ads

Search This Blog

Sunday, 5 January 2025

ಅಪ್ಪಟ ಕನ್ನಡಿಗ ಸಮಾಜ ಜೀವಿ ಶ್ರೀನಿವಾಸ ತೇಲಂಗಗೆ ಮುಡಿಗೆರಿದ ಗೌರವ ಡಾಕ್ಟರೇಟ್ ಪದವಿ

ಶೋಧವಾಣಿ ಜಾಲಲೋಕ

ಬೆಂಗಳೂರು : ಅಪ್ಪಟ ಕನ್ನಡಿಗ ಮಹಾರಾಷ್ಟ್ರ ಮರಾಠಿ ನಾಡಿನಲ್ಲಿ ಕನ್ನಡ ಕೈಂಕರ್ಯ ಗೈಯುತ್ತ ಮರಾಠವಾಡ ಪ್ರಾಂತ್ಯದಲ್ಲಿ ಅನೇಕ ಸಾಮಾಜಿ. ಸಾಂಸ್ಕೃತಿಕ ಕನ್ನಡ ಸಮಾರಂಭ ಆಯೋಜನೆ ಮಾಡುತ್ತ ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ ಔರಂಗಾಬಾದ್ ಮರಾಠವಾಡ ಕನ್ನಡ ಸಾಂಸ್ಕೃತಿಕ ಸಂಘದ ಸಂಸ್ಥಾಪಕ ಶ್ರೀನಿವಾಸ ತೇಲಂಗ ಅವರಿಗೆ ತಮಿಳನಾಡಿನ ಅಸೀಯನ ಅಂತರರಾಷ್ಟ್ರೀಯ ಸಂಸ್ಕೃತ ಸಂಶೋಧನೆ ವಿಶ್ವವಿದ್ಯಾಲಯ ಅವರ ಸಮಾಜಿಕ ಕೊಡುಗೆಯನ್ನು ಗುರುತಿಸಿ ಶನಿವಾರ ಬೆಂಗಳೂರನಲ್ಲಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. 

ಶ್ರೀನಿವಾಸ ತೇಲಂಗಗೆ ತಮಿಳನಾಡಿನ ಅಸೀಯನ ಅಂತರರಾಷ್ಟ್ರೀಯ ಸಂಸ್ಕೃತ ಸಂಶೋಧನೆ ವಿಶ್ವವಿದ್ಯಾಲಯ  ಶನಿವಾರ ಬೆಂಗಳೂರನಲ್ಲಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. 

ಶ್ರೀನಿವಾಸ ತೇಲಂಗ ಮೂಲತ ಬೀದರ ಜಿಲ್ಲೆಯ ಬಸವಕಲ್ಯಾಣ ತಾಲೂಕಿನಲ್ಲಿ ಬರುವ  ಇಸ್ಲಾಂಪುರ ಎಂಬ ಕುಗ್ರಾಮದಲ್ಲಿ ಜನಿಸಿದರು. ಚಿಕ್ಕ ವಯಸ್ಸಿನಲ್ಲೇ ಬಡತನದ ಬೇಗೆಯಿಂದ ಬಳಲಿ. ಜೀವನದಲ್ಲಿ ಬಡತನ ಹೋಗಲಾಡಿಸಲು ಶಿಕ್ಷಣ ಒಂದೇ ಉಪಾಯ ಎಂದು ತಿಳಿದು ಹುಮನಾಬಾದನಲ್ಲಿ ಐಟಿಐ ಮುಗಿಸಿ ಇಂದು ಚೈನಾ ಎಂಬ ದೊಡ್ಡ ದೇಶದ ಕಂಪನಿಯಲ್ಲಿ ಭಾರತದ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸುತ್ತಲೇ ಇಂದು ಔರಂಗಾಬಾದ್ ನಲ್ಲಿ ಕನ್ನಡಿಗರನ್ನು ಸಂಘಟಿಸಿ ಅನೇಕ ಮಾದರಿಯ ಕಾರ್ಯಕ್ರಮ ನೀಡಿದ ಹೆಗ್ಗಳಿಕೆ ತೇಲಂಗ ಅವರದು. 

ಶೋಧವಾಣಿ ನ್ಯೂಸ್ ನಿಂದಿಗೆ ಮಾತನಾಡಿದ ತೇಲಂಗ ನಮ್ಮ ಚಿಕ್ಕ ವಯಸ್ಸಿನಲ್ಲೇ ಎಲ್ಲವನ್ನೂ ಕಂಡುಕೊಂಡೆ ಗ್ರಾಮದಲ್ಲಿ ಜೀವನ ನಡೆಸಲು ಆಗದಂತಹ ಪರಿಸ್ಥಿತಿಯಲ್ಲಿ ನಮಗೆ ಅನೇಕರು ಗ್ರಾಮದ ಪ್ರಮುಖ ವ್ಯಕ್ತಿಗಳು ನನ್ನ ಜೀವನದ ತಿರುವಿಗೆ ಸಹಕಾರ ನೀಡಿದ ಎಲ್ಲಾ ಆತ್ಮೀಯ ಹಿರಿಯರಿಗೆ ಈ ಗೌರವ ಡಾಕ್ಟರೇಟ್ ಪ್ರಶಸ್ತಿಯನ್ನು ಅರ್ಪಿಸುತ್ತೇನೆ ಎಂದು ಭಾವುಕರಾಗಿ ನುಡಿದರು.  ನನಗೆ ಕಾಲೇಜು ಫೀಸ್ ಕಟ್ಟಲು ಆಗದ ಪರಿಸ್ಥಿತಿಯಲ್ಲಿ ನನಗೆ ಸಹಾಯ ಮಾಡಿದ ಹಿರಿಯರಿಗೆ ಯಾವತ್ತೂ ಜೀವನದಲ್ಲಿ ಮರೆಯುವುದಿಲ್ಲ. ಅವರ ಋಣಭಾರದಿಂದ ಮಾತ್ರ ನಾನು ಇಂದು ಒಬ್ಬ ಉನ್ನತವಾದ ಮಟ್ಟಕ್ಕೆ ಬೆಳೆಯಲು ಕಾರಣರಾದರು. ಅವರು ನನಗೆ ಸಹಾಯ ಮಾಡಲಿಲ್ಲ ಅಂದು ಅಂದರೆ ಇಂದು ನಾನು ಗ್ರಾಮದಲ್ಲಿಯೇ ಕುರಿಯೋ ದನವನ್ನೋ ಕಾಯುತ್ತಾ ಬಂದುಕಬೇಕಾಗಿತು ಹೀಗಾಗಿ ನನಗೆ ಜೀವನದಲ್ಲಿ ಸಹಾಯ ಸಹಕಾರ ನೀಡಿದ ಎಲ್ಲಾ ಮಹನೀಯರಿಗೂ ತುಂಬುಹೃದಯದಿಂದ ಧನ್ಯವಾದಗಳು ತಿಳಿಸುವೆ ಎಂದು ನುಡಿದರು.

ತೇಲಂಗ ಅವರು ಅನೇಕ ದೇಶಕ್ಕೆ ಭೇಟಿ ನೀಡಿದ್ದಾರೆ. ಹಾಗೂ ದೇಶದ ಅನೇಕ ರಾಜ್ಯಗಳಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಅನೇಕ ಕಂಪನಿಯು ಇಂದು ಅವರ ಅನುಭವಕ್ಕೆ ಕೈಬಿಸಿ ಕರೆಯುತ್ತಿವೆ ಹೀಗಾಗಿ ಇಂದು ಯುವ ಜನಾಂಗಕ್ಕೆ ಶ್ರೀನಿವಾಸ ತೇಲಂಗ ಅವರು ಮಾದರಿಯ ವ್ಯಕ್ತಿಯಾಗಿದ್ದಾರೆ. ತಮ್ಮನ್ನು ಕಾಣಲು ಬಂದ ಜನ ಸಾಮಾನ್ಯರಿಗೂ ತಮ್ಮ ಕೈಲಾದ ಸಹಾಯವನ್ನು ಮಾಡುವುದು ಮರೆಯುವುದಿಲ್ಲ. ಎಲ್ಲರೊಂದಿಗೆ ತಾವೊಬ್ಬರು ಎಂದು ಎಲ್ಲರೊಂದಿಗೆ ಬೆರೆಯುವ ಮನೋಭಾವ ಹೊಂದಿದ್ದ ಶ್ರೀನಿವಾಸ ತೇಲಂಗ ಮಾದರಿ ವ್ಯಕ್ತಿ ಎಂದರು ಉತ್ಪ್ರೇಕ್ಷೆ ಯಾಗದು.. ಹಾಗೇ ತೇಲಂಗ ಅವರ ಸೇವೆಗೆ ಇನ್ನೂ ಅನೇಕ ಪ್ರಶಸ್ತಿಗಳನ್ನು ಬರಲಿ ಎಂದು ಶುಭೋದಯ ಮೀಡಿಯಾ ಹಾರೈಸುತ್ತದೆ.

-----------------------------------------------------------------------------

ಶ್ರೀನಿವಾಸ ತೇಲಂಗ ಪ್ರತಿಭಾವಂತ ಎಂದು ಊಹಿಸಿರಲಿಲ್ಲ -ಬಸವರಾಜ

ಇಂತಹ ಕೂಗ್ರಾಮದಲ್ಲಿ ಇಂತಹ ಪ್ರತಿಭೆಯನ್ನು ನಾನು ಊಹಿಸಿರಲಿಲ್ಲ. ಶ್ರೀನಿವಾಸ ಶ್ಯಾಮರಾವ ತೇಲಂಗ ಅವನ್ನು ಹತ್ತನೇ ತರಗತಿಯಲ್ಲಿ ತೇರ್ಗಡೆ ಯಾಗಿ ನಂತರ ಪಿಯುಸಿ ಓದುತ್ತಿದ್ದಾಗ ನನ್ನ ಕಣ್ಣಿಗೆ ಬಿದ್ದ ಹುಡುಗ ನಂತರ ಅವನ ಜೀವನದಲ್ಲಿ ದಾರಿ ದೀಪವಾಗಿ ನಾನು ಸಿಕ್ಕೆ. ಮುಂದೆ ಅವನನ್ನು ಶ್ರೀ ಬಸವೇಶ್ವರ ಕೈಗಾರಿಕಾ ತರಬೇತಿ ಕೇಂದ್ರದಲ್ಲಿ ಸೇರಿಸಿ ಜೊಡಣೆಗಾರ ವಿಭಾಗದಲ್ಲಿ ಪ್ರವೇಶ ನೀಡಿದೆ. ಶ್ರೀನಿವಾಸ ನನ್ನ ನೆರಳಲ್ಲಿ ಸತತವಾಗಿ ಎರಡು ವರ್ಷಗಳ ಕಾಲ ಕೈಗಾರಿಕಾ ತರಬೇತಿ ಪಡೆದುಕೊಂಡು ತೇರ್ಗಡೆಯಾಗಿ ಉದ್ಯೋಗಕ್ಕೋಸ್ಕರ ಅವನನ್ನು ಔರಂಗಾಬಾದ್ ನಗರದ ಪ್ರಮುಖ ಎಂಎನಸಿ ಕಂಪನಿಯಲ್ಲಿ ಕೆಲಸ ಕೊಡಿಸಿದೆ. ನಂತರ ಅವನು ಔರಂಗಾಬಾದ್ ನಲ್ಲಿಯೇ ಉಳಿದುಕೊಂಡು ಕೆಲಸದ ಜೊತೆಗೆ ಹೆಚ್ಚಿನ ವಿದ್ಯಾಭ್ಯಾಸದ ಕಡೆಗೆ ಒಲವು ತೊರಿಸಿ DME (Diploma in mechanical engineer) ನಲ್ಲಿ ವ್ಯಾಸಂಗವನ್ನು ಮಾಡಿ ಇಂದು ಒಂದು ವಿದೇಶಿ ಕಂಪನಿಯ ಭಾರತದ ಪ್ರತಿನಿಧಿಯಾಗಿ ಕೆಲಸ ಮಾಡುತ್ತಿರುವುದು ಹೆಮ್ಮೆಯ ವಿಷಯ. ಕೆಲಸದ ಜೊತೆಗೆ ಶ್ರೀನಿವಾಸ ಸಾಮಾಜಿಕ ಕಾರ್ಯ ಕ್ರಮದಲ್ಲಿ ಒಲವು ತೊರಿಸತೊಡಗಿದನು. ಇಂತಹ ಒಂದು ಪ್ರತಿಭೆಯನ್ನು ಹೊಂದಿರುವ ವ್ಯಕ್ತಿ ಎಂಬುದು ನಾನು ಸಹ ಊಹಿಸಿರಲಿಲ್ಲ. ನನ್ನ ಮಾರ್ಗದರ್ಶನದಲ್ಲಿ ಅವನು ಛಲ ಬಿಡದೆ ಒಂದು ಸಾಧನೆಯ ಶಿಖರವನ್ನು ಮುಟ್ಟಿರುವುದು ಖುಷಿ ತಂದಿದೆ. ಕೆಲಸದ ಜೊತೆಯಲ್ಲಿ ಸಾಮಾಜಿಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾಡುತ್ತ ಇಂದು ಔರಂಗಾಬಾದ್ ನಲ್ಲಿ ಹೆಮ್ಮೆಯ ಕನ್ನಡಿಗನಾಗಿ ಗುರುತಿಸಿಕೊಂಡಿರುವುದು ನಮ್ಮ ಗ್ರಾಮದ ಹೆಮ್ಮೆಯ. ಅವರ ಕಾರ್ಯವನ್ನು ಕಂಡು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿದಕ್ಕೆ ನನಗೆ ಬಹಳಷ್ಟು ಸಂತೋಷವಾಗಿದೆ. ಇಂತಹ ಪ್ರತಿಭೆಯನ್ನು ಮುಂದೆಯೂ ನಮ್ಮೂರಲ್ಲಿ ಹುಟ್ಟಿಬರಬೇಕು. ಹಾಗೂ ಅಂತಹ ಪ್ರತಿಭೆಗಳನ್ನು ಗುರುತಿಸಿ ಗ್ರಾಮದ ಹಿರಿಯ ಅನುಭವಿಗಳು ಸಹಾಯ ಸಹಕಾರ ನೀಡಿದರೆ ಗ್ರಾಮದ ಹೆಸರು ಸ್ಥಿರ ಸ್ಥಾಯಿಯಾಗಿ ಬೆಳೆಯಲು ನಮಗೆ ಶ್ರೀನಿವಾಸ ಸಾಕ್ಷಿಯಾಗಿದ್ದಾನೆ. ಇಂತಹ ಅನೇಕ ಪ್ರತಿಭಾವಂತರ ಜನ್ಮ ಆಗಬೇಕು ಎಂಬುದೇ ನನ್ನ ಆಸೆ..

  - ಬಸವರಾಜ ರಾಚಪ್ಪ  ಬಯನ Junior training officer,

     -----------------------------------------------------------------

ದೂರದೃಷ್ಟಿ ಹೊಂದಿರುವ ಪುಸ್ತಕ ಪ್ರೀಯ ಹಾಗೂ ಆಧ್ಯಾತ್ಮಿಕ ಜೀವಿ ಶ್ರೀನಿವಾಸ

ಪ್ರತಿಯೊಂದು ಗ್ರಾಮದಲ್ಲಿ ಶ್ರೀನಿವಾಸ ತೇಲಂಗ ಅಂತಹ ವ್ಯಕ್ತಿಗಳ ಜನನವಾದರೆ ಪ್ರತಿಯೊಂದು ರಾಜ್ಯ ಮತ್ತು ರಾಷ್ಟ್ರಕ್ಕೆ ಅಮೋಘವಾದ ಸೇವೆ ಮಾಡಿದರೆ ಯಾವುದೇ ರಾಷ್ಟ್ರ ಹಿಂದೆ ಬಿಳುವುದಿಲ್ಲ ಈ ನಿಟ್ಟಿನಲ್ಲಿ ದೂರದೃಷ್ಟಿ ಹೊಂದಿರುವ ಆಧುನಿಕ ಮಾದರಿ ವ್ಯಕ್ತಿಯಾಗಿ. ಪುಸ್ತಕ ಪ್ರೀಯರಾಗಿ. ಆಧ್ಯಾತ್ಮಿಕ ಜೀವಿಯಾಗಿ ಪ್ರತಿಯೊಬ್ಬರೊಂದಿಗೆ ಬೆರೆತು ಹೋಗುವ ಅಪರೂಪದ ಗುಣವನ್ನು ಹೊಂದಿದ್ದಾರೆ. ಹೊಸತನವನ್ನು ಕಲಿಯುವ ಗುಣ ಹೊಂದಿ ಇಂದು ಪ್ರತಿಯೊಬ್ಬರ ಮನಸ್ಸು ಗೆಲ್ಲುವ ಮೂಲಕ ಅಜಾತಶತ್ರುವಾಗಿ ಶ್ರೀನಿವಾಸ ತೇಲಂಗ ಗುರುತಿಸಿಕೊಂಡಿದು. ಅವರ ಸೇವೆಯನ್ನು ಕಂಡ ವಿಶ್ವವಿದ್ಯಾಲಯ ನೀಡಿದ ಗೌರವ ಡಾಕ್ಟರೇಟ್ ಪ್ರಶಸ್ತಿಯ ಮೌಲ್ಯವನ್ನು ಹೆಚ್ಚಿಸಿಕೊಂಡಿದೆ. 

ಬಡತನದಲ್ಲಿ ಬೆಳೆದ ವ್ಯಕ್ತಿ ಶಾಲೆಯಲ್ಲಿ ಓದಲು ಆಗದಂತಹ ಬಡತನವನ್ನು ಆವರಿಸಿದ ಪರಿಸ್ಥಿತಿಯಲ್ಲಿ ತನ್ನ ಸಾಮಾರ್ಥ್ಯ ದಿಂದ ಶಿಕ್ಷಣ ಮಾಡಿ ಇಂದು ಗ್ರಾಮಕ್ಕೆ ಒಂದು ಮಾದರಿ ವ್ಯಕ್ತಿಯಾಗಿ ಬೆಳೆದಿರುವುದು ಗ್ರಾಮವೇ ಹೆಮ್ಮೆಯ ಪಡುವ ಸಂಗತಿ. 

ಕನ್ನಡ ಸಮಾರಂಭವನ್ನು ಜ್ಯೋತಿ ಬೆಳಗಿಸುತ್ತಿರುವ ಶ್ರೀನಿವಾಸ ತೇಲಂಗ, ಅನೇಕ ಗಣ್ಯರು

ಜನ್ಮ ನೀಡಿದ ಗ್ರಾಮಕ್ಕೆ ಏನಾದರೂ ಮಾಡಬೇಕು ಎಂಬ ತೂಡಿತ ಸಮಯ ಪರಿಪಾಲನೆಯೇ ಇಂದು ಶ್ರೀನಿವಾಸ  ಮಾಡುವಲ್ಲಿ ಯಶಸ್ವಿಯಾದರು. ಸಾಧನೆಯ ಮಾರ್ಗದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಇಂದು ಸಾಧನೆ ಶಿಖರವನ್ನು ತಲುಪಿ ಗ್ರಾಮಕ್ಕೆ ಹೆಸರು ತಂದಿದ್ದಾರೆ.

 ಶ್ರೀನಿವಾಸ ಕಡುಬಡತನದಲ್ಲಿ ಇರುವಾಗ ಅವರ ಸೋದರಮಾವನ ಆಶ್ರಯದಲ್ಲಿ ಬೆಳೆದರು. ಸೋದರ ಮಾವನ ಸೇವೆ ಸ್ಮರಿಸಿ ಅವರ ವೃದ್ಧಾಪ್ಯದ ಜೀವನದಲ್ಲಿ ಸೇವೆ ಮಾಡಿದ್ದಾರೆ. ಔರಂಗಾಬಾದ್ ನಲ್ಲಿ ಅನೇಕ ನಮ್ಮ ಭಾಗದ ಯುವಕರಿಗೆ ಮಾರ್ಗದರ್ಶನ ನೀಡುವ ಮೂಲಕ ಉದ್ಯೋಗ ನೀಡುವಲ್ಲಿ ಶ್ರಮಿಸಿ ಅನೇಕರಿಗೆ   ಆಶ್ರಯದಾತನಾಗಿದ್ದಾರೆ.  ತೇಲಂಗ ಅವರ ಸೇವೆ ಅನನ್ಯ ವಾಗಿದೆ. ಅಮೋಘವಾಗಿದೆ. ಅಭಿನಂದನೀಯ ಕಾರ್ಯ ಮರೆಯಲಾಗದು. ಅವರು ಇಂಜಿನಿಯರಿಂಗ್ ವೃತ್ತಿ ಯವರು ಆದರು ಗ್ರಾಮದ ಆಗು ಹೋಗುಗಳ ಬಗ್ಗೆ ಹಾಗೂ ಕನ್ನಡ ಭಾಷೆ ಸಂಸ್ಕೃತಿ ಸಂಪ್ರದಾಯ ಹಾಗೂ ಹಿರಿಯರಿಗೆ ಗೌರವ ನೀಡುವ ಸಂಪ್ರದಾಯ ಬೆಳೆಸಿಕೊಂಡಿರುವ ಕಾರಣ ಇಂದು ಶ್ರೀನಿವಾಸ ಎತ್ತರದ ಮಟ್ಟದಲ್ಲಿ ಬೆಳೆಯಲು ಸಾಧ್ಯವಾಗಿದೆ. 

ಪ್ರತಿ ಮೂರು ವರ್ಷಗಳ ನಂತರ ನಡೆಯುವ ಲಕ್ಷ್ಮಿ ಕಾರ್ಯವನ್ನು ಶ್ರದ್ಧೆ ಭಕ್ತಿಯಿಂದ ನಡೆದುಕೊಳ್ಳುತ್ತಾರೆ. ತಮ್ಮನ್ನು ತಾವು ದೇವರ ಕಾರ್ಯದಲ್ಲಿ ತೊಡಗಿಸಿಕೊಂಡ ಬಂದಿರುವುದೇ ಇಂದು ಆ ದೇವಿಯ ಆಶೀರ್ವಾದ ಪಡೆದ ಪುಣ್ಯವಂತರು.

  -ರುಕ್ಮುದ್ದೀನ ಇಸ್ಲಾಂಪುರ ಹಿರಿಯ ಸಾಹಿತಿಗಳು ಬೀದರ

--------------------------------------------------------------------------------------------


ಶ್ರೀನಿವಾಸ ತೇಲಂಗಗೆ ತಮಿಳನಾಡಿನ ಅಸೀಯನ ಅಂತರರಾಷ್ಟ್ರೀಯ ಸಂಸ್ಕೃತ ಸಂಶೋಧನೆ ವಿಶ್ವವಿದ್ಯಾಲಯ  ಶನಿವಾರ ಬೆಂಗಳೂರನಲ್ಲಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. 

No comments:

ಪ್ರೇಮ ಕಾಶ್ಮೀರದಲ್ಲಿ ರಕ್ತದೋಕುಳಿ; ಹಿಂದೂಗಳೇ ಟಾರ್ಗೆಟ...!

  ಪ್ರೇಮ ಕಾಶ್ಮೀರದಲ್ಲಿ ರಕ್ತದೋಕುಳಿ; ಹಿಂದೂಗಳೇ ಟಾರ್ಗೆಟ್. ಭೂಲೋಕದ ಸ್ವರ್ಗವೆಂದೇ ಕರೆಯುವ ಜಮ್ಮು-ಕಾಶ್ಮೀರದ ಪೆಹಲ್ಗಾಮ್ ಸಮೀಪದ ಬೈಸರನ್ ಹುಲ್ಲುಗಾವಲಿನಲ್ಲಿ ಪಾಕ್ ಪ್...