ಬೆಂಗಳೂರು :ತುಮಕೂರು ಜಿಲ್ಲೆಯ ತುಮಕೂರು ತಾಲೂಕಿನ ಬೆಳ್ಳಾವಿ ಹೋಬಳಿ, ದೊಡ್ಡನಾರವಂಗಲ ಗ್ರಾಮದ ಖಾತಾ ನಂ.35, ಸರ್ವೆ ನಂ.21 ಇದು ಸರ್ಕಾರಿ ಜಮೀನಾಗಿದ್ದು, ಒಟ್ಟು ವಿಸ್ತೀರ್ಣ 07 ಎಕರೆ 33 ಗುಂಟೆಯಿದ್ದು, ಅದರ ಪೈಕಿ ಆರೋಪಿಯು 01 ಎಕರೆ 13 1/2 ಗುಂಟೆ ಜಾಗವನ್ನು ಅನಧಿಕೃತವಾಗಿ ಒತ್ತುವರಿ ಮಾಡಿ ಸಾಗುವಳಿ ಮಾಡುತ್ತಿದ್ದು, ನಂತರ 1ನೇ ದೂರುದಾರರಾದ ಡಿ.ಗಂಗಣ್ಣ ಇವರು ಕರ್ನಾಟಕ ಭೂ ಕಬಳಿಕೆ ನಿμÉೀಧ ವಿಶೇಷ ನ್ಯಾಯಾಲಯಕ್ಕೆ ದೂರನ್ನು ನೀಡಿರುತ್ತಾರೆ.
ಸದರಿ ದೂರಿನ ಆಧಾರದ ಮೇಲೆ ಕರ್ನಾಟಕ ಭೂ ಕಬಳಿಕೆ ನಿμÉೀಧ ವಿಶೇಷ ನ್ಯಾಯಾಲಯವು ಈ ಪ್ರಕರಣವನ್ನು ಸ್ವೀಕರಿಸಿ ಎಲ್.ಜಿ.ಸಿ. (ಪಿ) ಸಂಖ್ಯೆ: 1369/2017 ಎಂದು ದಾಖಲಿಸಿಕೊಂಡು, ಆರೋಪಿ ವಿರುದ್ಧ ಆಪಾದನೆ ರಚಿಸಿ, ಸಂಪೂರ್ಣ ಸಾಕ್ಷ್ಯ ವಿಚಾರಣೆಯನ್ನು ನಡೆಸಿದ ನಂತರ ಸರ್ಕಾರಿ ಜಮೀನನ್ನು ಭೂ ಕಬಳಿಕೆ ಮಾಡಿರುವುದು ಸಾಬೀತಾದ ಕಾರಣ ಅವರಿಗೆ 01 ವರ್ಷ ಸಾದಾ ಶಿಕ್ಷೆ ಮತ್ತು ರೂ.10.000/- ರೂಪಾಯಿ ದಂಡವನ್ನು ವಿಧಿಸಿ, ದಂಡ ಪಾವತಿಸಲು ತಪ್ಪಿದ್ದಲ್ಲಿ 03 ತಿಂಗಳ ಸಾದಾ ಶಿಕ್ಷೆಯನ್ನು 01ನೇ ವಿಶೇಷ ನ್ಯಾಯಾಲಯದ ಮಾನ್ಯ ಅಧ್ಯಕ್ಷರಾದ ನ್ಯಾಯಮೂರ್ತಿ ಬಸವರಾಜ ಅಂದಾನಪ್ಪ ಪಾಟೀಲ್ ಮತ್ತು ಕಂದಾಯ ಸದಸ್ಯರಾದ ಎಸ್.ಪಾಲಯ್ಯ ರವರು ಇದ್ದ ಪೀಠವು 2024 ನೇ ಡಿಸೆಂಬರ್ 10 ರಂದು ತೀರ್ಪು ನೀಡಿರುತ್ತದೆ. ಆರೋಪಿಯು ಒತ್ತುವರಿ ಮಾಡಿಕೊಂಡ ಸರ್ಕಾರಿ ಜಾಗವನ್ನು ಕಾನೂನಿನ ಪ್ರಕಾರ ರಕ್ಷಿಸುವಂತೆ ತುಮಕೂರಿನ ತಹಶೀಲ್ದಾರ್ ಅವರಿಗೆ ನಿರ್ದೇಶಿಸಿ ತೀರ್ಪನ್ನು ನೀಡಿರುತ್ತದೆ.
ತುಮಕೂರು ಜಿಲ್ಲೆಯ ತುಮಕೂರು ತಾಲೂಕಿನ ಬೆಳ್ಳಾವಿ ಹೋಬಳಿ, ದೊಡ್ಡನಾರವಂಗಲ ಗ್ರಾಮದ ಖಾತಾ ನಂ.35, ಸರ್ವೆ ನಂ.21 ಇದು ಸರ್ಕಾರಿ ಜಮೀನಾಗಿದ್ದು, ಒಟ್ಟು ವಿಸ್ತೀರ್ಣ 07 ಎಕರೆ 33 ಗುಂಟೆಯಿದ್ದು, ಅದರ ಪೈಕಿ ಆರೋಪಿಯು 01 ಎಕರೆ 13 1/2 ಗುಂಟೆ ಜಾಗವನ್ನು ಅನಧಿಕೃತವಾಗಿ ಒತ್ತುವರಿ ಮಾಡಿ ಸಾಗುವಳಿ ಮಾಡುತ್ತಿದ್ದು, ನಂತರ 1ನೇ ದೂರುದಾರರಾದ ಡಿ.ಗಂಗಣ್ಣ ಇವರು ಕರ್ನಾಟಕ ಭೂ ಕಬಳಿಕೆ ನಿμÉೀಧ ವಿಶೇಷ ನ್ಯಾಯಾಲಯಕ್ಕೆ ದೂರನ್ನು ನೀಡಿರುತ್ತಾರೆ.
ಸದರಿ ದೂರಿನ ಆಧಾರದ ಮೇಲೆ ಕರ್ನಾಟಕ ಭೂ ಕಬಳಿಕೆ ನಿμÉೀಧ ವಿಶೇಷ ನ್ಯಾಯಾಲಯವು ಈ ಪ್ರಕರಣವನ್ನು ಸ್ವೀಕರಿಸಿ ಎಲ್.ಜಿ.ಸಿ. (ಪಿ) ಸಂಖ್ಯೆ: 1369/2017 ಎಂದು ದಾಖಲಿಸಿಕೊಂಡು, ಆರೋಪಿ ವಿರುದ್ಧ ಆಪಾದನೆ ರಚಿಸಿ, ಸಂಪೂರ್ಣ ಸಾಕ್ಷ್ಯ ವಿಚಾರಣೆಯನ್ನು ನಡೆಸಿದ ನಂತರ ಸರ್ಕಾರಿ ಜಮೀನನ್ನು ಭೂ ಕಬಳಿಕೆ ಮಾಡಿರುವುದು ಸಾಬೀತಾದ ಕಾರಣ ಅವರಿಗೆ 01 ವರ್ಷ ಸಾದಾ ಶಿಕ್ಷೆ ಮತ್ತು ರೂ.10.000/- ರೂಪಾಯಿ ದಂಡವನ್ನು ವಿಧಿಸಿ, ದಂಡ ಪಾವತಿಸಲು ತಪ್ಪಿದ್ದಲ್ಲಿ 03 ತಿಂಗಳ ಸಾದಾ ಶಿಕ್ಷೆಯನ್ನು 01ನೇ ವಿಶೇಷ ನ್ಯಾಯಾಲಯದ ಮಾನ್ಯ ಅಧ್ಯಕ್ಷರಾದ ನ್ಯಾಯಮೂರ್ತಿ ಬಸವರಾಜ ಅಂದಾನಪ್ಪ ಪಾಟೀಲ್ ಮತ್ತು ಕಂದಾಯ ಸದಸ್ಯರಾದ ಎಸ್.ಪಾಲಯ್ಯ ರವರು ಇದ್ದ ಪೀಠವು 2024 ನೇ ಡಿಸೆಂಬರ್ 10 ರಂದು ತೀರ್ಪು ನೀಡಿರುತ್ತದೆ. ಆರೋಪಿಯು ಒತ್ತುವರಿ ಮಾಡಿಕೊಂಡ ಸರ್ಕಾರಿ ಜಾಗವನ್ನು ಕಾನೂನಿನ ಪ್ರಕಾರ ರಕ್ಷಿಸುವಂತೆ ತುಮಕೂರಿನ ತಹಶೀಲ್ದಾರ್ ಅವರಿಗೆ ನಿರ್ದೇಶಿಸಿ ತೀರ್ಪನ್ನು ನೀಡಿರುತ್ತದೆ.
ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲ್ಲೂಕಿನ ಸಬಗೇರಿ ಗ್ರಾಮದ ಸರ್ವೆ ನಂ.6/4ರಲ್ಲಿನ ಸರ್ಕಾರಿ ಜಾಗ ಇದ್ದು, ಅದರಲ್ಲಿ ಆರೋಪಿ 1 ಮತ್ತು 2 ಇವರು ಒಟ್ಟಾಗಿ 01 ಎಕರೆ 31 ಗುಂಟೆ ಜಾಗವನ್ನು ಒತ್ತುವರಿ ಮಾಡಿ ಅನಧಿಕೃತವಾಗಿ ಮನೆಯನ್ನು ನಿರ್ಮಿಸಿದ್ದು, ಅದನ್ನು ದಿನಾಂಕ 20.05.2016ರಂದು ತೆರವುಗೊಳಿಸಿದ್ದರೂ ಸಹ ಪುನ: ಆರೋಪಿತರು ದಿನಾಂಕ 05.08.2016ರಂದು ಒತ್ತುವರಿ ಮಾಡಿದ್ದರಿಂದ ಆರಕ್ಷಕ ಉಪ-ನಿರೀಕ್ಷಕರು, ಯಲ್ಲಾಪುರ ಇವರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಪೂರ್ಣಗೊಳಿಸಿ ಆರೋಪಿತರ ವಿರುದ್ಧ ಕರ್ನಾಟಕ ಭೂ ಕಂದಾಯ ಅಧಿನಿಯಮ 1964 ಕಲಂ 192(ಎ) ಅಡಿಯಲ್ಲಿ ಯಲ್ಲಾಪುರದ ಸಿವಿಲ್ ಜಡ್ಜ್ ಮತ್ತು ಜೆ.ಎಂ.ಎಫ್.ಸಿ. ಇವರ ಮುಂದೆ ದೋμÁರೋಪಣಾ ಪತ್ರವನ್ನು ಸಲ್ಲಿಸಿದ್ದರು. ತದನಂತರ ಸದರಿ ಸಿವಿಲ್ ಜಡ್ಜ್ ಆರೋಪಿ 1 ಮತ್ತು 2ರ ವಿರುದ್ಧ ಸಿ.ಸಿ. ನಂ. 99/2017ರಂತೆ ಪ್ರಕರಣ ದಾಖಲಿಸಿ ನಂತರ ಕರ್ನಾಟಕ ಭೂ ಕಬಳಿಕೆ ನಿμÉೀಧ ವಿಶೇಷ ನ್ಯಾಯಾಲಯಕ್ಕೆ ಪ್ರಕರಣವನ್ನು ವರ್ಗಾಯಿಸಿರುತ್ತಾರೆ.
ಕರ್ನಾಟಕ ಭೂ ಕಬಳಿಕೆ ನಿμÉೀಧ ವಿಶೇಷ ನ್ಯಾಯಾಲಯವು ಈ ಪ್ರಕರಣವನ್ನು ಸ್ವೀಕರಿಸಿ ಎಲ್.ಜಿ.ಸಿ. (ಟಿ) ಸಂಖ್ಯೆ: 145/2019 ಎಂದು ದಾಖಲಿಸಿಕೊಂಡು, ಆರೋಪಿತರ ವಿರುದ್ಧ ಕರ್ನಾಟಕ ಭೂ ಕಬಳಿಕೆ ನಿμÉೀಧ ಅಧಿನಿಯಮದನ್ವಯ ಆಪಾದನೆ ರಚಿಸಿ, ನೋಟೀಸ್ ನೀಡಿದರು. ತದನಂತರ 2ನೇ ಆರೋಪಿ ಮರಣ ಹೊಂದಿದ್ದರಿಂದ ಅವರ ವಿರುದ್ಧ ಪ್ರಕರಣವನ್ನು ಕೈಬಿಡಲಾಯಿತು. 1ನೇ ಆರೋಪಿ ವಿರುದ್ಧ ಸಂಪೂರ್ಣ ಸಾಕ್ಷ್ಯ ವಿಚಾರಣೆಯನ್ನು ನಡೆಸಿದ ನಂತರ 1ನೇ ಆರೋಪಿಗೆ 02 ವರ್ಷ ಸಾದಾ ಶೆಕ್ಷೆ ಮತ್ತು ರೂ.25,000/- ರೂಪಾಯಿ ದಂಡವನ್ನು ವಿಧಿಸಿ, ದಂಡ ಪಾವತಿಸಲು ತಪ್ಪಿದ್ದಲ್ಲಿ 06 ತಿಂಗಳ ಸಾದಾ ಶಿಕ್ಷೆಯನ್ನು 01ನೇ ವಿಶೇಷ ನ್ಯಾಯಾಲಯದ ಮಾನ್ಯ ಅಧ್ಯಕ್ಷರಾದ ನ್ಯಾಯಮೂರ್ತಿ ಬಸವರಾಜ ಅಂದಾನಪ್ಪ ಪಾಟೀಲ್ ಮತ್ತು ಕಂದಾಯ ಸದಸ್ಯರಾದ ಎಸ್.ಪಾಲಯ್ಯ ರವರು ಇದ್ದ ಪೀಠವು ದಿನಾಂಕ 28.11.2024ರಂದು ತೀರ್ಪು ನೀಡಿರುತ್ತದೆ.ಆರೋಪಿಯು ಒತ್ತುವರಿ ಮಾಡಿಕೊಂಡ ಸರ್ಕಾರಿ ಜಾಗವನ್ನು ಕಾನೂನಿನ ಪ್ರಕಾರ ರಕ್ಷಿಸುವಂತೆ ತಹಶೀಲ್ದಾರ್, ಯಲ್ಲಾಪುರ ಇವರಿಗೆ ನಿರ್ದೇಶಿಸಿ ತೀರ್ಪನ್ನು ನೀಡಿರುತ್ತದೆ.
ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲ್ಲೂಕಿನ ಅತ್ತಿಬೆಲೆ ಹೋಬಳಿ, ಹೆಬ್ಬಗೋಡಿ ಗ್ರಾಮದ ಸರ್ವೆ ನಂ. 159ರ ಊರು ಮುಂದಿನ ಸರ್ಕಾರಿ ಕೆರೆ ಜಮೀನಿನ ಒಟ್ಟು ವಿಸ್ತೀರ್ಣ 32 ಎಕರೆ 13 ಗುಂಟೆ ಪೈಕಿ 0-38.12 ಗುಂಟೆ/ಆಣೆ ಸರ್ಕಾರಿ ಕೆರೆ ಜಮೀನಿನ ಬಾಜುದಾರರಾದ ಒಟ್ಟು 9 ಜನ ಆರೋಪಿತರು ಒತ್ತುವರಿ ಮಾಡಿ ಶೌಚಾಲಯ ಹಾಗೂ ಮನೆ ನಿರ್ಮಾಣ ಮಾಡಿದ್ದು, ಅದರಲ್ಲಿ 1 ರಿಂದ 3 ಹಾಗೂ 7 ರಿಂದ 9 ಮೃತರಾಗಿರುತ್ತಾರೆ ಎಂದು ವರದಿ ಮಾಡಿದ ಕಾರಣ ಅವರ ವಿರುದ್ಧದ ಕ್ರಿಮಿನಲ್ ಪ್ರಕರಣವು abate ಆಗಿರುತ್ತದೆ.
ಉಳಿದ 4 ರಿಂದ 6ನೇ ಆರೋಪಿತರಾದ, 4ನೇ ಆರೋಪಿ ಎಂ. ವೆಂಕಟೇಶ್ ಬಿನ್ ಲೇಟ್ ಮುನಿಯಪ್ಪ ಇವರು 0-06 1/2 ಗುಂಟೆ, 5ನೇ ಆರೋಪಿತರಾದ ಹೆಚ್.ಎಂ. ಸುಬ್ಬಣ್ಣ ಬಿನ್ ಲೇಟ್ ಮುನಿಯಪ್ಪ ಇವರು 0-07 1/2 ಗುಂಟೆ ಹಾಗೂ 6ನೇ ಆರೋಪಿತರಾದ ಶ್ರೀಮತಿ ಲಕ್ಷ್ಮೀದೇವಿ ಕೋಂ ವೆಂಕಟೇಶ್ ಇವರು 0.01 ಗುಂಟೆ, ಹೆಬ್ಬಗೋಡಿ ಗ್ರಾಮ ಇವರು ಸರ್ಕಾರಿ ಊರು ಮುಂದಿನ ಕೆರೆ ಜಮೀನನ್ನು ಒತ್ತುವರಿ ಮಾಡಿ, ಶೌಚಾಲಯ ಹಾಗೂ ಮನೆ ನಿರ್ಮಾಣ ಮಾಡಿದ್ದು, ಗ್ರಾಮಸ್ಥರು ನೀಡಿದ ದೂರು ಮನವಿ ಮೇರೆಗೆ ಆನೇಕಲ್ ತಾಲ್ಲೂಕು ತಹಶೀಲ್ದಾರ್ ಇವರು ಆಪಾದಿತರಿಗೆ ಕೆರೆ ಒತ್ತುವರಿ ಸಂಬಂಧ ತೆರವುಗೊಳಿಸಲು ನೋಟಿಸ್ ನೀಡಿದ್ದರೂ ಸಹ ತೆರವುಗೊಳಿಸದ ಕಾರಣ ದೂರುದಾರರಾದ ರಾಜಸ್ವ ನಿರೀಕ್ಷಕರು ಇವರು ನೀಡಿದ ದೂರಿನ ಅನ್ವಯ ಬೆಂಗಳೂರು ನಗರ ಬಿ.ಎಂ.ಟಿ.ಎಫ್. ಪೆÇಲೀಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಪೂರ್ಣಗೊಳಿಸಿ ಆರೋಪಿತರ ವಿರುದ್ಧ ಕರ್ನಾಟಕ ಭೂ ಕಂದಾಯ ಅಧಿನಿಯಮ 1964 ಕಲಂ 192(ಎ) ಅಡಿಯಲ್ಲಿ ಬೆಂಗಳೂರಿನ ಸಿ.ಎಂ.ಎಂ. ನ್ಯಾಯಾಲಯಕ್ಕೆ ದೋμÁರೋಪಣಾ ಪತ್ರವನ್ನು ಸಲ್ಲಿಸಿದ್ದರು.
ತದನಂತರ ನ್ಯಾಯಾಲಯವು ಆರೋಪಿತರ ವಿರುದ್ಧ ಸಿ.ಸಿ. ಸಂಖ್ಯೆ: 7246/2013 ರಂತೆ ದಾಖಲಿಸಿ ನಂತರ ಕರ್ನಾಟಕ ಭೂ ಕಬಳಿಕೆ ನಿμÉೀಧ ವಿಶೇಷ ನ್ಯಾಯಾಲಯಕ್ಕೆ ಪ್ರಕರಣವನ್ನು ವರ್ಗಾಯಿಸಿರುತ್ತಾರೆ.
ಕರ್ನಾಟಕ ಭೂ ಕಬಳಿಕೆ ನಿμÉೀಧ ವಿಶೇಷ ನ್ಯಾಯಾಲಯವು ಈ ಪ್ರಕರಣವನ್ನು ಸ್ವೀಕರಿಸಿ ಎಲ್.ಜಿ.ಸಿ.(ಟಿ) ಸಂಖ್ಯೆ: 882/2017 ಎಂದು ದಾಖಲಿಸಿಕೊಂಡು, 1 ರಿಂದ 3 ಹಾಗೂ 7 ರಿಂದ 9ನೇ ಆರೋಪಿತರು ಮೃತರಾಗಿದ್ದು ಅವರ ವಿರುದ್ಧದ ವಿಚಾರಣೆ abate ಆಗಿರುತ್ತದೆ. ಉಳಿದ ಆರೋಪಿತರ ವಿರುದ್ಧ ಆಪಾದನೆಯನ್ನು ರಚಿಸಿ ಸಂಪೂರ್ಣ ಸಾಕ್ಷ್ಯ ವಿಚಾರಣೆಯನ್ನು ನಡೆಸಿದ ನಂತರ 4, 5 ಮತ್ತು 6ನೇ ಆರೋಪಿತರು ಊರು ಮುಂದಿನ ಸರ್ಕಾರಿ ಕೆರೆ ಜಮೀನನ್ನು ಭೂ ಕಬಳಿಕೆ ಮಾಡಿರುವುದು ಸಾಬೀತಾದ ಕಾರಣ ಆರೋಪಿತರಿಗೆ 01 ವರ್ಷ ಸಾದಾ ಶಿಕ್ಷೆ ಮತ್ತು 5,000/- ರೂಪಾಯಿ ದಂಡವನ್ನು ವಿಧಿಸಿ, ದಂಡ ಪಾವತಿಸಲು ತಪ್ಪಿದ್ದಲ್ಲಿ 03 ತಿಂಗಳ ಸಾದಾ ಶಿಕ್ಷೆಯನ್ನು 02ನೇ ವಿಶೇಷ ನ್ಯಾಯಾಲಯದ ನ್ಯಾಯಿಕ ಸದಸ್ಯರಾದ ಪಾಟೀಲ ನಾಗಲಿಂಗನಗೌಡ ಮತ್ತು ಕಂದಾಯ ಸದಸ್ಯರಾದ ಕೆ.ಹೆಚ್. ಅಶ್ವತ್ಥ ನಾರಾಯಣಗೌಡ ರವರು ಇದ್ದ ಪೀಠವು ದಿನಾಂಕ: 13.12.2024 ರಂದು ತೀರ್ಪು ನೀಡಿರುತ್ತದೆ.
ಆರೋಪಿತರು ಒತ್ತುವರಿ ಮಾಡಿಕೊಂಡ ಊರು ಮುಂದಿನ ಸರ್ಕಾರಿ ಕೆರೆ ಜಮೀನನ್ನು ಕೂಡಲೇ ತೆರವುಗೊಳಿಸಿ ಸರ್ಕಾರದ ವಶಕ್ಕೆ ಪಡೆಯುವಂತೆ ಆದೇಶಿಸಿ, 60 ದಿನಗಳ ಒಳಗಾಗಿ ನ್ಯಾಯಾಲಯಕ್ಕೆ ವರದಿ ಸಲ್ಲಿಸುವಂತೆ ತಹಶೀಲ್ದಾರ್, ಆನೇಕಲ್ ತಾಲ್ಲೂಕು ಇವರಿಗೆ ನಿರ್ದೇಶಿಸಿ ತೀರ್ಪನ್ನು ನೀಡಿರುತ್ತದೆ. ಅಲ್ಲದೇ ಮೃತ ಆರೋಪಿತರಾದ 1 ರಿಂದ 3 ಹಾಗೂ 7 ರಿಂದ 9 ರವರು ಒತ್ತುವರಿ ಮಾಡಿಕೊಂಡ ಜಮೀನಿನ ಪ್ರಸ್ತುತ ವಸ್ತುಸ್ಥಿತಿಯನ್ನು ಗಮನಿಸಿ ಒತ್ತುವರಿ ಇದ್ದಲ್ಲಿ ಸಂಬಂಧಪಟ್ಟ ಒತ್ತುವರಿದಾರರ ವಿರುದ್ಧ ನಮೂನೆ-1 ರಲ್ಲಿ 60 ದಿನಗಳ ಒಳಗಾಗಿ ದೂರು ಸಲ್ಲಿಸುವಂತೆ ಆದೇಶಿಸಿರುತ್ತದೆ ಎಂದು ಬೆಂಗಳೂರಿನ ಕರ್ನಾಟಕ ಭೂಕಬಳಿಕೆ ನಿμÉೀಧ ವಿಶೇಷ ನ್ಯಾಯಾಲಯದ ವಿಲೇಖನಾಧಿಕಾರಿಗಳು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
No comments:
Post a Comment