ads

Search This Blog

Wednesday, 16 February 2022

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಮಂಜುನಾಥ ನಗರದಲ್ಲಿ ಇಕೋ ಕ್ಲಬ್ ಕಾರ್ಯ ಚಟುವಟಿಕೆಗಳು ಸಂಪನ್ನಗಿಂಡವು

 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ  ಮಂಜುನಾಥ ನಗರದಲ್ಲಿ ಇಕೋ ಕ್ಲಬ್ ಕಾರ್ಯ ಚಟುವಟಿಕೆಗಳು ಸಂಪನ್ನಗಿಂಡವು

ಶಿವರಾಮ ಕಾರಂತ ಇಕೋ ಕ್ಲಬ್ ವತಿಯಿಂದ ಜೀವವೈವಿಧ್ಯ ಹಸಿರು ಶಾಲೆ ಕಾರ್ಯಕ್ರಮ ಜೀವ ವೈವಿಧ್ಯಗಳ ರಕ್ಷಣೆ ನಮ್ಮೆಲ್ಲರ ಕರ್ತವ್ಯ: ಶ್ರೀ ನಾಗರಾಜ ಬಾಗನೂರ


       ಇಂದು ವಿಶ್ವದ ಅನೇಕ ದೇಶಗಳಲ್ಲಿ ಪರಿಸರ ಮಾಲಿನ್ಯದ ಸಮಸ್ಯೆ ಬಹು ದೊಡ್ಡ ಸವಾಲಾಗಿದ್ದು; ಇದಕ್ಕೆ ಕಾರಣ ಮನುಷ್ಯರು ಪ್ರಕೃತಿಯ ಮೇಲೆ ಮಾಡುತ್ತಿರುವ ಮೀತಿಮಿರಿದ ದೌರ್ಜನ್ಯ. ಇದು ಹಿಗೇಯೆ ಮುಂದುವರೆದರೆ ಮಾನವ ಸಮಾಜ ಉಸಿರಾಡಲು ತೊಂದರೆಯಾಗಿ ನರಳಬೇಕಾದಿತು. ಅನೇಕ ಕಡೆಗಳಲ್ಲಿ ಬಯಲು ಶೌಚಾಲಯಕ್ಕೆ ಹೋಗಿ ಹಾವು ಕಡಿತ, ನಾಯಿಗಳ ದಾಳಿಯಿಂದ, ಪಡ್ಡೆ ಹುಡುಗರಿಂದ ಅತ್ಯಾಚಾರ, ಹತ್ಯಾಚಾರ ಹಾಗೂ ಸಾವು ನೋವುಗಳು ವಿಪರೀತವಾಗಿವೆ. ಆದ್ದರಿಂದ ಪ್ರತಿ ಮನೆಯಲ್ಲಿ ಸುಭದ್ರ ಶೌಚಾಲಯಗಳ ನಿರ್ಮಾಣ ಆಗಲೇಬೇಕು. ಸಜೀವಿ ನಿರ್ಜೀವಿಗಳಲ್ಲಿ ಸಮತೋಲನ ನಿರ್ಮಾಣವಾಗಬೇಕು. ಕರ್ನಾಟಕದ ಮಲೇನಾಡು ಸೇರಿದಂತೆ ಆಸ್ಟ್ರೇಲಿಯಾ, ಆಸ್ಟ್ರೇಲಿಯಾ ಹೀಗೆ ವಿಶ್ವದ ಅನೇಕ ದೇಶಗಳಲ್ಲಿ ಕಾಡ್ಗಿಚ್ಚನಿಂದ ಅಪಾರ ಪ್ರಮಾಣದ ಸಂಪತ್ತು ಹಾಗೂ ಪ್ರಾಣಿ - ಪಕ್ಷಿಗಳ ನಾಶವಾಗುತ್ತಿದೆ.  ಇದರ ನಿವಾರಣೆಗಾಗಿ ಹೈದರಾಬಾದಿನಲ್ಲಿ ೨೦೧೨ರಲ್ಲಿ ಅಂತಾರಾಷ್ಟ್ರೀಯ ಜೀವವೈವಿಧ್ಯ ಸಂರಕ್ಷಣಾ ಸಮ್ಮೇಳನ ನಡೆದಿದ್ದು ಐತಿಹಾಸಿಕ ದಾಖಲೆಯಾಗಿದೆ ಎಂದು ಬಿ. ಆರ್. ಪಿಗಳಾದ ನಾಗರಾಜ ಬಾಗನೂರರವರು ತಮ್ಮ ಉಪನ್ಯಾಸದಲ್ಲಿ ವಿಸ್ತ್ರತವಾಗಿ ತಿಳಿಸಿದರು.

         ಹುಬ್ಬಳ್ಳಿ ಶಹರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಕ್ಷೇತ್ರ ಸಂಪನ್ಮೂಲ ಕೇಂದ್ರ ಹಾಗೂ ಆನಂದನಗರ ಸಮೂಹ ಸಂಪನ್ಮೂಲ ಕ್ಲಸ್ಟರ್ ಸಹಯೋಗದಲ್ಲಿ ೧೫ ಫೆಬ್ರವರಿ ೨೦೨೨ರಂದು ಸ. ಹಿ. ಪ್ರಾ. ಶಾಲೆ, ಮಂಜುನಾಥ ನಗರದ 'ಶಿವರಾಮ ಕಾರಂತ ಇಕೋ ಕ್ಲಬ್' ವಾರ್ಷಿಕ ಕಾರ್ಯ ಚಟುವಟಿಕೆಗಳ ಸಮಾರೋಪ ಸಮಾರಂಭದ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ನಾಗರಾಜ ಬಾಗನೂರ ಗುರುಗಳು ವಿಮರ್ಶಾತ್ಮಕವಾಗಿ ಮಾತನಾಡುತ್ತ ವಿದ್ಯಾರ್ಥಿಗಳಲ್ಲಿ ಪರಿಸರ ಸಂರಕ್ಷಣೆಯ ಕುರಿತು ಜಾಗೃತಿ ಮೂಡಿಸಿದರು. ಮದ್ದು - ಗುಂಡು ಸಿಡಿಸದೆ ದೀಪಾವಳಿ ಹಾಗೂ ಗಣೇಶ ಹಬ್ಬಗಳನ್ನು ಪರಿಸರ ಸ್ನೇಹಿಯಾಗಿ ಅಚರಿಸಬೇಕೆಂದು ಸಲಹೆ ನೀಡಿದರು.

         ವೈಚಾರಿಕ ಸಾಹಿತಿ ಶಿಕ್ಷಕರಾದ ಸುಭಾಷ್ ಚವ್ಹಾಣರವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಸೌರ ಮಂಡಲದಲ್ಲಿ ಅತ್ಯಂತ ವಿಶಿಷ್ಠವಾದ ಹಾಗೂ ಜೀವ ವೈವಿಧ್ಯಮಯ ಗೋಳ ಅದು ನಮ್ಮ ಭೂಮಿಯಾಗಿದೆ. ಇಲ್ಲಿ ನಾವೆಲ್ಲರೂ ನೆಮ್ಮದಿಯಿಂದ ಬದುಕಬೇಕೆಂದರೆ ಗಾಳಿ, ನೀರು, ನೆಲ, ಮಣ್ಣು, ಆಕಾಶ, ಕಾಡು ಬೆಡ್ಡ- ಗುಡ್ಡ ಒಟ್ಟಾರೆ ಪರಿಸರವನ್ನು ಸ್ವಚ್ಛ ಸುಂದರವು ಹಚ್ಚ ಹಸಿರಾಗಿಸಿ ಉಳಿಸಿಕೊಳ್ಳಬೇಕು. ಪರಿಸರ ಮಾಲಿನ್ಯ ಮಾಡದಂತೆ ಮುಂಜಾಗೃತೆಯಾಗಿ ಗಿಡಮರಗಳನ್ನು ನೆಟ್ಟು ಪೋಷಿಸಬೇಕೆಂದು ಸಲಹೆ ನೀಡಿದರು. ಜಾಗತಿಕ ತಾಪಮಾನ, ಓಝೋನ್ ಪದರಿನ ಕ್ಷಿಣತೆ ಹಾಗೂ ವಾಯುಗುಣದಲ್ಲಾಗುವ ವೈಪರೀತ್ಯಗಳ ನಿವಾರಣೆಗೆ ಪ್ಲಾಸ್ಟಿಕ್ ಬಳಕೆ, ಹಾನಿಕಾರಕ ಸಲ್ಪರ್ ಮೋನಾಕ್ಸೈಡ್, ಇಂಗಾಲದ ಡೈಆಕ್ಸೈಡ್....ಬಳಕೆಯನ್ನು ತಗ್ಗಿಸಬೇಕಾಗಿದೆ ಎಬ ಅರಿವು ಮೂಡಿಸಿದರು.

           ಪರಿಸರ ಸ್ವಚ್ಚತಾ ಮತ್ತು ಸಮೃದ್ದಿ ಕುರಿತು ಏರ್ಪಡಿಸಿದ್ದ ಚಿತ್ರಕಲೆ ಸ್ಪರ್ಧೆಯಲ್ಲಿ ೦೫ ನೇ ವರ್ಗದ ಕು. ಚೇತನ ವಿ. ಪುಟಗೆ, ಕು. ಅಭಿಷೇಕ ಯ. ಬಿಜಾಪುರ ಹಾಗೂ ಕು. ಗಂಗಮ್ಮಾ ಮಂ. ಗಂಗಾವತಿ ಕ್ರಮವಾಗಿ ಪ್ರಥಮ, ದ್ವೀತಿಯ, ತೃತೀಯ ಸ್ಥಾನ ಪಡೆದರು. ಪರಿಸರ ಸಂರಕ್ಷಣೆ ಪ್ರಬಂಧ ಸ್ಪರ್ಧೆಯಲ್ಲಿ ವೀಜೇತರಾದ ೦೭ನೇ ತರಗತಿಯ ಕು. ಆಸ್ಮಾಭಾನು ಡೋರಳ್ಳಿ, ಕು. ತುಳಸಿ ದೇವರಮನಿ, ಕು. ಕುಸುಮಾ ಹಿರೇಮಠ ಹಾಗೂ ೦೬ ನೇ ವರ್ಗದ ಕು. ಅಂಕಿತಾ ಐನಳ್ಳಿ, ಕು. ರಕ್ಷಿತಾ ಸಾಳುಂಕೆ, ಕು. ಪವಿತ್ರಾ ಜಾಲಗಾರ ವಿದ್ಯಾರ್ಥಿನಿಯರು ಕ್ರಮವಾಗಿ ಪ್ರಥಮ, ದ್ವೀತಿಯ ಮತ್ತು ತೃತೀಯ ಸ್ಥಾನ ಪಡೆದ ನಿಮಿತ್ತ ಶಬ್ದಕೋಶ, ವಚನಗಳ ಪುಸ್ತಕಗಳನ್ನು ಬಹುಮಾನದ ರೂಪದಲ್ಲಿ ನೀಡಿ ಗೌರವಿಸಲಾಯಿತು.


     ಆನಂದನಗರ ಸಮೂಹ ಸಂಪನ್ಮೂಲ ಕೇಂದ್ರದ ಸಿ. ಆರ್. ಪಿಗಳಾದ ಪಿ. ಹೆಚ್. ಹಳ್ಯಾಳ ಗುರುಗಳು ಮುಖ್ಯ ಅತಿಥಿಗಳಾಗಿ ಮಾತನಾಡುತ್ತ ಪರಿಸರ ಜಾಗೃತಿ ಕಾರ್ಯಕಲಾಪಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು ಹಾಗೂ ವಿಜೇತ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದರು. 

                 ಸದರಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಭಾರಿ ಗುರುಮಾತೆಯರಾದ ಶ್ರೀಮತಿ ಸಾವಿತ್ರಿ ಹರನಾಳ ರವರುವಹಿಸಿದ್ದರು. ಹಿರಿಯ ಶಿಕ್ಷಕಿಯರಾದ ಶ್ರೀಮತಿ ಪುಷ್ಪಾ ದೇಸಾಯಿ, ಶ್ರೀಮತಿ ಕುಸುಮಾ ಚಕ್ರಸಾಲಿ, ಶ್ರೀಮತಿ ರೂಪ ಹೆಬ್ಬಳ್ಳಿಯವರು ಗೌರವ ಉಪಸ್ಥಿತರಾಗಿದ್ದರು. ಹಿರಿಯ ಶಿಕ್ಷಕಿಯರಾದ ಶ್ರೀಮತಿ ಮಂಜುಳಾ ಸಾತಪುತೆ, ವಿಜ್ಞಾನ ಶಿಕ್ಷಕಿಯರಾದ ಶ್ರೀಮತಿ ಸುಶೀಲಾ ಈರಗಾರ, ಶ್ರೀ ಸುಭಾಷ್ ಚವ್ಹಾಣರವರು ಈ ಮೊದಲೆ ಏರ್ಪಡಿಸಿದ್ದ ಪರಿಸರ ಕುರಿತ ಸ್ಪರ್ಧೆಗಳ ನಿರ್ಣಾಯಕರಾಗಿ ಕಾರ್ಯ ನಿರ್ವಹಿಸಿದ್ದರು.

    ಕುಮಾರಿ ಅಂಜು ಜಾವುರ್, ಸಂಜನಾ ಗೋಜನೂರ, ಪ್ರೀತಿ ತಾಳಿಕೋಟಿ, ನೀವೇದಿತಾ ಘೋಡಕೆ ಪ್ರಾರ್ಥನಾ ಗೀತೆ ಹಾಡಿದರು. ದೈಹಿಕ ಶಿಕ್ಷಕರಾದ ಶ್ರೀ ಭೀಮರಡ್ಡಿ ಅಬ್ಬಿಗೇರಿಯವರು ಸ್ವಾಗತಿಸಿ ವಂದಿಸಿದರು

     ಸುಹೇಚ ಪರಮವಾಡಿ

No comments:

ಪ್ರೇಮ ಕಾಶ್ಮೀರದಲ್ಲಿ ರಕ್ತದೋಕುಳಿ; ಹಿಂದೂಗಳೇ ಟಾರ್ಗೆಟ...!

  ಪ್ರೇಮ ಕಾಶ್ಮೀರದಲ್ಲಿ ರಕ್ತದೋಕುಳಿ; ಹಿಂದೂಗಳೇ ಟಾರ್ಗೆಟ್. ಭೂಲೋಕದ ಸ್ವರ್ಗವೆಂದೇ ಕರೆಯುವ ಜಮ್ಮು-ಕಾಶ್ಮೀರದ ಪೆಹಲ್ಗಾಮ್ ಸಮೀಪದ ಬೈಸರನ್ ಹುಲ್ಲುಗಾವಲಿನಲ್ಲಿ ಪಾಕ್ ಪ್...