ads

Search This Blog

Saturday, 25 January 2025

ಡಾ ಚೆನ್ನಬಸವ ಪಟ್ಟದೇವರು ಕಟ್ಟಿದ ಬಸವ ತತ್ವ ಕನ್ನಡ ಮಠ ವೈದಿಕ ಕಡೆ ಜಾರುತ್ತಿದೆಯ?

 

ಡಾ ಚೆನ್ನಬಸವ ಪಟ್ಟದೇವರು ಕಟ್ಟಿದ ಬಸವ ತತ್ವ ಕನ್ನಡ ಮಠ ವೈದಿಕ ಕಡೆ ಜಾರುತ್ತಿದೆಯ?

ಹಿರಿಯ ಮತ್ತು ಕಿರಿಯ ಮಠಾಧೀಶರ ದ್ವಂದ್ವ ನಿಲುವು ಬಸವ ಭಕ್ತರಿಗೆ ಆಘಾತ: 

ಬೀದರ : ಜಿಲ್ಲೆಯಲ್ಲಿ ಇಂದು ಬಸವ ತತ್ವದ ಸತ್ವ ಪರೀಕ್ಷೆಯ ಪರ್ವ ಕಾಲದಲ್ಲಿ ಲಿಂಗಾಯತ ಧರ್ಮದ ಅನೂಯಾಯಿಗಳ ಅಘಾತಕಾರಿ ಸನ್ನಿವೇಶವನ್ನು ಎದುರಿಸುತ್ತಿರುವ ಪರಿಸ್ಥಿತಿ ನಿರ್ಮಾಣವಾಗಿದೆ. ಕರ್ನಾಟಕ ಕಿರೀಟ ಪ್ರಾಯವಾದ ಬೀದರ ಜಿಲ್ಲೆಯ ಹೆಸರಾಂತ ಏಕೈಕ ಕನ್ನಡ ಮಠ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ ಭಾಲ್ಕಿ ಸಂಸ್ಥಾನ ಹಿರೇಮಠದ ಇಂದಿನ ಮಠಾಧೀಶರ ನಡೆಯನ್ನು ನೋಡಿದರೆ ವೈದಿಕ ಸಂಪ್ರದಾಯಕ್ಕೆ ತಮ್ಮನ್ನು ತಾವು ಮಾರಿಕೊಂಡಿದ್ದಾರೆ ಎಂಬುದು ಬಸವ ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ. ಆದರೆ ಮಠದಲ್ಲಿರುವ ಹಿರಿಯ, ಕಿರಿಯ ಸ್ವಾಮಿಜಿಗಳ ದ್ವಂದ್ವ ನಿಲ್ಲುವೇ ಮೂಲಕಾರಣವಾಗಿದೆ ಇಂದು. ಇಬ್ಬರಲ್ಲಿ ಒಬ್ಬರು ಬಸವತತ್ವಕ್ಕೆ ನಾವು ಒತ್ತು ನೀಡುತ್ತೇವೆ ಎಂದರೆ ಇನ್ನೊಬ್ಬರು ಭಾರತೀಯ ಸಂಸ್ಕೃತಿ ಉತ್ಸವಕ್ಕೆ ಪ್ರಚಾರ ರಥಕ್ಕೆ ಪೂಜೆ ಸಲ್ಲಿಸಿ ಶುಭ ಕೋರಿದು ಇಂದು ಎಲ್ಲೆಡೆ ಬಸವ ಭಕ್ತರಲ್ಲಿ ಚರ್ಚೆಗೆ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ. 


ಭಾಲ್ಕಿಯಲ್ಲಿ  ಪೂಜ್ಯ ಶ್ರೀ ಗುರುಬಸವ ಪಟ್ಟದೇವರು ಭಾರತೀಯ ಸಂಸ್ಕೃತಿ ಉತ್ಸವಕ್ಕೆ ಪ್ರಚಾರ ರಥಕ್ಕೆ ಪೂಜೆ ಸಲ್ಲಿಸಿ ಶುಭ ಕೋರಿದು

      ಇದಕ್ಕೆಲ್ಲ ಕಾರಣ ಆರೆಸಸ್ ಪ್ರಾಯೋಜಿತ ಭಾರತೀಯ ಸಂಸ್ಕೃತಿ ಉತ್ಸವ ಸೇಡಂ ಪರ ಮತ್ತು ವಿರೋಧ ದ್ವಂದ್ವ ನಿಲುವು: ದಿನಾಂಕ ೧೯ ರಂದು ಕಲಬುರ್ಗಿಯಲ್ಲಿ ಸೌಹಾರ್ದ ಕರ್ನಾಟಕ ಸಂಘಟನೆ ಮಠಾಧೀಶರು ಮತ್ತು ಚಿಂತಕರು  ಆಯೋಜಿಸಿದ್ದ " ಬಹುತ್ವ ಸಂಸ್ಕೃತಿ ಭಾರತೋತ್ಸವ "ದಲ್ಲಿ ಲಿಂಗಾಯತ ಧರ್ಮದ ಮಠಾಧೀಶರು ಭಾಗವಹಿಸಿದ್ದು ವಿಶೇಷವಾಗಿತ್ತು. ಈ ಕಾರ್ಯಕ್ರಮದ ಮುಖ್ಯ ಉದ್ದೇಶ ಸೇಡಂ ಪಟ್ಟಣದಲ್ಲಿ ಆಯೋಜಿಸಿದ್ದ ಲಿಂಗಾಯತ ಬಸವ ವಿರೋಧಿ ಸಂಘಟನೆ ಆರೆಸಸ್ ಪ್ರಾಯೋಜಿತ ಭಾರತೀಯ ಸಂಸ್ಕೃತಿ ಉತ್ಸವ ವಿರೋಧ ಮಾಡುವದು, ಬುದ್ಧ ಬಸವ ಅಂಬೇಡ್ಕರ್ ಗಾಂಧಿವಾದಿಗಳು ಪ್ರಗತಿಪರ ವಿಚಾರ ಧಾರೆಯ ವಿರೋಧಿ ಕಾರ್ಯಕ್ರಮಕ್ಕೆ  ಪ್ರಗತಿಪರರು ಚಿಂತಕರು ಯಾರು ಹೋಗಬಾರದು ಎಂದು ಎಲ್ಲರೂ ಭಾಷಣ ಮುಖಾಂತರ ಆಹ್ವಾನ ಮಾಡಿದ್ದರು. ಕಾರ್ಯಕ್ರಮದಲ್ಲಿ ಲಿಂಗಾಯತ ಧರ್ಮ ಮಠಾಧೀಶ ಒಕ್ಕೂಟದ ಅಧ್ಯಕ್ಷ ಪೂಜ್ಯ ಶ್ರೀ ಡಾ ಬಸವಲಿಂಗ ಪಟ್ಟದೇವರು ಭಾಲ್ಕಿ ಇವರು ಭಾಗವಹಿಸಿ ಮಾತನಾಡಿ ಈ ಒಂದು ಕಾರ್ಯಕ್ರಮ ಬಸವ ವಿರೋಧಿ ಕಾರ್ಯಕ್ರಮ ಯಾರು ಭಾಗವಹಿಸಬಾರದು ಎಂದು ಕರೆ ಕೊಟ್ಟಿದ್ದರು. ಈ ಒಂದು ಕಾರ್ಯಕ್ರಮದಲ್ಲಿ ಲಿಂಗಾಯತ ಧರ್ಮದ ಹೆಸರಾಂತ ಮಠಾಧೀಶರು ಅಕ್ಕ ಮಾತೆಯವರು ಭಾಗವಹಿಸಿ ಮಾತನಾಡಿದ್ದರು, ಪೂಜ್ಯ ಸಾಣೇಹಳ್ಳಿ ಸ್ವಾಮೀಜಿ, ಪೂಜ್ಯ ಹುಲಸೂರು ಸ್ವಾಮೀಜಿ, ಪೂಜ್ಯ ಕೋರ್ಣೇಶ್ವರ ಸ್ವಾಮೀಜಿ, ಪೂಜ್ಯ ಅಕ್ಕ ಗಂಗಾAಬಿಕೆ ಮುಂತಾದವರು ಭಾಗವಹಿಸಿದರು. 

ವಿಪರ್ಯಾಸ ಅಂದರೆ ಮಾರನೇ ದಿನವೇ ೨೦/೦೧/೨೦೨೫ ರಂದು ಕಲ್ಬುರ್ಗಿ ಕಾರ್ಯಕ್ರಮದಲ್ಲಿ ವಿರೋಧ ಮಾಡಿದ್ದ ಪೂಜ್ಯ ಅಕ್ಕ ಗಂಗಾAಬಿಕೆ ಮತ್ತೆ ಅವರೇ ಭಾರತೀಯ ಸಂಸ್ಕೃತಿ ಉತ್ಸವ ಪ್ರಚಾರ ರಥಕ್ಕೆ ಚಾಲನೆ ಕೊಟ್ಟರು, ಲಿಂಗಾಯತರ ಬಸವಾದಿ ಶರಣರ ಕೆಂಗಣ್ಣಿಗೆ ಗುರಿಯಾದರು.

ದಿನಾಂಕ ೨೪/೦೧/೨೦೨೫ ರಂದು ಭಾಲ್ಕಿಯಲ್ಲಿ ಮಠದ ಮಠಾಧೀಶ ಪೂಜ್ಯ ಶ್ರೀ ಗುರುಬಸವ ಪಟ್ಟದೇವರು ಭಾರತೀಯ ಸಂಸ್ಕೃತಿ ಉತ್ಸವ ಪ್ರಚಾರ ರಥಕ್ಕೆ ಚಾಲನೆ ಕೊಟ್ಟರು. ಭಾಲ್ಕಿ ಹಿರೇಮಠದ ಹಿರಿಯ ಕಿರಿಯ ಮಠಾಧೀಶರು ದ್ವಂದ್ವ ನಿಲುವು ದಿಗ್ಭ್ರಮೆಗೊಳಿಸಿದೆ. ಇವರಿಬ್ಬರಲ್ಲಿ ತತ್ವ ಸಿದ್ದಾಂತದಲ್ಲಿ ಭೇದ ಉಂಟಾಗಿದೆಯ ಎನ್ನುವ ಸಂಶಯ ನಿರಂತರ ಕಂಡು ಬರುತ್ತಿದೆ. ಬಸವಲಿಂಗ ಪಟ್ಟದೇವರು ಪೂಜ್ಯ ಚೆನ್ನಬಸವ ಪಟ್ಟದೇವರ ತತ್ವ ಸಿದ್ದಾಂತ ದಾರಿಯಲ್ಲಿ ನಿಷ್ಠೆಯಿಂದ ನಿರಂತರ ಸಾಗುತ್ತಿದ್ದಾರೆ, ಬಸವ ತತ್ವ ಸಿದ್ದಾಂತ ತಮ್ಮ ಉಸಿರು ಮಾಡಿಕೊಂಡಿದ್ದಾರೆ. ಆದರೆ ವ್ಯವಹಾರಿಕ ಮನಸ್ಥಿತಿ ಇರುವ ಗುರುಬಸವ ಪಟ್ಟದೇವರು ಯಾವಾಗಲೂ ಲಾಭ ನಷ್ಟದ ಲೆಕ್ಕಾಚಾರದಲ್ಲಿ ಎಡವಿ ಮಠದ ತತ್ವ ಸಿದ್ದಾಂತಗಳನ್ನು ಪಾಲಿಸುತ್ತಿಲ್ಲ ಅನ್ನೋದು ಮಠದ ಭಕ್ತರ ಅಳಲು. ಗುರುಬಸವ ಪಟ್ಟದೇವರು ಯಾರ ಮಾತು ಕೇಳಲ್ಲ, ಬಸವಲಿಂಗ ಪಟ್ಟದೇವರನ್ನು ಮಾತು ಕೇಳಲ್ಲ, ಅವರಿಗೆ ನಿಯಂತ್ರಣ ಮಾಡುತ್ತಾರೆ, ಆಧ್ಯಾತ್ಮಿಕ ಜ್ಞಾನದ ಕೊರತೆ ಇದೆ, ಸರಿಯಾದ ಶಿಕ್ಷಣ ಆಗಿಲ್ಲ, ಬಸವಾದಿ ಶರಣರ ಸಾಹಿತ್ಯದ ಸಂಪೂರ್ಣ ಅಧ್ಯಯನವು ಇಲ್ಲ, ಅಧ್ಯಯನ ಮಾಡುವ ಮನಸ್ಸು ಇಲ್ಲ ಎಂದು ಮಠದ ಶಿಷ್ಯರ ಅಳಲು. ಆದರೆ ತಮ್ಮ ಮಠದ ವ್ಯವಹಾರ ಆಸ್ತಿ ಹೇಗೆ ವೃದ್ಧಿ ಮಾಡಬೇಕು ಎನ್ನುವ ಸಂಪೂರ್ಣ ವ್ಯವಹಾರಿಕ ಜ್ಞಾನ ಇದೆ. ರಾಜಕೀಯ ಇಚ್ಛಾಶಕ್ತಿ ಇರುವ ಗುರುಬಸವ ಪಟ್ಟದೇವರು ದಿನಾಲು ಸರಕಾರಿ ಅಧಿಕಾರಿಗಳಿಗೆ ಫೋನ್ ಮಾಡಿ ತಮ್ಮವರ ಕೆಲಸ ಮಾಡುವಂತೆ ಒತ್ತಾಯಿಸುತ್ತಾರಂತೆ, ಹಲವಾರು ಅಧಿಕಾರಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ವಾರದಲ್ಲಿ ಒಂದೆರಡು ಸಲ ಬೆಂಗಳೂರು ವಿಧಾನ ಸೌಧ ಭೇಟಿ ಕೊಟ್ಟು ಅಲ್ಲಿಯ ಸಚಿವರ ಕಚೇರಿಗೆ ಅಲೆದಾಡುತ್ತಾರೆ ಎಂದು ರಾಜಕೀಯ ಪಕ್ಷಗಳ ಕಾರ್ಯಕರ್ತರು ಗೋಳು ಹೊಡೆಯುತ್ತಾರೆ. ರಾಜಕೀಯ ನಾಯಕರನ್ನು ಮತ್ತು ಅಧಿಕಾರಿಗಳನ್ನು ತಮ್ಮ ಮಠದ ಕಾರ್ಯಕ್ರಮಗಳಿಗೆ ಆಹ್ವಾನಿಸಿ ಸನ್ಮಾನ ಮಾಡಿ ಅವರ ಸಂಬAಧ ಬೆಳೆಸಿಕೊಳ್ಳುವದೆ ಇವರ ಮೂಲ ಉದ್ದೇಶ, ಬಸವ ತತ್ವ ಸಿದ್ದಾಂತ ಪ್ರಚಾರ ಮಾಡುವದು ಕಿಂಚಿತ್ತೂ ಇಚ್ಛೆ ಇಲ್ಲ. 

ಕೊತ್ತಲ ಬಸವೇಶ್ವರ ಭಾರತೀಯ ಸಂಸ್ಥೆ ಮತ್ತು ಸನ್ಮಾನ್ಯ ಶ್ರೀ ಬಸವರಾಜ ಪಾಟಿಲ ಸೇಡಂ ಮುಖಾಂತರ ಆರೆಸಸ್ ಬಿಜೆಪಿ ಕಲ್ಯಾಣ ಕರ್ನಾಟಕ ಭಾಗದ ಲಿಂಗಾಯತ ಮಠಗಳನ್ನು ತೆಕ್ಕೆಗೆ ತೆಗೆದುಕೊಂಡು ಬಸವ ತತ್ವ ಸಿದ್ದಾಂತ ಮಸುಕು ಮಾಡುವ ಹುನ್ನಾರ: 

ಎರಡು ದಶಕಗಳಿಂದ  ಶ್ರೀ ಬಸವರಾಜ ಪಾಟಿಲ ಸೇಡಂ ಕಲ್ಯಾಣ ಕರ್ನಾಟಕ ಭಾಗದ ಶಾಲಾ ಕಾಲೇಜುಗಳಿಗೆ ಕಂಪ್ಯೂಟರ್, ಪಠ್ಯ ಪುಸ್ತಕ, ಇನ್ನಿತರ ಸಾಮಗ್ರಿಗಳು ಪೂರೈಸಿ ಈ ಭಾಗದ ಶಿಕ್ಷಣ ಸಂಸ್ಥೆಗಳ ಪ್ರಭಾವ ಬಿರುತ್ತಿದ್ದಾರೆ. ಹಲವಾರು ಮಠ ಮಾನ್ಯಗಳು, ಲಿಂಗಾಯತ ಸಂಸ್ಥೆಗಳಿಗೆ ಸಹಾಯ ಹಸ್ತ ಚಾಚಿ ಅವರನ್ನು ತಮ್ಮ ಕಡೆ ಸೆಳೆದುಕೊಂಡಿದ್ದಾರೆ. ಬಿಜೆಪಿ ಸರಕಾರ ಇದ್ದಾಗ ಇವರನ್ನು ಕಲ್ಯಾಣ ಕರ್ನಾಟಕ ಸಾಂಸ್ಕೃತಿಕ ಸಂಘಟನೆ ಮಾಡಿ ಸೇಡಂ ಅವರಿಗೆ ಅಧ್ಯಕ್ಷ ಮಾಡಿದ್ದರು, ಇದಕ್ಕೆ ಬಜೆಟ್ ಕೊಡಲಾಗಿತ್ತು, ಇವರ ಕೆಲಸ ಇಷ್ಟೇ ಹಿಂದೂ ಧರ್ಮದ ದೇವಾಲಯಗಳು ಅಭಿವೃದ್ದಿ ಪಡಿಸುವುದು, ಬಸವಾದಿ ಶರಣರ ಇತಿಹಾಸ ಹಾಳು ಮಾಡುವದು, ಲಿಂಗಾಯತ ಮಠಾಧೀಶರಿಗೆ ಬಜೆಟ್ ಕೊಟ್ಟು ಅವರನ್ನು ತಮ್ಮ ಕಡೆ ಸೆಳೆದುಕೊಳ್ಳುವದು.ಹೊಸ ಅನುಭವ ಮಂಟಪದ ಕಟ್ಟಡ ಭೂಮಿ ಪೂಜೆ ಮಾಡುವ ಆಹ್ವಾನ ಪತ್ರಿಕೆಯಲ್ಲಿ ಸನಾತನ ಪರಂಪರಯ ಪುನರುತ್ಥಾನ ಬಸವ ತತ್ವ ಎಂದು ಬರೆದಿದ್ದರು, ಆವಾಗ ಮಠಾಧೀಶರು ಯಾರು ವಿರೋಧ ಮಾಡಿಲ್ಲ. ವೇದಿಕೆಯ ಮೇಲೆ ಗೊ.ರು.ಚ ಅವರು ಮಾತ್ರ ಆಕ್ಷೇಪ ವ್ಯಕ್ತಪಡಿಸಿದರು. ಪ್ರಚಾರ ರಥಗಳಿಗೆ ಚಾಲನೆ ಕೊಡುತ್ತಿರುವವರು ಸೇಡಂ ಅವರ ಹಂಗಿನಲ್ಲಿ ಇದ್ದಾರೆ ಎಂದು ಜನರು ಆಡಿಕೊಳ್ಳುತ್ತಿದ್ದಾರೆ.

ಈಗಾಗಲೇ ಕೆಲವು ಲಿಂಗಾಯತ ಮಠಾಧೀಶರು ಬಸವ ತತ್ವ ಸಿದ್ದಾಂತ ವಿರೋಧಿ ಆದ ಕುಂಭಮೇಳದಲ್ಲಿ ಸ್ನಾನಕ್ಕೆ ಪ್ರಯಗರಾಜ್  ಪ್ರಯಾಣ ಬೆಳೆಸಿದ್ದಾರೆ, ಕೆಲವರು ಸ್ನಾನ ಮಾಡಿ ಬಂದಿದ್ದಾರೆ, ಇನ್ನು ಕೆಲವರು ಪ್ರಯಾಗರಾಜ್ ಪ್ರಯಾಣಕ್ಕೆ ಸಜ್ಜಾಗಿದ್ದಾರೆ, ಇವರಿಗೆಲ್ಲ ಆರೆಸಸ್ ಸಂಪೂರ್ಣ ಅಂದರೆ ವಿಮಾನ ಟಿಕೆಟ್, ತಂಗುವ ಸವಲತ್ತು, ಎಲ್ಲಾ ಖರ್ಚು ವೆಚ್ಚ ನೋಡಿಕೊಳ್ಳುತ್ತಿದೆ. ಎಂಬ ವದಂತಿ ಹರಿದಾಡುತ್ತಿವೆ.

೯೦% ಪ್ರತಿಶತ ಲಿಂಗಾಯತ ಮಠಗಳು ವ್ಯವಹಾರಿಕ ಆಗಿದ್ದು, ಹಣದ ಆಮಿಷಕ್ಕೆ ಒಳಗಾಗಿ, ಪ್ರಶಸ್ತಿಗಳ ಬಯಕೆಯಲ್ಲಿ ರಾಜಕೀಯ ಪಕ್ಷಗಳ ಹಂಗಿನಲ್ಲಿ ತತ್ವ ಸಿದ್ದಾಂತ ಗಾಳಿಗೆ ತುರುತ್ತಿದ್ದಾರೆ. ಈ ಮಠಗಳು ಕೇವಲ ಲಾಭಕ್ಕಾಗಿ ಬಸವಣ್ಣನವರ ಫೋಟೋ ಬಳಸಿಕೊಳ್ಳುತ್ತಿದ್ದಾರೆ, ಆಂತರಿಕ ಹಿಂದೂ ಬಾಹ್ಯ ಲಿಂಗಾಯತ.ಇವರು ಹಣದ ವ್ಯಾಮೋಹದಲ್ಲಿ ಮಠಗಳನ್ನು ಆರೆಸಸ್ ಸುಪರ್ದಿಗೆ ವಹಿಸಿಕೊಡಲು ಹಿಂಜರಿಯಲ್ಲ. ಕೆಲವೊಂದು ಮಠಗಳು ಸಂಪೂರ್ಣ ಬಸವ ತತ್ವ ಸಿದ್ದಾಂತ ಮೇಲೆ ಸಾಗುತ್ತಿವೆ, ಆ ಮಠಗಳು ತಮ್ಮ ತಮ್ಮ ಧರ್ಮ ಪ್ರಚಾರ ಮಾಡುತ್ತಾ ಯಾವುದೇ ಹಂಗಿಗೂ ಪ್ರಚಾರಕ್ಕೂ ಪ್ರಶಸ್ತಿಗಳಿಗೂ ಹಾತೋರೈದೆ ಎಲೆ ಮರೆ ಕಾಯಿಯಂತೆ ಕೆಲಸ ಮಾಡುತ್ತಿವೆ.

ಪೂಜ್ಯ ಡಾ ಮಾತೆ ಮಹಾದೇವಿ, ಪೂಜ್ಯ ತೋಟದಾರ್ಯ ಶ್ರೀಗಳು, ಇಲ್ಲಕಲ್ ಶ್ರೀಗಳು ಐಕ್ಯ ಆದ ಮೇಲೆ ಗಟ್ಟಿಯಾಗಿ ಮಾತಾಡುವರು ಯಾರು ಇಲ್ಲ, ಹೋರಾಟ ಮಾಡುವವರು ಯಾರು ಇಲ್ಲ , ಕೆಲವು ಲಿಂಗಾಯತ ಸಂಘಟನೆ ಮುಖಂಡರು ಮಠಾಧೀಶರೆ ರಾಷ್ಟ್ರೀಯ ಬಸವ ದಳ ಒಡೆದಿದ್ದಾರೆ, ಬಸವ ಪ್ರತಿಷ್ಠಾನ ಅಕ್ಕವರ ಮಧ್ಯ ಜಗಳ ಹಚ್ಚಿದ್ದಾರೆ, ಪೂಜ್ಯ ಚಿತ್ರದುರ್ಗ ಶ್ರೀಗಳ ಮೇಲೆ ಹುಸಿ ಕೇಸ್ ಮಾಡಿ ಜೈಲು ಕಳಿಸಿದ್ದಾರೆ. ಇವೆಲ್ಲದರ ಹಿಂದೆ ಕಾಣದ ಕೈಗಳು ಇವೆ, ಅದಕ್ಕೆ ಆರೆಸಸ್ ಬಿಜೆಪಿ ನಾಯಕರ ಕುಮ್ಮಕ್ಕು ಇದೆ. 

ಭಾಲ್ಕಿ ಶ್ರೀಗಳು ಪೂರ್ವದಿಂದಲೂ ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆಯನ್ನು ಕಟುವಾಗಿ ವಿರೋಧಿಸುವ ಬಿಜೆಪಿ ಮತ್ತು ಅದರ ಮಾತೃ ಸಂಸ್ಥೆ ರಾಷ್ಟ್ರೀಯ ಸ್ವಯಂಸೇವಕ ಸಂಘದೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದಾರೆ. ಮಠಗಳು ಯಾರನ್ನೂ ದೂರವಿಡಬಾರದುˌ ಮಠ ಎಲ್ಲರಿಗೂ ಸೇರಿದ್ದು ಎಂದು ನೆಪ ಹೇಳುತ್ತಲೆ ತಮ್ಮ ತಮ್ಮ ಮಠಗಳಲ್ಲಿ ಬಹುತೇಕ ಮಠಾಧೀಶರು ಹಿಂದುತ್ವವಾದಿ ಹಾಗೂ ಕೋಮುವಾದಿಗಳ ಹಿಂದೂತ್ವ ಬಿತ್ತುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡ ಉದಾಹರಣೆಗಳು ಇವೆ. -ಡಾ. ಜೆ ಎಸ್ ಪಾಟೀಲ

ಇದು ಕೇವಲ ಭಾಲ್ಕಿ ಮಠ ಒಂದರ ಸಮಸ್ಯೆ ಮಾತ್ರವಲ್ಲ. ನಾಡಿನ ಬಹುತೇಕ ಲಿಂಗಾಯತ ಮಠಗಳು ಮನುವಾದಿಗಳಿಗೆ ಶರಣಾಗತರಾಗಿ ದಶಕಗಳೆ ಕಳೆದುಹೋಗಿವೆ. ಮಠಾಧೀಶರು ತಮ್ಮ ಇಚ್ಛೆಯಂತೆ ನಡೆಯುವ ಹಾದಿಯಲ್ಲಿ ಬಹುದೂರ ಕ್ರಮಿಸಿದ್ದಾರೆ. ಲಿಂಗಾಯತ ಶಿಕ್ಷಣ ಸಂಸ್ಥೆಗಳು ಶ್ರೀಮಂತ ರಾಜಕಾರಣಿಗಳ ಕುಟುಂಬದ ಖಾಸಗಿ ಆಸ್ತಿಗಳಾಗಿ ಮಾರ್ಪಟ್ಟಿವೆ.

ಮಠಾಧೀಶರು ತಮ್ಮ ಇಚ್ಛೆಯಂತೆ ನಡೆಯುವ ಹಾದಿಯಲ್ಲಿ ಬಹುದೂರ ಕ್ರಮಿಸಿದ್ದಾರೆ. ಲಿಂಗಾಯತ ಶಿಕ್ಷಣ ಸಂಸ್ಥೆಗಳು ಶ್ರೀಮಂತ ರಾಜಕಾರಣಿಗಳ ಕುಟುಂಬದ ಖಾಸಗಿ ಆಸ್ತಿಗಳಾಗಿ ಮಾರ್ಪಟ್ಟಿವೆ.

ಲಿಂಗಾಯತ ಮಠಗಳು ಹಾಗು ಶಿಕ್ಷಣ ಸಂಸ್ಥೆಗಳನ್ನು ನಾಶಗೊಳಿಸದ ಹೊರತು ಕರ್ನಾಟಕದಲ್ಲಿ ಹಿಂದುತ್ವವನ್ನು ಬೆಳೆಸಲು ಸಾಧ್ಯವಿಲ್ಲವೆಂದು ಮನಗಂಡಿರುವ ಹಿಂದುತ್ವವಾದಿಗಳು ಅವುಗಳ ನಾಶಕ್ಕೆ ೨೦ ವರ್ಷಗಳ ಹಿಂದೆಯೆ ಯೋಜನೆಯೊಂದನ್ನು ರೂಪಿಸಿ ಅದರಲ್ಲಿ ಬಹುತೇಕ ಯಶಸ್ವಿಯಾಗಿದ್ದಾರೆ. ಇದರಲ್ಲಿ ಹಿಂದುತ್ವವಾದಿಗಳದೇನೂ ತಪ್ಪಿಲ್ಲ. ಕರ್ನಾಟಕದಲ್ಲಿ ತಮ್ಮ ಪ್ರಮುಖ ವೈರಿಗಳು ಲಿಂಗಾಯತರುˌ ಹಿಂದುತ್ವವನ್ನು ಮುನ್ನೆಲೆಗೆ ತರಬೇಕಾದರೆ ಲಿಂಗಾಯತರನ್ನು ನಾಶಗೊಳಿಸಬೇಕು ಎನ್ನುವ ಹಿಂದುತ್ವವಾದಿಗಳ ಯೋಜನೆ ಅವರ ಪ್ರಕಾರ ಸರಿಯಾದದ್ದೆ.

ಲಿಂಗಾಯತರನ್ನು ನಾಶಗೊಳಿಸುವುದು ಸುಲಭವಲ್ಲವಾದ್ದರಿಂದ ಅವರನ್ನು ಅಪ್ಪಿಕೊಂಡೆ ನಾಶಗೊಳಿಸಬೇಕು ಎನ್ನುವ ಅವರ ಹುನ್ನಾರವೂ ಸರಿಯಾದದ್ದೆ. ಆದರೆ ಅದನ್ನು ತಿಳಿದುಕೊಳ್ಳುವಲ್ಲಿ ಲಿಂಗಾಯತ ಮಠಗಳು ಹಾಗೂ ರಾಜಕಾರಣಿಗಳು ಮತ್ತವರ ಅನುಯಾಯಿಗಳು ಸೋತಿದ್ದಾರೆ.

ಲಿಂಗಾಯತ ತತ್ವಜ್ಞಾನˌ ಸಿದ್ಧಾಂತ ಹಾಗೂ ಸಂಸ್ಕೃತಿಯ ಪರಂಪರಾಗತ ವೈರಿಗಳು ಯಾರು ಎನ್ನುವ ಕನಿಷ್ಠ ಪ್ರಜ್ಞೆ ಲಿಂಗಾಯತ ಮಠಗಳಿಗೆˌ ರಾಜಕಾರಣಿಗಳಿಗೆ ಹಾಗೂ ಜನಸಾಮಾನ್ಯರಿಗೆ ಇಲ್ಲದಿರುವದು ಆ ಸಮುದಾಯದ ದೌರ್ಭಾಗ್ಯವೆ ಹೊರತು ಹಿಂದುತ್ವವಾದಿಗಳ ತಪ್ಪಲ್ಲ. ಹಿಂದುತ್ವವಾದಿಗಳು ತಮಗನ್ನಿಸಿದ್ದನ್ನು ಯಶಸ್ವಿಯಾಗಿ ಮಾಡುತ್ತಿದ್ದಾರೆ.

ಪರಮ ಸ್ವಾರ್ಥ ಲಿಂಗಾಯತ ಮಠಾಧೀಶರ ಈ ನಡೆಗೆ ಮುಖ್ಯ ಕಾರಣ ತಾತ್ವಿಕ ಬದ್ದತೆಯ ಕೊರತೆ ಹಾಗೂ ಪರಮ ಸ್ವಾರ್ಥ. ಇದು ಹೀಗೆ ಮುಂದುವರೆದರೆ ಮುಂದಿನ ದಿನಗಳಲ್ಲಿ ಇಡೀ ಲಿಂಗಾಯತ ಸಂಸ್ಕೃತಿಯು ನಾಶಗೊಳ್ಳುವಲ್ಲಿ ಯಾವುದೆ ಅನುಮಾನವಿಲ್ಲ. ಈಗಾಗಲೆ ಹಿಂದುತ್ವದ ನಶೆಯ ಕಾರಣ ಲಿಂಗಾಯತ ಯುವಕರು ಶಿಕ್ಷಣ ಪೂರೈಸುವಲ್ಲಿ ಹಾಗೂ ಉದ್ಯೋಗ ಹಿಡಿಯುವಲ್ಲಿ ಸಂಪೂರ್ಣ ವಿಫಲರಾಗುತ್ತಿದ್ದಾರೆ.

ಬಡ ಹಾಗೂ ಮಧ್ಯಮ ವರ್ಗದ ಲಿಂಗಾಯತರ ಕುರಿತು ಮಠಾಧೀಶರಿಗಾಗಲಿˌ ರಾಜಕಾರಣಿಗಳಿಗಾಗಲಿ ಯಾವದೆ ಕಾಳಜಿ ಇಲ್ಲ. ಇನ್ನು ಮುಂದೆಯೂ ಕೂಡ ಲಿಂಗಾಯತ ಮಠಾಧೀಶರು ತಮಗೆ ಅನುಕೂಲಕರವಾದದ್ದನ್ನು ಮಾಡಬಲ್ಲರೆ ಹೊರತು ಸಮುದಾಯದ ಹಿತರಕ್ಷಣೆಯ ಕಾರ್ಯ ಮಾಡಲಾರರು.

ಲಿಂಗಾಯತ ಮಠಾಧೀಶರು ತಮಗೆ ಅನುಕೂಲಕರವಾದದ್ದನ್ನು ಮಾಡಬಲ್ಲರೆ ಹೊರತು ಸಮುದಾಯದ ಹಿತರಕ್ಷಣೆಯ ಕಾರ್ಯ ಮಾಡಲಾರರು.

ಈಗಾಗಲೇ ಆರೆಸಸ್ ಲಿಂಗಾಯತ ಧರ್ಮ ಮಾನ್ಯತೆ ಅಲ್ಪಸಂಖ್ಯಾತ ಸೌಲಭ್ಯ ಕೇಂದ್ರ ಸರ್ಕಾರ ಮುಖಾಂತರ ತಿರಸ್ಕಾರ ಮಾಡಿಸಿತ್ತು. ಆರೆಸಸ್ ಬಸವಕಲ್ಯಾಣದಲ್ಲಿ ಜರುಗಿದ ಲಿಂಗಾಯತ ಮಹಾಸಮಾವೇಶಕ್ಕೂ ಸಹಾಯ ಸಹಕಾರ ಕೊಟ್ಟು ಪ್ರಚಾರ ಮಾಡಿ ಬೀದರ ಜಿಲ್ಲೆಯ ನಾಲ್ಕು ಶಾಸಕರು ಗೆಲ್ಲುವ ಹಾಗೆ ರೂಪು ರೇಷಗಳನ್ನು ಹಾಕಿ ಜಯ ಸಾಧಿಸಿತ್ತು. ಆರೆಸಸ್ ಪಂಚಮಸಾಲಿ ೨ಎ ಮೀಸಲಾತಿ ಹೋರಾಟ ಮಾಡಲು ಜಗದ್ಗುರು ಪೂಜ್ಯ ಜಯ ಮೃತ್ಯುಂಜಯ ಸ್ವಾಮೀಜಿ ಕುಮ್ಮಕ್ಕು ಕೊಟ್ಟು ಲಿಂಗಾಯತ ಧರ್ಮ ಹೋರಾಟಕ್ಕೆ ಹೊಡೆತ ಕೊಟ್ಟಿದೆ. ಪ್ರಸ್ತಾವ ತಿರಸ್ಕಾರ ಆಗಿ ಏಳು ವರ್ಷ ಆದರೂ ಕೂಡ ಯಾವುದೇ ಸಂಘಟನೆ ಆಗಲಿ ಮಠಾಧೀಶರಾಗಲಿ ಹೋರಾಟ ಮಾಡುವ ಮನಸ್ಸು ಮಾಡುತ್ತಿಲ್ಲ. ಇವಾಗ ಭಾರತೀಯ ಸಂಸ್ಕೃತಿ ಉತ್ಸವ ಕೂಡ ಬಸವ ತತ್ವ ಸಿದ್ದಾಂತ ಪ್ರಚಾರ ಹೊಡೆತ ಕೊಡುವ ಉದ್ದೇಶ ಆಗಿದೆ. ಇನ್ಮುಂದೆ ಲಿಂಗಾಯತರು ಬಸವಾದಿ ಶರಣರ ಅನುಯಾಯಿಗಳು ಯಾವ ಮಠಗಳ ಮೇಲೆ ಅವಲಂಬಿತ ಆಗದೆ ಲಿಂಗಾಯತ ಧರ್ಮ ಪ್ರಚಾರ ಮಾಡಬೇಕು, ಆರೆಸಸ್ ಮಾಡುತ್ತಿರುವ ಲಿಂಗಾಯತ ವಿರೋಧಿ ಬಸವ ತತ್ವ ವಿರೋಧ ನಿಲುವುಗಳಿಗೆ ಗುರಿ ಆಗಬಾರದು. ಮಠಾಧೀಶರು ಭಾರತೀಯ ಸಂಸ್ಕೃತಿ ಉತ್ಸವ ಸೇಡಂ ಹೋದರೆ ಹೋಗಲಿ ಬಿಡಲಿ, ಆದರೆ ಲಿಂಗಾಯತರು ಬಸವ ಅನುಯಾಯಿಗಳು ಯಾರು ಹೋಗಬಾರದು, ಈ ನಿಲುವಿನಿಂದ ಆರೆಸಸ್ ಹುನ್ನಾರಕ್ಕೆ ಮತ್ತು ಮಠಾಧೀಶರ ದ್ವಂದ ನಿಲುವಿಗೆ ಹೊಡೆತ ಬೀಳುತ್ತದೆ.

ಪ್ರತಿದಿನ ಬೆಳಿಗ್ಗೆ ಸೂರ್ಯ ಪೂರ್ವದಲ್ಲಿ ಉದಯ ಆಗುವುದು ಎಷ್ಟು ಸತ್ಯವೋ ಅಷ್ಟೇ ಸತ್ಯ ತಮ್ಮ ಅಭಿಪ್ರಾಯ. ಮಠಾಧೀಶರು ಅಷ್ಟೇ ಅಲ್ಲ ನಮ್ಮ ಜಾಗತಿಕ ಲಿಂಗಾಯತ ಮಹಾಸಭಾದ ಬಹು ಸಂಖ್ಯಾತ ಪದಾಧಿಕಾರಿಗಳ ಬದ್ಧತೆ ಬಸವ ತತ್ವಗಳಿಗಿಂತ ಮನುವಾದಿ ವೈರಸ್ ಅಂಟಿಸಿಕೊಂಡ ಬಿಜೆಪಿ ಪಕ್ಷಕ್ಕೆ ಎಂಬುದು ಸ್ಪಷ್ಟ. ಜಾಗತಿಕ ಲಿಂಗಾಯತ ಮಹಾಸಭಾ ಬಲಿಷ್ಠ ಸಂಘಟನೆ ಆಗಬೇಕಾದರೆ ಮನುವಾದಿ ಮನಸ್ಥಿತಿಯಿಂದ ಸಂಪೂರ್ಣವಾಗಿ ಹೊರಬಂದರೆ ಮಾತ್ರ ಸಾಧ್ಯ. ನಾನು ಕುರುಡುತನದಿಂದ ಮನುವಾದಿಗಳು ವಿರೋಧಿಸುತ್ತಿಲ್ಲ. ನಾನು ಆರ್.ಎಸ್.ಎಸ್ ಮತ್ತು ಬಿಜೆಪಿ ಒಳಗೆ ಹೋಗಿ ನೋಡಿಕೊಂಡು ಅವರ ಚಿಂತನೆಗಳು ಇಷ್ಟವಾಗದೆ ಹೊರಗೆ ಬಂದಿದ್ದೇನೆ. ಮೊದಲು ನಮ್ಮೆಲ್ಲಾ ಜಾಗತಿಕ ಲಿಂಗಾಯತ ಮಹಾಸಭಾದ ಪದಾಧಿಕಾರಿಗಳಿಗೆ ಬಸವ ತತ್ವದ ಬಗ್ಗೆ ಸೈದ್ಧಾಂತಿಕ ಬದ್ಧತೆ ಬರಬೇಕು.  

 -ಪ್ರೂ.ವೀರಭದ್ರಯ್ಯ.ಬೆಂಗಳೂರು

ಗುರು ಬಸವಣ್ಣ ಅವರ ತತ್ವ ಸಿದ್ದಾಂತ ಮೇಲೆ ಇಂತ ಇಂತ ಮಠಾಧಿಪತಿ ಗಳಿಂದ ಒಳಗೆ ದ್ರೋಹ ಅಗತ ಇದೆ ಇಂಥ ಗುರು ದ್ರೋಹಿ ಧರ್ಮ ದ್ರೋಹಿ ಗಳಿಗೆ ಅಪ್ಪ ಬಸವಣ್ಣ ಕೊಟ್ಟ ಲಿಂಗ ಸಮಾನತೆ ಇವರ ಸ್ವಾರ್ಥ ಸಾಧನೆಗಾಗಿ ಬಳಕೆ ಅಗತಾ ಇದೆ ಇಂತ ಧರ್ಮ ದ್ರೋಹಿ ಗೆ ದಿಕ್ಕಾರ ಅಕುವ ಮನಸ್ಥಿತಿ ಯಾರಿಗೂ ಇಲ್ವಾ ನಮ್ಮ ಬಸವ ಧರ್ಮ ಯಾರೇ ತಪ್ಪು ಮಾಡಿದರೂ ಅದನ್ನು ಸಕಾರಾತ್ಮಕವಾಗಿ ಕಂಡಿಸುವ ಸಿದ್ದಾಂತ ಅಕ್ಕ ಗಂಗಾಬಿಕ್ ಮೇಲೆ ವಾಗ್ದಾಳಿ ಆಯ್ತು ಆದ್ರೆ ಈ ಸ್ವಾಮೀಜಿ ಕೇಳುವ ದೈರ್ಯ ಯಾರಿಗೂ ಇಲ್ವಾ ನಮ್ಮ ಧರ್ಮದಲ್ಲಿ ಇಂತ ಗುರು ಗಳಿಂದ ಇನ್ನು ಅಪ್ಪಟ ಬಸವ ಧರ್ಮ ಅನುಯಾಯಿ ಶ್ರೀಗಳು ದೊಡ್ಡವರೆ ಹಾಗೆ ಇನ್ನು ನಾವು ಯಾಕ್ ಪಾಲನೆ ಮಾಡ್ ಬೇಕು ಅಂತ ತಿಳಿದು ಇವರಂತೆ ಅವರು ಮನುವಾದಿಗಳ ಜೊತೆ ಸೇರಿದರೆ ಒಳ್ಳೆಯದು ಅನ್ನೋ ಅನಿಸಿಕೆ ಬರ್ತಾ ಇದೆ ಆದಷ್ಟು ಇಂತ ನಾಟಕ ಕಂಡರೆ ತಕ್ಕ ಪಾಠ ಕಲಿಸಿ           

      -ಶ್ರೀ ಓಂಕಾರೇಶ್ವರ ಸ್ವಾಮೀಜಿ ಕಲ್ಯಾಣ ಬಸವಣ್ಣ ಮಠ ಮಂಡ್ಯ


No comments:

ಪ್ರೇಮ ಕಾಶ್ಮೀರದಲ್ಲಿ ರಕ್ತದೋಕುಳಿ; ಹಿಂದೂಗಳೇ ಟಾರ್ಗೆಟ...!

  ಪ್ರೇಮ ಕಾಶ್ಮೀರದಲ್ಲಿ ರಕ್ತದೋಕುಳಿ; ಹಿಂದೂಗಳೇ ಟಾರ್ಗೆಟ್. ಭೂಲೋಕದ ಸ್ವರ್ಗವೆಂದೇ ಕರೆಯುವ ಜಮ್ಮು-ಕಾಶ್ಮೀರದ ಪೆಹಲ್ಗಾಮ್ ಸಮೀಪದ ಬೈಸರನ್ ಹುಲ್ಲುಗಾವಲಿನಲ್ಲಿ ಪಾಕ್ ಪ್...