ads

Search This Blog

Thursday, 19 December 2024

ಇಂಡಿಯಾ ಬಣ ಆಕ್ರೋಶದ ನಡುವೆ ಅಮಿತ್ ಶಾ ಭೇಟಿಯಾದ ಸಿಎಂ ಒಮರ್ ಅಬ್ದುಲ್ಲಾ

 

ಇಂಡಿಯಾ ಬಣ ಆಕ್ರೋಶದ ನಡುವೆ ಅಮಿತ್ ಶಾ ಭೇಟಿಯಾದ ಸಿಎಂ ಒಮರ್ ಅಬ್ದುಲ್ಲಾ

ನವದೆಹಲಿ: ಅಂಬೇಡ್ಕರ್ ಕುರಿತ ಮಾತುಗಳಿಂದ ಅಮಿತ್ ಶಾ ವಿರುದ್ಧ 'ಇಂಡಿಯಾ' ಬಣದ ಪಕ್ಷಗಳು ರಾಷ್ಟ್ರ ರಾಜಧಾನಿ ಸೇರಿದಂತೆ ಹಲವೆಡೆ ಪ್ರತಿಭಟನೆ ನಡೆಸುತ್ತಿದ್ದರೆ ಇತ್ತ ವಿರೋಧ ಪಕ್ಷಗಳ ಕೂಟದಲ್ಲಿರುವ ನ್ಯಾಶನಲ್ ಕಾಂಗ್ರೆಸ್ ನ ಜಮ್ಮು-ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಕೇಂದ್ರ ಗೃಹ ಸಚಿವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

ಇತ್ತೀಚಿಗೆ ಇವಿಎಂಗಳ ಲೋಪ ಕುರಿತ ಕಾಂಗ್ರೆಸ್ ನಡೆಯನ್ನು ಟೀಕಿಸಿದ್ದ ಒಮರ್ ಅಬ್ದುಲ್ಲಾ, ಇದೀಗ ಅಂಬೇಡ್ಕರ್ ಕುರಿತ ಟೀಕೆಗೆ ಯಾವುದೇ ಪ್ರತಿಕ್ರಿಯೆ ನೀಡದೆ ಅಮಿತ್ ಶಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ಅಮಿತ್ ಶಾ ಅವರೊಂದಿಗೆ ಜಮ್ಮು-ಕಾಶ್ಮೀರಕ್ಕೆ ಶೀಘ್ರದಲ್ಲೇ ರಾಜ್ಯ ಸ್ಥಾನಮಾನ ಮರು ಸ್ಥಾಪನೆ ಸೇರಿದಂತೆ ಹಲವು ವಿಷಯಗಳ ಕುರಿತು ಒಮರ್ ಅಬ್ದುಲ್ಲಾ ಚರ್ಚಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 370ನೇ ವಿಧಿ ರದ್ದುಗೊಂಡ ನಂತರ ಕೇಂದ್ರಾಡಳಿತ ಪ್ರದೇಶದ ಮೊದಲ ಸಿಎಂ ಆಗಿ ಅಬ್ದುಲ್ಲಾ ಅಧಿಕಾರ ವಹಿಸಿಕೊಂಡ ನಂತರ ಅಮಿತ್ ಶಾ ಅವರನ್ನು ಎರಡನೇ ಬಾರಿಗೆ ಭೇಟಿಯಾಗಿದ್ದಾರೆ.



ತೆಲಂಗಾಣ ಮಾಜಿ ಸಚಿವಗೆ ಸಂಕಷ್ಟ; ಬಹು ಕೋಟಿ ಅಕ್ರಮ ಪ್ರಕರಣದಲ್ಲಿ ಎ1 ಆರೋಪಿ

 

ತೆಲಂಗಾಣ ಮಾಜಿ ಸಚಿವಗೆ ಸಂಕಷ್ಟ; ಬಹು ಕೋಟಿ ಅಕ್ರಮ ಪ್ರಕರಣದಲ್ಲಿ ಎ1 ಆರೋಪಿ

ಹೈದರಾಬಾದ್: ಭಾರತ್‌ ರಾಷ್ಟ್ರ ಸಮಿತಿ (BRS) ಪಕ್ಷದ ನಾಯಕ ಹಾಗೂ ಮಾಜಿ ಸಿಎಂ ಕೆ ಚಂದ್ರಶೇಖರ್ ರಾವ್ ಅವರ ಪುತ್ರ ಕೆಟಿ ರಾಮಾರಾವ್ (KTR)ಗೆ ಸಂಕಷ್ಟ ಎದುರಾಗಿದ್ದು, ಬಹುಕೋಟಿ Formula E race ಭ್ರಷ್ಟಾಚಾರ ಪ್ರಕರಣದಲ್ಲಿ ಅವರನ್ನು ಎ1 ಆರೋಪಿಯನ್ನಾಗಿ ಮಾಡಲಾಗಿದೆ.

ಹೌದು.. ತೆಲಂಗಾಣದ ಹಿಂದಿನ ಬಿಆರ್‌ಎಸ್‌ (ಭಾರತ್‌ ರಾಷ್ಟ್ರ ಸಮಿತಿ) ಸರಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದ ಫಾರ್ಮುಲಾ ಇ ರೇಸ್‌ನಲ್ಲಿ ಹಣಕಾಸು ಅವ್ಯವಹಾರ ಆರೋಪಗಳಿಗೆ ಸಂಬಂಧಿಸಿದಂತೆ ಬಿಆರ್‌ಎಸ್‌ ಶಾಸಕ, ಮಾಜಿ ಸಚಿವ ಕೆ.ಟಿ. ರಾಮರಾವ್‌ ವಿರುದ್ಧ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲ ಜಿಷ್ಣುದೇವ್‌ ವರ್ಮಾ ಅವರು ಬುಧವಾರ ಅನುಮತಿ ನೀಡಿದ್ದಾರೆ. ಇದರೊಂದಿಗೆ ಬಿಆರ್‌ಎಸ್‌ ಕಾರ್ಯಾಧ್ಯಕ್ಷರೂ ಆಗಿರುವ ಕೆಟಿಆರ್‌ಗೆ ಸಂಕಟ ಎದುರಾಗಿದ್ದು, ಕೆ.ಟಿ. ರಾಮರಾವ್‌ ಅವರು ಪೌರಾಡಳಿತ ಸಚಿವರಾಗಿದ್ದ ಸಂದರ್ಭದಲ್ಲಿ ನಿಯಮಗಳನ್ನು ಅನುಸರಿಸದೇ ಫಾರ್ಮುಲಾ ಇ ರೇಸ್‌ ಆಯೋಜಕರಿಗೆ 55 ಕೋಟಿ ರೂ. ವರ್ಗಾಯಿಸಲು ಅನುಮತಿ ನೀಡಿದ್ದರು. ಇದರಲ್ಲಿಅಕ್ರಮಗಳು ನಡದಿವೆ ಎಂದು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಆರೋಪಿಸಿದೆ. ಈಗ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಎಸಿಬಿ ತನಿಖೆ ನಡೆಯಲಿದೆ ಎಂದು ಮೂಲಗಳು ಹೇಳಿವೆ.

ಎಸಿಬಿ ಮೂಲಗಳ ಪ್ರಕಾರ, ಕೆಟಿ ರಾಮಾರಾವ್ ಅಲ್ಲದೆ ಆಗಿನ ಪುರಸಭೆ ಆಡಳಿತ ವಿಶೇಷ ಮುಖ್ಯ ಕಾರ್ಯದರ್ಶಿಯಾಗಿದ್ದ ಐಎಎಸ್ ಅಧಿಕಾರಿ ಅರವಿಂದ್ ಕುಮಾರ್ ಅವರನ್ನು ಆರೋಪಿ-2 (ಎ-2), ಮುಖ್ಯ ಎಂಜಿನಿಯರ್ ಬಿಎಲ್‌ಎನ್ ರೆಡ್ಡಿ ಅವರನ್ನು ಆರೋಪಿ-3 (ಎ-3) ಎಂದು ಹೆಸರಿಸಲಾಗಿದೆ. ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ 13(1)(ಎ) ಮತ್ತು 13(2)(ಎ) ಹಾಗೂ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 409 ಮತ್ತು 120(ಬಿ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

ಅದಾನಿ, ಅಮಿತ್ ಶಾ ವಿವಾದದಿಂದ ಗಮನ ಬೇರೆಡೆ ಸೆಳೆಯುವ ಬಿಜೆಪಿ ತಂತ್ರ- ರಾಹುಲ್

 

ಅದಾನಿ, ಅಮಿತ್ ಶಾ ವಿವಾದದಿಂದ ಗಮನ ಬೇರೆಡೆ ಸೆಳೆಯುವ ಬಿಜೆಪಿ ತಂತ್ರ- ರಾಹುಲ್

ನವದೆಹಲಿ: ಸಂಸತ್ ಆವರಣದಲ್ಲಿ ಗುರುವಾರ ಆಡಳಿತಾರೂಢ ಎನ್ ಡಿಎ ಹಾಗೂ ವಿಪಕ್ಷಗಳ ಪ್ರತಿಭಟನೆ ವೇಳೆಯಲ್ಲಿನ ನಡೆದ ತಳ್ಳಾಟ- ನೂಕಾಟ ಕುರಿತು ಪ್ರತಿಕ್ರಿಯಿಸಿರುವ ರಾಹುಲ್ ಗಾಂಧಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಅಂಬೇಡ್ಕರ್ ಕುರಿತು ಅಮಿತ್ ಶಾ ಹೇಳಿಕೆ ಮತ್ತು ಅಮೆರಿಕದ ನ್ಯಾಯಾಲಯದಲ್ಲಿ ಅದಾನಿ ವಿರುದ್ಧ ಚಾರ್ಜ್ ಶೀಟ್ ವಿವಾದದಿಂದ ಗಮನ ಬೇರೆಡೆ ಸೆಳೆಯುವ ಬಿಜೆಪಿಯ ತಂತ್ರವಾಗಿದೆ ಎಂದು ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಎಲ್ಲಾ ಸಂಸದರು ಶಾಂತಯುತವಾಗಿ ಸಂಸತ್ ಭವನಕ್ಕೆ ಹೋಗುತ್ತಿದ್ದರು. ಸಂಸತ್ ಭವನದ ಮೆಟ್ಟಿಲುಗಳ ಮೇಲೆ ನಿಂತಿದ್ದ ಬಿಜೆಪಿ ಸಂಸದರು ನಮ್ಮನ್ನು ತಡೆದರು. ನರೇಂದ್ರ ಮೋದಿ ಅವರ ಸ್ನೇಹಿತ ಅದಾನಿ ವಿರುದ್ಧ ಅಮೆರಿಕದ ನ್ಯಾಯಾಲಯದ ಕೇಸ್ ನಡೆಯುತ್ತಿದೆ. ಮೋದಿ ಭಾರತವನ್ನು ಅದಾನಿಗೆ ಮಾರಾಟ ಮಾಡುತ್ತಿದ್ದಾರೆ. ಇದು ಈ ವಿವಾದಕ್ಕೆ ಪ್ರಮುಖ ಕಾರಣವಾಗಿದೆ. ಸಂಸತ್ತಿನಲ್ಲಿ ಈ ಕುರಿತ ಚರ್ಚೆಗೆ ಬಿಜೆಪಿ ಸಿದ್ಧವಿಲ್ಲ ಎಂದು ಆರೋಪಿಸಿದರು.

ಬೆಳೆನಷ್ಟ, ಸಾಲಬಾಧೆ, ಬಾಲ್ಕಿಯಲ್ಲಿ ಮಹಾರಾಷ್ಟ್ರದ ರೈತ ಆತ್ಮಹತ್ಯೆ

 

ಬೆಳೆನಷ್ಟ, ಸಾಲಬಾಧೆ, ಬಾಲ್ಕಿಯಲ್ಲಿ ಮಹಾರಾಷ್ಟ್ರದ ರೈತ ಆತ್ಮಹತ್ಯೆ

ಬೀದರ್: ಬೆಳೆ ನಷ್ಟ, ಸಾಲಬಾಧೆಯಿಂದ ನೊಂದ ಮಹಾರಾಷ್ಟ್ರದ ರೈತನೋರ್ವ ನೆರೆಯ ಕರ್ನಾಟಕದ ಬೀದರ್ ಜಿಲ್ಲೆಯಲ್ಲಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.

ಮೃತನನ್ನು ಸೋಮಶ್ವೇರ್ ಖಂಡು ಮುಗಳೆ(33) ಎಂದು ಗುರುತಿಸಲಾಗಿದೆ. ಮಹಾರಾಷ್ಟ್ರದ ಲಾತೂರ್ ಜಿಲ್ಲೆಯ ಡಿಯೋನಿ ತಹಸಿಲ್‌ನ ಇಸ್ಮಾಲವಾಡಿ ಗ್ರಾಮದ ರೈತ ಅಲ್ಲಿಂದ ಸುಮಾರು 140 ಕಿಲೋ ಮೀಟರ್ ದೂರದಲ್ಲಿರುವ ಬೀದರ್ ಜಿಲ್ಲೆಯ ಭಾಲ್ಕಿಯ ಭಂಟ್ಬ್ರಾ ಗ್ರಾಮದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಬೆಳೆ ನಷ್ಟ ಹಾಗೂ ಸಾಲಬಾಧೆಯಿಂದ ತುಂಬಾ ಹತಾಶೆಗೆ ಒಳಗಾಗಿದ್ದರು ಎಂದು ಅವರ ಸಂಬಂಧಿಕರು ತಿಳಿಸಿದ್ದಾರೆ. ಪತ್ನಿ ಹಾಗೂ ಮೂವರು ಪುತ್ರಿಯರನ್ನು ಅಗಲಿರುವ ಮುಗಳೆ ಎರಡು ಎಕರೆ ಜಮೀನಿನಲ್ಲಿ ಸೋಯಾಬೀನ್ ಬೆಳೆದಿದ್ದರು ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ.

ಅಶ್ಲೀಲ ಪದ ಬಳಕೆ: ಬಿಜೆಪಿ ಸಿಟಿ ರವಿ ಬಂಧನ

 ಅಶ್ಲೀಲ ಪದ ಬಳಕೆ: ಬಿಜೆಪಿ ಸಿಟಿ ರವಿ ಬಂಧನ

ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಅಶ್ಲೀಲ ಪದ ಬಳಕೆ ಮಾಡಿದ್ದ ವಿಧಾನ ಪರಿಷತ್ ಸದಸ್ಯ ಸಿಟಿ ರವಿ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಬೆಳಗಾವಿಯ ಹಿರೇಬಾಗೇವಾಡಿ ಪೊಲೀಸರು, ಸುವರ್ಣಸೌಧದಲ್ಲೇ ಸಿಟಿ ರವಿ ಅವರನ್ನು ಬಂಧಿಸಿ ಠಾಣೆಗೆ ಕರೆದೊಯ್ಯುತ್ತಿದ್ದಾರೆ.

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ತಮ್ಮ ವಿರುದ್ಧ ಅಶ್ಲೀಲ ಪದ ಬಳಸಿ ನಿಂದಿಸಿದ್ದಾರೆ ಎಂದು ದೂರು ನೀಡಿದ್ದು ಈ ಹಿನ್ನೆಲೆಯಲ್ಲಿ ಸಿಟಿ ರವಿ ವಿರುದ್ಧ ಎಫ್​​ಐಆರ್ ದಾಖಲಾಗಿತ್ತು. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಮ್ಮದೇ ಲೆಟರ್‌ಹೆಡ್ ಮೇಲೆ ಅವಾಚ್ಯಪದ ಬಳಕೆ ಆರೋಪಿಸಿ ಹಿರೇಬಾಗೇವಾಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಅಕ್ಕನು ಬೋಧಿಸಿದ ಶರಣಜ್ಞಾನ ಪ್ರವಚನಾಮೃತ ಸಾರ: ಭಾಗ-೧೨.

 ಅಕ್ಕನು ಬೋಧಿಸಿದ ಶರಣಜ್ಞಾನ ಪ್ರವಚನಾಮೃತ ಸಾರ: ಭಾಗ-೧೨.


ಅಕ್ಕಮಹಾದೇವಿಯವರು ತಮ್ಮ ಪ್ರವಚನಾಮೃತದ ಶರಣ ಜ್ಞಾನದಲ್ಲಿ ಷಟಸ್ಥಲಕ್ಕೆ ಸಂಬಂಧಿಸಿದ ಶರಣನಾ ಸಾಧನಾ ಮಾರ್ಗವನ್ನು ಹೀಗೆ ಬೋಧಿಸಿರುವರು. 


ಷಟಸ್ಥಲವು ಶರಣನ ಆತ್ಮನಿದ್ದಂತೆ. ಶರಣ ಸಂಸ್ಕೃತಿಯಲ್ಲಿ ಬರುವ ಷಟಸ್ಥಲ ಸಾಧನ ಮಾರ್ಗವು ಸಾಧಕನ ಹರಿಯುವ ಮನಸ್ಸನ್ನು ನಿಲ್ಲಿಸಿ, ಏಕಾಗ್ರಗೊಳಿಸಿ ಪರಮಾತ್ಮನ ಸಾಮರಸ್ಯ(ಸಮಾಜ ಸೇವೆಯಲ್ಲಿ ಒಂದಾಗುವಿಕೆ)ದ ಕಡೆಗೆ ಕೊಂಡೊಯ್ಯುವಲ್ಲಿ ಆತ್ಮನಂತೆ ಕೆಲಸ ಮಾಡುತ್ತದೆ. ಈ ಸಾಧನ ಮಾರ್ಗದ ಷಟಸ್ಥಲವು ಇರುವುದೇ ಸಾಮಾಜಿಕ ಸಾಮರಸ್ಯಕ್ಕಾಗಿ. ಷಟಸ್ಥಲದ ಸಾಧನೆಯು ಸಾಧಕನಲ್ಲಿ ಸಮರಸ ಭಾವವನ್ನು ಮೂಡಿಸಿ, ಸಮಾಜದ ಸೇವೆಯಲ್ಲಿ ತೊಡಗಿಸಿ, ಸಮೂಹ ಜ್ಞಾನಕ್ಕೆ ಇಂಬು ಕೊಡಬೇಕೇ ವಿನಾ ಸಾಧಕನನ್ನು ಏಕಾಂತಕ್ಕೆ ಕೊಂಡೊಯ್ದು ಸಮುಷ್ಟಿ ಪ್ರಜ್ಞೆಯಿಂದ ದೂರ ತಳ್ಳುವುದಕ್ಕಲ್ಲ. ಸಾಧಕನಲ್ಲಿ ಅತಿಯಾದ ಏಕಾಂತ ಜ್ಞಾನವು ಅಹಂಕಾರವನ್ನು ಬೆಳೆಸಿ ಮಡಿವಂತಿಕೆಯನ್ನು ಸೃಷ್ಟಿಸುವಂತಿದ್ದರೆ ಅದು ಶತಸ್ಥಲ ಸಾಧನೆ ಎನಿಸಿಕೊಳ್ಳುವುದಿಲ್ಲ. ಸಮಷ್ಠಿ ಪ್ರಜ್ಞೆ ಜಾಗೃತಿಗೊಂಡು ಸೇವೆಯಲ್ಲಿ ಸಮರಸ ಭಾವವನ್ನು, ನಿಸ್ವಾರ್ಥ ಮತ್ತು ನಿರ್ಲಿಪ್ತತೆಯನ್ನು ಒಡಮೂಡಿಸುವುದೇ ಷಟಸ್ಥಲ ಸಾಧನೆಯ ಅಂತಿಮ ಗುರಿ.


ಷಟಸ್ಥಲಗಳು: ಭಕ್ತ, ಮಹೇಶ, ಪ್ರಸಾದಿ, ಪ್ರಾಣಲಿಂಗಿ, ಶರಣ, ಐಕ್ಯ. ಈಗ ಷಟಸ್ಥಲಗಳ ವಿಸ್ತೃತ ಭಾವವನ್ನು ಒಂದೊಂದಾಗಿ ಅರಿತು ಸಾಧನೆಯಲ್ಲಿ ತೊಡಗಿಸಿಕೊಳ್ಳಬೇಕು.

1) ಭಕ್ತ: ದೇವನ ಅನನ್ಯ ಪ್ರೀತಿಯ ಭಕ್ತಿ; ಅದನ್ನು ಸತ್ಯ ಶುದ್ಧವಾಗಿ ಅಳವಡಿಸಿಕೊಂಡವನೇ ಶ್ರದ್ಧಾ ಭಕ್ತನು. ಪ್ರತಿಯೊಂದು ಆತ್ಮಗಳು ಪರಮಾತ್ಮ ಸ್ವರೂಪಗಳನ್ನು ತಿಳಿದು ಆ ಜೀವ ಜಂಗಮಕ್ಕೆ ಸ್ವಾರ್ಥವಿಲ್ಲದೆ ಅನನ್ಯ ಪ್ರೀತಿ ಇಟ್ಟು ಗೌರವಿಸಿ ಸೇವೆಯಲ್ಲಿ ತೊಡಗಿಸಿಕೊಳ್ಳುವುದು, ಸಜ್ಜನನಾಗಿ ಗುರು ಲಿಂಗ ಜಂಗಮಕ್ಕೆ ವಂಚನೆಯಿಲ್ಲದೆ ಇರುವುದು, ತನು-ಮನ-ಧನದಿಂದ ಸೇವೆ ಮಾಡುವುದು, ಮನದಲ್ಲಿ ಪರಮಾತ್ಮನ ಕುರಿತು ಸಂಶಯ ಇಲ್ಲದೇ ಇರುವುದು, ವಿನಯವಂತನಾಗಿರುವುದು, ಸತ್ಯವಂತನಾಗಿರುವುದು, ಶಾಂತ ಸ್ವಭಾವದವನಾಗಿರುವುದು, ಸೂಕ್ಷ್ಮ ಸಂವೇದಿಯಾಗಿರುವುದು ಇವು ಭಕ್ತನ ಲಕ್ಷಣಗಳಾಗಿವೆ. 'ಭಕ್ತ ದೇಹಿಕ ದೇವ, ದೈಹಿಕ ಭಕ್ತ'; ಈ ಭಾವವೇ ಪ್ರೀತಿಯ ಸಾಮ್ರಾಜ್ಯಕ್ಕೆ ಇರುವ ಮೊದಲನೇ ಮೆಟ್ಟಿಲು. ಅದನ್ನೇ ಗುರು ಬಸವಣ್ಣನವರು ತಮ್ಮ ವಚನದಲ್ಲಿ ಹೀಗೆ ಹೇಳುವರು. "ಭಕ್ತಿ ಎಂಬ ನಿಧಾನವ ಸಾಧಿಸುವಡೆ ಶಿವ ಪ್ರೇಮವೆಂಬ ಅಂಜನ ಹಚ್ಚಿಕೊಂಬುದು ಭಕ್ತನಾದವನಿಗೆ ಇದೇ ಪಥವಾಗಿರಬೇಕು ನಮ್ಮ ಕೂಡಲಸಂಗಮದೇವನ ಶರಣರ ಅನುಭವ ಗಜವೈದ್ಯ." ಭಕ್ತಿ ಎನ್ನುವುದು ಒಂದು ಅಮೂಲ್ಯ ಸಂಪತ್ತು. ಎಲ್ಲರೂ ಭಕ್ತಿಯನ್ನು ಮಾಡುವಂತೆ ತೋರುವದಾದರೂ ಅದು ನಿಜಭಕ್ತಿ ಆಗಿರದೆ ತೋರಿಕೆಯ ಭಕ್ತಿಯಾಗಿರುತ್ತದೆ. ಪತ್ತಿಯು ಹೃದಯದ ಅಂತರಾಳದಲ್ಲಿರುವ ನಿಧಿಯಂತೆ. ಭೂಮಿಯ ಅಂತರಾಳದಲ್ಲಿ ಇರುವ ನಿಧಿಯನ್ನು ಕಂಡು ಹಿಡಿಯಲು ಅಂಜನವನ್ನು ಹಚ್ಚಿಕೊಳ್ಳುವರು. ಅದೇ ರೀತಿ ಭಕ್ತಿಯನ್ನು ಕರಗತ ಮಾಡಿಕೊಳ್ಳಬೇಕಾದರೆ ಶಿವಪ್ರೇಮ(Love of God) ಎಂಬ ಅಂಜನವ ಹಚ್ಚಿಕೊಳ್ಳಬೇಕು.


2) ಮಹೇಶ: ಈ ವಿಶ್ವವನ್ನು ಮುನ್ನೆಡೆಸುವ ಕರ್ತನೊಬ್ಬನಿದ್ದಾನೆಂದು ಗಟ್ಟಿಯಾಗಿ ನಂಬುವುದು ಮಹೇಶ ಸ್ಥಲದ ನಿಷ್ಟೆ. ಅಂತಹ ದೇವನು ಅತಿಮಾನುಷವಾಗಿರದೆ, ಎಲ್ಲಿಯೋ ಆಕಾಶದ ಕಡೆ ಮುಖ ಮಾಡಿ ಸ್ವರ್ಗದಲ್ಲಿದ್ದಾನೆಂದು ತೋರಿಸುವ ಮುಗಿಲ ಮರೆಯ ಗೊಂಬೆಯಾಗಿರದೆ, ಕಲ್ಲು, ಮರ, ಕಂಚು, ಹಿತ್ತಾಳೆ ಮುಂತಾದ ಅದಿಭೌತಿಕ ವಸ್ತುಗಳಲ್ಲಿರದೆ ಅವನು ಸಚಾರಚರ ಜೀವಿಗಳಲ್ಲಿ ಚೇತನ ಶಕ್ತಿಯಾಗಿದ್ದಾನೆಂದು ಗಟ್ಟಿಯಾಗಿ ನಂಬಬೇಕು. ಯಾವುದೇ ಭೌತಿಕ ವಸ್ತುಗಳಿಗೆ ದೇವರೆಂದು ಪೂಜಿಸದೆ, ಸ್ವರ್ಗ-ಮರ್ತ್ಯ-ಕೈಲಾಸ ವೈಕುಂಠದಲ್ಲಿರುವನೆಂದು ಅದಿದೈವಿಕವಾಗಿ ಹುಡುಕದೆ, ತನ್ನೊಳಗೆ ಮತ್ತು ಸಮಸ್ತ ಜೀವಿಗಳೊಳಗೆ ಇರುವನೆಂದು ದೃಢವಾಗಿ ನಂಬುವ ಛಲವನ್ನು ಆಧ್ಯಾತ್ಮಿಕವಾಗಿ ಮೈಗೂಡಿಸಿಕೊಳ್ಳುವುದೇ ಮಹೇಶ ಸ್ಥಲದ ನಿಷ್ಠೆಯಾಗಿದೆ. ನಿಷ್ಟೆಯುಳ್ಳವನಾಗಿರುವುದು, ಅನ್ಯದೈವಪೂಜೆ ಮಾಡದಿರುವುದು, ಶೀಲವುಳ್ಳವನಾಗಿರುವುದು, ಕಿರುಕುಳ ದೈವ ಪೂಜೆ ಮಾಡದಿರುವುದು, ಗುರುವಿನ ಅನುಗ್ರಹದಲ್ಲಿ ಮುಂದುವರೆಯುವುದು, ಸದಾಚಾರಿಯಾಗಿರುವುದು ಇವು ಮಹೇಶ ಸ್ಥಲದ ಲಕ್ಷಣಗಳು. ಈ ಛಲದಲ್ಲಿ ನಿರಂತರವಾಗಿ ಮುನ್ನಡೆದು ತಾಪತ್ರಯದ ಜಂಜಡವನ್ನು ಕಳೆದುಕೊಂಡವನೇ ಮಹೇಶ ಸ್ಥಲದ ಅಧಿಪತಿ; ಇದುವೇ ಷಟಸ್ಥಲ ಸಾಧಕನ ಎರಡನೇ ಮೆಟ್ಟಿಲು. ಗುರು ಬಸವಣ್ಣನವರು ಈ ಸ್ಥಲದ ಕುರಿತು ಹೀಗೆ ಹೇಳುವರು. 

"ಛಲಬೇಕು ಶರಣಂಗೆ ʼಪರಧನವನೊಲ್ಲೆನೆಂಬʼ ಛಲಬೇಕು ಶರಣಂಗೆ ʼಪರಸತಿಯನೊಲ್ಲೆನೆಂಬʼ ಛಲಬೇಕು ಶರಣಂಗೆ ʼಪರದೈವವನೊಲ್ಲೆನೆಂಬʼ ಛಲಬೇಕು ಶರಣಂಗೆ ʼಲಿಂಗಜಂಗಮ ಒಂದೆʼ ಎಂಬ ಛಲಬೇಕು ಶರಣಂಗೆ ʼಪ್ರಸಾದ ದಿಟವೆಂಬʼ ಛಲವಿಲ್ಲದವರ ಮೆಚ್ಚ ನಮ್ಮ ಕೂಡಲಸಂಗಮದೇವ." 

ಶರಣ ಪಥಿಕನಾದ ಮಹೇಶ ಸ್ಥಲ ಸಾಧಕನಿಗೆ ಕೆಲವು ವಿಷಯಗಳಲ್ಲಿ ಛಲ, ದೃಢತೆ, ತತ್ತ್ವ ನಿಷ್ಟೆ ಇರಬೇಕು. ತಾನು ಕಾಯಕದಿಂದ ದುಡಿದುದಲ್ಲದ ಪರಧನವನ್ನು ಶರಣನು ನಿರಾಕರಿಸಬೇಕು. ತನ್ನದಲ್ಲದ ಸ್ವತ್ತಿಗೆ ಆಸೆ ಪಡಬಾರದು. ಪರಸ್ತ್ರೀಯರ ಸಂಗವನ್ನು ಬಯಸಬಾರದು. ತನ್ನ ಪತ್ನಿಯಲ್ಲಿಯೇ ಏಕ ನಿಷ್ಟೆಯನ್ನು ಹೊಂದಿರಬೇಕು. ಪಾತಿವ್ರತ್ಯವು ಅಂದರೆ ಏಕ ಪತಿ ನಿಷ್ಠೆ ಸ್ತ್ರೀಗೆ ಎಷ್ಟು ಅಗತ್ಯವೋ ಏಕ ಪತ್ನಿ ನಿಷ್ಠೆಯು ಪುರುಷನಿಗೆ ಅಷ್ಟೇ ಅತ್ಯಗತ್ಯ. ಪರಸ್ತ್ರೀಯನ್ನು ತಾಯಿ ಎಂದು ಕಾಣಬೇಕು. ಸೃಷ್ಟಿಕರ್ತನವರದ್ದು ಅನ್ಯದೈವವನ್ನು ಪೂಜಿಸೆನು ಎಂಬ ಛಲ ಶರಣನಲ್ಲಿರಬೇಕು. ಲಿಂಗ ಜಂಗಮ ಒಂದೇ ಎಂಬ ವಿಶ್ವಾಸ ಶರಣನಿಗೆ ಬೇಕು. ದೇವರು ನಿರಾಕಾರ ಅವನ ಸಾಕಾರ ರೂಪವೇ ಜಂಗಮರು, ತ್ಯಾಗಿಗಳು, ಯೋಗಿಗಳು, ಸಮಾಜ ಸೇವಕರು. ಸಮಾಜವೇ ಜಂಗಮ, ನಿರಾಕಾರ ದೇವರ ಪೂಜೆ ಮಾಡಬೇಕು. ಸಾಕಾರ ಜಂಗಮದ ಸೇವೆ ಮಾಡಬೇಕು. ತನು ಮನ ಧನಗಳು ಜಂಗಮದ ಸೇವೆಯಲ್ಲಿ ಸವೆಯಬೇಕು. ಶರಣನಿಗೆ ಪ್ರಸಾದ ತತ್ವದಲ್ಲಿ ಪೂರ್ಣ ಶ್ರದ್ಧೆ ಇರಬೇಕು. ಪರಮಾತ್ಮನ ಕರುಣೆಯಿಂದ ಅಸಾಧ್ಯ ಸಾಧ್ಯವಾಗುವುದು ಎಂಬ ನಂಬಿಕೆ ಬೆಳೆಯಬೇಕು. ನಿತ್ಯವೂ ಪೂಜಾ ನಂತರ ಸ್ವೀಕರಿಸುವ ಕರುಣ(ಪಾದೋದಕ) ಪ್ರಸಾದದ ಬಗ್ಗೆ ನಿಷ್ಠೆ ಇರಬೇಕು. ಶರಣನಿಗೆ ಪರವಾದಿಯನ್ನು ನಿಗ್ರಹಿಸುವಲ್ಲಿ ಛಲ ಇರಬೇಕು. ತತ್ತ್ವ ಸಿದ್ಧಾಂತಗಳ ಬಗ್ಗೆ ಸರಿಯಾದ ಜ್ಞಾನವನ್ನು ಹೊಂದಿ ಅದನ್ನು ಇತರರಿಗೆ ಮನವರಿಕೆ ಮಾಡಿಕೊಡುವಲ್ಲಿ ಆಸಕ್ತಿ, ಛಲ ಇರಬೇಕು. ಸತ್ಯವನ್ನು ಪ್ರತಿಪಾದಿಸುವಲ್ಲಿ, ವಾದಿಸುವಲ್ಲಿ ಛಲ ಇರಬೇಕು. ಯಾವ ಛಲವೂ ಇಲ್ಲದ ಹೇಡಿಗಳನ್ನು ಮಾನಸಿಕ ದುರ್ಬಲರನ್ನು ಪರಮಾತ್ಮ ಮೆಚ್ಚಿಕೊಳ್ಳನು.


ಮುಂದುವರೆಯುವುದು........


ಪ್ರವಚನಕಾರರು: ಪೂಜ್ಯ ಶ್ರೀ ಸದ್ಗುರು ಬಸವಪ್ರಭು ಸ್ವಾಮೀಜಿಯವರು ಕಲ್ಯಾಣ ಮಹಾಮನೆ ಗುಣತೀರ್ಥ-ಬಸವಕಲ್ಯಾಣ.

ಬಸವಣ್ಣನವರನ್ನು ಮರೆತ ಕನ್ನಡ ಸಾಹಿತ್ಯ ಸಮ್ಮೇಳನ: ಬಸವಪ್ರಭು ಸ್ವಾಮೀಜಿ ಅಪಸ್ವರ

 ಬಸವಣ್ಣನವರನ್ನು ಮರೆತ ಕನ್ನಡ ಸಾಹಿತ್ಯ ಸಮ್ಮೇಳನ: ಬಸವಪ್ರಭು ಸ್ವಾಮೀಜಿ ಅಪಸ್ವರ

ಈ ವರ್ಷದ ಮಂಡ್ಯದಲ್ಲಿ ನಡೆಯವ ಕನ್ನಡ ಸಾಹಿತ್ಯ ಸಮ್ಮೇಳನದ ಆಹ್ವಾನ ಪತ್ರಿಕೆ ಮತ್ತು ಪೋಸ್ಟರಗಳಲ್ಲಿ ಕರ್ನಾಟಕ ಸಾಂಸ್ಕೃತಿಕ ನಾಯಕ ಬಸವಣ್ಣನವರ ಭಾವಚಿತ್ರ ಇಲ್ಲದಿರುವುದಕ್ಕೆ ಗುಣತೀರ್ಥದ ಕಲ್ಯಾಣ ಮಹಾಮನೆ ಬಸವಪ್ರಭು ಸ್ವಾಮೀಜಿಯವರು ಅಪಸ್ವರ ಎತ್ತಿದ್ದಾರೆ. ಕನ್ನಡ ಸಾಹಿತ್ಯದ ಆತ್ಮವೆಂದರೆ ವಚನ ಸಾಹಿತ್ಯ ಅಂತಹ ವಚನಸಾಹಿತ್ಯದ ಪಿತಾಮಹ ಎಂದರೆ ಬಸವಣ್ಣನವರು. ಹನ್ನೆರಡನೆ ಶತಮಾನದಲ್ಲಿ ಇವನಾರವ ಇವನಾರವ ಇವನಾರವ ಎನ್ನದೆ, ಇವನಮ್ಮವ ಇವನಮ್ಮವ ಇವನಮ್ಮವ ಎಂದು ಯಾವುದೇ ಜಾತಿ ಮತ ಪಂಥ ಪಂಗಡ ಭೇದವಿಲ್ಲದೆ ಸರ್ವರಿಗೂ ಸಮ ಬಾಳು ಸರ್ವರಿಗೂ ಸಮಪಾಲು ಎಂಬ ಧ್ಯೇಯ ವಾಕ್ಯದೊಂದಿಗೆ ಜಗಬದುಕಲಿ ಜನ ಬದುಕುವ ತತ್ವವನ್ನು ನೀಡಿ, ವಿಶ್ವದ ಮೊದಲ ಸಂಸತ್ತು ಅನುಭವ ಮಂಟಪವನ್ನು ಸ್ಥಾಪಿಸಿ ತನ್ಮೂಲಕ ವಿಶ್ವ ಸಮಾನತೆಯನ್ನು ಸಾರಿದವರು ಬಸವಣ್ಣನವರು. ಕನ್ನಡದಲ್ಲಿಯೇ ವಚನಗಳನ್ನು ಬರೆದು ಕನ್ನಡದ ಭಾಷೆಯನ್ನು ದೇವ ಭಾಷೆಯನ್ನಾಗಿಸಿದವರು, ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸಿದವರು ಗುರು ಬಸವಾದಿ ಶರಣರು ಇಂತಹ ಬಸವಣ್ಣನವರನ್ನು ಕರ್ನಾಟಕ ಸರ್ಕಾರ ಕನ್ನಡ ನೆಲದ ರಾಯಭಾರಿ, ಸಾಂಸ್ಕೃತಿಕ ನಾಯಕ ಎಂದು ಘೋಷಿಸಿ ಗೌರವ ನೀಡಿದೆ, ಪ್ರತಿಯೊಂದು ಕಛೇರಿಯಲ್ಲಿ ಅವರ ಭಾವಚಿತ್ರವನ್ನು ಅಳವಡಿಸಿದೆ. ಹೀಗಿರುವಾಗ ಈ ವರ್ಷ ನಡೆಯುವ ಕನ್ನಡ ಸಾಹಿತ್ಯ ಸಮ್ಮೇಳನದ ಆಹ್ವಾನ ಪತ್ರಿಕೆ ಮತ್ತು ಪೋಸ್ಟರಗಳಲ್ಲಿ ಬಸವಣ್ಣನವರ ಭಾವಚಿತ್ರವನ್ನು ಹಾಕದಿರುವುದು ಹಾಗೂ ಸಮ್ಮೇಳನದಲ್ಲಿ ಶರಣರಿಗೆ ಸಂಬಂಧಿಸಿದ ಒಂದು ಗೋಷ್ಠಿಯನ್ನೂ ಏರ್ಪಡಿಸದೇ ಅಗೌರವ ತೋರಿರುವುದು ಕನ್ನಡ ಸಾಹಿತ್ಯ ಪರಿಷತ್ತಿನ ಅಜ್ಞಾನವೋ ಅಥವಾ ವೈದಿಕ ಮನಸ್ಸುಗಳ ಕುತಂತ್ರವೋ ಎಂದು ಪ್ರಶ್ನಿಸಿದ್ದಾರೆ. 


ಶರಣ ಸಾಹಿತ್ಯ ಪರಿಷತ್ತಿನ ಸಂಸ್ಥಾಪಕ ಅಧ್ಯಕ್ಷರಾದ ಗೊ.ರು.ಚನ್ನಬಸಪ್ಪನವರು ಅವರು ಬಸವಾದಿ ಪ್ರಮಥರ ಬಗ್ಗೆ ಅಪಾರ ಗೌರವವನ್ನು ಹೊಂದಿರುವವರು, ಅನುಭವ ಮಂಟಪ ನಿರ್ಮಾಣದ ಸಲಹಾ ಸಮಿತಿಯ ಅಧ್ಯಕ್ಷರೂ ಆಗಿರುವ ಅವರು ಈ ಬಾರಿಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದಾರೆ. ಅವರು ಈ ಬಗ್ಗೆ ಗಮನ ಹರಿಸದೇ ಇರುವುದು ಮತ್ತು ಅವರ ನೇತೃತ್ವದಲ್ಲಿ ನಡೆಯುವ ಸಮ್ಮೇಳನದಲ್ಲಿ ಶರಣ ಸಾಹಿತ್ಯಕ್ಕೆ ಸಂಬಂಧಿಸಿದ ಯಾವ ಗೋಷ್ಠಿಯೂ ಇಲ್ಲದಿರುವುದು ಬೇಸರದ ಸಂಗತಿ .


ಬಸವಣ್ಣನವರು ಕುವೆಂಪು ಮತ್ತು ಕನ್ನಡ ನೆಲದ ಎರಡು ಕಣ್ಣುಗಳು ಅವರನ್ನೇ ಕಡೆಗಣಿಸಿ ಕನ್ನಡ ಸಾಹಿತ್ಯ ಸಮ್ಮೇಳನ ಮಾಡುವುದು ಭಂಡತನದ ಪರಮಾವಧಿ ಎಂದರು. ಈ ಕೂಡಲೇ ಮಾನ್ಯ ಜಿಲ್ಲಾಧಿಕಾರಿಗಳು ಎತ್ತೆಚ್ಚುಕೊಂಡು ಈ ಎರಡು ಮಹಾನ್ ಚೇತನಗಳ ಭಾವಚಿತ್ರವನ್ನು ಕನ್ನಡ ಸಾಹಿತ್ಯ ಸಮ್ಮೇಳನದ ಪೋಸ್ಟರ್ ಮತ್ತು ಆಹ್ವಾನ ಪತ್ರಿಕೆಯಲ್ಲಿ ಹಾಕುವಂತೆ ಹಾಗೂ ಸಮ್ಮೇಳನಗಳಲ್ಲಿ ವಚನಸಾಹಿತ್ಯದ ಕುರಿತಾದ ಗೋಷ್ಟಿಗಳನ್ನು ಏರ್ಪಡಿಸುವಂತೆ ಕನ್ನಡ ಸಾಹಿತ್ಯ ಪರಿಷತ್ತಿಗೆ ಸೂಚಿಸಿ ಆದೇಶ ಹೊರಡಿಸಬೇಕೆಂದು ವಿನಂತಿಸಿಕೊಳ್ಳುತ್ತೇವೆ. ಒಂದು ವೇಳೆ ಹಾಕದೇ ಹೋದರೆ ಕಸಾಪ ನಡೆಸುವ ಸಮ್ಮೇಳನದಲ್ಲಿ ಬಸವಪರ ಸಂಘಟನೆ ಮತ್ತು ವಿವಿಧ ಕನ್ನಡ ಪರ ಸಂಘಟನೆಗಳಿಂದ ಕಪ್ಪುಬಟ್ಟೆ ಪ್ರದರ್ಶಿಸಿ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ. 


ಪೂಜ್ಯ ಶ್ರೀ ಸದ್ಗುರು ಬಸವಪ್ರಭು ಸ್ವಾಮೀಜಿಯವರು ಕಲ್ಯಾಣ ಮಹಾಮನೆ ಮಹಾಮಠ ಗುಣತೀರ್ಥವಾಡಿ-ಬಸವಕಲ್ಯಾಣ.

ಪ್ರೇಮ ಕಾಶ್ಮೀರದಲ್ಲಿ ರಕ್ತದೋಕುಳಿ; ಹಿಂದೂಗಳೇ ಟಾರ್ಗೆಟ...!

  ಪ್ರೇಮ ಕಾಶ್ಮೀರದಲ್ಲಿ ರಕ್ತದೋಕುಳಿ; ಹಿಂದೂಗಳೇ ಟಾರ್ಗೆಟ್. ಭೂಲೋಕದ ಸ್ವರ್ಗವೆಂದೇ ಕರೆಯುವ ಜಮ್ಮು-ಕಾಶ್ಮೀರದ ಪೆಹಲ್ಗಾಮ್ ಸಮೀಪದ ಬೈಸರನ್ ಹುಲ್ಲುಗಾವಲಿನಲ್ಲಿ ಪಾಕ್ ಪ್...