ads
Search This Blog
Thursday, 9 January 2025
ಪತ್ರಿಕಾಗೋಷ್ಠಿ ತಾತ್ಕಾಲಿಕ ಮುಂದುಡಿಕೆ,ಕರವೇ ರಾಜ್ಯ ವಕ್ತಾರ ಬಿ.ಎಂ.ಪಾಟೀಲ್"
ಬಾಗಲಕೋಟೆ : ನವನಗರದ ಪತ್ರಿಕಾ ಭವನದಲ್ಲಿ ದಿನಾಂಕ:01-01-2025 ರಂದು ನಡೆಯಬೇಕಿದ್ದ ಪತ್ರಿಕಾಗೋಷ್ಠಿ ಕಾರ್ಯಕ್ರಮವನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ ಎಂದು ಕರವೇ ರಾಜ್ಯ ವಕ್ತಾರ ಹಾಗೂ ಜಿಲ್ಲಾಧ್ಯಕ್ಷ ಬಿ.ಎಂ.ಪಾಟೀಲ್ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿರುತ್ತಾರೆ.ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರ ಹಾಗೂ ಹಿರಿಯ ಉಪನೋಂದಣಾಧಿಕಾರಿಗಳ ಕಛೇರಿಯಲ್ಲಿ ಬಿ.ಟಿ.ಡಿ.ಎ ಪ್ರಾಧಿಕಾರಕ್ಕೆ ಸಂಬಂಧಿಸಿದ ಹಲವು ಮಾಹಿತಿಯ ದೃಢೀಕೃತ ಪ್ರತಿಗಳನ್ನು ಮಾಹಿತಿ ಹಕ್ಕು ಅಧಿನಿಯಮ 2005 ರಡಿ ಪೊರೈಸಲು ಅರ್ಜಿ ಸಲ್ಲಿಸಲಾಗಿತ್ತು. ಕಚೇರಿಯ ಸಾರ್ವಜನಿಕ ಮಾಹಿತಿ ಅಧಿಕಾರಿಗಳು ನಿಗದಿತ ಸಮಯದೊಳಗೆ ಮಾಹಿತಿ ನೀಡಲು ವಿಫಲರಾದ ಹಿನ್ನೆಲೆ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರ ಹಾಗೂ ಹಿರಿಯ ಉಪನೋಂದಣಾಧಿಕಾರಿಗಳ ಕಛೇರಿಯ ಪ್ರಥಮ ಮೇಲ್ಮನವಿ (ಹಿರಿಯ) ಅಧಿಕಾರಿಗಳಿಗೆ ಪ್ರಥಮ ಮೇಲ್ಮನವಿ ಸಲ್ಲಿಸಲಾಗಿತ್ತು. ಪ್ರಥಮ ಮೇಲ್ಮನವಿ ವಿಚಾರಣೆಯ ಅಧಿಕಾರಿಗಳು ನಿನ್ನೆಯ ದಿನ ದಿನಾಂಕ: 07-01-2025 ರಂದು ಪ್ರಥಮ ಮೇಲ್ಮನವಿ ವಿಚಾರಣೆ ನಡೆಸಿ ಅರ್ಜಿದಾರರು ಕೇಳಿರುವ ಮಾಹಿತಿಯ ದೃಢೀಕೃತ ಪ್ರತಿಗಳನ್ನು ಪೂರೈಸಲು ಸಾರ್ವಜನಿಕ ಮಾಹಿತಿ ಅಧಿಕಾರಿಗಳಿಗೆ ತಿಳಿಸಿದ್ದರ ಪ್ರಯುಕ್ತ ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಅರ್ಜಿದಾರರು ಕೇಳಿರುವ ಮಾಹಿತಿಗಳು ಬೃಹತ್ತ ಗಾತ್ರದ್ದಾಗಿರುವುದರಿಂದ ಮತ್ತು ದೃಢೀಕರಿಸಿ ಪೊರೈಸಲು ಒಂದು ವಾರಗಳ ಕಾಲಾವಕಾಶ ಕೋರಿದರು ಅದಕ್ಕೆ ಅರ್ಜಿದಾರರಾದ ಬಿಎಂ ಪಾಟೀಲರು ಒಪ್ಪಿಗೆ ಸೂಚಿಸಿದ ಹಿನ್ನೆಲೆಯಲ್ಲಿ ಹಾಗೂ ಸಮರ್ಪಕ ಮಾಹಿತಿ ತಲುಪಿಸುವ ಕಾರಣ ದಿನಾಂಕ: 08-01-2025 ರಂದು ನಡೆಯಬೇಕಾಗಿದ್ದ ಪತ್ರಿಕಾಗೋಷ್ಠಿ ಕಾರ್ಯಕ್ರಮ ವನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ ಎಂದು ಕರವೇ ರಾಜ್ಯ ವಕ್ತಾರ ಹಾಗೂ ಜಿಲ್ಲಾಧ್ಯಕ್ಷ ಬಿ.ಎಮ್ .ಪಾಟೀಲ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ
Tuesday, 7 January 2025
ಪ್ರತಿಭೆಗಳು ಗುರುತಿಸುವ ಕಾರ್ಯ ನಿತ್ಯ ನಿರಂತರವಾಗಿರಲಿ : ಪೂಜ್ಯ ಸಿದ್ದಲಿಂಗ ಶ್ರೀ
ಧನರಾಜ ರಾಠೋಡ ಮುತ್ತಕೋಡ


ದಲ್ಲೇವಾಲ್ ರಕ್ತದೊತ್ತಡದಲ್ಲಿ ಏರುಪೇರು, ಆರೋಗ್ಯ ಸ್ಥಿತಿ ಚಿಂತಾಜನಕ- ವೈದ್ಯರು
ದಲ್ಲೇವಾಲ್ ರಕ್ತದೊತ್ತಡದಲ್ಲಿ ಏರುಪೇರು, ಆರೋಗ್ಯ ಸ್ಥಿತಿ ಚಿಂತಾಜನಕ- ವೈದ್ಯರು
ಚಂಡೀಗಢ: ರೈತರ ಬೇಡಿಕೆಗಳಿಗೆ ಒತ್ತಾಯಿಸಿ ೪೨ ದಿನಗಳಿಂದ ಅನರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ರೈತ ಮುಖಂಡ ಜಗಜಿತ್ ಸಿಂಗ್ ದಲ್ಲೆವಾಲ್ ಅವರ ಆರೋಗ್ಯ ಸ್ಥಿತಿ ಹದಗೆಟ್ಟಿದ್ದು, ಸೋಮವಾರ ಸಂಜೆ ರಕ್ತದೊತ್ತಡದಲ್ಲಿ ಕುಸಿತವಾಗಿದೆ ಎಂದು ಪ್ರತಿಭಟನಾ ಸ್ಥಳದಲ್ಲಿ ಹಾಜರಿದ್ದ ವೈದ್ಯರು ತಿಳಿಸಿದ್ದಾರೆ.
ಇದಕ್ಕೂ ಮೊದಲು ಸುಪ್ರೀಂ ಕರ್ಟ್ ನೇಮಿಸಿದ ಸಮಿತಿ ೭೦ ರ್ಷದ ದಲ್ಲೆವಾಲ್ ಅವರನ್ನು ಭೇಟಿಯಾಗಿ ವೈದ್ಯಕೀಯ ನೆರವು ತೆಗೆದುಕೊಳ್ಳುವಂತೆ ಒತ್ತಾಯಿಸಿತು.
ರ್ವೋಚ್ಚ ನ್ಯಾಯಾಲಯದ ನರ್ದೇಶನಗಳನ್ನು ಅನುಸರಿಸಿ ಪಂಜಾಬ್ ರ್ಕಾರ ನೀಡಿದ ವೈದ್ಯಕೀಯ ನೆರವು ಪಡೆಯಲು ದಲ್ಲೇವಾಲ್ ನಿರಾಕರಿಸಿದ್ದಾರೆ. ದಲ್ಲೆವಾಲ್ ಅವರ ರಕ್ತದೊತ್ತಡ ೮೦/೫೬ಕ್ಕೆ ಕುಸಿದಿದ್ದು, ಏರುಪೇರಾಗುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ.
"ಅವರ ಸ್ಥಿತಿ ಹದಗೆಟ್ಟಿದೆ. ಅವರ ರಕ್ತದೊತ್ತಡ ತೀವ್ರವಾಗಿ ಕುಸಿದಿದೆ. ಅವರ ಸ್ಥಿತಿಯನ್ನು ನೋಡಿದ ನಂತರ ನಾವು ಆತಂಕಗೊಂಡಿದ್ದೇವೆ. ನಾವು ಅವರಿಗೆ ಯಾವುದೇ ವೈದ್ಯಕೀಯ ನೆರವು ನೀಡಲು ಸಾಧ್ಯವಿಲ್ಲ" ಎಂದು ಡಾ ಅವತಾರ್ ಸಿಂಗ್ ಹೇಳಿದ್ದಾರೆ.
"ನಾವು ಅವರ ಕಾಲುಗಳನ್ನು ಮೇಲಕ್ಕೆತ್ತಿದ್ದೇವೆ, ಅದರ ನಂತರ ಅವರ ರಕ್ತದ ಹರಿವು ಸ್ವಲ್ಪ ಸುಧಾರಿಸಿದೆ" ಎಂದು ಎನ್ಜಿಒ '೫ ರಿರ್ಸ್ ಹರ್ಟ್ ಅಸೋಸಿಯೇಷನ್' ತಂಡದ ಭಾಗವಾಗಿರುವ ಸಿಂಗ್ ಹೇಳಿದ್ದಾರೆ. ಅವರ ರಕ್ತದೊತ್ತಡ ಮತ್ತು ನಾಡಿಮಿಡಿತದಲ್ಲಿ ಏರುಪೇರಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಸಂಯುಕ್ತ ಕಿಸಾನ್ ಮರ್ಚಾ (ರಾಜಕೀಯೇತರ) ಸಂಚಾಲಕರಾಗಿರುವ ದಲ್ಲೆವಾಲ್ ಅವರು ಕಳೆದ ರ್ಷ ನವೆಂಬರ್ ೨೬ ರಿಂದ ಪಂಜಾಬ್ ಮತ್ತು ಹರಿಯಾಣ ನಡುವಿನ ಖಾನೌರಿ ಗಡಿಯಲ್ಲಿ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಒSP) ಮೇಲೆ ಕಾನೂನು ಖಾತರಿ ಸೇರಿದಂತೆ ರೈತರ ವಿವಿಧ ಬೇಡಿಕೆಗಳಿಗಾಗಿ ಅನರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.
ಡಿಸೆಂಬರ್ ೨೦ ರಂದು, ಸುಪ್ರೀಂ ಕರ್ಟ್ ಪಂಜಾಬ್ ರ್ಕಾರಿ ಅಧಿಕಾರಿಗಳು ಮತ್ತು ವೈದ್ಯರ ಮೇಲೆ ಅವರನ್ನು ಆಸ್ಪತ್ರೆಗೆ ದಾಖಲಿಸುವ ಬಗ್ಗೆ ನರ್ಧರಿಸುವ ಜವಾಬ್ದಾರಿಯನ್ನು ವಹಿಸಿತ್ತು.
ಉಪವಾಸದ ಸಮಯದಲ್ಲಿ ದಲ್ಲೆವಾಲ್ ಏನೂ ಸೇವಿಸಿರಲಿಲ್ಲ ಎಂದು ರೈತ ಮುಖಂಡರು ಈ ಹಿಂದೆ ಹೇಳಿದ್ದರು, ಅವರು ಕೇವಲ ನೀರನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ಕಳೆದ ಹಲವಾರು ದಿನಗಳಲ್ಲಿ, ಪಂಜಾಬ್ ರ್ಕಾರ ದಲ್ಲೆವಾಲ್ ಅವರ ಉಪವಾಸವನ್ನು ಮುರಿಯಲು ಬಯಸದಿದ್ದರೆ ವೈದ್ಯಕೀಯ ನೆರವು ತೆಗೆದುಕೊಳ್ಳುವಂತೆ ಮನವೊಲಿಸಲು ಅಧಿಕಾರಿಗಳ ಮೂಲಕ ಹಲವಾರು ಪ್ರಯತ್ನಗಳನ್ನು ಮಾಡಿದೆ, ಆದರೆ ಇದಕ್ಕೆ ಅವರು ನಿರಾಕರಿಸಿದ್ದಾರೆ.
ಪಂಜಾಬ್ ಮತ್ತು ಹರಿಯಾಣ ಹೈಕರ್ಟ್ನ ಮಾಜಿ ನ್ಯಾಯಾಧೀಶ ನವಾಬ್ ಸಿಂಗ್ ನೇತೃತ್ವದ ಉನ್ನತಾಧಿಕಾರ ಸಮಿತಿ ಸೋಮವಾರ ದಲ್ಲೆವಾಲ್ ಅವರನ್ನು ಭೇಟಿ ಮಾಡಿ ವೈದ್ಯಕೀಯ ನೆರವು ಪಡೆಯುವಂತೆ ಒತ್ತಾಯಿಸಿದೆ. ದಲ್ಲೆವಾಲ್ ಅವರನ್ನು ಭೇಟಿಯಾದ ನಂತರ ಮಾಧ್ಯಮವನ್ನು ಉದ್ದೇಶಿಸಿ ಮಾತನಾಡಿದ ಸಿಂಗ್, "ನಾವೆಲ್ಲರೂ ಅವರಿಗೆ ವೈದ್ಯಕೀಯ ನೆರವು ಪಡೆಯುವುದಕ್ಕೆ ಪದೇ ಪದೇ ವಿನಂತಿಸಿದ್ದೇವೆ. ಅವರ ಆರೋಗ್ಯ ಚೆನ್ನಾಗಿರಬೇಕೆಂದು ನಾವು ಬಯಸುತ್ತೇವೆ."
"ನಾನು ಇಂದು ಇಲ್ಲಿಗೆ ಬಂದಿರುವುದು ಆಂದೋಲನ ಕೊನೆಗೊಳ್ಳಬೇಕು ಎಂದು ಹೇಳಲು ಅಲ್ಲ, ಆದರೆ ನಿಮ್ಮ (ದಲ್ಲೆವಾಲ್) ಆರೋಗ್ಯ ಚೆನ್ನಾಗಿರಬೇಕು ಎಂದು ಹೇಳಲು" ಎಂದು ನವಾಬ್ ಸಿಂಗ್ ಹೇಳಿದ್ದಾರೆ.
ಸುಪ್ರೀಂ ಕರ್ಟ್, ಸೆಪ್ಟೆಂಬರ್ ೨೦೨೪ ರಲ್ಲಿ, ಪ್ರತಿಭಟನಾ ನಿರತ ರೈತರ ಕುಂದುಕೊರತೆಗಳನ್ನು ಸೌಹರ್ದಯುತವಾಗಿ ಪರಿಹರಿಸುವ ಉದ್ದೇಶದಿಂದ ಸಮಿತಿಯನ್ನು ರಚಿಸಿತು.
ಸಮಿತಿಯು ನಿವೃತ್ತ ಐಪಿಎಸ್ ಅಧಿಕಾರಿ ಬಿ ಎಸ್ ಸಂಧು, ಕೃಷಿ ತಜ್ಞ ದೇವಿಂದರ್ ರ್ಮಾ, ಪ್ರೊಫೆಸರ್ ರಂಜಿತ್ ಸಿಂಗ್ ಘುಮಾನ್ ಮತ್ತು ಡಾ ಸುಖಪಾಲ್ ಸಿಂಗ್, ಪಂಜಾಬ್ ಕೃಷಿ ವಿಶ್ವವಿದ್ಯಾಲಯದ ಕೃಷಿ ರ್ಥಶಾಸ್ತ್ರಜ್ಞರನ್ನು ಒಳಗೊಂಡಿದೆ.
ಎಸ್ಕೆಎಂ (ರಾಜಕೀಯೇತರ) ಮತ್ತು ಕಿಸಾನ್ ಮಜ್ದೂರ್ ಮರ್ಚಾದ ಬ್ಯಾನರ್ನಡಿಯಲ್ಲಿ ರೈತರು ದೆಹಲಿಗೆ ಅವರ ಮೆರವಣಿಗೆಯನ್ನು ಭದ್ರತಾ ಪಡೆಗಳು ತಡೆದ ನಂತರ ಫೆಬ್ರವರಿ ೧೩ ರಿಂದ ಪಂಜಾಬ್ ಮತ್ತು ಹರಿಯಾಣ ನಡುವಿನ ಶಂಭು ಮತ್ತು ಖಾನೌರಿ ಗಡಿ ಬಿಂದುಗಳಲ್ಲಿ ಮೊಕ್ಕಾಂ ಹೂಡಿದ್ದಾರೆ.
ದೆಹಲಿ ವಿಧಾನಸಭೆಯ ಚುನಾವಣೆ ಘೋಷಣೆ; ಫೆ.5ಕ್ಕೆ ಮತದಾನ, ಫೆ.8ರಂದು ಅಭ್ಯರ್ಥಿಗಳ ಭವಿಷ್ಯ ನಿರ್ಧಾರ
ದೆಹಲಿ ವಿಧಾನಸಭೆಯ ಚುನಾವಣೆ ದಿನಾಂಕ ಘೋಷಣೆಯಾಗಿದ್ದು ಫೆಬ್ರವರಿ 5ರಂದು ಮತದಾನ ನಡೆಯಲಿದ್ದು ಫೆಬ್ರವರಿ 8ರಂದು ಫಲಿತಾಂಶ ಪ್ರಕಟವಾಗಲಿದೆ. ಇಂದು ಪತ್ರಿಕಾಗೋಷ್ಠಿಯನ್ನು ಆಯೋಜಿಸಿದ್ದು ಚುನಾವಣಾ ಆಯೋಗ ದೆಹಲಿ ವಿಧಾನಸಭೆ ಚುನಾವಣೆ 2025ರ ವೇಳಾಪಟ್ಟಿಯನ್ನು ಪ್ರಕಟಿಸಿದೆ. ದೆಹಲಿಯ 70 ವಿಧಾನಸಭಾ ಸ್ಥಾನಗಳಿಗೆ ಫೆಬ್ರವರಿ 5 ರಂದು ಮತದಾನ ನಡೆಯಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಈ ಪತ್ರಿಕಾಗೋಷ್ಠಿಯಲ್ಲಿ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್, ಚುನಾವಣಾ ಆಯುಕ್ತರಾದ ಜ್ಞಾನೇಶ್ ಕುಮಾರ್ ಮತ್ತು ಸುಖಬೀರ್ ಸಿಂಗ್ ಸಂಧು ಉಪಸ್ಥಿತರಿದ್ದರು.
ದೆಹಲಿ ವಿಧಾನಸಭಾ ಚುನಾವಣೆಯ ಮತದಾನದ ಜೊತೆಗೆ ಚುನಾವಣಾ ಆಯೋಗವು ಚುನಾವಣಾ ಫಲಿತಾಂಶದ ದಿನಾಂಕವನ್ನೂ ಪ್ರಕಟಿಸಿದೆ. ಚುನಾವಣಾ ಆಯೋಗದ ಪ್ರಕಾರ, ದೆಹಲಿ ವಿಧಾನಸಭಾ ಚುನಾವಣೆಯ ಮತದಾನದ ಫಲಿತಾಂಶವನ್ನು ಫೆಬ್ರವರಿ 8 ರಂದು ಅಂದರೆ ಚುನಾವಣೆಯ 3 ದಿನಗಳ ನಂತರ ಪ್ರಕಟವಾಗಲಿದೆ.
ಕಳೆದ ಸೋಮವಾರ ಚುನಾವಣಾ ಆಯೋಗವೂ ದೆಹಲಿಯ ಮತದಾರರ ಸಂಖ್ಯೆಯನ್ನು ಬಹಿರಂಗಪಡಿಸಿತ್ತು. ಚುನಾವಣಾ ಆಯೋಗ ಬಿಡುಗಡೆ ಮಾಡಿರುವ ಮತದಾರರ ಅಂತಿಮ ಪಟ್ಟಿಯ ಪ್ರಕಾರ ಕೇಂದ್ರಾಡಳಿತ ಪ್ರದೇಶವಾದ ದೆಹಲಿಯಲ್ಲಿ ಒಟ್ಟು 1 ಕೋಟಿ 55 ಲಕ್ಷದ 24 ಸಾವಿರದ 858 ನೋಂದಾಯಿತ ಮತದಾರರಿದ್ದಾರೆ. ಅದೇ ವೇಳೆ ಪುರುಷ ಮತದಾರರ ಸಂಖ್ಯೆ 84 ಲಕ್ಷ 49 ಸಾವಿರದ 645 ಹಾಗೂ ಮಹಿಳಾ ಮತದಾರರ ಸಂಖ್ಯೆ 71 ಲಕ್ಷ 73 ಸಾವಿರದ 952. ಈ ಬಾರಿ ದೆಹಲಿಯಲ್ಲಿ ಯುವ ಮತದಾರರ ಸಂಖ್ಯೆ 25.89 ಲಕ್ಷವಿದ್ದು ಮೊದಲ ಬಾರಿಗೆ ಮತ ಚಲಾಯಿಸಲು ಅರ್ಹರಾದವರ ಸಂಖ್ಯೆ 2.08 ಲಕ್ಷವಿದೆ.
ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ವದಂತಿಗಳನ್ನು ಹಬ್ಬಿಸಲಾಗಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಹೇಳಿದ್ದಾರೆ. ಯಾವುದೇ ಆಧಾರವಿಲ್ಲದೆ ಹಲವು ಆರೋಪಗಳನ್ನು ಮಾಡಲಾಗಿದೆ. ಇವಿಎಂ ಬಗ್ಗೆಯೂ ವದಂತಿ ಹಬ್ಬಿತ್ತು ಎಂದು ಹೇಳಿದರು.
ನೀರಾವರಿ ಯೋಜನೆಗಳನ್ನು ಕಾಲಮಿತಿಯಲ್ಲಿ ಮುಗಿಸಿ- ಸಚಿವ ಶಿವರಾಜ ಎಸ್. ತಂಗಡಗಿ
ಕೊಪ್ಪಳ : ಕೊಪ್ಪಳ ಜಿಲ್ಲೆಯಲ್ಲಿ ನಡೆಯುತ್ತಿರುವ ನೀರಾವರಿ ಯೋಜನೆಯನ್ನು ಕಾಲಮಿತಿಯಲ್ಲಿ ಮುಗಿಸಬೇಕು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ಎಸ್. ತಂಗಡಗಿ ಹೇಳಿದರು.
Monday, 6 January 2025
ಕಲಾವಿದರ ಏಳ್ಗೆಗಾಗಿ ಶ್ರಮಿಸುತ್ತಿರುವ ರಾಜಕುಮಾರ ಕಾರ್ಯ ಅಭಿನಂದನೀಯ: ಸಾಗರ ಖಂಡ್ರೆ
ಬೀದರ: ಕರ್ನಾಟಕ ತೆಲಂಗಾಣ ಗಡಿಯಲ್ಲಿ ಸಾಂಸ್ಕೃತಿಕ ಹಬ್ ಸ್ಥಾಪನೆ ಹಾಗೂ ಬೀದರ ಜಿಲ್ಲೆಯಲ್ಲಿ ಅಂತರಾಷ್ಟಿಯ ಜಾನಪದ ಸಮ್ಮೇಳನ ಆಯೋಜನೆಯ ಬೇಡಿಕೆ ನಮ್ಮ ಮುಂದಿದೆ. ಇವುಗಳ ಸಫಲತೆಗೆ ಸಂಬ0ಧಪಟ್ಟ ಸಚಿವರಿಗೆ ಮಾತನಾಡಿ ಸಾಕಾರಗೊಳಿಸುವ ಪ್ರಯತ್ನ ಮಾಡಲಾಗುವುದು. ಈ ನಿಟ್ಟಿನಲ್ಲಿ ಕಲಾವಿದರ ಏಳ್ಗೆಗಾಗಿ ಹಗಲಿರುಳು ಶ್ರಮಿಸುತ್ತಿರುವ ರಾಷ್ಟಿಯ ಜನಪದ ಬುಡಕಟ್ಟು ಕಲಾ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಡಾ. ರಾಜಕುಮಾರ ಹೆಬ್ಬಾಳೆಯವರ ಕಾರ್ಯ ಅಭಿನಂದನೀಯ ಎಂದು ಲೋಕಸಭಾ ಸದಸ್ಯ ಸಾಗರ ಖಂಡ್ರೆ ತಿಳಿಸಿದರು.
ಪ್ರೇಮ ಕಾಶ್ಮೀರದಲ್ಲಿ ರಕ್ತದೋಕುಳಿ; ಹಿಂದೂಗಳೇ ಟಾರ್ಗೆಟ...!
ಪ್ರೇಮ ಕಾಶ್ಮೀರದಲ್ಲಿ ರಕ್ತದೋಕುಳಿ; ಹಿಂದೂಗಳೇ ಟಾರ್ಗೆಟ್. ಭೂಲೋಕದ ಸ್ವರ್ಗವೆಂದೇ ಕರೆಯುವ ಜಮ್ಮು-ಕಾಶ್ಮೀರದ ಪೆಹಲ್ಗಾಮ್ ಸಮೀಪದ ಬೈಸರನ್ ಹುಲ್ಲುಗಾವಲಿನಲ್ಲಿ ಪಾಕ್ ಪ್...
.jpg)
-
ಹೈದರಾಬಾದ್ : ಇಂದು ಬೆಳಿಗ್ಗೆ ಬೀದರನಲ್ಲಿ ನಡೆದ ಎಟಿಎಂ ದರೋಡೆಕೋರರೆ ನಗರದ ಅಫ್ಜಲಗಂಜನಲ್ಲಿರುವ ರೋಷನ ಟ್ರಾವೆಲ್ ಕಛೆರಿಯಲ್ಲಿ ಪೊಲೀಸ್ ಮತ್ತು ದರೋಡೆಕೋರ ಮಧ್ಯೆ ಗುಂಡಿನ ...
-
ಬೀದರ್: ಎಟಿಎಂಗೆ ಹಣ ಹಾಕಲು ಬಂದ ಬ್ಯಾಂಕ್ ಸಿಬ್ಬಂದಿ ಮೇಲೆ ಹಾಡಹಗಲೇ ಗುಂಡಿನ ದಾಳಿ ನಡೆಸಿರುವ ಘಟನೆಯೊಂದು ಬೀದರ್ನ ಎಸ್ಬಿಐ ಮುಖ್ಯ ಕಚೇರಿ ಮುಂದೆ ಗುರುವಾರ ನಡೆದಿದೆ. ...
-
ಶೋಧವಾಣಿ ಜಾಲಲೋಕ ಹೈದರಾಬಾದ್ : ಸಂಘಟಿತ ಹೋರಾಟ ಇಂದಿನ ದಿನಮಾನದ ಜರೂರು ಹೊರನಾಡು ಗಡಿನಾಡಿನ ಕನ್ನಡಿಗರ ಹಿತಕಾಯಲು ಯಾರೂ ಇಲ್ಲವೆನ್ನುವ ಅನಾಥಪ್ರಜ್ಞೆ ಸರಿಯಲ್ಲ. ಭಾಷೆಯ...