ads

Search This Blog

Friday, 3 January 2025

"ಜ್ಞಾನ ಇಲ್ಲ ಅಂತಾನೇ ಪಶು, ಪಕ್ಷಿ, ಪ್ರಾಣಿಗಳು, ಮೂಕ ಆಗಿದ್ದಾವೆ! ಪ್ರಥಮ ಮಹಿಳಾ ಶಿಕ್ಷಕಿ ಸಾವಿತ್ರಿಬಾಯಿ ಫುಲೆ"

 "ಜ್ಞಾನ ಇಲ್ಲ ಅಂತಾನೇ ಪಶು, ಪಕ್ಷಿ, ಪ್ರಾಣಿಗಳು, ಮೂಕ ಆಗಿದ್ದಾವೆ! ನಿಲ್ಬೇಡ ಓಡು ವಿದ್ಯಾ ಗಳಿಸಕ್ಕೆ! ಅವಕಾಶ ಬಂದಿದೆ ಶಾಲೆಯಲ್ಲಿ ಕಲಿಯಕ್ಕೆ ತೆರೆದಿದೆ ಶಾಲೆ ನಿಮಗಾಗಿ ಅಕ್ಷರದ ಜ್ಞಾನ ಬೆಳಗಾಕ್ಕೆ"!

" ಜ್ಞಾನ  ಇಲ್ದಿದ್ರೆ  ಸರ್ವನಾಶ  ಆಗೋಗುತೇವೇ ವಿವೇಕ ಇಲ್ದಿದ್ರೆ  ಆಗುತ್ತೀರಿ  ಪಶುಗಳ  ಹಂಗೆ" ಸಾವಿತ್ರಿಬಾಯಿಫುಲೆ ಶಿಕ್ಷಣದ ಸಂದೇಶವಾಣಿಯಾಗಿದೆ.!





 ಮಹಾರಾಷ್ಟ್ರದ "ಸತಾರ" ಜಿಲ್ಲೆಯ ಖಂಡಾಲ ತಾಲೂಕಿನ ಒಂದು ಪುಟ್ಟ ಹಳ್ಳಿಯಾದ ನಯಿಗಾಂವ ಖಂಡೋಜಿ  ನೆವಸೆ ಪಾಟೀಲರ  ಪತ್ನಿ ಲಕ್ಷ್ಮಿ ಬಾಯಿ ದಂಪತಿಗಳಿಗೆ ೩ನೇ ಜನವರಿ ೧೮೩೧ ರಲ್ಲಿ ಮೊದಲನೆಯ ಹೆಣ್ಣು ಮಗಳಾಗಿ ಜನಿಸಿದಳು. ತಂದೆ-ತಾಯಿ ತುಂಬಾ ಸಂತೋಷದಿಂದ "ಸಾವಿತ್ರಿ "ಎಂದು ನಾಮಕರಣ ಮಾಡಿದ್ದರು. ಇವಳ ತಂದೆಯಾದ ಖಂಡೋಜಿ ನವಸೆ ಪಾಟೀಲರು ಮಾಲಿ ಸಮುದಾಯದವರಾಗಿದ್ದರು. ಪ್ರತಿಷ್ಠಿತ ವ್ಯಕ್ತಿಯಾದ ಇವರು ಜಮೀನ್ದಾರರು ಹಾಗೂ ಸಿರಿವಂತರು ಕುಟುಂಬದವರು .ಇವರ ಕಸುಬು ವ್ಯವಸಾಯವಾಗಿತ್ತು .ಸಾವಿತ್ರಿಬಾಯಿ ತಂದೆ ಅತೀ  ಪ್ರೀತಿಯಿಂದ ಮಗಳನ್ನು ಬೆಳೆಸಿದ್ದರು. ಸಾವಿತ್ರಿ ಬಾಲ್ಯದಿಂದಲೇ ಚುರುಕು ಹಾಗೂ ಧೈರ್ಯವಂತೆಯಾಗಿದ್ದಳು . ಇವಳ ಧೈರ್ಯ ಮತ್ತು ಬುದ್ಧಿಯನ್ನು ನೋಡಿ ಮಿಶನರಿಯೊಬ್ಬರು ಒಂದು ಪುಸ್ತಕವನ್ನು ಕಾಣಿಕೆಯಾಗಿ ಕೊಟ್ಟಿದ್ದರು. ಆದರೆ ಸಾವಿತ್ರಿ ಗೆ ಓದಲು, ಬರೆಯಲು, ಬರುತ್ತಿರಲಿಲ್ಲ .ದೊಡ್ಡವರು ಕಾಣಿಕೆಯಾಗಿ ನೀಡಿದ ಪುಸ್ತಕವನ್ನು ಬಿಸಾಡದೇ ಜೋಪಾನವಾಗಿ ಇಡಬೇಕೆಂದು ಸಾವಿತ್ರಿಗೆ ಅನಿಸಿತ್ತು. 

"ಧೈರ್ಯಂ ಸರ್ವತ್ರ ಸಾಧನಂ" ಮನಸಿನ ಮಾತು ಕೇಳುವುದಕ್ಕೆ ತುಂಬಾ ಧೈರ್ಯಬೇಕು ಯಾಕೆಂದರೆ ಮನಸ್ಸು ಯಾವಾಗಲೂ ನಿಜ ಹೇಳುತ್ತದೆ. ಇಂತಹ ಧೈರ್ಯ ಸಾವಿತ್ರಿ ಬಳಿ ಇತ್ತು. ಆದರೆ ಸಾವಿತ್ರಿ ಹುಟ್ಟೂರಿನಲ್ಲಿ ಹೆಣ್ಣು ಮಕ್ಕಳು ಶಾಲೆ ಹೋಗುವಂತಿರಲಿಲ್ಲ ಅಕ್ಷರ ವಂಚಿತ ಮಹಿಳೆಯರು ಶೂದ್ರರು ಓದುವಂತಿರಲಿಲ್ಲ. ಓದಿದ್ದರೆ ಶ್ಲೋಕ ಕೇಳಿದ್ದರೇ ಕಿವಿಯಲ್ಲಿ ಕಾದ "ಸೀಸ" ಸುರಿದು ನಾಲಿಗೆ ಕತ್ತರಿಸುವ ಶಿಕ್ಷೆಯಿತ್ತು. ಮಹಿಳೆಯರು  ಅನಕ್ಷರತೆಯ ರೂಪದಲ್ಲಿ ಬಡತನದ  ಬೇಗೆಯಲ್ಲಿ ನೆರಳುತ್ತಿದ್ದರು. ಹೆಣ್ಣು ಮಕ್ಕಳು ಶಾಲೆ ಕಲಿಯುವ ಪದ್ಧತಿಯೇ ಇರಲಿಲ್ಲ ಊರಿನ ಶ್ರೀಮಂತರ ಮಕ್ಕಳು ಮಾತ್ರ ಮನೆಗಳಲ್ಲಿಯೇ ಶಿಕ್ಷಣ ಪಡೆದುಕೊಳ್ಳುತ್ತಿದ್ದರು. ಉಳಿದವರು ತಮ್ಮ ಕುಲ ಕಸಬು ಮಾಡಿಕೊಂಡು ಇರುತ್ತಿದ್ದರು. ಹೆಣ್ಣು ಮಕ್ಕಳು ಮನೆ ಕೆಲಸ ಮಾಡಿಕೊಂಡರೆ ಸಾಕು .ಚಿಕ್ಕ ವಯಸ್ಸಿನಲ್ಲಿಯೇ ಮದುವೆ ಮಾಡಿ ಗಂಡನ ಮನೆಗೆ ಕಳುಹಿಸಿ ಬಿಡುತ್ತಿದ್ದರು. ಹಾಗೆಯೇ ಬಾಲಕಿ ಸಾವಿತ್ರಿ ಅನಕ್ಷರಸ್ಥಳವಾಗಿದ್ದು ಒಂಭತ್ತನೆಯ (೯) ವಯಸ್ಸಿಗೆ ೧೩ನೇ ವಯಸ್ಸಿನ ಜ್ಯೋತಿಬಾಪುಲೆ ಅವರ ಜೊತೆಗೆ ವಿವಾಹ ಮಾಡಿದ್ದರು. ಇವಳ ಧೈರ್ಯ  ಶಿಕ್ಷಣ  ಕಲಿಯಬೇಕು  ಎಂಬ  ಹಂಬಲ ಕಂಡು  ಜ್ಯೋತಿಬಾಪುಲೆ  ಅವರು  ಪ್ರಥಮ ಗುರುಗಳಾಗಿ  ಶಿಕ್ಷಣವನ್ನು  ಕಲಿಸುತ್ತಾರೆ. ಔಪಚಾರಿಕವಾಗಿ ಓದು, ಬರಹ, ಕಲಿಯದ ಜೀವನ ಸಂಗಾತಿಗೆ ತಾನೇ ಅಕ್ಷರ ಕಲಿಸುತ್ತಾ ಒಟ್ಟೊಟ್ಟಿಗೆ ವಿದ್ಯಾಭ್ಯಾಸ ಕಲಿಯುತ್ತಿದ್ದರು. ಫುಲೆ  ದಂಪತಿಗಳು ಪರಸ್ಪರ ಹೊಂದಾಣಿಕೆಯಿಂದ ಜೀವನ ನಡೆಸುತ್ತಿದ್ದರು. ಜ್ಯೋತಿಬಾಪುಲೆ ತನ್ನ ಹೆಂಡತಿ ಸಾವಿತ್ರಿಬಾಯಿಯನ್ನು ವಿದ್ಯಾವಂತಳನಾಗಿ ಮಾಡಿ ಅಪಾರವಾದ ಆತ್ಮಾಭಿಮಾನ ಸ್ವಶಕ್ತಿಯುಳ್ಳ ಮಹಿಳೆಯನಾಗಿ ಪರಿವರ್ತಿಸಿದ್ದರು.  ಸಾವಿತ್ರಿಬಾಯಿಗೆ  ಮಿಷನರಿಯೊಬ್ಬರು ಕಾಣಿಕೆಯಾಗಿ ನೀಡಿದ ಪುಸ್ತಕವನ್ನು ತೆಗೆದುಕೊಂಡು ಗಂಡನ ಮನೆಗೆ ಬಂದಾಗ ಅದನ್ನು ನೋಡಿ ಹೆಚ್ಚು ಸಂತೋಷಪಟ್ಟ  ವ್ಯಕ್ತಿ ಎಂದರೆ ಜ್ಯೋತಿಬಾಪುಲೆಯವರು. 

ಸಾವಿತ್ರಿಬಾಯಿ ಮನೆಯಲ್ಲಿ ಅಕ್ಷರ ಅಭ್ಯಾಸ ಕಲಿತು ಓದುತ್ತಿರುವಾಗ ಜ್ಯೋತಿಬಾಪುಲೆ ಅವರು ಪುಣೆಯ ಸ್ಕಾಟಿಷ್ ಮಿಷನ್ ಸ್ಕೂಲಿನಲ್ಲಿ ಓದಲು ಮುಂದುವರಿಸಿದರು. ಜ್ಯೋತಿಬಾಪುಲೆ ಅವರ ಗೆಳೆಯರಾದ ಸದಾಶಿವ ಗೋವಿಂದ ವಾಲ್ವೇಕರ  ಮತ್ತಿತ್ತರು ಗೆಳೆಯರ ಜೊತೆಗೆ ಓದುತ್ತಿರುವಾಗ ತಮ್ಮ ಪತ್ನಿಯಿಂದ ಹೆಣ್ಣು ಮಕ್ಕಳಿಗೆ ಅಕ್ಷರ ಅಭ್ಯಾಸ ಕಲಿಸುವಂತೆ ಸಲಹೆ ನೀಡಿದರು .ಇದೇ ಸಮಯದಲ್ಲಿ ಸ್ತ್ರೀಯವಾದ ಎಂಬ ಪದ ಮತ್ತು ಪರಿಭಾಷೆ ಭಾರತೀಯ ಸಮಾಜದ ಮಹಿಳೆಯರಿಗೆ ತೋರುತ್ತಿರುವ ತಾರತಮ್ಯದ ಬಗೆಗೆ ಧ್ವನಿಯೆತ್ತಿದ್ದು ಇದು ಜ್ಯೋತಿಬಾಪುಲೆ ಅವರಿಗೆ ಸ್ಪೂರ್ತಿದಾಯಕಯಾಯಿತು. 

"ಶಿಕ್ಷಣವೇ ಶಕ್ತಿ' ಶಿಕ್ಷಣವೇ ಯುಕ್ತಿ" ಶಿಕ್ಷಣ ಸಂಘಟನೆ ಹೋರಾಟ ಡಾ. ಬಿ.ಆರ್ ಅಂಬೇಡ್ಕರ್ ಅವರ ತತ್ವ ಎಲ್ಲ ಕಾಲಕ್ಕೂ ಸೀಮಿತ.

 ಸಾವಿತ್ರಿಬಾಯಿ  ಅನಕ್ಷರಸ್ಥಳಾಗಿ ಫುಲೆ ಮನೆಗೆ ಕಾಲಿಟ್ಟಾಗ ಕೇವಲ ಒಂಭತ್ತು ವರ್ಷ  ೧೭ ವರ್ಷ ತುಂಬುವಷ್ಟರಲ್ಲಿ ಅಕ್ಷರ ವಿದ್ಯಾಭ್ಯಾಸ ಮಾಡುತ್ತಾ  ಶಿಕ್ಷಕರ ತರಬೇತಿ ಪಡೆದು ಸ್ವಾತಂತ್ರ್ಯ ಪೂರ್ವದಲ್ಲಿ ಭಾರತದ ಪ್ರಥಮ ಮಹಿಳಾ ಶಿಕ್ಷಕಿಯಾದರು. ತನ್ನ ವಿದ್ಯಾಭ್ಯಾಸವನ್ನು ಮುಗಿಸಿ ಸಾಧನೆಗೈದ ಅಪ್ರತಿಮ ಭಾರತೀಯ ಮಹಿಳೆ ಎನಿಸಿಕೊಂಡರು. ಅಂದು ಬ್ರಿಟಿಷ್ ಸರ್ಕಾರವು ಇಂಡಿಯನ್ "ಫಸ್ಟ್ ಲೇಡೀಸ್ ಟೀಚರ್" ಎಂಬ ಬಿರುದನ್ನು ಕೊಟ್ಟು ಸನ್ಮಾನಿಸಿದ್ದರು. ಫುಲೆ ದಂಪತಿಗಳು ತೆರೆದಿದ್ದ ಶಾಲೆಗೆ ತಾವೇ ಶಿಕ್ಷಕಿಯಾಗಿ ಮಕ್ಕಳಿಗೆ ಪಾಠ ಹೇಳಿಕೊಡುತ್ತಿದ್ದರು. ಶಾಲೆಗೆ ಪ್ರತಿದಿನ ಹೋಗುವಾಗ ಕೆಸರಿನಿಂದ ಸಗಣಿಯಿಂದ ಮೈ ಮೇಲೆ ಎಸೆಯುತ್ತಿದ್ದರು. ಕೆಟ್ಟ ಪದಗಳಿಂದ ನಿಂದನೆಗಳು ಮಾಡುತ್ತಿದ್ದರು  ಸವರ್ಣೀಯರು. ಇದೆಲ್ಲ ಸಹಿಸಲಾಗದೆ ನಾನು ಶಾಲೆಗೆ ಹೋಗಿ ಪಾಠ ಮಾಡುವುದಿಲ್ಲ ಎನ್ನುತ್ತಿದ್ದರು. ಜ್ಯೋತಿಬಾಪುಲೆ ಅವರು ಕಿಡಿಗೇಡಿಗಳ ಬೇಜವಾಬ್ದಾರಿಯ  ನಡವಳಿಕೆಗಳಿಗೆ ಹೆದರಬಾರದು ನೀನು ತುಂಬಾ ಧೈರ್ಯವಂತೆ ಎಂದು ಹೇಳಿ ಧೈರ್ಯ ತುಂಬಿ ಸಮಾಧಾನ ಮಾಡಿದರು. ಅವಮಾನಿಸಿದ್ದರೆ ಆತ್ಮಸ್ಥೈರ್ಯ ಕಳೆದುಕೊಳ್ಳಬಾರದು ನಮ್ಮ ದೀರ್ಘ ಹೋರಾಟದ ದಾರಿಯಲ್ಲಿ ಇಂತಹ ಸಣ್ಣಪುಟ್ಟ ಕಿರಿಕಿರಿಗಳು ಪರೀಕ್ಷೆಯೆಂದು ಸಾವಿತ್ರಿಯೂ ಅನಿಸಿತು. ಸಾವಿತ್ರಿಬಾಯಿ ತುಂಬಾ ಉದಾರಿಯಾಗಿದ್ದರು. ಅವರ ಹೃದಯ ಕರುಣಾಮಯವಾಗಿತ್ತು. ಬಡವರ ಅಸಹಾಯಕರ ಕುರಿತು ಬಹಳ ಸಹಾನುಭೂತಿ ಹೊಂದಿದ್ದರು. ತಾನು ಹರಿದ ಸೀರೆವುಟ್ಟು   ಬಡವರಿಗೆ ತನ್ನ ಹೊಸ ಸೀರೆಯನ್ನು ಬೇರೆ ಹೆಣ್ಣು ಮಕ್ಕಳಿಗೆ ಕೊಡುತ್ತಿದ್ದರು. ಸಾವಿತ್ರಿಬಾಯಿ ಶಿಸ್ತಿನ  ಕೆಲಸಗಾರರು ಸೂರ್ಯೋದಯಕ್ಕೆ ಮೊದಲೆ ಎದ್ದು ಸ್ನಾನಮಾಡಿ  ಮನೆ ಸ್ವಚ್ಛವಾಗಿಡುತ್ತಿದ್ದರು. ಫುಲೆ ದಾಂಪತಿಗಳು  ಒಂದನೇ ಜನೆವರಿ ೧೮೪೮ ರಲ್ಲಿ ಪ್ರಥಮ ಕನ್ಯಾ ಶಾಲೆ ಪ್ರಾರಂಭಿಸಿದ್ದರು. ಸುಮಾರು ೧೮ ಶಾಲೆಗಳನ್ನು ತೆರೆದಿದ್ದರು . ಸನಾತನ ಧರ್ಮದ ಪ್ರಬಲ ವಿರೋಧವಿದ್ದರೂ ಶಾಲೆಗಳನ್ನು ತೆರೆದು ಇತಿಹಾಸ ಸೃಷ್ಟಿಸಿದ್ದರು.‌ ಸಾವಿತ್ರಿಬಾಯಿ ಅವರ ಗಮನ ಹೆಚ್ಚು ಹೆಚ್ಚಾಗಿ ಹೆಣ್ಣು ಮಕ್ಕಳ ಮೇಲೆ ಕೇಂದ್ರಕೃತವಾಗಿತ್ತು. "ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ" ಎಂಬ ಗಾದೆಯಂತೆ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಿದರೆ ತನ್ನ ಕುಟುಂಬದ ಜೊತೆಗೆ ಸಮಾಜದಲ್ಲಿ ಪ್ರಗತಿಯನ್ನು ಕಾಣಬಹುದೆಂಬ  ಸತ್ಯವನು ಅರಿತುಕೊಂಡಿದ್ದರು. ಫುಲೆ ದಂಪತಿಗಳು "ಜ್ಞಾನವನ್ನು ಮೂರನೇ ಕಣ್ಣು" ಎನ್ನುತ್ತಿದ್ದರು. ಈ ಭೂಮಿ ಮೇಲೆ ಹುಟ್ಟುವ ಪ್ರತಿಯೊಂದು ಮಗು ವಿಶೇಷವಾದದ್ದು ಮಕ್ಕಳು ಭೂಮಿಯ ಮೇಲಿನ ನಕ್ಷತ್ರಗಳು ಎಂದಿದ್ದಾರೆ. "ಥಾಮ್ ವುಲ್ಫ್" ಸಾವಿತ್ರಿಬಾಯಿ ಫುಲೆ ಬಗ್ಗೆ ಹೀಗೆ ಹೇಳುತ್ತಾರೆ ಸಾವಿರಾರು ಮಕ್ಕಳಿಗೆ ಶಿಕ್ಷಣದ ದೀಪವನ್ನು ಹಚ್ಚಿದ ಆಧುನಿಕ ಶಿಕ್ಷಣದ ತಾಯಿ ಸಾವಿತ್ರಿಬಾಯಿಫುಲೆ ಎಂದಿದ್ದಾರೆ. ಹೀಗೆ ಸಾವಿತ್ರಿಬಾಯಿಫುಲೆಯವರು ಒಬ್ಬ ಸ್ತ್ರೀಯಾಗಿ, ಒಬ್ಬರ ಹೆಂಡತಿಯಾಗಿ, ಶಿಕ್ಷಕಿಯಾಗಿ ,ಮುಖೋ ಪಾಧ್ಯಾಯನಿಯಾಗಿ ,ಸಮಾಜ ಸೇವಕಿಯಾಗಿ ಕೆಲಸ  ನಿರ್ವಹಿಸಿದ್ದ ಮಹಾತಾಯಿ ಸಾವಿತ್ರಿಬಾಯಿ ಫುಲೆ....!

 "ಕೈಯಲ್ಲಿ ಹಿಡಿದರೆ ಲೇಖನಿ ಮೂಡುವುದು ಅಕ್ಷರದ ಖನಿ !ಕೈಯಲ್ಲಿ ಹಿಡಿದರೆ ಲೇಖನಿ ಮೂಡುವುದು ಚಿತ್ತಾರದ ಗಣಿ" ಎಂದು ಹೇಳುತ್ತ  ಶಿಕ್ಷಕರ ದಿನಾಚರಣೆಯ ಹಾರ್ದಿಕ ಶುಭಾಶಯಗಳು!

  -ಶ್ರೀಮತಿ ಬುದ್ಧದೇವಿ ಅಶೋಕ್ ಸಂಗಮ  ತಾ:ಜಿಲ್ಲೆ :ಬೀದರ್

No comments:

ಪ್ರೇಮ ಕಾಶ್ಮೀರದಲ್ಲಿ ರಕ್ತದೋಕುಳಿ; ಹಿಂದೂಗಳೇ ಟಾರ್ಗೆಟ...!

  ಪ್ರೇಮ ಕಾಶ್ಮೀರದಲ್ಲಿ ರಕ್ತದೋಕುಳಿ; ಹಿಂದೂಗಳೇ ಟಾರ್ಗೆಟ್. ಭೂಲೋಕದ ಸ್ವರ್ಗವೆಂದೇ ಕರೆಯುವ ಜಮ್ಮು-ಕಾಶ್ಮೀರದ ಪೆಹಲ್ಗಾಮ್ ಸಮೀಪದ ಬೈಸರನ್ ಹುಲ್ಲುಗಾವಲಿನಲ್ಲಿ ಪಾಕ್ ಪ್...