ads

Search This Blog

Saturday, 8 November 2014

modi clean program

ವಾರಣಾಸಿ: ಗಂಗಾನದಿಯ ದಂಡೆಯನ್ನು ಶುಚಿಗೊಳಿಸುವ ಕಾಯಕದಲ್ಲಿ ಶನಿವಾರ ಬೆಳಗ್ಗೆ ಸ್ವತಃ ತೊಡಗಿಸಿಕೊಂಡ ಪ್ರಧಾನಿ ಮೋದಿ ಸನಿಕೆ, ಹಾರೆಯಿಂದ ನದಿ ಹೂಳನ್ನು ಶುಚಿಗೊಳಿಸಿ ಗಮನ ಸೆಳೆದರು.

ತಮ್ಮ ಸ್ವಕ್ಷೇತ್ರದಲ್ಲಿ ಸ್ವಚ್ಛ ಭಾರತ ಅಭಿಯಾನಕ್ಕೆ ಚಾಲನೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ, ಈ ಅಭಿಯಾನವನ್ನು ಮುಂದುವರಿಸಲು ಉತ್ತರ ಪ್ರದೇಶದ ಸಿಎಂ ಅಖಿಲೇಶ್‌ ಯಾದವ್‌ ಸೇರಿದಂತೆ ಒಂಬತ್ತು ಮಂದಿಯ ಹೆಸರನ್ನು ಸೂಚಿಸಿದರು.

ಅಸ್ಸಿ ಘಾಟ್‌ಗೆ ಆಗಮಿಸಿದ ಪ್ರಧಾನಿ ಮೋದಿ ಮೂರು ಮಟ್ಟಿಲು ಕೆಳಗಿದು ಸಾಗುವ ಹಾದಿಯಲ್ಲಿದ್ದ ಕೆಸರಿದ್ದ ಹೂಳಿನ ದಾರಿಯನ್ನು ಶುಚಿಗೊಳಿಸಿ, ಪೂಜೆಗಾಗಿ ಕಾಯುತ್ತಿದ್ದ ಐವರು ಪುರೋಹಿತರಿದ್ದ ಸ್ಥಳವನ್ನು ತಲುಪಿದರು. ಪುರೋಹಿತರ ಮಂತ್ರಘೋಷದ ನಡುವೆ ಪ್ರಧಾನಿ ಗಂಗಾನದಿಗೆ 15 ನಿಮಿಷಗಳ ಪ್ರಾರ್ಥನೆ ಸಲ್ಲಿಸಿದರು.

ಪ್ರಾರ್ಥನೆ ಬಳಿಕ ಬಿಜೆಪಿ ರಾಜ್ಯಾಧ್ಯಕ್ಷ ಲಕ್ಷ್ಮಿಕಾಂತ್‌ ವಾಜಪೇಯಿ ಹಾಗೂ ನಗರದ ಮೇಯರ್‌ ರಾಮ್‌ಗೋಪಾಲ್‌ ಮೊಹಾಲೆ ಸೇರಿದಂತೆ ಬಿಜೆಪಿ ನಾಯಕರೊಂದಿಗೆ ಮಳೆಗಾಲದಲ್ಲಿ ರಾಶಿ ಬಿದ್ದಿದ್ದ ಕೆಸರಿನ ಹೂಳನ್ನು ಅಗೆದು ಶುಚಿಗೊಳಿಸುವ ಕೆಲಸವನ್ನು ಪ್ರಾರಂಭಿಸಿದರು.

ಅಲ್ಲಿದ್ದ ಸುದ್ದಿಗಾರರ ಜತೆ ಬಳಿಕ ಮಾತನಾಡಿದ ಪ್ರಧಾನಿ, ಗಾಂಧಿ ಜಯಂತಿಯಂದು ದಿಲ್ಲಿಯಲ್ಲಿ ಸ್ವಚ್ಛ ಭಾರತ್‌ ಅಭಿಯಾನದ ಸಂದರ್ಭದಂತೆ ಅಭಿಯಾನ ಮುಂದುವರಿಸಲು ತಾವು ಉತ್ತರ ಪ್ರದೇಶದ 9 ಗಣ್ಯರ ಹೆಸರು ಸೂಚಿಸುವುದಾಗಿ ಹೇಳಿದರು.

ಉತ್ತರ ಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್‌, ಭೋಜಪುರಿ ನಟ ಮನೋಜ್ ತಿವಾರಿ, ಸೂಫಿ ಗಾಯಕ ಕೈಲಾಶ್ ಖೇರ್, ಹಾಸ್ಯನಟ ರಾಜು ಶ್ರೀವಾಸ್ತವ, ಕ್ರಿಕೆಟಿಗರಾದ ಮೊಹಮ್ಮದ್ ಕೈಫ್, ಸುರೇಶ್ ರೈನಾ, ಚಿತ್ರಕೂಟದಲ್ಲಿರುವ ಅಂಧರ ವಿಶ್ವವಿದ್ಯಾಲಯದ ಕುಲಪತಿ ಸ್ವಾಮಿ ರಾಮ ಭದ್ರಾಚಾರ್ಯ, ಸಂಸ್ಕೃತ ವಿದ್ವಾಂಸ ದೇವಿಪ್ರಕಾಶ್ ದ್ವಿವೇದಿ, ಸಾಹಿತಿ ಮನು ಶರ್ಮಾ ಅವರ ಹೆಸರನ್ನು ಪ್ರಧಾನಿ ನಾಮಕರಣ ಮಾಡಿದ್ದಾರೆ.

No comments:

ಪ್ರೇಮ ಕಾಶ್ಮೀರದಲ್ಲಿ ರಕ್ತದೋಕುಳಿ; ಹಿಂದೂಗಳೇ ಟಾರ್ಗೆಟ...!

  ಪ್ರೇಮ ಕಾಶ್ಮೀರದಲ್ಲಿ ರಕ್ತದೋಕುಳಿ; ಹಿಂದೂಗಳೇ ಟಾರ್ಗೆಟ್. ಭೂಲೋಕದ ಸ್ವರ್ಗವೆಂದೇ ಕರೆಯುವ ಜಮ್ಮು-ಕಾಶ್ಮೀರದ ಪೆಹಲ್ಗಾಮ್ ಸಮೀಪದ ಬೈಸರನ್ ಹುಲ್ಲುಗಾವಲಿನಲ್ಲಿ ಪಾಕ್ ಪ್...