ಒಂದು ಸಲ ಪೂಜ್ಯ ಡಾ ಚೆನ್ನಬಸವ ಪಟ್ಟದೇವರು ಭಾಲ್ಕಿಯವರು ಔರಾದ ಪಟ್ಟಣ ಆಗಮಿಸುತ್ತಾರೆ ಎಂದು ಸುದ್ದಿ ತಿಳಿದು ಶರಣರು ಔರಾದ ಪಟ್ಟಣ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಯಾರೋ ಒಬ್ಬರು ಪಟ್ಟದೇವರಿಗೆ ಬೆಲ್ದಾಳ ಗ್ರಾಮದ ದಲಿತ ಯುವಕ ಲಿಂಗ ದೀಕ್ಷೆ ಪಡೆದವರು ಬಸವಾದಿ ಶರಣರ ಬಗ್ಗೆ ಒಳ್ಳೆಯ ಮಾತಾಡುತ್ತಾರೆ ಎಂದು ಹೇಳಿದ್ದಾಗ, ಅವರು ವಿಠಲ ಅವರಿಗೆ ಮಾತಾಡಲು ವೇದಿಕೆ ಮೇಲೆ ಕರೆದು ಮೈಕ್ ಕೊಟ್ಟರಂತೆ. ಅವರು ಸುಮಾರು ಅರ್ಧ ಗಂಟೆ ಬಸವಾದಿ ಶರಣರ ಬಗ್ಗೆ ಅವರ ವಚನಗಳು ಹೇಳಿ ಮಾತಾಡಿದ್ದು ನೆರೆದ ಸಭಿಕರಿಗೆ ಮತ್ತು ಪೂಜ್ಯರಿಗೆ ದಿಗ್ಭ್ರಮೆ ಆಗಿತ್ತಂತೆ. ಆವಾಗ ಪೂಜ್ಯ ಚೆನ್ನಬಸವ ಪಟ್ಟದೇವರು ವಿಠಲ ಅವರಿಗೆ ಅಪ್ಪಿಕೊಂಡು ಹೂ ಮಾಲೆ ಹಾಕಿ ಇಂದಿನಿಂದ ನೀನು ವಿಠಲ ಅಲ್ಲ ನಮ್ಮ ಸಾಕ್ಷಾತ್ ಸಿದ್ದರಾಮೇಶ್ವರ ಎಂದು ಕರೆದು ಸಿದ್ದರಾಮ ಎಂದು ಹೆಸರಿಟ್ಟರಂತೆ.ಅಂದಿನಿಂದ ಸಿದ್ದರಾಮ ಶರಣರು ಬೆಲ್ದಾಳ ಎಂದು ಖ್ಯಾತಿ ಪಡೆದರು. ನಂತರ ಪೂಜ್ಯ ಚೆನ್ನಬಸವ ಪಟ್ಟದೇವರು ಭಾಲ್ಕಿ ಹಿರೇಮಠಕ್ಕೆ ಆಹ್ವಾನಿಸಿ ಸಿದ್ದರಾಮ ಶರಣರಿಗೆ ಇಷ್ಟಲಿಂಗ ದೀಕ್ಷೆ ಮತ್ತು ಜಂಗಮ ದೀಕ್ಷೆ ಕೊಟ್ಟಿದ್ದರು.ಮುಂದೆ ಎಲ್ಲಾ ಆಗಿದ್ದು ಬಸವ ಪರಂಪರೆಯ ಇತಿಹಾಸ, ಒಬ್ಬ ದಲಿತ ಯುವಕ ಉನ್ನತ ಸಾಧನೆ ಮಾಡಿ ಹೆಸರಾಂತ ಶರಣ ಆಗಿದ್ದು, ಆಧ್ಯಾತ್ಮಿಕ ಜೀವಿ ಆಗಿದ್ದು.
ನಂತರ ಕೌಠ ಗ್ರಾಮದ ಮಾಂಜರಾ ನದಿ ದಂಡೆಯಲ್ಲಿ ಆಶ್ರಮ ಸ್ಥಾಪಿಸಿ, ಅಲ್ಲಿಯ ಬಡ ಮಕ್ಕಳಿಗೆ ಶಾಲೆ ತೆರೆದು, ವಸತಿ ಗೃಹ ಸ್ಥಾಪಿಸಿ, ಗ್ರಂಥಾಲಯ ಸ್ಥಾಪಿಸಿದರು. ಅವರು ಭಾರತ ದೇಶದ ಎಲ್ಲ ಗ್ರಂಥಗಳು ಶಿವಲೀಲಾಮೃತ, ಶಿವಪುರಾಣ, ರಾಮಾಯಣ, ಮಹಾಭಾರತ, ಭಾಗವಾದ ಗೀತೆ, ಮನುಸ್ಮೃತಿ, ಎಲ್ಲಾ ವೇದ, ಉಪನಿಷತ್ತು, ಆಗಮಗಳು, ಪುರಾಣ, ಪೋತಿ, ಕಥೆಗಳು, ಬೌದ್ಧ ಜೈನ ಸಿಖ್ ಕ್ರಿಶ್ಚಿಯನ್ ಇಸ್ಲಾಂ ಪಾರ್ಸಿ ಧರ್ಮಗ್ರಂಥಗಳು, ಅಂಬೇಡ್ಕರ್ ಬರೆದ ಎಲ್ಲಾ ಸಂಪುಟಗಳು, ಗಾಂಧೀಜಿ ಜೀವನ ಚರಿತ್ರೆ , ನೆಹರೂ ಬರೆದ ಗ್ರಂಥಗಳು ಅಧ್ಯಯನ ಮಾಡಿದ್ದರು. ಅವರು ದೇಶ ವಿದೇಶದವರು ಬರೆದ ಸಾವಿರಾರು ಗ್ರಂಥಗಳನ್ನು ಅಧ್ಯಯನ ಮಾಡಿ ಜ್ಞಾನ ಪಡೆದರು.
ಬಸವಾದಿ ಶರಣರ ಸಂಪೂರ್ಣ ವಚನ ಸಾಹಿತ್ಯ ಅಧ್ಯಯನ ಮಾಡಿದ್ದರು, ಸುಮಾರು 22 ಸಾವಿರ ವಚನಗಳನ್ನು ಅಧ್ಯಯನ ಮಾಡಿ, ಅವಗಳ ಸಾರ ತಿಳಿದುಕೊಂಡರು. ಇದರಿಂದ ಅವರಿಗೆ ಜ್ಞಾನ ಸಂಪಾದನೆ ಆಯಿತು. ವಚನ ಸಾಹಿತ್ಯ ಅಧ್ಯಯನ ಮಾಡದಲ್ಲದೆ ನಿಜ ಜೀವನದಲ್ಲಿ ಅವನು ಮೈಗೂಡಿಸಿಕೊಂಡರು. ವಚನ ಸಾಹಿತ್ಯ ತಿಳಿದುಕೊಂಡು ಶೋಷಣೆಗೆ ಮೂಲವಾದ ವಿಷಯಗಳು ಬಸವಾದಿ ಶರಣರು ತಿರಸ್ಕಾರ ಮಾಡಿದ್ದ ಪಾಪ ಪುಣ್ಯ, ಸ್ವರ್ಗ ನರಕ, ಚಾತುರ್ವರ್ಣ, ಕರ್ಮಸಿದ್ಧಾಂತ, ಪುನರ್ಜನ್ಮ ಎಲ್ಲವೂ ತಿಳಿಸಿ ಹೇಳಿದ್ದಾರೆ, ಈ ವಿಷಯಗಳ ಬಗ್ಗೆ ಪುಸ್ತಕ ರಚನೆ ಮಾಡಿದ್ದಾರೆ. ವೀರಶೈವ ಧರ್ಮ ಅಲ್ಲ ಸುಳ್ಳು, ಸಿದ್ಧಾಂತ ಶಿಖಾಮಣಿ ಗ್ರಂಥ ಪುರಾತನ ಅಲ್ಲ, ಆಗಮ ವೇದ ಉಪನಿಷತ್ತುಗಳಲ್ಲಿ ಬಸವಾದಿ ಶರಣರು ಹೇಳಿದ್ದ ಪಂಚಚಾರ ಶಟಸ್ಥಲ ಅಷ್ಟಾವರಣ ಯಾವ ವಿಷಯಗಳು ಇಲ್ಲ, ಪಂಚಾಚಾರ್ಯರು ಬಸವ ಯುಗಕಿಂತ ಮೊದಲಿನವರು ಅಲ್ಲ, ಬಸವಣ್ಣನವರಿಗೆ ಯಾರು ಇಷ್ಟಲಿಂಗ ದೀಕ್ಷೆ ನೀಡಿಲ್ಲ, ಬಸವಣ್ಣನವರೆ ಇಷ್ಟಲಿಂಗ ಶೋಧನೆ ಮಾಡಿದ್ದವರು, ಬಸವಣ್ಣನವರು ಲಿಂಗಾಯತ ಧರ್ಮ ಸ್ಥಾಪಕರು ಎಂದು ಪುಸ್ತಕ ಬರೆದಿದ್ದಾರೆ. ಆ ಪುಸ್ತಕ ಕೆಲವೇ ದಿನಗಳಲ್ಲಿ ಬಿಡುಗಡೆ ಗೋಳಲಿದ್ದು, ಎಲ್ಲಾ ಸಂಶಯಗಳಿಗೆ ಅಪಪ್ರಚಾರಕ್ಕೆ ತೆರೆ ಎಳೆಯುತ್ತದೆ.
ಬಸವಾದಿ ಶರಣರ ಯೋಗ ಮಾಡಿದ್ದರು, ಬಸವಾದಿ ಶರಣರ ಯೋಗಗಳು ಜಗತ್ತಿನಲ್ಲಿ ಶ್ರೇಷ್ಟ ಎಂದು ಜಗತ್ತಿಗೆ ಪರಿಚಯ ಮಾಡಿಸಿದ್ದು ಬೆಲ್ದಾಳ ಸಿದ್ದರಾಮ ಶರಣರು. ಬಸವಾದಿ ಶರಣರ ಯೋಗಗಳ ಬಗ್ಗೆ ಬರೆದ ವಚನಗಳನ್ನು ಅಧ್ಯಯನ ಮಾಡಿ, ಯೋಗ ಕಲಿತುಕೊಂಡರು. ಪತಂಜಲಿ ಯೋಗಕಿಂತ ಬಸವಾದಿ ಶರಣರ ಯೋಗಗಳು ಶ್ರೇಷ್ಟ ಎಂದು ಅರಿತು ದಿನಾಲು ಅಭ್ಯಾಸ ಮಾಡಿದ್ದರು. ಹಠಯೋಗ ರಾಜಯೋಗಕಿಂತ ಶರಣರ ಅಂಗಲಿಂಗಾಂಗ ಸಾಮರಸ್ಯ ಶಿವಯೋಗ ಅತಿ ಶ್ರೇಷ್ಠ ಎಂದು ಸ್ವತಃ ಯೋಗ ಮಾಡಿ ಅರಿತುಕೊಂಡು ಸಮಾಜಕ್ಕೆ ತಿಳಿಸಿ ಹೇಳಿದರು. ಶರಣರ ಯೋಗಗಳ ಬಗ್ಗೆ ಪುಸ್ತಕಗಳನ್ನು ಬರೆದು ಪ್ರಕಟಿಸಿದ್ದರು. ದೃಷ್ಟಿಯೋಗ ಯಾವಾಗ ಹೇಗೆ ಮಾಡಬೇಕು ಎನ್ನುವದು ವಚನಗಳನ್ನು ಹಾಡುತ್ತಾ, ಪ್ರಾಯೋಗಿಕವಾಗಿ ತಾನೇ ಮಾಡಿ ಶರಣರಿಗೆ ತೋರಿಸಿ ಕೊಡುತ್ತಾರೆ. ಅವರು ಎಷ್ಟು ಶ್ರೇಷ್ಟ ಎಂದರೆ ವಚನಗಳಲ್ಲಿ ಬರುವ ಯೋಗಗಳ ಮುಖಾಂತರ ಘಂಟಾನಾದವನ್ನು ಕೇಳಿ ಮತ್ತೊಬ್ಬರಿಗೆ ಕೇಳಿಸುತ್ತಾರೆ. ಅತಿ ಶ್ರೇಷ್ಠ ಯೋಗ ಅಂದರೆ ಉಸಿರಾಟ ನಿಲ್ಲಿಸಿ ಮಾನವನಲ್ಲಿ ಇರುವ ಒಂಬತ್ತು ಬಾಗಿಲಗಳನ್ನು ಮುಚ್ಚಿ, ಸಂಪೂರ್ಣ ವಾಯು ಇಲ್ಲದೆ ಹಲವಾರು ನಿಮಿಷ ಮಗ್ನರಾಗಿ ಪ್ರಾಣ ಶ್ರೆಸ್ತಾಸತ್ರಕ್ಕೆ ಒಯ್ಯದು ಕುಂಡಲಿನಿ ಯೋಗ ಮುಖಾಂತರ ಮಿದುಳಿನಲ್ಲಿ ಇರುವ ಮೇಲಾತಿನ ಅಮೃತ ಧಾರೆ ಮಾರ್ಗ ತೆರೆದು ಆನಂದಿಸುವ ಯೋಗ ಕಂಡುಕೊಂಡಿದ್ದಾರೆ. ಬಸವಾದಿ ಶರಣರು ಶಟಸ್ಥಲ ಸಾಧನೆ ಮಾಡಲು ಯೋಗಾಭ್ಯಾಸವು ಮುಖ್ಯ ಎಂದು ಸವಿಸ್ತಾರವಾಗಿ ಪ್ರಸ್ತುತ ಪಡಿಸುತ್ತಾರೆ, ಆದರಿಂದ ಭಕ್ತ ಸ್ಥಲದಿಂದ ಮಾಹೇಶ್ವರ ಪ್ರಸಾದಿ ಪ್ರಾಣಲಿಂಗ ಶರಣ ಮತ್ತು ಐಕ್ಯ ಸ್ಥಳಕ್ಕೆ ಹೋಗಿ ಶರಣರು ಜೀವಂತ ಇದ್ದಾಗ ಬಯಲಲ್ಲಿ ಬಯಲಾಗುತ್ತಾರೆ, ಆತ್ಮ ಪರಮಾತ್ಮ ಮಿಲನ ಆಗಿ ಐಕ್ಯ ಸ್ಥಳ ಸೇರುತ್ತಾರೆ ಎಂದು ವಚನಗಳ ಮೂಲಕ ಬಹು ಮಾರ್ಮಿಕವಾಗಿ ತಿಳಿಸಿ ಹೇಳುತ್ತಾರೆ.
ಇಡೀ ವಿಶ್ವದಲ್ಲಿ ಬಸವಣ್ಣ ಮಾತ್ರ ಜಾತಿ ಲಿಂಗ ವರ್ಣ ವರ್ಗ ಭೇದಕ್ಕಾಗಿ ಹೋರಾಟ ಮಾಡಿದ್ದ ಏಕೈಕ ಮತ್ತು ಪ್ರಥಮ ವ್ಯಕ್ತಿ ಎಂದು ವಚನ ಸಾಹಿತ್ಯ ಮೂಲಕ ತಮ್ಮ ಜ್ಞಾನ ಮೂಲಕ ಘೋಷಣ ಮಾಡುತ್ತಾರೆ.ಜಗತ್ತಿನಲ್ಲಿ ಬಸವಣ್ಣ ಮಾತ್ರ ಏಕದೇವೋಪಾಸನೆಯನ್ನು ಕಠೋರವಾಗಿ ಜಾರಿಗೆ ತಂದಿದ್ದಾರೆ, ಕಾಯಕ ಮುಖಾಂತರ ಕರ್ಮಸಿದ್ಧಾಂತವನ್ನು ತಿರಸ್ಕರಿಸಿದ್ದಾರೆ, ಕಾಯಕ ಮತ್ತು ದಾಸೋಹವನ್ನು ಈ ಜಗತ್ತಿಗೆ ಕೊಟ್ಟ ಬಹು ದೊಡ್ಡ ಕೊಡುಗೆ ಎಂದು ಪ್ರಚಾರ ಮಾಡುತ್ತಾರೆ. ಬಸವಾದಿ ಶರಣರ ಯಾವುದೇ ವಚನ ಅರ್ಥ ಆಗದಿದ್ದರೆ ಬೆಲ್ದಾಳ ಶರಣರನ್ನು ವಿಚಾರಿಸಿದಾಗ ಕೂಡಲೇ ಅದನ್ನು ನಿರ್ವಚನ ಮಾಡಿ ತಿಳಿಸಿ ಹೇಳುತ್ತಾರೆ. ಇದೆಲ್ಲ ಒಬ್ಬ ಕಡಿಮೆ ಶಿಕ್ಷಣ ಪಡೆದ ವ್ಯಕ್ತಿಗೆ ಸಾಧ್ಯ ಆಗಿದ್ದು ಕೇವಲ ಬಸವಾದಿ ಶರಣರ ವಚನಗಳು ಮತ್ತು ಬಸವದಿಂದ ಸಾಧ್ಯ.
ಬಸವಕಲ್ಯಾಣದಲ್ಲಿ ಬಸವ ಮಹಾಮನೆ ಸ್ಥಾಪನೆ ಮಾಡಿದ್ದಾರೆ ಹಾಗು ಐಕ್ಯತಾ ಸಮಾವೇಶಗಳನ್ನು ಹಮ್ಮಿಕೊಂಡು ಸಮಾಜದಲ್ಲಿ ಶಾಂತಿ ಮತ್ತು ಭಾತೃತ್ವ ನೆಲೆಗೊಳಲ್ಲೂ ಶ್ರಮ ವಹಿಸುತ್ತಿದ್ದಾರೆ. ನೀಲಾಂಬಿಕೆ ಬಸವ ಯೋಗಶ್ರಮ ಸ್ಥಾಪನೆ ಮಾಡಿ ವರ್ಷಕ್ಕೆ ಮೂರು ದಿವಸ ಯೋಗ ಶಿಬಿರ ಹಮ್ಮಿಕೊಳ್ಳುತ್ತಾರೆ. ನಾಡಿನ ಮತ್ತು ಪರ ರಾಜ್ಯದ ಶರಣು ಶರಣೆಯರು ಯೋಗ ಶಿಬಿರದಲ್ಲಿ ಭಾಗವಹಿಸಿ ಯೋಗ ಅಭ್ಯಾಸ ಮಾಡುತ್ತಾರೆ.
ಹಲವಾರು ಗ್ರಂಥಗಳನ್ನು ರಚಿಸಿದ್ದಾರೆ ಅದರಲ್ಲಿ ಮುಖ್ಯವಾದವು ವಚನ ತತ್ವ ಸಾರ, ಕರುಳ ಕಲೆ, ಇಷ್ಟಲಿಂಗಾರ್ಚನೆ ವಿಧಾನ, ಬಸವಣ್ಣನವರಿಂದಲೇ ಇಷ್ಟಲಿಂಗ, ಶಟಸ್ಥಲ ಸಂಪತ್ತು, ಶರಣರ ಬೆಡಗಿನ ಬೆಳಕು, ಬಸವ ತತ್ವ ಪ್ರದಿಪಿಕೆ, ವಚನ ತತ್ವ ಅನುಭವ, ಶಿವಯೋಗ ಸುಖ, ಶೂನ್ಯ ಸಂಪಾದನೆ ರಹಸ್ಯ ( ನಾಲ್ಕು ಸಂಪುಟ), ವಚನಗಳಲ್ಲಿ ಶಿವಯೋಗ ಸುಖ, ಹೀಗೆ ಹಲವಾರು ಪುಸ್ತಕ ಬರೆದಿದ್ದಾರೆ.
ಅವರಿಗೆ ಗುಲ್ಬರ್ಗ ವಿಶ್ವವಿದ್ಯಾಲಯ ದಿಂದ ಸಾಹಿತ್ಯ ಕ್ಷೇತ್ರದಲ್ಲಿ ಸೇವೆಗಾಗಿ ಡಾಕ್ಟರೇಟ್ ಪದವಿ ಪ್ರದಾನ ಮಾಡಿದ್ದರೆ, ಚಿತ್ರದುರ್ಗ ಮಠದಿಂದ ಕೊಡುವ ಬಸವಶ್ರೀ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಹಲವಾರು ಸಂಘ ಸಂಸ್ಥೆಗಳು ಹಲವಾರು ಪ್ರಶಸ್ತಿ ಬಿರುದು ಕೊಟ್ಟು ಸನ್ಮಾನ ಮಾಡಿದ್ದಾರೆ. ಇವರ ಬಗ್ಗೆ ವಿಧ್ಯಾರ್ಥಿ ಎಂ ಫಿಲ್ ಮಾಡಿದ್ದಾರೆ, ಮತ್ತೊಬ್ಬರು ಪಿಎಚ್ಡ್ ಮಾಡಿದ್ದು ದೊಡ್ಡ ಸಾಧನೆ.
ಅವರಿಗೆ ವಚನ ಸಾಹಿತ್ಯ ಪರಿಷತ್ತಿನ ಸಮ್ಮೇಳನ ಸರ್ವಾಧ್ಯಕ್ಷ ಮಾಡಿದ್ದು ಅವರ ಸಾಧನೆಗೆ ತಂದ ಗೌರವ, ಮತ್ತು ಇಂತಹ ವಿಷಮ ಸಂದಿಗ್ಧ ಸ್ಥಿತಿಯಲ್ಲಿ ಅವರನ್ನು ಅಧ್ಯಕ್ಷ ಮಾಡಿದಕ್ಕೆ ವಚನ ಸಾಹಿತ್ಯ ಪರಿಷತ್ ಸಮ್ಮೇಳನಕ್ಕೆ ಒಂದು ಮೆರಗು ಬಂದಂತಾಗಿದೆ.
-ಶ್ರೀಕಾಂತ ಸ್ವಾಮಿ ಬೀದರ, ಕರ್ನಾಟಕ ರಾಜ್ಯ ಸಂಚಾಲಕ,
ಅಖಿಲ ಭಾರತ ಲಿಂಗಾಯತ ಸಮನ್ವಯ ಸಮಿತಿ.
No comments:
Post a Comment