ads

Search This Blog

Friday, 3 January 2025

2025ನೇ ಸಾಲಿನ ವರ್ಷದ ಕನ್ನಡಿಗ ಪ್ರಶಸ್ತಿಗೆ ಸಂಗಮೇಶ ಎನ್ ಜವಾದಿ ಆಯ್ಕೆ

ಬೆಂಗಳೂರು : ಸರಳ ಸಜ್ಜನಿಕೆಯ ವ್ಯಕ್ತಿತ್ವದವರು,  ಕಲ್ಯಾಣ ಕರ್ನಾಟಕದ ಹೆಮ್ಮೆಯ ಸಾಹಿತಿಗಳು, ಸಂವೇದನಾಶೀಲ ಬರಹಗಾರರು , ವೈಚಾರಿಕ ಚಿಂತಕರು, ಅಂಕಣಕಾರರು, ಪತ್ರಕರ್ತರು, ಸಂಘಟಕರು , ಪರಿಸರ ಸಂರಕ್ಷಕರು, ಹೋರಾಟಗಾರರು, ಸಾಂಸ್ಕೃತಿಕ ಸಂಘಟಕರಾದ ಸಂಗಮೇಶ ಎನ್ ಜವಾದಿ ರವರನ್ನು 2025ನೇ ಸಾಲಿನ ವರ್ಷದ ಕನ್ನಡಿಗ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಕರ್ನಾಟಕ ಸಂಯುಕ್ತ ರಂಗ ಬೆಂಗಳೂರು ಅಧ್ಯಕ್ಷ ಹೆಚ್ ಸದಾಶಿವ ತಿಳಿಸಿದರು.

 


ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು  ಜವಾದಿಯವರ ವಿಶಿಷ್ಟ ಪ್ರಗತಿಪರ ವಿಚಾರಧಾರೆಗಳ ಸಂವೇದನ ಶೀಲತೆಯಿಂದ ಈ ನಾಡಿನಲ್ಲಿ ತಮ್ಮದೇ ಆದಂತ ವೈಚಾರಿಕ ಛಾಪು ಮೂಡಿಸಿದ ಹೊಸ ತಲೆಮಾರಿನ ಬರಹಗಾರರು,ಚಿಂತಕರು.
ಮೂಲತ ಸಾಮಾಜಿಕ ಸೇವಕರು, ಪರಿಸರ ಸಂರಕ್ಷಕರು, ಹೋರಾಟಗಾರರಾಗಿ ಗುರುತಿಸಿಕೊಂಡರೂ ಅದರಾಚೆಗೆ ವೈಜ್ಞಾನಿಕ ಲೇಖನಗಳನ್ನು, ಜೀವನಚರಿತ್ರೆ ವಿಮರ್ಶೆ ಸಂಶೋಧನೆಗಳಲ್ಲೂ ಕಾರ್ಯನಿರ್ವಹಿಸಿ ಬಹುಶ್ರುತ ಬರಹಗಾರರು ಎನಿಸಿದ್ದಾರೆ. ಸತ್ಯ ತತ್ವ ಪರ ನೆಲೆಗಳಲ್ಲಿ  ವ್ಯಾಖ್ಯಾನ ಮಾಡುವ ಮುಖಾಂತರ ಪ್ರಖರ ವಿಚಾರವಾದಿ ಎನಿಸಿದ್ದಾರೆ. ಒಂದು ದಶಕಗಳಿಂದ ಸಾಹಿತ್ಯ ರಚನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ದುಡಿಯುತ್ತಿದ್ದಾರೆ. ಅವರಿಗೆ ಸಂದ ಪ್ರಶಸ್ತಿ ಪುರಸ್ಕಾರ ಬಹುಮಾನಗಳು ಅನೇಕ.  ಶ್ರೀಯುತ ಸಂಗಮೇಶ ಎನ್ ಜವಾದಿ ಅವರು ಅನೇಕ ಸಾಹಿತ್ಯ,ಸಾಂಸ್ಕೃತಿಕ, ಶೈಕ್ಷಣಿಕ ಕ್ಷೇತ್ರಗಳ ಪದಾಧಿಕಾರಿಗಳಾಗಿ ಕಾರ್ಯ ನಿರ್ವಹಿಸಿದ್ದಾರೆ ಮತ್ತು ಪ್ರಸ್ತುತ ನಿರ್ವಹಣೆ ಮಾಡುತ್ತಿದ್ದಾರೆ. ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತಿನ ಬೀದರ್ ಜಿಲ್ಲಾಧ್ಯಕ್ಷ, ರಾಷ್ಟ್ರೀಯ ದೇಹಾಂಗದಾನ ಜಾಗೃತಿ ಸಮಿತಿ ಬೀದರ ಜಿಲ್ಲೆಯ ಅಧ್ಯಕ್ಷರಾಗಿ, ಬೀದರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಹಾಗೂ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಬೀದರ್ ಜಿಲ್ಲೆಯ ಕಾರ್ಯದರ್ಶಿಯಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ. 
 
ಕವಿತೆ , ಲೇಖನ, ಅಂಕಣ, ವೈಜ್ಞಾನಿಕ ವಿಮರ್ಶೆ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಂಗಮೇಶ ಎನ್ ಜವಾದಿ  ಅವರು ವೈಚಾರಿಕ ಲೇಖನಗಳು ಬರೆಯುವ ಮೂಲಕ ತಮ್ಮ ಛಾಪನ್ನು ಮೂಡಿಸಿದ್ದಾರೆ.ಈದಿಗ ಇವರ ಎರಡು ದಶಕಗಳ ಜನಪರ ನಿಸ್ವಾರ್ಥ ಸೇವೆಯನ್ನು ಗುರುತಿಸಿ ಕರ್ನಾಟಕ ಸಂಯುಕ್ತ ರಂಗ ಬೆಂಗಳೂರು ರವರು ಕೊಡುಮಾಡುವ 2025ನೇ ಸಾಲಿನ ವರ್ಷದ ಕನ್ನಡಿಗ ಪ್ರಶಸ್ತಿಗೆ ಸಂಗಮೇಶ ಎನ್ ಜವಾದಿ ರವರನ್ನು ಆಯ್ಕೆ ಮಾಡಲಾಗಿದೆ.  
ದಿ.08-01-2025 ರಂದು ಬೆಂಗಳೂರಿನಲ್ಲಿ ನಡೆಯಲಿರುವ ಐತಿಹಾಸಿಕ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಹೇಳಿದರು.

No comments:

ಪ್ರೇಮ ಕಾಶ್ಮೀರದಲ್ಲಿ ರಕ್ತದೋಕುಳಿ; ಹಿಂದೂಗಳೇ ಟಾರ್ಗೆಟ...!

  ಪ್ರೇಮ ಕಾಶ್ಮೀರದಲ್ಲಿ ರಕ್ತದೋಕುಳಿ; ಹಿಂದೂಗಳೇ ಟಾರ್ಗೆಟ್. ಭೂಲೋಕದ ಸ್ವರ್ಗವೆಂದೇ ಕರೆಯುವ ಜಮ್ಮು-ಕಾಶ್ಮೀರದ ಪೆಹಲ್ಗಾಮ್ ಸಮೀಪದ ಬೈಸರನ್ ಹುಲ್ಲುಗಾವಲಿನಲ್ಲಿ ಪಾಕ್ ಪ್...