ads

Search This Blog

Thursday, 26 December 2024

ಗಂಗಾಧರ್ ರಾವ್ ದೇಶಪಾಂಡೆ ಸ್ಮಾರಕ ಭವನ, ಫೋಟೋ ಗ್ಯಾಲರಿ ಉದ್ಘಾಟನೆ ಸ್ಮಾರಕ ಭವನ ಉದ್ಘಾಟಿಸಿದ ಸಿ.ಎಂ ಸಿದ್ದರಾಮಯ್ಯ

ಬೆಳಗಾವಿ :  "ಗಾಂಧಿ ಭಾರತ" ಕಾರ್ಯಕ್ರಮ ಹಿನ್ನೆಲೆಯಲ್ಲಿ ಬೆಳಗಾವಿಯ ರಾಮತೀರ್ಥ ನಗರದಲ್ಲಿ ಗುರುವಾರ (ಡಿ.26) ಗಂಗಾಧರ ದೇಶಪಾಂಡೆ ಅವರ ಸ್ಮಾರಕ ಭವನ‌ ಮತ್ತು ಛಾಯಾಚಿತ್ರ ಗ್ಯಾಲರಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಲೋಕಾರ್ಪಣೆಗೊಳಿಸಿದರು.


ಸ್ಮಾರಕ ಭವನ ಅಂದಾಜು 15 ಗುಂಟೆ ಜಾಗೆಯಲ್ಲಿ 1.58 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದ್ದು, ಈ ಸ್ಥಳದಲ್ಲಿ ಸ್ಮಾರಕ ಭವನ, ದೇಶಪಾಂಡೆ ಅವರ ಪುತ್ಥಳಿ, ಫೋಟೋ ಗ್ಯಾಲರಿ,  ಆವರಣದ ಕಾಂಪೌಂಡ್, ತಂತಿಬೇಲಿ, ಪೇವರ್ಸ್ ಹಾಗೂ ಉದ್ಯಾನವನ ನಿರ್ಮಿಸಲಾಗಿದೆ.



ಈ ಸಂದರ್ಭದಲ್ಲಿ ಕಾನೂನು, ನ್ಯಾಯ, ಮಾನವ ಹಕ್ಕುಗಳ, ಸಂಸದೀಯ ವ್ಯವಹಾರ, ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಇಲಾಖೆ ಹಾಗೂ ಶತಮಾನೋತ್ಸವ ಸಮಿತಿಯ ಅಧ್ಯಕ್ಷರು ಎಚ್.ಕೆ ಪಾಟೀಲ, ಶತಮಾನೋತ್ಸವ ಸಮಿತಿಯ ಗೌರವಾಧ್ಯಕ್ಷರು ವೀರಪ್ಪ ಮೊಯ್ಲಿ, ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ, ಆರೋಗ್ಯ ಇಲಾಖೆ ಸಚಿವ ದಿನೇಶ್ ಗುಂಡೂರಾವ್, ಸರ್ಕಾರದ ಮುಖ್ಯ ಸಚೇತಕ ಅಶೋಕ ಪಟ್ಟಣ, ಬೆಳಗಾವಿ ಉತ್ತರ ವಿಧಾನಸಭಾ ಮತಕ್ಷೇತ್ರದ ಶಾಸಕ ಆಸೀಫ್(ರಾಜು)ಸೇಠ, ಚಿಕ್ಕೋಡಿ-ಸದಲಗಾ ಶಾಸಕ ಗಣೇಶ್ ಹುಕ್ಕೇರಿ, ವಿಧಾನ ಪರಿಷತ್ ಸದಸ್ಯ ಪ್ರಕಾಶ್ ಹುಕ್ಕೇರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾದ ಡಾ. ಧರಣಿ ದೇವಿ ಮಾಲಗತ್ತಿ, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ, ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ , ಮಹಾನಗರ ಪಾಲಿಕೆ ಆಯುಕ್ತರಾದ ಶುಭಾ. ಬಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರಾದ ಜಂಟಿ ನಿರ್ದೇಶಕ ಕೆ. ಎಚ್ ಚನ್ನೂರು, ಉಪ ನಿರ್ದೇಶಕಿ ವಿದ್ಯಾವತಿ ಭಜಂತ್ರಿ ಹಾಜರಿದ್ದರು.


ಸ್ವಾತಂತ್ರ್ಯ ಹೋರಾಟದಲ್ಲಿ ಗಂಗಾಧರ್ ರಾವ್ ದೇಶಪಾಂಡೆ ಪಾತ್ರ:



ಕರ್ನಾಟಕ ಸಿಂಹ ಎಂದೇ ಖ್ಯಾತಿ ಪಡೆದಿದ್ದ ಬೆಳಗಾವಿ ಜಿಲ್ಲೆಯ ಹುದಲಿ ಗ್ರಾಮದ ಹೆಮ್ಮೆಯ ಸುಪುತ್ರ, ಕೆಚ್ಚೆದೆಯ ಹೋರಾಟಗಾರ ಗಂಗಾಧರರಾವ್ ದೇಶಪಾಂಡೆ ಅವರೇ ಬೆಳಗಾವಿಯಲ್ಲಿ ಕಾಂಗ್ರೆಸ್ ಅಧಿವೇಶನ ನಡೆಯಲು ಮತ್ತು ಗಾಂಧೀಜಿ ಅಧ್ಯಕ್ಷತೆ ವಹಿಸಲು ಕಾರಣೀಕರ್ತರು.


ಗಂಗಾಧರರಾವ್ ಅವರ ಮುತ್ಸದ್ದೀತನ, ಸಮರ್ಥ ನಾಯಕತ್ವದ ಫಲವಾಗಿ ಬೆಳಗಾವಿ ಇತಿಹಾಸದಲ್ಲಿ ದಾಖಲಾಯಿತು. ಅಂದು ಕಾಂಗ್ರೆಸ್ ಪಕ್ಷದಲ್ಲಿ ಜವಾಹರಲಾಲ್ ನೆಹರು ಅವರಿಗೆ ಸರಿಸಮಾನವಾದ ಅಧಿಕಾರ ಹೊಂದಿದ್ದರು. ಗಂಗಾಧರರಾವ್ ಅವರು ಮನಸ್ಸು ಮಾಡಿದ್ದರೆ ಸ್ವಾತಂತ್ರ್ಯಾ ನಂತರ ಭಾರತ ಸರ್ಕಾರದಲ್ಲಿ ಪ್ರಮುಖ ಸ್ಥಾನ ಪಡೆಯುತ್ತಿದ್ದರು. ಆದರೆ, ನನ್ನ ಹೋರಾಟ ಮತ್ತು ಸೇವೆ ದೇಶದ ಸ್ವಾತಂತ್ರ್ಯಕ್ಕೆ ಮಾತ್ರ ಸಿಮೀತ ಎಂದು ಹೇಳಿ ಆಧ್ಯಾತ್ಮಿಕತೆ ಕಡೆಗೆ ಸಾಗಿದ ನಿಸ್ವಾರ್ಥಿ.


ವೈಯಕ್ತಿಕ ವಿವರ:



ಬೆಳಗಾವಿ ತಾಲ್ಲೂಕಿನ ಹುದಲಿ ಗ್ರಾಮದ ಶ್ರೀಮಂತ ಮನೆತನದ ಬಾಲಕೃಷ್ಣ ಮತ್ತು ರಾಧಾಬಾಯಿ ದಂಪತಿಗಳ‌ ಉದರದಲ್ಲಿ 1871ರ ಮಾರ್ಚ 31ರಂದು ಜನಿಸಿದ ಗಂಗಾಧರರಾವ್ ದೇಶಪಾಂಡೆ ಅವರು, ಮಾಧ್ಯಮಿಕ ಶಿಕ್ಷಣವನ್ನು ಬೆಳಗಾವಿ ಸರ್ದಾರ್ಸ್ ಹೈಸ್ಕೂಲ್ ನಲ್ಲಿ ಪಡೆದಿದ್ದಾರೆ. ಪುಣೆ ಡೆಕ್ಕನ್ ಕಾಲೇಜಿನಲ್ಲಿ ಪದವಿ ಮತ್ತು ಬಿಎ ಎಎಲ್ ಬಿ ಪೂರ್ಣಗೊಳಿಸಿದ್ದಾರೆ. ಪತ್ನಿ ಲಕ್ಷ್ಮೀಬಾಯಿ, ಪುತ್ರ ಬಾಲಕೃಷ್ಣ. 1960ರ ಜುಲೈ‌ 30ರಂದು ಗಂಗಾಧರಾವ್ ಅವರು ನಿಧನರಾದರು.


1922ರಲ್ಲಿ ಚರಕ ಸಂಘ, 1937ರಲ್ಲಿ ಹುದಲಿಯಲ್ಲಿ ಗಾಂಧಿಸೇವಾ ಸಂಘ ಸ್ಥಾಪಿಸಿದ್ದರು. ಈಗಲೂ‌ ಖಾದಿ ಗ್ರಾಮೋದ್ಯೋಗ ನೂರಾರು ಜನರಿಗೆ ಉದ್ಯೋಗ ಕೊಟ್ಟಿದೆ. 1920ರಲ್ಲಿ ಬೆಳಗಾವಿಯಲ್ಲಿ ಮುನ್ಸಿಪಲ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಆರಂಭದಲ್ಲಿ ಗಂಗಾಧರಾವ್ ಅವರು, ಗೋಪಾಲಕೃಷ್ಣ ಗೋಕಲೆ, ಬಾಲಗಂಗಾಧರ ಟಿಳಕರ ಅನುಯಾಯಿಯಾಗಿದ್ದರು. ಅವರು ಕಾಲವಾದ ಬಳಿಕ‌ ಮಹಾತ್ಮಾ ಗಾಂಧೀಜಿ ಸಂಪರ್ಕಕ್ಕೆ ಬರುತ್ತಾರೆ. ಗಾಂಧೀಜಿ ಐವರು ಅತ್ಯಾಪ್ತರಲ್ಲಿ ಇವರು ಒಬ್ಬರಾಗುತ್ತಾರೆ. ಅಪ್ಪಟ ಗಾಂಧಿವಾದಿಯಾಗಿದ್ದ ಗಂಗಾಧರರಾವ್ ಖಾದಿ ಬಟ್ಟೆಯನ್ನೇ ಧರಿಸುತ್ತಿದ್ದರು. ಶ್ರೀಮಂತಿಕೆ‌ ಇದ್ದರೂ ಸರಳ ಜೀವನ ನಡೆಸಿದ ಹೆಗ್ಗಳಿಕೆ ಇವರದ್ದು. 


ಗಾಂಧೀಜಿ ಮನವೊಲಿಸಿದ ದೇಶಪಾಂಡೆ:



ಮಹಾತ್ಮ ಗಾಂಧೀಜಿ ಹಿಂದಿನ ಅಧಿವೇಶನದಲ್ಲಿ ಭಾಗಿಯಾಗಿರಲಿಲ್ಲ. ಅಲ್ಲದೇ ಅಧ್ಯಕ್ಷತೆ ವಹಿಸಲು ನಿರಾಕರಿಸಿದ್ದರು.‌ ನಾನು ಅಧ್ಯಕ್ಷ ಇರಲಿ, ಬಿಡಲಿ. ಜನ ನನ್ನ‌ ಚಳುವಳಿಯಲ್ಲಿ ಪಾಲ್ಗೊಳ್ಳುತ್ತಾರೆ ಎನ್ನುತ್ತಾರೆ. ಆದರೆ, ಗಂಗಾಧರರಾವ್ ಅವರು‌ ಮಾತ್ರ ಬಿಡಲಿಲ್ಲ‌. ಗಾಂಧೀಜಿ ಮನವೊಲಿಸಿ ಅಧ್ಯಕ್ಷರಾಗುವಂತೆ ಮಾಡಿದ್ದು ಇತಿಹಾಸ. ಬೆಳಗಾವಿ ಅಧಿವೇಶನದಲ್ಲೂ ಜವಾಹರಲಾಲ್ ನೆಹರು ಮತ್ತು ಗಂಗಾಧರಾವ್ ದೇಶಪಾಂಡೆ ಪ್ರಧಾನ ಕಾರ್ಯದರ್ಶಿಯಾಗಿದ್ದರು.


ಹುಟ್ಟೂರಿಗೂ ಗಾಂಧೀಜಿ ಕರೆಸಿದ್ದರು:



ತಮ್ಮ ಹುಟ್ಟೂರು ಹುದಲಿಗೂ ಗಾಂಧೀಜಿ‌ ಅವರನ್ನು ಗಂಗಾಧರಾವ್ ಕರೆಸಿದ್ದರು. ಏಳು‌ ದಿನ ಅಲ್ಲಿಯೇ ಬಾಪು ವಾಸ್ತವ್ಯ ಹೂಡಿದ್ದರು. ಗಾಂಧಿ ಸೇವಾ ಸಂಘದ ಸಮ್ಮೇಳನ ಏರ್ಪಡಿಸಲಾಗಿತ್ತು. ಗಾಂಧೀಜಿ‌ ಅವರ ಜೊತೆಗೆ ಡಾ.ಬಾಬು ರಾಜೇಂದ್ರಪ್ರಸಾದ, ಅಬ್ದುಲ್ ಗಫಾರ್‌ಖಾನ್ ಗಾಂಧಿ, ಸರ್ದಾರ್ ವಲ್ಲಭಬಾಯಿ ಪಟೇಲ್, ಶೌಕತ್ ಅಲಿ, ಸರೋಜಿನಿ ನಾಯ್ಡು, ಹಿರಿಯ ಸಾಹಿತಿಗಳಾದ ಬೆಟಗೇರಿ ಕೃಷ್ಣಶರ್ಮ, ಜಿ. ನಾರಾಯಣ ಸೇರಿ ಅನೇಕ‌ ನಾಯಕರ ದಂಡೇ ಹುದಲಿಗೆ ಬಂದಿತ್ತು.

ಇನ್ನು ಭಾಷಾವಾರು ಪ್ರಾಂತ ರಚನೆ ವೇಳೆ ಬೆಳಗಾವಿ ಕರ್ನಾಟಕಕ್ಕೆ ಸೇರಬೇಕು ಅಂತಾ ಗಂಗಾಧರರಾವ್ ದೇಶಪಾಂಡೆ ಧ್ವನಿ ಎತ್ತಿದ್ದರು.

Tuesday, 24 December 2024

ಯಲದಗುಂಡಿ ಶ್ರೀ ಪರಮೇಶ್ವರ ಜಾತ್ರಾ ಮಹೋತ್ಸವ - ಜಗತ್ತು ಪರಮೇಶ್ವರನ ಪ್ರವಾಸಿ ತಾಣ - ಹಾರಕೂಡ ಶ್ರೀ

ಬಸವಕಲ್ಯಾಣ : ಈ ಜಗತ್ತು ಸೃಷ್ಟಿಕರ್ತ ಪರಮೇಶ್ವರನ ಪ್ರವಾಸಿ ತಾಣವಾಗಿದ್ದು, ನಾವೆಲ್ಲ ಕೆಲ ದಿನಗಳವರೆಗೆ ಸೌಂದರ್ಯವನ್ನು ಅನುಭವಿಸಿ ಮತ್ತೆ ಹಿಂತಿರುಗಲು ಬಂದ ಪ್ರವಾಸಿಗರು ಎಂದು ಹಾರಕೂಡದ ಪೂಜ್ಯಶ್ರೀ ಡಾ. ಚನ್ನವೀರ ಶಿವಾಚಾರ್ಯರು ನುಡಿದರು.


 ತಾಲೂಕಿನ ಯಲದಗುಂಡಿ ಗ್ರಾಮದ ಶ್ರೀ ಪರಮೇಶ್ವರ ಜಾತ್ರೆಯ ಅಂಗವಾಗಿ ಏರ್ಪಡಿಸಿದ ಧರ್ಮಸಭೆಯ ಸಾನಿಧ್ಯ ವಹಿಸಿ ಮಾತನಾಡಿದ ಶ್ರೀಗಳು ಪ್ರಕೃತಿ ಸಹಜವಾಗಿ ಜನಿಸಿದ ಪ್ರತಿ ಮನುಷ್ಯ ಭವಚಕ್ರದಲ್ಲಿ ಸಿಲುಕಿ ನರಳದೆ ಸುಖ ಯಾತ್ರಿಕನಾಗಿ ಜೀವನ ಪಯಣ ಸಾಗಿಸಲು, ಮೋಹದ ಪರದೆ ಕಳಚಲು ಭಗವದ್ ದರ್ಶನ ಪಡೆಯಲು ನಿತ್ಯ ಸಂತುಷ್ಟನಾಗಿರುವಂತಹ ಕುಶಲ ಪ್ರಜ್ಞೆ ಬೆಳೆಸಿಕೊಳ್ಳಬೇಕು.

 ದೇವನ ಅದ್ಭುತ ಚಿತ್ತಾರವನ್ನು ಕಂಡು ಆನಂದಿಸಬೇಕೆ ವಿನ: ತನ್ನದಾಗಬೇಕೆಂಬ ಹಪಾಹಪಿತನ ಇರಬಾರದು. ದೇವರ ಛತ್ರ ಮುಂದಿನ ಪೀಳಿಗೆಗೆ ವ್ಯವಸ್ಥಿತವಾಗಿ ಬಿಟ್ಟು ಹೋಗಬೇಕಾದ ಗುರುತರ ಜವಾಬ್ದಾರಿ ನಮ್ಮ ಮೇಲಿದೆ ಎಂಬುದನ್ನು ಪ್ರತಿಯೊಬ್ಬರೂ ಮನಗಾಣಲೇಬೇಕಾದ ಸಂಗತಿ.

 ನಾವೆಲ್ಲ ಬಂದು ಹೋಗುವ ನೆಂಟರು ಎನ್ನುವುದಕ್ಕೆ ಪರಮೇಶ್ವರನ ಜಾತ್ರೆಯೇ ದೊಡ್ಡ ನಿದರ್ಶನ, ಎಲ್ಲರ ಜೀವನ ಯಾತ್ರೆ ಸಿರಿಸೌಖ್ಯದಿಂದ ಕೂಡಿರಲಿ ಎಂದು ಶುಭ ಹಾರೈಸಿದರು.

 ತಾಲೂಕಿನ ಮಾನ್ಯ ಶಾಸಕರಾದ ಶರಣು ಸಲಗರ ಮಾತನಾಡಿ ಜಾತ್ರೆಗಳು ಮಾಡುವುದರ ಜೊತೆಗೆ ಮಕ್ಕಳಿಗೆ ಶಿಕ್ಷಣ ಹಾಗೂ ಸಂಸ್ಕಾರ ಕೊಡುವುದು ಅವಶ್ಯಕವಾಗಿದೆ.

 ಜಾತ್ರೆಗಳಲ್ಲಿ ಸಾಮಾಜಿಕ ನಾಟಕಗಳ ಜೊತೆಗೆ ಧಾರ್ಮಿಕ ಹಾಗೂ ನೀತಿ ಪ್ರದಾನವಾದ  ನಾಟಕಗಳು ಮಾಡುವುದರಿಂದ ಮಕ್ಕಳನ್ನು ಸುಸಂಸ್ಕೃತರನ್ನಾಗಿ ಮಾಡಬಹುದು ಎಂದು ನುಡಿದರು. ಹಿರೇನಾಗಾಂವನ ಜಯಶಾಂತಲಿಂಗ ಮಹಾಸ್ವಾಮಿಗಳು, ನೀರಾವರಿ ನಿಗಮ ಮಂಡಳಿ ಬೆಂಗಳೂರಿನ ನಿವೃತ್ತ ವ್ಯವಸ್ಥಾಪಕ  ನಿರ್ದೇಶಕರಾದ ಮಲ್ಲಿಕಾರ್ಜುನ ಗುಂಗೆ, ಮುಖಂಡರಾದ ಶಿವಕುಮಾರ ಸೆಟಗಾರ, ಹುಮನಾಬಾದಿನ ಪಿಎಸ್ಐ  ಸುರೇಶ ಚೌಹಾಣ ಮಾತನಾಡಿದರು.

 ಬಸ್ವತತ್ವ ಪ್ರಚಾರಕರಾದ ಬಸವರಾಜ ಪಂಡಿತ, ಶಿಕ್ಷಕರಾದ ಮಲ್ಲಿನಾಥ ಹಿರೇಮಠ ಹಾರಕೂಡ,  ಮುಖಂಡರಾದ ಬಾಬು ಹೊನ್ನಾನಾಯಕ, ಸಂಜು ಸುಗರೆ, ಸಂತೋಷ ಪಾಟೀಲ ಹಾರಕೂಡ, ಸಿದ್ರಾಮಪ್ಪ ಗುದಗೆ, ಸಿದ್ರಾಮಪ್ಪ ಕವಳೆ, ರತಿಕಾಂತ ಕೊಹಿನೂರ, ಸದಾನಂದ ಪಾಟೀಲ, ನಾಗೇಶ ಮಹಾಜನ ಮುಂತಾದವರು ಉಪಸ್ಥಿತರಿದ್ದರು. ಮಲ್ಲಪ್ಪ ಕೋಟೆ ಸ್ವಾಗತಿಸಿ, ಕಾರ್ಯಕ್ರಮವನ್ನು ನಿರೂಪಣೆ ಮಾಡಿದರು.

ಬುದ್ಧ, ಬಸವ, ಗಾಂಧಿ ಹಾಗೂ ಅಂಬೇಡ್ಕರ್ ನನಗೆ ಆದರ್ಶ – ಡಾ. ಬಿ.ಟಿ. ಲಲಿತಾ ನಾಯಕ್

ಬೆಂಗಳೂರು : ಬುದ್ಧ, ಬಸವ, ಗಾಂಧಿ ಹಾಗೂ ಅಂಬೇಡ್ಕರ್ ಅವರುಗಳೇ ನನಗೆ ಆದರ್ಶ ಎಂದು ಹಿರಿಯ ಸಾಹಿತಿ, ಚಿಂತಕರು ಹಾಗೂ ಮಾಜಿ ಸಚಿವರಾದ ಡಾ. ಬಿ. ಲಲಿತಾ ನಾಯಕ್ ಅವರು ತಿಳಿಸಿದರು.



ಬಂಜಾರ ಸಂಸ್ಕøತಿ ಮತ್ತು ಭಾಷಾ ಅಕಾಡೆಮಿಯ ವತಿಯಿಂದ ಮಹಿಳಾ ವಿಶ್ರಾಂತಿ ಕೊಠಡಿ, ರವೀಂದ್ರ ಕಲಾಕ್ಷೇತ್ರ, ಬೆಂಗಳೂರು ಇಲ್ಲಿ ಕಳತಾವೂರ್ ಮಳಾವ್ - 03(ಸಜ್ಜನರ ಸಲ್ಲಾಪ -03) ಮೀನಾರೋ ಪಾಮಣೋ(ತಿಂಗಳ ಅತಿಥಿ) ಸಮಾರಂಭದ ತಿಂಗಳ ಅಥಿತಿಯಾಗಿ ಭಾಗವಹಿಸಿ ಮಾತನಾಡಿದ ಅವರು ತಮ್ಮ ಬಾಲ್ಯದ ದಿನಗಳಲ್ಲಿಯೇ ವ್ಯಾಸಂಗದಲ್ಲಿ ಹೆಚ್ಚು ಆಸಕ್ತಿಯಿಂದ ತೊಡಗಿಸಿಕೊಂಡು. ವಿದ್ಯಾಭ್ಯಾಸ ಪೂರ್ಣಗೊಳಿಸಿದ ನಂತರ ಸಂಸಾರಿಕ ತೊಂದರೆಯಿಂದ 8ನೇ ತರಗತಿಗೆ ಶಾಲೆ ಬಿಟ್ಟು ಸಂಸಾರದ ಕೆಲ ಸಂಗತಿಗಳನ್ನೇ ಬರಹ ರೂಪದಲ್ಲಿ ತರಲಾಯಿತು. ಬಹುಮುಖ್ಯವಾಗಿ ವೈಚಾರಿಕ ನೆಲಗಟ್ಟಿನಲ್ಲಿ ಚಿಂತಿಸುತ್ತಾ ಈ ಕುರಿತಾಗಿ ಹೆಚ್ಚು ಬರಹಗಳನ್ನು ಬರೆಯಲು ಉತ್ಸುಕಳಾದೆ ಎಂದು ತಿಳಿಸಿದರು.

ನನ್ನ ಬರಹಕ್ಕೆ ನನ್ನ ತಂದೆಯ ಒತ್ತಾಸೆ ಹಾಗೂ ಮೊದಲ ವೇದಿಕೆಯಾಗಿದ್ದು ಲಂಕೇಶ್ ಹಾಗೂ ಇತರೆ ಪತ್ರಿಕೆಗಳು ಇದ್ದವು ಎಂಬುದನ್ನು ಮರೆಯುವಂತಿಲ್ಲ. ರಾಜಕೀಯ ಕ್ಷೇತ್ರಕ್ಕೆ ಬಂದು ಕೆಲವರ ಪಿತೂರಿಗಳಿಂದ ಅಧಿಕಾರ ಕಳೆದುಕೊಂಡೆ. ನಜೀರ್ ಸಾಭ್ ಅವರು ನನ್ನನ್ನು ಎಂ.ಎಲ್.ಸಿ ಮಾಡಲು ಕಾರಣರಾದರೂ ಆ ನಂತರ ಸಚಿವೆಯಾದೆ. ಈ ಸಂದರ್ಭದಲ್ಲೂ ಕೂಡ ನನಗೆ ಸಾಹಿತ್ಯ ರಚನೆ ಬಗ್ಗೆಯೇ ಹೆಚ್ಚಿನ ತುಡಿತವಿತ್ತು. ಜೊತೆಗೆ ನನ್ನ ಸತ್ಯ ನಿಷ್ಠೆ, ಸರಳ ಜೀವನ ಇವುಗಳು ಸಚಿವೆಯಾಗಿ ಹೆಚ್ಚು ದಿನ ಮುಂದುವರೆಯದಂತೆ ಮಾಡಿದವು. ಆದರೂ ಧೃತಿಗೆಡಲಿಲ್ಲ, ಹಲವು ಬಗೆಯಲ್ಲಿ ಸಮಾಜ ಸೇವೆಗೆ ತೊಡಗಿಸಿಕೊಂಡಿರುವೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಬಂಜಾರಾ ಸಂಸ್ಕøತಿ ಮತ್ತು ಭಾಷಾ ಅಕಾಡೆಮಿ ಅಧ್ಯಕ್ಷರಾದ ಡಾ.ಎ.ಆರ್ ಗೋವಿಂದಸ್ವಾಮಿ ಅವರು ಮಾತನಾಡಿ, ಕಳೆದ ಆರು ತಿಂಗಳಿಂದ ಅಕಾಡೆಮಿಯು ನಿರಂತರ 28ಕ್ಕೂ ಹೆಚ್ಚಿನ ಕಾರ್ಯಕ್ರಮಗಳನ್ನು ರಾಜ್ಯದಾದ್ಯಂತ ನಡೆಸಿದ ಕಾರ್ಯ ಚಟುವಟಿಕೆ ವಿವರಿಸುತ್ತಾ ಪ್ರಸ್ತುತ ಬಂಜಾರ ವಿಶ್ವಕೋಶ (ಎನ್‍ಸೈಕ್ಲೋಪೀಡಿಯಾ) ರಚಿಸುವ ಅಕಾಡೆಮಿ ತೊಡಗಿದ್ದು ನಾಡೋಜ ಪ್ರೊ. ಬರಗೂರು ರಾಮಚಂದ್ರಪ್ಪ ಅವರ ನೇತೃತ್ವದಲ್ಲಿ ಸಮಿತಿರಚಿಸಲಾಗಿದೆ. ಕಾರ್ಯದಲ್ಲಿ ಪ್ರಥಮ ಸಾಹಿತಿ ಹಾಗೂ ಕಲಾವಿದರ ಬಗ್ಗೆ ಸಾಕ್ಷ್ಯ ಚಿತ್ರ ನಿರ್ಮಾಣವಾಗುತ್ತಿವೆ ಎಂದು ತಿಳಿಸಿದರು.
 
ರಾಜ್ಯದ ಬಹುತೇಕ ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ವಿಚಾರ ಸಂಕಿರಣ ಆಯೋಜಿಸಲಾಗಿದೆ ಹಾಗೂ ಬಂಜಾರ ಯುವಕ ಯುವತಿಯರಿಗೆ ಕಸೂತಿ, ತರಬೇತಿ ಶಿಬಿರ ಯಶಸ್ವಿ ಆಯೋಜಿಸಲಾಗಿದೆ ಹಾಗೂ ವಿಜಯಪುರದಲ್ಲಿ ಹತ್ತು ದಿನಗಳ ಬಂಜಾರ ಆಭರಣ ತಯಾರಿಕೆ ಕಾರ್ಯಾಗಾರ ನಡೆಸಲಾಗಿದೆ ಬೆಂಗಳೂರು ನಗರದಲ್ಲಿ ಪ್ರತಿ ತಿಂಗಳು ನಾಡಿನ ಸಾಹಿತಿಗಳು ಚಿಂತಕರು ಪ್ರಗತಿಪರರು, ಸಮುದಾಯದ ಎಲೆಮರೆ ಕಾಯಿಗಳು ಮತ್ತು ಗಣ್ಯ ವ್ಯಕ್ತಿಗಳನ್ನು ಕರೆಸಿ ತಿಂಗಳ ಅತಿಥಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇವುಗಳ ಜೊತೆಗೆ ಅಕಾಡೆಮಿಯು ಬಂಜಾರ ಸಮುದಾಯದ ಸಾಧಕರನ್ನು ಗುರುತಿಸಿ ಅವರಿಗೆ ಪ್ರಶಸ್ತಿ ಗೌರವಗಳನ್ನು ನೀಡುವ, ಕೊಡಿಸುವ ಕೆಲಸವನ್ನು ಮಾಡುತ್ತಿದೆ ಎಂದು ತಿಳಿಸಿದರು.

ಮಾನ್ಯ ಪ್ರಧಾನ ಮಂತ್ರಿ ಅವರನ್ನು ಬಂಜಾರ ಭಾಷೆಯನ್ನೂ ಪ್ರಸಾರ ಭಾರತೀಯ ಅಕಾಶವಾಣಿ, ದೂರದರ್ಶನ ಹಾಗೂ ಇತರೆ ಕಡೆ ಬೆಳಸಲು ಅವಕಾಶ ಹಾಗೂ ಬಂಜಾರ ಭಾಷೆಗೆ ಸಂವಿಧಾನಿಕ ಸ್ಥಾನ ಮಾನಕ್ಕೆ ಕೋರಲಾಗಿದೆ. ಜೊತೆಗೆ ಬಂಜಾರ ಮ್ಯೂಸಿಯಂ ಹಾಗೂ ಮಾದರಿ ತಾಂಡ ಅಲ್ಲದೆ ಲಿಪಿ ಇಲ್ಲದ ಬಂಜಾರ ಭಾಷೆಯನ್ನು ಆಯಾ ರಾಜ್ಯಗಳ ಪ್ರಾದೇಶಿಕ ಭಾಷೆಯಲ್ಲಿಯೂ ಮತ್ತು ರಾಷ್ಟ್ರಮಟ್ಟದಲ್ಲಿ ನಾಗರೀಕ ಲಿಪಿಯಲ್ಲಿ ಬರೆಯುತ್ತಿದ್ದು, ಅಂತರರಾಷ್ಟ್ರೀಯ ಮಟ್ಟದಲ್ಲಿ ಆಂಗ್ಲ ಭಾಷೆ  ಬಳಕೆ ಇದೆ. ಇದನ್ನೇ ಅನೇಕ ಬಂಜಾರ ಭಾಷಾ ತಜ್ಞರು ಅಖೈರು ಗೊಳಿಸಲು ತಮ್ಮ ಸಮರ್ಥನೆ ಹೇಳಿದ್ದಾರೆ. ಈ ನಿಟ್ಟಿನಲ್ಲಿ ಅಕಾಡೆಮಿ ಹೆಚ್ಚಿನ ಸಂಶೋಧನೆ ಮಾಡಲಿದೆ ಮತ್ತು ಅಖೈರು ಗೊಳಿಸಲಿದೆ ಎಂದರು.

ಹಿರಿಯ ಸಾಂಸ್ಕøತಿಕ ಚಿಂತಕರು ಹಾಗೂ ಮಾನ್ಯ ಮುಖ್ಯಮಂತ್ರಿಗಳ ವಿಶ್ರಾಂತ ಮಾಧ್ಯಮ ಸಲಹೆಗಾರರಾದ ದಿನೇಶ್ ಅಮಿನ್ ಮಟ್ಟು ಮಾತನಾಡಿ, ಲಲಿತನಾಯಕ್ ಸಾಹಿತಿಯಾಗಿ ಗುರುತಿಸಿಕೊಂಡು ಆನಂತರ ರಾಜಕಾರಣಿಯಾದವರು. ಅನುವಾದಕಿ ಕೂಡ ಆಗಿದ್ದರು ಬಿ. ಟಿ. ಲಲಿತಾ ನಾಯಕ ಅವರು ಒಬ್ಬರು ರಾಜಕಾರಣಿ, ಸಾಹಿತಿ, ಪತ್ರಕರ್ತೆ ಅಂತ ತಿಳಿದುಕೊಂಡರೆ ಅಷ್ಟೇ ಅಲ್ಲ, ಎಲ್ಲವನ್ನು ಒಳಗೊಂಡು ಸಾರ್ವಜನಿಕ ಹಿತಕ್ಕಾಗಿ ಯಾವ ಯಾವ ಕ್ಷೇತ್ರದಲ್ಲಿ ಕೆಲಸ ಮಾಡಲು ಸಾಧ್ಯವಾಗುತ್ತದೆಯೋ ಆ ಎಲ್ಲಾ ಕ್ಷೇತ್ರದಲ್ಲಿಯೂ ಅವರು ಕಾಣಿಸಿಕೊಂಡಿದ್ದಾರೆ ಅವರು ಮೊದಲ ಬಾರಿ ಸಚಿವರಾಗಿದ್ದಾಗ ಬಹಳ ದೊಡ್ಡ ಸಂಚು ನಡೆದು ಅದನ್ನು ಕಳೆದುಕೊಳ್ಳಬೇಕಾಯಿತು. ಎಲ್ಲವನ್ನೂ ಕೂಡ ಸಾರ್ವಜನಿಕ ಹಿತಾಶಕ್ತಿಯಲ್ಲಿಯೇ ತೆಗೆದುಕೊಂಡವರು. ನನಗೆ ಆಶ್ಚರ್ಯ ಆಗಿರುವುದು ಏನೆಂದರೆ ಅವರಿಗೆ ರಾಜ್ಯೋತ್ಸವ ಪ್ರಶಸ್ತಿಯಲ್ಲಿ ಅವರ ಹೆಸರು ಕಾಣಿಸಿಕೊಂಡಾಗ, ಅವರಿಗೆ 10 ವರ್ಷದ ಹಿಂದೆಯೇ ರಾಜ್ಯೋತ್ಸವ ಪ್ರಶಸ್ತಿ ಬಂದಿರಬಹುದು ಎಂದು ತಿಳಿದುಕೊಂಡಿದ್ದೆ. ಆದರೆ ಇಲ್ಲಿಯವರೆಗೆ ಬರದಿರುವುದು ಶೋಚನೀಯ, ಪ್ರಸಕ್ತ ಸಾಲಿನಲ್ಲಿ ಬಂಜಾರ ಅಕಾಡೆಮಿಯ ಅಧ್ಯಕ್ಷರ ಹಾಗೂ ಇತರರ ಶಿಫಾರಸ್ಸು, ತಜ್ಞರ ಸಮಿತಿ ಶಿಫಾರಸ್ಸಿನಿಂದ ಪ್ರಶಸ್ತಿ ಸಿಕ್ಕಿದದಕ್ಕಾಗಿ ಅಭಿನಂದಿಸಿದರು.

ಸಮಾರಂಭದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಕೆ. ಎಲ್. ಮುಕುಂದ್ ರಾಜ್, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಮಾನಸ, ಶಿಕ್ಷಣ ತಜ್ಞ ಪೆÇ್ರ. ಪಾಂಡುನಾಯಕ್, ಪತ್ರಕರ್ತೆ ಮಂಜು ಶ್ರೀ ಅಕಾಡೆಮಿಯ ಸದಸ್ಯ ಸಂಚಾಲಕ ಡಾ. ಉತ್ತಮ್ ರಾಥೋಡ್ ಹಾಗೂ ಇತರೆ ಸದಸ್ಯರು, ದಲಿತ ಕಾರ್ಮಿಕ ಮುಖಂಡರಾದ ಗವಿಕುಮಾರ್, ಸಾಹಿತಿ ಬಾಲುನಾಯಕ್ ಮುಂತಾದವರು ಉಪಸ್ಥಿತರಿದ್ದರು.

ನಿಗದಿತ ಅವಧಿಯೊಳಗೆ ಸಾರ್ವಜನಿಕರ ಅರ್ಜಿಗಳನ್ನು ವಿಲೇವಾರಿಗೊಳಿಸಿ-ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ

ಬೀದರ :- ಡಿಸೆಂಬರ್.19 ರಿಂದ 24 ರವರೆಗೆ ದೇಶಾದ್ಯಂತ ಗುಡ್ ಗರ‍್ನನ್ಸ್ ಉತ್ತಮ ಆಡಳಿತ ಆಚರಣೆ ಮಾಡಲಾಗುತ್ತಿದ್ದು, ಅಧಿಕಾರಿಗಳು ತಮ್ಮ ಹಂತದಲ್ಲಿಯೇ ನಿಗದಿತ ಅವಧಿ ಒಳಗಾಗಿ ಸಾರ್ವಜನಿಕರ ಅಹವಾಲುಗಳನ್ನು ವಿಲೇವಾರಿಗೊಳಿಸುವಂಎ ಜಿಲ್ಲಾಧಿಕಾರಿ ಶಿಲ್ಪಾ ಶಮಾ ತಿಳಿಸಿದರು.



 ಅವರು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿAದು ಹಮ್ಮಿಕೊಂಡ ಉತ್ಮತ ಆಡಳಿತ ಗುಡ್ ಗರ‍್ನನ್ಸ್ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಈಲ್ಲಾಡಳಿತದ ಜಿಲ್ಲಾ ಪಂಚಾಯತನ ವಿವಿಧ ಇಲಾಖೆಗಳು ತಳಮಟ್ಟದಲ್ಲಿಯೇ ಅರ್ಜಿಗಳನ್ನು ವಿಲೇವಾರಿ ಮಾಡದಲ್ಲಿ ತಾಲ್ಲೂಕು ಅಥವಾ ಜಿಲ್ಲಾ ಮಟ್ಟಕ್ಕೆ ಯಾವುದೇ ಸಮಸ್ಯೆ ಇರುವುದಿಲ್ಲ. ಸಾರ್ವಜನಿಕರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಅಧಿಕಾರಿಗಳು ಸದಾ ಕ್ರೀಯಾಶೀಲರಾಗಿರಬೇಕು. ಅರ್ಜಿಗಳು ಸಲ್ಲಿಯಾದ ತಕ್ಷಣವೇ ತಮ್ಮ ಮಟ್ಟದಲ್ಲಿ ಪರಿಶೀಲಿಸಿ ಪರಿಹರಿಸಬೇಕು. ಜಿಲ್ಲಾ ಮಟ್ಟದ ಅಧಿಕಾರಿಗಳು ಎಲ್ಲ ಸಹಾಯ ಸೌಲಭ್ಯಗಳನ್ನು ನಿಗದಿತ ಸಮಯದೊಳಗೆ ಒದಗಿಸಬೇಕೆಂದು ತಿಳಿಸಿದರು.
 ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ ಮಾತನಾಡಿ, ಅಧಿಕಾರಿಗಳು ಸಕಾಲ ಹಾಗೂ ಐಪಿಜಿಆರ್‌ಎಸ್ ತಂತ್ರಾAಶದಲ್ಲಿ ಬಾಕಿಯಿರುವ ಅರ್ಜಿಗಳನ್ನು ತಕ್ಷಣವೇ ವಿಲೇವಾರಿ ಮಾಡುವಂತೆ ತಿಳಿಸಿದರು.
 ಬೀದರ ನಗರಸಭೆ 43 ಪ್ರಕರಣಗಳು ಬಾಕಿ ಇವೆ. ಸೇವಾ ಸಿಂಧು (ಎಸ್.ಸಿ./ಎಸ್.ಟಿ/ಓಬಿಸಿ) ಅಡಿ 181 ಪ್ರಕರಣಗಳು, ಸಹಕಾರ ಇಲಾಖೆಯ 25, ಕಾರ್ಮಿಕ ಇಲಾಖೆಯ 43, ಜಿಲ್ಲಾ ನೋಂದಣಿ 213, ಗ್ರಾಮಿಣ ಅಭಿವೃದ್ಧಿ ಪಂಚಾಯತರಾಜ್ 2, ಆರ್‌ಟಿಓ 15 ಸೇರಿದಂತೆ ಒಟ್ಟು 899 ವಿವಿಧ ಪ್ರಕರಣಗಳು ಬಾಕಿಯಿದ್ದು, ಅವುಗಳನ್ನು ವಿಲೇವಾರಿ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
 ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಮೊಹಮ್ಮದ ಶಕೀಲ, ಬೀದರ ವಿಶ್ವವಿದ್ಯಾಲಯದ ರಜಿಸ್ಟಾçರ್ ಸುರೇಖಾ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಸ್ಪರ್ಧಾತ್ಮಕ ಯುಗದಲ್ಲಿ ಉದ್ಯಮಿಗಳು ನೂತನ ತಾಂತ್ರಿಕತೆಗಳನ್ನು ಬಳಸಿಕೊಳ್ಳಬೇಕು-ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ

 ಬೀದರ :- ಆಧುನಿಕ ಸ್ಪರ್ಧಾತ್ಮಕ ಯುಗದಲ್ಲಿ ಉದ್ಯಮಿಗಳು ನೂತನ ತಾಂತ್ರಿಕತೆಗಳನ್ನು ಬಳಸುವುದರ ಜೊತೆಗೆ ಮಾರುಕಟ್ಟೆ ಸ್ಪರ್ಧೆ, ಕಡಿಮೆ ಉತ್ಪಾದನಾ ವೆಚ್ಚ ಹಾಗೂ ಉತ್ತಮ ಗುಣಮಟ್ಟದ ಉತ್ಪಾದನೆಗಳ ಬಗ್ಗೆ ಹೆಚ್ಚಿನ ಗಮನವಿಡಬೇಕೆಂದು ಜಿಲ್ಲಾಧಿಕಾರಿಗಳಾದ ಶಿಲ್ಪಾ ಶರ್ಮಾ ಅವರು ಹೇಳಿದರು.


 ಅವರು ಮಂಗಳವಾರ ಬೀದರನ ನಾವಡಗೇರಿ ಚಿಕ್ಕಪೇಟೆ ಹತ್ತಿರವಿರುವ ಮಸ್ಟಿಫ್ ಸೆಲೆಕ್ಟ್ ಹೋಟೆಲ್‌ನಲ್ಲಿ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಕರ್ನಾಟಕ ಸರ್ಕಾರ, ಜಿಲ್ಲಾ ಕೈಗಾರಿಕಾ ಕೇಂದ್ರ, ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನಾ ಕೇಂದ್ರ (ವಿಟಿಪಿಸಿ) ಹಾಗೂ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ಸಹಯೋಗದಲ್ಲಿ “ಎಂ.ಎಸ್.ಎ.ಇ.ಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸುವುದು ಮತ್ತು ವೇಗಗೊಳಿಸುವುದು” ( RAMP) ಯೋಜನೆಯಡಿಯಲ್ಲಿ ಹಮ್ಮಿಕೊಂಡಿದ್ದ ಲೀನ್ ಯೋಜನೆ ಮತ್ತು ಝಡ್.ಇ.ಡಿ. ಹಾಗೂ ರಫ್ತು ಕುರಿತು ಒಂದು ದಿನದ ಅರಿವು ಮೂಡಿಸುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
 ಯಾವುದೇ ಉದ್ಯಮಕ್ಕೆ ಕಚ್ಚಾ ವಸ್ತು ಮುಖ್ಯ, ಕಚ್ಚಾ ವಸ್ತು ದೊರೆಯುವ ಸ್ಥಳ ಅಂತರ ಹಾಗೂ ಸಾಗಾಟದ ವೆಚ್ಚ ಸಹ ಅತೀ ಮಹತ್ವವಾಗಿರುತ್ತದೆ. ಉತ್ಪಾದನಾ ವೆಚ್ಚಗಳನ್ನು ವಿವಿಧ ಹಂತಗಳಲ್ಲಿ ಕಡಿಮೆಗೊಳಿಸುವ ಬಗ್ಗೆ ಗಮನವಿರಬೇಕು. ಸಮಯದ ಉಳಿತಾಯ, ಕಾರ್ಮಿಕರ ಲಭ್ಯತೆ, ತಾಂತ್ರಿಕತೆಯ ವೆಚ್ಚಗಳನ್ನು ಸೇರಿ ಒಟ್ಟಾರೆಯಾಗಿ ಮಾರುಕಟ್ಟೆಯ ಸ್ಪರ್ಧೆಯಲ್ಲಿ ಉತ್ತಮ ಉತ್ಪನ್ನಗಳನ್ನು ನೀಡಲು ಉದ್ಯಮಿ ಶ್ರಮಿಸಬೇಕೆಂದರು.
 ಸೂಕ್ಷö್ಮ, ಸಣ್ಣ, ಮಧ್ಯಮ ಕೈಗಾರಿಕಾ ಆರಂಭಿಸುವವರಿಗೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ಸಾಲ ಹಾಗೂ ಕಡಿಮೆ ಬಡ್ಡಿ ಸಹಯಧನ ಇದೆ. ಗಡಿ ಹಾಗೂ ಸಣ್ಣ ಕೈಗಾರಿಕೆ ಘಟಕಗಳ ವಿಸ್ತರಣೆಗೆ ಆಧುನಿಕರ ತಾಂತ್ರಿಕ ಉನ್ನತೀಕರಣಕ್ಕೆ ವಿವಿಧ ಸೌಲಭ್ಯಗಳು ಲಭ್ಯವಿದ್ದು ಉದ್ಯಮಿಗಳು ಸದುಪಯೋಗಪಡೆದುಕೊಳ್ಳಲು ಜಿಲ್ಲಾಧಿಕಾರಿಗಳು ಕರೆ ನೀಡಿದರು.
 ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕಿ ಸುರೇಖಾ ಮುನೊಳಿ ಮಾತನಾಡಿ, ಸಣ್ಣ ಕೈಗಾರಿಕೆಗಳಿಂದ ಸ್ಥಳೀಯ ಆರ್ಥಿಕತೆ ಬೆಳೆವಣಿಗೆಗೆ ಅನುಕೂಲವಾಗುತ್ತದೆ. ಸರಕಾರದ ಹೊಸ ಯೋಜನೆಗಳನ್ನು ಉದ್ಯಮಿಗಳು ಉಪಯೋಗಿಸಿಕೊಳ್ಳಬೇಕೆಂದರು.
ಈ ಸಂದರ್ಭದಲ್ಲಿ ಬೀದರ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡ್ಟಿçÃಸ್ ಅಧ್ಯಕ್ಷರಾದ ಬಿ.ಜಿ.ಶೆಟಕಾರ, ಬೀದರ ಜಿಲ್ಲಾ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ಶಿವರಾಜ ಹಲಶೆಟ್ಟಿ, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಕೈಗಾರಿಕೆಗಳ ಸಂಘದ ಅಧ್ಯಕ್ಷ ಪಿ.ವಿಜಯಕುಮಾರ, ಕೆಮಿಕಲ್ ಮತ್ತು ಫಾರ್ಮಾಸ್ಯುಟಿಕಲ್ ಸಂಘದ ಅಧ್ಯಕ್ಷ ದೇವೇಂದ್ರಪ್ಪಾ, ವಿ.ಟಿ.ಪಿ.ಸಿ, ಕಲಬುರಗಿ ಶಾಖಾ ಕಛೇರಿಯ ಸಹಾಯಕ ನಿರ್ದೇಶಕ ಜಾಫರ್ ಖಾಸಿಂ ಅನ್ಸಾರಿ, ಕಾಸಿಯಾ ಅಧ್ಯಕ್ಷರಾದ ಎಂ.ಜಿ.ರಾಜಗೋಪಾಲ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ವಿವೇಕ ದೀಪಕ ವಾಲಿ ಅವರ ಕಾರ್ಯ ಶ್ಲಾಘನೀಯ -ರಘುನಾಥ ರೊಟ್ಟೆ

 ವಿವೇಕ ದೀಪಕ ವಾಲಿ ಫೌಂಡೆಶನ್‌ದಿ0ದ ೨೦೨೫ರ ಕ್ಯಾಲೆಂಡರ್ ಬಿಡುಗಡೆ

ಬೀದರ : ಈ ಹಿಂದೆ ಕೋವಿಡ್ ಸಂದರ್ಭದಲ್ಲಿ ಜನಜೀವನ ರಕ್ಷಣೆ ಕಾರ್ಯಕ್ರಮಗಳಲ್ಲಿ ಮುಂಚೂಣಿಯಲ್ಲಿ ನಿಂತು ಆಹೋರಾತ್ರಿ ಶ್ರಮಿಸಿದ ಕೋವಿಡ್ ಯುದ್ಧ ಸೇನಾನಿ ಪ್ರಶಸ್ತಿ ಪುರಸ್ಕೃತ, ಯುವ ಉದ್ಯಮಿ ವಿವೇಕ ದೀಪಕ ವಾಲಿ ಅವರ ಕಾರ್ಯ ಶ್ಲಾಘನೀಯ ಮತ್ತು ಸ್ವಾಗತಾರ್ಹವಾಗಿದೆ. ಪ್ರತಿ ವರ್ಷದಂತೆ ಈ ವರ್ಷವೂ ಸಹ ತಮ್ಮ ಕುಲದೇವತಾ ಹೊನ್ನಿಕೇರಿ ಸಿದ್ದೇಶ್ವರ ದೇವರ ಹೆಸರಿನ ೨೦೨೫ರ ದಿನದರ್ಶಿಕೆ ಹೊರತಂದಿರುವುದು ಹರ್ಷದ ಸಂಗತಿಯಾಗಿದೆ ಎಂದು ಹಿರಿಯ ರಘುನಾಥ ರೊಟ್ಟೆ ಗುರೂಜಿ ಹಲ್ಲಾಳಿ ಹೇಳಿದರು. 

   ಅವರು ಇಂದು ಬೀದರ ಜಿಲ್ಲಾ ಕೆಂದ್ರದಿAದ ೧೨ ಕಿ. ಮೀ. ಅಂತರದಲ್ಲಿರುವ ಭಾಲ್ಕಿ ತಾಲ್ಲೂಕಿನ  ಸುಕ್ಷೇತ್ರ ಹೊನ್ನಿಕೇರಿ ಸಿದ್ದೇಶ್ವರ ದೇವಾಲಯದ ಆವರಣದಲ್ಲಿ ಏರ್ಪಡಿಸಿದ ಸರಳ ಸಮಾರಂಭದಲ್ಲಿ ವಿವೇಕ ದೀಪಕ ವಾಲಿ ಎಂಟರಪ್ರೆöÊಜೆಸ್ ಮುದ್ರಿತ ಶ್ರೀ ಹೊನ್ನಿಕೇರಿ ಸಿದ್ದೇಶ್ವರ ನಾಮದ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡಿ ಮಾತನಾಡುತಿದ್ದರು.

  ಇನ್ನೋರ್ವ ಹಿರಿಯ ನಾರಾಯಣರಾವ ಬಸವಂತರಾವ ಹುಲ್ಲ್ಯಾಳ, ದೈವಿ ಕಾರ್ಯಕ್ಕೆ ಪ್ರಶಂಸೆ ಮಾಡಿದರು. ವಿವೇಕ ದೀಪಕ ವಾಲಿ ಅಭಿಮಾನಿ ಬಳಗದ ಮುಖಂಡ ಪುಷ್ಪಕ ಭಗುಸಿಂಗ್ ಜಾಧವ ಮಾತನಾಡಿ ವಾಲಿರವರು ಯುವಕರ ಕಣ್ಮಣಿಯಾಗಿದ್ದಾರೆ ಅಪ್ಪಟ ದೇಶಭಕ್ತ, ರಾಷ್ಟçಪ್ರೇಮಿ, ಸಹೋದರತ್ವದ ಮನೋಭಾವನೆಯ ಚಿನ್ನದ ಕನ್ನಡಿಗರಾಗಿದ್ದು, ಈ ವರ್ಷವೂ ಸಹ ಹತ್ತು ಸಾವಿರ ದಿನದರ್ಶಿಕೆಗಳನ್ನು ಮುದ್ರಿಸಿ ಉಚಿತವಾಗಿ ನೀಡುತ್ತಿರುವುದು ಅವರ ಸೇವೆ ಇತರರಿಗೆ ಮಾದರಿಯಾಗಿದೆ ಎಂದರು. ರಮೇಶ ಮಿರ್ಜಾಪುರ ಮಾತನಾಡಿ, ಕನ್ನಡ ಭಾಷೆ, ನೆಲ, ಜಲ, ಸಂರಕ್ಷಣೆಗೆ ಯುವ ಉತ್ಸಾಹಿ ತರುಣ ವಿವೇಕ ದೀಪಕ ವಾಲಿ ಅವರು ಕಂಕಣಬದ್ಧರಾಗಿ ದುಡಿಯುತ್ತಿದ್ದಾರೆ ಎಂದರು. ಪ್ರಧಾನ ಅರ್ಚಕರಾದ ಶಿವಾನಂದ ಸ್ವಾಮಿ ವಿಶೇಷ ಪೂಜೆ ಅರ್ಚನೆ, ಅಭಿಷೇಕ ಮಾಡಿ ಶುಭ ಹಾರೈಸಿದರು.

   ಈ ಸರಳ ಕಾರ್ಯಕ್ರಮದಲ್ಲಿ ಸಿದ್ಧಣ್ಣ ಯಳಸಂಗಿ, ದೀಪಕ ಅಷ್ಟಗಿಕರ್, ನಾಗಶೆಟ್ಟಿ ಧರಮಾಪುರ, ಆನಂದ ಕಂದಗೂಳೆ, ಮನೀಷ ಕುಲಕರ್ಣಿ, ಸಚಿನ ಎಂ.ಜೆ., ಆಕಾಶ ಕೋಡಗೆ, ಪುನೀತ, ಶಿವಪ್ರಸಾದ, ಕಾರ್ತಿಕ, ಸೌರವ ಜವಳಿ, ಸೇರಿದಂತೆ ಅನೇಕರಿದ್ದರು. 


ಬೀದರನ ಜಾನುವಾರು ಸಂಶೋಧನೆ ಮತ್ತು ಮಾಹಿತಿ ಕೇಂದ್ರ (ದೇವಣಿ)ಕ್ಕೆ ರಾಷ್ಟ್ರಮಟ್ಟದ ಜಾನುವಾರು ತಳಿ ಸಂರಕ್ಷಣೆ ಪ್ರಶಸ್ತಿ

ಬೀದರ, :- ಭಾರತೀಯ ಕೃಷಿ ಅನುಸಂಧಾನ ಪರಿಷತ್ತು, ನವದೆಹಲಿಯ ಅಂಗ ಸಂಸ್ಥೆಯಾದ ರಾಷ್ಟ್ರೀಯ ಜಾನುವಾರು ಅನುವಂಶಿಕ ಸಂಪನ್ಮೂಲಗಳ ಬ್ಯುರೋ (ನ್ಯಾಷನಲ್ ಬ್ಯುರೋ ಆಫ್ ಎನಿಮಲ್ ಜೆನೆಟಿಕ್ ರಿಸೊಸ್ರ್ಸ್), ಕರ್ನಾಲ್, ಹರಿಯಾಣದಲ್ಲಿ 2024ನೇ ಸಾಲಿನ ರಾಷ್ಟ್ರಮಟ್ಟದ ಜಾನುವಾರು ತಿಳಿ ಸಂರಕ್ಷಣೆ ಪ್ರಶಸ್ತಿಯನ್ನು ಬೀದರನ ಜಾನುವಾರು ಸಂಶೋಧನೆ ಹಾಗೂ ಮಾಹಿತಿ ಕೇಂದ್ರವು ದೇವಣಿ ತಳಿ ಸಂರಕ್ಷಣೆಗಾಗಿ ಪಡೆದುಕೊಂಡಿದೆ ಎಂದು ಬೀದರನ ಕರ್ನಾಟಕ ಪಶುವೈದ್ಯಕೀಯ, ಪಶು ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿಗಳಾದ ಪೆÇ್ರ. ಕೆ.ಸಿ.ವೀರಣ್ಣ ತಿಳಿಸಿದರು.

23ನೇ ಡಿಸೆಂಬರ್.2024 ರಂದು ಕರ್ನಾಲ್, ಹರಿಯಾಣದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ (ರಾಷ್ಟ್ರೀಯ ಕೃಷಿಕರ ದಿನ) ಈ ಪ್ರಶಸ್ತಿಯನ್ನು ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬೀದರನ ಸಂಶೋಧನಾ ನಿರ್ದೇಶಕರಾದ ಡಾ. ಬಿ. ವಿ. ಶಿವಪ್ರಕಾಶ ಹಾಗೂ ಕೇಂದ್ರದ ಮುಖ್ಯಸ್ಥರಾದ ಡಾ. ಪ್ರಕಾಶಕುಮಾರ ರಾಠೋಡ ಅವರು ಸ್ವೀಕರಿಸಿದ್ದಾರೆಂದರು.




ಜಾನುವಾರು ಸಂಶೋಧನೆ ಮತ್ತು ಮಾಹಿತಿ ಕೇಂದ್ರ (ದೇವಣಿ), ಬೀದರವು ಕರ್ನಾಟಕ ಪಶುವೈದ್ಯಕೀಯ, ಪಶು ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬೀದರನ ಸಂಶೋಧನೆ ಮತ್ತು ವಿಸ್ತರಣಾ ಘಟಕವಾಗಿದೆ. ಇದನ್ನು 1970ರಲ್ಲಿ 57 ಎಕರೆ ಪ್ರದೇಶದಲ್ಲಿ ಸ್ಥಾಪಿಸಲಾಯಿತು. ಜಾನುವಾರುಗಳಲ್ಲಿ ಜನಪ್ರಿಯ ದ್ವಿ-ಉದ್ದೇಶಿತ ತಳಿಯಾದ ದೇವಣಿ 300 ವರ್ಷಗಳ ಇತಿಹಾಸವನ್ನು ಹೊಂದಿದೆ ಮತ್ತು ಈ ತಳಿಯು ಬರ ಸಾಮಥ್ರ್ಯ, ಶಾಖ ಸಹಿಷ್ಣುತೆ, ರೋಗ ನಿರೋಧಕತೆ ಮತ್ತು ಕಠಿಣ ಹವಾಮಾನ ಪರಿಸ್ಥಿತಿಗಳಿಗೆ ಹೊಂದಿಕೊಳ್ಳುವಿಕೆಗೆ ಹೆಸರುವಾಸಿಯಾಗಿದೆ. ಇದಲ್ಲದೆ, ದೇವಣಿ ತಳಿಯ ಎತ್ತುಗಳು ಭಾರೀ ಕೆಲಸಕ್ಕೆ ಒಳ್ಳೆಯದು ಮತ್ತು ವಿಶೇಷವಾಗಿ ಅರೆ-ತೀವ್ರ ಕೃಷಿಗೆ ಸೂಕ್ತವಾಗಿದೆ.
ಈ ಕೇಂದ್ರದಲ್ಲಿ ರೈತರು, ರೈತ ಮಹಿಳೆಯರು, ಪಶುವೈದ್ಯಾಧಿಕಾರಿಗಳು ಮತ್ತು ಇತರ ಕ್ಷೇತ್ರ ವೃತ್ತಿಪರರ ಅನುಕೂಲಕ್ಕಾಗಿ ಸಂಶೋಧನೆ ಮತ್ತು ವಿಸ್ತರಣಾ ಚಟುವಟಿಕೆಗಳನ್ನು ನಡೆಸಲಾಗುತ್ತದೆ. ಕೇಂದ್ರವು ಕಳೆದ ಐದು ವರ್ಷಗಳಲ್ಲಿ 4000 ಕ್ಕೂ ಹೆಚ್ಚು ರೈತರಿಗೆ ಆನ್-ಕ್ಯಾಂಪಸ್ ಮತ್ತು ಆಫ್-ಕ್ಯಾಂಪಸ್ ಮೂಲಕ ತರಬೇತಿ ಮತ್ತು ಕ್ಷೇತ್ರ ಭೇಟಿಗಳನ್ನು ನಡೆಸಿದೆ. ಇದಲ್ಲದೆ, ಕರ್ನಾಟಕದ ವಿವಿಧ ಪಶುವೈದ್ಯಕೀಯ ಮಹಾವಿದ್ಯಾಲಯಗಳಿಂದ ಸುಮಾರು 800 ಬಿ.ವ್ಹಿ.ಎಸ್ಸಿ. ಮತ್ತು ಎ.ಎಚ್ ವಿದ್ಯಾರ್ಥಿಗಳು ಕಳೆದ ಮೂರು ವರ್ಷಗಳಲ್ಲಿ ತಮ್ಮ ವಿಸಿಐ ಪಠ್ಯಕ್ರಮದ ಭಾಗವಾಗಿ ಈ ಕೇಂದ್ರದಲ್ಲಿ ಇಂಟನ್ರ್ಶಿಪ್ ಕಾರ್ಯಕ್ರಮಕ್ಕೆ ಒಳಗಾಗಿದ್ದಾರೆ.
ಆಧುನಿಕ ವೈಜ್ಞಾನಿಕ ಜಾನುವಾರು ಪದ್ಧತಿಗಳ ಭಾಗವಾಗಿ, ಕೇಂದ್ರವು ಸಾಂಪ್ರದಾಯಿಕ ವಸತಿ ಮತ್ತು ಬಂಧನ ಮುಕ್ತ ಪದ್ಧತಿಯ ಮುಖಾಂತರ ವಸತಿ ಸೌಲಭ್ಯಗಳನ್ನು ಕಲ್ಪಿಸಿದೆ. ಕೇಂದ್ರವು ಹಸಿರು ಮೇವು, ಒಣ ಮೇವು, ಸಾಂದ್ರೀಕೃತ ಆಹಾರಗಳು ಮತ್ತು ನಿರ್ದಿಷ್ಟ ಖನಿಜ ಮಿಶ್ರಣದ ರೂಪದಲ್ಲಿ ವೈಜ್ಞಾನಿಕ ಆಹಾರ ಪದ್ಧತಿಗಳನ್ನು ಅನುಸರಿಸುತ್ತಿದೆ. ಜಾನುವಾರುಗಳ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು, ಕೇಂದ್ರವು ಸುಮಾರು 30 ಎಕರೆ ಹಸಿರು ಮೇವು ಉತ್ಪಾದನೆಯನ್ನು ಹೊಂದಿದೆ, ಇದರಲ್ಲಿ 8 ಎಕರೆ ಹುಲ್ಲುಗಾವಲಿನಲ್ಲಿ ವಿವಿಧ ಮೇವಿನ ಬೆಳೆಗಳಾದ ರೋಡ್ಸ್, ಪ್ಯಾರಾಗ್ರಾಸ್, ಗಿನಿ ಹುಲ್ಲು ಇತ್ಯಾದಿಗಳನ್ನು ಬೆಳೆಯಲಾಗಿದೆ. ಸಂಶೋಧನಾ ಕೇಂದ್ರವು ಸುಸಜ್ಜಿತ ಮೇವು ಸಂಗ್ರಹಾಲಯವನ್ನು ಹೊಂದಿದ್ದು, ರೈತ ಸಮುದಾಯದ ಪ್ರಯೋಜನಕ್ಕಾಗಿ ಮೇವಿನ 35 ವಿಭಿನ್ನ ಬೆಳೆಗಳನ್ನು ಒಳಗೊಂಡಿದೆ.
ಹೆಚ್ಚಿನ ಅನುವಂಶಿಕ ಅರ್ಹತೆ ಹೊಂದಿರುವ ಹೋರಿ ಕರುಗಳನ್ನು ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳ ವಿವಿಧ ಸರ್ಕಾರಿ ವೀರ್ಯ ಉತ್ಪಾದನಾ ಕೇಂದ್ರಗಳಿಗೆ ವರ್ಗಾಯಿಸಲಾಗುತ್ತದೆ. ವಿವಿಧ ವೀರ್ಯ ಕೇಂದ್ರಗಳಲ್ಲಿ ಈ ಹೋರಿಗಳಿಂದ ಸುಮಾರು 2,80,000 ವೀರ್ಯ ಡೋಸ್ಗಳನ್ನು ಉತ್ಪಾದಿಸಲಾಗಿದೆ. ಇದಲ್ಲದೆ, ಕೇಂದ್ರವು ರೈತ ಸಮುದಾಯದ ಅನುಕೂಲಕ್ಕಾಗಿ ಮತ್ತು ದೇವಣಿ ತಳಿ ಸಂರಕ್ಷಣೆಯನ್ನು ಉತ್ತೇಜಿಸಲು ದೇವಣಿ ತಳಿಗಳ ಮಾರಾಟ/ಹರಾಜನ್ನು ಸಹ ನಡೆಸುತ್ತದೆ. ಕಳೆದ 10 ವರ್ಷಗಳ ಅವಧಿಯಲ್ಲಿ, ರೈತ ಸಮುದಾಯದ ಅನುಕೂಲಕ್ಕಾಗಿ 300ಕ್ಕೂ ಹೆಚ್ಚು ದೇವಣಿ ಜಾನುವಾರುಗಳನ್ನು ಹರಾಜು ಮಾಡಲಾಗಿದೆ. ಇದಲ್ಲದೆ ಈ ಕೇಂದ್ರವು “ಕರ್ನಾಟಕದ ಬೀದರ ಜಿಲ್ಲೆಯಲ್ಲಿ ದೇವಣಿ ಜಾನುವಾರುಗಳ ಕಾರ್ಯಕ್ಷಮತೆಯ ದಾಖಲೆ” ಯೋಜನೆಯನ್ನು ಜಾರಿಗೆ ತಂದಿದೆ. ಬೀದರ ಜಿಲ್ಲೆಯ ಔರಾದ್ ಮತ್ತು ಭಾಲ್ಕಿ ತಾಲೂಕಿನ 21 ಗ್ರಾಮಗಳಲ್ಲಿ ಹೆಚ್ಚಿನ ಸಂಖ್ಯೆಯ ದೇವಣಿ ತಳಿಗಳ ಅಧ್ಯಯನವನ್ನು ನಡೆಸಲಾಗಿದೆ. 500 ಕ್ಕೂ ಹೆಚ್ಚು ದೇವಣಿ ತಳಿ ಸಾಕಣೆ ರೈತರಿಂದ ಸುಮಾರು 5200 ಕ್ಕೂ ಹೆಚ್ಚು ದೇವಣಿ ಜಾನುವಾರುಗಳ ಮೂಲ ಡೇಟಾವನ್ನು (ಮಾಹಿತಿ) ಸಂಗ್ರಹಿಸಲಾಗಿದೆ.
ಕೇಂದ್ರವು ಬಹು ಅಂಡೋತ್ಪತ್ತಿ ಮತ್ತು ಭ್ರೂಣ ವರ್ಗಾವಣೆ ತಂತ್ರಜ್ಞಾನದ ಮೂಲಕ 8 ಕರುಗಳನ್ನು ಪಡೆದಿರುವುದು ಗಮನಾರ್ಹ ಸಾಧನೆಯಾಗಿದೆ. ಭವಿಷ್ಯದಲ್ಲಿ, ಈ ಕಾರ್ಯಕ್ರಮವನ್ನು ಕ್ಷೇತ್ರ ಪರಿಸ್ಥಿತಿಗಳಲ್ಲಿ ಕಾರ್ಯಗತಗೊಳಿಸಲು ಕೇಂದ್ರವು ಯೋಜಿಸುತ್ತಿದೆ. ಇದಲ್ಲದೇ, ವಿಶ್ವವಿದ್ಯಾಲಯದಲ್ಲಿ ದೇವಣಿ ತಳಿ ಪಾಲನೆ, ಕಾರ್ಯಕ್ಷಮತೆ, ಸಂರಕ್ಷಣೆ ಇತ್ಯಾದಿಗಳಿಗೆ ಸಂಬಂಧಿಸಿದಂತೆ ಸುಮಾರು 25 ಅಧ್ಯಯನಗಳನ್ನು ನಡೆಸಲಾಗಿದೆ.
ಕೇಂದ್ರವು ಹಾಲು, ಗೋಮೂತ್ರ, ಮೇವಿನ ಬೇರುಗಳು / ಕಾಂಡದ ತುಂಡುಗಳು, ಗೊಬ್ಬರ, ಎರೆಹುಳು ಗೊಬ್ಬರ, ಎರೆಹುಳು, ಹಸುವಿನ ಸಗಣಿ ಇತ್ಯಾದಿ ಮಾರಾಟ ಮಾಡುವ ಮೂಲಕ ಹೆಚ್ಚಿನ ಆದಾಯವನ್ನು ಗಳಿಸಿದೆ. ಈ ಕೇಂದ್ರವು ವಿವಿಧ ಸಂಸ್ಥೆಗಳು/ವಿಶ್ವವಿದ್ಯಾಲಯಗಳು ಆಯೋಜಿಸುವ ಜಾನುವಾರು ಪ್ರದರ್ಶನಗಳು, ಕೃಷಿ ಮೇಳ, ಪಶು ಮೇಳ ಇತ್ಯಾದಿಗಳಲ್ಲಿ ದೇವಣಿ ತಳಿಯ ಬಗ್ಗೆ ಜಾಗೃತಿ ಮೂಡಿಸಲು ಭಾಗವಹಿಸುತ್ತದೆ ಮತ್ತು ಹಲವಾರು ಪ್ರಶಸ್ತಿಗಳು ಮತ್ತು ಮನ್ನಣೆಗಳನ್ನು ಪಡೆದಿದೆ. ಈ ಸಂಸ್ಥೆಯು ಭಾರತ ಸರ್ಕಾರದ ಅಂಚೆ ಇಲಾಖೆಯ ಸಹಯೋಗದೊಂದಿಗೆ 2019 ರಲ್ಲಿ ದೇವಣಿ ತಳಿಯ ವಿಶೇಷ ಅಂಚೆ ಕವರ್ ಬಿಡುಗಡೆ ಮಾಡಿದೆ.
ಈಗಾಗಲೇ, ಕೇಂದ್ರಕ್ಕೆ ಭೇಟಿ ನೀಡಿದ ಕೆಲವು ಪ್ರಮುಖ ಗಣ್ಯರೆಂದರೆ ಘನವೆತ್ತ, ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್, ಮಾಜಿ ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್, ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ, ಡಾ. ಬಿ. ಎನ್. ತ್ರಿಪಾಠಿ (ಐಸಿಎಆರ್), ಡಾ. ಆರ್. ಸಿ. ಅಗರವಾಲ್ (ಐಸಿಎಆರ್), ಡಾ. ರಾಘವೇಂದ್ರ ಭಟ್ (ಐಸಿಎಆರ್) ಮುಂತಾದವರು ಈ ಕೇಂದ್ರವು ವಿಶ್ವವಿದ್ಯಾಲಯ ಮತ್ತು ಸರ್ಕಾರದ ಬೆಂಬಲದೊಂದಿಗೆ ದೇವಣಿ ತಳಿಯ ಜಾನುವಾರುಗಳ ಸಂರಕ್ಷಣೆ ಮತ್ತು ಪ್ರಚಾರಕ್ಕಾಗಿ ಶ್ರಮಿಸುವುದನ್ನು ಮುಂದುವರಿಸುತ್ತದೆ.
ಪಶುವೈದ್ಯಕೀಯ ಮತ್ತು ಪ್ರಾಣಿ ವಿಜಾÐನ ಕ್ಷೇತ್ರದಲ್ಲಿ ಈ ಗಮನಾರ್ಹ ಸಂಶೋಧನೆಗಾಗಿ ನಾನು ಈಗೀನ ಹಾಗೂ ಮೊದಲಿನ ಎಲ್ಲ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಯವರನ್ನು ಈ ಸಂದರ್ಭದಲ್ಲಿ ಅಭಿನಂದಿಸುತ್ತೇನೆ. ಈ ಯಶಸ್ಸು ವಿಜಾÐನಿಗಳ ತಂಡದ ಸಮರ್ಪಣೆ, ಪರಿಣಿತಿ ಮತ್ತು ಪ್ರವರ್ತಕ ಮನೋಭಾವವನ್ನು ಎತ್ತಿ ತೋರಿಸಿತ್ತದೆ. ಇದು ಜಾನುವಾರು ಸಂಶೋಧನೆ ಮತ್ತು ನಾವೀನ್ಯತೆಯನ್ನು ಮುನ್ನಡೆಸುವ ಬದ್ಧತೆಯನ್ನು ಬಲಪಡಿಸುತ್ತದೆ. ಈ ಪ್ರಶಸ್ತಿಯು ಹೈನುಗಾರಿಕೆ ಉದ್ಯಮಕ್ಕೆ ಉಜ್ವಲ ಭವಿಷ್ಯದ ಭರವಸೆ ನೀಡುವುದರೊಂದಿಗೆ, ನಮ್ಮ ದೇಶಿ ತಳಿ ಸಂರಕ್ಷಣೆ ಮತ್ತು ಪ್ರಸರಣವನ್ನು ಕೈಗೊಳುವ ಸಾಮಥ್ರ್ಯವನ್ನು ಪ್ರದರ್ಶಿಸುತ್ತವೆ ಎಂದರು.
ಈ ಸಂಸ್ಥೆಯು ಭಾರತದಲ್ಲಿ ವಿವಿಧ ಜಾನುವಾರುಗಳ ತಳಿ ನೋಂದಣಿ, ಪ್ರಸರಣೆ, ಸಂಶೋಧನೆ, ವಿಸ್ತರಣೆಯಂತಹ ಚಟುವಟಿಕೆಗಳನ್ನು ಮಾಡುತ್ತಿದೆ. ಈಗಾಗಲೇ ನೋಂದಾಯಿಸಲಾದ ದೇಶಿ ತಳಿಗಳು ಹೀಗಿವೆ 53 ತಳಿ ಆಕಳು, 20 ತಳಿ ಎಮ್ಮೆಗಳು, 39 ತಳಿ ಮೇಕೆಗಳು, 45 ತಳಿ ಕುರಿಗಳು, 8 ತಳಿ ಕುದುರೆ & ಪೆÇೀನಿಗಳು, 9 ತಳಿ ಒಂಟೆಗಳು, 14 ತಳಿ ಹಂದಿಗಳು, 3 ತಳಿ ಕತ್ತೆಗಳು, 1 ತಳಿ ಯಾಕ್, 3 ತಳಿ ಬಾತುಕೋಳಿ ಮತ್ತು 1 ತಳಿ ಗೀಸ್ ಎಂದರು.

ಪ್ರೇಮ ಕಾಶ್ಮೀರದಲ್ಲಿ ರಕ್ತದೋಕುಳಿ; ಹಿಂದೂಗಳೇ ಟಾರ್ಗೆಟ...!

  ಪ್ರೇಮ ಕಾಶ್ಮೀರದಲ್ಲಿ ರಕ್ತದೋಕುಳಿ; ಹಿಂದೂಗಳೇ ಟಾರ್ಗೆಟ್. ಭೂಲೋಕದ ಸ್ವರ್ಗವೆಂದೇ ಕರೆಯುವ ಜಮ್ಮು-ಕಾಶ್ಮೀರದ ಪೆಹಲ್ಗಾಮ್ ಸಮೀಪದ ಬೈಸರನ್ ಹುಲ್ಲುಗಾವಲಿನಲ್ಲಿ ಪಾಕ್ ಪ್...