ದೇವನಹಳ್ಳಿ : ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಒಳ ಮೀಸಲಾತಿ ಜಾರಿಗೆ ತರಲು ಹಿಂದೇಟು ಹಾಕುತ್ತಿರುವುದು ಸರಿಯಲ್ಲ, ಸರ್ವೋಚ್ಛ ನ್ಯಾಯಾಲಯದ ತೀರ್ಪಿಗೆ ಬದ್ದರಾಗಿ ಎಸ್.ಸಿ, ಎಸ್.ಟಿ ಸಮುದಾಯಗಳಿಗೆ ಒಳ ಮೀಸಲಾತಿ ಕೊಡಲು ತಾತ್ವಿಕ ಒಪ್ಪಿಗೆ ನೀಡಿದ್ದರೂ ಸುಮ್ಮನಿರುವುದು ಏಕೆ ಇದು ವಚನ ಭ್ರಷ್ಠ ಸರ್ಕಾರ ಎಂದು ಆಲ್ ಇಂಡಿಯಾ ಬಿ.ಎಸ್.ಪಿ ರಾಜ್ಯಾಧ್ಯಕ್ಷ ಮಾರಸಂದ್ರ ಮುನಿಯಪ್ಪ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ads
Search This Blog
Tuesday, 24 December 2024
ಒಳ ಮೀಸಲಾತಿ ಜಾರಿಯಾಗುವ ತನಕ ಮುಂಬಡ್ತಿ, ನೇಮಕಾತಿ ಆದೇಶ ನಿಲ್ಲಿಸಿ - ಮಾದಿಗ ಸಮುದಾಯಗಳ ಸ್ವಾಭಿಮಾನ ಒಕ್ಕೂಟ ಎಚ್ಚರಿಕೆ
ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ನೇಮಕಾತಿ
ಅಂತಿಮ ಮತ್ತು ಹೆಚ್ಚುವರಿ ಆಯ್ಕೆ ಪಟ್ಟಿ ಜನವರಿ.27 ರಂದು ಪ್ರಕಟಿಸಲಾಗುವುದು.
Monday, 23 December 2024
ರಾಷ್ಟ್ರೀಯ ಅತ್ಯುತ್ತಮ ನಾಟಕ ಪ್ರಶಸ್ತಿ
ಬೆಂಗಳೂರು ನಗರ ಜಿಲ್ಲೆಯ ಪಿಎಂ ಶ್ರೀ ನವೋದಯ ವಿದ್ಯಾಲಯದ ಮಕ್ಕಳು ಅಭಿನಯಿಸಿದ ಭರತ ಭೂಮಿ ನನ್ನ ತಾಯಿ ಎಂಬ ನಾಟಕ ರಾಷ್ಟ್ರೀಯ ಮಟ್ಟದ ಉತ್ತಮ ನಾಟಕ ಎಂಬ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.
ಬೆಂಗಳೂರು ನಗರ ಜಿಲ್ಲೆಯ ಬಾಗಲೂರಿನಲ್ಲಿ ಇರುವ ಪಿಎಂಶ್ರೀ ನವೋದಯ ವಿದ್ಯಾಲಯದ ಮಕ್ಕಳು ರಂಗ ವಿಜಯ ತಂಡದ ಸಂಸ್ಥಾಪಕ ಹಾಗೂ ಖ್ಯಾತ ರಂಗಭೂಮಿ ನಿರ್ದೇಶಕ ಕಲಾ ಶ್ರೇಷ್ಠ ಮಾಲೂರು ವಿಜಿ ಪರಿಕಲ್ಪನೆ ವಿನ್ಯಾಸ ಮತ್ತು ನಿರ್ದೇಶನದಲ್ಲಿ ಮೂಡಿ ಬಂದ ಭರತ ಭೂಮಿ ನನ್ನ ತಾಯಿ ಎಂಬ ನಾಟಕ ರಾಷ್ಟ್ರೀಯ ಅತ್ಯುತ್ತಮ ನಾಟಕ ಎಂಬ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.
ಒಂದು ತಿಂಗಳ ಕಾಲ ನವೋದಯ ವಿದ್ಯಾಲಯದಲ್ಲಿ ರಂಗ ತರಬೇತಿ ಶಿಬಿರವನ್ನು ಯೋಜನೆ ಮಾಡಿ ಅದರಲ್ಲಿ ಸಿದ್ಧವಾದ ನಾಟಕ ಮೊದಲು ಕ್ಲಸ್ಟರ್ ಮಟ್ಟದಲ್ಲಿ ಮೊದಲ ತಂಡವಾಗಿ ಆಯ್ಕೆಯಾಯಿತು ಅದಾದ ನಂತರ ವಲಯ ಮಟ್ಟದಲ್ಲಿ ಐದು ರಾಜ್ಯಗಳ ನಾಟಕ ಸ್ಪರ್ಧೆಯಲ್ಲಿ ಪ್ರಥಮ ತಂಡವಾಗಿ ಹೊರಹೊಮ್ಮಿತು ನಂತರದಲ್ಲಿ ಹೈದರಾಬಾದಿನಲ್ಲಿ ನಡೆದ ನವೋದಯ ವಿದ್ಯಾಲಯದ ರಾಷ್ಟ್ರೀಯ ಏಕತಾ ಸಮ್ಮೇಳನದಲ್ಲಿ ದೇಶದ ಎಲ್ಲಾ ರಾಜ್ಯಗಳು ತಮ್ಮ ತಮ್ಮ ನಾಟಕಗಳನ್ನು ಅಲ್ಲಿ ಪ್ರದರ್ಶನ ಗೊಳಿಸಿತು ಆ ಪ್ರದರ್ಶನದಲ್ಲಿ ಉತ್ತಮ ಮೂರು ತಂಡಗಳನ್ನು ಆಯ್ಕೆ ಮಾಡಲಾಯಿತು ಅದರಲ್ಲಿ ಈ ತಂಡದ ನಾಟಕ ಅತ್ಯುತ್ತಮ ರಾಷ್ಟ್ರೀಯ ನಾಟಕ ಎಂಬ ಪ್ರಶಸ್ತಿಯನ್ನು ಗಳಿಸುವಲ್ಲಿ ಯಶಸ್ವಿಯಾಯಿತು.
ಈ ನಾಟಕ ಭಾರತದ ಇಂದಿನ ಪರಿಸ್ಥಿತಿಯನ್ನು ವಿವರಿಸುತ್ತಾ ರಾಮಾಯಣ, ಮಹಾಭಾರತದಲ್ಲಿ ಮಹಿಳೆಯರ ಬದುಕಿನ ಬವಣೆಯನ್ನು ಚಿತ್ರಿಸುತ್ತಾ, ಸ್ವಾತಂತ್ರ್ಯ ಪೂರ್ವದಲ್ಲಿ ಮಹಿಳೆಯ ಸಾಧನೆ, ಸ್ವಾತಂತ್ರ್ಯ ನಂತರದಲ್ಲಿ ಮಹಿಳೆಯರ ಸಾಧನೆ, ಎಲ್ಲವನ್ನು ವಿವರಿಸುತ್ತಾ ಪ್ರಸ್ತುತ ಭಾರತದಲ್ಲಿ ಆಗುತ್ತಿರುವ ಶೋಷಣೆಗಳನ್ನು ಎತ್ತಿ ಹೇಳುತ್ತಾ, ಮಹಿಳೆಗೆ ಉತ್ತಮ ಸ್ಥಾನಮಾನ ನೀಡಬೇಕು ಎನ್ನುವ ಧ್ಯೇಯ ವಾಕ್ಯದೊಂದಿಗೆ ನಾಟಕ ಮುಗಿಯುತ್ತದೆ.
ನಾಟಕದ ಹಿನ್ನೆಲೆಯಲ್ಲಿ ನೃತ್ಯ ಸಂಯೋಜನೆ ಹಾಗೂ ಸಹ ನಿರ್ದೇಶನದಲ್ಲಿ ರಕ್ಷಿತಾ ರಾಘವೇಂದ್ರ, ಪ್ರಸಾದನ ಮತ್ತು ವಸ್ತ್ರ ವಿನ್ಯಾಸ ಗೀತಾ ರಾಘವೇಂದ್ರ, ರಂಗ ಪರಿಕರ ಜಯಚಂದ್ರ ರಾಜೇನಹಳ್ಳಿ ಕೆಲಸ ನಿರ್ವಹಿಸಿದ್ದರು. ಕಲಾವಿದರಾಗಿ ಬಿ.ಆದ್ಯ,ಎನ್. ಧನುಶ್ರೀ, ಎಸ್. ಎಸ್. ಧಾತ್ರಿ, ಬಿ.ಎಂ. ಜೀವಿತ, ಖುಷ್ಬೂ ಪಾಟೇಲ್, ಆರ್. ಬಿ.ವೈಷ್ಣವಿ, ಎನ್.ಅನುಶ್ರೀ, ಎಸ್. ವಿಸ್ಮಿತ, ಆರ್. ನಿಶ್ಚಿತ, ಆರ್. ತನ್ವಿ,
ಎಮ್.ಅಶ್ವಿನ್, ಪಿ. ಕೆ. ಭಾರ್ಗವ, ಜೆ.ಲಲಿತ್ , ಎಸ್. ಮಿಥಿಲೇಶ್, ಎಮ್.ನಮನ್, ಕೆ. ಜೆ.ಇಂದ್ರಜಿತ್ ಮುಂತಾದವರು ಅಭಿನಯಿಸಿದರು. ಈ ಕಾರ್ಯಕ್ರಮಕ್ಕೆ ನವೋದಯ ವಿದ್ಯಾಲಯದ ಪ್ರಾಂಶುಪಾ ಲರಾದ ಉಮೇಶ್ ಚಂದ್ರ ಪ್ರಜಾಪತಿ, ಉಪ ಪ್ರಾಂಶುಪಾಲರಾದ ಸುಂದರ್ ಕುಮಾರ್, ನವೀನ್ ಕುಮಾರ್ ಕಾರ್ಯಕ್ರಮ ಸಂಯೋಜಕರಾಗಿ ಇಂಗ್ಲೀಷ್ ಆಧ್ಯಾಪಕರಾದ ಹರೀಶ್, ಸಂಗೀತ ಶಿಕ್ಷಕರಾದ ಸುಧೀರ್, ಚಿತ್ರಕಲಾ ಶಿಕ್ಷಕರಾದ ಬಾಬುರಾವ್, ಕಾಂತ ಮುಂತಾದವರು ಶ್ರಮಿಸಿದ್ದಾರೆ.
ಜನೆವರಿ ೧೧ ಮತ್ತು ೧೨ : ವಿಭಾಗ ಮಟ್ಟದ ತತ್ವಪದಕಾರರ ಸಮಾವೇಶ ಮತ್ತು ಭಜನೆ ಸ್ಪರ್ದೆ
ಬೀದರ್ : ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದಿಂದ ಮುಂಬರುವ ೨೦೨೫ರ ಜನೆವರಿ ೧೧ ಮತ್ತು ೧೨ ರಂದು ಬೀದರ ನಗರದ ಪೂಜ್ಯ ಶ್ರೀ ಡಾ|| ಚನ್ನಬಸವ ಪಟ್ಟದೇವರ ಜಿಲ್ಲಾ ರಂಗಮ0ದಿರದಲ್ಲಿ ನಡೆಯಲಿರುವ ವಿಭಾಗ ಮಟ್ಟದ ತತ್ವಪದಕಾರರ ಸಮಾವೇಶ ಮತ್ತು ಭಜನೆ ಸ್ಪರ್ದೆ ಕಾರ್ಯಕ್ರಮಗಳ ಸ್ವಾಗತ ಸಮಿತಿಯ ಅಧ್ಯಕ್ಷರನ್ನಾಗಿ ಖ್ಯಾತ ಉದ್ಯಮಿ, ಬಸವತತ್ವ ಚಿಂತಕರು, ಸಮಾಜ ಸೇವಕರು, ದಿ ಗ್ರೇನ್ ಐಂಡ್ ಸೀಡ್ಸ್ ಮರ್ಚಂಟ್ಸ್ ಅಸೋಶಿಯೆಶನ್ ಜಿಲ್ಲಾಧ್ಯಕ್ಷ ಬಸವರಾಜ ಧನ್ನೂರ್ ಅವರನ್ನು ನೇಮಕ ಮಾಡಲಾಗಿರುವುದು.
ಒಕ್ಕೂಟದ ಕೇಂದ್ರ ಸಮಿತಿಯ ಗೌರವ ಅಧ್ಯಕ್ಷರು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಡಾ|| ಮಾತಾ ಬಿ. ಮಂಜಮ್ಮ ಜೋಗುತಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಬಸವರಾಜ ಧನ್ನೂರ ಅವರನ್ನು ಸ್ವಾಗತ ಸಮಿತಿಯ ಅಧ್ಯಕ್ಷರನ್ನಾಗಿ ಮಾಡಲು ನಿರ್ಣಯಿಸಲಾಗಿತ್ತು, ಅದರಂತೆ ಇಂದು ಅವರಿಗೆ ಸ್ವಾಗತಿಸಲಾಯಿತು.
ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ಸಂಸ್ಥಾಪಕ ಅಧ್ಯಕ್ಷರಾದ ವಿಜಯಕುಮಾರ ಸೋನಾರೆ ಅವರ ನೇತೃತ್ವದಲ್ಲಿ ಧನ್ನೂರ ಅವರ ನಿವಾಸಕ್ಕೆ ತೆರಳಿ ಅವರ ಒಪ್ಪಿಗೆ ಪಡೆದು ಸನ್ಮಾನಿಸಿ, ಗೌರವಿಸಿ ಸ್ವಾಗತಿಸಲಾಯಿತು. ನಂತರ ಮಾನತಾಡಿದ ಬಸವರಾಜ ಧನ್ನೂರ ಅವರು ನಮ್ಮ ಭವ್ಯ ಭಾತರದ ಸಂಸ್ಕೃತಿ, ಪರಂಪರೆ, ಸಂಸ್ಕಾರ, ಜಾನಪದ, ತತ್ವಪದ ಹಾಡುಗಾರಿಕೆ ಅಳಿಸಿಹೊಗುತ್ತಿರುವ ಸಂದರ್ಭ ದಲ್ಲಿ ಅವುಗಳಿಗೆ ಸಂರಕ್ಷಿಸಿ ಇಂದಿನ ಯುವ ಶಕ್ತಿ ಪಡೆಗೆ ಅರುಹಿ ಸುಂದರ ಸುಭದ್ರ ಸಮಾಜ ನಿರ್ಮಿಸುವಂತಾಗಲು ಒಕ್ಕೂಟದ ಈ ಕಾರ್ಯಕ್ರಮಗಳು ದೇಶಕ್ಕೆ ಮಾದರಿಯಾಗಲಿವೆ ಎಂದು ಹೇಳಿದರು.
ವಿಜಯಕುಮಾರ ಸೋನಾರೆ ಮಾತನಾಡಿ, ಏಳು ಜಿಲ್ಲೆಗಳ ಕಲಾವಿದರು ಈ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ತತ್ವಪದ, ಭಜನೆ ಮತ್ತು ಜಾನಪದ ಗೀತೆಗಳನ್ನು ಹಾಡಲಿದ್ದಾರೆ. ಭಜನೆ ಸ್ಪರ್ದೇಯಲ್ಲಿ ಕಡಕೋಳ ಮಡಿವಾಳಪ್ಪ, ಸಂತ ಶಿಶುನಾಳ ಶರೀಫರು ಕನಕದಾಸರು ಮತ್ತು ಪುರಂದರದಾಸರುಗಳು ರಚಿತ ಸಾಹಿತ್ಯದ ಹಾಡುಗಳನ್ನು ಮಾತ್ರ ಈ ಸ್ಪರ್ದೇಯಲ್ಲಿ ಕಲಾವಿದರು ಹಾಡಬೇಕು. ಸ್ಪರ್ದೇಯ ಪ್ರಥಮ ವಿಜೇತ ತಂಡಕ್ಕೆ ೫೦ ಸಾವಿರ ರೂಪಾಯಿ, ದ್ವೀತಿಯ ತಂಡಕ್ಕೆ ೨೫ ಸಾವಿರ ಮತ್ತು ತೃತಿಯ ಸ್ಥಾನ ಪಡೆಯುವ ತಂಡಕ್ಕೆ ೧೫ ಸಾವಿರ ರೂಪಾಯಿ ನಗದು ಬಹುಮಾನ ನೀಡಲಾಗುವುದು ಎಂದು ತಿಳಿಸದ ಅವರು ಹಿಂದಿನಿ0ದಲೂ ಭಜನೆ ಪದಗಳು ಹಿರಿಯ ಕಲಾಜೀವಿಗಳು ಹಾಡುತ್ತಲೇ ಬಂದಿದ್ದಾರೆ. ಅವರುಗಳಲ್ಲಿ ಅದೇಷ್ಟೋ ಸಂಖ್ಯೆಯಲ್ಲಿ ಮರೆಯಾಗಿದ್ದಾರೆ. ಅಳಿದುಳಿದ ಕಲಾವಿದರಿಗೆ ಪ್ರೋತ್ಸಾಹ ನೀಡಿ ಇಂದಿನ ಯುವ ಕಲಾವಿದರು ಪ್ರೇರಣೆಗೊಂಡು ಭಜನೆ ಹಾಡುಗಳನ್ನು ಹಾಡುವಂತೆ ಮಾದರಿಯನ್ನಾಗಿ ಮಾಡುವ ಈ ಕಾರ್ಯಕ್ರಮಗಳ ಉದ್ದೇಶವಾಗಿದೆ ಎಂದರು.
ಈ ಸಂದರ್ಭದಲ್ಲಿ ಪೃಥ್ವಿರಾಜ್ ಎಸ್, ಸುನೀಲಕುಮಾರ ಕುಲಕರ್ಣಿ, ನಾಗಶೆಟ್ಟಿ ಧರಮಪೂರ್, ಸುನೀಲ ಭಾವಿಕಟ್ಟಿ, ಸೇರಿದಂತೆ ಇತರರು ಇದ್ದರು.
ರೈತರಲ್ಲಿ ಹೊಸ ಅವಿಷ್ಕಾರಗಳ ಕಲ್ಪನೆ ಅಗತ್ಯ : ಭಾಂಡಗೆ
೨ನೇ ದಿನದ ತೋಟಗಾರಿಕೆ ಮೇಳ | ಫಲಶ್ರೇಷ್ಠ ರೈತರಿಗೆ ಸನ್ಮಾನ
ಬಾಗಲಕೋಟೆ : ರೈತರಿಗೆ ಅನೇಕ ರೀತಿಯ ಹೊಸ ಹೊಸ ಅವಿಷ್ಕಾರಗಳ ಬಗ್ಗೆ ಕಲ್ಪನೆ ಕೊಟ್ಟು ಇಳುವರಿ ಹೆಚ್ಚಿನ ಪ್ರಮಾಣ ಪಡೆದು ಆರ್ಥಿಕವಾಗಿ ಬಲಿಷ್ಟವಾಗುವಂತೆ ಮಾಡುವ ಕೆಲಸ ತೋಟಗಾರಿಕೆ ವಿಶ್ವವಿದ್ಯಾಲಯ ಮಾಡಬೇಕೆಂದು ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಗಡೆ ಹೇಳಿದರು.
ತೋವಿವಿಯ ಉದ್ಯಾನಗಿರಿಯಲ್ಲಿ ಹಮ್ಮಿಕೊಂಡ ತೋಟಗಾರಿಕೆ ಮೇಳದ ಎರಡನೇ ದಿನದ ಕಾರ್ಯಕ್ರಮದಲ್ಲಿ ೮ ಜಿಲ್ಲೆಯ ಫಲಶ್ರೇಷ್ಠ ರೈತರನ್ನು ಸನ್ಮಾನಿಸಿ ಮಾತನಾಡಿದ ಅವರು ವಿಜ್ಞಾನಿಗಳು ಅವಿಷ್ಕಾರ ಮಾಡಿ ಹೊರತಂದ ಅನೇಕ ವಿಧದ ತಳಿಗಳು, ಅವಿಷ್ಕಾರಗಳನ್ನು ನೋಡಿ ತಿಳಿದುಕೊಂಡು ಅವುಗಳ ಕಲ್ಪನೆ ಮೂಡಿದಾಗ ಮಾತ್ರ ತೋಟಗಾರಿಕೆ ಮೇಳ ಏರ್ಪಡಿಸಿದ್ದಕ್ಕೆ ಸಾರ್ಥಕ ಪಡೆದುಕೊಳ್ಳುತ್ತದೆ. ಇದರಿಂದ ರೈತನ ಸಮಗ್ರ ಬೇಸಾಯ ಪದ್ದತಿಯಿಂದ ಆರ್ಥಿಕವಾಗಿ ಮುಂದೆ ಬರಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಕೀಟಗಳನ್ನು ನಾಶ ಮಾಡಲು ಕೀಟನಾಶಕ ಔಷಧಿಗಳ ಸಿಂಪರಣೆ ಮಾಡುತ್ತೇವೆ. ಆದರೆ ಎಲ್ಲ ಕೀಟಗಳು ಬೆಳೆಗಳನ್ನು ನಾಶ ಮಾಡುವದಿಲ್ಲ. ೧೦೦ಕ್ಕೆ ೯೯ ರಷ್ಟು ಕೀಟಗಳು ರೈತ ಮಿತ್ರವಾಗಿರುತ್ತವೆ. ಪ್ರತಿಶತ ಒಂದು ರಷ್ಟು ಕೀಟಗಳು ಮಾತ್ರ ಬೆಳೆಗಳನ್ನು ನಾಶ ಮಾಡುತ್ತವೆ. ರೈತ ಏನೇಲ್ಲ ಸಾಧಿಸಬಹುದು ಎಂಬುದರ ವಿಶ್ವಾಸ ಮೂಡಿಸುವ ಕಾರ್ಯ ತೋಟಗಾರಿಕೆ ವಿಶ್ವವಿದ್ಯಾಲಯ ಮಾಡುತ್ತಿದೆ. ತೋಟಗಾರಿಕೆ ವಿಶ್ವವಿದ್ಯಾಲಯ ಇನ್ನು ಹೆಚ್ಚಿನ ಸಂಶೋಧನೆ ನಡೆಸಲಿ ಕೇಂದ್ರ ಸರಕಾರದಿಂದ ಏನೇನು ಬೇಕು ಅವುಗಳನ್ನು ಕೊಡಿಸುವ ಪ್ರಾಮಾಣಿಕ ಪ್ರಂiÀiತ್ನ ಮಾಡುವುದಾಗಿ ತಿಳಿಸಿದರು.
ವಿಧಾನ ಪರಿಷತ್ ಶಾಸಕ ಪಿ.ಎಚ್.ಪೂಜಾರ ಮಾತನಾಡಿ ಬಯಲು ಸೀಮೆ ಎನಿಸಿರುವ ಬಾಗಲಕೋಟೆ ಜಿಲ್ಲೆ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ತೋಟಗಾರಿಕೆ ವಿಶ್ವವಿದ್ಯಾಲಯ ಈ ಭಾಗದ ಹೆಮ್ಮೆಯ ಕೊಡುಗೆಯಾಗಿದ್ದು, ಕೃಷಿಪ್ರಧಾನವಾಗಿರುವ ಬಾಗಲಕೋಟೆ ಹಾಗೂ ಉತ್ತರ ಕನ್ನಡ ಭಾಗದ ಅನೇಕ ಜಿಲ್ಲೆಗಳಲ್ಲಿ ಇನ್ನು ಮುಂದೆ ವಿಫುಲವಾಗಿ ತೋಟಗಾರಿಕೆ ಬೆಳೆ ಬೆಳೆಯಲು ಸಹಕಾರಿಯಾಗಲಿದೆ ಎಂದು ತಿಳಿಸಿದರು.
ಬಾಗಲಕೋಟೆ-ವಿಜಯಪುರ ಜಿಲ್ಲೆಗಳ ನೆಲದಲ್ಲಿ ಅಧಿಕ ಪ್ರಮಾಣದ ದಾಳಿಂಬೆ, ಮಾವು, ದ್ರಾಕ್ಷಿ, ಚಿಕ್ಕು ಹಣ್ಣುಗಳ ಬೆಳೆಗಳಿಗೆ ಹೇಳಿ ಮಾಡಿಸಿದ ನೆಲ ಇಲ್ಲಿದ್ದು, ಕೃಷ್ಣಾ ಮೇಲ್ದಂಡೆ ಯೋಜನೆ ಅಡಿಯ ಹಿನ್ನೀರು ರೈತರಿಗೆ ವರದಾನವಾಗಿದೆ. ಈ ಭಾಗದಲ್ಲಿ ದಾಳಿಂಬೆ ಬೆಳೆಗೆ ವಿಫುಲ ಅವಕಾಶ ದೊರಕಿಸಿಕೊಡಬೇಕಾಗಿದೆ. ಇಲ್ಲಿ ಕಾರ್ಯನಿರ್ವಹಿಸುತ್ತಿರುವ ತೋವಿವಿಯಲ್ಲಿ ಜಗತ್ತಿನಲ್ಲಿ ಬೆಳೆಯಬಹುದಾದ ಎಲ್ಲ ತರಹದ ಹೂ, ಹಣ್ಣುಗಳನ್ನು ಬೆಳೆಯುವಂತಾಗಿ ಈ ಭಾಗದ ರೈತ ಆರ್ಥಿಕವಾಗಿ ಪ್ರಭಲವಾಗಿ ಬೆಳೆಯವಂತಾಗಬೇಕು ಎಂದರು.
ಈ ಸಂದರ್ಬಧಲ್ಲಿ ತೋಟಗಾರಿಕೆ ಮೇಳದ ಮಾಹಿತಿಯನ್ನು ತ್ವರಿತವಾಗಿ ಪ್ರಕ್ರಿಯೆ ನೀಡುವ ಜಾಲತಾಣಗಳ ಕ್ಯೂಆರ್ ಕೋಡಗಳನ್ನು ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ತೋವಿವಿಯ ಕುಲಪತಿ ಡಾ.ವಿಷ್ಣುವರ್ಧನ, ವಿಸ್ತರಣಾ ನಿರ್ದೇಶಕ ಡಾ.ಟಿ.ಬಿ.ಅಳ್ಳೊಳ್ಳಿ, ಡೀನ್ ಸ್ನಾತಕೋತ್ತರ ಡಾ.ಲಕ್ಷಿö್ಮÃನಾರಾಯಣ ಹೆಗಡೆ, ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿವಿಯ ಕುಲಪತಿ ಡಾ.ಆರ್.ಸಿ.ಜಗದೀಶ, ಬೆಂಗಳೂರಿನ ಕೃವಿವಿಯ ಸಂಶೋಧನಾ ನಿರ್ದೇಶಕ ಡಾ.ಎಚ್.ಎಸ್.ಶಿವರಾಮು, ಧಾರವಾಡ ಕೃವಿವಿಯ ವಿಸ್ತರಣಾ ನಿರ್ದೇಶಕ ಡಾ.ಬಸವರಾಜಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಫಲಶ್ರೇಷ್ಠ ರೈತರಿಗೆ ಸನ್ಮಾನ
ಫಲಶ್ರೇಷ್ಠ ರೈತರಿಗೆ ಸನ್ಮಾನ : ಡಾ.ಎಸ್.ಪಿ.ಯೋಗಣ್ಣ (ಮೈಸೂರು), ಮಹಾದೇವಸ್ವಾಮಿ ಬಿ (ಚಾಮರಾಜನಗರ), ವಿ.ಆರ್.ರಾಮು (ಮಂಡ್ಯ), ಜಿ.ರವಿಕುಮಾರ (ಹಾಸನ), ಮಹಾಂತೇಶ ಪಟ್ಟಣಶೆಟ್ಟಿ (ಧಾರವಾಡ), ಅರವಿಂದ ಕಟಗಿ (ಗದಗ), ರಾಘವೇಂದ್ರ ಬಸವಂತ್ರಾಯ (ಯಾದಗಿರಿ), ದೊಡ್ಡಪ್ಪ ಅಡಿವೆಪ್ಪ ಹೂಲಿ (ಬೆಳಗಾವಿ).
ರೈತರ ಬೆಳೆಗೆ ಮೌಲ್ಯ ಕಟ್ಟಬಹುದು. ಶ್ರಮ ಅಮೂಲ್ಯವಾದದು. ರೈತನಿಗೆ ಸಕ್ಕರೆ ಕೊಡುವ ಮೂಲಕ ಅಕ್ಕರೆಯ ಅಭಿನಂದನೆ - ಶಿವರಾಜ ಅಂಡಗಿ
ಕಲಬುರಗಿ : ಇ0ದು ಡಿಸೆಂಬರ್ ೨೩ "ರಾಷ್ಟಿಯ ರೈತರ ದಿನಾಚರಣೆ" ನಿಮಿತ್ಯ ಜಗದ ಹಸಿವು ನೀಗಿಸುವ ಹಸಿದ ಹೊಟ್ಟಯ ಅನ್ನದಾತ, ಬೆವರಿನ ಶ್ರಮ ಮಣ್ಣಿನ ಮಮತೆಯ ಮಕ್ಕಳಾದ ರೈತರು ಹಗಲು-ಇರಳು, ಮಳೆ, ಬಿಸಿಲು ಗಾಳಿ ಚಳಿ ಎನ್ನದೇ ನಮ್ಮೆಲ್ಲರ ಆಹಾರ ಉತ್ಪಾದನೆ ಮಾಡುವ ಮೂಲಕ ಹೊಲದಲ್ಲಿ ಕಾರ್ಯ ನಿರ್ವಹಿಸುತ್ತಿರುವ ರೈತರಿಗೆ ಸಕ್ಕರೆ ಕೊಡುವ ಮೂಲಕ ಕಲಬುರಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶೀಗಳಾದ ಶ್ರೀ ಶಿವರಾಜ ಅಂಡಗಿಯವರು ರೈತರಿಗೆ ಗೌರವಿಸಿ ಅಭಿನಂದಿಸಿದರು.
ಎರಡು ದಿನಗಳ ಹಿಂದೆ ಸಕ್ಕರೆಯ ನಾಡು ಅಕ್ಕರೆಯ ಬೀಡು ಮಂಡ್ಯ ಜಿಲ್ಲೆಯಲ್ಲಿ ನಡೆದ ೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿದ ನಮಗೆಲ್ಲರಿಗೂ ಅಕ್ಕರೆಯ ಸಕ್ಕರೆಯ ಉಡಗೊರೆ ಕೊಟ್ಟು ಗೌರವಿಸಿದ್ದಾರೆಂದು ಸ್ಮರಿಸಿಕೊಳ್ಳುತ್ತಾ ಈ ವರ್ಷ ಎಲ್ಲಾ ಬೆಳೆಗಳು ಚೆನ್ನಾಗಿ ಬೆಳೆದು ಉತ್ತಮ ಬೆಲೆ ಬಂದು ರೈತರ ಆರ್ಥಿಕ ಪರಿಸ್ಥಿತಿ ಸುಧಾರಿಸಿ ರೈತ ಸಮುದಾಯಕ್ಕೆ ಸಂತೋಷ ಒದಗಿಸಲಿ ಎಂದು ಹಾರೈಸಿ ಶುಭಾಶಯ ಕೋರಿದ್ದಾರೆ.
ದಾನಿ ಬಾಬುರಾವ ಅವರಿಗೆ ಮಂಡ್ಯ ಸಮ್ಮೇಳನದಲ್ಲಿ ಗೌರವ ಸನ್ಮಾನ
ಇದೇ ಡಿಸೆಂಬರ್ 20,21 ಮತ್ತು 22 ರಂದು ಸಕ್ಕರೆ ನಾಡು ಮಂಡ್ಯದಲ್ಲಿ ಹಮ್ಮಿಕೊಂಡಿದ್ದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಜಿಲ್ಲೆಯ ನಿವೃತ್ತ ಮುಖ್ಯಗುರುಗಳಾದ ಶ್ರೀ ದಾನಿ ಬಾಬುರಾವ ಅವರನ್ನು ಗೌರವಿಸಲಾಯಿತು. ಈ ಸಂದರ್ಭದಲ್ಲಿ ನ್ಯಾಯಮೂರ್ತಿ ಶಿವರಾಜ ಪಾಟೀಲ, ಕೃಷಿ ಸಚಿವ ಚಲುವರಾಯ ಸ್ವಾಮಿ, ಕಸಾಪ ರಾಜ್ಯಾಧ್ಯಕ್ಷ ನಾಡೋಜ ಮಹೇಶ ಜೋಶಿ, ಬೀದರ ಜಿಲ್ಲಾಧ್ಯಕ್ಷ ಸುರೇಶ ಚನ್ನಶೆಟ್ಟಿ ವೇದಿಕೆಯಲ್ಲಿದ್ದರು.
ಪ್ರೇಮ ಕಾಶ್ಮೀರದಲ್ಲಿ ರಕ್ತದೋಕುಳಿ; ಹಿಂದೂಗಳೇ ಟಾರ್ಗೆಟ...!
ಪ್ರೇಮ ಕಾಶ್ಮೀರದಲ್ಲಿ ರಕ್ತದೋಕುಳಿ; ಹಿಂದೂಗಳೇ ಟಾರ್ಗೆಟ್. ಭೂಲೋಕದ ಸ್ವರ್ಗವೆಂದೇ ಕರೆಯುವ ಜಮ್ಮು-ಕಾಶ್ಮೀರದ ಪೆಹಲ್ಗಾಮ್ ಸಮೀಪದ ಬೈಸರನ್ ಹುಲ್ಲುಗಾವಲಿನಲ್ಲಿ ಪಾಕ್ ಪ್...
.jpg)
-
ಹೈದರಾಬಾದ್ : ಇಂದು ಬೆಳಿಗ್ಗೆ ಬೀದರನಲ್ಲಿ ನಡೆದ ಎಟಿಎಂ ದರೋಡೆಕೋರರೆ ನಗರದ ಅಫ್ಜಲಗಂಜನಲ್ಲಿರುವ ರೋಷನ ಟ್ರಾವೆಲ್ ಕಛೆರಿಯಲ್ಲಿ ಪೊಲೀಸ್ ಮತ್ತು ದರೋಡೆಕೋರ ಮಧ್ಯೆ ಗುಂಡಿನ ...
-
ಬೀದರ್: ಎಟಿಎಂಗೆ ಹಣ ಹಾಕಲು ಬಂದ ಬ್ಯಾಂಕ್ ಸಿಬ್ಬಂದಿ ಮೇಲೆ ಹಾಡಹಗಲೇ ಗುಂಡಿನ ದಾಳಿ ನಡೆಸಿರುವ ಘಟನೆಯೊಂದು ಬೀದರ್ನ ಎಸ್ಬಿಐ ಮುಖ್ಯ ಕಚೇರಿ ಮುಂದೆ ಗುರುವಾರ ನಡೆದಿದೆ. ...
-
ಶೋಧವಾಣಿ ಜಾಲಲೋಕ ಹೈದರಾಬಾದ್ : ಸಂಘಟಿತ ಹೋರಾಟ ಇಂದಿನ ದಿನಮಾನದ ಜರೂರು ಹೊರನಾಡು ಗಡಿನಾಡಿನ ಕನ್ನಡಿಗರ ಹಿತಕಾಯಲು ಯಾರೂ ಇಲ್ಲವೆನ್ನುವ ಅನಾಥಪ್ರಜ್ಞೆ ಸರಿಯಲ್ಲ. ಭಾಷೆಯ...