ads

Search This Blog

Monday, 6 January 2025

ಕನ್ನಡ ಹೊರಾಟಗಾರ ಶರಣಪ್ಪ ಮುಡಿಗೆರಿದ ಗೌರವ ಡಾಕ್ಟರೇಟ್

 ಶೋಧವಾಣಿ ಜಾಲಲೋಕ

ಬೆಂಗಳೂರು : ಅಪ್ಪಟ ಕನ್ನಡಿಗ ಮಹಾರಾಷ್ಟ್ರ ಮರಾಠಿ ಪ್ರಭಾವ ಇರುವ ನಾಡಿನಲ್ಲಿ ಕನ್ನಡ ಕೈಂಕರ್ಯ ಗೈಯುತ್ತ ಅನೇಕ ಪ್ರಕರಣಗಳು ಎದ್ದುರಿಸಿದ ಧೀಮಂತ ಹೋರಾಟಗಾರ ಬಸವಕಲ್ಯಾಣ ಪ್ರಾಂತ್ಯದಲ್ಲಿ ಅನೇಕ ಸಾಮಾಜಿ. ಸಾಂಸ್ಕೃತಿಕ ಕನ್ನಡ ಸಮಾರಂಭ ಆಯೋಜನೆ ಮಾಡುತ್ತ ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ ಕನ್ನಡ ಹೊರಾಟಗಾರ ಶರಣಪ್ಪ ಕೆ ಗದಲೆಗಾಂವ ಅವರಿಗೆ ತಮಿಳನಾಡಿನ ಅಸೀಯನ ಅಂತರರಾಷ್ಟ್ರೀಯ ಸಂಸ್ಕೃತಿಯ ಸಂಶೋಧನೆ ವಿಶ್ವವಿದ್ಯಾಲಯ ಅವರ ಸಮಾಜಿಕ ಕೊಡುಗೆಯನ್ನು ಗುರುತಿಸಿ ಶನಿವಾರ ಬೆಂಗಳೂರನಲ್ಲಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. 

ಕನ್ನಡ ಹೊರಾಟಗಾರ ಶರಣಪ್ಪ ಕೆ ಗದಲೆಗಾಂವ ಅವರಿಗೆ ತಮಿಳನಾಡಿನ ಅಸೀಯನ ಅಂತರರಾಷ್ಟ್ರೀಯ ಸಂಸ್ಕೃತಿಯ ಸಂಶೋಧನೆ ವಿಶ್ವವಿದ್ಯಾಲಯ ಅವರ ಸಮಾಜಿಕ ಕೊಡುಗೆಯನ್ನು ಗುರುತಿಸಿ ಶನಿವಾರ ಬೆಂಗಳೂರನಲ್ಲಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. 

ಶರಣಪ್ಪ ಗದಲೆಗಾಂವ ಮೂಲತ ಬೀದರ ಜಿಲ್ಲೆಯ ಬಸವಕಲ್ಯಾಣ ತಾಲೂಕಿನಲ್ಲಿ ಬರುವ  ಗದಲೆಗಾಂವ ಎಂಬ ಕುಗ್ರಾಮದಲ್ಲಿ ಜನಿಸಿದರು. ಚಿಕ್ಕ ವಯಸ್ಸಿನಲ್ಲೇ ಬಡತನದ ಬೇಗೆಯಿಂದ ಬಳಲಿ. ಜೀವನದಲ್ಲಿ ಬಡತನ ಹೋಗಲಾಡಿಸಲು ಶಿಕ್ಷಣ ಒಂದೇ ಉಪಾಯ ಎಂದು ತಿಳಿದು ಬಸವಕಲ್ಯಾಣ ತಾಲೂಕಿನಲ್ಲಿ ಮುಗಿಸಿ ಇಂದು ಕರ್ನಾಟಕ ರಾಜ್ಯ ಸರ್ಕಾರದ ಶಿಕ್ಷಣ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಲೇ ಇಂದು ಬಸವಕಲ್ಯಾಣ ತಾಲೂಕಿನಲ್ಲಿ ಕನ್ನಡಿಗರನ್ನು ಸಂಘಟಿಸಿ ಅನೇಕ ಮಾದರಿಯ ಕಾರ್ಯಕ್ರಮ ನೀಡಿದ ಹೆಗ್ಗಳಿಕೆ ಶರಣಪ್ಪ  ಅವರದು. 

ಶೋಧವಾಣಿ ನ್ಯೂಸ್ ನೊಂದಿಗೆ ಮಾತನಾಡಿದ ಶರಣಪ್ಪ ಅವರು ನಮ್ಮ ಚಿಕ್ಕ ವಯಸ್ಸಿನಲ್ಲೇ ಎಲ್ಲವನ್ನೂ ಕಂಡುಕೊಂಡೆ ಗ್ರಾಮದಲ್ಲಿ ಜೀವನ ನಡೆಸಲು ಆಗದಂತಹ ಪರಿಸ್ಥಿತಿಯಲ್ಲಿ ನಮಗೆ ಅನೇಕರು ಗ್ರಾಮದ ಪ್ರಮುಖ ವ್ಯಕ್ತಿಗಳು ನನ್ನ ಜೀವನದ ತಿರುವಿಗೆ ಸಹಕಾರ ನೀಡಿದ ಎಲ್ಲಾ ಆತ್ಮೀಯ ಹಿರಿಯರಿಗೆ ಈ ಗೌರವ ಡಾಕ್ಟರೇಟ್ ಪ್ರಶಸ್ತಿಯನ್ನು  ಗದಲೆಗಾಂವ ಗ್ರಾಮದ ಹಿರಿಯರಿಗೆ ಅರ್ಪಿಸುತ್ತೇನೆ ಎಂದು ಭಾವುಕರಾಗಿ  ಶರಣಪ್ಪ ನುಡಿದರು.  ನನಗೆ ಕಾಲೇಜು ಫೀಸ್ ಕಟ್ಟಲು ಆಗದ ಪರಿಸ್ಥಿತಿಯಲ್ಲಿ ನನಗೆ ಸಹಾಯ ಮಾಡಿದ ಹಿರಿಯರಿಗೆ ಯಾವತ್ತೂ ಜೀವನದಲ್ಲಿ ಮರೆಯುವುದಿಲ್ಲ. ಅವರ ಋಣಭಾರದಿಂದ ಮಾತ್ರ ನಾನು ಇಂದು ಒಬ್ಬ ಉನ್ನತವಾದ ಮಟ್ಟಕ್ಕೆ ಬೆಳೆಯಲು ಕಾರಣರಾದರು. ಅವರು ನನಗೆ ಸಹಾಯ ಮಾಡಲಿಲ್ಲ ಅಂದು ಅಂದರೆ ಇಂದು ನಾನು ಗ್ರಾಮದಲ್ಲಿಯೇ ರೈತನಾಗಿ ದುಡಿಯಬೇಕಾಗಿತು.  ಬಂದುಕಬೇಕಾಗಿತು ಹೀಗಾಗಿ ನನಗೆ ಜೀವನದಲ್ಲಿ ಸಹಾಯ ಸಹಕಾರ ನೀಡಿದ ಎಲ್ಲಾ ಮಹನೀಯರಿಗೂ ತುಂಬುಹೃದಯದಿಂದ ಧನ್ಯವಾದಗಳು ತಿಳಿಸುವೆ ಎಂದು ನುಡಿದರು.

 ರಾಜ್ಯಗಳಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಅನೇಕ ಅನುಭವಕ್ಕೆ ಕೈಬಿಸಿ ಕರೆಯುತ್ತಿವೆ ಹೀಗಾಗಿ ಇಂದು ಯುವ ಜನಾಂಗಕ್ಕೆ ಶರಣಪ್ಪ ಗದಲೆಗಾಂವ ಅವರು ಮಾದರಿಯ ವ್ಯಕ್ತಿಯಾಗಿದ್ದಾರೆ. ತಮ್ಮನ್ನು ಕಾಣಲು ಬಂದ ಜನ ಸಾಮಾನ್ಯರಿಗೂ ತಮ್ಮ ಕೈಲಾದ ಸಹಾಯವನ್ನು ಮಾಡುವುದು ಮರೆಯುವುದಿಲ್ಲ. ಎಲ್ಲರೊಂದಿಗೆ ತಾವೊಬ್ಬರು ಎಂದು ಎಲ್ಲರೊಂದಿಗೆ ಬೆರೆಯುವ ಮನೋಭಾವ ಹೊಂದಿದ್ದ ಶರಣಪ್ಪ ಗದಲೆಗಾಂವ ಮಾದರಿ ವ್ಯಕ್ತಿ ಎಂದರು ಉತ್ಪ್ರೇಕ್ಷೆ ಯಾಗದು.. ಹಾಗೇ ಶರಣಪ್ಪ ಗದಲೆಗಾಂವ ಅವರ ಸೇವೆಗೆ ಇನ್ನೂ ಅನೇಕ ಪ್ರಶಸ್ತಿಗಳನ್ನು ಬರಲಿ ಎಂದು ಶುಭೋದಯ ಮೀಡಿಯಾ ಹಾರೈಸುತ್ತದೆ.

Sunday, 5 January 2025

ಕಾವ್ಯ ಎನ್ನುವುದು ಜನಪರ, ಜೀವಪರವಾಗಿರಬೇಕು – ಡಾ. ಚಂದ್ರಕಲಾ ಬಿದ್ರಿ

ಬೀದರ್   : ಇತ್ತಿಚಿನ ದಿನಮಾನಗಳಲ್ಲಿ ಇಂಗ್ಲೀಷ ಪಾಚಿಮಾತ್ಯ ಸಂಸ್ಕೃತಿಗೆ ಮಾರು ಹೋಗಿ ನಮ್ಮ ಸಂಸ್ಕೃತಿಯನ್ನು ಮರೆಯುತ್ತಿರುವುದು ವಿಷಾದನೀಯವಾಗಿದೆ ಎಂದು ಕರ್ನಾಟಕ ಸಾಹಿತ್ಯ ಅಕಾಡೇಮಿ ಸದಸ್ಯರಾದ ಡಾ. ಚಂದ್ರಕಲಾ ಬಿದ್ರಿ ಅವರು ಕಳವಳ ವ್ಯಕ್ತಪಡಿಸಿದರು.

ರವಿವಾರ ಬೆಳಿಗ್ಗೆ ಬೀದರ ನಗರದ ಹೋಟೆಲ್ ಕೃಷ್ಣ ರೇಜೆನ್ಸಿ ಸಭಾಂಗಣದಲ್ಲಿ ರಂಗಮAಡಲ ಬೆಂಗಳೂರು, ಅತಿವಾಳೆ ಸಾಂಸ್ಕೃತಿಕ ಪ್ರತಿಷ್ಠಾನ ಬೀದರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೀದರ ಹಾಗೂ ಪ್ರತಿ ಜಿಲ್ಲೆ ಮತ್ತು ಕನ್ನಡ ಪ್ರದೇಶದಲ್ಲಿ ಸ್ಥಳೀಯ ಸಂಘ ಸಂಸ್ಥೆಗಳ ಸಹಕಾರದೊಂದಿಗೆ "ಕಾವ್ಯ ಸಂಸ್ಕೃತಿ ಯಾನ" ಬೀದರ, ರಾಷ್ಟ್ರ ಕವಿ ಕುವೆಂಪು ಅವರ ಜನ್ಮದಿನೋತ್ಸವ ಪ್ರಯುಕ್ತ "ಶರಣರ ನಾಡಿನಲ್ಲಿ ಜನರೆಡೆಗೆ ಕಾವ್ಯ" ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡುತ್ತಿದ್ದರು.


ಇವತ್ತು ಎಲ್ಲರೀಗೂ ಒಂದು ಪ್ರಶ್ನೆಯನ್ನು ಕಾಡುತ್ತಿದೆ ಅದೆನೆಂದರೇ ಇಂಗ್ಲೀಷನಲ್ಲಿ ಅಭ್ಯಾಸ ಮಾಡಿದವರಿಗೆ ಎಲ್ಲರೀಗೂ ನೌಕರಿ ಸಿಗುವುದು ಎಂದು ಜನರು ತಮ್ಮ ಮಕ್ಕಳಿಗೆ ಇಂಗ್ಲೀಷ ಮಾಧ್ಯಮ ಶಾಲೆಗೆ ಸೇರಿಸುವುದು ನೋಡುತ್ತಿದ್ದೆವೆ. ಕನ್ನಡ ಮಾದ್ಯಮದಲ್ಲಿ ವಿದ್ಯಾಭ್ಯಾಸ ಮಾಡಿದರೇ ಉದ್ಯೋಗ ಸಿಗುತ್ತಿಲ್ಲವೇ? ಇವತ್ತಿಗೂ ಕೂಡ ಕನ್ನಡ ಮಾದ್ಯಮದಲ್ಲಿ ಓದುತ್ತಿರುವ ಮಕ್ಕಳು ಈ ಜಾಗತೀಕರಣ ಯುಗದಲ್ಲಿ ಅದರಲ್ಲೂ ತುಂಬಾನೇ ಸ್ಪರ್ದೆಗಳ ನಡುವೆ ಕನ್ನಡ ಮಾದ್ಯಮದ ಮಕ್ಕಳು ಉತ್ತಮ ರೀತಿಯಲ್ಲಿ ಉತ್ತಿರ್ಣರಾಗುತ್ತಿರುವುದು ನೋಡಿದರೇ ತುಂಬಾನೆ ಖುಷಿಯಾಗುತ್ತಿದೆ ಕಾವ್ಯ ಎನ್ನುವುದು ಜನಪರ, ಜೀವಪರ ವಾಗಿರಬೇಕೆಂದರು. 


ಕಸಾಪ ಮಾಜಿ ಅಧ್ಯಕ್ಷರಾದ ಪ್ರೋ.ಸಿದ್ರಾಮಪ್ಪಾ ಮಾಸಿಮಾಡೆ ಮಾತನಾಡಿ, ನಮ್ಮ ಭಾಗದಲ್ಲಿ ಕವಿಗಳ ಸಾಧನೆಯ ವಿಚಾರದಲ್ಲಿ ಬೀದರ ಜಿಲ್ಲೆಯಲ್ಲಿ ಸಾವಿರ ಕವಿಗಳು ಇದ್ದಾರೆ. ಯಾರಲ್ಲಿ ಮಾನವಿಯತೆ ಕಳಕಳಿ ಇರುತ್ತದೆಯೋ ಅವರು ಕವಿಯಾಗಲು ಸಾಧ್ಯ. ಇಲ್ಲಿ ಯಾವೂದೆ ಅಹಿತಕರ ಘಟನೆಗಳು ನಡೆದರೇ ಅವರಿಗೆ ಸಹಿಸಿಕೊಳ್ಳಲು ಆಗುವುದಿಲ್ಲ. ಘಟನೆಯ ವಿಷಯವು ಏನಾದರು ಪತ್ರಿಕೆಯಲ್ಲಿ ಬಂದರೇ ಮರುದಿನವೇ ಅದರ ಬಗ್ಗೆ ಕವಿತೆ ಬರೆಯುತ್ತಾರೆ. ಕವಿಯಾದವನಿಗೆ ಅಂಥಹ ಘಟನೆಯ ವಿಚಾರಗಳು ಸಹಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಒಬ್ಬ ಕವಿ ತನ್ನ ಕಾವ್ಯ ರಚಿಸಿ ಅದರ ಮೂಲಕವೇ ಪಾತ್ರಧಾರಿಯನ್ನಾಗಿದ್ದಾಗ ಅದರಲ್ಲಿರುವ ಗ್ರಾಮೀಣ ಭಾಗದ ಜನರು ಅನಕ್ಷರಸ್ಥರಿದ್ದರು ಕೂಡ ಅಲ್ಲಿರುವ ಪ್ರಾತ್ರಧಾರಿಗಳ ಕುರಿತು ಮಾತನಾಡುತ್ತಾರೆ. ಸತ್ಯ ಹರಿಶ್ಚಂದ್ರ, ಕರ್ಣನ, ದುರ್ಯೋಧನ ಪಾತ್ರದ ಬಗ್ಗೆ ಮಾತನಾಡುತ್ತಾರೆ ಎಂದರು.

ಕಾರ್ಯಕ್ರಮದ ಸರ್ವಾಧ್ಯಕ್ಷರಾದ ಬೀದರ್ ಕಾವ್ಯ ಸಂಸ್ಕೃತಿ ಯಾನ ಹಿರಿಯ ಸಾಹಿತಿ ಡಾ. ವಿಜಯಶ್ರೀ ಸಬರದ ಮಾತನಾಡಿ, ಕಾವ್ಯ ಸಂಸ್ಕೃತಿಯಾನ ದಿವಟಿಗೆ ಬೆಂಗಳೂರಿನಿAದ ಹೊರಟು ಬೀದರ ಶರಣರ ನಾಡಿನಲ್ಲಿ ಜನರೆಡೆಗೆ ಕಾವ್ಯ ಆರನೆ ಕವಿಗೋಷ್ಠಿ ಹಮ್ಮಿಕೊಂಡಿದ್ದು ಖುಷಿಯಾಗಿದೆ ಎಂದರು.  


ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಸಂಜೀವಕುಮಾರ ಅತಿವಾಳೆ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಹಿರಿಯ ಸಾಹಿತಿ  ಶ್ರೀಮತಿ ಪುಣ್ಯವತಿ ವಿಸಾಜಿ, ರಂಗಕರ್ಮಿ  ಪ್ರಧಾನ ಸಂಚಾಲಕರಾದ ಮಲ್ಲಿಕಾರ್ಜುನ ಮಹಾಮನೆ ಮಾತನಾಡಿದರು. ವೇದಿಕೆ ಮೇಲೆ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷರಾದ ಸುರೇಶ ಚೆನ್ನಶೆಟ್ಟಿ,  ಕಾಶಿನಾಥರಾವ ಚಲ್ವಾ, ಬೆಳಗು ಸಾಮಾಜಿಕ ಸಾಂಸ್ಕೃತಿಕ ಟ್ರಸ್ಟನ ಅಧ್ಯಕ್ಷರಾದ ಅನೀಲಕುಮಾರ ದೇಶಮುಖ ಸೇರಿದಂತೆ ಮುಂತಾದ ಅತಿಥಿ ಗಣ್ಯರು ಉಪಸ್ಥಿತರಿದ್ದರು. ಮೊದಲಿಗೆ ಯುವ ಸಾಹಿತಿ ಅಜೀತ ಎನ್ ಸ್ವಾಗತಿಸಿದರು. ಕು.ಸೃಜನ್ಯ ಅತಿವಾಳೆ ನೀರುಪಿಸಿ ವಂದಿಸಿದರು.


ಕಾರ್ಯಕ್ರಮದ ನಂತರ ಪ್ರಥಮ ಕವಿಗೋಷ್ಠಿ ನಡೆಯಿತು. ಈ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಹಿರಿಯ ಸಾಹಿತಿ ಎಂ. ಜಿ. ದೇಶಪಾಂಡೆ ಅವರು ವಹಿಸಿ ಮಾತನಾಡಿದರು.  ಗೌರವ ಉಪಸ್ಥಿತಿ  ಬಿ.ಎಮ್. ಅಮರವಾಡಿ,  ಹಿರಿಯ ಸಾಹಿತಿ ಶಕೀಲ್ ಐ.ಎಸ್. ಅವರು ಆಶಯ ನುಡಿ ಹೇಳಿದರು. ವೇದಿಕೆ ಮೇಲೆ ಅನೇಕ  ಕವಿಗಳು,  ಕಾರ್ಯಕ್ರಮಕ್ಕೆ  ಭಾಗಿಯಾಗಿ  ತಮ್ಮ  ಸ್ವರಚಿತ  ಕವನ  ವಾಚನ  ಮಾಡಿದರು.


ಸ್ವಾಮೀಜಿ, BJP ನಾಯಕರ ಹತ್ಯೆಗೆ ಮಹಾರಾಷ್ಟ್ರ ಗೂಂಡಾಗಳಿಗೆ ಸುಪಾರಿ: ಬಿವೈ ವಿಜಯೇಂದ್ರ ಆರೋಪ

 ಶಿವಮೊಗ್ಗ: ಸ್ವಾಮೀಜಿಗಳು, ಬಿಜೆಪಿ ಶಾಸಕರು ಮತ್ತು ಕಲಬುರಗಿ ಬಿಜೆಪಿ ನಗರ ಘಟಕದ ಅಧ್ಯಕ್ಷರನ್ನು ಹತ್ಯೆ ಮಾಡಲು ಮಹಾರಾಷ್ಟ್ರದ ಗೂಂಡಾಗಳಿಗೆ ಸುಪಾರಿ ನೀಡಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ಗಂಭೀರ ಆರೋಪ ಮಾಡಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಗುತ್ತಿಗೆದಾರ ಸಚಿವ್ ಪಾಂಚಾಳ್ ಡೆತ್ ನೋಟ್ ನಲ್ಲಿ ಸ್ವಾಮೀಜಿಗಳು, ಬಿಜೆಪಿ ಶಾಸಕರು ಮತ್ತು ಕಲಬುರಗಿ ಬಿಜೆಪಿ ನಗರ ಘಟಕದ ಅಧ್ಯಕ್ಷರನ್ನು ಹತ್ಯೆ ಮಾಡಲು ಮಹಾರಾಷ್ಟ್ರದ ಗೂಂಡಾಗಳಿಗೆ ಸುಪಾರಿ ನೀಡಲಾಗಿದೆ ಎಂದು ಬರೆದಿದ್ದಾರೆ. ಪ್ರಭಾವಿ ರಾಜಕಾರಣಿಗಳು ಇದರಲ್ಲಿ ಶಾಮೀಲಾಗಿದ್ದಾರೆ. ಹೀಗಾಗಿ ಸಚಿನ್ ಅವರು ಪ್ರಕರಣನ್ನು ಕೇಂದ್ರೀಯ ತನಿಖಾ ದಳ (ಸಿಬಿಐ) ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ಕಾಂಗ್ರೆಸ್​ ಮುಖಂಡ ರಾಜು ಕಪ್ಪನೂರ್ ಪ್ರಿಯಾಂಕ ಖರ್ಗೆಯ ಎಡಗೈ ಬಂಟ. ಈ ಪುಡಾಯರಿಯ ಬೆದರಿಕೆಯಿಂದ ಗುತ್ತಿಗೆದಾರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಪ್ರಕರಣದ ಪ್ರಾಮಾಣಿಕ ತನಿಖೆ ಸಾಧ್ಯವಿಲ್ಲ ಎಂದು ಕುಟುಂಬಸ್ಥರು ಹೇಳಿದ್ದಾರೆ. ಇದರಿಂದ ಪ್ರಿಯಾಂಕ್​ ಖರ್ಗೆ ತುಂಬಾ ಭಯಭೀತರಾಗಿದ್ದಾರೆ. ಮಹಾರಾಷ್ಟ್ರದಿಂದ ಸುಪಾರಿ ಕಿಲ್ಲರ್ ಗಳನ್ನು ಕರೆಸಿ ಸ್ವಾಮಿಜಿಗಳನ್ನು ಟಾರ್ಗೆಟ್ ಮಾಡಿದ್ದಾರೆ. ನಮ್ಮ ಶಾಸಕ ಹಾಗೂ ಚಂದು ಪಾಟೀಲ್ ಹತ್ಯೆ ಮಾಡಲು ಪ್ಲಾನ್ ಮಾಡಿದ್ದಾರೆ. ವಿರೋಧ ಪಕ್ಷದವರು ಬೆಳೆದರೆ ಇವರ ಬೆಳೆ ಬೇಯಿಸಿಕೊಳ್ಳಲು ಸಾಧ್ಯವಿಲ್ಲ ಅಂತ ಹೀಗೆ ಮಾಡಿದ್ದಾರೆ.

ಪ್ರಿಯಾಂಕ್ ಖರ್ಗೆ ಅವರು ಮಾತಾಡುತ್ತಿರುವುದು ಸರಿಯಲ್ಲ, ಪ್ರಿಯಾಂಕ್ ಖರ್ಗೆಯವರೇ ನಿಮ್ಮ ಸ್ನೇಹಿತನಾಗಿ ಸಲಹೆ ಕೊಡುತ್ತಿದ್ದೇನೆ, ನಿಮ್ಮ ಪಾತ್ರ ಇಲ್ಲ ಎಂದರೆ ಪ್ರಕರಣವನ್ನು ಸಿಬಿಐ ತನಿಖೆಗೆ ಕೊಡಿ. ಸಿಬಿಐ ತನಿಖೆ ಬಗ್ಗೆ ಅನುಮಾನ ಪಡಬೇಡಿ, ಈ ಹಿಂದೆ ಡಿವೈಎಸ್‌ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ಕೆ.ಜೆ.ಜಾರ್ಜ್'ಗೆ ಕ್ಲೀನ್​ಚಿಟ್​ ಕೊಟ್ಟಿದ್ದು ಸಿಬಿಐ. ಜೊತೆಗೆ ನೀವು ಸಿದ್ದರಾಮಯ್ಯರನ್ನು ನಂಬಬೇಡಿ, ನಿಮ್ಮ ವಿರುದ್ದವೇ ನಿಮ್ಮ ಪಕ್ಷದಲ್ಲೆ ಷಡ್ಯಂತ್ರ ನಡೆಯುತ್ತಿದೆ. ನೀವು ಮುಖ್ಯಮಂತ್ರಿ ಆದರೂ ನಮಗೆ ಸಮಸ್ಯೆ ಇಲ್ಲ. ಆದರೆ, ತನಿಖೆಯನ್ನು ಸಿಬಿಐಗೆ ಕೊಡಿ ಎಂದು ತಿಳಿಸಿದರು.

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ನಾ.ಡಿಸೋಜ ಇನ್ನಿಲ್ಲ

 ಮಂಗಳೂರು: ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಡಾ.ನಾ. ಡಿಸೋಜ ತೀವ್ರ ಅನಾರೋಗ್ಯದಿಂದ ವಿಧಿವಶರಾಗಿದ್ದಾರೆ. 88 ವರ್ಷದ ಡಿಸೋಜ ಅವರು ಅನಾರೋಗ್ಯ ಹಿನ್ನೆಲೆಯಲ್ಲಿ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ 1937ರ ಜೂನ್ 6ರಂದು ಡಿಸೋಜ ಜನಿಸಿದರು. ಪರಿಸರ ಕಾಳಜಿ ಜೊತೆಗೆ ಕನ್ನಡ ಸಾಹಿತ್ಯ ಲೋಕದಲ್ಲಿ ಮಕ್ಕಳ ಸಾಹಿತ್ಯವನ್ನು ಒಳಗೊಂಡಂತೆ ಅಪಾರವಾದ ಕೃಷಿ ನಡೆಸಿದ್ದಾರೆ. ಅಲ್ಲದೆ ಅವರು ಬರೆದಿರುವ ಹಲವು ಕಾದಂಬರಿಗಳು ಸಿನಿಮಾಗಳಾಗಿ ಮೂಡಿಬಂದಿವೆ. ಇವುಗಳಲ್ಲಿ 'ಕಾಡಿನ ಬೆಂಕಿ' ಚಿತ್ರ ರಜತ ಕಮಲ ಪ್ರಶಸ್ತಿಯನ್ನ ಪಡೆದರೆ 'ದ್ವೀಪ' ಚಿತ್ರ ಸ್ವರ್ಣ ಕಮಲ ಪ್ರಶಸ್ತಿ ಗಳಿಸಿತ್ತು.


ರಾಜ್ಯ ಮಟ್ಟದ ಯುವಜನೋತ್ಸವಕ್ಕೆ ಚಾಲನೆ ಯುವ ಜನತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ


ದಾವಣಗೆರೆ : ದೇಶಕ್ಕೆ ನನ್ನ ಕೊಡುಗೆ ಏನು ಎಂಬುದು ಯುವಕರ ಕರ್ತವ್ಯವಾಗಬೇಕು, ಧರ್ಮ ಹಾಗೂ ಜಾತಿ ಹೆಸರಿನಲ್ಲಿ ಶಾಂತಿಗೆ ಭಂಗ ತರುವ ದುಸ್ಕøತ್ಯಗಳಿಗೆ ಮಾರು ಹೋಗಬಾರದು
ದೇಶ ನನಗೇನು ಕೊಡ್ತು ಅಲ್ಲ, ನಾನು ದೇಶಕ್ಕಾಗಿ ನನ್ನ ಕರ್ತವ್ಯವೇನು ಎಂದು ಯುವಕರು ಅರಿತುಕೊಳ್ಳಬೇಕು. ಅನೇಕ ಶಕ್ತಿಗಳು ಧರ್ಮ ಹಾಗೂ ಜಾತಿ ಹೆಸರಿನಲ್ಲಿ ಶಾಂತಿಗೆ ಭಂಗ ತರುವ ಕೆಲಸ ಮಾಡುತ್ತಿವೆ. ಯಾವ ಧರ್ಮಕ್ಕೂ ವಿಶೇಷ ಸ್ಥಾನಮಾನ ಇಲ್ಲ, ಎಲ್ಲರಿಗೂ ಸಂವಿಧಾನ ಒಂದೇ, ಆದ್ದರಿಂದ ಸಂವಿಧಾನ ರಕ್ಷಿಸುವ ಕೆಲಸ ಯುವಕರು ಮಾಡಬೇಕಾಗಿದೆ ಎಂದು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಯುವಜನತೆಗೆ ಕರೆ ನೀಡಿದರು. 



 ಭಾನುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಸಹಯೋಗದಲ್ಲಿ ಬಾಪೂಜಿ ಎಂಬಿಎ ಮೈದಾನದಲ್ಲಿ ಆಯೋಜಿಸಲಾದ ರಾಜ್ಯ ಮಟ್ಟದ ಯುವ ಜನೋತ್ಸವವನ್ನು ನಗಾರಿ ಬಾರಿಸಿ ಹಾಗೂ ಹೊಂಬಾಳೆ ಬಿಡಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.  
 ಬಾಬಾ ಸಾಹೇಬ್ ಅಂಬೇಡ್ಕರ್ ಕೊಟ್ಟ ಸಂವಿಧಾನದಿಂದ ಇಂದು ಎಲ್ಲರೂ ಶಿಕ್ಷಣ ಪಡೆದು ಉದ್ಯೋಗ ಗಳಿಸಿ, ಗೌರವ ಮತ್ತು ಸಮಾನತೆಯಿಂದ ಬಾಳಲು ಸಾಧ್ಯವಾಗಿದೆ. ಸಂವಿಧಾನ ಇದ್ದುದರಿಂದಲೇ ನಾನು ಮುಖ್ಯಮಂತ್ರಿ ಆಗಲು ಸಾಧ್ಯವಾಯಿತು. ಸಂವಿಧಾನ ರಕ್ಷಿಸಿ, ಉಳಿಸುವುದು ನಮ್ಮಲ್ಲರ ಕರ್ತವ್ಯವಾಗಿದೆ. ಪ್ರಜಾಪ್ರಭುತ್ವ ಒಪ್ಪಿ ದೇಶದಲ್ಲಿ ಆಡಳಿತ ನಡೆಸಲಾಗುತ್ತಿದೆ. ಪ್ರಜಾಪ್ರಭುತ್ವ ಯಶಸ್ವಿಯಾಗಬೇಕಾದರೆ, ಎಲ್ಲಾ ವ್ಯಕ್ತಿಗಳಿಗೆ ಆರ್ಥಿಕ, ರಾಜಕೀಯ ಹಾಗೂ ಸಾಮಾಜಿಕ ಸಮಾನತೆ ದೊರಕಬೇಕು ಎಂಬುವುದು ಡಾ.ಅಂಬೇಡ್ಕರ್ ಆಶಯವಾಗಿತ್ತು. ಸಂವಿಧಾನ ಈ ಸಾರ ಪ್ರತಿಯೊಬ್ಬರಿಗೂ ಅರ್ಥವಾಗಬೇಕು. ಇದರ ಹಿನ್ನಲೆಯಲ್ಲಿ ಸರ್ಕಾರ ಪ್ರತಿ ಶಾಲೆಯಲ್ಲಿ ಸಂವಿಧಾನ ಓದು ಕಾರ್ಯಕ್ರಮ ಜಾರಿ ಮಾಡಿದೆ. ಮಕ್ಕಳಿಗೆ ಸಂವಿಧಾನದ ಪೀಠಿಕೆ ಬಗ್ಗೆ ಪರಿಚಯ ಮಾಡಿಕೊಡಲಾಗುತ್ತಿದೆ.  ಅಂಬೇಡ್ಕರ್ ಅವರ ಆರ್ಥಿಕ ಸಮಾನತೆಯ ಆಶಯವನ್ನು ಈಡೇರಿಸುವ ದೃಷ್ಟಿಯಿಂದ ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಹೇಳಿದರು. 
ದೇಶದಲ್ಲಿ ಶೇ.35 ರಷ್ಟು ಯುವ ಜನರಿದ್ದಾರೆ, ಯುವಜನರೇ ನಮ್ಮ ದೇಶದ ಆಸ್ತಿ. ಪ್ರತಿಯೊಬ್ಬ ಯುವಕ, ಯವತಿ ಸಮಾಜಮುಖಿ ಮನೋಭಾವ ಬೆಳಸಿಕೊಳ್ಳಬೇಕು. ವಿವಿಧ ಭಾμÉ, ಧರ್ಮ, ಸಂಸ್ಕøತಿ ಇವರುವುದರಿಂದ ವೀದ್ಯಾರ್ಥಿಗಳಿಗೆ ವೈಚಾರಿಕ ಹಾಗೂ ವೈಜ್ಞಾನಿಕ ಶಿಕ್ಷಣ ಅತ್ಯಗತ್ಯವಾಗಿದೆ. ಯುವಜನರು ದೇಶವನ್ನು ಮುಂದೆ ಕೊಂಡೊಯ್ಯಲು ಹಾಗೂ ಬದಲಾವಣೆ ತರುವ ಪ್ರಯತ್ನ ಮಾಡಬೇಕು. ಭವಿಷ್ಯ ನಿರ್ಮಾಣ ಮಾಡುವವರು ಯುವಜನರು, ಇದನ್ನು ಮನಗಂಡಿದ್ದ ಸ್ವಾಮಿ ವಿವೇಕಾನಂದರು 'ಏಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ' ಎಂದು ಯುವ ಜನರಿಗೆ ಕರೆ ನೀಡಿದರು. ಯುವಕರಿಗೆ ಜೀವನದಲ್ಲಿ ಗುರಿ ಇರಬೇಕು. ಇದನ್ನು ಸಾಧಿಸಲು ಪರಿಶ್ರಮ ಪಡಬೇಕು. ಆಗ ಮಾತ್ರ ಗುರಿ ಸಾಧನೆ ಮಾಡಬಹುದು. ಯುವ ಜನತೆ ದೇಶಕ್ಕೆ ಸಂಪತ್ತಾಗಬೇಕು, ಹೊರೆಯಾಗಬಾರದು. ರಾಜ್ಯದಲ್ಲಿ 1.62 ಲಕ್ಷ ಯವಕ ಯುವತಿಯರಿಗೆ ಯುವನಿಧಿ ಯೋಜನೆಯಡಿ ರೂ.216 ಕೋಟಿ ನಿರುದ್ಯೋಗ ಭತ್ಯೆಯನ್ನು ನೇರವಾಗಿ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗಿದೆ. ಇದರೊಂದಿಗೆ ಯುವ ಜನರಿಗೆ ಕೌಶಲ್ಯ ತರಬೇತಿ ನೀಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ತಿಳಿಸಿದರು. 
ಇದೇ ವೇಳೆ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಸಂವಿಧಾನ ಬಗ್ಗೆ ಪರಿಚಯಿಸುವ ಏಙಅ (ಏಟಿoತಿ ಥಿouಡಿ ಛಿoಟಿsಣiಣuಣioಟಿ) ಚಾಲನೆ ನೀಡಿದರು. ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಹಾಗೂ ರಾಜ್ಯ ಎನ್.ಎನ್.ಎಸ್ ಘಟಕದ ಕ್ಯಾಲೆಂಡರ್‍ನ್ನು  ಬಿಡುಗಡೆ ಮಾಡಿದರು. 
ಸುಳ್ಳು ಸುದ್ದಿ ಹಾಗೂ ಸಮೂಹ ಸನ್ನಿಯಿಂದ ದೂರವಿರಿ; 
ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಪ್ರಾಸ್ತಾವಿಕವಾಗಿ ಮಾತನಾಡಿ, ದೇಶದ ಜನಸಂಖ್ಯೆಯಲ್ಲಿ ಶೇ.35 ರಷ್ಟು ಯುವಜನರಿದ್ದಾರೆ. ಕೆಲ ದುಷ್ಟ ಶಕ್ತಿಗಳು ಸಾಮಾಜಿಕ ಜಾಲತಾಣ ಮೂಲಕ ದೇಶದ ಯುವ ಜನತೆಯನ್ನು ದಾರಿ ತಪ್ಪಿಸುತ್ತಿದ್ದಾರೆ. ಯುವ ಜನತೆ ಸಾಮಾಜಿಕ ಜಾಲತಾಣಗಳಲ್ಲಿ ಬರುವ ಸುದ್ದಿಗಳನ್ನು ಒರೆಗೆ ಹಚ್ಚಿ, ಸತ್ಯಾಸತ್ಯೆಯನ್ನು ತಿಳಿದುಕೊಳ್ಳಬೇಕು. ದ್ವೇಷವನ್ನು ಬಿತ್ತುವ ವಿಚಾರ ಹಾಗೂ ಸಮೂಹ ಸನ್ನಿಯಿಂದ ದೂರವಿರಬೇಕು. ದೇಶದ ಬಹುತ್ವ ಅರ್ಥೈಸಿಕೊಳ್ಳಬೇಕು ಎಂದು ಯುವಕರಿಗೆ ಸಲಹೆ ನೀಡಿದರು. 
ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಸಚಿವನಾಗಿದ್ದಾಗ ದಾವಣಗೆರೆಯಲ್ಲಿ ಪ್ರಥಮವಾಗಿ ಯುವಜನೋತ್ಸವ ಕಾರ್ಯಕ್ರಮ ಆಯೋಜಿಸಲಾಗಿತ್ತು.  2 ದಶಕಗಳ ತರುವಾಯ ಮತ್ತೊಮ್ಮೆ ರಾಜ್ಯಮಟ್ಟದ ಯುವಜನೋತ್ಸವ ಆಯೋಜಿಸಿರುವುದು ಸಂತಸ ತಂದಿದೆ. ಕ್ರೀಡಾ ಸಚಿವನಾಗಿದ್ದಾಗ ದಾವಣಗೆರೆಯಲ್ಲಿ ಅಂತರಾಷ್ಟ್ರೀಯ ಮಟ್ಟದ ಈಜುಕೋಳ, ಟೆನ್ನಿಸ್, ಬಾಸ್ಕೆಟ್‍ಬಾಲ್ ಕ್ರೀಡಾಂಗಣಗಳನ್ನು ನಿರ್ಮಿಸಿದ್ದೆ. ಸದ್ಯ ರಾಜ್ಯ ಸರ್ಕಾರದಿಂದ ಸಂಸದ ನೆರವಿನಿಂದ ಕ್ರೀಡಾ ಸಂಕೀರ್ಣ ನಿರ್ಮಿಸಲಾಗುತ್ತಿದೆ. ಜೆ.ಹೆಚ್.ಪಾಟೀಲ್ ನಗರದಲ್ಲಿ ಕ್ರಿಕೇಟ್ ಕ್ರೀಡಾಂಗಣ ನಿರ್ಮಾಣ ಕಾಮಗಾರಿ ಅಂತಿಮ ಹಂತದಲ್ಲಿವೆ. ದಾವಣಗೆರೆ ಜಿಲ್ಲೆಯಲ್ಲಿ ಯುವನಿಧಿ ಯೋಜನೆಯಡಿ 5802 ಯುವಜನರಿಗೆ ರೂ.8.5 ಕೋಟಿ ನಿರುದ್ಯೋಗ ಭತ್ಯೆ ನೀಡಲಾಗಿದೆ. ದಾವಣಗೆರೆ ನಗರದಲ್ಲಿ ವಿಶ್ವ ಕನ್ನಡ ಸಮ್ಮೇಳನ ಆಯೋಜಿಸುವಂತೆ ಕಸಾಪ ಸದಸ್ಯರು ಮನವಿ ಮಾಡಿದ್ದಾರೆ. ಮುಖ್ಯಮಂತ್ರಿಗಳು ಈ ಬಗ್ಗೆ ಗಮನ ಹರಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು. 
ಸಂಸದೆ ಪ್ರಭಾ ಮಲ್ಲಿಕಾರ್ಜುನ ಮಾತನಾಡಿ, ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಭಿವೃದ್ಧಿ ಯೋಜನೆಗಳು ಜನತೆಯ ಮನಮುಟ್ಟಿವೆ. ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಯುವನಿಧಿ ಯೋಜನೆಯನ್ನು ಯುವ ಜನತೆಗೆ ನೀಡಿ, ಯುವ ಜನಾಂಗಕ್ಕೆ ಸರ್ಕಾರ ಪ್ರಾಮುಖ್ಯತೆ ನೀಡಿದೆ.ಯುವಕರ ದೇಶದ ಆಸ್ತಿ. ಅವರ ಪ್ರತಿಭೆ ಗುರುತಿಸಿ ಅದಕ್ಕೆ ಪೂರಕವಾದ ವಾತಾವರಣ ಸೃಷ್ಠಿಸುವ ಕಾರ್ಯ ನಾವೆಲ್ಲರೂ ಮಾಡಬೇಕಿದೆ. ಜಿಲ್ಲೆಯ ಎಲ್ಲ ಶಾಲಾ-ಕಾಲೇಜುಗಳಲ್ಲಿ ನಮ್ಮ ಸಂವಿಧಾನದ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಹಾಗೂ ಶಿಕ್ಷಣ ಅಧಿಕಾರಿಗಳೊಂದಿಗೆ ಚರ್ಚಿಸಿ, ಕ್ರಿಯಾಯೋಜನೆ ರೂಪಿಸಿ, ಸಂವಿಧಾನದ ಬಗ್ಗೆ ಜಾಗೃತಿ ಮೂಡಿಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್, ಶಾಸಕರುಗಳಾದ ಕೆ.ಎಸ್.ಬಸವಂತಪ್ಪ, ಬಸವರಾಜು ವಿ ಶಿವಗಂಗಾ, ಬಿ.ದೇವೇಂದ್ರಪ್ಪ, ಬಿ.ಪಿ.ಹರೀಶ್, ಶಾಂತನಗೌಡ.ಡಿ.ಜಿ. ವಿಧಾನ ಪರಿಷತ್ ಸದಸ್ಯರಾದ  ಕೆ.ಅಬ್ದುಲ್ ಜಬ್ಬಾರ್, ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಸಗೋಡು ಜಯಸಿಂಹ, ರಾಜ್ಯ ಗ್ಯಾರಂಟಿ ಯೋಜನೆಗಳ ಅನುμÁ್ಠನ ಸಮಿತಿ ಅಧ್ಯಕ್ಷ ಹೆಚ್.ಎಂ.ರೇವಣ್ಣ, ದಾವಣಗೆರೆ ಮಹಾನಗರ ಪಾಲಿಕೆ ಮಹಾಪೌರರಾದ ಚಮನ್ ಸಾಬ್.ಕೆ, ರಾಜ್ಯ ತಾಂಡ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಯದೇವ್ ನಾಯ್ಕ್, ದಾವಣಗೆರೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ಶಮ್ಲಾ ಇಕ್ಬಾಲ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕಾರ್ಯದರ್ಶಿ ರಂದೀಪ್.ಡಿ, ಪೆÇಲೀಸ್ ಉಪ ಮಹಾನಿರೀಕ್ಷಕ ರಮೇಶ್.ಬಿ, ಜಿಲ್ಲಾ ಪಂಚಾಯಿತಿ ಸಿಇಓ ಸುರೇಶ್ ಇಟ್ನಾಳ್, ಜಿಲ್ಲಾ ಪೆÇಲೀಸ್ ವರಿμÁ್ಠಧಿಕಾರಿ ಉಮಾ ಪ್ರಶಾಂತ್, ಮಾಜಿ ಸಚಿವ ಹೆಚ್.ಆಂಜನೇಯ ಉಪಸ್ಥಿತರಿದ್ದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಯುಕ್ತ ಚೇತನ್ ಸ್ವಾಗತಿಸಿದರು. ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ ಜಿ.ಎಂ. ವಂದಿಸಿದರು.

ದೇವಸ್ಥಾನಗಳ ಮೂಲಕ ಧರ್ಮಪ್ರಚಾರ ಮಾಡಲು ಕರ್ನಾಟಕ ರಾಜ್ಯ ದ್ವಿತೀಯ ಮಂದಿರ ಅಧಿವೇಶನದಲ್ಲಿ ೮೦೦ಕ್ಕೂ ಹೆಚ್ಚು ವಿಶ್ವಸ್ಥರ ನಿರ್ಧಾರ

ಬೆಂಗಳೂರು : ಸಾಮಾಜಿಕನ್ಯಾಯ , ಕುಟುಂಬಶಿಕ್ಷಣ ವ್ಯವಸ್ಥೆಯನ್ನು ಒಂದೊಂದಾಗಿ ನಾವೇ ಸರ್ಕಾರಕ್ಕೆ ಒಪ್ಪಿಸಿದ್ದೇವೆಸಮಾಜ ಸರಕಾರದ ಅಧೀನವಾಗುವುದು ದೈನ್ಯ ಪರಿಸ್ಥಿತಿಯಾಗಿದೆಪ್ರತಿಯೊಂದು ವ್ಯವಸ್ಥೆಯಲ್ಲಿ ಸಮಾಜದ ಜನರು ಧರ್ಮದ ಆಧಾರವನ್ನು ಇಟ್ಟುಕೊಂಡು ಜೀವನ ನಡೆಸಿದರೆ ನಮ್ಮ ಸರ್ವಾಂಗೀಣ ಉನ್ನತಿಯಾಗುತ್ತದೆಸರಕಾರದ ಹಸ್ತಕ್ಷೇಪದಿಂದ ದೇವಸ್ಥಾನಗಳನ್ನು ಹಿಂಪಡೆದರ ಮಾತ್ರ ಪುನಃ ಸಮಾಜದ ಅಭಿವೃದ್ಧಿಯನ್ನು ಮಾಡಲು ಸಾಧ್ಯವಾಗಬಹುದು ಎಂದು ಉಪಸ್ಥಿತರಿಗೆ ಶ್ರೀ ಅಭಿನವ ಶಂಕರ ಭಾರತಿ ಮಹಾಸ್ವಾಮೀಜಿ ಮಾರ್ಗದರ್ಶನವನ್ನು ಮಾಡಿದರು.

ದೇವಸ್ಥಾನಗಳ ಸಂಸ್ಕೃತಿಯ ರಕ್ಷಣೆಗಾಗಿ ಕರ್ನಾಟಕ ಮಂದಿರ ಮಹಾಸಂಘ ಮತ್ತು ಹಿಂದೂ ಜನಜಾಗೃತಿ ಸಮಿತಿಯ ಆಯೋಜಿತ ‘ಕರ್ನಾಟಕ ರಾಜ್ಯ ದ್ವಿತೀಯ ಮಂದಿರ ಅಧಿವೇಶನವು ಗಂಗಮ್ಮ ತಿಮ್ಮಯ್ಯ ಕನ್ವೆಂಷನ್ ಹಾಲ್‌, ಬಸವೇಶ್ವರ ನಗರಬೆಂಗಳೂರಿನಲ್ಲಿ ಎರಡನೆಯ ದಿನವು  ಯಶಸ್ವಿಯಾಗಿ ನಡೆಯುತ್ತಿದೆ ಸಮಯದಲ್ಲಿ ಸನಾತನ ಪಂಚಾಂಗ ಆ್ಯಂಡ್ರಾಯ್ಡ್ ಆ್ಯಪ್ 2025 ಇದರ ಲೋಕಾರ್ಪಣೆ ಮಾಡಲಾಯಿತು  (ಸನಾತನ ಪಂಚಾಂಗ ಆ್ಯಪ್ ನಲ್ಲಿ ಆಯಾದಿನದ ಮಾಹಿತಿಪಂಚಾಂಗಮುಹೂರ್ತ ಮಾತ್ರವಲ್ಲದ  ಹಬ್ಬ  ಉತ್ಸವಗಳು,  ಆಧ್ಯಾತ್ಮಆಯುರ್ವೇದ ಮತ್ತು ಧರ್ಮಶಿಕ್ಷಣಕ್ಕೆ ಸಂಬಂಧಿಸಿದ ಲೇಖನಗಳು ಲಭ್ಯವಿರುವುದು )  ನಂತರ ಸನಾತನದ ಗ್ರಂಥವಾದ 'ಆಯುರ್ವೇದವನ್ನು ಪಾಲಿಸಿ ಔಷಧಿಗಳಿಲ್ಲದೇ ಆರೋಗ್ಯವಂತರಾಗಿಇದರ -ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.

ಧರ್ಮ ಪಾಲನೆಯಿಂದಲೇ ವಿಶ್ವದ ಶಾಂತಿ ಸಾಧ್ಯ ! - ಪೂಜ್ಯ ಸಿಧ್ಧಲಿಂಗ ಸ್ವಾಮಿಜಿ

ಸಂಸ್ಕೃತಿಯನ್ನು ಬೆಳೆಸುವ ಕಾರ್ಯ ದೇವಸ್ಥಾನ ಮಾಡಬಲ್ಲದುವೇದ ಪಾರಾಯಣ , ಸಾಮೂಹಿಕ ಪೂಜೆಯಜ್ಞ ಇತ್ಯಾದೆಗಳ ಮೂಲಕ ದೇವಸ್ಥಾನ ಮತ್ತು ಮಠಗಳಲ್ಲಿ ಜಾಗೃತಿ ಮೂಡಿಸಬೇಕುಧರ್ಮದಿಂದಲೇ ವಿಶ್ವದಶಾಂತಿಮಾನವ ಧರ್ಮದ ಮೌಲ್ಯವನ್ನು  ಎತ್ತಿಹಿಡಿದಾಗ ವಿಶ್ವಕಲ್ಯಾಣ ಸಾಧ್ಯವಿಶ್ವವೇ ನಮ್ಮ ಮನೆಲೋಕಾ ಸಮಸ್ತಾ ಸುಖಿನೋ ಭವಂತು ಎಂಬ ಧ್ಯೇಯವನ್ನಿಟ್ಟು ಧರ್ಮದ ರಕ್ಷಣೆ ಮಾಡಲು ಸ್ಕಂದೇಶ್ವರ ಸ್ವಾಮಿ ದೇವಸ್ಥಾನದ ಪೂಜ್ಯ ಸಿಧ್ಧಲಿಂಗ ಸ್ವಾಮಿಜಿ ಮಾರ್ಗದರ್ಶನ ಮಾಡಿದರು.

ಹಿಂದೂ ಸಂಸ್ಕೃತಿಯ ಉಳಿವಿಗಾಗಿ ಜಾಗೃತಿ ಅಗತ್ಯ - ವೇದ ಬ್ರಹ್ಮ  ಶ್ರೀ ಇಂದ್ರಾಚಾರ್ಯ

ಹಿಂದೂ ಧರ್ಮ , ಮತ್ತು ಸಂಸ್ಕೃತಿ ಉಳಿಸಿ ಬೆಳೆಸುವ ಮತ್ತು ಹಿಂದೂ ಧರ್ಮ ಜಾಗೃತಿ  ಕಾರ್ಯ ಪ್ರತಿಯೊಂದು ದೇವಸ್ಥಾನದಲ್ಲಿ ಆಗಬೇಕೆಂಬುದರ ಮಹತ್ವವನ್ನು ವೇದ ಬ್ರಹ್ಮ ಶ್ರೀ ಇಂದ್ರಾಚಾರ್ಯ ಇವರು  ಉಪಸ್ಥಿತರಿಗೆ ತಿಳಿಸಿದರು.

ಪಾಕಿಸ್ತಾನದಲ್ಲಿ ಸನಾತನ ಬೋರ್ಡ್ ಇಲ್ಲಬಾಂಗ್ಲಾದೇಶದಲ್ಲಿ ಸನಾತನ ಬೋರ್ಡ್ ಇಲ್ಲಹಾಗಿದ್ದರೆ ಭಾರತದಲ್ಲಿ ವಕ್ಫ್ ಬೋರ್ಡ್ ಯಾಕೆ ? - ಶ್ರೀ.ಸುನಿಲ್ ಘನವಟ್

ಇಂದು ದೇವಸ್ಥಾನಗಳ ಪವಿತ್ರ ಭೂಮಿ ಒಂದು ರಾಕ್ಷಸಿ ಕಾನೂನಿನ ಮೂಲಕ ವಕ್ಫ್ ಬೋರ್ಡ್ ವಶವಾಗುತ್ತಿದೆವಕ್ಫ್ ಬೋರ್ಡ್ ಮೂಲಕ ಯಾರ ಭೂಮಿಯೇ ಇರಲಿಅದಕ್ಕೆ ಒಂದು ನೋಟಿಸ್ ಕೊಟ್ಟು ಭೂಮಿಯನ್ನು ವಕ್ಫ್ ವಶಪಡಿಸಿಕೊಳ್ಳಬಹುದುಕೇವಲ ನಾಗರಿಕರದ್ದಲ್ಲಕರ್ನಾಟಕ ರಾಜ್ಯದ ಸುಮಾರು ೨೫೦೦೦ ಎಕ್ರೆ ಭೂಮಿಯ ಮೇಲೆ ವಕ್ಫ್ ದಾವೆ ಹೂಡಿದೆಭಾರತದಲ್ಲಿ ಇಂತಹ ಅನೇಕ ಕ್ಷೇತ್ರಗಳನ್ನು ವಕ್ಫ್ ಬೋರ್ಡ್ ಅನಧಿಕೃತವಾಗಿ ವಶಪಡಿಕೊಂಡಿದೆಭಾರತದಲ್ಲಿ  ಲಕ್ಷ ೫೦ ಸಾವಿರ ಎಕರೆ ಜಾಮೀನು ವಕ್ಫ್ ಬೋರ್ಡ್ ದ್ದಾಗಿದೆದೇವಸ್ಥಾನಕ್ಕೆ ಸಂಬಂಧಿಸಿದ ಕಾಗದಪತ್ರಗಳನ್ನುದಾಖಲೆಗಳನ್ನು ನವೀಕರಿಸಿ ವಕ್ಫ್ ಬೋರ್ಡ್  ಸಂಕಟದಿಂದ ದೇವಸ್ಥಾನಗಳನ್ನು ರಕ್ಷಿಸಿ ಎಂದು ಶ್ರೀ.ಸುನಿಲ್ ಘನವಟ್ ಇವರು ಕರೆ ನೀಡಿದರು.

ಕರ್ನಾಟಕ ಮಂದಿರ ಅಧಿವೇಶನಕ್ಕೆ ತುಮಕೂರು ಮತ್ತು ಬೆಂಗಳೂರು ಜಿಲ್ಲೆಯಿಂದ 34 ಕ್ಕೂ ಅಧಿಕ ದೇವಸ್ಥಾನದ  ವಿಶ್ವಸ್ಥರು ಪಾಲ್ಗೊಂಡಿದ್ದು ಇಲ್ಲಿ ನಡೆದ ಗುಂಪು ಚರ್ಚೆಗಳಲ್ಲಿ ತಮ್ಮ ತಮ್ಮ ಜಿಲ್ಲೆಯಲ್ಲಿನ ಮಂದಿರಗಳಲ್ಲಿ ಧರ್ಮ ಶಿಕ್ಷಣ ವರ್ಗಗಳನ್ನು ಪ್ರಾರಂಭಿಸುವುದು, ಧರ್ಮ ಶಿಕ್ಷಣ ನೀಡುವ ಫಲಕಗಳನ್ನು ಅಳವಡಿಸುವುದು, ಸರಕಾರೀಕರಣದ ವಿರುದ್ಧ ಹೋರಾಡುವುದು, ಮಂದಿರ ಮಹಾಸಂಘದೊಂದಿಗೆ ಕೈಜೋಡಿಸಿ ಪ್ರತಿಯೊಂದು ಉಪಕ್ರಮಗಳಲ್ಲಿ ಸಹಭಾಗಿ ಆಗುವಂತೆ ಸಂಕಲ್ಪ ಮಾಡಿದರು. ತುಮಕೂರು  ಜಿಲ್ಲೆಯ ಡಾ.ಅರ್.ಎಲ್.ರಮೇಶ್ ಬಾಬು, ಸಿ.ಆರ್. ಮೋಹನ್ ಕುಮಾರ್,  ಎಂ.ಮನೋಜ್, ಆನಂದ್ ಗುರೂಜೀ ಹಾಗೂ ಇತರ ಗಣ್ಯರು  ಉಪಸ್ಥಿತರಿದ್ದರು.

ಅಪ್ಪಟ ಕನ್ನಡಿಗ ಸಮಾಜ ಜೀವಿ ಶ್ರೀನಿವಾಸ ತೇಲಂಗಗೆ ಮುಡಿಗೆರಿದ ಗೌರವ ಡಾಕ್ಟರೇಟ್ ಪದವಿ

ಶೋಧವಾಣಿ ಜಾಲಲೋಕ

ಬೆಂಗಳೂರು : ಅಪ್ಪಟ ಕನ್ನಡಿಗ ಮಹಾರಾಷ್ಟ್ರ ಮರಾಠಿ ನಾಡಿನಲ್ಲಿ ಕನ್ನಡ ಕೈಂಕರ್ಯ ಗೈಯುತ್ತ ಮರಾಠವಾಡ ಪ್ರಾಂತ್ಯದಲ್ಲಿ ಅನೇಕ ಸಾಮಾಜಿ. ಸಾಂಸ್ಕೃತಿಕ ಕನ್ನಡ ಸಮಾರಂಭ ಆಯೋಜನೆ ಮಾಡುತ್ತ ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ ಔರಂಗಾಬಾದ್ ಮರಾಠವಾಡ ಕನ್ನಡ ಸಾಂಸ್ಕೃತಿಕ ಸಂಘದ ಸಂಸ್ಥಾಪಕ ಶ್ರೀನಿವಾಸ ತೇಲಂಗ ಅವರಿಗೆ ತಮಿಳನಾಡಿನ ಅಸೀಯನ ಅಂತರರಾಷ್ಟ್ರೀಯ ಸಂಸ್ಕೃತ ಸಂಶೋಧನೆ ವಿಶ್ವವಿದ್ಯಾಲಯ ಅವರ ಸಮಾಜಿಕ ಕೊಡುಗೆಯನ್ನು ಗುರುತಿಸಿ ಶನಿವಾರ ಬೆಂಗಳೂರನಲ್ಲಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. 

ಶ್ರೀನಿವಾಸ ತೇಲಂಗಗೆ ತಮಿಳನಾಡಿನ ಅಸೀಯನ ಅಂತರರಾಷ್ಟ್ರೀಯ ಸಂಸ್ಕೃತ ಸಂಶೋಧನೆ ವಿಶ್ವವಿದ್ಯಾಲಯ  ಶನಿವಾರ ಬೆಂಗಳೂರನಲ್ಲಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. 

ಶ್ರೀನಿವಾಸ ತೇಲಂಗ ಮೂಲತ ಬೀದರ ಜಿಲ್ಲೆಯ ಬಸವಕಲ್ಯಾಣ ತಾಲೂಕಿನಲ್ಲಿ ಬರುವ  ಇಸ್ಲಾಂಪುರ ಎಂಬ ಕುಗ್ರಾಮದಲ್ಲಿ ಜನಿಸಿದರು. ಚಿಕ್ಕ ವಯಸ್ಸಿನಲ್ಲೇ ಬಡತನದ ಬೇಗೆಯಿಂದ ಬಳಲಿ. ಜೀವನದಲ್ಲಿ ಬಡತನ ಹೋಗಲಾಡಿಸಲು ಶಿಕ್ಷಣ ಒಂದೇ ಉಪಾಯ ಎಂದು ತಿಳಿದು ಹುಮನಾಬಾದನಲ್ಲಿ ಐಟಿಐ ಮುಗಿಸಿ ಇಂದು ಚೈನಾ ಎಂಬ ದೊಡ್ಡ ದೇಶದ ಕಂಪನಿಯಲ್ಲಿ ಭಾರತದ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸುತ್ತಲೇ ಇಂದು ಔರಂಗಾಬಾದ್ ನಲ್ಲಿ ಕನ್ನಡಿಗರನ್ನು ಸಂಘಟಿಸಿ ಅನೇಕ ಮಾದರಿಯ ಕಾರ್ಯಕ್ರಮ ನೀಡಿದ ಹೆಗ್ಗಳಿಕೆ ತೇಲಂಗ ಅವರದು. 

ಶೋಧವಾಣಿ ನ್ಯೂಸ್ ನಿಂದಿಗೆ ಮಾತನಾಡಿದ ತೇಲಂಗ ನಮ್ಮ ಚಿಕ್ಕ ವಯಸ್ಸಿನಲ್ಲೇ ಎಲ್ಲವನ್ನೂ ಕಂಡುಕೊಂಡೆ ಗ್ರಾಮದಲ್ಲಿ ಜೀವನ ನಡೆಸಲು ಆಗದಂತಹ ಪರಿಸ್ಥಿತಿಯಲ್ಲಿ ನಮಗೆ ಅನೇಕರು ಗ್ರಾಮದ ಪ್ರಮುಖ ವ್ಯಕ್ತಿಗಳು ನನ್ನ ಜೀವನದ ತಿರುವಿಗೆ ಸಹಕಾರ ನೀಡಿದ ಎಲ್ಲಾ ಆತ್ಮೀಯ ಹಿರಿಯರಿಗೆ ಈ ಗೌರವ ಡಾಕ್ಟರೇಟ್ ಪ್ರಶಸ್ತಿಯನ್ನು ಅರ್ಪಿಸುತ್ತೇನೆ ಎಂದು ಭಾವುಕರಾಗಿ ನುಡಿದರು.  ನನಗೆ ಕಾಲೇಜು ಫೀಸ್ ಕಟ್ಟಲು ಆಗದ ಪರಿಸ್ಥಿತಿಯಲ್ಲಿ ನನಗೆ ಸಹಾಯ ಮಾಡಿದ ಹಿರಿಯರಿಗೆ ಯಾವತ್ತೂ ಜೀವನದಲ್ಲಿ ಮರೆಯುವುದಿಲ್ಲ. ಅವರ ಋಣಭಾರದಿಂದ ಮಾತ್ರ ನಾನು ಇಂದು ಒಬ್ಬ ಉನ್ನತವಾದ ಮಟ್ಟಕ್ಕೆ ಬೆಳೆಯಲು ಕಾರಣರಾದರು. ಅವರು ನನಗೆ ಸಹಾಯ ಮಾಡಲಿಲ್ಲ ಅಂದು ಅಂದರೆ ಇಂದು ನಾನು ಗ್ರಾಮದಲ್ಲಿಯೇ ಕುರಿಯೋ ದನವನ್ನೋ ಕಾಯುತ್ತಾ ಬಂದುಕಬೇಕಾಗಿತು ಹೀಗಾಗಿ ನನಗೆ ಜೀವನದಲ್ಲಿ ಸಹಾಯ ಸಹಕಾರ ನೀಡಿದ ಎಲ್ಲಾ ಮಹನೀಯರಿಗೂ ತುಂಬುಹೃದಯದಿಂದ ಧನ್ಯವಾದಗಳು ತಿಳಿಸುವೆ ಎಂದು ನುಡಿದರು.

ತೇಲಂಗ ಅವರು ಅನೇಕ ದೇಶಕ್ಕೆ ಭೇಟಿ ನೀಡಿದ್ದಾರೆ. ಹಾಗೂ ದೇಶದ ಅನೇಕ ರಾಜ್ಯಗಳಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಅನೇಕ ಕಂಪನಿಯು ಇಂದು ಅವರ ಅನುಭವಕ್ಕೆ ಕೈಬಿಸಿ ಕರೆಯುತ್ತಿವೆ ಹೀಗಾಗಿ ಇಂದು ಯುವ ಜನಾಂಗಕ್ಕೆ ಶ್ರೀನಿವಾಸ ತೇಲಂಗ ಅವರು ಮಾದರಿಯ ವ್ಯಕ್ತಿಯಾಗಿದ್ದಾರೆ. ತಮ್ಮನ್ನು ಕಾಣಲು ಬಂದ ಜನ ಸಾಮಾನ್ಯರಿಗೂ ತಮ್ಮ ಕೈಲಾದ ಸಹಾಯವನ್ನು ಮಾಡುವುದು ಮರೆಯುವುದಿಲ್ಲ. ಎಲ್ಲರೊಂದಿಗೆ ತಾವೊಬ್ಬರು ಎಂದು ಎಲ್ಲರೊಂದಿಗೆ ಬೆರೆಯುವ ಮನೋಭಾವ ಹೊಂದಿದ್ದ ಶ್ರೀನಿವಾಸ ತೇಲಂಗ ಮಾದರಿ ವ್ಯಕ್ತಿ ಎಂದರು ಉತ್ಪ್ರೇಕ್ಷೆ ಯಾಗದು.. ಹಾಗೇ ತೇಲಂಗ ಅವರ ಸೇವೆಗೆ ಇನ್ನೂ ಅನೇಕ ಪ್ರಶಸ್ತಿಗಳನ್ನು ಬರಲಿ ಎಂದು ಶುಭೋದಯ ಮೀಡಿಯಾ ಹಾರೈಸುತ್ತದೆ.

-----------------------------------------------------------------------------

ಶ್ರೀನಿವಾಸ ತೇಲಂಗ ಪ್ರತಿಭಾವಂತ ಎಂದು ಊಹಿಸಿರಲಿಲ್ಲ -ಬಸವರಾಜ

ಇಂತಹ ಕೂಗ್ರಾಮದಲ್ಲಿ ಇಂತಹ ಪ್ರತಿಭೆಯನ್ನು ನಾನು ಊಹಿಸಿರಲಿಲ್ಲ. ಶ್ರೀನಿವಾಸ ಶ್ಯಾಮರಾವ ತೇಲಂಗ ಅವನ್ನು ಹತ್ತನೇ ತರಗತಿಯಲ್ಲಿ ತೇರ್ಗಡೆ ಯಾಗಿ ನಂತರ ಪಿಯುಸಿ ಓದುತ್ತಿದ್ದಾಗ ನನ್ನ ಕಣ್ಣಿಗೆ ಬಿದ್ದ ಹುಡುಗ ನಂತರ ಅವನ ಜೀವನದಲ್ಲಿ ದಾರಿ ದೀಪವಾಗಿ ನಾನು ಸಿಕ್ಕೆ. ಮುಂದೆ ಅವನನ್ನು ಶ್ರೀ ಬಸವೇಶ್ವರ ಕೈಗಾರಿಕಾ ತರಬೇತಿ ಕೇಂದ್ರದಲ್ಲಿ ಸೇರಿಸಿ ಜೊಡಣೆಗಾರ ವಿಭಾಗದಲ್ಲಿ ಪ್ರವೇಶ ನೀಡಿದೆ. ಶ್ರೀನಿವಾಸ ನನ್ನ ನೆರಳಲ್ಲಿ ಸತತವಾಗಿ ಎರಡು ವರ್ಷಗಳ ಕಾಲ ಕೈಗಾರಿಕಾ ತರಬೇತಿ ಪಡೆದುಕೊಂಡು ತೇರ್ಗಡೆಯಾಗಿ ಉದ್ಯೋಗಕ್ಕೋಸ್ಕರ ಅವನನ್ನು ಔರಂಗಾಬಾದ್ ನಗರದ ಪ್ರಮುಖ ಎಂಎನಸಿ ಕಂಪನಿಯಲ್ಲಿ ಕೆಲಸ ಕೊಡಿಸಿದೆ. ನಂತರ ಅವನು ಔರಂಗಾಬಾದ್ ನಲ್ಲಿಯೇ ಉಳಿದುಕೊಂಡು ಕೆಲಸದ ಜೊತೆಗೆ ಹೆಚ್ಚಿನ ವಿದ್ಯಾಭ್ಯಾಸದ ಕಡೆಗೆ ಒಲವು ತೊರಿಸಿ DME (Diploma in mechanical engineer) ನಲ್ಲಿ ವ್ಯಾಸಂಗವನ್ನು ಮಾಡಿ ಇಂದು ಒಂದು ವಿದೇಶಿ ಕಂಪನಿಯ ಭಾರತದ ಪ್ರತಿನಿಧಿಯಾಗಿ ಕೆಲಸ ಮಾಡುತ್ತಿರುವುದು ಹೆಮ್ಮೆಯ ವಿಷಯ. ಕೆಲಸದ ಜೊತೆಗೆ ಶ್ರೀನಿವಾಸ ಸಾಮಾಜಿಕ ಕಾರ್ಯ ಕ್ರಮದಲ್ಲಿ ಒಲವು ತೊರಿಸತೊಡಗಿದನು. ಇಂತಹ ಒಂದು ಪ್ರತಿಭೆಯನ್ನು ಹೊಂದಿರುವ ವ್ಯಕ್ತಿ ಎಂಬುದು ನಾನು ಸಹ ಊಹಿಸಿರಲಿಲ್ಲ. ನನ್ನ ಮಾರ್ಗದರ್ಶನದಲ್ಲಿ ಅವನು ಛಲ ಬಿಡದೆ ಒಂದು ಸಾಧನೆಯ ಶಿಖರವನ್ನು ಮುಟ್ಟಿರುವುದು ಖುಷಿ ತಂದಿದೆ. ಕೆಲಸದ ಜೊತೆಯಲ್ಲಿ ಸಾಮಾಜಿಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾಡುತ್ತ ಇಂದು ಔರಂಗಾಬಾದ್ ನಲ್ಲಿ ಹೆಮ್ಮೆಯ ಕನ್ನಡಿಗನಾಗಿ ಗುರುತಿಸಿಕೊಂಡಿರುವುದು ನಮ್ಮ ಗ್ರಾಮದ ಹೆಮ್ಮೆಯ. ಅವರ ಕಾರ್ಯವನ್ನು ಕಂಡು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿದಕ್ಕೆ ನನಗೆ ಬಹಳಷ್ಟು ಸಂತೋಷವಾಗಿದೆ. ಇಂತಹ ಪ್ರತಿಭೆಯನ್ನು ಮುಂದೆಯೂ ನಮ್ಮೂರಲ್ಲಿ ಹುಟ್ಟಿಬರಬೇಕು. ಹಾಗೂ ಅಂತಹ ಪ್ರತಿಭೆಗಳನ್ನು ಗುರುತಿಸಿ ಗ್ರಾಮದ ಹಿರಿಯ ಅನುಭವಿಗಳು ಸಹಾಯ ಸಹಕಾರ ನೀಡಿದರೆ ಗ್ರಾಮದ ಹೆಸರು ಸ್ಥಿರ ಸ್ಥಾಯಿಯಾಗಿ ಬೆಳೆಯಲು ನಮಗೆ ಶ್ರೀನಿವಾಸ ಸಾಕ್ಷಿಯಾಗಿದ್ದಾನೆ. ಇಂತಹ ಅನೇಕ ಪ್ರತಿಭಾವಂತರ ಜನ್ಮ ಆಗಬೇಕು ಎಂಬುದೇ ನನ್ನ ಆಸೆ..

  - ಬಸವರಾಜ ರಾಚಪ್ಪ  ಬಯನ Junior training officer,

     -----------------------------------------------------------------

ದೂರದೃಷ್ಟಿ ಹೊಂದಿರುವ ಪುಸ್ತಕ ಪ್ರೀಯ ಹಾಗೂ ಆಧ್ಯಾತ್ಮಿಕ ಜೀವಿ ಶ್ರೀನಿವಾಸ

ಪ್ರತಿಯೊಂದು ಗ್ರಾಮದಲ್ಲಿ ಶ್ರೀನಿವಾಸ ತೇಲಂಗ ಅಂತಹ ವ್ಯಕ್ತಿಗಳ ಜನನವಾದರೆ ಪ್ರತಿಯೊಂದು ರಾಜ್ಯ ಮತ್ತು ರಾಷ್ಟ್ರಕ್ಕೆ ಅಮೋಘವಾದ ಸೇವೆ ಮಾಡಿದರೆ ಯಾವುದೇ ರಾಷ್ಟ್ರ ಹಿಂದೆ ಬಿಳುವುದಿಲ್ಲ ಈ ನಿಟ್ಟಿನಲ್ಲಿ ದೂರದೃಷ್ಟಿ ಹೊಂದಿರುವ ಆಧುನಿಕ ಮಾದರಿ ವ್ಯಕ್ತಿಯಾಗಿ. ಪುಸ್ತಕ ಪ್ರೀಯರಾಗಿ. ಆಧ್ಯಾತ್ಮಿಕ ಜೀವಿಯಾಗಿ ಪ್ರತಿಯೊಬ್ಬರೊಂದಿಗೆ ಬೆರೆತು ಹೋಗುವ ಅಪರೂಪದ ಗುಣವನ್ನು ಹೊಂದಿದ್ದಾರೆ. ಹೊಸತನವನ್ನು ಕಲಿಯುವ ಗುಣ ಹೊಂದಿ ಇಂದು ಪ್ರತಿಯೊಬ್ಬರ ಮನಸ್ಸು ಗೆಲ್ಲುವ ಮೂಲಕ ಅಜಾತಶತ್ರುವಾಗಿ ಶ್ರೀನಿವಾಸ ತೇಲಂಗ ಗುರುತಿಸಿಕೊಂಡಿದು. ಅವರ ಸೇವೆಯನ್ನು ಕಂಡ ವಿಶ್ವವಿದ್ಯಾಲಯ ನೀಡಿದ ಗೌರವ ಡಾಕ್ಟರೇಟ್ ಪ್ರಶಸ್ತಿಯ ಮೌಲ್ಯವನ್ನು ಹೆಚ್ಚಿಸಿಕೊಂಡಿದೆ. 

ಬಡತನದಲ್ಲಿ ಬೆಳೆದ ವ್ಯಕ್ತಿ ಶಾಲೆಯಲ್ಲಿ ಓದಲು ಆಗದಂತಹ ಬಡತನವನ್ನು ಆವರಿಸಿದ ಪರಿಸ್ಥಿತಿಯಲ್ಲಿ ತನ್ನ ಸಾಮಾರ್ಥ್ಯ ದಿಂದ ಶಿಕ್ಷಣ ಮಾಡಿ ಇಂದು ಗ್ರಾಮಕ್ಕೆ ಒಂದು ಮಾದರಿ ವ್ಯಕ್ತಿಯಾಗಿ ಬೆಳೆದಿರುವುದು ಗ್ರಾಮವೇ ಹೆಮ್ಮೆಯ ಪಡುವ ಸಂಗತಿ. 

ಕನ್ನಡ ಸಮಾರಂಭವನ್ನು ಜ್ಯೋತಿ ಬೆಳಗಿಸುತ್ತಿರುವ ಶ್ರೀನಿವಾಸ ತೇಲಂಗ, ಅನೇಕ ಗಣ್ಯರು

ಜನ್ಮ ನೀಡಿದ ಗ್ರಾಮಕ್ಕೆ ಏನಾದರೂ ಮಾಡಬೇಕು ಎಂಬ ತೂಡಿತ ಸಮಯ ಪರಿಪಾಲನೆಯೇ ಇಂದು ಶ್ರೀನಿವಾಸ  ಮಾಡುವಲ್ಲಿ ಯಶಸ್ವಿಯಾದರು. ಸಾಧನೆಯ ಮಾರ್ಗದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಇಂದು ಸಾಧನೆ ಶಿಖರವನ್ನು ತಲುಪಿ ಗ್ರಾಮಕ್ಕೆ ಹೆಸರು ತಂದಿದ್ದಾರೆ.

 ಶ್ರೀನಿವಾಸ ಕಡುಬಡತನದಲ್ಲಿ ಇರುವಾಗ ಅವರ ಸೋದರಮಾವನ ಆಶ್ರಯದಲ್ಲಿ ಬೆಳೆದರು. ಸೋದರ ಮಾವನ ಸೇವೆ ಸ್ಮರಿಸಿ ಅವರ ವೃದ್ಧಾಪ್ಯದ ಜೀವನದಲ್ಲಿ ಸೇವೆ ಮಾಡಿದ್ದಾರೆ. ಔರಂಗಾಬಾದ್ ನಲ್ಲಿ ಅನೇಕ ನಮ್ಮ ಭಾಗದ ಯುವಕರಿಗೆ ಮಾರ್ಗದರ್ಶನ ನೀಡುವ ಮೂಲಕ ಉದ್ಯೋಗ ನೀಡುವಲ್ಲಿ ಶ್ರಮಿಸಿ ಅನೇಕರಿಗೆ   ಆಶ್ರಯದಾತನಾಗಿದ್ದಾರೆ.  ತೇಲಂಗ ಅವರ ಸೇವೆ ಅನನ್ಯ ವಾಗಿದೆ. ಅಮೋಘವಾಗಿದೆ. ಅಭಿನಂದನೀಯ ಕಾರ್ಯ ಮರೆಯಲಾಗದು. ಅವರು ಇಂಜಿನಿಯರಿಂಗ್ ವೃತ್ತಿ ಯವರು ಆದರು ಗ್ರಾಮದ ಆಗು ಹೋಗುಗಳ ಬಗ್ಗೆ ಹಾಗೂ ಕನ್ನಡ ಭಾಷೆ ಸಂಸ್ಕೃತಿ ಸಂಪ್ರದಾಯ ಹಾಗೂ ಹಿರಿಯರಿಗೆ ಗೌರವ ನೀಡುವ ಸಂಪ್ರದಾಯ ಬೆಳೆಸಿಕೊಂಡಿರುವ ಕಾರಣ ಇಂದು ಶ್ರೀನಿವಾಸ ಎತ್ತರದ ಮಟ್ಟದಲ್ಲಿ ಬೆಳೆಯಲು ಸಾಧ್ಯವಾಗಿದೆ. 

ಪ್ರತಿ ಮೂರು ವರ್ಷಗಳ ನಂತರ ನಡೆಯುವ ಲಕ್ಷ್ಮಿ ಕಾರ್ಯವನ್ನು ಶ್ರದ್ಧೆ ಭಕ್ತಿಯಿಂದ ನಡೆದುಕೊಳ್ಳುತ್ತಾರೆ. ತಮ್ಮನ್ನು ತಾವು ದೇವರ ಕಾರ್ಯದಲ್ಲಿ ತೊಡಗಿಸಿಕೊಂಡ ಬಂದಿರುವುದೇ ಇಂದು ಆ ದೇವಿಯ ಆಶೀರ್ವಾದ ಪಡೆದ ಪುಣ್ಯವಂತರು.

  -ರುಕ್ಮುದ್ದೀನ ಇಸ್ಲಾಂಪುರ ಹಿರಿಯ ಸಾಹಿತಿಗಳು ಬೀದರ

--------------------------------------------------------------------------------------------


ಶ್ರೀನಿವಾಸ ತೇಲಂಗಗೆ ತಮಿಳನಾಡಿನ ಅಸೀಯನ ಅಂತರರಾಷ್ಟ್ರೀಯ ಸಂಸ್ಕೃತ ಸಂಶೋಧನೆ ವಿಶ್ವವಿದ್ಯಾಲಯ  ಶನಿವಾರ ಬೆಂಗಳೂರನಲ್ಲಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. 

ಪ್ರೇಮ ಕಾಶ್ಮೀರದಲ್ಲಿ ರಕ್ತದೋಕುಳಿ; ಹಿಂದೂಗಳೇ ಟಾರ್ಗೆಟ...!

  ಪ್ರೇಮ ಕಾಶ್ಮೀರದಲ್ಲಿ ರಕ್ತದೋಕುಳಿ; ಹಿಂದೂಗಳೇ ಟಾರ್ಗೆಟ್. ಭೂಲೋಕದ ಸ್ವರ್ಗವೆಂದೇ ಕರೆಯುವ ಜಮ್ಮು-ಕಾಶ್ಮೀರದ ಪೆಹಲ್ಗಾಮ್ ಸಮೀಪದ ಬೈಸರನ್ ಹುಲ್ಲುಗಾವಲಿನಲ್ಲಿ ಪಾಕ್ ಪ್...