದಾರೆ.

ಮೂರು ದಿನಗಳ ಮೇಳದ ಅವಧಿಯಲ್ಲಿ ವಿವಿಧ ಹೋಟಲ್/ ರೆಸ್ಟೋರೆಂಟ್ ಗಳ ಮಳಿಗೆಗಳಲ್ಲಿ ವೈವಿದ್ಯಮಯ ಮತ್ತು ರುಚಿಕರವಾದ ಸಾವಯವ ಹಾಗೂ ಸಿರಿಧಾನ್ಯಗಳ ಊಟ, ಉಪಹಾರಗಳನ್ನು ಸವಿಯಲು ಸರ‍್ವಜನಿಕರಿಗೆ ಸಾವಯವ ಮತ್ತು ಸಿರಿಧಾನ್ಯ ಆಹಾರ ಮಳಿಗೆಗಳು (ಪುಡ್ ಕರ‍್ಟ್) ಅವಕಾಶ ಕಲ್ಪಿಸಿಕೊಡಲಾಗಿದೆ. ಅಲ್ಲದೇ ವಿವಿಧ ದೇಸಿ/ಗ್ರಾಮೀಣಸಾಂಸ್ಕೃತಿಕ ಕರ‍್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ತಿಳಿಸಿದರು.

ಪ್ರಸಕ್ತ ಸಾಲಿನ ಮೇಳದ ವೈಶಿಷ್ಟ್ಯ: ತಲೆಮಾರುಗಳಿಂದ ರೈತರು ತಾವು ಕಾಪಾಡಿಕೊಂಡು, ಪೆÇೀಷಿಸಿದ ದೇಶೀ ತಳಿಗಳ ಪ್ರರ‍್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಈ ದೇಶೀ ಪೆವಿಲಿಯನ್‍ನಲ್ಲಿ ರಾಜ್ಯದ ಆಯ್ದ ೧೫ ಜಿಲ್ಲೆಗಳಿಂದ ೩೦ ದೇಶೀ ತಳಿಗಳನ್ನು ಸಂರಕ್ಷಿಸುತ್ತಿರುವ ರೈತರನ್ನು ಆಹ್ವಾನಿಸಲಾಗಿದೆ. ದೇಶೀ ಪೆವಿಲಿಯನ್‍ನಲ್ಲಿ ರೈತರು ಸಂರಕ್ಷಿಸಿರುವ ವಿವಿಧ ಬೆಳೆಗಳ ಬಿತ್ತನೆ ಬೀಜ / ತೆನೆಗಳ ಪ್ರರ‍್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

ಮಣ್ಣಿನ ಲೋಕ - ಸಸ್ಯಗಳ ಬೆಳವಣಿಗೆಗೆ ಮಣ್ಣು ಪ್ರಮುಖ ಆಧಾರವಾಗಿರುವುದರಿಂದ, ರೈತರು, ಸರ‍್ವಜನಿಕರು ಮತ್ತು ವಿದ್ಯರ‍್ಥಿಗಳಲ್ಲಿ ಮಣ್ಣಿನ ಮಹತ್ವ, ಗುಣಲಕ್ಷಣಗಳು, ರ‍್ಗೀಕರಣ ಮತ್ತು ರಚನೆಯ ಕುರಿತು ಅರಿವು ಮೂಡಿಸುವುದು ಅತ್ಯಾವಶ್ಯವಾಗಿದೆ. ಈ ಉದ್ದೇಶದಿಂದ, ಮಣ್ಣಿನ ಪೆಡಾನ್ ಪೆವಿಲಿಯನ್ ಅನ್ನು ಸಾವಯವ ಮತ್ತು ಸಿರಿಧಾನ್ಯಗಳ ಅಂತರಾಷ್ಟ್ರೀಯ ವಾಣಿಜ್ಯ ಮೇಳ - ೨೦೨೫ ರಲ್ಲಿ ಪರಿಚಯಿಸಲಾಗಿದೆ. ರ‍್ನಾಟಕ ರಾಜ್ಯದ ವಿವಿಧ ಬಗೆಯ ಮಣ್ಣಿನ  moಟಿoಟiಣh   ಗಳನ್ನು ಪ್ರರ‍್ಶಿಸಲಾಗುವುದು.

ಈ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ರ‍್ಮನಿ, ಸ್ವಿಟ್ಟರ್‍ಲ್ಯಾಂಡ್, ಸ್ಪೇನ್, ಆಸ್ಟ್ರೇಲಿಯ, ಕೀನ್ಯಾ ತಾಂಜೇನಿಯ, ಇಟಲಿ, ಇಂಗ್ಲೆಂಡ್, ಪೆರು ದೇಶಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.

ಇಲಾಖೆಯ ಅಧಿಕಾರಿಗಳ ತಂಡ ಎಲ್ಲಾ ರಾಜ್ಯಗಳಿಗೆ ಭೇಟಿ ನೀಡಿ ಮೇಳದಲ್ಲಿ ಭಾಗವಹಿಸಲು ಆಹ್ವಾನಿಸಲಾಗಿದ್ದು, ೨೫ ರಾಜ್ಯಗಳು ತಮ್ಮ ಭಾಗವಹಿಸುವಿಕೆಯನ್ನು ಖಚಿತಪಡಿಸಿವೆ. ಇನ್ನೂ ೨-೩ ರಾಜ್ಯಗಳು ಭಾಗವಹಿಸುವ ನಿರೀಕ್ಷೆಯಿರುತ್ತದೆ. ಅಲ್ಲದೇ, ೮ ಹೊರ ರಾಜ್ಯಗಳ ಕೃಷಿ ಸಚಿವರು ಭಾಗವಹಿಸುವಿಕೆಯನ್ನು ಖಚಿತಪಡಿಸಿದ್ದು, ಇನ್ನೂ ೧-೨ ಸಚಿವರು ಭಾಗವಹಿಸುವ ನಿರೀಕ್ಷೆಯಿರುತ್ತದೆ ಎಂದು ತಿಳಿಸಿದರು.

ರಾಜ್ಯ, ಹೊರ ರಾಜ್ಯ ಹಾಗೂ ಅಂತರರಾಷ್ಟ್ರೀಯ ಸಿರಿಧಾನ್ಯ / ಸಾವಯವ ಉತ್ಪನ್ನಗಳ ಸಂಸ್ಥೆಗಳು, ಇಲಾಖೆಗಳು ಹೆಚ್ಚಿನ ಸಂಖ್ಯೆಯಲ್ಲಿ ಮೇಳದಲ್ಲಿ ಭಾಗವಹಿಸಲಿದ್ದು, ಹೊರ ರಾಜ್ಯಗಳ ೧೭ ಇಲಾಖೆಗಳು ಮತ್ತು ೭ ಸಂಸ್ಥೆಗಳು ಭಾಗವಹಿಸುವಿಕೆಯನ್ನು ಖಚಿತಪಡಿಸಿರುತ್ತಾರೆ ಎಂದು ಸಚಿವರು ತಿಳಿಸಿದರು.


ಪ್ರೇಮ ಕಾಶ್ಮೀರದಲ್ಲಿ ರಕ್ತದೋಕುಳಿ; ಹಿಂದೂಗಳೇ ಟಾರ್ಗೆಟ...!

  ಪ್ರೇಮ ಕಾಶ್ಮೀರದಲ್ಲಿ ರಕ್ತದೋಕುಳಿ; ಹಿಂದೂಗಳೇ ಟಾರ್ಗೆಟ್. ಭೂಲೋಕದ ಸ್ವರ್ಗವೆಂದೇ ಕರೆಯುವ ಜಮ್ಮು-ಕಾಶ್ಮೀರದ ಪೆಹಲ್ಗಾಮ್ ಸಮೀಪದ ಬೈಸರನ್ ಹುಲ್ಲುಗಾವಲಿನಲ್ಲಿ ಪಾಕ್ ಪ್...