ads
Search This Blog
Thursday, 19 December 2024
ಪ್ರಧಾನಿ ಮೋದಿ ತೀವ್ರ ಸಂತಾಪ; ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂ ಪರಿಹಾರ ಘೋಷಣೆ
ಮುಂಬೈ ದೋಣಿ ದುರಂತ: ಪ್ರಧಾನಿ ಮೋದಿ ತೀವ್ರ ಸಂತಾಪ; ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂ ಪರಿಹಾರ ಘೋಷಣೆ
ನವದೆಹಲಿ: ಗೇಟ್ವೇ ಆಫ್ ಇಂಡಿಯಾ ಬಳಿ ಪ್ರಯಾಣಿಕರಿದ್ದ ದೋಣಿಗೆ ಸ್ಪೀಡ್ಬೋಟ್ ಡಿಕ್ಕಿ ಹೊಡೆದು 13 ಮಂದಿ ಪ್ರಯಾಣಿಕರು ಮೃತಪಟ್ಟ ಘಟನೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತೀವ್ರ ಸಂತಾಪ ಸೂಚಿಸಿದ್ದು, ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದ್ದಾರೆ.
ದುರ್ಘಟನೆ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಮುಂಬೈನಲ್ಲಿ ದೋಣಿ ಅಪಘಾತದಲ್ಲಿ ಸಾವನ್ನಪ್ಪಿದ ಪ್ರತಿಯೊಬ್ಬರ ಕುಟುಂಬಕ್ಕೆ ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಯಿಂದ 2 ಲಕ್ಷ ರೂಪಾಯಿಗಳ ಪರಿಹಾರವನ್ನು ಪ್ರಧಾನಿ ಘೋಷಿಸಿದ್ದಾರೆ. ಗಾಯಗೊಂಡವರಿಗೆ 50,000 ರೂಪಾಯಿಗಳನ್ನು ನೀಡಲಾಗುವುದು ಎಂದು ತಿಳಿಸಿದ್ದಾರೆ.
ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರು ಸಿಎಂ ದೇವೇಂದ್ರ ಫಡ್ನವೀಸ್ ಅವರು, 'ಮುಂಬಯಿ ಬಳಿ ಬುಚರ್ ಐಲ್ಯಾಂಡ್ನಲ್ಲಿ ಮಧ್ಯಾಹ್ನ 3.55ರ ವೇಳೆಗೆ ನೌಕಾಪಡೆಯ ಬೋಟ್ 'ನೀಲ್ಕಮಲ್' ಹೆಸರಿನ ದೋಣಿಗೆ ಡಿಕ್ಕಿ ಹೊಡದು ಅವಘಡ ಸಂಭವಿಸಿದೆ. ಸಂಜೆ 7.30ರ ಮಾಹಿತಿ ಪ್ರಕಾರ 101 ಜನರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ. 10 ಮಂದಿ ಪ್ರಯಾಣಿಕರು ಹಾಗೂ 3 ಮಂದಿ ನೌಕಾಪಡೆಯ ಸಿಬ್ಬಂದಿ ಸೇರಿ ಒಟ್ಟು ದುರಂತದಲ್ಲಿ 13 ಜನರು ಸಾವನ್ನಪ್ಪಿದ್ದಾರೆ. ಶೋಧಕಾರ್ಯ ಮುಂದುವರಿದಿದೆ. ನಾಪತ್ತೆಯಾದವರ ಹೆಚ್ಚಿನ ವಿವರ ನಾಳೆ ಬೆಳಗ್ಗೆ ಲಭ್ಯವಾಗಲಿದೆ' ಎಂದು ಮಾಹಿತಿ ನೀಡಿದ್ದಾರೆ. ಅಲ್ಲದೆ ಮೃತರ ಕುಟುಂಬಗಳಿಗೆ ಸಿಎಂ ಪರಿಹಾರ ನಿಧಿಯಿಂದ 5 ಲಕ್ಷ ರೂ. ನೀಡುವುದಾಗಿ ಘೋಷಣೆ ಮಾಡಿದ್ದಾರೆ.
Saturday, 28 September 2024
ಗುರುವಿನ ಧಾರ್ಮಿಕ ಸಮಾನತೆ ಮತ್ತು ಲಿಂಗನಿಷ್ಟೆ.
ಗುರುವಿನ ಧಾರ್ಮಿಕ ಸಮಾನತೆ ಮತ್ತು ಲಿಂಗನಿಷ್ಟೆ.
ಅಕ್ಕಮಹಾದೇವಿಗೆ ಲಿಂಗ, ಲಿಂಗತತ್ವ, ಲಿಂಗಪೂಜೆಯ ಮಹತ್ವ ತಿಳಿಸಿ, ಲಿಂಗದೀಕ್ಷೆ ಸಂಸ್ಕಾರ ನೀಡಿ ಆಶಿರ್ವದಿಸಿದ ಗುರು ಲಿಂಗದೇವರು, ಧರ್ಮದಲ್ಲಿ ಗುರುವಿನ ಕರ್ತವ್ಯ ಮತ್ತು ಸಮಾನತೆ ಹಾಗೂ ಲಿಂಗನಿಷ್ಟೆ ಕುರಿತು ಅರಿವು ಮೂಡಿಸುತ್ತಾರೆ. ಗುರುವಾದವನು ತಾನು ಹುಟ್ಟಿದ ಮೂಲ ಜಾತಿಯನ್ನು ಕಳೆದುಕೊಂಡು ಧರ್ಮದ ನೀತಿ ಮತ್ತು ಸಮಾನತೆ ತತ್ವ, ಆಧ್ಯಾತ್ಮಿಕ ಜೀವನದಲ್ಲಿ ವ್ಯವಹರಿಸಬೇಕು. ಗುರುವಿನ ಕರ್ತವ್ಯ ಬಹಳ ದೊಡ್ಡದು; ಶಿಷ್ಯನನ್ನು ತನ್ನಂತೆ ಮಾಡಿಕೊಳ್ಳಬೇಕು ಆ ಗುಣ ಗುರುವಿನಲ್ಲಿರುತ್ತದೆ. ಅಲ್ಲಮಪ್ರಭು ದೇವರು ತಮ್ಮ ವಚನದಲ್ಲಿ ಹೀಗೆ ಹೇಳುವರು, "ಗುರುವಿನ ಪರಿ ವಿಪರೀತವಾಯಿತ್ತಯ್ಯ! ಭ್ರಮರ ಕೀಟ ನ್ಯಾಯದಂತಾಯಿತ್ತು. ಗುರು ತನ್ನ ನೆನೆವನ್ನ ಬರ ಎನ್ನನು ಗುರುವ ಮಾಡಿದನು. ಇನ್ನು ಶಿಷ್ಯನಾಗಿ ಗುರುವ ಪೂಜಿಸುವರಾರು ಹೇಳಾ ಗುಹೇಶ್ವರಾ?" ಎಂದು.
ಗುರುವಿನ ನ್ಯಾಯ ಎಂದರೆ ಭೃಂಗ ಹುಳು ಅರಲಿನ ಗೂಡು ಕಟ್ಟಿ ಅದರಲ್ಲಿ ಒಂದು ಹಸಿರು ಕೀಡೆಯನ್ನು ತಂದು ಅದಕ್ಕೆ ತನ್ನ ಬಾಯಿ ರಸದಿಂದ ಚುಚ್ಚುಮದ್ದು ನೀಡಿ ಒಂದಿಷ್ಟು ಶಬ್ದ ಮಾಡಿ ಹೋಗುತ್ತದೆ. ಕೆಲ ದಿನಗಳ ನಂತರ ಆ ಗೂಡಿನಲ್ಲಿದ್ದ ಕೀಡೆಗಳು ಭೃಂಗವಾಗಿ ಹೊರಬರವವು ಹಾಗೆಯೇ ಗುರುವಾದವನು ಭೃಂಗ ಇದ್ದಂತೆ ಶಿಷ್ಯನೆಂಬ ಕೀಡೆಗೆ ತನ್ನ ಹಸ್ತಮಸ್ತಕ ಸಂಯೋಗದಿಂದ, ಸಂಕಲ್ಪ ಮಾತ್ರದಿಂದ, ದೃಷ್ಟಿಮಾತ್ರದಿಂದ ಆಶಿರ್ವದಿಸುತ್ತಾನೆ ಆಗ ಮಾಂಸ ಪಿಂಡವಾಗಿದ್ದ ಶಿಷ್ಯ ಮಂತ್ರ ಪಿಂಡವಾಗಿ ಗುರುವಿನಂತಾಗುತ್ತಾನೆ. ಶರಣ ಧರ್ಮದಲ್ಲಿ ಜ್ಯೋತಿ ಮುಟ್ಟಿ ಜ್ಯೋತಿಯಂತಾಗುವಂತೆ ಗುರು ಮುಟ್ಟಿ ಗುರುವಾಗುವ ಧಾರ್ಮಿಕ ಸಮಾನತೆ ಇದೆ.
ಈ ರೀತಿಯಾಗಿ ಅಕ್ಕಮಹಾದೇವಿಯು ಗುರು ಮುಟ್ಟಿ ಗುರುವಾಗಿ ಅಪಾರ ಲಿಂಗನಿಷ್ಟೆಯನ್ನು ಸಾಧಿಸುತ್ತಾಳೆ, ಚನ್ನಮಲ್ಲಿಕಾರ್ಜುನನ್ನು ಹಂಬಲ ತುಂಬಿದ ಭಾವದಲ್ಲಿ ಆತ್ಮರತಿಯಾಗಿ ಪೂಜಿಸುತ್ತಾಳೆ, ಪರಮಾತ್ಮನ ಅನಂತತೆ ಮತ್ತು ದಿವ್ಯ ಸ್ವರೂಪವನ್ನು ಅರಿತು ಚುಳುಕಾಗಿ ತನ್ನ ಅಂಗೈಯಲ್ಲಿರುವ ಲಿಂಗವನ್ನು ನೋಡಿ ಆಶ್ಚರ್ಯ ಚಕಿತಳಾಗುತ್ತಾಳೆ; ತನ್ನ ವಚನದಲ್ಲಿ ಅದನ್ನು ಹೀಗೆ ಹೇಳಿಕೊಳ್ಳುತ್ತಾಳೆ. "ಅಯ್ಯಾ !ಪಾತಾಳವಿತ್ತಿತ್ತ, ಶ್ರೀಪಾದವತ್ತತ್ತ ಬ್ರಹ್ಮಾಂಡವಿತ್ತಿತ್ತ, ಮಣಿಮುಕುಟವತ್ತತ್ತ, ಅಯ್ಯಾ ! ದಶದಿಕ್ಕು ಇತ್ತಿತ್ತ, ದಶಭುಜಂಗಳತ್ತತ್ತ ಚನ್ನಮಲ್ಲಿಕಾರ್ಜುನಯ್ಯಾ, ನೀನೆನ್ನ ಕರಸ್ಥಲಕ್ಕೆ ಬಂದು ಚುಳುಕಾದಿರಯ್ಯಾ."
ಪರಮಾತ್ಮನ ಸ್ವರೂಪ ಜಗದಗಲ ಮಿಗಿಲಗಲವಾದದ್ಧು ಮತ್ತು ನಮ್ಮೊಳಗೆ ಓತಪ್ರೋತವಾಗಿ ತುಂಬಿದೆ. ಅಂತಹ ದೇವನನ್ನು ಭೌತಿಕ ವಸ್ತುಗಳಿಂದ ಪೂಜೆ ಮಾಡಿದರೆ ಅವನ ಅಸ್ತಿತ್ವಕ್ಕೆ ಭಂಗ ಬರುವುದು ಎಂದು ತಿಳಿದು, ಸದಾಕಾಲ ಪರಮಾತ್ಮನ ಅಂಗದೊಳಗೆ ಆತ್ಮನಾಗಿರುವುದರಿಂದ ಮಹಾದೇವಿಯು ಅಂಗೈಯಲ್ಲಿ ಲಿಂಗವನ್ನು ಚುಳುಕಾಗಿ ಪೂಜಿಸಿ, ಅಂಗದ ಮೇಲೆ ಧರಿಸುತ್ತಾಳೆ ಮತ್ತು ಅವನಿಂದ ಬಿಟ್ಟು ಬೇರಾಗದ ಅವಿನಾಭಾವ ಸಂಬಂಧದಲ್ಲಿ ಒಂದಾಗುವ ಬಯಕೆಯನ್ನು ಹೊಂದುತ್ತಾಳೆ.
ಇಷ್ಟಲಿಂಗವು ಇದು ಜಾತಿಯ ಕುರುಹು ಅಲ್ಲ; ಆತ್ಮಜ್ಯೋತಿಯ ಕುರುಹು, ನಿರಾಕಾರ ಪರಮಾತ್ಮನ ಸಾಕಾರ ಕುರುಹು. ಅರಿವು ಪಡೆಯಬೇಕೆಂಬ ಹಂಬಲ ಹೊಂದಿರುವ ಮಾನವ ಮಾತ್ರರೆಲ್ಲರೂ ಅಂಗದ ಮೇಲೆ ಧರಿಸಬಹುದಾದ ಸಮಾನತೆಯ ಕುರುಹು. ಇಂತಹ ಇಷ್ಟಲಿಂಗವು ನಮ್ಮೊಳಗಿನ ಜೀವ ಚೈತನ್ಯಕ್ಕೆ ಅರಿವು ಮೂಡಿಸಿ ಆನಂದವನ್ನುಂಟು ಮಾಡುತ್ತದೆ. ಇಷ್ಟಲಿಂಗದ ಮೇಲೆ ಅಪಾರ ನಿಷ್ಟೆ ಹೊಂದಿದ ಮಹಾದೇವಿ "ಲಿಂಗವು ಬಂದೆನ್ನ ಅಂಗದೊಳು ನೆಲೆಸಲು ಅಂಗವು ಲಿಂಗದೊಳಗಾದ ಕಾರಣವು ಹಿಂಗಿದವು ಎನ್ನ ಭವ-ಭವವು" ಎಂದು ಹೇಳಿಕೊಳ್ಳುತ್ತಾ ತಮಗೆ ಬಂದ ಜನ್ಮ ಜನ್ಮಾಂತರದ ಭವಗಳನ್ನು ಕಳೆದುಕೊಂಡಿದ್ದಾಳೆ.
ಮುಂದುವರೆಯುವುದು....
ಪ್ರವಚನಕಾರರು: ಪೂಜ್ಯ ಶ್ರೀ ಸದ್ಗುರು ಬಸವಪ್ರಭು ಸ್ವಾಮೀಜಿಯವರು ಕಲ್ಯಾಣ ಮಹಾಮನೆ ಗುಣತೀರ್ಥ-ಬಸವಕಲ್ಯಾಣ.
ಸ್ಥಳ: ಅಂಬಾ ಭವಾನಿ, ಲಕ್ಷ್ಮೀ ದೇವಸ್ಥಾನ ಮುಡಬಿ.
ವರದಿ: ಶ್ರೀನಾಥ ಬಿ ಕಣಜಿ ಮುಡಬಿ.
Wednesday, 16 February 2022
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಮಂಜುನಾಥ ನಗರದಲ್ಲಿ ಇಕೋ ಕ್ಲಬ್ ಕಾರ್ಯ ಚಟುವಟಿಕೆಗಳು ಸಂಪನ್ನಗಿಂಡವು
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಂಜುನಾಥ ನಗರದಲ್ಲಿ ಇಕೋ ಕ್ಲಬ್ ಕಾರ್ಯ ಚಟುವಟಿಕೆಗಳು ಸಂಪನ್ನಗಿಂಡವು
ಶಿವರಾಮ ಕಾರಂತ ಇಕೋ ಕ್ಲಬ್ ವತಿಯಿಂದ ಜೀವವೈವಿಧ್ಯ ಹಸಿರು ಶಾಲೆ ಕಾರ್ಯಕ್ರಮ ಜೀವ ವೈವಿಧ್ಯಗಳ ರಕ್ಷಣೆ ನಮ್ಮೆಲ್ಲರ ಕರ್ತವ್ಯ: ಶ್ರೀ ನಾಗರಾಜ ಬಾಗನೂರ
ಇಂದು ವಿಶ್ವದ ಅನೇಕ ದೇಶಗಳಲ್ಲಿ ಪರಿಸರ ಮಾಲಿನ್ಯದ ಸಮಸ್ಯೆ ಬಹು ದೊಡ್ಡ ಸವಾಲಾಗಿದ್ದು; ಇದಕ್ಕೆ ಕಾರಣ ಮನುಷ್ಯರು ಪ್ರಕೃತಿಯ ಮೇಲೆ ಮಾಡುತ್ತಿರುವ ಮೀತಿಮಿರಿದ ದೌರ್ಜನ್ಯ. ಇದು ಹಿಗೇಯೆ ಮುಂದುವರೆದರೆ ಮಾನವ ಸಮಾಜ ಉಸಿರಾಡಲು ತೊಂದರೆಯಾಗಿ ನರಳಬೇಕಾದಿತು. ಅನೇಕ ಕಡೆಗಳಲ್ಲಿ ಬಯಲು ಶೌಚಾಲಯಕ್ಕೆ ಹೋಗಿ ಹಾವು ಕಡಿತ, ನಾಯಿಗಳ ದಾಳಿಯಿಂದ, ಪಡ್ಡೆ ಹುಡುಗರಿಂದ ಅತ್ಯಾಚಾರ, ಹತ್ಯಾಚಾರ ಹಾಗೂ ಸಾವು ನೋವುಗಳು ವಿಪರೀತವಾಗಿವೆ. ಆದ್ದರಿಂದ ಪ್ರತಿ ಮನೆಯಲ್ಲಿ ಸುಭದ್ರ ಶೌಚಾಲಯಗಳ ನಿರ್ಮಾಣ ಆಗಲೇಬೇಕು. ಸಜೀವಿ ನಿರ್ಜೀವಿಗಳಲ್ಲಿ ಸಮತೋಲನ ನಿರ್ಮಾಣವಾಗಬೇಕು. ಕರ್ನಾಟಕದ ಮಲೇನಾಡು ಸೇರಿದಂತೆ ಆಸ್ಟ್ರೇಲಿಯಾ, ಆಸ್ಟ್ರೇಲಿಯಾ ಹೀಗೆ ವಿಶ್ವದ ಅನೇಕ ದೇಶಗಳಲ್ಲಿ ಕಾಡ್ಗಿಚ್ಚನಿಂದ ಅಪಾರ ಪ್ರಮಾಣದ ಸಂಪತ್ತು ಹಾಗೂ ಪ್ರಾಣಿ - ಪಕ್ಷಿಗಳ ನಾಶವಾಗುತ್ತಿದೆ. ಇದರ ನಿವಾರಣೆಗಾಗಿ ಹೈದರಾಬಾದಿನಲ್ಲಿ ೨೦೧೨ರಲ್ಲಿ ಅಂತಾರಾಷ್ಟ್ರೀಯ ಜೀವವೈವಿಧ್ಯ ಸಂರಕ್ಷಣಾ ಸಮ್ಮೇಳನ ನಡೆದಿದ್ದು ಐತಿಹಾಸಿಕ ದಾಖಲೆಯಾಗಿದೆ ಎಂದು ಬಿ. ಆರ್. ಪಿಗಳಾದ ನಾಗರಾಜ ಬಾಗನೂರರವರು ತಮ್ಮ ಉಪನ್ಯಾಸದಲ್ಲಿ ವಿಸ್ತ್ರತವಾಗಿ ತಿಳಿಸಿದರು.
ಹುಬ್ಬಳ್ಳಿ ಶಹರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಕ್ಷೇತ್ರ ಸಂಪನ್ಮೂಲ ಕೇಂದ್ರ ಹಾಗೂ ಆನಂದನಗರ ಸಮೂಹ ಸಂಪನ್ಮೂಲ ಕ್ಲಸ್ಟರ್ ಸಹಯೋಗದಲ್ಲಿ ೧೫ ಫೆಬ್ರವರಿ ೨೦೨೨ರಂದು ಸ. ಹಿ. ಪ್ರಾ. ಶಾಲೆ, ಮಂಜುನಾಥ ನಗರದ 'ಶಿವರಾಮ ಕಾರಂತ ಇಕೋ ಕ್ಲಬ್' ವಾರ್ಷಿಕ ಕಾರ್ಯ ಚಟುವಟಿಕೆಗಳ ಸಮಾರೋಪ ಸಮಾರಂಭದ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ನಾಗರಾಜ ಬಾಗನೂರ ಗುರುಗಳು ವಿಮರ್ಶಾತ್ಮಕವಾಗಿ ಮಾತನಾಡುತ್ತ ವಿದ್ಯಾರ್ಥಿಗಳಲ್ಲಿ ಪರಿಸರ ಸಂರಕ್ಷಣೆಯ ಕುರಿತು ಜಾಗೃತಿ ಮೂಡಿಸಿದರು. ಮದ್ದು - ಗುಂಡು ಸಿಡಿಸದೆ ದೀಪಾವಳಿ ಹಾಗೂ ಗಣೇಶ ಹಬ್ಬಗಳನ್ನು ಪರಿಸರ ಸ್ನೇಹಿಯಾಗಿ ಅಚರಿಸಬೇಕೆಂದು ಸಲಹೆ ನೀಡಿದರು.
ವೈಚಾರಿಕ ಸಾಹಿತಿ ಶಿಕ್ಷಕರಾದ ಸುಭಾಷ್ ಚವ್ಹಾಣರವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಸೌರ ಮಂಡಲದಲ್ಲಿ ಅತ್ಯಂತ ವಿಶಿಷ್ಠವಾದ ಹಾಗೂ ಜೀವ ವೈವಿಧ್ಯಮಯ ಗೋಳ ಅದು ನಮ್ಮ ಭೂಮಿಯಾಗಿದೆ. ಇಲ್ಲಿ ನಾವೆಲ್ಲರೂ ನೆಮ್ಮದಿಯಿಂದ ಬದುಕಬೇಕೆಂದರೆ ಗಾಳಿ, ನೀರು, ನೆಲ, ಮಣ್ಣು, ಆಕಾಶ, ಕಾಡು ಬೆಡ್ಡ- ಗುಡ್ಡ ಒಟ್ಟಾರೆ ಪರಿಸರವನ್ನು ಸ್ವಚ್ಛ ಸುಂದರವು ಹಚ್ಚ ಹಸಿರಾಗಿಸಿ ಉಳಿಸಿಕೊಳ್ಳಬೇಕು. ಪರಿಸರ ಮಾಲಿನ್ಯ ಮಾಡದಂತೆ ಮುಂಜಾಗೃತೆಯಾಗಿ ಗಿಡಮರಗಳನ್ನು ನೆಟ್ಟು ಪೋಷಿಸಬೇಕೆಂದು ಸಲಹೆ ನೀಡಿದರು. ಜಾಗತಿಕ ತಾಪಮಾನ, ಓಝೋನ್ ಪದರಿನ ಕ್ಷಿಣತೆ ಹಾಗೂ ವಾಯುಗುಣದಲ್ಲಾಗುವ ವೈಪರೀತ್ಯಗಳ ನಿವಾರಣೆಗೆ ಪ್ಲಾಸ್ಟಿಕ್ ಬಳಕೆ, ಹಾನಿಕಾರಕ ಸಲ್ಪರ್ ಮೋನಾಕ್ಸೈಡ್, ಇಂಗಾಲದ ಡೈಆಕ್ಸೈಡ್....ಬಳಕೆಯನ್ನು ತಗ್ಗಿಸಬೇಕಾಗಿದೆ ಎಬ ಅರಿವು ಮೂಡಿಸಿದರು.
ಪರಿಸರ ಸ್ವಚ್ಚತಾ ಮತ್ತು ಸಮೃದ್ದಿ ಕುರಿತು ಏರ್ಪಡಿಸಿದ್ದ ಚಿತ್ರಕಲೆ ಸ್ಪರ್ಧೆಯಲ್ಲಿ ೦೫ ನೇ ವರ್ಗದ ಕು. ಚೇತನ ವಿ. ಪುಟಗೆ, ಕು. ಅಭಿಷೇಕ ಯ. ಬಿಜಾಪುರ ಹಾಗೂ ಕು. ಗಂಗಮ್ಮಾ ಮಂ. ಗಂಗಾವತಿ ಕ್ರಮವಾಗಿ ಪ್ರಥಮ, ದ್ವೀತಿಯ, ತೃತೀಯ ಸ್ಥಾನ ಪಡೆದರು. ಪರಿಸರ ಸಂರಕ್ಷಣೆ ಪ್ರಬಂಧ ಸ್ಪರ್ಧೆಯಲ್ಲಿ ವೀಜೇತರಾದ ೦೭ನೇ ತರಗತಿಯ ಕು. ಆಸ್ಮಾಭಾನು ಡೋರಳ್ಳಿ, ಕು. ತುಳಸಿ ದೇವರಮನಿ, ಕು. ಕುಸುಮಾ ಹಿರೇಮಠ ಹಾಗೂ ೦೬ ನೇ ವರ್ಗದ ಕು. ಅಂಕಿತಾ ಐನಳ್ಳಿ, ಕು. ರಕ್ಷಿತಾ ಸಾಳುಂಕೆ, ಕು. ಪವಿತ್ರಾ ಜಾಲಗಾರ ವಿದ್ಯಾರ್ಥಿನಿಯರು ಕ್ರಮವಾಗಿ ಪ್ರಥಮ, ದ್ವೀತಿಯ ಮತ್ತು ತೃತೀಯ ಸ್ಥಾನ ಪಡೆದ ನಿಮಿತ್ತ ಶಬ್ದಕೋಶ, ವಚನಗಳ ಪುಸ್ತಕಗಳನ್ನು ಬಹುಮಾನದ ರೂಪದಲ್ಲಿ ನೀಡಿ ಗೌರವಿಸಲಾಯಿತು.
ಆನಂದನಗರ ಸಮೂಹ ಸಂಪನ್ಮೂಲ ಕೇಂದ್ರದ ಸಿ. ಆರ್. ಪಿಗಳಾದ ಪಿ. ಹೆಚ್. ಹಳ್ಯಾಳ ಗುರುಗಳು ಮುಖ್ಯ ಅತಿಥಿಗಳಾಗಿ ಮಾತನಾಡುತ್ತ ಪರಿಸರ ಜಾಗೃತಿ ಕಾರ್ಯಕಲಾಪಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು ಹಾಗೂ ವಿಜೇತ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದರು.
ಸದರಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಭಾರಿ ಗುರುಮಾತೆಯರಾದ ಶ್ರೀಮತಿ ಸಾವಿತ್ರಿ ಹರನಾಳ ರವರುವಹಿಸಿದ್ದರು. ಹಿರಿಯ ಶಿಕ್ಷಕಿಯರಾದ ಶ್ರೀಮತಿ ಪುಷ್ಪಾ ದೇಸಾಯಿ, ಶ್ರೀಮತಿ ಕುಸುಮಾ ಚಕ್ರಸಾಲಿ, ಶ್ರೀಮತಿ ರೂಪ ಹೆಬ್ಬಳ್ಳಿಯವರು ಗೌರವ ಉಪಸ್ಥಿತರಾಗಿದ್ದರು. ಹಿರಿಯ ಶಿಕ್ಷಕಿಯರಾದ ಶ್ರೀಮತಿ ಮಂಜುಳಾ ಸಾತಪುತೆ, ವಿಜ್ಞಾನ ಶಿಕ್ಷಕಿಯರಾದ ಶ್ರೀಮತಿ ಸುಶೀಲಾ ಈರಗಾರ, ಶ್ರೀ ಸುಭಾಷ್ ಚವ್ಹಾಣರವರು ಈ ಮೊದಲೆ ಏರ್ಪಡಿಸಿದ್ದ ಪರಿಸರ ಕುರಿತ ಸ್ಪರ್ಧೆಗಳ ನಿರ್ಣಾಯಕರಾಗಿ ಕಾರ್ಯ ನಿರ್ವಹಿಸಿದ್ದರು.
ಕುಮಾರಿ ಅಂಜು ಜಾವುರ್, ಸಂಜನಾ ಗೋಜನೂರ, ಪ್ರೀತಿ ತಾಳಿಕೋಟಿ, ನೀವೇದಿತಾ ಘೋಡಕೆ ಪ್ರಾರ್ಥನಾ ಗೀತೆ ಹಾಡಿದರು. ದೈಹಿಕ ಶಿಕ್ಷಕರಾದ ಶ್ರೀ ಭೀಮರಡ್ಡಿ ಅಬ್ಬಿಗೇರಿಯವರು ಸ್ವಾಗತಿಸಿ ವಂದಿಸಿದರು
ಸುಹೇಚ ಪರಮವಾಡಿ
ಪ್ರೇಮ ಕಾಶ್ಮೀರದಲ್ಲಿ ರಕ್ತದೋಕುಳಿ; ಹಿಂದೂಗಳೇ ಟಾರ್ಗೆಟ...!
ಪ್ರೇಮ ಕಾಶ್ಮೀರದಲ್ಲಿ ರಕ್ತದೋಕುಳಿ; ಹಿಂದೂಗಳೇ ಟಾರ್ಗೆಟ್. ಭೂಲೋಕದ ಸ್ವರ್ಗವೆಂದೇ ಕರೆಯುವ ಜಮ್ಮು-ಕಾಶ್ಮೀರದ ಪೆಹಲ್ಗಾಮ್ ಸಮೀಪದ ಬೈಸರನ್ ಹುಲ್ಲುಗಾವಲಿನಲ್ಲಿ ಪಾಕ್ ಪ್...
.jpg)
-
ಹೈದರಾಬಾದ್ : ಇಂದು ಬೆಳಿಗ್ಗೆ ಬೀದರನಲ್ಲಿ ನಡೆದ ಎಟಿಎಂ ದರೋಡೆಕೋರರೆ ನಗರದ ಅಫ್ಜಲಗಂಜನಲ್ಲಿರುವ ರೋಷನ ಟ್ರಾವೆಲ್ ಕಛೆರಿಯಲ್ಲಿ ಪೊಲೀಸ್ ಮತ್ತು ದರೋಡೆಕೋರ ಮಧ್ಯೆ ಗುಂಡಿನ ...
-
ಬೀದರ್: ಎಟಿಎಂಗೆ ಹಣ ಹಾಕಲು ಬಂದ ಬ್ಯಾಂಕ್ ಸಿಬ್ಬಂದಿ ಮೇಲೆ ಹಾಡಹಗಲೇ ಗುಂಡಿನ ದಾಳಿ ನಡೆಸಿರುವ ಘಟನೆಯೊಂದು ಬೀದರ್ನ ಎಸ್ಬಿಐ ಮುಖ್ಯ ಕಚೇರಿ ಮುಂದೆ ಗುರುವಾರ ನಡೆದಿದೆ. ...
-
ಶೋಧವಾಣಿ ಜಾಲಲೋಕ ಹೈದರಾಬಾದ್ : ಸಂಘಟಿತ ಹೋರಾಟ ಇಂದಿನ ದಿನಮಾನದ ಜರೂರು ಹೊರನಾಡು ಗಡಿನಾಡಿನ ಕನ್ನಡಿಗರ ಹಿತಕಾಯಲು ಯಾರೂ ಇಲ್ಲವೆನ್ನುವ ಅನಾಥಪ್ರಜ್ಞೆ ಸರಿಯಲ್ಲ. ಭಾಷೆಯ...