ads

Search This Blog

Saturday, 25 January 2025

ಗಣರಾಜ್ಯೋತ್ಸವ" ಅಮೃತ ಮಹೋತ್ಸವದ ಸಂಭ್ರಮ

76 ನೇ ಗಣರಾಜ್ಯೋತ್ಸವ"   ಅಮೃತ ಮಹೋತ್ಸವದ ಸಂಭ್ರಮ"     

ನಾನು  ಕೇವಲ  ಒಂದು  ಜಾತಿ  ಅಥವಾ ಒಂದೇ ಜನಾಂಗಕೋಸ್ಕರ  ಕೆಲಸ  ಮಾಡಿಲ್ಲ. ಭಾರತದ  ಪ್ರತಿಯೊಬ್ಬ  ಕಟ್ಟ  ಕಡೆಯ  ವ್ಯಕ್ತಿಯ  ಸಲುವಾಗಿ  ಜೀವ  ಸವೆಸಿದ್ದೇನೆ  ಸಂಶಯವಿದ್ದರೆ ಹೋಗಿ  ಸಂವಿಧಾನ  ಓದಿಕೊಳ್ಳಿ

ನಮ್ಮ ಗಣರಾಜ್ಯೋತ್ಸವಕ್ಕೆ 75 ವರ್ಷಗಳ  ಪೂರೈಸಿ    ಅಮೃತ್  ಮಹೋತ್ಸವದ ಸಂಭ್ರಮದಲ್ಲಿದ್ದೇವೆ. ಈ ಸಂಭ್ರಮದ  ಹಿಂದಿನ ಹೋರಾಟ  ಬಹಳ ಕಷ್ಟಕರವಾದ ದಿನಗಳನ್ನು ಎದುರಿಸಬೇಕಾಗಿತ್ತು. ಏಕೆಂದರೆ  ನಮ್ಮ ಭಾರತದ  ಸ್ವಾತಂತ್ರ್ಯದ  ಮೊದಲು  ನಮ್ಮ ದೇಶ ಬ್ರಿಟಿಷರ  ಆಳ್ವಿಕೆಯಲ್ಲಿ ಇತ್ತು .ಬ್ರಿಟಿಷರಿಂದ ಮುಕ್ತಿ ಪಡೆಯಬೇಕಾದರೆ ಸತತವಾದ ಹೋರಾಟ  ಬಲಿದಾನ, ತ್ಯಾಗ ,ಅತಿಯಾದ ಹೋರಾಟ  ಮಾಡಿ  ಸ್ವಾತಂತ್ರ್ಯ ಪಡೆಯಲಾಯಿತು .1947 ಆಗಸ್ಟ್ 15 ರಂದು.ಆದರೆ  ಕೇವಲ ಸ್ವಾತಂತ್ರ್ಯ  ಪಡೆದರೆ ಸಾಲದು  ದೇಶಕ್ಕೆ  ಸಂವಿಧಾನದ ತುಂಬಾ ಅವಶ್ಯಕವಾಗಿತ್ತು.  ಡೋಮಿನಿಯನ್  ವ್ಯವಸ್ಥೆ ಕ್ರಿ.ಶ.  1931 ರ ಕಾಯ್ದೆಯ ಪರಿಣಾಮವಾಗಿ ಆಸ್ಟ್ರೇಲಿಯಾ, ದಕ್ಷಿಣ  ಆಫ್ರಿಕಾ,  ಕೆನಡಾ, ಮುಂತಾದ  ಡೋಮಿನಿಯನ್  ರಾಜ್ಯಗಳು ಸ್ಥಾಪನೆಯಾದವು. ಆ ರಾಜ್ಯಗಳ  ಆಂತರಿಕ  ವಿಷಯದಲ್ಲಿ   ಸ್ವಾತಂತ್ರ್ಯ   ಪಡೆದವು . ಆದರೆ    ವಿದೇಶಾಂಗ  ಆಡಳಿತದ  ನೀತಿಯಲ್ಲಿ ಸ್ವಾತಂತ್ರ್ಯವಾಗಿರಲಿಲ್ಲ.   ಇಡೀ  ಪ್ರಪಂಚದ  ಮುಂದುವರೆದ   ರಾಷ್ಟ್ರಗಳ   ಪರಿಸ್ಥಿತಿ  ಈ ರೀತಿಯಾಗಿದ್ದಾಗ.  ನಮ್ಮ ಭಾರತ  ದೇಶದ   ಪರಿಸ್ಥಿತಿ   ತುಂಬಾ   ಕಷ್ಟಕರವಾದ ವಿಷಯವಾಗಿತ್ತು  .  ಅಂತಹ   ಸಮಯದಲ್ಲಿ ಭಾರತೀಯರಲ್ಲಿ  ಜಾತಿ ,ಧರ್ಮ, ಮೇಲು, ಕಿಳು ,ಶ್ರೀಮಂತ, ಬಡವ , ಎಂಬ ಮೂಢನಂಬಿಕೆ ಹೆಚ್ಚಾಗಿತ್ತು. ಇಂತಹ ವಿಷಯಗಳನ್ನೆಲ್ಲಾ ಕೇಂದ್ರಬಿಂದುವಾಗಿಟ್ಟುಕೊಂಡು  ಸ್ವಾತಂತ್ರ್ಯ ಭಾರತದ  ಪ್ರಥಮ  ಪ್ರಧಾನ ಮಂತ್ರಿಯಾದ ಪಂಡಿತ್  ಜವಾಹರಲಾಲ್ ನೆಹರು  ಅವರ ಸರ್ಕಾರದ  ನೇತೃತ್ವದಲ್ಲಿ  ಭಾರತಕ್ಕೆ  ತನ್ನದೇ ಆದ  ಒಂದು  ಸಂವಿಧಾನದ  ಅಗತ್ಯವಾಗಿತ್ತು. ಆದರಿಂದ  1946 ಮೇ 19 ರ  "ಕ್ಯಾಬಿನೆಟ್" ಮಿಷನ್  ಯೋಜನೆ  ಪ್ರಕಾರ ಸಂವಿಧಾನದ ರಚನಾ  ರಾಜ್ಯಾಂಗ  ಸಭೆಯನ್ನು ರಚಿಸಲಾಯಿತು. ಸಂವಿಧಾನ  ಸಮಿತಿಯ ಪ್ರಮುಖರು  ಡಾ: ಬಾಬು ರಾಜೇಂದ್ರ ಪ್ರಸಾದ್ ಅಧ್ಯಕ್ಷರು  ಡಾ: ಬಿ. ಆರ್. ಅಂಬೇಡ್ಕರ್ ಕರಡು ಸಮಿತಿಯ  ಅಧ್ಯಕ್ಷರನ್ನಾಗಿ  ಹಾಗೂ  ಇತರ ಸದಸ್ಯರಾದ  ಅಲ್ಲಾಡಿ  ಕೃಷ್ಣಮಚಾರಿ ಅಯ್ಯಂಗಾರ್, ಮಹಮ್ಮದ್ ಸೈದುಲ್ಲಾ, ಕೆ.ಎಂ. ಮುನ್ಸಿ ,ಬಿ.ಪಿ .ಖೇತಾನ್ ,ರಾಜಗೋಪಾಲಚಾರಿ ಹೀಗೆ  ಏಳು  ಜನ  ಸದಸ್ಯರನ್ನಾಗಿ ನೇಮಿಸಲಾಯಿತು.  ಈ ನಿಯಮದ ಪ್ರಕಾರದಂತೆ  ಸಂವಿದಾನ  ರಚಿಸಲು  ಯಾರು ಸಹಾಯ  ಮಾಡಲಿಲ್ಲ  ಏಕೆಂದರೆ  ಸಂವಿಧಾನ ರಚಿಸುವುದು   ತುಂಬಾ   ಕಷ್ಟಕರವಾದ ಕೆಲಸವಾಗಿತ್ತು.  ಅಂತಹ  ಸಮಯದಲ್ಲಿ ದೀನದಲಿತರ  ನಾಯಕ, ದೇಶದ   ಪ್ರಥಮ ಕಾನೂನಿನ   ಮಂತ್ರಿ,  ಸಮಾಜ   ಸುಧಾರಕ ಡಾ: ಬಿ.ಆರ್ .ಅಂಬೇಡ್ಕರ್ ಅವರು ಮುಂದಾದರು. ಇವರು  ದೇಶದ  ಸಂವಿಧಾನವನ್ನು  ಹಗಲು ಇರುಳು  ಎಂಬದೆ. ತಿಂಡಿ, ಊಟ, ನೀರು, ನಿದ್ರೆ ,ಇಲ್ಲದೆ ಸತತವಾಗಿ ಕುಳಿತು ಭಾರತ ದೇಶದ ಸಂವಿಧಾನ ರಚನೆ ಮಾಡಿದ್ದರು .1950 ಜನವರಿ 26 ರಂದು ಸಂವಿಧಾನವನ್ನು ಜಾರಿಗೆ ಬಂದ ದಿನವನ್ನು  ಗಣರಾಜ್ಯೋತ್ಸವ  ದಿನವನ್ನಾಗಿ ಆಚರಿಸಲಾಗುತ್ತದೆ. ಪ್ರಪಂಚದ ಸಂವಿಧಾನದಲ್ಲಿ ಭಾರತ  ದೇಶದ  ಸಂವಿಧಾನ  ಅತ್ಯಂತ ಶ್ರೇಷ್ಠವಾದದ್ದು  .ಹಾಗೂ  ಲಿಖಿತ ಸಂವಿಧಾನವಾಗಿರುತ್ತದೆ.

 ಭಾರತ ದೇಶದ ಪ್ರಜೆಗಳಾದ ನಾವು ಭಾರತವನ್ನು ಸಾರ್ವಭೌಮ, ಸಮಾಜವಾದಿ, ಜಾತ್ಯಾತೀತ ,ಪ್ರಜಾಸತ್ತಾತ್ಮಕ ,ಮತ್ತು ಗಣತಂತ್ರ, ಸಮಾನತೆ , ಭ್ರಾತೃತ್ವ ,ನ್ಯಾಯ ,ರಾಷ್ಟ್ರವನ್ನಾಗಿ ಸ್ಥಾಪಿಸಬೇಕಾದದ್ದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ  .ಇಲ್ಲಿನ  ಎಲ್ಲಾ  ಪ್ರಜೆಗಳಿಗೆ ಯಾವುದೇ ಜಾತಿ ,ಧರ್ಮ, ಮೇಲು, ಕೀಳು ,ಬೇದ ,ಭಾವವಿಲ್ಲದೆ ಸಮಾನವಾಗಿ ಶೈಕ್ಷಣಿಕವಾಗಿ ,ಆರ್ಥಿಕವಾಗಿ, ಸಾಮಾಜಿಕವಾಗಿ , ರಾಜಕೀಯವಾಗಿ , ನ್ಯಾಯಯುತವಾಗಿ, ನ್ಯಾಯವನ್ನು ಒದಗಿಸಿ ಅವರ ಆಚಾರ ,ವಿಚಾರ, ಅಭಿವ್ಯಕ್ತಿ ,ನಂಬಿಕೆ ,ಸ್ವಾತಂತ್ರ್ಯ ,ಸ್ಥಾನಮಾನ, ಭಾರತ ದೇಶದ  ಪ್ರಥಮ ಪ್ರಜೆಗಳಾದ ರಾಷ್ಟ್ರಪತಿಗೂ  ದೇಶದ  ಕೂಲಿ ಕಾರ್ಮಿಕರಿಗೂ ಎಲ್ಲರಿಗೂ ಸಮಾನವಾದ ಅವಕಾಶಗಳ   ಸಮಾನತೆಯನ್ನು  ದೊರಕಿಸಿ ವೈಯಕ್ತಿಕ   ಘನತೆ  ಮತ್ತು  ದೇಶದ  ಆಯ್ಕೆ ಎಲ್ಲರಲ್ಲಿ  ಭಾತೃತ್ವವನ್ನು  ಪ್ರೋತ್ಸಾಹಿಸಿ  ದೇಶದ ಎಲ್ಲಾ   ಜನತೆಗೆ  ಒಗ್ಗಟ್ಟಿನಿಂದ ಸ್ವಾಭಿಮಾನದಿಂದ  ನ್ಯಾಯಯುತವಾಗಿ  ಬದುಕಬೇಕೆಂಬುದನ್ನು ಈ ನಮ್ಮ  ಭಾರತ  ದೇಶದ  ಸಂವಿಧಾನ ಮಹತ್ವದ ಸೂಚನೆ ತಿಳಿಸುತ್ತದೆ.ಈ ಮೇಲೆ ಬಳಸಿರುವ   ಸಂವಿಧಾನ ಪೀಠಿಕೆಯಲ್ಲಿನ ಪದಗಳ ಅರ್ಥ ಹೀಗಿರುತ್ತವೆ.

1. ಸಾರ್ವಭೌಮ ರಾಷ್ಟ್ರ :ಎಂದರೆ ಭಾರತವು ಆಂತರಿಕವಾಗಿ ಮತ್ತು ಬಾಹ್ಯವಾಗಿ ಸ್ವಾತಂತ್ರ್ಯ ನಿರ್ಣಯಗಳನ್ನು  ಕೈಗೊಳ್ಳುವ ಅಧಿಕಾರ ಹೊಂದಿದೆ ಎಂದರ್ಥ.

2. ಜಾತ್ಯಾತೀತ ರಾಷ್ಟ್ರ :ಎಂದರೆ ಭಾರತವು ಯಾವುದೇ ಧರ್ಮವನ್ನು ರಾಷ್ಟ್ರೀಯ ಧರ್ಮವನ್ನಾಗಿ ಸ್ವೀಕರಿಸಿಲ್ಲ ಎಂದರ್ಥ.

3. ಸಮಾಜವಾದಿ :ಎಂದರೆ ಸಮಾಜದಲ್ಲಿ ಸಾಮಾಜಿಕವಾಗಿ ತಾರತಮ್ಯವಿಲ್ಲದಿರುವುದು ಎಂದರ್ಥ.

4. ಪ್ರಜಾಪ್ರಭುತ್ವ :ಎಂದರೆ ಪ್ರಜೆಗಳಿಂದ ಪ್ರಜೆಗಳಿಗಾಗಿ ಪ್ರಜೆಗಳಿಗೋಸ್ಕರ ರೂಪಿಸಿದ್ದ ಆಡಳಿತ.

5. ಗಣರಾಜ್ಯ :ಎಂದರೆ ಒಂದು ರಾಷ್ಟ್ರದ ಮುಖ್ಯೆಸ್ಥರನ್ನು ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಚುನಾವಣೆ ಮೂಲಕ ಆಯ್ಕೆ ಮಾಡುವುದಕ್ಕೆ ಗಣತಂತ್ರ/ ಗಣರಾಜ್ಯ ಎನ್ನುವರು.

6. ಸಮಾನತೆ: ಎಂದರೆ ಸಮಾಜದ ಎಲ್ಲಾ ವರ್ಗ ಧರ್ಮದವರನ್ನು ಸಮಾನವಾಗಿ ನೋಡಿಕೊಳ್ಳುವುದು.

7. ಭ್ರಾತೃತ್ವ :ಎಂದರೆ ದೇಶದಲ್ಲಿನ ಪ್ರತಿಯೊಬ್ಬರು ಪರಸ್ಪರ ಸಹೋದರತ್ವ ಮನೋಭಾವನೆಯಿಂದ ಜೀವಿಸುವುದು ಎಂದರ್ಥ.

8. ನ್ಯಾಯ :ಎಂದರೆ ಎಲ್ಲಾ ಜನರಿಗೂ ಸಾಮಾಜಿಕ, ಆರ್ಥಿಕ, ರಾಜಕೀಯ, ನ್ಯಾಯ ಒದಗಿಸುವುದು ಎಂದರ್ಥ.

 ವಿಶ್ವದಲ್ಲಿ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಎಂಬ ಹೆಗ್ಗಳಿಕೆ ಭಾರತದು ಆದರೆ ಪ್ರಜಾಪ್ರಭುತ್ವದ ಮೂಲ ಆಧಾರ ನಮ್ಮ ಭಾರತ ದೇಶದ  ಸಂವಿಧಾನ  ಅಷ್ಟೇ  ಅಲ್ಲದೆ  ಜಗತ್ತಿನಲ್ಲಿ ಅತೀ  ದೊಡ್ಡ  ಲಿಖಿತ ಸಂವಿಧಾನ ಹೊಂದಿದೆ .ಡಾ: ಬಿ.ಆರ್ .ಅಂಬೇಡ್ಕರ್ ಅವರಿಂದ  ರಚಿಸಲ್ಪಟ್ಟಿರುವ ನಮ್ಮ  ಭಾರತ  ದೇಶದ  ಸಂವಿಧಾನದಲ್ಲಿ  ಎಲ್ಲಾ ವರ್ಗಗಳು ಎಲ್ಲಾ ಸ್ಥರದ ಜನರ ಹಿತವಿದೆ ಜೊತೆಗೆ ನಮ್ಮ ದೇಶದ ಪ್ರಜಾಪ್ರಭುತ್ವದ ಭದ್ರಬುನಾದಿಯ ನಮ್ಮ  ಸಂವಿಧಾನವಾಗಿದೆ.   ಇಡೀ ಪ್ರಪಂಚದಲ್ಲಿಯೇ ವಿಶೇಷವಾದ ಸಂವಿಧಾನ ಹೊಂದಿರುವಂತಹ ನಮ್ಮ ಸಂವಿಧಾನವನ್ನು ಅಂದರೆ ಭಾರತದ ದೇಶದ ಸಂವಿಧಾನ ಬರೆಯಲು ಸುಮಾರು 2 ವರ್ಷ 11 ತಿಂಗಳು 18 ದಿನಗಳ ಕಾಲ ತೆಗೆದುಕೊಂಡಿತ್ತು.

ನಮ್ಮ ಭಾರತ  ದೇಶದ ಸಂವಿಧಾನದಲ್ಲಿ ಮೂರು ಪ್ರಕಾರದ ಹಂಚಿಕೆಗಳಿವೆ.

 1.ಕೇಂದ್ರ ಪಟ್ಟಿ 99 ವಿಷಯಗಳಿವೆ ಉದಾರಣೆಗೆ ರಕ್ಷಣಾ ವ್ಯವಸ್ಥೆ, ವಿದೇಶಾಂಗ ನೀತಿ, ಯುದ್ಧ ,ಶಾಂತಿ, ಅಂಚೆ ,ತಂತಿ, ನಾಣ್ಯ ,ಬ್ಯಾಂಕಿಂಗ್, ವಿದೇಶ ವ್ಯವಹಾರ ಇತ್ಯಾದಿ.

2. ರಾಜ್ಯಪಟ್ಟಿಯಲ್ಲಿ 61 ವಿಷಯಗಳ ಅಡಕವಾಗಿ ಉದಾಹರಣೆಗೆ ಸಾರ್ವಜನಿಕರ ಶಾಂತಿ, ಸ್ಥಳೀಯ ಸರ್ಕಾರ, ಶಿಕ್ಷಣ, ಗ್ರಂಥಾಲಯ ,ವ್ಯವಸಾಯ ಪಶುಪಾಲನೆ, ಭೂಕಂದಾಯ ನೀರಾವರಿ ,ವಾಹನಗಳ ತೆರಿಗೆ, ಇತ್ಯಾದಿ.

3. ಸಮವರ್ತಿ ಪಟ್ಟಿಯಲ್ಲಿ 52 ವಿಷಯಗಳಿವೆ ಉದಾಹರಣೆಗೆ ಕ್ರಿಮಿನಲ್ ಕಾಯ್ದೆ ವಿವಾಹ ವಿಚ್ಛೇದ, ಒಕ್ಕಲುತನ, ಕುಟುಂಬ ಯೋಜನೆ, ಕಾರ್ಮಿಕರ  ಕಲ್ಯಾಣ, ಇತ್ಯಾದಿ.

 ಸಂವಿಧಾನದ ಪ್ರಮುಖ ಕೆಲವು ಅಂಶಗಳು ಸಂವಿಧಾನದಲ್ಲಿ 444  ಕಲಾಂಗಳಿವೆ   395 ವಿಧಿಗಳು 92 ಉಪವಿಧಿಗಳು 12  ಅನುಸೂಚಿಗಳಿವೆ  7635 ತಿದ್ದುಪಡಿಗಳಿವೆ  22 ಭಾಗಗಳು, ನಾಲ್ಕು ( 4 )ಉಪಭಾಗಗಳಿವೆ 114 ದಿನಗಳು ಚರ್ಚಿಸಲಾಗಿತ್ತು . ಇಲ್ಲಿಯವರೆಗೆ 110 ಕ್ಕು ಹೆಚ್ಚು ತಿದ್ದುಪಡಿಗಳು ಆಗಿವೆ.ಸುಮಾರು 8 ಸಾವಿರ ಪುಟಗಳು ಹೊಂದಿಸಲಾಗಿದೆ.

ಎಲ್ಲರಿಗೂ ಸಮಾನವಾದ ಮೂಲಭೂತ ಹಕ್ಕುಗಳು ಸಂವಿಧಾನ ಭಾಗ 3 ವಿಧಿಗಳು 12 ರಿಂದ 35 ರ ವರೆಗಿನ ಒಟ್ಟು 6 ಮೂಲಭೂತ ಹಕ್ಕುಗಳನ್ನು ಹಾಗೂ ಭಾಗ 4A 51A ಯಲ್ಲಿ 11 ಮೂಲಭೂತ ಕರ್ತವ್ಯಗಳನ್ನು ಒಳಗೊಂಡಿದೆ. ಇಂತಹ ಎಲ್ಲಾ ವಿಷಯಗಳನ್ನು ಹೊಂದಿರುವುದಕ್ಕೆ ಮೂಲ ಕಾರಣ ಪ್ರಪಂಚದ ಅನೇಕ  ರಾಜಕೀಯ  ವ್ಯವಸ್ಥೆಗಳಲ್ಲಿ ಪ್ರಜಾಪ್ರಭುತ್ವವೇ  ಅತ್ಯಂತ  ಸ್ವೀಕಾರ ವ್ಯವಸ್ಥೆಯಾಗಿದೆ .ಡೆಮೋಕ್ರೇಷೀಯೋ  ಎಂಬ ಗ್ರೀಕ್  ಪದವು  ಡೆಮೊ ಮತ್ತು  ಕ್ರೇಷಿಯೋ ಎಂಬ ಎರಡು ಪದಗಳ ಸಂಯೋಗ   ಡೆಮೋನ್ ಎಂದರೆ  ಪ್ರಜೆಗಳು  ಕ್ರೇಷಿಯೋ  ಎಂದರೆ ಅಧಿಕಾರ  ಡೆಮೋಕ್ರೇಷಿಯೋ  ಎಂದರೆ ಪ್ರಜೆಗಳ  ಅಧಿಕಾರ  ಇದು  ಪ್ರಜೆಗಳೇ ಪ್ರಭುಗಳು ಎಂಬುದನ್ನು ಸೂಚಿಸುತ್ತದೆ.  ಹಾಗಾಗಿ

 ಪ್ರತಿ  ವರ್ಷ  ನಮ್ಮ  ದೆಹಲಿಯ ಕೆಂಪುಕೋಟೆಯ ರಾಜಪಥದಲ್ಲಿ ಗಣರಾಜ್ಯೋತ್ಸವ  ಪಥಸಂಚಲನ ನಡೆಯುತ್ತದೆ. ಅಂದವಾದ  ಮೆರವಣೆಗೆ ಭಾರತದ ಭವ್ಯವಾದ ಮಿಲಿಟರಿ ಪರಾಕ್ರಮವನ್ನು  ಪ್ರತಿಬಿಂಬಿಸುತ್ತದೆ.  ಅಂದು ರಾಷ್ಟ್ರಪತಿಗಳು  ರಾಷ್ಟಧ್ಜವನ್ನು ಹಾರಿಸುತ್ತಾರೆ .ದೇಶದ ರಕ್ಷಣೆಗೋಸ್ಕರ ತಮ್ಮ ಪ್ರಾಣವನ್ನು  ತ್ಯಾಗ  ಮಾಡಿದವರಿಗೆ  ಗೌರವ ಸಲ್ಲಿಸುವ ಹಾಗೂ ಪರಮವೀರ ಚಕ್ರ ಮತ್ತು ವೀರ  ಚಕ್ರ  ಪ್ರಶಸ್ತಿ  ನೀಡಿ ಗೌರವಿಸುವಲ್ಲಾಗುತ್ತದೆ .! ಈ ದಿನ ಮಹತ್ವದ ದಿನ ಎಂದಿಗೂ ಮರೆಯಲಾಗದ ದಿನವಾಗಿದೆ.ಇಂಥ ಮಹತ್ವದ ಸಂವಿಧಾನವನ್ನು ರಚನಕಾರ ಮಹತ್ವದ ವ್ಯಕ್ತಿ! ಅಂದರೆ ಡಾ. ಬಿ.ಆರ್ .ಅಂಬೇಡ್ಕರ್ ಅವರು ಸತತವಾದ ಪ್ರಯತ್ನದ ಪ್ರತಿಫಲವೇ ಸಂವಿಧಾನದ ರಚನೆಗೆ ಕಾರಣವಾದದ್ದು.

 ಇವರು ಜನನ 1891ರ ಏಪ್ರಿಲ್ 14 ರಂದು ಮಹಾರಾಷ್ಟ್ರದ ಅಂಬೇವಾಡಿ (ಮ್ಹೋ)ಎಂಬ ಗ್ರಾಮದಲ್ಲಿ ಜನಿಸಿದ್ದರು. ಇವರು ಪಡೆದಿರುವ ಡಿಗ್ರಿಗಳೆಂದರೆ ಎಂ. ಎ,ಪಿ.ಎಚ್ .ಡಿ ,ಡಿ ಎಸ್.ಸಿ,ಡೀ.ಲೀಟ್, ಎಲ್ . ಎಲ್.ಡಿ,ಬಾರ್.ಅಟ್.ಲಾ, ಒಟ್ಟು ನಾಲ್ಕು  ಡಾಕ್ಟರೇಟ್ ಪದವಿ ಪಡೆದಿದ್ದರೂ. ಜೊತೆಗೆ ನಾಲ್ಕು ವೇದಗಳು 18 ಪುರಾಣಗಳು ಅರಿತವರಾಗಿದ್ರು ಜೊತೆಗೆ ಪ್ರಪಂಚದ 14  ವಿದ್ಯಾಧರರಲ್ಲಿ ಮೊದಲನೆಯ ವಿದ್ಯಾಧರರಾಗಿದ್ದರು ಎಂದು ಕರೆಯಲಾಗುತ್ತದೆ. ಜಗತ್ತಿನ ಆರು ಘನಪಂಡಿತರಲಿ ಅಂಬೇಡ್ಕರ್ ಅವರ ಅತ್ಯಂತ ಶ್ರೇಷ್ಠರು ಎಂದು ಕರೆಯಲಾಗುತ್ತದೆ ಹಾಗೂ ವಿಶ್ವದ ಸಮಾಜಶಾಸ್ತ್ರಗಳಾದ ಎನಸೈಕ್ಲೋಪಿಡಿಯಾ 15 ಭಾಗ ಅರಿತವರಾಗಿದ್ದರು.ಅದಕ್ಕಾಗಿಯೆ ಅಲ್ಪಕಾಲಾವಧಿಯಲ್ಲಿ ಸಮಾಜದ ಮಹತ್ತರ ಬದಲಾವಣೆ ಮಾಡಿ ಸಮಾಜದ ನಿರ್ಮಾಣ ನಿರ್ಮಾಪಕರ ಕೀರ್ತಿಗೆ ಪಾತ್ರರಾದವರೆಂದು ಹೇಳಲಾಗುತ್ತದೆ.

ತಾನು ಅನುಭವಿಸಿದ್ದಂತಹ ಅವಮಾನ ಹಿಂಸೆಯನ್ನು ನನ್ನ ಭಾರತದ ಜನರಾದ ನನ್ನ ಮಕ್ಕಳು ಯಾವ ರೀತಿ ಹಿಂಸೆಗೆ ಒಳಗಾಗಬಾರದು ಎಲ್ಲರೂ ಶಿಕ್ಷಣ ಪಡೆದು ಸಂಘಟಿತರಾಗಿ. ಅನ್ಯಾಯವಾದಾಗ ನ್ಯಾಯಕ್ಕಾಗಿ ಹೋರಾಟ ಮಾಡಿ ನಿಮ್ಮ ಜೀವನವನ್ನು ಸ್ವಾಭಿಮಾನದಿಂದ ಸಮಾಜದಲ್ಲಿ ತಲೆಯೆತ್ತಿ ಬದುಕಬೇಕು ಎಂಬ ಕಾರಣಕ್ಕಾಗಿ ಇಂತಹ ಅನೇಕ ಮಹತ್ವದ ಅಂಶಗಳನ್ನು ಭಾರತದ ಸಂವಿಧಾನದಲ್ಲಿ ರಚಿಸಲಾಗಿರತಕ್ಕಂತ ಅಂಶಗಳು ಮೂಲ ಕಾರಣ ಎಂದು  ಹೇಳಬಹುದು.

 ಅಂಬೇಡ್ಕರ್ ಹೇಳುವ ಮಾತಾಗಿದೆ ಸಂವಿಧಾನ ಎಷ್ಟೇ ಉತ್ತಮವಾಗಿದ್ದರೂ, ಸರ್ಕಾರ ಸರಿಯಾಗಿ ನಡೆಸುವವರು  ಇಲ್ಲಾ ಎಂದರೆ ಸಂವಿಧಾನ ಸರಿಯಾಗಿ ಕಾಣುವುದಿಲ್ಲ. ಸರ್ಕಾರ  ತುಂಬಾ ಸರಿಯಾಗಿ ನಡೆಸುವವರು ಇದ್ದರೆ ಸಂವಿಧಾನ  ಸರಿಯಾಗಿ ಇಲ್ಲದಿದ್ದರೂ ತುಂಬಾ ಚೆನ್ನಾಗಿ ಕಾಣಿಸುತ್ತದೆ. ಆದರೆ ನಮ್ಮ ಸಂವಿಧಾನ ಅತ್ಯಂತ ಉತ್ತಮವಾದ ಸಂವಿಧಾನವಾಗಿದೆ !.

ಮಂದಿರದಲ್ಲಿ   ಕುಳಿತಿರುವ.  ದೇವರು  ತನ್ನ ದೀಪವನ್ನು   ತಾನೇ   ಹಚ್ಚಿಕೊಳ್ಳಲಿಲ್ಲ   ಎಂದ ಮೇಲೆ ನಿಮ್ಮ ಬಾಳಲ್ಲಿ  ಹೇಗೆ ಬೆಳಕು ನೀಡಬಲ್ಲ. ಶಿಕ್ಷಣವೇ ಶಕ್ತಿ ಶಿಕ್ಷಣವೇ ಯುಕ್ತಿ, ಶಿಕ್ಷಣವೆಂಬ ಜ್ಯೋತಿ  ಬೆಳಗುತ್ತ  ಶಿಕ್ಷಣ  ಪಡೆಯಿರಿ ! ಶಿಕ್ಷಣ ನೀಡುವವರಾಗಿ  ಎಂದು  ಹೇಳುತ್ತಾ 76 ನೇಯ ಗಣರಾಜ್ಯೋತ್ಸವ  ಅಮೃತ್  ಮಹೋತ್ಸವದ ಹಾರ್ದಿಕ  ಶುಭಾಶಯಗಳು..!

 -ಶ್ರೀಮತಿ ಬುದ್ಧದೇವಿ ಅಶೋಕ್ ಸಂಗಮ     

ತಾ: ಜಿ:  ಬೀದರ್

No comments:

ಪ್ರೇಮ ಕಾಶ್ಮೀರದಲ್ಲಿ ರಕ್ತದೋಕುಳಿ; ಹಿಂದೂಗಳೇ ಟಾರ್ಗೆಟ...!

  ಪ್ರೇಮ ಕಾಶ್ಮೀರದಲ್ಲಿ ರಕ್ತದೋಕುಳಿ; ಹಿಂದೂಗಳೇ ಟಾರ್ಗೆಟ್. ಭೂಲೋಕದ ಸ್ವರ್ಗವೆಂದೇ ಕರೆಯುವ ಜಮ್ಮು-ಕಾಶ್ಮೀರದ ಪೆಹಲ್ಗಾಮ್ ಸಮೀಪದ ಬೈಸರನ್ ಹುಲ್ಲುಗಾವಲಿನಲ್ಲಿ ಪಾಕ್ ಪ್...