ವಿಶ್ವದಲ್ಲೇ ಅತಿ ದೊರ್ಡ ಆಣೆಕಟ್ಟು ನಿರ್ಮಾಣಕ್ಕೆ ಚೀನಾ ಮುಂದಾಗಿದೆ. ಅದರಿಂದ ಜಲವಿದ್ಯುತ್ ಉತ್ಪಾದನೆ ಮಾಡಿ, ಹೆಚ್ಚು ಸಮೃದ್ಧಿ ಸಾಧಿಸುವುದು ತನ್ನ ಗುರಿ ಎಂದು ಚೀನಾ ಹೇಳಿಕೊಂಡಿದೆ. ಆದರೆ, ಅಲ್ಲಿನ ತಜ್ಞರೂ ಸೇರಿದಂತೆ ಜಾಗತಿಕ ಮಟ್ಟದ ಹಲವರು ಆ ಆಣೆಕಟ್ಟು ಜನರ ಮೇಲೆ ಮತ್ತು ಪ್ರಕೃತಿಯ ಮೇಲೆ ಬೀರಬಹುದಾದ ಪರಿಣಾಮಗಳ ಕುರಿತು ಎಚ್ಚರಿಕೆ ನೀಡಿರ್ದಾರೆ. ಭಾರತವೂ ಈ ಬಗ್ಗೆ ಹಿಂದೆಯೇ ಆಕ್ಷೇಪ ವ್ಯಕ್ತಪಡಿಸಿತ್ತು. ಟಿಬೆಟ್, ಬಾಂಗ್ಲಾ, ಭಾರತದ ಜನರ ಸುರಕ್ಷತೆ ಮತ್ತು ಪ್ರಕೃತಿ ವಿನಾಶದ ದೃಷ್ಟಿಯಿಂದ ಈ ಡ್ಯಾಮ್ ಅಪಾಯಕಾರಿ ಎಂದರೂ ಚೀನಾ ತನ್ನ ನಿಲುವಿನಿಂದ ಹಿಂದೆಸರಿಯುತ್ತಿಲ್ಲ.
ಬ್ರಹ್ಮಪುತ್ರ ನದಿಗೆ ದೊಡ್ಡ ಆಣೆಕಟ್ಟು: ಚೀನಾ ದುಸ್ಸಾಹಸ-ಭಾರತಕ್ಕೆ ಕಂಟಕ!
ಬ್ರಹ್ಮಪುತ್ರ ಭಾರತದಲ್ಲಿ ಹರಿಯುವ ಪ್ರಮುಖ ನದಿಯಲ್ಲೊಂದು. ಟಿಬೆಟ್ನಲ್ಲಿ ಹುಟ್ಟುವ ಈ ನದಿ, ಭಾರತ ಮತ್ತು ಬಂಗ್ಲಾ ದೇಶದ ಮೂಲಕ ಹರಿದು ಕೊನೆಗೆ ಬಂಗಾಳ ಕೊಲ್ಲಿ ಸೇರುತ್ತದೆ. ಬ್ರಹ್ಮಪುತ್ರ ನದಿಯನ್ನು ಟಿಬೆಟ್ನಲ್ಲಿ ಯಾರ್ಲಂಗ್ ಸಂಗ್ಪೋ ಎಂದು ಕರೆಯುತ್ತಾರೆ. ನದಿ ಕೆಳಭಾಗದಲ್ಲಿ ವಿಶ್ವದ ಅತಿ ದೊಡ್ಡ ಆಣೆಕಟ್ಟು ನಿರ್ಮಿಸಿ, ಜಲವಿದ್ಯುತ್ ಉತ್ಪಾದನೆ ಮಾಡುವುದು ಚೀನಾ ಸರ್ಕಾರದ ಯೋಜನೆ. ಭಾರತದ ಅರುಣಾಚಲ ಪ್ರದೇಶದ ಗಡಿ ಸಮೀಪ ಇದನ್ನು ನಿರ್ಮಿಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ.
ಸದ್ಯ ಚೀನಾದ ತ್ರೀ ಜಾರ್ಜಸ್ ಡ್ಯಾಮ್ (ಯಾಂಟ್ಜೆ ನದಿಗೆ ಕಟ್ಟಲಾಗಿದೆ) ಇದು ವಿಶ್ವದ ಅತಿ ದೊಡ್ಡ ಆಣೆಕಟ್ಟಾಗಿದ್ದು, ಜಲವಿದ್ಯುತ್ ಉಪಾದನೆ ಮಾಡಲಾಗುತ್ತಿದೆ. ಯಾರ್ಲಂಗ್ ಸಾಂಗ್ಪೋ ನದಿಯ ಕೆಳಭಾಗದಲ್ಲಿ ಕಟ್ಟಲಾಗುವ ಆಣೆಕಟ್ಟೆಯಿಂದ ಅದರ ಮೂರು ಪಟ್ಟು ಜಲವಿದ್ಯುತ್ ಜಲವಿದ್ಯುತ್ ಉತ್ಪಾದನೆ ಮಾಡುವುದು ಚೀನಾದ ಲೆಕ್ಕಾಚಾರ. ಚೀನಾದ ಮಾಧ್ಯಮಗಳು ಇದು ಸುರಕ್ಷಿತ ಯೋಜನೆಯಾಗಿದ್ದು, ಪರಿಸರ ಸಂರಕ್ಷಣೆಯನ್ನು ತನ್ನ ಆದ್ಯತೆಯಾಗಿಸಿಕೊಂಡಿದೆ ಎಂದು ವಿವರಿಸಿವೆ. ಈ ಯೋಜನೆಯಿಂದ ದೇಶದ ಸಮೃದ್ಧಿಯನ್ನು ಹೆಚ್ಚಿಸಲಿದ್ದು, ಬೀಜಿಂಗ್ನ ಶೂನ್ಯ ಇಂಗಾಲ ಹೊರಸೂಸುವಿಕೆಯ ಗುರಿಗೆ ತಕ್ಕಂತಿದೆ ಎಂದಿದೆ. ಚೀನಾದ ಕಮುನಿಸ್ಟ್ ಪಕ್ಷವು ೨೦೨೧ರಲ್ಲಿ ಬುಡುಗಡೆ ಮಾಡಿರುವ ಐದು ವರ್ಷಗಳ ಆರ್ಥಿಕ ಅಭಿವೃದ್ಧಿ ಯೋಜನೆಯಲ್ಲಿ ಈ ಆಣೆಕಟ್ಟು ಸ್ಥಾನ ಪಡೆದಿದೆ. ಟಿಬೆಟ್ನಲ್ಲಿ ಹಲವು ಜಲವಿದ್ಯುತ್ ಯೋಜನೆಗಳನ್ನು ಕೈಗೆತ್ತಿಕೊಳ್ಳುವ ಬಗ್ಗೆ ಚಿಂತಿಸುತ್ತಿದ್ದು, ಅವುಗಳಲ್ಲಿ ಇದೊಂದು ಎನ್ನಲಾಗುತ್ತಿದೆ.
ಜೀವ ಪ್ರಬೇಧಗಳಿಗೆ ಆಪತ್ತು : ಆದರೆ, ವಿಶ್ವದ ಅತಿ ದೊಡ್ಡ ಆಣೆಕಟ್ಟು ನಿರ್ಮಾಣ ಚೀನಾದಲ್ಲೇ ಆತಂಕ ವ್ಯಕ್ತವಾಗಿದೆ. ಬ್ರಹ್ಮಪುತ್ರ ನದಿ ಹಿಮಾಲಯದ ಗಿರಿ ಕಂದರಗಳಲ್ಲಿAದ ಹರಿದು ಬರುತ್ತದೆ. ಲಕ್ಷಾಂತರ ಜೀವಪ್ರಭೇದ, ಕೋಟ್ಯಂತರ ಜನರ ಬುದುಕಿಗೆ ಆಸರೆಯಾಗಿರುವ ನದಿ. ಕಡಿದಾದ, ಆಳ ಕಣಿವೆ ಇರುವ, ಭೂಕಂಪ ಸಂಭವನೀಯ ಪ್ರದೇಶದಲ್ಲಿ ಆಣೆಕಟ್ಟು ನಿರ್ಮಾಣಕ್ಕೆ ಅಗೆಯುವುದು ಭೂಕುಸಿತದಂಥ ಅವಗಢಗಳಿಗೆ ಕಾರಣವಾಗುತ್ತದೆ ಎಂದು ಚೀನಾದ ವಿಜ್ಞಾನಿಗಳು ಕಳವಳ ವ್ಯಕ್ತಪಡಿಸುತ್ತಿದ್ದಾರೆ. ಜತೆಗೆ ಅಮೇರಿಕದ ಗ್ರಾö್ಯಂಡ್ ಕ್ಯಾನ್ಯನ್ಗಿಂತಲೂ ಮೂರು ಪಟ್ಟು ಆಳವಾದ ಹಿಮಾಲದ ಕಣಿವೆಗಳಲ್ಲಿ ಆಣೆಕಟ್ಟು ನಿರ್ಮಾಣಕ್ಕೆ ಬೇಕಾದ ಅಗಾಧ ಎಂಜಿನಿಯರಿAಗ್ ಕೌಶಲ ಮತ್ತಿತರ ಅಗತ್ಯಗಳನ್ನು ಪೂರೈಸುವುದು ಹೇಗೆ? ಎನ್ನುವ ಪ್ರಶ್ನೆಗಳು ಹಟ್ಟಿಕೊಂಡಿವೆ.
ಒAದು ವೇಳೆ ಭೂಕಂಪ ತಡೆಯುವ ರೀತಿಯಲ್ಲಿ ಆಣೆಕಟ್ಟು ನಿರ್ಮಿಸಿದರೂ ಅದರಿಂದ ಉಂಟಾಗುವ ಗುಡ್ಡಗಳ ಕುಸಿತ, ಮಣ್ಣು-ಕಲ್ಲಿನ ಅನಿಯಂತ್ರಿತ ಹರಿಯುವಿಕೆ ತಡೆಯುವುದು ಸಾಧ್ಯವೇ? ಇದು ಯೋಜನೆಗೆ ಸವಾಲೊಡ್ಡಲಿದೆ ಎಂದು ಸಿಚೌನ್ ಪ್ರಾಂತೀಯ ಭೂವಿಜ್ಞಾನ ಬ್ಯೂರೋದ ಎಂಜಿನಿಯರ್ ಒಬ್ಬರು ೨೦೨೨ರಲ್ಲೇ ಎಚ್ಚರಿಕೆ ನೀಡಿದ್ದರು. ಯಾರ್ಲಂಗ್ ಸಂಗ್ಪೋ ಟೆಇಬೆಟ್ನ ಅತಿ ಉದ್ದದ ನದಿ. ಟಿಬೆಟ್ನಲ್ಲಿ ಚೀನಾ ಈಗಾಗಲೇ ಹಲವು ಆಣೆಕಟ್ಟುಗಳನ್ನು ನಿರ್ಮಿಸಿದೆ. ೨೦೨೪ರ ಆರಂಭದಲ್ಲಿ ಆಣೆಕಟ್ಟೊಂದರ ನಿರ್ಮಾಣದಿಂದ ಜನರಿಗೆ ತೊಂದರೆಯಾಗಿ, ಹಲವು ಬೌದ್ಧ ವಿಹಾರಗಳು ಮುಳುಗಿದ್ದವು. ಅದರ ವಿರುದ್ಧ ಪ್ರತಿಭಟಿಸಿದ್ದ ಟಿಬೆಟ್ ಜನರನ್ನು ಬಂಧಿಸಿದ್ದ ಚೀನಾ ಸರ್ಕಾರ, ಅವರ ವಿರುದ್ಧ ಕಠಿಣ ಕ್ರಮ ಜರುಗಿಸಿತ್ತು. ತ್ರೀ ಜಾರ್ಜಸ್ ಡ್ಯಾಮ್ ನಿರ್ಮಾಣದಿಂದ ಟಿಬೆಟ್ನ ಒಂದು ಲಕ್ಷ ಮಂದಿ ನಿರ್ವಸಿತರಾಗಿದ್ದರು. ಈಗ ಚೀನಾ ಕಟ್ಟಲು ಹೊರಟಿರುವ ವಿಶ್ವದ ಅತಿ ದೊಡ್ಡ ಆಣೆಕಟ್ಟಿನ ವ್ಯಾಪ್ತಿಯಲ್ಲಿ ಹೆಚ್ಚು ಜನವಸತಿ ಇರುವ ಪ್ರದೇಶಗಳೂ ಸೇರಿವೆ. ಹೀಗಾಗಿ ಅತಿ ಹೆಚ್ಚು ಮಂದಿ ನಿರ್ವಸಿತರಾಗಬೇಕಾಗುತ್ತದೆ ಎನ್ನುವುದು `ಟಿಬೆಟ್ ವಾಚ್' ಎಂಬ ಲಂಡನ್ ಮೂಲದ ಸರ್ಕಾರೇತರ ಸಂಸ್ಥೆ ಕಳವಳ ವ್ಯಕ್ತಪಡಿಸಿದೆ.
ವಿನಾಶಕಾರಿ ಯೋಜನೆ : ಬ್ರಹ್ಮಪುತ್ರದ ನೀರಿನಲ್ಲಿ ಭಾರತ ಮತ್ತು ಬಂಗ್ಲಾ ದೇಶಗಳಿಗೂ ಪಾಲು ಇದೆ. ಬ್ರಹ್ಮಪುತ್ರ ಸೇರಿದಂತೆ ಈ ಭಾಗದ ನದಿಗಳ ನೀರಿನ ಮೇಲೆ ನಿಯಂತ್ರಣ ಸಾಧಿಸುವ ಮೂಲಕ ಚೀನಾವು ಭಾರತದ ಆರ್ಥಿಕತೆಯ ಮೇಲೆ ತನ್ನ ಹಿಡಿತ ಬಿಗಿಗೊಳಿಸಲು ಪ್ರತ್ನಿಸುತ್ತಿದೆ ಎಂದು ಆಸ್ಟೆçÃಲಿಯಾ ಮೂಲಕ ಚಿಂತಕರ ಚಾವಡಿ `ಲೊವಿ ಇನ್ಸ್ಟಿಟ್ಯೂಟ್' ೨೦೨೦ರ ತನ್ನ ವರದಿಯಲ್ಲಿ ಅಭಿಪ್ರಯ ಪಟ್ಟಿvತ್ತು. ತನ್ನ ಆಣೆಕಟ್ಟು ಯೋಜನೆಯಿಂದ ಭಾರತ, ಬಂಗ್ಲಾದೇಶ ಸೇರಿದಂತೆ ಯಾರಿಗೂ ತೊಂದರೆಯಾಗದು ಎಂದು ಚೀನಾ ಹೇಳಿಕೊಂಡಿದೆ. ಆದರೆ, ಯೋಜನೆ ಭಾರತ ಮತ್ತು ಬಂಗ್ಲಾ ದೇಶದ ಪಾಲಿಗೆ ವಿನಾಶಕಾರಿಯಾಗಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.
ಯಾರ್ಲಂಗ್ ಸಂಗ್ಪೋ ನದಿಯ ಮೇಲ್ಭಾಗದಲ್ಲಿ ಚೀನಾ ಹಲವು ಆಣೆಕಟ್ಟುಗಳನ್ನು ಈಗಾಗಲೇ ನಿರ್ಮಿಸಿದೆ. ಈಗ ನದಿಯ ಕೆಳಭಾಗದಲ್ಲಿ ಭಾರೀ ಆಣೆಕಟ್ಟು ನಿರ್ಮಿಸಿದರೆ, ಇಡೀ ನದಿಯ ನೀರಿನ ಮೇಲೆ ಚೀನಾ ಹಿಡಿತ ಸಾಧಿಸಲಿದೆ. ಇದರಿಂದ ಭಾರತ ಮತ್ತು ಬಂಗ್ಲಾ ದೇಶದ ಆರ್ಥಿಕತೆಯ ಮೇಲೆ ಪರಿಣಾಮ ಬೀರಲಿದೆ ಎಂದು ಹೇಳಲಾಗುತ್ತಿದೆ. ಉಭಯ ರಾಷ್ಟçಗಳ ನಡುವಿನ ದ್ವಿಪಕ್ಷೀಯ ಸಂಬAಧ ಬಿಗಡಾಯಿಸಿದ ಸಂದರ್ಭಗಳಲ್ಲಿ ಭಾರತದ ಮೇಲೆ ಹಿಡಿತ ಸಾಧಿಸಲು ಈ ಆಣೆಕಟ್ಟು ಒಂದು ಸಾಧನವನ್ನಾಗಿ ಚೀನಾ ಬಳಸಬಹುದು ಎಂಬ ಅಭಿಪ್ರಯ ರಾಜತಾಂತ್ರಿಕ ತಜ್ಞರು ವ್ಯಕ್ತಪಡಿಸಿದ್ದಾರೆ.
ನೀರಿನ ಹರಿವು ಸ್ಥಗಿತಗೊಳಿಸುವ ಸಂಚು : ಈಶಾನ್ಯ ಭಾರತ ಮತ್ತು ಬಂಗ್ಲಾ ದೇಶದ ಪಾಲಿಗೆ ಬ್ರಹ್ಮಪುತ್ರ ಜೀವ ನದಿ. ಭಾರತದ ಸಿಹಿ ನೀರಿನ ಸಂಪನ್ಮೂಲದ ಪೈಕಿ ಶೇ.೩೦ರಷ್ಟು ಬ್ರಹ್ಮಪುತ್ರ ನದಿಯ ಪಾಲಿದೆ. ¨sರತದ ಗಡಿ ಭಾಗದಲ್ಲಿ ಚೀನಾ ಆಣೆಕ್ಟು ನಿರ್ಮಿಸಿದರೆ, ಭಾರತ ಮತ್ತು ಬಂಗ್ಲಾ ದೇಶಗಳತ್ತ ನದಿ ನೀರಿನ ಹರಿವು ಕುಂಠಿತವಾಗಿ, ಬೇಸಿಗೆ ಅವಧಿಯಲ್ಲಿ ನೀರಿನ ಹರಿವು ನಿಂತು ಎರಡೂ ರಾಷ್ಟçಗಳಿಗೂ ನೀರಿನ ಕೊರತೆ ಕಾಡಬಹುದು. ಇದರಿಂದ ಕೃಷಿ ಚಟುವಟಿಕೆಗಳಿಗೂ ಹಿನ್ನೆಡೆಯಾಗಿ, ಆರ್ಥಿಕಕತೆಯ ಮೇಲೆ ಪರಿಣಾಮವಲ್ಲದೇ, ಕುಡಿಯುವ ನೀರಿನ ಸಮಸ್ಯೆಯೂ ತಲೆದೋರಬಹುದು.
ಕೆಲವು ವರ್ಷಗಳಿಂದೀಚೆಗೆ ಪ್ರತಿ ಮಳೆಗಾಲದಲ್ಲಿ ಬ್ರಹ್ಮಪುತ್ರ ನದಿಯು ಉಕ್ಕೇರಿ ಆಸ್ಸಾಮ್, ಅರುಣಾಚಲ ಪ್ರದೇಶ, ಮೇಘಾಲಯದಂತಹ ನದಿಯ ಅಚ್ಚುಕಟ್ಟು ಪ್ರದೇಶದ ರಾಜ್ಯಗಳು ಪ್ರವಾಹಕ್ಕೆ ಒಳಗಾಗುತ್ತಿವೆ. ಮುಂಗಾರು ಅವಧಿಯಲ್ಲಿ ಚೀನಾವು ಆಣೆಕಟ್ಟೆಯಿಂದ ಏಕಾಏಕಿ ನೀರು ಬಿಟ್ಟರೆ, ಭಾರತದಲ್ಲಿ ಪ್ರವಾಹ ಸ್ಥಿತಿ ಇನ್ನಷ್ಟು ಬಿಗಡಾಯಿಸಿ, ಈಶಾನ್ಯ ರಾಜ್ಯಗಳು ನೆರೆಯಿಂದ ತತ್ತರಿಸಬಹುದು ಎಂದು ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.
ಆಣೆಕಟ್ಟು ನಿರ್ಮಿಸಲು ಗುರುತಿಸಿರುವ ಜಾಗ, ಭೂಕಂಪನ ಸಂಭವನೀಯತೆ ಪ್ರದೇಶ (ಭೂಪದರ ತಟ್ಟೆಗಳು (ಟೆಕ್ಟೋನಿಕ್ ಪ್ಲೇಟ್ಸ್) ರೇಖೆಗಳು ಇಲ್ಲಿ ಹಾದು ಹೋಗಿವೆ) ಎಂದು ಹೇಳಲಾಗಿದೆ. ಕಡಿದಾದ, ಆಳವಾದ ಕಂದಕಗಳಲ್ಲಿ ಭಾರೀ ಪ್ರಮಾಣದಲ್ಲಿ ಮಣ್ಣು ಕೊರೆಯುವುದು, ನಿರ್ಮಾಣ ಕಾಮಗಾರಿ ನಡೆಸುವುದು ಯಾವತ್ತು ಸವಾಲಿನ ಕೆಲಸ. ಇದು ಭೂಕಂಪನ, ಭೂಕುಸಿತದಂತಹ ವಿಪತ್ತಿಗೆ ಕಾರಣವಾಗಬಹುದು ಎಂದು ಚೀನಾ ವಿಜ್ಞಾನಿಗಳೇ ಎಚ್ಚರಿಕೆಸಿದ್ದಾರೆ. ಹಿಮಾಲಯದಲ್ಲಿ ಸಂಭವಿಸುವ ಯಾವುದೇ ವಿಪತ್ತು ಭಾರತದ ಮೇಲೂ ಪರಿಣಾಮ ಬೀರುತ್ತದೆ. ಇತ್ತೀಚಿನ ವರ್ಷಗಳಲ್ಲಿ ಹಿಮಾಲದ ಮೇಘಸ್ಪೋಟ, ಭೂಕುಸಿತ ಸಾಮಾನ್ಯವಾಗಿದೆ. ಇದರಿಂದ ದಿಢೀರ್ ಪ್ರವಾಹ ಉಂಟಾದ ನಿದರ್ಶನಗಳೂ ಇವೆ. ಹೀಗಿರುವಾಗ ಆಣೆಕಟ್ಟು ನಿರ್ಮಾಣ ಸಂದರ್ಭದಲ್ಲಿ ಅಥವಾ ಅನಂತರ ಯಾವುದೇ ಅವಘಡ ಜರುಗಿದರೂ ಅರುಣಾಚಲ ಪ್ರದೇಶ, ಆಸ್ಸಾಮ್ ಮೇಲೆ ಅದರ ಪರಿಣಾಮ ಆಗದೇ ಇರದು.
`ನನ್ನ ಹಕ್ಕು' ಎಂದಿರುವ ಚೀನಾ : ಬ್ರಹ್ಮಪುತ್ರ ನದಿಯು ಭಾರತದ ಅರುಣಾಚಲ ಪ್ರದೇಶ ಮತ್ತು ಆಸ್ಸಾಮ್ ರಾಜ್ಯಗಳ ಮೂಲಕ ಹರಿಯುತ್ತದೆ. ಅರುಣಾಚಲ ಪ್ರದೇಶದ ಹಲವು ಭಾಗಗಳನ್ನು ಚೀನಾ ತನ್ನದೆಂದು ಪ್ರತಿಪಾದಿಸುತ್ತಿದೆ. ಈ ಬಗ್ಗೆ ಭಾರತದೊಂದಿಗೆ ಹಲವು ಬಾರಿ ವಾಗ್ವಾದ ನಡೆಸಿರುವದನ್ನು ಇಲ್ಲಿ ಗಮನಿಸಬಹುದು. ಚೀನಾ ಬ್ರಹ್ಮಪುತ್ರ ನದಿಯ ಮೇಲೆ ಅತಿ ದೊಡ್ಡ ಆಣೆಕಟ್ಟು ನಿರ್ಮಾಣದ ಬಗ್ಗೆ ೨೦೨೦ರಲ್ಲಿಯೇ ಭಾರತವು ಆಕ್ಷೇಪಣೆ ವ್ಯಕ್ತಪಡಿಸಿತ್ತು. ಜತೆಗೆ, ಬ್ರಹ್ಮಪುತ್ರದ ಉಪನದಿಗೆ ದೊಡ್ಡ ಆಣೆಕಟ್ಟು ನಿರ್ಮಾಣ ಆರಂಭಿಸಿತು. ಭಾರತದ ಆಕ್ಷೇಪಣೆಗೆ ಉತ್ತರಿಸಿದ್ದ ಚೀನಾ, ಯಾರ್ಲಂಗ್ ಸಗ್ಪೋ ನದಿಗೆ ಆಣೆಕಟ್ಟು ನಿರ್ಮಿಸುವುದಕ್ಕೆ ತನಗೆ ಹಕ್ಕು ಇದ್ದು, ಅದರಿಂದ ಉಂಟಗುವ ಪರಿಣಾಮಗಳ ಸಂಪೂರ್ಣ ಅರಿವೂ ಇದೆ ಎಂದು ಸಮರ್ಥಿಸಿಕೊಂಡಿತ್ತು. ಬ್ರಹ್ಮಪುತ್ರ ನದಿಯ ನೀರಿನ ಮ್ಟ, ನೀರಿನ ಲಭ್ಯತೆ ಹಾಗೂ ಮಳೆಯ ಪ್ರಮಾಣದ ಬಗ್ಗೆ ದತ್ತಾಂಶ ಹಂಚಿಕೊಳ್ಳುವ ಸಂಬAಧ ಎರಡೂ ದೇಶಗಳ ನಡುವೆ ೨೦೦೬ರಲ್ಲಿ ಒಪ್ಪಂದ ಆಗಿದೆ. ೨೦೨೩ಕ್ಕೆ ಅದು ಅಂತ್ಯಗೊAಡಿದ್ದು, ಡಿ.೧೮ರಂದು ನಡೆದಿದ್ದ ದ್ವಿಪಕ್ಷೀಯ ಮಾತುಕತೆ ಸಂದರ್ಭದಲ್ಲಿ ಈ ವಿಚಾರ ಪ್ರಸ್ತಾಪವಾಗಿದೆ ಎನ್ನಲಾಗಿದೆ.
ಆಣೆಕಟ್ಟೆಯ ನಿರ್ಮಾಣವು ಪ್ರಕೃತಿಯ ಮೇಲೆ ಗಂಭೀರ ಪರಿಣಾಮ ಬೀರಲಿದೆ. ನದಿಯ ಜೀವವೈವಿಧ್ಯಕ್ಕೆ ಧಕ್ಕೆ ತರುವುದಲ್ಲದೇ, ಹಿಮಾಲಯದ ಸೂಕ್ಷö್ಮ ಪರಿಸರ ವ್ಯವಸ್ಥೆಯನ್ನು ಹಾಳು ಮಾಡಲಿದೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ. ದೊಡ್ಡ ಆಣೆಕಟ್ಟು ಟಿಬೆಟ್ನ ಭೂಪ್ರದೇಶದ ಸ್ವರೂಪವನ್ನೇ ಬದಲಾಯಿಸಲಿದೆ. ಭಾರೀ ಸಂಖ್ಯೆಯ ಜನರಿಗೆ ಪುನರ್ವಸತಿ ಕಲ್ಪಿಸಬೇಕಾಗುತ್ತದೆ. ಮಣ್ಣಿನ ಸವಳಿಕೆ ಹೆಚ್ಚಾಗಿ ಹೂಳಿನ ಸಮಸ್ಯೆ ಕಾಡುತ್ತದೆ. ಆಣೆಕಟ್ಟೆಯ ಕೆಳ ಪ್ರದೇಶಗಳಲ್ಲಿರುವ ವಿವಿಧ ಪ್ರಾಣಿಗಳ ಆವಾಸ ಸ್ಥಾನಗಳ ಮೇಲೆ ದುಷ್ಪರಿಣಾಮ ಬೀರುವುದಂತೂ ನಿಜ.
-ಎಸ್. ಆರ್. ಮಣೂರ.
ಹಿರಿಯ ಪತ್ರಕರ್ತರು ಕಲಬುರಗಿ
No comments:
Post a Comment