ads

Search This Blog

Friday, 7 November 2014

celebretion kannada rajyotsava in hyd

ಕನ್ನಡ ರಾಜ್ಯೋತ್ಸವ ಆಚರಣೆ  
ಹೈದರಾಬಾದ್ ; ಗುರುವಾರ ಸಾಯಂಕಾಲ 6.30 ಕ್ಕೆ "ಆನಂದರ ಕಥೆಗಳು" ಈ ವಿಷಯದ ಕುರಿತು ಸಂವಾದ ಮತ್ತು ಚರ್ಚೆ ನಡೆಯಿತು. ಈ ಕಾರ್ಯಕ್ರಮದ ಅದ್ಯಕ್ಷತೆಯನ್ನು ಶ್ರೀ ವಿಠ್ಠಲ ಜೋಶಿ ಯವರು ವಹಿಸಿದ್ದರು. ಡಾ. ಮೂಡ್ನಕೂಡು ಚಿನ್ನಸ್ವಾಮಿ ಯವರು ವಿಶೇಷ ಆಹ್ವಾನಿತರಾಗಿ ಹಾಜರಾಗಿದ್ದರು. ಈ ಸಂದರ್ಭದಲ್ಲಿ ಕರ್ನಾಟಕ ಸರ್ಕಾರ ಪ್ರಕಟಿಸಿದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ವಿಜೇತ  ಡಾ. ಮೂಡ್ನಕೂಡು ಚಿನ್ನಸ್ವಾಮಿ ಯವರು ಮೊದಲಿಗರೆಂಬ ಸುದ್ದಿ  ತಿಳಿದು ಕರ್ನಾಟಕ ಸಾಹಿತ್ಯ ಮಂದಿರದ ಎಲ್ಲಾ ಸದಸ್ಯರು ಹಾಗೂ ಪದಾಧಿಕಾರಿಗಳು ಸಂತೋಷಪಟ್ಟರು. " 
ಕರ್ನಾಟಕ ಸಾಹಿತ್ಯ ಮಂದಿರದಲ್ಲಿ ಸಾಹಿತ್ಯ ಸಂಜೆ ಕಾರ್ಯಕ್ರಮದಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನನಗೆ ಲಭಿಸಿರುವುದು ನನ್ನಜೀವನದಲ್ಲಿ ಈ ಗಳಿಗೆ ಮರೆಯದ ಸಂಗತಿ" ಎಂದು ಹಾಗೂ ಇಲ್ಲಿನ ಕನ್ನಡಿಗರೆಲ್ಲ ಈ ರೀತಿಯಾಗಿ ಸಾಹಿತ್ಯ ಚರ್ಚೆ ಮಾಡುತ್ತಿರುವುದು ಅಭಿನಂದಾರ್ಹವೆಂದು ತಮ್ಮ ಅನಿಸಿಕೆಗಳನ್ನು ಡಾ. ಮೂಡ್ನಕೂಡು ಚಿನ್ನಸ್ವಾಮಿ ಯವರು ನಮ್ಮೊಂದಿಗೆ ಹಂಚಿಕೊಂಡರು.
'ಆನಂದ' ಎ. ಸೀತಾರಾಮ ಇವರು ನವೋದಯದ ಪ್ರಮುಖ ಕಥೆಗಾರರು. ಮಾಸ್ತಿಯವರ ಪರಂಪರೆಯಲ್ಲಿ, ಅವರ ಪ್ರಭಾವಕ್ಕೊಳಗಾದ ಈ ಸಂಕಲನಗಳನ್ನು ಬರೆದವರು. ಅಲ್ಲದೆ ಅನೇಕ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದರು. ಇವರ "ನಾನು ಕೊಂದ ಹುಡುಗಿ", "ಪದ್ಮ ಪಾಕ", "ಭವತೀ ಬಿಕ್ಷಾಂದೇಹಿ", "ಕೊನೆಯ ಎಂಟಾಣಿ", ಈ ಮುಂತಾದ ಕಥೆಗಳ ವಸ್ತು ವಿಷಯ, ಬದುಕಿನ ಮೌಲ್ಯ, ನಿರೂಪಣ, ಶೈಲಿ, ಭಾಷೆ ಈ ಮುಂತಾದ ಅಂಶಗಳನ್ನು ಚರ್ಚಿಸಲಾಯಿತು. , ಶ್ರೀ ಗೋನವಾರ ಕಿಶನ್ ರಾವ್, ಶ್ರೀ ಪ್ರಹ್ಲಾದ ಜೋಶಿ, ಡಾ. ಬಿ.ಡಿ. ರಾಜಣ್ಣ (ಗುಲಬರ್ಗಾ ಕೇಂದ್ರೀಯ ವಿಶ್ವವಿದ್ಯಾಲಯ) ಇವರು ಈ ಚರ್ಚೆಯಲ್ಲಿ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಡಾ. ಸಂಪತ್ ಸುಳಿಭಾವಿ, ಶ್ರೀ ಡಿ.ಬಿ. ರಾಘವೇಂದ್ರ ರಾವ್, ಶ್ರೀ ಕೆ.ಯಂ. ಬಲ್ಲಾಳ, ಶ್ರೀ ರಮೇಶ ಮಂಜುನಾಥ, ಶ್ರೀ ನರಸಿಂಹ ಮೂರ್ತಿ, ಶ್ರೀ ಮುರಳೀಧರ ಪೂಜಾರ, ಮುಂತಾದವರು ಭಾಗವಹಿಸಿದ್ದರು.
ಕೊನೆಯಲ್ಲಿ ಸಹ-ಕಾರ್ಯದರ್ಶಿ ಶ್ರೀ ಗೋಪಾಲ ಆಶ್ರಿತರು ವಂದನಾರ್ಪಣೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಮುಕ್ತಾಯ ಹಾಡಿದರು.

No comments:

ಪ್ರೇಮ ಕಾಶ್ಮೀರದಲ್ಲಿ ರಕ್ತದೋಕುಳಿ; ಹಿಂದೂಗಳೇ ಟಾರ್ಗೆಟ...!

  ಪ್ರೇಮ ಕಾಶ್ಮೀರದಲ್ಲಿ ರಕ್ತದೋಕುಳಿ; ಹಿಂದೂಗಳೇ ಟಾರ್ಗೆಟ್. ಭೂಲೋಕದ ಸ್ವರ್ಗವೆಂದೇ ಕರೆಯುವ ಜಮ್ಮು-ಕಾಶ್ಮೀರದ ಪೆಹಲ್ಗಾಮ್ ಸಮೀಪದ ಬೈಸರನ್ ಹುಲ್ಲುಗಾವಲಿನಲ್ಲಿ ಪಾಕ್ ಪ್...