ads

Search This Blog

Saturday, 27 December 2014

body builder

  ಸಿಕ್ಸಟಿಯಲ್ಲಿ ಸಿಕ್ಸಪ್ಯಾಕ್..ತೆಲಗುನಾಡಿನಲ್ಲಿ ಕನ್ನಡಿಗನ ಕಸರತ್ತು....
                        ªÀgÀ¢;-zsÀªÉÄðÃAzÀæ ¥ÀÆeÁj §UÀÆÝj
         ಹೈದರಾಬಾದ್‌; 22 -ಇತ್ತಿಚಿಗೆ ಯುವ ಜನತೆ ಹೆಚ್ಚಾಗಿ ಹೆಲ್ಥ್ ಕಾನ್ಶಿಯಸ್ ಆಗ್ತಿದ್ದಾರೆ ಅನ್ನೊ ಮಾತು ಸುಳ್ಳಲ್ಲಾ..ಹಾಗೆ ಪ್ರಾಕ್ಟಿಕಲ್ ಆಗಿ ದೇಹ ದಂಡಿಸಿ ದೃಡಕಾಯ ಮಾಡಿಕೊಳ್ಳಿ ಅಂದ್ರೇ ಮಾತ್ರ,ಜಿಮ್ ಹತ್ರಕ್ಕೆ ಸುಳಿಯೊ ಯುವಕರು ತುಂಬಾನೆ ಕಡಿಮೆ..ಆದ್ರೇ, ಹಿರಿಕ ಮಾತ್ರ ಹಾಗಲ್ಲಾ ಬಿಡಿ..ಸಂಧ್ಯಾ ಕಾಲದಲ್ಲಿ ದೇವರ ಧ್ಯಾನ ಮಾಡ್ಕೊಂಡು ಕಾಲ ಕಳೆಯೊ ವಯಸ್ಸಿನಲ್ಲಿ,ಆತನಲ್ಲಿ ಇನ್ನಿಲ್ಲದ ಚೈತನ್ಯ ತುಂಬಿ ತುಳುಕುತ್ತಿದೆ..ವಯಸ್ಸು ಅವರತ್ತರ ಹತ್ರಯಿದ್ರು,ಬಾಡಿ ವರ್ಕೌಟ್ ಮಾತ್ರ ಮರೆಯೊದಿಲ್ಲಾ.. ಏಜ್ನಲ್ಲಿ ಸಿಕ್ಸ ಪ್ಯಾಕ್ ಮಾಡೊಕೆ ಡಿಸೈಡ್ ಮಾಡಿರುವ ಹಿರಿಯ ನಾಗರಿಕ,ಜಾಗತಿಕವಾಗಿ ಮತ್ತೊಂದು ದಾಖಲೆ ಬರೊಕೆ ತಯಾರಿ ನಡೆಸುತ್ತಿದ್ದಾರೆ...
    fêÀ£ÀzÀ°è C¸ÁzsÀåªÁzÀÄzÀÄ AiÀiÁªÀÅzÀÄ EgÀ¨ÁgÀzÀÄ JA§ÄzÉà EªÀgÀ ¸ÁzsÀ£É, ©ÃzÀgÀ£À°è CAvÀgÀgÁ¶ÖçÃAiÀÄ ªÀÄlÖzÀ°è QæÃqÁ PÉëÃvÀæzÀ°è ¥ÀzÀPÀ ¥ÀqÉ¢gÀĪÀªÀgÀÄ ¥Àæ¢Ã¥À KPÉÊPÀ ªÀåQÛAiÀiÁVzÀÄ «±ÉõÀªÁVzÉ, ªÀiÁgÀÄPÀmÉÖAiÀÄ PÉëÃvÀæzÀ°è JwÛzÀ PÉÊ,
PÀ£ÁðlPÀ gÁeÉÆåÃvÀìªÀ ¸ÀAzÀ¨sÀðzÀ°è PÀ£ÁðlPÀ PÉÊæ¸ÀÛ gÀPÀët ªÉâPÉAiÀÄÄ 2013gÀ°è PÀ£ÁðlPÀ PÉʸÀÛ gÀvÀß ¥Àæ±À¹ÛAiÀÄ£ÀÄß ªÀiÁf ¥ÉưøÀ C¢üPÁj J¸Àn ¸ÁAUÀ°AiÀÄ£À ¤ÃrzÀgÀÄ, Qæ¸ÀªÀĸÀ GqÀÄUÉÆgÉAiÀÄ£ÀÄß AiÀiÁªÀÅzÉà eÁw zsÀªÀÄð JA§ ªÉÄgÉAiÀÄ£ÀÄß «Äj »AzÀÆ, ªÀÄĹèA, PÉÊæ¸ÀÛ, J¯Áè ªÀÄvÀzsÀªÀÄð ¨ÁAzsÀªÀjUÉ ªÀ¸ÀÛçªÀ£ÀÄß ¤ÃqÀÄvÁÛgÉ,


ಹೆಸರು ಪ್ರದೀಪ್ಕುಮಾರ್...ಇವರ ವಯಸ್ಸು ಬರೊಬ್ಬರಿ 56..ಇದು ಬಹುತೇಕರ ಪಾಲಿಕೆ ಲೈಫ್ ರಿಟೈರ್ಮೇಂಟ್ಹಂತ ಅಂತಾನೆ ಹೇಳಬಹುದು..ಆದ್ರೇ,ಪ್ರದೀಪ್ಕುಮಾರ್ ಗೆ ಆಗಿರುವ ಐವತ್ತಾರು ವಯಸ್ಸು ಕೇವಲ ಹೆಸರಿಗೆ ಮಾತ್ರ ಇದ್ದಂತಿದೆ.. ದೇಹಕ್ಕು ವಯಸ್ಸು ಟಚ್ ಮಾಡಿಲ್ಲಾ..ಮನಸ್ಸಿನ ಹತ್ರಾನೂ ವಯಸ್ಸು ಸುಳಿದಿಲ್ಲಾ..ಹೀಗಾಗಿ ಮಿಸ್ಟರ್ ಪ್ರದೀಪ್ ಕುಮಾರ್ ಇನ್ನೂ ಯಂಗ್ ಌಂಡ್ ಎನರ್ಜಿಟಿಕ್ ಆಗಿದ್ದಾರೆ..ನವಯುವಕರನ್ನ ನಾಚಿಸುವಂತಿದ್ದಾರೆ..ನಿತ್ಯ ಚಟುವಟಿಕೆಯಿಂದ ಇರುವ ಪ್ರದೀಪ್ ತಮ್ಮ ಐವತ್ತಾರನೆ ವಯಸ್ಸಿನಲ್ಲು ದೇಹ ದಂಡಿಸುತ್ತಿದ್ದಾರೆ..ಅತಿಭಾರ ಎತ್ತುವ ಸ್ಪರ್ದೆ ಅಂದರೆ,ಇವರಿಗೆ ಇನ್ನಿಲ್ಲದ ಹುಚ್ಚು..ಕ್ರಿಡೆಯಲ್ಲಿ ಏನಾನ್ನಾದ್ರು ಸಾಧನೆ ಮಾಡ್ಲೇಬೇಕು ಅಂತಾ ಕಂಕಣಕಟ್ಟಿರುವ ಪ್ರದೀಪ್ ಕುಮಾರ್,ಅಂತರಾಷ್ಟ್ರೀಯ ಮಟ್ಟದಲ್ಲಿ ಮಿಂಚಲು ತಯಾರಿ ನಡೆಸಿದ್ದಾರೆ.. ವಯಸ್ಸಲ್ಲಿ ಇದೇಲ್ಲಾ ಬೇಕಾ ಅಂತಾ ಹಿಯಾಳಿಸಿದವರಿಗೆ ಸರಿಯಾದ ಉತ್ತರ ಕೊಡಲು ದಷ್ಟಪುಷ್ಟವಾದ ಮೈಕಟ್ಟನ್ನ ಬೆಳೆಸುತ್ತಿದ್ದಾರೆ..ಮಾಸ್ಟರ್‌3 ಅಂತರಾಷ್ಟ್ರೀಯ ಚಾಂಪಿಯನ್ಶಿಪ್ನಲ್ಲಿ ಪಾಲ್ಗೊಳ್ಳಲು ಭರದ ತಯಾರಿ ನಡೆಸಿದ್ದಾರೆ..ನಿತ್ಯ ಮುಂಜಾನೆ ಸೂರ್ಯ ಏಳೊದಕ್ಕು ಮುಂಚೆನೆ ಕಸರತ್ತು ಮಾಡಲು ಜಿಮ್ನತ್ತ ಹೆಜ್ಜೆ ಹಾಕ್ತಾರೆ..ಮೋದಲು ಬಂದವರೇ ವಾರ್ಮಪ್ ಮಾಡಿದವರೇ ವೇಟ್ ಲಿಫ್ಟಿಂಗ್ಗಾಗಿ ತಯಾರಿ ನಡೆಸ್ತಾರೆ..ಅತಿಭಾರ ಎತ್ತುವ ಸ್ಪರ್ಧೆಯಲ್ಲಿ ಭಾಗವಹಿಸಬೇಕಾದ್ರೇ ಮೂರು ರೀತಿಯ ಪ್ರಕ್ರಿಯೇಯಲ್ಲಿ ಪಾಲ್ಗೊಳ್ಳಬೇಕಾಗುತ್ತೆ..ಸ್ಕ್ಯಾಟ್,ಬೆಂಚ್ಪ್ರೇಸ್ ಮತ್ತು ಡೆಡ್ಲಿಫ್ಟ್..ಸ್ಕ್ಯಾಟ್ ಅಂದ್ರೇ ಸಾಮರ್ಥ್ಯದ ತೂಕವನ್ನ ಹಿಂಬದಿಯಿಂದ ಹೆಗಲಮೇಲೆ ಹೊರುವುದು..ಹಾಗೇ ಬೆಂಚ್ಪ್ರೇಸ್ ಅಂದ್ರೇ,ಕಾಲು ನೆಲಕ್ಕೆ ಚಾಕಿಸಿ ಅಂಗಾತ ಮಲಗಿ ಭಾರವನ್ನು ಎತ್ತುವುದು..ಇನ್ನೂ ಡೆಡ್ಲಿಫ್ಟ್ ಅಂದ್ರೇ,ಭಾರವನ್ನು ಎದ್ದುನಿಂತು ಮುಂಬದಿಯಿಂದ ಮೋಣಕಾಲಿನವರೆಗೆ ಎತ್ತುವುದು.. ಮೂರು ಭಾರಯತ್ತುವ ಅಭ್ಯಾಸವನ್ನು ಪ್ರದೀಪ್ ಚಾಚುತಪ್ಪದೆ ಮಾಡ್ತಾರೆ..ಕೋಚ್ ಪ್ರೇಮ್ ನಿರ್ದೇಶನದಲ್ಲಿ ಭಾರಎತ್ತುವ ಪ್ರಾಕ್ಟಿಸ್ ನಿತ್ಯ ಮಾಡ್ತಿದ್ದಾರೆ ಪ್ರದೀಪ್ಕುಮಾರ್..
    ¥Àæ¢Ã¥À CªÀgÀÄ ¸ÁªÀiÁfPÀªÁV PÁAiÀÄð¤ªÀð»¸ÀÄvÀÛ¯Éà ªÀiÁ£À«AiÀÄ ªÀiË®åUÀ½UÉ MvÀÄÛPÉÆlÄÖ DAzsÀæ¥ÀæzÉñÀ, PÀ£ÁðlPÀzÀ ©ÃzÀgÀ f¯ÉèAiÀÄ°è »AzÀƽzÀ ªÀUÀðUÀ¼À §qÀªÀjUÉ ºÀ§âzÀ ¸ÀAzÀ¨sÀðUÀ¼À°è GqÀÄUÉÆgÉUÀ¼À£ÀÄß ¤Ãr ªÀiÁ£À«ÃAiÀÄvÉ ªÉÄgÉAiÀÄÄvÁÛgÉ ¥Àæw ªÀµÀð Qæ¸ÀªÀĸï DZÀgÀuÉAiÀÄ ¨ÁAzsÀªÀjUÉ MAzÀÄ ªÀiÁzÀjAiÀiÁVgÀĪÀÅzÀ£ÀÄß £ÁªÀÅ £ÉÆÃqÀÄvÉÛêÉ,


ಮಾಸ್ಟರ್ತ್ರಿ ಅಂದ್ರೇ,ಅರವತ್ತು ವಯಸ್ಸಿನವರಿಗಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಏರ್ಪಡಿಸುವ ಭಾರಎತ್ತುವ ಸ್ಪರ್ದೆ ಎಂದರ್ಥ.. ಸ್ಕ್ಯಾಟ್,ಬೆಂಚ್ಪ್ರೇಸ್ ಮತ್ತು ಡೆಡ್ಲಿಫ್ಟ್ ಮೂರು ವಿಧಗಳಲ್ಲಿ ಪ್ರದೀಪ್ಕುಮಾರ್ ಬರೊಬ್ಬರಿ 480ಕೆಜಿವರೆಗು ಭಾರ ಎತ್ತುವ ಸಾಮರ್ಥ್ಯ ಹೊಂದಿದ್ದಾರೆ...ನಿತ್ಯ ಪ್ರಾಕ್ಟಿಸ್ನಲ್ಲಿ ಇದಕ್ಕಿಂತ ಹೆಚ್ಚಿಗೆ ವೇಟ್ ಲಿಫ್ಟಿಂಗ್ ಮಾಡಬೇಕು ಅಂತಾ ಬೆವರುಸುರಿಸುತ್ತಿದ್ದಾರೆ..ಕೋಚ್ ಪ್ರೇಮ್,ಇವರ ವಯಸ್ಸನ್ನ ಗಮನಿಸಿ ಜಾಗರುಕತೆಯಿಂದ ಟ್ರೈನಿಂಗ್ ನೀಡುತ್ತಿದ್ದಾರೆ..ಪ್ರದೀಪ್ಕುಮಾರ್ ಮುಂದೆ ಯಾರಾದ್ರು ಯುವಕರು,ಅವರನ್ನ ಎನುಕರಿಸಿದ್ರೇ,ಅವರಿಗಿಂತ ಜಾಸ್ತಿ ಕಸರತ್ತು ಪ್ರದರ್ಶಿಸಿ ಹುಡುಗರೇ ಸುಸ್ತಾಗುವಂತೆ ಮಾಡ್ತಾರೆ..ದಿನಾ ದೇಹ ದಂಡಿಸಿ,ಈಡಿ ಬಾಡಿಯನ್ನ ಮಾಂಸ ಖಂಡಗಳಿಂದ ಕಟ್ಟುಮಸ್ತಾಗಿ ತಯಾರು ಮಾಡಿದ್ದಾರೆ..ಕೆಲವೊಂದಿಷ್ಟು ವರ್ಕೌಟ್ಗಳನ್ನ ಬೇಡ ಅಂದ್ರು ಪ್ರದೀಪ್ ಬಿಡೊದಿಲ್ಲಾ..ತನ್ನ ಗುರಿ ಮುಟ್ಟೊವರೆಗು ತಾನು ವಿರಮಿಸುವುದಿಲ್ಲಾ ಅಂತಾ ಕಸರತ್ತು ಮಾಡ್ತಾನೆ ಇರ್ತಾರೆ..ಮೈಮೇಲಿನ ಟೀಶರ್ಟ ಬೆವರಿನಿಂದ ತೊಯ್ದುಹೊಗುವವರೆಗು ದೇಹ ದಂಡಿಸ್ತಾರೆ ಪ್ರದೀಪ್ ಕುಮಾರ್..
ಪ್ರದೀಪ್ಕುಮಾರ್ ಕೇವಲ ಭಾರಎತ್ತುವ ಸ್ಪರ್ಧೆಗೆ ಮಾತ್ರ ತಯಾರಾಗುತ್ತಿಲ್ಲಾ..ಅವರಿಗೆ ಮತ್ತೊಂದು ಗುರಿ ಕೂಡಾ ಇದೆ. ಎಸ್,ಅದೇ ಸಿಕ್ಸ ಪ್ಯಾಕ್...ಹೌದು,ಪ್ರದೀಪ್ ಕುಮಾರ್ ಕೋಚ್ ಪ್ರೇಮ್,ನ್ಯಾಶ್ನಲ್ ಬಾಡಿ ಬಿಲ್ಡರ್ ಚಾಂಪಿಯನ್..3ಬಾರಿ ಚಾಂಪಿಯನ್ ಪಟ್ಟ ಗಿಟ್ಟಿಸಿದವರು ಪ್ರೇಮ್..ಈಗ ಗುರುವಿಗೆ ಪ್ರದೀಪ್ಕುಮಾರ್ ಸೆಡ್ಡು ಹೊಡೆದಿದ್ದಾರೆ..ತಾನು ಸಿಕ್ಸ ಪ್ಯಾಕ್ ಮಾಡ್ಲೇ ಬೇಕು ಅಂತಾ ಪಟ್ಟುಹಿಡಿದಿದ್ದಾರೆ.. ವರ್ಷ ಅಂತ್ಯದೊಳಗೆ ತಾನು ಪರಿಪೂರ್ಣವಾಗಿ ಬಾಡಿಯನ್ನ ಬಾಡಿವುಡ್ಬ್ಯಾಡ್ ಬಾಯ್ ಸಲ್ಲುಮಿಯಾ ನಾಚಿಸುವಂತೆ ಸಿಕ್ಸಪ್ಯಾಕ್ ರಡಿ ಮಾಡೊದಾಗಿ ಶಪಥ ಮಾಡಿದ್ದಾರೆ ಪ್ರದೀಪ್ ಕುಮಾರ್..ಮತ್ತೊಂದು ಇಂಟರಸ್ಟಿಂಗ್ ಏನು ಗೊತ್ತಾ ಪ್ರದೀಪ್ಕುಮಾರ್ ಒಮ್ಮೆ ಕಮಿಟ್ ಆದ್ರೇ,ಮುಗಿತಂತೆ..ಸಾಧನೆ ಮಾಡೊವರೆಗು ಬಿಡೊ ಆಸಾಮಿ ಅಲ್ಲವಂತೆ ಅಂತಾ ಜಿಮ್ ನಲ್ಲಿ ಪ್ರತಿಯೊಬ್ಬರು ಹೇಳ್ತಾರೆ..ಈಗಾಗ್ಲೆ ಸಿಕ್ಸಪ್ಯಾಕ್ಗಾಗಿ ಏನೇಲ್ಲಾ ಕರಸತ್ತು ಮಾಡ್ಬೇಕೊ ಅದನ್ನೇಲ್ಲಾ ಶುರುಮಾಡಿದ್ದಾರೆ.. ಬೈಸೆಪ್,ಟ್ರೈಸೆಪ್ ಸಖತ್ಆಗಿ ರಡಿ ಮಾಡಿಕೊಂಡಿದ್ದಾರೆ..ಬುಜಭಾಗ ಬಾಹುಬಲಿ ರೀತಿಯಲ್ಲಿ ಸಿದ್ದವಾಗ್ತಿದೆ..ಕಾಫ್,ಫೈಯ್ಸ್, ಶೋಲ್ಡರ್,ಚೆಸ್ಟ್ ಮತ್ತು ಅಬ್ಡಾಮನ್ ತಿದ್ದಲು ದಿನಾ 3ಗಂಟೆಗಳ ಕಾಲ ಜಿಮ್ನಲ್ಲೆ ಪ್ರದೀಪ್ ಕಾಲ ಕಳಿತಾರೆ..ಥಾಯ್ಸ್,ಬ್ಯಾಕ್ ಗಾಗಿ ಕೋಚ್ ಪ್ರೇಮ್,ಸಾಕಷ್ಟು ಶ್ರಮವಹಿಸುತ್ತಿದ್ದಾರೆ..ಪ್ರದೀಪ್ಕುಮಾರ್ ಕನಸು ನನಸು ಮಾಡಲು ಪ್ರೇಮ್ ಸಾಥ್ ನೀಡಿ ಪ್ರೋತ್ಸಾಹಿಸುತ್ತಿದ್ದಾರೆ.. ವಯಸ್ಸಿನವರು ಮನೆಯಲ್ಲಿ ಕೂರೊರೆ ಹೆಚ್ಚು..ಇಂಥವರನ್ನ ಪ್ರೋತ್ಸಾಹಿಸಿದ್ರೇ,ಇವರನ್ನು ನೊಡಿ ಯುವಕರು ಪ್ರೇರಿತಗೊಳ್ಳತ್ತಾರೆ ಅಂತಾರೆ ಪ್ರೇಮ್..

ಹೈದರಾಬಾದ್ನಲ್ಲಿ ಸ್ವಂತ ಜಿಮ್......
ಹೈದರಾಬಾದ್ ಚಂದಾನಗರ್ಪ್ರದೇಶದಲ್ಲಿ ಪ್ರದೀಪ್ಕುಮಾರ್ ವಾಸವಾಗಿದ್ದಾರೆ..ದೇಹದಾರ್ಡ್ಯ ಮತ್ತು ಭಾರವೆತ್ತುವ ಕ್ರಿಡೆಗಳೆಂದ್ರೇ ಸಿಕ್ಕಾಪಟ್ಟೆ ಆಸಕ್ತಿ..ಜೀವನ ಅಂದ್ರೇ,ಬರೀ ಊಟಕ್ಕಾಗಿ ಉದ್ಯೊಗ ಮಾಡಿ,ರಿಟೈರ್ಆದ ಮೇಲೆ ದೇವರ ಧ್ಯಾನ ಮಾಡೊದಷ್ಟೇ ಲೈಫ್ ಅಲ್ಲಾ..ಇದನ್ನ ಬಿಟ್ಟು ಜೀವನದಲ್ಲಿ ಸಾಧನೆ ಮಾಡೊದು ತುಂಬಾನೆ ಇದೆ ಅಂತಾ ಫಿಲಾಸಫಿಯನ್ನ ಪ್ರದೀಪ್ ಕುಮಾರ್ ಕೆವಲ ಹೇಳೊದಷ್ಟೇ ಅಲ್ಲಾ,ಅದನ್ನ ಮಾಡಿ ತೊರಿಸ್ತಾರೆ..ತೊರಿಸ್ತಿದ್ದಾರೆ..ತಮ್ಮ ಪ್ರದೇಶದಲ್ಲಿ ಯಾವುದು ಜಿಮ್ಇಲ್ಲಾ..ಇಲ್ಲಿನ ಯುವಕರಿಗು ಆರೊಗ್ಯದ ಬಗ್ಗೆ ಆಸಕ್ತಿ ಮೂಡಿಸಿದಂತಾಗುತ್ತೆ ಅಂತಾ ಪ್ರದೀಪ್ ಕುಮಾರ್ ಸ್ವಂತ ಜಿಮ್ಪ್ರಾರಂಭಿಸಿದ್ರು..ಅವರು ವರ್ಕೌಟ್ ಮಾಡೊಕೆ ಶುರುಮಾಡಿದ್ರು...ಅವರನ್ನು ನೊಡಿ ಸುತ್ತಮುತ್ತಲಿನ ಯುವಕರು ಪ್ರೇರಿತಗೊಂಡು ಜಿಮ್ ಜಾಯಿನ್ ಮಾಡಿದ್ರು..ತುಂಬಾ ಕಡಿಮೆ ಶುಲ್ಕ ಪಡೆದು,ಬಡಯುವಕರಿಗೆ ಉಚಿತವಾಗಿ ಕೂಡಾ ಜಿಮ್ನಲ್ಲಿ ಪ್ರವೇಶ ಕೊಟ್ಟಿದ್ದಾರೆ..ಪ್ರದೀಪ್ ತನ್ನೊಂದಿಗೆ ಇತರ ಸುಮಾರು,20 ಯುವಕರನ್ನ ಕೊಚ್ ಪ್ರೇಮ್ ನೇತ್ರತ್ವದಲ್ಲಿ ಚಾಂಪಿಯನ್ ಮಾಡಿದ ಹೆಗ್ಗಳಿಗೆ ಪ್ರದೀಪ್ ಕುಮಾರ್ಗೆ ಸೇರುತ್ತೆ..
ಪ್ರದೀಪ್ ಅರಸಿ ಬಂದ ಪದಕ ಪಾರಿತೊಷಕಗಳು......
ಪ್ರದೀಪ್ಕುಮಾರ್ಯಶಸ್ಸಿನ ಪಯಣ ಇಷ್ಟಕ್ಕೆ ಮುಗಿಯೊದಿಲ್ಲಾ..ಜಿಮ್ಪ್ರಾರಂಭಿಸಿ,20 ಯುವಕರನ್ನ ಚಾಂಪಿಯನ್ ಮಾಡಿ ತಾನು ಕೂಡಾ ಚಾಂಪಿಯನ್ ಆದ ಘಟನೆ ನಡೆದದ್ದು ಒಂದೆರಡಲ್ಲಾ..ಆಂದ್ರದ ವಿಶಾಖಪಟ್ನಂನಲ್ಲಿ ನಡೆದ ಪವರ್ಲಿಫ್ಟಿಂಗ್ ಸ್ಪರ್ಧೆಯಲ್ಲಿ ಒಟ್ಟು 430 ಕೆಜಿ ಭಾರಎತ್ತುವ ಮೂಲಕ ಚಾಂಪಿಯನ್ ಆದ್ರು..ಅಲ್ಲಿಂದ ಪ್ರದೀಪ್ಕುಮಾರ್ ಹಿಂದೆ ತಿರುಗಿ ನೊಡಲೇ ಇಲ್ಲಾ..ತಮ್ಮ ಈಳಿ ವಯಸ್ಸಿನಲ್ಲಿ ಎಲ್ಲರು ಹುಬ್ಬೆರಿಸುವಂತಹ ಸಾಧನೆಗೆ ಮುನ್ನುಡಿ ಬರೆದ್ರು ಪ್ರದೀಪ್‌..ನ್ಯಾಷನಲ್ ಲೆವಲ್ಗೆ ಆಯ್ಕೆಯಾದ ಪ್ರದೀಪ್,ಅಸ್ಸಾಂನಲ್ಲಿ ನಡೆದ ಅಖಿತ ಭಾರತ ಭಾರ ಎತ್ತುವ ಸ್ಪರ್ಧೆಯಲ್ಲಿ ಭಾಗವಹಿಸಿದ್ರು..ಅಲ್ಲಿ ಚಿನ್ನದ ಪದಕ ಬಾಚಿಕೊಂಡು ಬಂದವರು ಕುಮಾರ್..2010ರಲ್ಲಿ ಅಂತರಾಷ್ಟ್ರೀಯ ಮಟ್ಟದ ಪಂದ್ಯಾವಳಿಯಲ್ಲಿ ಭಾಗವಹಿಸುವ ಸೌಭಾಗ್ಯ ದೊರೆಯಿತು..ಮಂಗೊಲಿಯಾದಲ್ಲಿ ನಡೆದ ಏಷಿಯಾ ಚಾಂಪಿಯನ್ಶಿಪ್ನಲ್ಲಿ ಪ್ರದೀಪ್ ಪಾಲ್ಗೊಂಡಿದ್ರು .ಯಾವ ಕೊಚ್ಸಹಾಯ ಇಲ್ಲದೇ ಚಾಂಪಿಯನ್ಶಿಪ್ನಲ್ಲಿ ಭಾಗವಹಿಸಿ ಕಂಚಿನ ಪದಕ ಗಳಿಸುವಲ್ಲಿ ಯಶಸ್ವಿಯಾದ್ರು..ಮಂಗೋಲಿಯಾದಲ್ಲಿ ಭಾರತಕ್ಕೆ ಕಿರ್ತಿ ಪತಾಕೆ ಹಾರಿಸಿದ್ರು..ದೇಶದ ವಿವಿದ ರಾಜ್ಯದಲ್ಲಿ ನಡೆದ ಅನೇಕ ಪವರ್ಲಿಫ್ಟಿಂಗ್ ಸ್ಪರ್ಧೆಗಳಲ್ಲಿ ಪ್ರದೀಪ್ಭಾಗವಹಿಸುತ್ತಾ ಸಾಕಷ್ಟು ಪದಕಗಳನ್ನ ಬಾಚಿಕೊಂಡಿದ್ದಾರೆ..
ಪ್ರದೀಪ್ಕುಮಾರ್ ಕನ್ನಡದ ಕಂದ........
ಅಂದಹಾಗೆ,ನಿಮಗೆ ವಿಚಾರ ಹೇಳಲೇಬೇಕು..ಪ್ರದೀಪ್ ಕುಮಾರ್,ಕನ್ನಡದ ಹೆಮ್ಮೆಯ ಪುತ್ರ..ಬಿದರ್ಜಿಲ್ಲೆಯ ಹಳ್ಳದಕೇರಿಯ ಕಂದ..ಪ್ರಾಥಮಿಕ ಮತ್ತು ಪ್ರೌಡ ಶಿಕ್ಷಣ ಬಿದರ್ನಲ್ಲೆ ಮುಗಿಸಿ ನಂತರ ಹೈದರಾಬಾದ್ನಲ್ಲಿ ಪದವಿ,ಮುಂಬೈಯಲ್ಲಿ ಸ್ನಾತಕೊತ್ತರ ಪದವಿ ಪಡೆದಿವರು..1983 ಪದವಿಯಲ್ಲಿ ಎನ್ಸಿಸಿಯಲ್ಲಿ ತೊರಿದ ಅಪ್ರತಿಮ ಸಾಧನೆಯಿಂದ ಅಂದಿನ ಪ್ರಧಾನಿ ಮಂತ್ರಿ  ಇಂದಿಯಾಗಾಂಧಿ,ಪ್ರದೀಪ್ಕುಮಾರ್ಗೆ ಸತ್ಕರಿಸಿದ್ರು..ನಂತರ ಹೈದರಾಬಾದ್ನಲ್ಲಿ,ಎಚ್ಬಿಎಲ್ಬ್ಯಾಟರೀಸ್ಸೇರಿದಂತೆ ಇತರೆ ಅಂತರಾಷ್ಟ್ರೀಯ ಕಂಪನಿಗಳಲ್ಲಿ ಉನ್ನತ ಹುದ್ದೆಯಲ್ಲಿ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ..ತಮ್ಮ ಬಿಡುವಿಲ್ಲದ ಸಮಯದಲ್ಲು ಕ್ರಿಡೆಯಲ್ಲಿ ಎಲ್ಲರಿಗೆ ಮಾದರಿಯಾಗುವಂತಹ ಕ್ರಿಡಾಪಟು ಆಗಿ ಮೆರೆದಿದ್ದಾರೆ..ದೇಶ ಸುತ್ತಬೇಕು ಅಂತಾ ಆಶೆಯಿಟ್ಕೊಂಡು ಲಾರಿ ಡ್ರೈವರ್ಆಗಬೇಕು ಅನ್ಕೊಂಡಿದ್ದ ಪ್ರದೀಪ್‌,ಇವತ್ತು ಅಂತರಾಷ್ಟ್ರೀಯ ಪವರ್ಲಿಫ್ಟರ್ಆಗಿ ಮಿಂಚುತ್ತಿದ್ದಾರೆ..ಹಾಗೇ ವಿವಿದ ಕಂಪನಿಗಳ ಸಹಾಯದಿಂದ ತಾವೂ ಅನ್ಕೊಂಡಂತೆ ದೇಶ ವಿದೇಶವೇಲ್ಲಾ ಸುತ್ತಿಬಂದಿದ್ದಾರೆ ಮಾಸ್ಟರ್ ಪ್ರದೀಪ್ ಕುಮಾರ್.. ಗ್ರಾಫಿಕ್ಸ..

ಸಾಮಾಜಿಕ ಕಾರ್ಯದಲ್ಲು ಎತ್ತಿದ ಕೈ.....
ತಾನು ಹುಟ್ಟಿದ ಗ್ರಾಮದ ಜನರಿಗೆ ಏನಾದ್ರು ಸಹಾಯ ಮಾಡ್ಬೇಕು ಅಂತಾ ಪ್ರದೀಪ್ಕುಮಾರ್ ತುಡಿತ..ತನ್ನ ಗಳಿಕೆಯಲ್ಲೆ ಪ್ರತಿವರ್ಷ ಕ್ರಿಸ್ಮಸ್ದಿನಾ ಹಳ್ಳದಕೇರಿಯ ನೂರಾರು ಮಂದಿಗೆ ಹೊಸ ಬಟ್ಟೆಯನ್ನ ಕೊಡುಗೆಯಾಗಿ ನೀಡ್ತಾರೆ..ಮನೆಮಂದಿಗೆಲ್ಲಾ ಹೊಚ್ಚಹೊಸ ಬಟ್ಟೆ ಕೊಡಿಸಿ,ತಮ್ಮ ಜತೆ ಅವರೇಲ್ಲಾ ಖುಷಿಯಾಗಿ ಹಬ್ಬ ಆಚರಿಸುವಂತೆ ಮಾಡ್ತಿದ್ದಾರೆ..ಒಮ್ಮೆ ಪ್ರದೀಪ್ಕುಮಾರ್ಬಳಿ ಹಣ ಇಲ್ಲದಿದ್ದಾಗ್ಲು,ಸಾಲ ಮಾಡಿ ಸಹಾಯ ಮಾಡಿದ ಸಾಕಷ್ಟು ಉದಾಹರಣೆ ಕೂಡಾ ಇದೆ..ಪ್ರದೀಪ್ಕುಮಾರ್‌,ಅವರ ಪತ್ನಿ ಸತ್ಯವತಿದೇವಿ ಸಾಮಾಜಿಕ ಕಾರ್ಯದಲ್ಲಿ ಸಾಥ್ ನೀಡ್ತಾರೆ..
ಬಿದರ್ನಲ್ಲಿ ತಂದೆ ತಾಯಿಯನ್ನ ಕಳ್ಕೊಂಡ,ಏಡ್ಸನಿಂದ ಸಾವನ್ನಪ್ಪಿದ ಅನಾಥರಾದ ಮಕ್ಕಳನ್ನ ಕರೆದಂತು ಸಾಕುತಿದ್ದಾರೆ..15 ಅನಾಥ ಹೆಣ್ಣುಮಕ್ಕಳನ್ನ ಪ್ರದೀಪ್ಮತ್ತು ಸತ್ಯವತಿ ದಂಪತಿ ತಮ್ಮ ಮಕ್ಕಳಂತೆ ನೊಡಿಕೊಳ್ಳುತ್ತಿದ್ದಾರೆ... ಪ್ರದೀಪ್ಕುಮಾರ್ಗೆ ಪುತ್ರ ರೋಹನ್ ಮತ್ತು ಪುತ್ರಿ  ಶ್ವೇತಾಕಿರ್ತಿ ತಂದೆಯ ಯಾವುದೇ ಕಾರ್ಯಕ್ಕೆ ಜೋತೆಯಾಗಿರ್ತಾರೆ..ಮಗಳು ಶ್ವೇತಾಕೀರ್ತಿ ಕೆನಡಾದಲ್ಲಿ ವೈದ್ಯಕೀಯ ಸ್ನಾತಕೊತ್ತರ ಪದವಿ ಮಾಡ್ತಿದ್ದಾಳೆ..ಒಂದ್ಕಡೆ ಕುಟುಂಬ ನಿರ್ವಹಣೆ ಮತ್ತೊಂದ್ಕಡೆ ಕರ್ತವ್ಯ ಜವಬ್ದಾರಿ ಇನ್ನೊಂದ್ಕಡೆ ಕ್ರಿಡಾಸಕ್ತಿ ಇಟ್ಕೊಂಡು ಪ್ರದೀಪ್ಕುಮಾರ್ಮುಂದೆ ಸಾಗುತ್ತಿದ್ದಾರೆ.. ವರ್ಷ ಅಂತ್ಯದೊಳಗೆ ಸಿಕ್ಸ ಪ್ಯಾಕ್ಮಾಡಿ ಬಾಡಿ ಬಿಲ್ಡರ್ಸ್ಪರ್ದೆಯಲ್ಲಿ ಭಾಗವಹಿಸಲು ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ..ಕನ್ನಡಿಗ ಪ್ರದೀಪ್ಕುಮಾರ್‌,ಇಷ್ಟೇಲ್ಲಾ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ತೊರಿದ್ರು,ರಾಜ್ಯ ಸರಕಾರದಿಂದ ಗುರುತಿಸುವ ಕಾರ್ಯ ನಡೆದಿಲ್ಲಾ..ನಮ್ಮವ ಪ್ರದೀಪ್ನನ್ನ ನಾವು ಬೆಂಬಲಿಸಿದ್ದೆ ಆದ್ರೇ ಕುಮಾರ್ಖಂಡಿತ ಕರ್ನಾಟಕಕ್ಕೆ ಮತ್ತೊಂದು ಕಿರಿಟ ತೊಡಿಸುವಲ್ಲಿ ಸೆಕ್ಸಸ್ಆಗ್ತಾರೆ ಅನ್ನೊದರಲ್ಲಿ ಎರಡು ಮಾತಿಲ್ಲಾ...

Sunday, 7 December 2014

ap rajadhani news

  ಎಲ್ಲರ  ಚಿತ್ತ ನೂತನ ರಾಜಧಾನಿಯತ್ತ ; ಗಗನಕೆರಿದ ಭೂಮಿ ಬೆಲೆ 
                     ವರದಿ ;- ಧರ್ಮೇಂದ್ರ ಪೂಜಾರಿ ಬಗ್ದೂರಿ 
ಹೈದರಾಬಾದ್-26  ಈಗ ಎಲ್ಲರ ಚಿತ್ತ ಆಂದ್ರದ ರಾಜಧಾನಿ ಕಡೆಗೆ ನೆಟ್ಟಿದೆ..ಆಕ್ಜಾಕ್ಟ್‌ ಆಗಿ ಸಿಎಂ ಚಂದ್ರಬಾಬು ನಾಯ್ಡು ಯಾವ ಕಡೆಗೆ ವಿಜಯವಾಡದ ಯಾವ ಕಡೆಗೆ ಕ್ಯಾಪಿಟಲ್‌ ನಿರ್ಮಾಣ ಮಾಡ್ತಾರೆ,ಪೂರ್ವದ ಕಡೆಗೆ ವಾಲ್ತಾರೋ,ಇಲ್ಲಾ ದಕ್ಷಿಣದ ಕಡೆಗೆ ವಿಸ್ತರಿಸಲಿದ್ದಾರೋ,ಇಲ್ಲವೇ ಉತ್ತರವೇ ಬೆಸ್ಟ್ ಅಂತಾ ನಿರ್ಧಾರ ಮಾಡ್ತಾರೋ ಅನ್ನೋ ಗೊಂದಲ ಸಾಕಷ್ಟು ಜನರಲ್ಲಿದೆ.. ರಿಯಲ್ಟರ್‌ಗಳು,ಭೂಮಾಫಿಯಾ ಡಾನ್‌ಗಳಿಗಂತು ಎಲ್ಲಿ ಭೂಮಿ ಖರಿದಿಸಬೇಕು ಅನ್ನೊ ಡಿಸ್ಟರ್ಬೆನ್ಸ ಇದೆ..ಪ್ರತಿಯೊಂದನ್ನ ನಾಯ್ಡು ಅಳೆದುತೂಗಿಯೇ ರಾಜಧಾನಿ ನಿರ್ಮಾಣದಲ್ಲಿ ಗಮನಹರಿಸುತ್ತಿದ್ದಾರೆ..ರಾಜಕೀಯ ಲಾಭ,ರಾಜಧಾನಿ ಬೆಳವಣಿಗೆಗೆ ದೂರದ ಆಲೋಚನೆ,ಭವಿಷ್ಯದ 30ವರ್ಷಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಕ್ಯಾಪಿಟಲ್ ಕಟ್ಟೋಕೆ ತಯಾರಿ ನಡೆಯುತ್ತಿದೆ..ಕನ್ಸಸ್ಟ್ರಕ್ಷನ್‌ ಕಂಪನಿಗಳು,ಕಾರ್ಮಿಕ ಗುತ್ತಿಗೆದಾರರು,ಹೋಟೆಲ್‌ ಮಾಲಿಕರು,ಇತರೆ ಉದ್ಯಮಿಗಳೇಲ್ಲಾ ರಾಜಧಾನಿ ನಿರ್ಮಾಣವಾಗುವ ಜಾಗ ಯಾವುದೋ ಅನ್ನೊ ತಿಳಿದುಕೊಳ್ಳುವ ಕುತುಹಲ ಎಲ್ಲರಲ್ಲದೆ..ಕಳೆದ ಸೆಪ್ಟಂಬರ್‌1ರಂದು ಕ್ಯಾಬಿನೆಟ್ ಮೀಟಿಂಗ್ ಮುಗಿಸಿಕೊಂಡು ಹೊರಬಂದ ಸಿಎಂ ಚಂದ್ರಬಾಬು ನಾಯ್ಡು,ಹಲವಾರು ದಿನಗಳ ಕುತುಹಲಕ್ಕೆ ಬ್ರೇಕ್ ಹಾಕಿದ್ರು...ವಿಜಯವಾಡದ ಬಳಿ ರಾಜಧಾನಿ ನಿರ್ಮಾಣವಾಗುತ್ತೆ..ಅಲ್ಲೆ ಗುಂಟೂರು ಸುತ್ತಮುತ್ತ ಇರುತ್ತೆ ಅಂತಾ ಮಾರ್ಮಿಕವಾಗಿ ಹೇಳಿಕೆ ನೀಡಿ ಎಲ್ಲರನ್ನ ಮತ್ತೊಮ್ಮೆ ಗೊಂದಲಕ್ಕಿಡು ಮಾಡಿದ್ರು...

ಚಂದ್ರಬಾಬು ನಾಯ್ಡು ತಮ್ಮ ಸಂಪುಟದ ಸಹೋದ್ಯೋಗಿಗಳಿಗೆ ಪಕ್ಕಾ ಮಾಹಿತಿ ನೀಡಿ,ರಾಜಧಾನಿಯ ವ್ಯಾಪ್ತಿಯಲ್ಲಿ ಬರುವಂಥ ಗ್ರಾಮಗಳ ಗುರುತಿಸುವ ಕಾರ್ಯಕ್ಕೆ ಚಾಲನೆ ನೀಡುವಂತೆ ಸೂಚಿಸಿದ್ರು..ಹಾಗಾದ್ರೇ,ಆಂದ್ರದ ರಾಜಧಾನಿ ಅಕ್ಚುವಲಿ ಎಲ್ಲಿ ನಿರ್ಮಾಣವಾಗುತ್ತೆ..ಯಾವ ಮಾದರಿಯನ್ನ ಅನುಸರಿಸಲಾಗುತ್ತೆ..ಎಷ್ಟು ಎಕರೆ ಭೂಮಿ ಸ್ವಾಧೀನ ಪಡಿಸಿಕೊಳ್ಳಲಿದ್ದಾರೆ..ನಿರ್ಮಾಣಕ್ಕೆ ಯಾಱರು ಕೈಜೊಡಿಸಲಿದ್ದಾರೆ..ಇದಕ್ಕಾಗಿ ರೂಪಿಸಲಾದ ರೂಪುರೇಷೆಗಳೇನು ಅನ್ನೋ ಮಹತ್ತರ ಮಾಹಿತಿ ಟಿವಿ9ಗೆ ಲಭ್ಯವಾಗಿದೆ..
ಮಂಗಳಗಿರಿಯನ್ನ ಕೇಂದ್ರವಾಗಿಸಿಕೊಂಡು,22ಕೀಲೋ ಮೀಟರ್ ಉದ್ದ ಮತ್ತು ಅಗಲಕ್ಕೆ 12ಕೀಲೋಮೀಟರ್ ಎಪಿ ರಾಜಧಾನಿ ನಿರ್ಮಾಣವಾಗಲಿದೆ..ಇದರಲ್ಲಿ ವಿಜಯವಾಡ ಸೇರಿದಂತೆ ರಾಜಧಾನಿ ನಿರ್ಮಾಣದಲ್ಲಿ ಒಳಪಡುವ ಇತರೆ ಪ್ರಮುಖ ಗ್ರಾಮಗಳು ಮಂಗಳಗಿರಿ,ಅನಂತವರಂ,ತೂಳ್ಳೂರು ಮತ್ತು ಪೆದ್ದಪರಿಮಿ..ಇನ್ನು ಕೆಲ ಹಳ್ಳಿಗಳು ಇದರಲ್ಲಿ ಸೇರಿವೆ..ಈ ಪ್ರಮುಖ ಗ್ರಾಮಗಳ ಸುತ್ತಮುತ್ತ ಅರ್ದ ಕೀಲೋಮೀಟರ್ ವ್ಯಾಪ್ತಿಯಲ್ಲಿ ಸಂಪೂರ್ಣವಾಗಿ ನೈಸರ್ಗಿಕ ಕಾಡು ಬೆಳಸಲು ಜತೆಗೆ ಇದ್ದಿದ್ದನ್ನ ಹಾಗೇ ಯಥಾವತ್ತಾಗಿ ರಕ್ಷಿಸಿಕೊಳ್ಳಲು ಯೊಜಿಸಲಾಗಿದೆ..ಅತ್ಯಂತ ಅತ್ಯವಶ್ಯಕ ಪರಿಸ್ಥಿತಿಯಲ್ಲಿ ಮರಗಳನ್ನ ಕತ್ತರಿಸೋದು ಬಿಟ್ರೇ,ಸಾಧ್ಯವಾದಷ್ಟು ಮರಗಳನ್ನ ಉಳಿಸಿಕೊಳ್ಳಲು ಕ್ರಮಗೆೈಗೊಳ್ಳಲು ಖುದ್ದು ಮುಖ್ಯಮಂತ್ರಿಯೇ ಆದೇಶಿಸಿದ್ದಾರೆ..ಸದ್ಯ ವಿಜಯವಾಡ ನಗರ ಮತ್ತು ಪ್ರಮುಖ 5ಗ್ರಾಮಗಳನ್ನ ನೋಡಿದ್ರೇ,ಚೌಕಾಕಾರದಲ್ಲಿ ರಾಜಧಾನಿ ಕಾಣುತ್ತದೆ..
ಸದ್ಯ ಹೈದರಾಬಾದ್‌ನ ಸುತ್ತಯಿರುವ ಹೊರವರ್ತುಲ ರಸ್ತೆಯಿಂದ ಮಹಾನಗರದ ಅಂದಚಂದ ಹೆಚ್ಚಿರುವುದು ಸುಳ್ಳಲ್ಲಾ..ಚಂದ್ರಬಾಬು ಅದೇ ಮಾದರಿಯಲ್ಲಿ ಅತ್ಯಾಧುನಿಕ ತಂತ್ರಜ್ಞಾನವನ್ನ ಬಳಸಿಕೊಂಡು ಆಂದ್ರದ ರಾಜಧಾನಿ ವಿಜಯವಾಡದ ಸುತ್ತ ಬರೋಬ್ಬರಿ ಮೂರು ರಿಂಗ್ ರೋಡ್‌ಗಳನ್ನ ನಿರ್ಮಿಸಲು ಯೊಜಿಸಲಾಗಿದೆ..ಕ್ಯಾಪಿಟಲ್ ಸುತ್ತಯಿರುವ ಮೋದಲನೆಯ ರಿಂಗ್‌ರೋಡ್‌ನ್ನ ಪೂರ್ಣಗೊಳಿಸಲು ಐದು ವರ್ಷದ ಅವಧಿಯನ್ನ ನಿಗಧಿಗೊಳಿಸಲಾಗಿದೆ..ಈ ಔಟರ್‌ರಿಂಗ್‌ರೋಡ್‌ಗೆ ಸ್ವಲ್ಪ ದೊರದಲ್ಲಿ ಮತ್ತೊಂದು ಹೋರವರ್ತುಲ ರಸ್ತೆ ನಿರ್ಮಾಣಗೊಳ್ಳಲಿದೆ..ಇದು ದುಗ್ಗಿರಾಲ,ಗನ್ನವರಂ ಸಂಪರ್ಕ ಕಲ್ಪಿಸುತ್ತಾ ಹಾಗೇ ಮುಂದೆ ಸಾಗುತ್ತೆ..ಗನ್ನವರಂ ವಿಮಾನ ನಿಲ್ದಾಣವನ್ನು ಅಂತರಾಷ್ಟ್ರೀಯಗೊಳಿಸೋಕೆ ಈಗಾಗ್ಲೆ ಪ್ರಸ್ತಾವನೆ ಕೇಂದ್ರಕ್ಕೆ ಸಲ್ಲಿಕೆಯಾಗಿದೆ..ಹಾಗೇ ಮೂವರನೇ ರಿಂಗ್ ರೋಡ್ ವ್ಯಾಪ್ತಿಯಲ್ಲಿ ಗುಂಟೂರು..ತೆನಾಲಿ..ಉಂಗಟೂರಿಗೆ ಸಂಪರ್ಕ ಕಲ್ಪಿಸಿ ಅದು ನೂಜಿವೀಡುವರೆಗು ಥರ್ಡ ರಿಂಗ್ ರೋಡ್ ನಿರ್ಮಾಣಗೊಳ್ಳಲಿದೆ..ಒಟ್ಟಾರೆ,ಮೂರು ರಿಂಗ್‌ರೋಡ್‌ಗಳನ್ನ ಎಪಿ ಸರಕಾರ 10ರಿಂದ 12ವರ್ಷದೋಳಗೆ ಪೂರ್ತಿಗೊಳಿಸಬೇಕು ಅಂತಾ ಗುರಿಹೊಂದಿದೆ...
ಭೂಸ್ವಾಧೀನ ಪ್ರಕ್ರಿಯೆ ಸುಪರ್‌ಫಾಸ್ಟ್...
ರಾಜಧಾನಿ ನಿರ್ಮಾಣ ಕಾರ್ಯಕ್ಕೆ ಮುಖ್ಯವಾಗಿ ಬೇಕಾಗಿರೋದೇ ಭೂಮಿ..ಹಿಗಾಗಿ ಭೂ ಶೇಖರಣೆ ಮತ್ತು ಸ್ವಾಧೀನ ಕಾರ್ಯ ಅತ್ಯಂತ ವೇಗವಾಗಿ ಸಾಗುತ್ತಿದೆ..ಮೂಲಸೌಕರ್ಯಗಳ ಅಭಿವೃದ್ದಿಗೆ ಪ್ರಥಮ ಆದ್ಯತೆ ನೀಡಲಾಗುತ್ತಿದ್ದು,ಕೂಡ್ಲೆ ಗುರುತಿಸಲಾದ ಭೂಮಿ,ಗ್ರಾಮಗಳಿಗೆ ಆಧುನಿಕ ಸವಲತ್ತು ಕಲ್ಪಿಸಲಾಗುತ್ತಿದೆ...ಮಂಗಳಗಿರಿಯಿಂದ ಅಮರಾವತಿವರೆಗಿನ ಸುಮಾರು 50ಸಾವಿರ ಎಕರೆ ಭೂಮಿಯನ್ನ ರಾಜಧಾನಿ ನಿರ್ಮಾಣಕ್ಕಾಗಿ ಗುರುತಿಸಲಾಗಿದೆ...ವಿಜಯವಾಡ ಮಹಾನಗರ ಒಳಗೊಂಡಂತೆ ಮಂಗಳಗಿರಿಯನ್ನ ಕೇಂದ್ರ ಮಾಡಿಕೊಂಡು ಕ್ಯಾಪಿಟಲ್ ನಿರ್ಮಾಣವಾಗೋದು ಬಹುತೇಕ ಗ್ಯಾರಂಟಿಯಾಗಿದೆ..ಹಿಗಾಗಿಯೇ ಮಂಗಳಗಿರಿಗೆ ಕೇಂದ್ರದಿಂದ ಏಮ್ಸ್ ಆಸ್ಪತ್ರೆ ಮಂಜೂರಾಗಿದೆ..ಡಿಜಿ ಕಾರ್ಯಲಯ ಕೂಡಾ ಮಂಗಳಗಿರಿಯಲ್ಲೆ ಏರ್ಪಾಟು ಮಾಡಲಾಗುತ್ತಿದೆ..ಇಲ್ಲೆ ಪೋಲಿಸ್ ಬೆಟಾಲಿಯನ್ ಕೂಡಾ ಈಗಾಗ್ಲೆ ಇದೆ..ಈಗಾಗ್ಲೆ ಕೇಂದ್ರ ಸರಕಾರ ಗುಂಟೂರು ಮತ್ತು ವಿಜಯವಾಡ ಮದ್ಯೆ ಮೆಟ್ರೋ ಟೈನ್‌ಗು ಅನುಮತಿ ನೀಡಿದೆ...  
ಕೃಷ್ಣಾ ನದಿ ಮೇಲೆ 5ಸೇತುವೆ ನಿರ್ಮಾಣ..
ಆಂದ್ರ ರಾಜಧಾನಿಗೆ ಬರೋಬ್ಬರಿ ಮೂರು ರಿಂಗ್‌ರೋಡ್‌ಗಳನ್ನ ನಿರ್ಮಿಸಲಿರುವ ಆಂದ್ರ ಸರಕಾರ,ಭಾರಿ ವೆಚ್ಚದಲ್ಲಿ ಕೃಷ್ಣ ನದಿ ಮೇಲೆ ಐದು ಸೇತುವೆಗಳನ್ನ ನಿರ್ಮಾಣ ಮಾಡಲು ಪ್ಲಾನ್ ಮಾಡಿದೆ..ಕ್ಯಾಪಿಟಲ್ ಸಂಪೂರ್ಣ ನಿರ್ಮಾಣವಾದ ನಂತರ, ಹೈದರಾಬಾದ್‌ನಂತೆ ವಿಜಯವಾಡ ಟ್ರಾಫಿಕ್ ಸಮಸ್ಯೆ ಎದುರಿಸದಿರಲಿ ಅಂತಾ ಈ ಯೊಚನೆ ಮಾಡಲಾಗಿದೆ..ಟ್ರಾಫಿಕ್ ಫ್ರೀ ಕ್ಯಾಪಿಟಲ್‌ಗೆ ಬಾಬು ಸಾಕಷ್ಟು ಕಸರತ್ತು ಮಾಡುತ್ತಿದ್ದಾರೆ..ಛತ್ತಿಸ್‌ಗಢ ರಾಜಧಾನಿ ನ್ಯೂ ರಾಯಪೂರ್‌ಗೆ ಭೇಟಿ ನೀಡಿ ಅಧ್ಯಾಯನ ಮಾಡಿದ್ರು..ಅಲ್ಲಿನ ಕಟ್ಟಡ,ಮತ್ತು ರಸ್ತೆ ಸೇತುವೆ ನಿರ್ಮಾಣದ ಪ್ಲಾನಿಂಗ್ ಬಗ್ಗೆ ಬಾಬು ಗಮನ ಹರಿಸಿದ್ರು..ಅವರ ಯೋಚನೆಯಲ್ಲಿ ಸಿಂಗಾಪುರ,ಚಿಕ್ಯಾಗೋ ಮತ್ತು ನಮ್ಮ ನ್ಯೂದೆಹಲಿ ಕೂಡಾ ಇದೆ..ಒಟ್ಟಾರೆ,ವಿಜಯವಾಡ ಭವಿಷ್ಯದಲ್ಲಿ ಟ್ರಾಫಿಕ್ ಕಿರಿಕಿರಿಯಿಂದ ತಪ್ಪಿಸಲು ಬಾಬುಗಾರು,ಮಾಸ್ಟರ್ ಪ್ಲಾನ್ ರೂಪಿಸಿದ್ದಾರೆ..ಅದರ ಪ್ರಕಾರ ವಿಜಯವಾಡ ಸಿಟಿ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಕೃಷ್ಣ ನದಿ ಹಾದುಹೋಗಿರುವ ಭಾಗದಲ್ಲಿ ಸೇತುವೆಗಳನ್ನ ನಿರ್ಮಿಸುವುದು ಅವರ ಯೋಚನೆ..ಅದು ಬರೋಬ್ಬರಿ 5ಬ್ರಿಡ್ಜ್‌ಗಳನ್ನ ನಿರ್ಮಾಣದಿಂದ ಸಾಕಷ್ಟು ಪ್ರಮಾಣದಲ್ಲಿ ವಾಹನ ದಟ್ಟನೆ ನಿಯಂತ್ರಿಸಬಹುದು ಅನ್ನೋದು ನಾಯ್ಡು ಪ್ಲಾನ್....
ಸಿಂಗಾಪುರ ಇಂಜಿನಿಯರ್ಸ ಸಾಥ್...
ಆಂದ್ರದ ರಾಜಧಾನಿಯನ್ನ ಮಾದರಿಯಂತೆ ನಿರ್ಮಾಣ ಮಾಡಬೇಕು ಅನ್ನೋದು ಸಿಎಂ ಚಂದ್ರಬಾಬು ನಾಯ್ಡು ಕನಸು.. ಹೀಗಾಗಿ ದೇಶದಲ್ಲಿರುವ ಹೆಸರುವಾಗಿ ರಾಜಧಾನಿಗಳಿಗೆ ಭೇಟಿ ನೀಡುತ್ತಿದ್ದಾರೆ..ಈಗಾಗ್ಲೆ,ನ್ಯೂರಾಯಪೂರ್,ಬೆಂಗಳೂರು,ದೆಹಲಿ, ಖುದ್ದಾಗಿ ವಿಕ್ಷಿಸಿ,ನಗರಗಳ ಪ್ಲಾನ್‌ ಕಲೆಹಾಕಿಕೊಂಡಿದ್ದಾರೆ..ವಿದೇಶಿ ಪ್ರವಾಸ ಮಾಡಿ ಸಿಂಗಾಪೂರ್ ಮಹಾನಗರವನ್ನು ಪರಿಶಿಲನೆ ನಡೆಸಿದ್ದಾರೆ..ಸಮುದ್ರತೀರದಲ್ಲಿರುವ ಸಿಂಗಾಪುರ್‌,ದೇಶದಲ್ಲೆ ಅತ್ಯಂತ ದೊಡ್ಡ ಸಮುದ್ರ ತೀರ ಹೊಂದಿರುವ ಆಂದ್ರವನ್ನು ಹೇಗೆ ಬೆಳಸಬಹುದು ಅಂತಾ ಸ್ಟ್ರಾಟರ್ಜಿಗಳನ್ನ ಪ್ಲೇ ಮಾಡುತ್ತಿದ್ದಾರೆ..1ಸಾವಿರಕ್ಕು ಹೆಚ್ಚು ಕೀಲೋ ಮೀಟರ್‌ನಷ್ಟು ಸಮುದ್ರತೀರ ಹೊಂದಿರುವ ಆಂದ್ರದ ಕರಾವಳಿಯ ಜತೆಗೆ ರಾಜಧಾನಿ ಹೇಗೆ ಡೆವಲಪ್‌ ಮಾಡಬಹುದು ಅಂತಾ ಸಿಂಗಾಪೂರ್‌ನಲ್ಲಿರುವ ಕನ್ಸಸ್ಟ್ರಕ್ಷನ್ ಕನ್ಸಲ್ಟೆನ್ಸಿಗಳ ಜತೆಯಲ್ಲಿ ಭೇಟಿ ಮಾಡಿದ್ದಾರೆ..ಸಿಂಗಾಪೂರ್‌ ಸರಕಾರಕ್ಕು ರಾಜಧಾನಿ ನಿರ್ಮಾಣದಲ್ಲಿ ಸಾಥ್ ನೀಡುವಂತೆ ಮನವಿ ಮಾಡಿದ್ದಾರೆ.. ಅದಕ್ಕೆ ಸಿಂಗಾಪೂರದ ಇಂಜಿನೀಯರ್‌ಗಳ ತಂಡ ವಿಜಯವಾಡಕ್ಕೆ ಶಿಘ್ರದಲ್ಲೆ ತಮ್ಮ ಪ್ಲಾನ್ ಜತೆಗೆ ಆಗಮಿಸಲಿದ್ದಾರೆ..ಜಪಾನ್ ಮತ್ತು ಚೈನಾ ಜತೆಯಲ್ಲಿ ಬುಲ್ಲೆಟ್ ಟ್ರೈನ್‌ ಸಲುವಾಗಿ ಕೂಡಾ ನಾಯ್ಡು ಚರ್ಚೆ ನಡೆಸಿದ್ದಾರೆ..ರಾಜಧಾನಿ ಸೇರಿದಂತೆ ಬಂಡವಾಳ ಹೂಡಿಕೆಗು ನಾಯ್ಡು ಸಿಂಗಾಪೂರ್‌ ಉದ್ಯಮಿಗಳಿಗೆ ಆಹ್ವಾನ ನೀಡಿದ್ದಾರೆ..ಒಟ್ಟಾರೆ,ರಾಜಧಾನಿ ದೇಶದ ಎಲ್ಲಾ ಮೇಟ್ರೋಗಳಿಗಿಂತ ಮಿಗಿಲಾಗಿ ನಿರ್ಮಿಸಲು ಬಾಬು ಕರಸತ್ತು ಪ್ರಾರಂಭಿಸಿದ್ದಾರೆ...

ತುಳ್ಳೂರುನಲ್ಲಿ ಈಗ್ಲೆ ರೀಯಲ್‌ ಟ್ರಾಫಿಕ್..
ವಿಜಯವಾಡ ಸುತ್ತಮುತ್ತಲಿನ ಗ್ರಾಮಗಳಿಗೆ ಸಚಿವರು,ಶಾಸಕರು ಭೇಟಿ ನೀಡುತ್ತಲೆ ಇದ್ದಾರೆ..ರಾಜಧಾನಿ ಪರಿಧಿಯಲ್ಲಿ ಬರುವ ಗ್ರಾಮಗಳಲ್ಲಿ ರೈತರೊಂದಿಗೆ ಸಂದಾನ ಸಭೆಗಳು,ಬೆಲೆ ಚೌಕಾಶಿಯನ್ನ ಸರಕಾರವೇ ಖುದ್ದಾಗಿ ನಡೆಸುತ್ತಿದೆ..ಎಲ್ಲೆಲ್ಲಿ ಸಚಿವರು,ಶಾಸಕರ ತಂಡ ಕಾಲಿಡುತ್ತೋ ಅಲ್ಲಿಗೆ ರಿಯಲ್‌ಏಸ್ಟೇಟ್ ವ್ಯಾಪಾರಿಗಳು ಲಗ್ಗೆ ಹಾಕುತ್ತಿದ್ದಾರೆ..ಎಲ್ಲೆ ನೋಡಿದ್ರು,ಏಜೆಂಟರ, ರೈತರ ದಂಡೇ ಕಾಣುತ್ತದೆ..ಗುಂಟೂರು ಜಿಲ್ಲೆಯ ತೂಳ್ಳೂರಿನಲ್ಲಂತು ಭೂಮಿಯ ಬೆಲೆಗಳು ಆಕಾಶಕ್ಕೆ ತಾಕಿವೆ..ರಾತ್ರೋರಾತ್ರಿ ಅರ್ದ ಎಕರೆ ಭೂಮಿಯಿದ್ದವರು ಕೊಟ್ಯಾಧಿಪತಿಗಳಾಗುತ್ತಿದ್ದಾರೆ..ತುಳ್ಳೂರಿನ ಯಾವ ಮೂಲೆಯಲ್ಲಿ ನಿಂತ್ರು,ಲ್ಯಾಂಡ್ ಎಷ್ಟಿದೆ..ರೇಟ್‌ ಎಷ್ಟು.. ಟೋಕನ್ ಬೇಕಾ...ಡೀಲ್‌ ಡನ್..ಗಿಫ್ಟ್‌ ಕಾರು ಬೇಕಾ ಈ ರೀತಿಯ ಡೀಲಿಂಗ್‌ಗಳೇ ಕೇಳಿಸುತ್ತವೆ..ಈಡಿ ಊರಿಗೆ ಊರೇ ಸಿಕ್ಕಾಪಟ್ಟೆ ಬ್ಯೂಜಿಯಾಗೋಗಿದೆ..ಟಿವಿ9 ತೂಳ್ಳೂರಿಗೆ ಭೇಟಿ ನೀಡಿದಾಗ,ಗ್ರಾಮದಲ್ಲಿ ಹೈದರಾಬಾದ್‌ ಗಿಂತಲೂ ಜಾಸ್ತಿ ಟ್ರಾಫಿಕ್ ಜಾಮ್.. ಮರಳಿನ ಲಾರಿಗಳು,ಇಂಪೋಟೆಡ್ ಕಾರುಗಳು..ಆಗಷ್ಟೇ ಶೋರೂಮಿನಿಂದ ಆಚೆ ಬಂದಿರುವ ವಾಹನಗಳು.. ಕರ್ನಾಟಕ ಪಾಸಿಂಗ್ ಇರುವ ಧನಿಕರ ಸಾಕಷ್ಟು ಗಾಡಿಗಳು ತೂಳ್ಳೂರನ್ನ ಜಾಮ್ ಮಾಡಿವೆ..ನವ್ಯಾಂದ್ರ ರಾಜಧಾನಿಯ ವ್ಯಾಪ್ತಿಯಲ್ಲಿ ತೂಳ್ಳೂರು ಇರೋದ್ರಿಂದ ಇಲ್ಲಿನ ಭೂಮಿಗೆ ಬಂಗಾರದ ಬೆಲೆ ಬಂದಿದೆ..ಕರ್ನಾಟಕ,ತಮಿಳನಾಡು,ಮಹಾರಾಷ್ಟ್ರದಿಂದ ರಿಯಲ್‌ ಏಸ್ಟೇಟ್ ಕುಳಗಳ ಲಕ್ಝುರಿ ವಾಹನಗಳೇ ಇಲ್ಲಿ ಜಾಸ್ತಿ ಕಾಣುತ್ತವೆ..ಕಳೆದ ತಿಂಗಳು ಇದೇ ಗ್ರಾಮದಲ್ಲಿ ತಿರುಗಾ ಮುರಗಾ ಏಣಿಸಿದ್ರು 3ರಿಂದ 4 ಕಾರುಗಳು ಕಾಣೋದಂತೆ..ಈಗ ರಾಶಿ ರಾಶಿ ಕಾರುಗಳು ಕಾಣಿಸಿಕೊಳ್ಳುತ್ತಿವೆ..ವ್ಯಾಪಾರಸ್ಥರು,ಉದ್ಯಮಿಗಳು,ಕಟ್ಟಡ ಗುತ್ತಿಗೆದಾರರು, ಹೊಟೇಲ್‌ ಸೆಕ್ಟರ್‌ನವರು ತಮ್ಮ ಬ್ಯುನಿನೆಸ್‌ನ್ನ ಈಗ್ಲೆ ಬೆಳೆಸಿಕೊಳ್ಳಲು ಪಕ್ಕಾ ಪ್ಲಾನ್‌ ಮಾಡಿಕೊಂಡು ತೂಳ್ಳೂರಿಗೆ ಹೆಜ್ಜೆ ಹಾಕುತ್ತಿದ್ದಾರೆ. ತಿಂಗಳಹಿಂದಷ್ಟೇ ಎಕರೆಗೆ ಲಕ್ಷದಲ್ಲಿ ಮಾರಾಟವಾಗದೇ ಖಾಲಿಯಿದ್ದ ಭೂಮಿ ಈಗ ಕೊಟಿಲೆಕ್ಕದಲ್ಲಿ ಬಿಕರಿಯಾಗ್ತಿದೆ..ಗ್ರಾಮದಲ್ಲಿ ಗಾಂದಿ ನೋಟುಗಳೇ ಕಾರುಬಾರು ನಡೆಸುತ್ತಿವೆ..ಅದು ಎಷ್ಟರ ಮಟ್ಟಿಗೆ ಅಂದ್ರೇ,ಗ್ರಾಮದಲ್ಲಿ ಈಗಾಗ್ಲೆ ಕಾರೋಂದರ ಶೋರೂಮ್‌ ಕೂಡಾ ತೆರೆಯಲಾಗಿದೆ.. ಇನ್ನೂ ಟೋಯೋಟಾ,ಹೋಂಡಾ,ಹುಂಡೈ,ನಿಸ್ಸಾರ್ ಮತ್ತು ಮಾರುತಿ ಕಂಪನಿಗಳು, ತೂಳ್ಳೂರಿನಲ್ಲಿ ಷೋರೂಮ್‌ ತೆರೆಯಲು ಆಸಕ್ತಿ ತೊರುತ್ತಿವೆ..ಜಾಗಕ್ಕಾಗಿ ಹುಡುಕಾಟ ನಡೆಸಿವೆ..ತೂಳ್ಳೂರಿಗೆ ಈಗಾಗ್ಲೆ ರಾಜಧಾನಿಯ ಕಳೆ ಬರುತ್ತಿದೆ.. ಗ್ರಾಮದಲ್ಲಿದ್ದ ಸಣ್ಣಪುಟ್ಟ ಕಾಕಾ ಅಂಗಡಿಗಳು ಕಾಣಿಸುತ್ತಿಲ್ಲಾ..ಬಿರಿಯಾನಿ ಹೋಟೆಲ್‌ಗಳು ತೂಳ್ಳೂರಿನಲ್ಲಿ ತೆರೆಯಲಾಗಿದೆ.. ತೂಳ್ಳೂರಿನಲ್ಲಿ ಭೂಮಿಯಿದ್ದವ ಅಂದ್ರೇ,ಅವನಿಗಲ್ಲಿ ರಾಜಮರ್ಯಾದೆ..ತುಣುಕು ಜಾಗಯಿದ್ರು ಅವನು ಕೊಟ್ಯಾಧೀಶ..ಪ್ರತಿ ಏಕರೆ ಭೂಮಿಗೆ ಹೆಚ್ಚುಕಡಿಮೆ ಎರಡುಮೂರು ಕೊಟಿಗೆ ಮಾರುತ್ತಿದ್ದಾರೆ..ಬಾಯಿಗೆ ಬಂದಷ್ಟು ಬೆಲೆ ಹೇಳುತ್ತಿದ್ದಾರೆ..ವಿಪರ್ಯಾಸ ಅಂದ್ರೇ,ಹೇಳಿದಷ್ಟು ಬೆಲೆ ತೆತ್ತು ಭೂಮಿ ಖರಿಧಿಸುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಲೇ ಇದೆ..ಯಾರು ಕಾರಿನಿಂದ ಕೆಳಗಿಳಿದ್ರು ದುಡ್ಡಿನ ಚೀಲದೊಂದಿಗೆ ಗ್ರಾಮದೊಳಗೆ ಏಂಟ್ರಿ ನೀಡುತ್ತಿದ್ದಾರೆ..ಎಷ್ಟರಮಟ್ಟಿಗೆ ಲೇವಾದೇವಿ ನಡೆಯುತ್ತಿದೆ ಅಂದ್ರೇ,ಗ್ರಾಮದಲ್ಲಿ ನಕಲಿ ನೋಟು ಪತ್ತೆ ಹಚ್ಚುವ ಯಂತ್ರಗಳ ಮಾರಾಟ ಕೂಡಾ ಪ್ರಾರಂಭವಾಗಿದೆ..

ಯಾರಿಗು ಗೊತ್ತಿರದ ಅನಾಮಿಕ ಹಳ್ಳಿ ತೂಳ್ಳೂರು ಈಗ ಎಲ್ಲರ ಗಮನಸೆಳೆಯುತ್ತಿದೆ..ಆಂದ್ರದ ರಾಜಧಾನಿಯ ಭಾಗವಾಗುತ್ತಿರುವುದಕ್ಕೆ ಗ್ರಾಮಸ್ಥರಿಗು ಸಾಕಷ್ಟು ಹೆಮ್ಮೆಯಿದೆ..ರಾತ್ರೋರಾತ್ರಿ ಆಲ್‌ಮೋಸ್ಟ್ ತೂಳ್ಳೂರು ಗ್ರಾಮದ ಶೇಕಡಾ 90ರಷ್ಟು ಮಂದಿ ರೈತರು ಕೋಟ್ಯಾಧೀಶರಾಗಿದ್ದಾರೆ ಅನ್ನೋದು ಗಮನಾರ್ಹ..ಭೂಮಿ,ಜಾಗ ಏನು ಇಲ್ಲದವರು ಬ್ರೋಕರೇಜ್ ಮಾಡಿ ಲಕ್ಷಾಧಿಪತಿಗಳಾಗುತ್ತಿದ್ದಾರೆ..ಭೂಮಿಯುಳ್ಳ ರೈತರು,ತಮ್ಮವರೇ ಬ್ರೋಕರೇಜ್ ಮಾಡಿದ್ರೇನೆ ಮಾರಾಟ ಮಾಡುತ್ತಿದ್ದಾರೆ..ತಮ್ಮ ಜತೆಯಲ್ಲಿ ಅವರು ಸ್ವಲ್ಪಮಟ್ಟಿಗಾದ್ರು ಹಣ ಗಳಿಸಲಿ ಅನ್ನೋದು ರೈತರ ಹೃದಯವಂತಿಕೆಯ ಮಾತು..ತೂಳ್ಳೂರಿನಲ್ಲಿ ಸಿಕ್ಕಾಪಟ್ಟೆ ರಿಯಲ್ ಮಾಫೀಯಾ ನಡೆಯುತ್ತಿದೆ ನೋಂದಣಿ ಪ್ರಕ್ರಿಯೇಯನ್ನ ಸ್ಥಗಿತಗೊಳಿಸುವ ಪರವಾನಿಗೆಗಾಗಿ ಅಧಿಕಾರಿಗಳು ಸಿಎಂ ದೃಷ್ಟಿಗೆ ವಿಚಾರವನ್ನು ತಂದಿದ್ದಾರೆ..ರೈತರಿಗೆ ಈಗಲಾದ್ರು ಲಾಭವಾಗ್ಲಿ,ಬಿಡಿ..ಅವರು ಕೋಟ್ಯಾಧಿಪತಿಗಳಾಗ್ಲಿ ರಜಿಸ್ಟ್ರೇಷನ್‌ ಪ್ರಕ್ರಿಯೆ ಯಾವುದೇ ಕಾರಣಕ್ಕು ಸ್ಥಗಿತಗೊಳಿಸಬೇಡಿ ಅಂತಾ ಫರಮಾನು ಹೊರಡಿಸಿದ್ದಾರೆ ನಾಯ್ಡು..

 

Saturday, 8 November 2014

modi clean program

ವಾರಣಾಸಿ: ಗಂಗಾನದಿಯ ದಂಡೆಯನ್ನು ಶುಚಿಗೊಳಿಸುವ ಕಾಯಕದಲ್ಲಿ ಶನಿವಾರ ಬೆಳಗ್ಗೆ ಸ್ವತಃ ತೊಡಗಿಸಿಕೊಂಡ ಪ್ರಧಾನಿ ಮೋದಿ ಸನಿಕೆ, ಹಾರೆಯಿಂದ ನದಿ ಹೂಳನ್ನು ಶುಚಿಗೊಳಿಸಿ ಗಮನ ಸೆಳೆದರು.

ತಮ್ಮ ಸ್ವಕ್ಷೇತ್ರದಲ್ಲಿ ಸ್ವಚ್ಛ ಭಾರತ ಅಭಿಯಾನಕ್ಕೆ ಚಾಲನೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ, ಈ ಅಭಿಯಾನವನ್ನು ಮುಂದುವರಿಸಲು ಉತ್ತರ ಪ್ರದೇಶದ ಸಿಎಂ ಅಖಿಲೇಶ್‌ ಯಾದವ್‌ ಸೇರಿದಂತೆ ಒಂಬತ್ತು ಮಂದಿಯ ಹೆಸರನ್ನು ಸೂಚಿಸಿದರು.

ಅಸ್ಸಿ ಘಾಟ್‌ಗೆ ಆಗಮಿಸಿದ ಪ್ರಧಾನಿ ಮೋದಿ ಮೂರು ಮಟ್ಟಿಲು ಕೆಳಗಿದು ಸಾಗುವ ಹಾದಿಯಲ್ಲಿದ್ದ ಕೆಸರಿದ್ದ ಹೂಳಿನ ದಾರಿಯನ್ನು ಶುಚಿಗೊಳಿಸಿ, ಪೂಜೆಗಾಗಿ ಕಾಯುತ್ತಿದ್ದ ಐವರು ಪುರೋಹಿತರಿದ್ದ ಸ್ಥಳವನ್ನು ತಲುಪಿದರು. ಪುರೋಹಿತರ ಮಂತ್ರಘೋಷದ ನಡುವೆ ಪ್ರಧಾನಿ ಗಂಗಾನದಿಗೆ 15 ನಿಮಿಷಗಳ ಪ್ರಾರ್ಥನೆ ಸಲ್ಲಿಸಿದರು.

ಪ್ರಾರ್ಥನೆ ಬಳಿಕ ಬಿಜೆಪಿ ರಾಜ್ಯಾಧ್ಯಕ್ಷ ಲಕ್ಷ್ಮಿಕಾಂತ್‌ ವಾಜಪೇಯಿ ಹಾಗೂ ನಗರದ ಮೇಯರ್‌ ರಾಮ್‌ಗೋಪಾಲ್‌ ಮೊಹಾಲೆ ಸೇರಿದಂತೆ ಬಿಜೆಪಿ ನಾಯಕರೊಂದಿಗೆ ಮಳೆಗಾಲದಲ್ಲಿ ರಾಶಿ ಬಿದ್ದಿದ್ದ ಕೆಸರಿನ ಹೂಳನ್ನು ಅಗೆದು ಶುಚಿಗೊಳಿಸುವ ಕೆಲಸವನ್ನು ಪ್ರಾರಂಭಿಸಿದರು.

ಅಲ್ಲಿದ್ದ ಸುದ್ದಿಗಾರರ ಜತೆ ಬಳಿಕ ಮಾತನಾಡಿದ ಪ್ರಧಾನಿ, ಗಾಂಧಿ ಜಯಂತಿಯಂದು ದಿಲ್ಲಿಯಲ್ಲಿ ಸ್ವಚ್ಛ ಭಾರತ್‌ ಅಭಿಯಾನದ ಸಂದರ್ಭದಂತೆ ಅಭಿಯಾನ ಮುಂದುವರಿಸಲು ತಾವು ಉತ್ತರ ಪ್ರದೇಶದ 9 ಗಣ್ಯರ ಹೆಸರು ಸೂಚಿಸುವುದಾಗಿ ಹೇಳಿದರು.

ಉತ್ತರ ಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್‌, ಭೋಜಪುರಿ ನಟ ಮನೋಜ್ ತಿವಾರಿ, ಸೂಫಿ ಗಾಯಕ ಕೈಲಾಶ್ ಖೇರ್, ಹಾಸ್ಯನಟ ರಾಜು ಶ್ರೀವಾಸ್ತವ, ಕ್ರಿಕೆಟಿಗರಾದ ಮೊಹಮ್ಮದ್ ಕೈಫ್, ಸುರೇಶ್ ರೈನಾ, ಚಿತ್ರಕೂಟದಲ್ಲಿರುವ ಅಂಧರ ವಿಶ್ವವಿದ್ಯಾಲಯದ ಕುಲಪತಿ ಸ್ವಾಮಿ ರಾಮ ಭದ್ರಾಚಾರ್ಯ, ಸಂಸ್ಕೃತ ವಿದ್ವಾಂಸ ದೇವಿಪ್ರಕಾಶ್ ದ್ವಿವೇದಿ, ಸಾಹಿತಿ ಮನು ಶರ್ಮಾ ಅವರ ಹೆಸರನ್ನು ಪ್ರಧಾನಿ ನಾಮಕರಣ ಮಾಡಿದ್ದಾರೆ.

ಪ್ರೇಮ ಕಾಶ್ಮೀರದಲ್ಲಿ ರಕ್ತದೋಕುಳಿ; ಹಿಂದೂಗಳೇ ಟಾರ್ಗೆಟ...!

  ಪ್ರೇಮ ಕಾಶ್ಮೀರದಲ್ಲಿ ರಕ್ತದೋಕುಳಿ; ಹಿಂದೂಗಳೇ ಟಾರ್ಗೆಟ್. ಭೂಲೋಕದ ಸ್ವರ್ಗವೆಂದೇ ಕರೆಯುವ ಜಮ್ಮು-ಕಾಶ್ಮೀರದ ಪೆಹಲ್ಗಾಮ್ ಸಮೀಪದ ಬೈಸರನ್ ಹುಲ್ಲುಗಾವಲಿನಲ್ಲಿ ಪಾಕ್ ಪ್...