ಬೀದರ್ : ಇತ್ತಿಚಿನ ದಿನಮಾನಗಳಲ್ಲಿ ಇಂಗ್ಲೀಷ ಪಾಚಿಮಾತ್ಯ ಸಂಸ್ಕೃತಿಗೆ ಮಾರು ಹೋಗಿ ನಮ್ಮ ಸಂಸ್ಕೃತಿಯನ್ನು ಮರೆಯುತ್ತಿರುವುದು ವಿಷಾದನೀಯವಾಗಿದೆ ಎಂದು ಕರ್ನಾಟಕ ಸಾಹಿತ್ಯ ಅಕಾಡೇಮಿ ಸದಸ್ಯರಾದ ಡಾ. ಚಂದ್ರಕಲಾ ಬಿದ್ರಿ ಅವರು ಕಳವಳ ವ್ಯಕ್ತಪಡಿಸಿದರು.
ರವಿವಾರ ಬೆಳಿಗ್ಗೆ ಬೀದರ ನಗರದ ಹೋಟೆಲ್ ಕೃಷ್ಣ ರೇಜೆನ್ಸಿ ಸಭಾಂಗಣದಲ್ಲಿ ರಂಗಮAಡಲ ಬೆಂಗಳೂರು, ಅತಿವಾಳೆ ಸಾಂಸ್ಕೃತಿಕ ಪ್ರತಿಷ್ಠಾನ ಬೀದರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೀದರ ಹಾಗೂ ಪ್ರತಿ ಜಿಲ್ಲೆ ಮತ್ತು ಕನ್ನಡ ಪ್ರದೇಶದಲ್ಲಿ ಸ್ಥಳೀಯ ಸಂಘ ಸಂಸ್ಥೆಗಳ ಸಹಕಾರದೊಂದಿಗೆ "ಕಾವ್ಯ ಸಂಸ್ಕೃತಿ ಯಾನ" ಬೀದರ, ರಾಷ್ಟ್ರ ಕವಿ ಕುವೆಂಪು ಅವರ ಜನ್ಮದಿನೋತ್ಸವ ಪ್ರಯುಕ್ತ "ಶರಣರ ನಾಡಿನಲ್ಲಿ ಜನರೆಡೆಗೆ ಕಾವ್ಯ" ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡುತ್ತಿದ್ದರು.
ಇವತ್ತು ಎಲ್ಲರೀಗೂ ಒಂದು ಪ್ರಶ್ನೆಯನ್ನು ಕಾಡುತ್ತಿದೆ ಅದೆನೆಂದರೇ ಇಂಗ್ಲೀಷನಲ್ಲಿ ಅಭ್ಯಾಸ ಮಾಡಿದವರಿಗೆ ಎಲ್ಲರೀಗೂ ನೌಕರಿ ಸಿಗುವುದು ಎಂದು ಜನರು ತಮ್ಮ ಮಕ್ಕಳಿಗೆ ಇಂಗ್ಲೀಷ ಮಾಧ್ಯಮ ಶಾಲೆಗೆ ಸೇರಿಸುವುದು ನೋಡುತ್ತಿದ್ದೆವೆ. ಕನ್ನಡ ಮಾದ್ಯಮದಲ್ಲಿ ವಿದ್ಯಾಭ್ಯಾಸ ಮಾಡಿದರೇ ಉದ್ಯೋಗ ಸಿಗುತ್ತಿಲ್ಲವೇ? ಇವತ್ತಿಗೂ ಕೂಡ ಕನ್ನಡ ಮಾದ್ಯಮದಲ್ಲಿ ಓದುತ್ತಿರುವ ಮಕ್ಕಳು ಈ ಜಾಗತೀಕರಣ ಯುಗದಲ್ಲಿ ಅದರಲ್ಲೂ ತುಂಬಾನೇ ಸ್ಪರ್ದೆಗಳ ನಡುವೆ ಕನ್ನಡ ಮಾದ್ಯಮದ ಮಕ್ಕಳು ಉತ್ತಮ ರೀತಿಯಲ್ಲಿ ಉತ್ತಿರ್ಣರಾಗುತ್ತಿರುವುದು ನೋಡಿದರೇ ತುಂಬಾನೆ ಖುಷಿಯಾಗುತ್ತಿದೆ ಕಾವ್ಯ ಎನ್ನುವುದು ಜನಪರ, ಜೀವಪರ ವಾಗಿರಬೇಕೆಂದರು.
ಕಸಾಪ ಮಾಜಿ ಅಧ್ಯಕ್ಷರಾದ ಪ್ರೋ.ಸಿದ್ರಾಮಪ್ಪಾ ಮಾಸಿಮಾಡೆ ಮಾತನಾಡಿ, ನಮ್ಮ ಭಾಗದಲ್ಲಿ ಕವಿಗಳ ಸಾಧನೆಯ ವಿಚಾರದಲ್ಲಿ ಬೀದರ ಜಿಲ್ಲೆಯಲ್ಲಿ ಸಾವಿರ ಕವಿಗಳು ಇದ್ದಾರೆ. ಯಾರಲ್ಲಿ ಮಾನವಿಯತೆ ಕಳಕಳಿ ಇರುತ್ತದೆಯೋ ಅವರು ಕವಿಯಾಗಲು ಸಾಧ್ಯ. ಇಲ್ಲಿ ಯಾವೂದೆ ಅಹಿತಕರ ಘಟನೆಗಳು ನಡೆದರೇ ಅವರಿಗೆ ಸಹಿಸಿಕೊಳ್ಳಲು ಆಗುವುದಿಲ್ಲ. ಘಟನೆಯ ವಿಷಯವು ಏನಾದರು ಪತ್ರಿಕೆಯಲ್ಲಿ ಬಂದರೇ ಮರುದಿನವೇ ಅದರ ಬಗ್ಗೆ ಕವಿತೆ ಬರೆಯುತ್ತಾರೆ. ಕವಿಯಾದವನಿಗೆ ಅಂಥಹ ಘಟನೆಯ ವಿಚಾರಗಳು ಸಹಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಒಬ್ಬ ಕವಿ ತನ್ನ ಕಾವ್ಯ ರಚಿಸಿ ಅದರ ಮೂಲಕವೇ ಪಾತ್ರಧಾರಿಯನ್ನಾಗಿದ್ದಾಗ ಅದರಲ್ಲಿರುವ ಗ್ರಾಮೀಣ ಭಾಗದ ಜನರು ಅನಕ್ಷರಸ್ಥರಿದ್ದರು ಕೂಡ ಅಲ್ಲಿರುವ ಪ್ರಾತ್ರಧಾರಿಗಳ ಕುರಿತು ಮಾತನಾಡುತ್ತಾರೆ. ಸತ್ಯ ಹರಿಶ್ಚಂದ್ರ, ಕರ್ಣನ, ದುರ್ಯೋಧನ ಪಾತ್ರದ ಬಗ್ಗೆ ಮಾತನಾಡುತ್ತಾರೆ ಎಂದರು.
ಕಾರ್ಯಕ್ರಮದ ಸರ್ವಾಧ್ಯಕ್ಷರಾದ ಬೀದರ್ ಕಾವ್ಯ ಸಂಸ್ಕೃತಿ ಯಾನ ಹಿರಿಯ ಸಾಹಿತಿ ಡಾ. ವಿಜಯಶ್ರೀ ಸಬರದ ಮಾತನಾಡಿ, ಕಾವ್ಯ ಸಂಸ್ಕೃತಿಯಾನ ದಿವಟಿಗೆ ಬೆಂಗಳೂರಿನಿAದ ಹೊರಟು ಬೀದರ ಶರಣರ ನಾಡಿನಲ್ಲಿ ಜನರೆಡೆಗೆ ಕಾವ್ಯ ಆರನೆ ಕವಿಗೋಷ್ಠಿ ಹಮ್ಮಿಕೊಂಡಿದ್ದು ಖುಷಿಯಾಗಿದೆ ಎಂದರು.
ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಸಂಜೀವಕುಮಾರ ಅತಿವಾಳೆ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಹಿರಿಯ ಸಾಹಿತಿ ಶ್ರೀಮತಿ ಪುಣ್ಯವತಿ ವಿಸಾಜಿ, ರಂಗಕರ್ಮಿ ಪ್ರಧಾನ ಸಂಚಾಲಕರಾದ ಮಲ್ಲಿಕಾರ್ಜುನ ಮಹಾಮನೆ ಮಾತನಾಡಿದರು. ವೇದಿಕೆ ಮೇಲೆ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷರಾದ ಸುರೇಶ ಚೆನ್ನಶೆಟ್ಟಿ, ಕಾಶಿನಾಥರಾವ ಚಲ್ವಾ, ಬೆಳಗು ಸಾಮಾಜಿಕ ಸಾಂಸ್ಕೃತಿಕ ಟ್ರಸ್ಟನ ಅಧ್ಯಕ್ಷರಾದ ಅನೀಲಕುಮಾರ ದೇಶಮುಖ ಸೇರಿದಂತೆ ಮುಂತಾದ ಅತಿಥಿ ಗಣ್ಯರು ಉಪಸ್ಥಿತರಿದ್ದರು. ಮೊದಲಿಗೆ ಯುವ ಸಾಹಿತಿ ಅಜೀತ ಎನ್ ಸ್ವಾಗತಿಸಿದರು. ಕು.ಸೃಜನ್ಯ ಅತಿವಾಳೆ ನೀರುಪಿಸಿ ವಂದಿಸಿದರು.
ಕಾರ್ಯಕ್ರಮದ ನಂತರ ಪ್ರಥಮ ಕವಿಗೋಷ್ಠಿ ನಡೆಯಿತು. ಈ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಹಿರಿಯ ಸಾಹಿತಿ ಎಂ. ಜಿ. ದೇಶಪಾಂಡೆ ಅವರು ವಹಿಸಿ ಮಾತನಾಡಿದರು. ಗೌರವ ಉಪಸ್ಥಿತಿ ಬಿ.ಎಮ್. ಅಮರವಾಡಿ, ಹಿರಿಯ ಸಾಹಿತಿ ಶಕೀಲ್ ಐ.ಎಸ್. ಅವರು ಆಶಯ ನುಡಿ ಹೇಳಿದರು. ವೇದಿಕೆ ಮೇಲೆ ಅನೇಕ ಕವಿಗಳು, ಕಾರ್ಯಕ್ರಮಕ್ಕೆ ಭಾಗಿಯಾಗಿ ತಮ್ಮ ಸ್ವರಚಿತ ಕವನ ವಾಚನ ಮಾಡಿದರು.
No comments:
Post a Comment