ads

Search This Blog

Tuesday, 7 January 2025

ಪ್ರತಿಭೆಗಳು ಗುರುತಿಸುವ ಕಾರ್ಯ ನಿತ್ಯ ನಿರಂತರವಾಗಿರಲಿ : ಪೂಜ್ಯ ಸಿದ್ದಲಿಂಗ ಶ್ರೀ

 ಧನರಾಜ ರಾಠೋಡ ಮುತ್ತಕೋಡ

ಜೇವರ್ಗಿ ; ಇಂದಿನ ಪ್ರತಿ ಮಗುವಿನಲ್ಲಿ ಅದ್ಭುತ ಪ್ರತಿಭೆಗಳು ಇವೆ.ಅದನ್ನು ಗುರುತಿಸುವ ಕಾರ್ಯ ಶಿಕ್ಷಕರದ್ದು.ಅದು ನಿತ್ಯ ನಿರಂತರ ಎಂಬಂತೆ,ಪ್ರತಿಭೆ ಗುರುತಿಸುವ ಕಾರ್ಯ ಮಾಡುತ್ತಲೆ ಇರಬೇಕು ಎಂದು ಯಡ್ರಾಮಿ ಪೂಜ್ಯರಾದ ಸಿದ್ದಲಿಂಗ ಮಹಾಸ್ವಾಮಿಗಳು ಶಿಕ್ಷಕರಿಗೆ ‌ಕರೆ ನೀಡಿದರು.



ಪಟ್ಟಣದ ಗುರುಕುಲ ಸಂಸ್ಥೆಯ ವತಿಯಿಂದ,ಗುರುಕುಲ ಸ್ವತಂತ್ರ ವಿಜ್ಞಾನ ಪಪೂ ಕಾಲೇಜಿನಲ್ಲಿ,ಗುರುಕುಲ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಧ್ಯಾರ್ಥಿಗಳಿಗೆ ಪದಕ ಪ್ರಶಸ್ತಿಗಳ ವಿತರಣಾ ಸಮಾರಂಭದ ಸಾನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು.

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪೋಷಕರು ಮತ್ತು ಶಿಕ್ಷಕರು ಕೇವಲ ಅಂಕಗಳಿಗೆ ಮಕ್ಕಳನ್ನು ಸೀಮಿತ ಗೊಳಿಸಬಾರದು.ಅವರು ಸಮಾಜ ಮುಖಿ ಕಾರ್ಯದತ್ತ ದಾಪುಗಾಲು ಇಡುವಂತೆ ಸಂಸ್ಕಾರಗಳ ಮೂಲಕ ಅವರಿಗೆ ಸಾಮಾಜೀಕರಣ ಮಾಡಬೇಕು ಎಂದು ಶ್ರೀಗಳು ಹೇಳಿದರು.

ಇದೆ ಸಂದರ್ಭದಲ್ಲಿ ತಾಲ್ಲೂಕು ದೈಹಿಕ ಕ್ಷೇತ್ರ ಶಿಕ್ಷಣಾಧಿಕಾರಿ ಶಿವಪುತ್ರ ಬಿರಗೊಂಡ,ಸಂಸ್ಥೆಯ ಕಾರ್ಯದರ್ಶಿ ಮಹಾಂತಯ್ಯ ಸಿ ಹಿರೇಮಠ ಹಾಗೂ ಗೌರವ ಸಮ್ಮಾನ್ ಸ್ವೀಕರಿಸಿದ ನಿವೃತ್ತ ಶಿಕ್ಷಕ ರಮೇಶ್ ಗುತ್ತೆದಾರ ಮಾತನಾಡಿದರು.



ನಿವೃತ್ತ ಶಿಕ್ಷಕರುಗಳಿಗೆ ಗೌರವ ಸಮ್ಮಾನ್

ವಿವಿಧ ಶಾಲಾ ಕಾಲೇಜುಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಶಿಕ್ಷಕರುಗಳಿಗೆ ಗೌರವ ಸಮ್ಮಾನ್ ನಡೆಯಿತು. ಚಂದ್ರಶೇಖರ್ ಬಿರಾದಾರ, ಶಾಂತಪ್ಪ ಬಿಲ್ಲಾಡ,ಬಸವರಾಜ, ಶಾರದಾಬಾಯಿ ಸಾಲಿಮಠ,ಚಾಂದಸಾಬ ಬಳಗಾನೂರ, ಶರಣಪ್ಪ ಕಮತಗಿ,ಇಂದುಧರಾ ಹಿರೇಮಠ, ಶಾಂತಗೌಡ ಹಂಚಿನಾಳ,ರಮೇಶ್ ಗುತ್ತೆದಾರ, ರಾಮಚಂದ್ರ ಕುಮಸಗಿ,ದಸ್ತಗಿರ ಚೌದರಿರವರುಗಳಿಗೆ ಸನ್ಮಾನಿಸಲಾಯಿತು.


ಈ ಕಾರ್ಯಕ್ರಮದಲ್ಲಿ ದೈಹಿಕ ಶಿಕ್ಷಣಾಧಿಕಾರಿ ಶಿವಪುತ್ರ ಬಿರಗೊಂಡ,ಮಹಾಂತಯ್ಯ ಸಿ ಹಿರೇಮಠ,ಚನ್ನಮಲ್ಲಯ್ಯ ಹಿರೇಮಠ,ಬಸಮ್ಮ ಸಿ ಹಿರೇಮಠ, ಎಸ್ ಕೆ ಬಿರಾದಾರ,ಶ್ರೀಹರಿ ಕರಕಿಹಳ್ಳಿ, ಪ್ರಶಾಂತಗೌಡ ಮಾಲಿಪಾಟೀಲ್ ಜೈನಾಪೂರ, ಕಾಸಿನಾಥ ಸಾಹು,ಶರಣಪ್ಪ ಪರಸಗೊಂಡ,ನಿಜಲಿಂಗಪ್ಪ ಮಾನ್ವಿ,ಮಹ್ಮದ ಅಲಿ ನಧಾಫ್ ಹರನಾಳ,ಮಡಿವಾಳಪ್ಪ ಗಂವ್ಹಾರ, ಮಹಾದೇವಯ್ಯ ಸ್ಥಾವರಮಠ,ಚನ್ನಬಸಪ್ಪ ಸಾಹು,ರಮೇಶ ಜಾನಕರ್,ಜಗದೀಶ್ ಎಸ್ ಉಕನಾಳಕರ್, ಜ್ಯೋತಿ ಸಾಲಿಮಠ,ರಾಜೇಂದ್ರ ಮಠ ಸೇರಿದಂತೆ ಅನೇಕರು ಇದ್ದರು.



ಅಂಕಗಳಿಗಿಂತ ಸಂಸ್ಕಾರ ಮುಖ್ಯ

ಇಂದಿನ ಮಕ್ಕಳಿಗೆ ಕೇವಲ ಅಂಕಗಳಿಗೆ ಸೀಮಿತ ಮಾಡಬೇಡಿ.ಅವರಿಗೆ ಔಪಚಾರಿಕ ಶಿಕ್ಷಣದ ಜೊತೆಗೆ ಅನೌಪಚಾರಿಕ ಶಿಕ್ಷಣ ಸಹ ಅಷ್ಟೇ ಮುಖ್ಯ.ಅವರಲ್ಲಿ ಒಳ್ಳೆಯ ಸಂಸ್ಕಾರವನ್ನು ಬೆಳೆಸಿ.


            ಪೂಜ್ಯ ಸಿದ್ದಲಿಂಗ ಶ್ರೀಗಳು
               ವಿರಕ್ತ ಮಠ ಯಡ್ರಾಮಿ





**  ಮುಖ್ಯಾಂಶಗಳು  **


* ಪ್ರತಿ ಮಗುವಿನಲ್ಲಿ ಅದ್ಭುತ ಪ್ರತಿಭೆ ಉಂಟು : ಯಡ್ರಾಮಿ ಶ್ರೀಗಳು

** ಪ್ರತಿಭೆ ಗುರುತಿಸುವ ಕಾರ್ಯ ನಿತ್ಯ ನಿರಂತರವಾಗಿರಲಿ : ಪೂಜ್ಯರ ಸಲಹೆ.


* ಪಟ್ಟಣದ ಗುರುಕುಲ ಸಂಸ್ಥೆಯ ಕಾರ್ಯ ಶ್ಲಾಘನೀಯ.

** ಜೆ ಎಸ್ ಎಸ್ ಸಂಸ್ಥೆಯಂತೆ ಗುರುಕುಲ ಸಂಸ್ಥೆ ಹೆಮ್ಮರವಾಗಿ ಬೆಳೆಯಲಿ : ಶ್ರೀಗಳ ಕಟಾಕ್ಷ


** ವಿವಿಧ ಸ್ಪರ್ಧೆಗಳಲ್ಲಿ ವಿಜೇತ ಮಕ್ಕಳಿಗೆ ಪದಕ ಪುರಸ್ಕಾರ ಸುರಿಮಳೆ.


** ಪುಠಾಣಿಗಳ ಕೊರಳಲ್ಲಿ ನಲಿದಾಡಿದ ಪದಕಗಳು.


** ಪುಠಾಣಿಗಳ ಕೊರಳಲ್ಲಿ ಪದಕಗಳು. ಪೋಟೋ ತೆಗೆಸಿಕೊಂಡ ಪೋಷಕರು.

No comments:

ಪ್ರೇಮ ಕಾಶ್ಮೀರದಲ್ಲಿ ರಕ್ತದೋಕುಳಿ; ಹಿಂದೂಗಳೇ ಟಾರ್ಗೆಟ...!

  ಪ್ರೇಮ ಕಾಶ್ಮೀರದಲ್ಲಿ ರಕ್ತದೋಕುಳಿ; ಹಿಂದೂಗಳೇ ಟಾರ್ಗೆಟ್. ಭೂಲೋಕದ ಸ್ವರ್ಗವೆಂದೇ ಕರೆಯುವ ಜಮ್ಮು-ಕಾಶ್ಮೀರದ ಪೆಹಲ್ಗಾಮ್ ಸಮೀಪದ ಬೈಸರನ್ ಹುಲ್ಲುಗಾವಲಿನಲ್ಲಿ ಪಾಕ್ ಪ್...