ads

Search This Blog

Monday, 6 January 2025

ಕಲಾವಿದರ ಏಳ್ಗೆಗಾಗಿ ಶ್ರಮಿಸುತ್ತಿರುವ ರಾಜಕುಮಾರ ಕಾರ್ಯ ಅಭಿನಂದನೀಯ: ಸಾಗರ ಖಂಡ್ರೆ

 ಬೀದರ: ಕರ್ನಾಟಕ ತೆಲಂಗಾಣ ಗಡಿಯಲ್ಲಿ ಸಾಂಸ್ಕೃತಿಕ ಹಬ್ ಸ್ಥಾಪನೆ ಹಾಗೂ ಬೀದರ ಜಿಲ್ಲೆಯಲ್ಲಿ ಅಂತರಾಷ್ಟಿಯ ಜಾನಪದ ಸಮ್ಮೇಳನ ಆಯೋಜನೆಯ ಬೇಡಿಕೆ ನಮ್ಮ ಮುಂದಿದೆ. ಇವುಗಳ ಸಫಲತೆಗೆ ಸಂಬ0ಧಪಟ್ಟ ಸಚಿವರಿಗೆ ಮಾತನಾಡಿ ಸಾಕಾರಗೊಳಿಸುವ ಪ್ರಯತ್ನ ಮಾಡಲಾಗುವುದು. ಈ ನಿಟ್ಟಿನಲ್ಲಿ ಕಲಾವಿದರ ಏಳ್ಗೆಗಾಗಿ ಹಗಲಿರುಳು ಶ್ರಮಿಸುತ್ತಿರುವ ರಾಷ್ಟಿಯ ಜನಪದ ಬುಡಕಟ್ಟು ಕಲಾ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಡಾ. ರಾಜಕುಮಾರ ಹೆಬ್ಬಾಳೆಯವರ ಕಾರ್ಯ ಅಭಿನಂದನೀಯ ಎಂದು ಲೋಕಸಭಾ ಸದಸ್ಯ ಸಾಗರ ಖಂಡ್ರೆ ತಿಳಿಸಿದರು.


ಲೋಕಸಭಾ ಸದಸ್ಯ ಸಾಗರ ಖಂಡ್ರೆ 

 ಡಾ. ರಾಜಕುಮಾರ ಹೆಬ್ಬಾಳೆ ಅಭಿನಂದನಾ ಸಮಿತಿ ವತಿಯಿಂದ ನಗರದ ಕರ್ನಾಟಕ ಸಾಹಿತ್ಯ ಸಂಘದ ಸಾಂಸ್ಕೃತಿಕ ಭವನದಲ್ಲಿ ನೂತನವಾಗಿ ರಾಷ್ಟಿಯ ಜನಪದ ಬುಡಕಟ್ಟು ಕಲಾ ಪರಿಷತ್ತಿನ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಗೊಂಡ ಡಾ. ರಾಜಕುಮಾರ ಹೆಬ್ಬಾಳೆಯವರಿಗೆ ಆಯೋಜಿಸಿದ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು. 
ಎಷ್ಟೊ ಜನ ಕಲಾವಿದರಿಗೆ ವೇದಿಕೆ ಸಿಗುವುದಿಲ್ಲ. ಅಂತಹ ಅವಕಾಶವಂಚಿತ ಕಲಾವಿದರಿಗೆ ವೇದಿಕೆ ಒದಗಿಸಿ ಸರ್ಕಾರದ ವತಿಯಿಂದ ಮಾಶಾಸನ, ಗೌರವ ಸಂಭಾವನೆ ಕೊಡಿಸುವುತ್ತಿರುವುದು ಶ್ಲಾಘನೀಯ. ಸಣ್ಣ ನಾವದಗೇರಿ ಗ್ರಾಮದಲ್ಲಿ ಜನಿಸಿ, ದೆಹಲಿವರೆಗೆ ಬೆಳೆದ ರಾಜಕುಮಾರ ಅವರು ಕಲಾವಿದರ ಬಾಳಿನ ಬೆಳಕಾಗಿದ್ದಾರೆ. ನಗರದಲ್ಲಿ ಅಂತರಾಷ್ಟಿçÃಯ ಜನಪದ ಸಮ್ಮೇಳನ ಆಯೋಜನೆ, ಗಡಿಯಲ್ಲಿ ಕಲ್ಚರಲ್ ಹಬ್ ಸ್ಥಾಪನೆ ಕುರಿತು ಸಚಿವರೊಂದಿಗೆ ನಾವೆಲ್ಲರೂ ಹೋಗಿ ಚರ್ಚಿಸೋಣ. ಕೇಂದ್ರ ಸರ್ಕಾರದ ಸೌಲಭ್ಯಗಳನ್ನು ಜಿಲ್ಲೆಯ ಜನತೆಗೆ ತಲುಪಿಸುವ ನಿಟ್ಟಿನಲ್ಲಿ ನಾವೆಲ್ಲರೂ ಪ್ರಯತ್ನಿಸೋಣ. ಡಾ. ರಾಜಕುಮಾರ ಹೆಬ್ಬಾಳೆ ಉತ್ತರೋತ್ತರವಾಗಿ ಬೆಳೆಯಲೆಂದು ಶುಭ ಹಾರೈಸಿದರು.
 ದಿವ್ಯ ಸಾನಿಧ್ಯ ವಹಿಸಿದ್ದ ಭಾಲ್ಕಿಯ ಹಿರೇಮಠದ ಪೂಜ್ಯ ಶ್ರೀ ಗುರುಬಸವ ಪಟ್ಟದ್ದೇವರು ಮಾತನಾಡಿ ಕಲಾವಿದರ ಕಣ್ಣೀರು ಒರೆಸುವ ಕಾರ್ಯ ಮಾಡುತ್ತಿರುವ ರಾಜಕುಮಾರ ಅವರ ಕಲಾಸೇವೆ ನಿಜಕ್ಕೂ ಯುವಕರಿಗೆ ಮಾದರಿ. ಅವರ ಸಾಧನೆಗೆ ಎಲ್ಲರ ಸಹಕಾರವಿರಲಿ ಎಂದರು.



 ಬೀದರ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ಬಿ.ಎಸ್.ಬಿರಾದಾರ ಮಾತನಾಡಿ ಕಲಾವಿದರು ಬೆಳೆದರೆ ದೇಶದ ಸಂಸ್ಕೃತಿ, ಆಚಾರ ವಿಚಾರಗಳು ಬೆಳೆಯುತ್ತವೆ. ಜನಪದ ಸಂಸ್ಕೃತಿ ಉಳಿಯುತ್ತದೆ. ಈ ನಿಟ್ಟಿನಲ್ಲಿ ದಕ್ಷಿಣ ಭಾರತದ ಕಲಾವಿದರನ್ನು ಉತ್ತರ ಭಾರತದ ಕಡೆಗೆ, ಉತ್ತರ ಭಾರತದ ಕಲಾವಿದರನ್ನು ದಕ್ಷಿಣ ಭಾರತದ ಕಡೆಗೆ ಕಳುಹಿಸುತ್ತಿದ್ದಾರೆ. ಇದರಿಂದ ಸಾಂಸ್ಕೃತಿಕ ವಿನಿಮಯ, ಪರಸ್ಪರ ಪ್ರೀತಿ, ವಿಶ್ವಾಸ ಮತ್ತು ಕಲೆಗಳ ಪರಿಚಯವಾಗುತ್ತದೆ. ಇಂತಹ ಕಲಾವಿದರಿಗೆ ಸರ್ಕಾರಿ ಸೌಲಭ್ಯಗಳನ್ನು ಒದಗಿಸುತ್ತಿರುವ ಡಾ. ರಾಜಕುಮಾರ ಹೆಬ್ಬಾಳೆಯವರ ಮೇಲೆ ಅವರ ಅಜ್ಜಿ ಲಿಂ. ರತ್ನಮ್ಮನವರ ಹಾಗೂ ಕುಟುಂಬದ ಮತ್ತು ಕಲಾವಿದರ ಆಶಿರ್ವಾದವಿದೆ. ಜಾನಪದ ಸಂರಕ್ಷಕ ಡಾ. ರಾಜಕುಮಾರ ಅವರಿಗೆ ದೇವರು ಇನ್ನೂ ಎತ್ತರಕ್ಕೆ ಬೆಳೆಯುವಂತೆ ಮಾಡಲಿ ಎಂದರು.
 ಅಭಿನಂದನಾ ನುಡಿಗಳನ್ನಾಡಿದ ಕ.ಜಾ.ಪ. ಔರಾದ ತಾಲೂಕಾಧ್ಯಕ್ಷ ಡಾ.ಸಂಜೀವಕುಮಾರ ಜುಮ್ಮಾ ಮಾತನಾಡಿ ಡಾ. ರಾಜಕುಮಾರ ಅವರು ಕೇಂದ್ರದ 4 ಅರ್ಹ ಸಾಧಕರಿಗೆ ಜೂನಿಯರ್ ಫೇಲೋಶಿಪ್, 5 ಸಾಧಕರಿಗೆ ಸೀನಿಯರ್ ಫೇಲೋಶಿಪ್, ಕಲಾವೇತನ ಹಾಗೂ ವಿವಿಧ ಪ್ರಶಸ್ತಿಗಳನ್ನು ಕೊಡಿಸಿದ್ದಾರೆ. ವೇದಿಕೆ ಒದಗಿಸಿ ಸಾವಿರಾರು ಕಲಾವಿದರಿಗೆ ರಾಜ್ಯ ಸರ್ಕಾರದ ಮಾಶಾಸನ ಮಾಡಿಸಿದ್ದಾರೆ. ಇದೀಗ ಕೇಂದ್ರದ ಮಾಶಾಸನ ಕೊಡಿಸಲು ಶತಪ್ರಯತ್ನ ಮಾಡುತ್ತಿದ್ದಾರೆ. ಹತ್ತು ಹಲವಾರು ಸಂಘ-ಸAಸ್ಥೆಗಳಿAದ ಪ್ರಶಸ್ತಿಗಳನ್ನು ಗಿಟ್ಟಿಸಿಕೊಂಡ ಇವರು ಹಲವು ಸಂಸ್ಥೆಗಳ ಪದಾಧಿಕಾರಿಯಾಗಿ ಕಲೆ ಸಾಹಿತ್ಯ ಸಂಸ್ಕೃತಿ ಸಂವರ್ಧನೆ ಮಾಡುತ್ತಿದ್ದಾರೆ. ಕ್ರಿಯಾಶೀಲತೆ, ಸಂಘಟನೆ, ಪರಸ್ಪರ ಪ್ರೀತಿ ವಿಶ್ವಾಸ ಇವರ ಗುಟ್ಟು. ಇದುವರೆಗೆ ಕಲಾವಿದರಿಗೆ ಒಟ್ಟು 1 ಕೋಟಿಗೂ ಅಧಿಕ ಸಂಭಾವನೆ ಕೊಡಿಸಿದ್ದಾರೆ ಎಂದರು. 
ಅಭಿನಂದನೆ ಸ್ವೀಕರಿಸಿದ ಡಾ. ರಾಜಕುಮಾರ ಹೆಬ್ಬಾಳೆ ಮಾತನಾಡಿ ಒಂದು ಕಾಲದಲ್ಲಿ ಗಡಿಜಿಲ್ಲೆ ಬೀದರನಲ್ಲಿ ಜನಪದ ಸಾಹಿತ್ಯದ ಪ್ರಚಾರ ಕಡಿಮೆಯಿತ್ತು. ಹೀಗಾಗಿ ಕರ್ನಾಟಕ ಜಾನಪದ ಪರಿಷತ್ತಿನ ಮೂಲಕ ಜಿಲ್ಲೆಯ ಸಾವಿರಾರು ಕಲಾವಿದರನ್ನು ಗುರುತಿಸಿ, ಅವರಿಗೆ ವೇದಿಕೆ ಒದಗಿಸಿ, ಎಲ್ಲರ ಸಹಕಾರದಿಂದ ಕಲೆ ಸಾಹಿತ್ಯ ಸಂಸ್ಕೃತಿ ಸಂವರ್ಧನೆಗಾಗಿ ಶ್ರಮಿಸಲಾಗುತ್ತಿದೆ. ಗಡಿಭಾಗದ ಬೀದರ ಹಾಗೂ ತೆಲಂಗಾಣದ ಕೆಲವು ಗ್ರಾಮಗಳಲ್ಲಿ ಉತ್ತರ ಭಾರತದ ಪಂಜಾಬ, ಹರಿಯಾಣ, ಜಮ್ಮುಕಾಶ್ಮೀರ, ಉತ್ತರ ಪ್ರದೇಶ, ಮಹಾರಾಷ್ಟç, ಆಸ್ಸಾಂ, ತೆಲಂಗಾಣ ಸೇರಿದಂತೆ ಹಲವು ರಾಜ್ಯದ ಕಲಾವಿದರಿಗೆ ಬೀದರ ಜಿಲ್ಲೆಗೆ ಕರೆಸಿ ಉತ್ಸವ ಮಾಡಲಾಗಿದೆ. ಹಲವು ಸೌಲಭ್ಯಗಳ ಬಗ್ಗೆ ನಮ್ಮ ಭಾಗದ ಜನರಿಗೆ, ಕಲಾವಿದರಿಗೆ ಗೊತ್ತಿಲ್ಲ. ಅಂತಹ ಕೇಂದ್ರ ಸರ್ಕಾರ ಸೌಲಭ್ಯ ಜಿಲ್ಲೆಗೆ ತಂದು ಒದಗಿಸಲಾಗುತ್ತಿದೆ ಎಂದರು.
ಕರ್ನಾಟಕ ಸಾಹಿತ್ಯ ಸಂಘದ ಅಧ್ಯಕ್ಷ ಡಾ. ಜಗನ್ನಾಥ ಹೆಬ್ಬಾಳೆ ಮಾತನಾಡಿ ಜನಪದ ಕಲೆ ಉಳಿವೆಗಾಗಿ ನಗರದಲ್ಲಿ ಅಂತರಾಷ್ಟಿçÃಯ ಜನಪದ ಸಮ್ಮೇಳನ ನಡೆಸಬೇಕಾಗಿದೆ. ಕಲಾವಿದರ ಏಳ್ಗೆಗಾಡಿ ಗಡಿಯಲ್ಲಿ ಕಲ್ಚರಲ್ ಹಬ್ ಸ್ಥಾಪಿಸಬೇಕು. ಪ್ರತಿ ತಿಂಗಳಿಗೊಮ್ಮೆ ಆಯ್ದ ತಜ್ಞರ ಸಭೆ ಕರೆಸಿ ಜಿಲ್ಲೆಯ ಆಗುಹೋಗುಗಳ ಬಗ್ಗೆ ಹಾಗೂ ಸಾಧಿಸಬೇಕಾದ ಕಾರ್ಯಗಳ ಬಗ್ಗೆ ಚರ್ಚಿಸಿ, ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಸಾಗರ ಖಂಡ್ರೆಯವರು ಶ್ರಮಿಸಬೇಕು. ಬೀದರ ವಿಶ್ವವಿದ್ಯಾಲಯದ ಏಳ್ಗೆಗೆ ಸಹಕಾರ ನೀಡಬೇಕೆಂದು ಸಂಸದರಲ್ಲಿ ಮನವಿ ಮಾಡಿಕೊಂಡರು.
ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ಡಾ.ಸೋಮನಾಥ ಯಾಳವಾರ್ ಹಾಗೂ ಬಿಡಿಎ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ ಮಾತನಾಡಿದರು. ವೇದಿಕೆ ಮೇಲೆ ಕ.ಸಾ.ಸಂಘದ ಟ್ರಸ್ಟ್ ಅಧ್ಯಕ್ಷ ಶಂಕ್ರೆಪ್ಪ ಹೊನ್ನಾ, ಸಂತೋಷ ಪಾಟೀಲ, ಅಶೋಕ ಹೆಬ್ಬಾಳೆ, ಸಮಿತಿ ಅಧ್ಯಕ್ಷ ಪ್ರೊ.ಎಸ್.ಬಿ.ಬಿರಾದಾರ, ಉಪಾಧ್ಯಕ್ಷ ನಿಜಲಿಂಗಪ್ಪ ತಗಾರೆ, ಪ್ರಧಾನ ಕಾರ್ಯದರ್ಶಿ ಸಂಘಟನಾ ಕಾರ್ಯದರ್ಶಿ ಎಸ್.ಬಿ.ಕುಚಬಾಳ, ಕಾರ್ಯದರ್ಶಿ ಶಿವಶರಣಪ್ಪ ಗಣೇಶಪುರ, ಕೋಶಾಧ್ಯಕ್ಷ ಅಶೋಕ ಹೆಬ್ಬಾಳೆ, ಸಂಚಾಲಕ ವೈಜಿನಾಥ ಪಾಟೀಲ, ಸಂಯೋಜಕಿ ಆಶಾ ರಾಠೋಡ್, ಸದಸ್ಯರಾದ ಪ್ರಕಾಶ ಕನ್ನಾಳೆ, ಧನರಾಜ ಆನೆಕಲೆ, ನೀಲಕಂಠ ಸ್ವಾಮಿ ಸೇರಿದಂತೆ ಸಮಿತಿಯ ಸರ್ವಸದಸ್ಯರು ಹಾಜರಿದ್ದರು. ನವಲಿಂಗ ಪಾಟೀಲ ನಿರೂಪಿಸಿದರೆ, ಸ್ವಾಗತಿಸಿ ಮತ್ತು ಪ್ರಾಸ್ತಾವಿಕವಾಗಿ ಮಹಾರುದ್ರ ಡಾಕುಳಗೆ ಮಾತನಾಡಿದರು. ಡಾ.ಸುನಿತಾ ಕೂಡ್ಲಿಕರ್ ವಂದಿಸಿದರು.

ಮೆರವಣಿಗೆ: ನಗರದ ಬಸವೇಶ್ವರ ವೃತ್ತದಿಂದ ಆರಂಭವಾದ ಶ್ರೀಮತಿ ಮಹಾನಂದ ಡಾ.ರಾಜಕುಮಾರ ಹೆಬ್ಬಾಳೆ ದಂಪತಿಗಳ ಮೆರವಣಿಗೆ ಅಲಂಕೃತ ಸಾರೋಟಿನಲ್ಲಿ ಭವ್ಯ ರೀತಿಯಲ್ಲಿ ಜರುಗಿತು. ಡೊಳ್ಳು ಕುಣಿತ, ಬಂಜಾರಾ ನೃತ್ಯ, ಕೋಲಾಟ ಸೇರಿದಂತೆ ಹಲವು ಜನಪದ ಕಲಾವಿದರ ಕಲಾಪ್ರದರ್ಶನ ಸಭೀಕರ ಗಮನ ಸೆಳೆಯಿತು. ಮೆರವಣಿಗೆಗೆ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸೋಮಶೇಖರ ಬಿರಾದಾರ ಚಿದ್ರಿ ಚಾಲನೆ ನೀಡಿದರು. ಇದೇ ವೇಳೆ ಕಿತ್ತೂರು ರಾಣಿ ಚೆನ್ನಮ್ಮ ಮಹಿಳಾ ಮಂಡಳ ಅಧ್ಯಕ್ಷೆ ಡಾ.ಗುರಮ್ಮಾ ಸಿದ್ದಾರೆಡ್ಡಿ, ಪ್ರಮುಖರಾದ ದಿಲಿಪಕುಮಾರ ಡೊಂಗರಗೆ, ಕೆ.ಸತ್ಯಮೂರ್ತಿ, ಚಂದ್ರಶೇಖರ ಹೆಬ್ಬಾಳೆ, ಸುಧಾಕರ ಹೆಬ್ಬಾಳೆ, ಬಸವರಾಜ ಹೆಬ್ಬಾಳೆ, ಡಾ.ಸುನಿತಾ ಕೂಡ್ಲಿಕರ, ಮಹಾನಂದ ಮಡಕಿ, ಡಾ.ಸಾವಿತ್ರಿಬಾಯಿ ಹೆಬ್ಬಾಳೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.

No comments:

ಪ್ರೇಮ ಕಾಶ್ಮೀರದಲ್ಲಿ ರಕ್ತದೋಕುಳಿ; ಹಿಂದೂಗಳೇ ಟಾರ್ಗೆಟ...!

  ಪ್ರೇಮ ಕಾಶ್ಮೀರದಲ್ಲಿ ರಕ್ತದೋಕುಳಿ; ಹಿಂದೂಗಳೇ ಟಾರ್ಗೆಟ್. ಭೂಲೋಕದ ಸ್ವರ್ಗವೆಂದೇ ಕರೆಯುವ ಜಮ್ಮು-ಕಾಶ್ಮೀರದ ಪೆಹಲ್ಗಾಮ್ ಸಮೀಪದ ಬೈಸರನ್ ಹುಲ್ಲುಗಾವಲಿನಲ್ಲಿ ಪಾಕ್ ಪ್...