ads

Search This Blog

Saturday, 25 January 2025

ರಾಯಚೂರ ಜಿಲ್ಲಾಡಳಿತದಿಂದ ಅರ್ಥಪೂರ್ಣವಾಗಿ ನಡೆದ ರಾಷ್ಟ್ರೀಯ ಮತದಾರರ ದಿನಾಚರಣೆ-2025

 
ರಾಯಚೂರ ಜನವರಿ 25 : 'ಮತದಾನ ಜಾಗೃತಿ ಸಂದೇಶ', 'ಪ್ರತಿಜ್ಞಾ ವಿದಿ ಬೋಧನೆ', 'ಗುರುತಿನ ಚೀಟಿ ವಿತರಣೆ'ಯಂತಹ ನಾನಾ ಚಟುವಟಿಕೆಗಳ ಮೂಲಕ ಜನವರಿ 25ರಂದು ಭಾರತ ಚುನಾವಣಾ ಆಯೋಗ, ರಾಯಚೂರ ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳ ಕಚೇರಿಯಿಂದ ರಾಷ್ಟ್ರೀಯ ಮತದಾರರ ದಿನಾಚರಣೆ 2025ರ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ನಗರದ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮAದಿರದಲ್ಲಿ ನಡೆದ ಕಾರ್ಯಕ್ರಮಕ್ಕೆ ದೀಪ ಬೆಳಗಿಸಿ ಚಾಲನೆ ನೀಡಿದ ರಾಯಚೂರಿನ ಗೌರವಾನ್ವಿತ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಹೆಚ್ ಎ ಸಾತ್ವಿಕ್ ಅವರು ಮಾತನಾಡಿ, ಭಾರತದ ಸಂವಿಧಾನವು ಅತ್ಯಂತ ಮಹತ್ವದ್ದಾಗಿದೆ. ಈ ಸಂವಿಧಾನವು ನಮಗೆ ಓಟು ಮಾಡುವ ಹಕ್ಕು ನೀಡಿದೆ. ಇದನ್ನರಿತು ನಾವೆಲ್ಲರೂ ಮುಂದಿನ ಚುನಾವಣೆಗಳಲ್ಲಿ ತಪ್ಪದೇ ಮತದಾನ ಮಾಡುವ ಸಂಕಲ್ಪ ಮಾಡಿ ಕಾರ್ಯಪ್ರವೃತ್ತರಾಗಬೇಕು ಎಂದರು.


ಸAವಿಧಾನವು ಒಂದು ಜೀವಂತ ದಾಖಲೆ ಎಂದು ರಾಜಕೀಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇದನ್ನು ನಾವೆಲ್ಲ ಅರಿಯಬೇಕು. ಸಂವಿಧಾನದತ್ತವಾಗಿ ನಮ್ಮೆಲ್ಲರ ಹಕ್ಕಾದ ಓಟನ್ನು ಹಣ ಮತ್ತು ಮತ್ತೀತರ ಆಮೀಷದಿಂದ ಮಾರಬಾರದು. ಜಾತಿ ನೋಡಿ ಮತ ಹಾಕುವುದು ನಡೆಯುತ್ತಿದೆ. ಇದು ಸರಿಯಲ್ಲ. ಉತ್ತಮವಾಗಿ ಕಾರ್ಯ ನಿರ್ವಹಿಸುವ, ಸಮಾಜದ ಬಗ್ಗೆ ಕಾಳಜಿ ಹೊಂದಿರುವ, ಜಾತಿ ಧರ್ಮ ಬೇಧಭಾವ ಮಾಡದೇ ಎಲ್ಲರೂ ಒಂದೇ ಎಂದು ತಿಳಿದು ಸದಾಕಾಲ ಸಮಾಜದ ಏಳ್ಗೆ ಬಯಸುವ, ಸಂವಿಧಾನದ ಬಗ್ಗೆ ತಿಳಿವಳಿಕೆ ಹೊಂದಿ ಕಾರ್ಯನಿರ್ವಹಿಸುವ ವ್ಯಕ್ತಿಗಳಿಗೆ ಓಟು ಮಾಡಿ ಚುನಾವಣಾ ಹಬ್ಬದಲ್ಲಿ ಎಲ್ಲರೂ ಭಾಗಿಯಾಗಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ಮಾಡಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿಗಳಾದ ನಿತೀಶ್ ಕೆ ಅವರು ಮಾತನಾಡಿ,
ಚುನಾವಣೆಯ ಸಂದರ್ಭದಲ್ಲಿ ಓಟು ಮಾಡುವುದು ಎಷ್ಟು ಮುಖ್ಯವೋ ಅಷ್ಟೇ ಸಮಾಜದ ಬಗ್ಗೆ ಕಾಳಜಿ ಹೊಂದಿ ಸಮಾಜ ಸುಧಾರಣೆಗೆ ಶ್ರಮಿಸಬೇಕು ಎಂಬುದನ್ನು ವಿದ್ಯಾರ್ಥಿ ಯುವಜನರು ಅರಿಯಬೇಕು. ಪ್ರಶ್ನೆ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು. ಎಲ್ಲಾದರು ಅವ್ಯವಸ್ಥೆ ಕಂಡುಬAದಲ್ಲಿ ಅದನ್ನು ನೋಡಿದಾಗ ಸರಿಯಿಲ್ಲ; ಸರಿ ಮಾಡಿ ಎಂದು ಹೇಳುವ ಮನಸ್ಥಿತಿ ಬೆಳೆಸಿಕೊಳ್ಳಬೇಕು ಎಂದರು.
ರಾಯಚೂರ ಜಿಲ್ಲೆಯು ಅಭಿವೃದ್ಧಿ ಪಥದತ್ತ ಸಾಗಬೇಕು. ಈ ಬಗ್ಗೆ ವಿದ್ಯಾರ್ಥಿ ಯುವಜನರು ಸಹ ಯೋಚಿಸಬೇಕು. ರಾಯಚೂರಗೆ ಕೆಲವೇ ವರ್ಷಗಳಲ್ಲಿ ವಿಮಾನಯಾನ ಸೌಲಭ್ಯ ಮತ್ತು ಎರಡು ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣ ಸೌಕರ್ಯ ಲಭ್ಯವಾಗಲಿದೆ. ಜಿಲ್ಲೆಯ ಅಭಿವೃದ್ಧಿಯ ಇಂತಹ ಒಳ್ಳೆಯ ಕಾರ್ಯಕ್ಕೆ ಯುವಜನರು ಸ್ಪಂದನೆ ಮಾಡಬೇಕು; ಪ್ರೋತ್ಸಾಹಿಸಬೇಕು ಎಂದರು.
ವಿದ್ಯಾರ್ಥಿಗಳು ಸರಿಯಾಗಿ ಅಧ್ಯಯನ ಮಾಡಬೇಕು. ಪಿಯುಸಿ, ಪದವಿ ಹಂತ ವಿದ್ಯಾರ್ಥಿ ಜೀವನದಲ್ಲಿ ಮಹತ್ವದ್ದಾಗಿದ್ದು ವಿದ್ಯಾರ್ಥಿ ಹಂತದಲ್ಲಿ ಸರಿಯಾಗಿ ಅಧ್ಯಯನ ಮಾಡಿದಲ್ಲಿ ಉತ್ತಮವಾಗಿ ಜೀವನ ಸಾಧಿಸಬಹುದಾಗಿದೆ ಎಂದರು.
ಸ್ಚೀಪ್ ಸಮಿತಿಯ ಅಧ್ಯಕ್ಷರು ಆಗಿರುವ ಜಿಲ್ಲಾ ಪಂಚಾಯತ್ ಸಿಇಓ ತುಕಾರಾಂ ಪಾಂಡ್ವೆ ಅವರು ಮಾತನಾಡಿ, ಸಂವಿಧಾನ ಬದ್ಧವಾದ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಗೆ ಮಹತ್ವದ ಸ್ಥಾನವಿದೆ. ಚುನಾವಣೆ ಹೇಗೆ ನಡೆಯಬೇಕು; ನಡೆಸಬೇಕು ಎಂಬುದರ ಬಗ್ಗೆ ನಮಗೆ ಮಾರ್ಗದರ್ಶಿ ಅಂಶಗಳಿವೆ. ಅದರಂತೆ ಚುನಾವಣೆಗಳು ನಡೆಯಲು, ಯುವ ಮತದಾರರು ತಪ್ಪದೇ ಓಟು ಮಾಡಬೇಕು ಎಂದು ತಿಳಿಸಿದರು.
ಗುರುತಿನ ಚೀಟಿ ಹಂಚಿಕೆ: 18 ವರ್ಷ ತುಂಬಿದ ಯುವ ಮತದಾರರಿಗೆ ಸಮಾರಂಭದಲ್ಲಿ ಗುರುತಿನ ಚೀಟಿ ವಿತರಿಸಲಾಯಿತು. ಐದು ಜನ ವಿದ್ಯಾರ್ಥಿಗಳಿಗೆ ಸಾಂಕೇತಿಕವಾಗಿ ಗುರುತಿನ ಚೀಟಿ ನೀಡಲಾಯಿತು.
ಸಂಪನ್ಮೂಲ ವ್ಯಕ್ತಿಗಳಿಗೆ ಸನ್ಮಾನ: ಮತದಾರರ ಸಾಕ್ಷರತಾ ಕ್ಲಬ್ ಕಾರ್ಯಚಟುವಟಿಕೆಯಲ್ಲಿ ಉತ್ತಮವಾಗಿ ಕಾರ್ಯ ಮಾಡುತ್ತಿರುವ ಮತ್ತು ರಾಷ್ಟ್ರೀಯ ಮತದಾರರ ದಿನಾಚರಣೆಯ ಅಂಗವಾಗಿ ಸಾರ್ವತ್ರಿಕ ಚುನಾವಣೆಗಳಲ್ಲಿ ಮತ್ತು ವಿಶೇಷ ಸಂಕ್ಷಿಪ್ತ ಪರಿಷ್ಕರಣೆಯಲ್ಲಿ ಉತ್ತಮ ಕಾರ್ಯನಿರ್ವಹಿಸಿದ ನಿಮಿತ್ತ ಉತ್ತಮ ಚುನಾವಣಾ ಸಾಕ್ಷರತಾ ಕ್ಲಬ್ ಸಂಯೋಜಕರೆAದು ರಾಯಚೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಸಾವಿತ್ರಿ ಕೆ ಹಾಗೂ ಉಡಮಗಲ್ ಖಾನಾಪೂರದ ಸರ್ಕಾರಿ ಪ್ರೌಢಶಾಲೆಯ ಸಹ ಶಿಕ್ಷಕರು ಮತ್ತು ಸಾಕ್ಷರತಾ ನೋಡಲ್ ಅಧಿಕಾರಿಗಳು ಹಾಗೂ ಜಿಲ್ಲಾ ಸಂಪನ್ಮೂಲ ವ್ಯಕ್ತಿಯಾದ ಡಾ.ದಂಡಪ್ಪ ಬಿರಾದಾರ ಅವರಿಗೆ ಇದೆ ವೇಳೆ ಸನ್ಮಾನಿಸಲಾಯಿತು.
ಉತ್ತಮ ಮತಗಟ್ಟೆ ಅಧಿಕಾರಿಗಳಿಗೆ ಸನ್ಮಾನ: ಚುನಾವಣೆ ಸಂದರ್ಭದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಅರಸಿಗೇರಾದ ಮುಖ್ಯ ಶಿಕ್ಷಕರಾದ ನರೇಶ, ಗುಂಜಳ್ಳಿ ಆಶಾ ಕಾರ್ಯಕರ್ತೆ ಮುನೀಂದ್ರಮ್ಮ, ತುಂಟಾಪುರ ಅಂಗನವಾಡಿ ಕಾರ್ಯಕರ್ತೆ ರಂಗಮ್ಮ ಬಿಲ್ಲಾರ, ಅಂಗನವಾಡಿ ಕಾರ್ಯಕರ್ತೆ ಸುಜಾತ, ರಾಯಚೂರ ಇಂದಿರಾ ನಗರದ ಸಹ ಶಿಕ್ಷಕ ರವಿ ಅವರಿಗೆ ಉತ್ತಮ ಮತಗಟ್ಟೆ ಮಟ್ಟದ ಅಧಿಕಾರಿಗಳೆಂದು ಸನ್ಮಾನಿಸಲಾಯಿತು.
ಅಪರ ಜಿಲ್ಲಾಧಿಕಾರಿಗಳಾದ ಶಿವಾನಂದ ಅವರು ಸ್ವಾಗತಿದರು. ರಾಯಚೂರ ತಿಮ್ಮಾಪುರ ಪೇಟೆಯ ಸ.ಹಿ.ಪ್ರಾ ಶಾಲೆಯ ಸಹ ಶಿಕ್ಷಕಿ ಗೀತಾರಾಣಿ ನಿರೂಪಿಸಿದರು.
ಸಮಾರಂಭದಲ್ಲಿ ಚುನಾವಣಾ ನೋಂದಣಾಧಿಕಾರಿಗಳು ಆಗಿರುವ ಸಹಾಯಕ ಆಯುಕ್ತರಾದ ಗಜಾನಂದ ಬಾಳೆ, ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಕೆ.ಡಿ.ಬಡಿಗೇರ, ಸಹಾಯಕ ನೋಂದಣಾಧಿಕಾರಿಗಳು ಆಗಿರುವ ತಹಸೀಲ್ದಾರ ಸುರೇಶ ವರ್ಮಾ, ಚುನಾವಣಾ ಶಾಖೆಯ ತಹಸೀಲ್ದಾರ್ ಪರಶುರಾಮ, ಸ್ವೀಪ ನೋಡಲ್ ಅಧಿಕಾರಿ ಡಾ.ಯಮನಪ್ಪ ವಾಲ್ಮೀಕಿ ಹಾಗೂ ಇತರರು ಇದ್ದರು. ಗ್ರೇಡ್ 2 ತಹಸೀಲ್ದಾರ ಭೀಮರಾಯ ರಾಮಸಮುದ್ರ ವಂದಿಸಿದರು. ಸಮಾರಂಭದಲ್ಲಿ ರಾಯಚೂರಿನ ಎಸ್ ಕೆ ಇ ಎಸ್ ಪ್ಯಾರಾಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಇನ್ನೀತರ ಕಾಲೇಜಿನ ವಿದ್ಯಾರ್ಥಿಗಳು ಭಾಗಿಯಾಗಿದ್ದರು.

No comments:

ಪ್ರೇಮ ಕಾಶ್ಮೀರದಲ್ಲಿ ರಕ್ತದೋಕುಳಿ; ಹಿಂದೂಗಳೇ ಟಾರ್ಗೆಟ...!

  ಪ್ರೇಮ ಕಾಶ್ಮೀರದಲ್ಲಿ ರಕ್ತದೋಕುಳಿ; ಹಿಂದೂಗಳೇ ಟಾರ್ಗೆಟ್. ಭೂಲೋಕದ ಸ್ವರ್ಗವೆಂದೇ ಕರೆಯುವ ಜಮ್ಮು-ಕಾಶ್ಮೀರದ ಪೆಹಲ್ಗಾಮ್ ಸಮೀಪದ ಬೈಸರನ್ ಹುಲ್ಲುಗಾವಲಿನಲ್ಲಿ ಪಾಕ್ ಪ್...