ads

Search This Blog

Thursday, 9 January 2025

shodhavani kannada Daily

https://drive.google.com/file/d/1LWt5OYOCzWRDo6xtN8tMPcmaCBCQ5t5e/preview?

ಪತ್ರಿಕಾಗೋಷ್ಠಿ ತಾತ್ಕಾಲಿಕ ಮುಂದುಡಿಕೆ,ಕರವೇ ರಾಜ್ಯ ವಕ್ತಾರ ಬಿ.ಎಂ.ಪಾಟೀಲ್"

ಬಾಗಲಕೋಟೆ  : ನವನಗರದ ಪತ್ರಿಕಾ ಭವನದಲ್ಲಿ ದಿನಾಂಕ:01-01-2025 ರಂದು  ನಡೆಯಬೇಕಿದ್ದ ಪತ್ರಿಕಾಗೋಷ್ಠಿ ಕಾರ್ಯಕ್ರಮವನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ ಎಂದು ಕರವೇ ರಾಜ್ಯ ವಕ್ತಾರ ಹಾಗೂ ಜಿಲ್ಲಾಧ್ಯಕ್ಷ ಬಿ.ಎಂ.ಪಾಟೀಲ್ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿರುತ್ತಾರೆ.ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರ ಹಾಗೂ ಹಿರಿಯ ಉಪನೋಂದಣಾಧಿಕಾರಿಗಳ ಕಛೇರಿಯಲ್ಲಿ ಬಿ.ಟಿ.ಡಿ.ಎ ಪ್ರಾಧಿಕಾರಕ್ಕೆ ಸಂಬಂಧಿಸಿದ ಹಲವು ಮಾಹಿತಿಯ ದೃಢೀಕೃತ ಪ್ರತಿಗಳನ್ನು ಮಾಹಿತಿ ಹಕ್ಕು ಅಧಿನಿಯಮ 2005 ರಡಿ ಪೊರೈಸಲು ಅರ್ಜಿ ಸಲ್ಲಿಸಲಾಗಿತ್ತು. ಕಚೇರಿಯ ಸಾರ್ವಜನಿಕ ಮಾಹಿತಿ ಅಧಿಕಾರಿಗಳು ನಿಗದಿತ ಸಮಯದೊಳಗೆ ಮಾಹಿತಿ ನೀಡಲು ವಿಫಲರಾದ ಹಿನ್ನೆಲೆ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರ ಹಾಗೂ ಹಿರಿಯ ಉಪನೋಂದಣಾಧಿಕಾರಿಗಳ ಕಛೇರಿಯ ಪ್ರಥಮ ಮೇಲ್ಮನವಿ (ಹಿರಿಯ) ಅಧಿಕಾರಿಗಳಿಗೆ ಪ್ರಥಮ ಮೇಲ್ಮನವಿ ಸಲ್ಲಿಸಲಾಗಿತ್ತು. ಪ್ರಥಮ ಮೇಲ್ಮನವಿ ವಿಚಾರಣೆಯ ಅಧಿಕಾರಿಗಳು ನಿನ್ನೆಯ ದಿನ ದಿನಾಂಕ: 07-01-2025 ರಂದು ಪ್ರಥಮ ಮೇಲ್ಮನವಿ ವಿಚಾರಣೆ ನಡೆಸಿ  ಅರ್ಜಿದಾರರು ಕೇಳಿರುವ ಮಾಹಿತಿಯ  ದೃಢೀಕೃತ ಪ್ರತಿಗಳನ್ನು ಪೂರೈಸಲು ಸಾರ್ವಜನಿಕ ಮಾಹಿತಿ ಅಧಿಕಾರಿಗಳಿಗೆ ತಿಳಿಸಿದ್ದರ ಪ್ರಯುಕ್ತ ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಅರ್ಜಿದಾರರು ಕೇಳಿರುವ ಮಾಹಿತಿಗಳು ಬೃಹತ್ತ ಗಾತ್ರದ್ದಾಗಿರುವುದರಿಂದ ಮತ್ತು ದೃಢೀಕರಿಸಿ ಪೊರೈಸಲು ಒಂದು ವಾರಗಳ ಕಾಲಾವಕಾಶ ಕೋರಿದರು ಅದಕ್ಕೆ ಅರ್ಜಿದಾರರಾದ ಬಿಎಂ ಪಾಟೀಲರು ಒಪ್ಪಿಗೆ ಸೂಚಿಸಿದ ಹಿನ್ನೆಲೆಯಲ್ಲಿ ಹಾಗೂ ಸಮರ್ಪಕ ಮಾಹಿತಿ ತಲುಪಿಸುವ ಕಾರಣ ದಿನಾಂಕ: 08-01-2025  ರಂದು ನಡೆಯಬೇಕಾಗಿದ್ದ ಪತ್ರಿಕಾಗೋಷ್ಠಿ ಕಾರ್ಯಕ್ರಮ ವನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ ಎಂದು ಕರವೇ ರಾಜ್ಯ ವಕ್ತಾರ ಹಾಗೂ ಜಿಲ್ಲಾಧ್ಯಕ್ಷ ಬಿ.ಎಮ್ .ಪಾಟೀಲ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ

Tuesday, 7 January 2025

ಪ್ರತಿಭೆಗಳು ಗುರುತಿಸುವ ಕಾರ್ಯ ನಿತ್ಯ ನಿರಂತರವಾಗಿರಲಿ : ಪೂಜ್ಯ ಸಿದ್ದಲಿಂಗ ಶ್ರೀ

 ಧನರಾಜ ರಾಠೋಡ ಮುತ್ತಕೋಡ

ಜೇವರ್ಗಿ ; ಇಂದಿನ ಪ್ರತಿ ಮಗುವಿನಲ್ಲಿ ಅದ್ಭುತ ಪ್ರತಿಭೆಗಳು ಇವೆ.ಅದನ್ನು ಗುರುತಿಸುವ ಕಾರ್ಯ ಶಿಕ್ಷಕರದ್ದು.ಅದು ನಿತ್ಯ ನಿರಂತರ ಎಂಬಂತೆ,ಪ್ರತಿಭೆ ಗುರುತಿಸುವ ಕಾರ್ಯ ಮಾಡುತ್ತಲೆ ಇರಬೇಕು ಎಂದು ಯಡ್ರಾಮಿ ಪೂಜ್ಯರಾದ ಸಿದ್ದಲಿಂಗ ಮಹಾಸ್ವಾಮಿಗಳು ಶಿಕ್ಷಕರಿಗೆ ‌ಕರೆ ನೀಡಿದರು.



ಪಟ್ಟಣದ ಗುರುಕುಲ ಸಂಸ್ಥೆಯ ವತಿಯಿಂದ,ಗುರುಕುಲ ಸ್ವತಂತ್ರ ವಿಜ್ಞಾನ ಪಪೂ ಕಾಲೇಜಿನಲ್ಲಿ,ಗುರುಕುಲ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಧ್ಯಾರ್ಥಿಗಳಿಗೆ ಪದಕ ಪ್ರಶಸ್ತಿಗಳ ವಿತರಣಾ ಸಮಾರಂಭದ ಸಾನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು.

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪೋಷಕರು ಮತ್ತು ಶಿಕ್ಷಕರು ಕೇವಲ ಅಂಕಗಳಿಗೆ ಮಕ್ಕಳನ್ನು ಸೀಮಿತ ಗೊಳಿಸಬಾರದು.ಅವರು ಸಮಾಜ ಮುಖಿ ಕಾರ್ಯದತ್ತ ದಾಪುಗಾಲು ಇಡುವಂತೆ ಸಂಸ್ಕಾರಗಳ ಮೂಲಕ ಅವರಿಗೆ ಸಾಮಾಜೀಕರಣ ಮಾಡಬೇಕು ಎಂದು ಶ್ರೀಗಳು ಹೇಳಿದರು.

ಇದೆ ಸಂದರ್ಭದಲ್ಲಿ ತಾಲ್ಲೂಕು ದೈಹಿಕ ಕ್ಷೇತ್ರ ಶಿಕ್ಷಣಾಧಿಕಾರಿ ಶಿವಪುತ್ರ ಬಿರಗೊಂಡ,ಸಂಸ್ಥೆಯ ಕಾರ್ಯದರ್ಶಿ ಮಹಾಂತಯ್ಯ ಸಿ ಹಿರೇಮಠ ಹಾಗೂ ಗೌರವ ಸಮ್ಮಾನ್ ಸ್ವೀಕರಿಸಿದ ನಿವೃತ್ತ ಶಿಕ್ಷಕ ರಮೇಶ್ ಗುತ್ತೆದಾರ ಮಾತನಾಡಿದರು.



ನಿವೃತ್ತ ಶಿಕ್ಷಕರುಗಳಿಗೆ ಗೌರವ ಸಮ್ಮಾನ್

ವಿವಿಧ ಶಾಲಾ ಕಾಲೇಜುಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಶಿಕ್ಷಕರುಗಳಿಗೆ ಗೌರವ ಸಮ್ಮಾನ್ ನಡೆಯಿತು. ಚಂದ್ರಶೇಖರ್ ಬಿರಾದಾರ, ಶಾಂತಪ್ಪ ಬಿಲ್ಲಾಡ,ಬಸವರಾಜ, ಶಾರದಾಬಾಯಿ ಸಾಲಿಮಠ,ಚಾಂದಸಾಬ ಬಳಗಾನೂರ, ಶರಣಪ್ಪ ಕಮತಗಿ,ಇಂದುಧರಾ ಹಿರೇಮಠ, ಶಾಂತಗೌಡ ಹಂಚಿನಾಳ,ರಮೇಶ್ ಗುತ್ತೆದಾರ, ರಾಮಚಂದ್ರ ಕುಮಸಗಿ,ದಸ್ತಗಿರ ಚೌದರಿರವರುಗಳಿಗೆ ಸನ್ಮಾನಿಸಲಾಯಿತು.


ಈ ಕಾರ್ಯಕ್ರಮದಲ್ಲಿ ದೈಹಿಕ ಶಿಕ್ಷಣಾಧಿಕಾರಿ ಶಿವಪುತ್ರ ಬಿರಗೊಂಡ,ಮಹಾಂತಯ್ಯ ಸಿ ಹಿರೇಮಠ,ಚನ್ನಮಲ್ಲಯ್ಯ ಹಿರೇಮಠ,ಬಸಮ್ಮ ಸಿ ಹಿರೇಮಠ, ಎಸ್ ಕೆ ಬಿರಾದಾರ,ಶ್ರೀಹರಿ ಕರಕಿಹಳ್ಳಿ, ಪ್ರಶಾಂತಗೌಡ ಮಾಲಿಪಾಟೀಲ್ ಜೈನಾಪೂರ, ಕಾಸಿನಾಥ ಸಾಹು,ಶರಣಪ್ಪ ಪರಸಗೊಂಡ,ನಿಜಲಿಂಗಪ್ಪ ಮಾನ್ವಿ,ಮಹ್ಮದ ಅಲಿ ನಧಾಫ್ ಹರನಾಳ,ಮಡಿವಾಳಪ್ಪ ಗಂವ್ಹಾರ, ಮಹಾದೇವಯ್ಯ ಸ್ಥಾವರಮಠ,ಚನ್ನಬಸಪ್ಪ ಸಾಹು,ರಮೇಶ ಜಾನಕರ್,ಜಗದೀಶ್ ಎಸ್ ಉಕನಾಳಕರ್, ಜ್ಯೋತಿ ಸಾಲಿಮಠ,ರಾಜೇಂದ್ರ ಮಠ ಸೇರಿದಂತೆ ಅನೇಕರು ಇದ್ದರು.



ಅಂಕಗಳಿಗಿಂತ ಸಂಸ್ಕಾರ ಮುಖ್ಯ

ಇಂದಿನ ಮಕ್ಕಳಿಗೆ ಕೇವಲ ಅಂಕಗಳಿಗೆ ಸೀಮಿತ ಮಾಡಬೇಡಿ.ಅವರಿಗೆ ಔಪಚಾರಿಕ ಶಿಕ್ಷಣದ ಜೊತೆಗೆ ಅನೌಪಚಾರಿಕ ಶಿಕ್ಷಣ ಸಹ ಅಷ್ಟೇ ಮುಖ್ಯ.ಅವರಲ್ಲಿ ಒಳ್ಳೆಯ ಸಂಸ್ಕಾರವನ್ನು ಬೆಳೆಸಿ.


            ಪೂಜ್ಯ ಸಿದ್ದಲಿಂಗ ಶ್ರೀಗಳು
               ವಿರಕ್ತ ಮಠ ಯಡ್ರಾಮಿ





**  ಮುಖ್ಯಾಂಶಗಳು  **


* ಪ್ರತಿ ಮಗುವಿನಲ್ಲಿ ಅದ್ಭುತ ಪ್ರತಿಭೆ ಉಂಟು : ಯಡ್ರಾಮಿ ಶ್ರೀಗಳು

** ಪ್ರತಿಭೆ ಗುರುತಿಸುವ ಕಾರ್ಯ ನಿತ್ಯ ನಿರಂತರವಾಗಿರಲಿ : ಪೂಜ್ಯರ ಸಲಹೆ.


* ಪಟ್ಟಣದ ಗುರುಕುಲ ಸಂಸ್ಥೆಯ ಕಾರ್ಯ ಶ್ಲಾಘನೀಯ.

** ಜೆ ಎಸ್ ಎಸ್ ಸಂಸ್ಥೆಯಂತೆ ಗುರುಕುಲ ಸಂಸ್ಥೆ ಹೆಮ್ಮರವಾಗಿ ಬೆಳೆಯಲಿ : ಶ್ರೀಗಳ ಕಟಾಕ್ಷ


** ವಿವಿಧ ಸ್ಪರ್ಧೆಗಳಲ್ಲಿ ವಿಜೇತ ಮಕ್ಕಳಿಗೆ ಪದಕ ಪುರಸ್ಕಾರ ಸುರಿಮಳೆ.


** ಪುಠಾಣಿಗಳ ಕೊರಳಲ್ಲಿ ನಲಿದಾಡಿದ ಪದಕಗಳು.


** ಪುಠಾಣಿಗಳ ಕೊರಳಲ್ಲಿ ಪದಕಗಳು. ಪೋಟೋ ತೆಗೆಸಿಕೊಂಡ ಪೋಷಕರು.

ದಲ್ಲೇವಾಲ್ ರಕ್ತದೊತ್ತಡದಲ್ಲಿ ಏರುಪೇರು, ಆರೋಗ್ಯ ಸ್ಥಿತಿ ಚಿಂತಾಜನಕ- ವೈದ್ಯರು

 ದಲ್ಲೇವಾಲ್ ರಕ್ತದೊತ್ತಡದಲ್ಲಿ ಏರುಪೇರು, ಆರೋಗ್ಯ ಸ್ಥಿತಿ ಚಿಂತಾಜನಕ- ವೈದ್ಯರು

ಚಂಡೀಗಢ: ರೈತರ ಬೇಡಿಕೆಗಳಿಗೆ ಒತ್ತಾಯಿಸಿ ೪೨ ದಿನಗಳಿಂದ ಅನರ‍್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ರೈತ ಮುಖಂಡ ಜಗಜಿತ್ ಸಿಂಗ್ ದಲ್ಲೆವಾಲ್ ಅವರ ಆರೋಗ್ಯ ಸ್ಥಿತಿ ಹದಗೆಟ್ಟಿದ್ದು, ಸೋಮವಾರ ಸಂಜೆ ರಕ್ತದೊತ್ತಡದಲ್ಲಿ ಕುಸಿತವಾಗಿದೆ ಎಂದು ಪ್ರತಿಭಟನಾ ಸ್ಥಳದಲ್ಲಿ ಹಾಜರಿದ್ದ ವೈದ್ಯರು ತಿಳಿಸಿದ್ದಾರೆ.

ಇದಕ್ಕೂ ಮೊದಲು ಸುಪ್ರೀಂ ಕರ‍್ಟ್ ನೇಮಿಸಿದ ಸಮಿತಿ ೭೦ ರ‍್ಷದ ದಲ್ಲೆವಾಲ್ ಅವರನ್ನು ಭೇಟಿಯಾಗಿ ವೈದ್ಯಕೀಯ ನೆರವು ತೆಗೆದುಕೊಳ್ಳುವಂತೆ ಒತ್ತಾಯಿಸಿತು.

ರ‍್ವೋಚ್ಚ ನ್ಯಾಯಾಲಯದ ನರ‍್ದೇಶನಗಳನ್ನು ಅನುಸರಿಸಿ ಪಂಜಾಬ್ ರ‍್ಕಾರ ನೀಡಿದ ವೈದ್ಯಕೀಯ ನೆರವು ಪಡೆಯಲು ದಲ್ಲೇವಾಲ್ ನಿರಾಕರಿಸಿದ್ದಾರೆ. ದಲ್ಲೆವಾಲ್ ಅವರ ರಕ್ತದೊತ್ತಡ ೮೦/೫೬ಕ್ಕೆ ಕುಸಿದಿದ್ದು, ಏರುಪೇರಾಗುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ.

"ಅವರ ಸ್ಥಿತಿ ಹದಗೆಟ್ಟಿದೆ. ಅವರ ರಕ್ತದೊತ್ತಡ ತೀವ್ರವಾಗಿ ಕುಸಿದಿದೆ. ಅವರ ಸ್ಥಿತಿಯನ್ನು ನೋಡಿದ ನಂತರ ನಾವು ಆತಂಕಗೊಂಡಿದ್ದೇವೆ. ನಾವು ಅವರಿಗೆ ಯಾವುದೇ ವೈದ್ಯಕೀಯ ನೆರವು ನೀಡಲು ಸಾಧ್ಯವಿಲ್ಲ" ಎಂದು ಡಾ ಅವತಾರ್ ಸಿಂಗ್ ಹೇಳಿದ್ದಾರೆ.

"ನಾವು ಅವರ ಕಾಲುಗಳನ್ನು ಮೇಲಕ್ಕೆತ್ತಿದ್ದೇವೆ, ಅದರ ನಂತರ ಅವರ ರಕ್ತದ ಹರಿವು ಸ್ವಲ್ಪ ಸುಧಾರಿಸಿದೆ" ಎಂದು ಎನ್‌ಜಿಒ '೫ ರಿರ‍್ಸ್ ಹರ‍್ಟ್ ಅಸೋಸಿಯೇಷನ್' ತಂಡದ ಭಾಗವಾಗಿರುವ ಸಿಂಗ್ ಹೇಳಿದ್ದಾರೆ. ಅವರ ರಕ್ತದೊತ್ತಡ ಮತ್ತು ನಾಡಿಮಿಡಿತದಲ್ಲಿ ಏರುಪೇರಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಸಂಯುಕ್ತ ಕಿಸಾನ್ ಮರ‍್ಚಾ (ರಾಜಕೀಯೇತರ) ಸಂಚಾಲಕರಾಗಿರುವ ದಲ್ಲೆವಾಲ್ ಅವರು ಕಳೆದ ರ‍್ಷ ನವೆಂಬರ್ ೨೬ ರಿಂದ ಪಂಜಾಬ್ ಮತ್ತು ಹರಿಯಾಣ ನಡುವಿನ ಖಾನೌರಿ ಗಡಿಯಲ್ಲಿ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಒSP) ಮೇಲೆ ಕಾನೂನು ಖಾತರಿ ಸೇರಿದಂತೆ ರೈತರ ವಿವಿಧ ಬೇಡಿಕೆಗಳಿಗಾಗಿ ಅನರ‍್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.

ಡಿಸೆಂಬರ್ ೨೦ ರಂದು, ಸುಪ್ರೀಂ ಕರ‍್ಟ್ ಪಂಜಾಬ್ ರ‍್ಕಾರಿ ಅಧಿಕಾರಿಗಳು ಮತ್ತು ವೈದ್ಯರ ಮೇಲೆ ಅವರನ್ನು ಆಸ್ಪತ್ರೆಗೆ ದಾಖಲಿಸುವ ಬಗ್ಗೆ ನರ‍್ಧರಿಸುವ ಜವಾಬ್ದಾರಿಯನ್ನು ವಹಿಸಿತ್ತು.

ಉಪವಾಸದ ಸಮಯದಲ್ಲಿ ದಲ್ಲೆವಾಲ್‌ ಏನೂ ಸೇವಿಸಿರಲಿಲ್ಲ ಎಂದು ರೈತ ಮುಖಂಡರು ಈ ಹಿಂದೆ ಹೇಳಿದ್ದರು, ಅವರು ಕೇವಲ ನೀರನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

ಕಳೆದ ಹಲವಾರು ದಿನಗಳಲ್ಲಿ, ಪಂಜಾಬ್ ರ‍್ಕಾರ ದಲ್ಲೆವಾಲ್ ಅವರ ಉಪವಾಸವನ್ನು ಮುರಿಯಲು ಬಯಸದಿದ್ದರೆ ವೈದ್ಯಕೀಯ ನೆರವು ತೆಗೆದುಕೊಳ್ಳುವಂತೆ ಮನವೊಲಿಸಲು ಅಧಿಕಾರಿಗಳ ಮೂಲಕ ಹಲವಾರು ಪ್ರಯತ್ನಗಳನ್ನು ಮಾಡಿದೆ, ಆದರೆ ಇದಕ್ಕೆ ಅವರು ನಿರಾಕರಿಸಿದ್ದಾರೆ.

ಪಂಜಾಬ್ ಮತ್ತು ಹರಿಯಾಣ ಹೈಕರ‍್ಟ್‌ನ ಮಾಜಿ ನ್ಯಾಯಾಧೀಶ ನವಾಬ್ ಸಿಂಗ್ ನೇತೃತ್ವದ ಉನ್ನತಾಧಿಕಾರ ಸಮಿತಿ ಸೋಮವಾರ ದಲ್ಲೆವಾಲ್ ಅವರನ್ನು ಭೇಟಿ ಮಾಡಿ ವೈದ್ಯಕೀಯ ನೆರವು ಪಡೆಯುವಂತೆ ಒತ್ತಾಯಿಸಿದೆ. ದಲ್ಲೆವಾಲ್ ಅವರನ್ನು ಭೇಟಿಯಾದ ನಂತರ ಮಾಧ್ಯಮವನ್ನು ಉದ್ದೇಶಿಸಿ ಮಾತನಾಡಿದ ಸಿಂಗ್, "ನಾವೆಲ್ಲರೂ ಅವರಿಗೆ ವೈದ್ಯಕೀಯ ನೆರವು ಪಡೆಯುವುದಕ್ಕೆ ಪದೇ ಪದೇ ವಿನಂತಿಸಿದ್ದೇವೆ. ಅವರ ಆರೋಗ್ಯ ಚೆನ್ನಾಗಿರಬೇಕೆಂದು ನಾವು ಬಯಸುತ್ತೇವೆ."

"ನಾನು ಇಂದು ಇಲ್ಲಿಗೆ ಬಂದಿರುವುದು ಆಂದೋಲನ ಕೊನೆಗೊಳ್ಳಬೇಕು ಎಂದು ಹೇಳಲು ಅಲ್ಲ, ಆದರೆ ನಿಮ್ಮ (ದಲ್ಲೆವಾಲ್) ಆರೋಗ್ಯ ಚೆನ್ನಾಗಿರಬೇಕು ಎಂದು ಹೇಳಲು" ಎಂದು ನವಾಬ್ ಸಿಂಗ್ ಹೇಳಿದ್ದಾರೆ.

ಸುಪ್ರೀಂ ಕರ‍್ಟ್, ಸೆಪ್ಟೆಂಬರ್ ೨೦೨೪ ರಲ್ಲಿ, ಪ್ರತಿಭಟನಾ ನಿರತ ರೈತರ ಕುಂದುಕೊರತೆಗಳನ್ನು ಸೌಹರ‍್ದಯುತವಾಗಿ ಪರಿಹರಿಸುವ ಉದ್ದೇಶದಿಂದ ಸಮಿತಿಯನ್ನು ರಚಿಸಿತು.

ಸಮಿತಿಯು ನಿವೃತ್ತ ಐಪಿಎಸ್ ಅಧಿಕಾರಿ ಬಿ ಎಸ್ ಸಂಧು, ಕೃಷಿ ತಜ್ಞ ದೇವಿಂದರ್ ರ‍್ಮಾ, ಪ್ರೊಫೆಸರ್ ರಂಜಿತ್ ಸಿಂಗ್ ಘುಮಾನ್ ಮತ್ತು ಡಾ ಸುಖಪಾಲ್ ಸಿಂಗ್, ಪಂಜಾಬ್ ಕೃಷಿ ವಿಶ್ವವಿದ್ಯಾಲಯದ ಕೃಷಿ ರ‍್ಥಶಾಸ್ತ್ರಜ್ಞರನ್ನು ಒಳಗೊಂಡಿದೆ.

ಎಸ್‌ಕೆಎಂ (ರಾಜಕೀಯೇತರ) ಮತ್ತು ಕಿಸಾನ್ ಮಜ್ದೂರ್ ಮರ‍್ಚಾದ ಬ್ಯಾನರ್‌ನಡಿಯಲ್ಲಿ ರೈತರು ದೆಹಲಿಗೆ ಅವರ ಮೆರವಣಿಗೆಯನ್ನು ಭದ್ರತಾ ಪಡೆಗಳು ತಡೆದ ನಂತರ ಫೆಬ್ರವರಿ ೧೩ ರಿಂದ ಪಂಜಾಬ್ ಮತ್ತು ಹರಿಯಾಣ ನಡುವಿನ ಶಂಭು ಮತ್ತು ಖಾನೌರಿ ಗಡಿ ಬಿಂದುಗಳಲ್ಲಿ ಮೊಕ್ಕಾಂ ಹೂಡಿದ್ದಾರೆ.

ದೆಹಲಿ ವಿಧಾನಸಭೆಯ ಚುನಾವಣೆ ಘೋಷಣೆ; ಫೆ.5ಕ್ಕೆ ಮತದಾನ, ಫೆ.8ರಂದು ಅಭ್ಯರ್ಥಿಗಳ ಭವಿಷ್ಯ ನಿರ್ಧಾರ

 ದೆಹಲಿ ವಿಧಾನಸಭೆಯ ಚುನಾವಣೆ ದಿನಾಂಕ ಘೋಷಣೆಯಾಗಿದ್ದು ಫೆಬ್ರವರಿ 5ರಂದು ಮತದಾನ ನಡೆಯಲಿದ್ದು ಫೆಬ್ರವರಿ 8ರಂದು ಫಲಿತಾಂಶ ಪ್ರಕಟವಾಗಲಿದೆ. ಇಂದು ಪತ್ರಿಕಾಗೋಷ್ಠಿಯನ್ನು ಆಯೋಜಿಸಿದ್ದು ಚುನಾವಣಾ ಆಯೋಗ ದೆಹಲಿ ವಿಧಾನಸಭೆ ಚುನಾವಣೆ 2025ರ ವೇಳಾಪಟ್ಟಿಯನ್ನು ಪ್ರಕಟಿಸಿದೆ. ದೆಹಲಿಯ 70 ವಿಧಾನಸಭಾ ಸ್ಥಾನಗಳಿಗೆ ಫೆಬ್ರವರಿ 5 ರಂದು ಮತದಾನ ನಡೆಯಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಈ ಪತ್ರಿಕಾಗೋಷ್ಠಿಯಲ್ಲಿ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್, ಚುನಾವಣಾ ಆಯುಕ್ತರಾದ ಜ್ಞಾನೇಶ್ ಕುಮಾರ್ ಮತ್ತು ಸುಖಬೀರ್ ಸಿಂಗ್ ಸಂಧು ಉಪಸ್ಥಿತರಿದ್ದರು.

ದೆಹಲಿ ವಿಧಾನಸಭಾ ಚುನಾವಣೆಯ ಮತದಾನದ ಜೊತೆಗೆ ಚುನಾವಣಾ ಆಯೋಗವು ಚುನಾವಣಾ ಫಲಿತಾಂಶದ ದಿನಾಂಕವನ್ನೂ ಪ್ರಕಟಿಸಿದೆ. ಚುನಾವಣಾ ಆಯೋಗದ ಪ್ರಕಾರ, ದೆಹಲಿ ವಿಧಾನಸಭಾ ಚುನಾವಣೆಯ ಮತದಾನದ ಫಲಿತಾಂಶವನ್ನು ಫೆಬ್ರವರಿ 8 ರಂದು ಅಂದರೆ ಚುನಾವಣೆಯ 3 ದಿನಗಳ ನಂತರ ಪ್ರಕಟವಾಗಲಿದೆ.

ಕಳೆದ ಸೋಮವಾರ ಚುನಾವಣಾ ಆಯೋಗವೂ ದೆಹಲಿಯ ಮತದಾರರ ಸಂಖ್ಯೆಯನ್ನು ಬಹಿರಂಗಪಡಿಸಿತ್ತು. ಚುನಾವಣಾ ಆಯೋಗ ಬಿಡುಗಡೆ ಮಾಡಿರುವ ಮತದಾರರ ಅಂತಿಮ ಪಟ್ಟಿಯ ಪ್ರಕಾರ ಕೇಂದ್ರಾಡಳಿತ ಪ್ರದೇಶವಾದ ದೆಹಲಿಯಲ್ಲಿ ಒಟ್ಟು 1 ಕೋಟಿ 55 ಲಕ್ಷದ 24 ಸಾವಿರದ 858 ನೋಂದಾಯಿತ ಮತದಾರರಿದ್ದಾರೆ. ಅದೇ ವೇಳೆ ಪುರುಷ ಮತದಾರರ ಸಂಖ್ಯೆ 84 ಲಕ್ಷ 49 ಸಾವಿರದ 645 ಹಾಗೂ ಮಹಿಳಾ ಮತದಾರರ ಸಂಖ್ಯೆ 71 ಲಕ್ಷ 73 ಸಾವಿರದ 952. ಈ ಬಾರಿ ದೆಹಲಿಯಲ್ಲಿ ಯುವ ಮತದಾರರ ಸಂಖ್ಯೆ 25.89 ಲಕ್ಷವಿದ್ದು ಮೊದಲ ಬಾರಿಗೆ ಮತ ಚಲಾಯಿಸಲು ಅರ್ಹರಾದವರ ಸಂಖ್ಯೆ 2.08 ಲಕ್ಷವಿದೆ.

ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ವದಂತಿಗಳನ್ನು ಹಬ್ಬಿಸಲಾಗಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಹೇಳಿದ್ದಾರೆ. ಯಾವುದೇ ಆಧಾರವಿಲ್ಲದೆ ಹಲವು ಆರೋಪಗಳನ್ನು ಮಾಡಲಾಗಿದೆ. ಇವಿಎಂ ಬಗ್ಗೆಯೂ ವದಂತಿ ಹಬ್ಬಿತ್ತು ಎಂದು ಹೇಳಿದರು.

ನೀರಾವರಿ ಯೋಜನೆಗಳನ್ನು ಕಾಲಮಿತಿಯಲ್ಲಿ ಮುಗಿಸಿ- ಸಚಿವ ಶಿವರಾಜ ಎಸ್. ತಂಗಡಗಿ

ಕೊಪ್ಪಳ : ಕೊಪ್ಪಳ ಜಿಲ್ಲೆಯಲ್ಲಿ ನಡೆಯುತ್ತಿರುವ ನೀರಾವರಿ ಯೋಜನೆಯನ್ನು ಕಾಲಮಿತಿಯಲ್ಲಿ ಮುಗಿಸಬೇಕು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ಎಸ್. ತಂಗಡಗಿ ಹೇಳಿದರು.

ಅವರು ಮಂಗಳವಾರ ಕೊಪ್ಪಳ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಕರೆದ ಕೊಪ್ಪಳ ಜಿಲ್ಲೆಯ ವಿವಿಧ ನೀರಾವರಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.
ಕಾಲಮಿತಿಯಲ್ಲಿ ನೀರಾವರಿ ಯೋಜನೆಗಳು ಆಗದಿದ್ದರೆ ರೈತರಿಗೆ ನೀರು ಕೊಡಲು ಹೇಗೆ ಸಾಧ್ಯ ಕೆಲವೊಂದು ಯೋಜನೆಗಳು ಸುಮಾರು ವರ್ಷಗಳಿಂದ ಹಾಗೆ ನಡೆಯುತ್ತಲೆ ಇವೆ. ಅಧಿಕಾರಿಗಳು ಜವಾಬ್ದಾರಿಯಿಂದ ಕೆಲಸ ಮಾಡಿದಾಗ ಅವುಗಳು ಕಾಲಮಿತಿಯಲ್ಲಿ ಮುಗಿಯುತ್ತವೆ. ಅಳವಂಡಿ ಬೆಟಗೇರಿ ಏತ ನೀರಾವರಿ ಯೋಜನೆಯ ಜನವರಿ 30ರ ಒಳಗಡೆ ಮುಗಿಯಬೇಕು. ಸಿಂಗಟಾಲೂರು ಏತ ನೀರಾವರಿ ಯೋಜನೆ ನಮ್ಮ ಜಿಲ್ಲೆಯಲ್ಲಿ ಏನಾಗಿದೆ ಯಾವ ಹಂತದಲ್ಲಿದೆ ಎಂದು ಸಚಿವರು ನೀರಾವರಿ ಇಲಾಖೆಯ ಅಧಿಕಾರಿಗಳಿಂದ ಮಾಹಿತಿ ಪಡೆದು, ಈ ಯೋಜನೆಯ ಕಾಮಗಾರಿಯನ್ನು ವಿಳಂಭ ಮಾಡದೇ ಪೂರ್ಣಗೊಳಿಸಬೇಕೆಂದರು.
ಮತ್ತೆ ಸಭೆ ಕರೆಯುತ್ತೆನೆ ಆಗ ಗುತ್ತಿಗೆದಾರರಿಗೂ ಸಭೆಗೆ ಕರೆಯಬೇಕು. ಕಾಲಮಿತಿಯಲ್ಲಿ ಕೆಲಸ ಮುಗಿಸದ ಗುತ್ತಿಗೆದಾರರಿಗೆ ನೋಟೀಸ್ ನೀಡಿ ಬ್ಲ್ಯಾಕ್ ಲಿಸ್ಟಗೆ ಸೇರಿಸಬೇಕು. ಕೆರೆಗಳ ವೀಕ್ಷಣೆಗೂ ಬರುತ್ತೆನೆ. ಕಾಟಾಪುರ. ಶಿರವಾರ. ಕರಡೋಣ ಕೆರೆಗಳಿಗೆ ನೀರು ಬಿಡಬೇಕು. ಈಗ ಕೆರೆಗಳು ತುಂಬಿದರೆ ಬೇಸಿಗೆಯಲ್ಲಿ ನೀರಿನ ಸಮಸ್ಯೆಗಳಾಗುವುದಿಲ್ಲ. ಸಭೆಯಲ್ಲಿ ಚರ್ಚೆಯಾದ ಎಲ್ಲಾ ವಿಷಯಗಳನ್ನು ಅಧಿಕಾರಿಗಳು ಪಾಲನೆ ಮಾಡಬೇಕು ಎಂದು ಹೇಳಿದರು.
ಕೊಪ್ಪಳ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ ಮಾತನಾಡಿ ನೀರಾವರಿ ಯೋಜನೆಯ ಯಾವುದೇ ಕೆಲಸ ಮತ್ತು ಕಾಮಗಾರಿಗಳ ಕುರಿತು ಮೂರು ತಿಂಗಳಿಗೊಮ್ಮೆ ಆದರು ಸಭೆ ನಡೆಯಬೇಕು. 18 ತಿಂಗಳಲ್ಲಿ ಮುಗಿಯುವ ಕೆಲಸಗಳು ಹಲವಾರು ವರ್ಷಗಳು ತೆಗೆದುಕೊಳ್ಳುತ್ತವೆ. ಆಗಾಗ ನೀರಾವರಿ ಯೋಜನೆಗಳ ಸಭೆ ನಡೆಸಿದರೆ ಅವುಗಳ ಸಮಸ್ಯೆಗಳನ್ನು ಬಗೆಹರಿಸಲು ಅನುಕೂಲವಾಗುತ್ತದೆ ಎಂದು ಹೇಳಿದರು.
ಈ ಸಭೆಯಲ್ಲಿ ಕೊಪ್ಪಳ ಸಂಸದರಾದ ಕೆ.ರಾಜಶೇಖರ ಬಸವರಾಜ ಹಿಟ್ನಾಳ. ಜಿಲ್ಲಾಧಿಕಾರಿ ನಲಿನ್ ಅತುಲ್. ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ. ಸಹಾಯಕ ಆಯುಕ್ತರಾದ ಮಹೇಶ್ ಮಾಲಗಿತ್ತಿ ಸೇರಿದಂತೆ ಕೃಷ್ಣ ಭಾಗ್ಯ ಜಲ ನಿಗಮ. ಕರ್ನಾಟಕ ನೀರಾವರಿ ನಿಗಮ ನಿಯಮಿತ. ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.

Monday, 6 January 2025

ಕಲಾವಿದರ ಏಳ್ಗೆಗಾಗಿ ಶ್ರಮಿಸುತ್ತಿರುವ ರಾಜಕುಮಾರ ಕಾರ್ಯ ಅಭಿನಂದನೀಯ: ಸಾಗರ ಖಂಡ್ರೆ

 ಬೀದರ: ಕರ್ನಾಟಕ ತೆಲಂಗಾಣ ಗಡಿಯಲ್ಲಿ ಸಾಂಸ್ಕೃತಿಕ ಹಬ್ ಸ್ಥಾಪನೆ ಹಾಗೂ ಬೀದರ ಜಿಲ್ಲೆಯಲ್ಲಿ ಅಂತರಾಷ್ಟಿಯ ಜಾನಪದ ಸಮ್ಮೇಳನ ಆಯೋಜನೆಯ ಬೇಡಿಕೆ ನಮ್ಮ ಮುಂದಿದೆ. ಇವುಗಳ ಸಫಲತೆಗೆ ಸಂಬ0ಧಪಟ್ಟ ಸಚಿವರಿಗೆ ಮಾತನಾಡಿ ಸಾಕಾರಗೊಳಿಸುವ ಪ್ರಯತ್ನ ಮಾಡಲಾಗುವುದು. ಈ ನಿಟ್ಟಿನಲ್ಲಿ ಕಲಾವಿದರ ಏಳ್ಗೆಗಾಗಿ ಹಗಲಿರುಳು ಶ್ರಮಿಸುತ್ತಿರುವ ರಾಷ್ಟಿಯ ಜನಪದ ಬುಡಕಟ್ಟು ಕಲಾ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಡಾ. ರಾಜಕುಮಾರ ಹೆಬ್ಬಾಳೆಯವರ ಕಾರ್ಯ ಅಭಿನಂದನೀಯ ಎಂದು ಲೋಕಸಭಾ ಸದಸ್ಯ ಸಾಗರ ಖಂಡ್ರೆ ತಿಳಿಸಿದರು.


ಲೋಕಸಭಾ ಸದಸ್ಯ ಸಾಗರ ಖಂಡ್ರೆ 

 ಡಾ. ರಾಜಕುಮಾರ ಹೆಬ್ಬಾಳೆ ಅಭಿನಂದನಾ ಸಮಿತಿ ವತಿಯಿಂದ ನಗರದ ಕರ್ನಾಟಕ ಸಾಹಿತ್ಯ ಸಂಘದ ಸಾಂಸ್ಕೃತಿಕ ಭವನದಲ್ಲಿ ನೂತನವಾಗಿ ರಾಷ್ಟಿಯ ಜನಪದ ಬುಡಕಟ್ಟು ಕಲಾ ಪರಿಷತ್ತಿನ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಗೊಂಡ ಡಾ. ರಾಜಕುಮಾರ ಹೆಬ್ಬಾಳೆಯವರಿಗೆ ಆಯೋಜಿಸಿದ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು. 
ಎಷ್ಟೊ ಜನ ಕಲಾವಿದರಿಗೆ ವೇದಿಕೆ ಸಿಗುವುದಿಲ್ಲ. ಅಂತಹ ಅವಕಾಶವಂಚಿತ ಕಲಾವಿದರಿಗೆ ವೇದಿಕೆ ಒದಗಿಸಿ ಸರ್ಕಾರದ ವತಿಯಿಂದ ಮಾಶಾಸನ, ಗೌರವ ಸಂಭಾವನೆ ಕೊಡಿಸುವುತ್ತಿರುವುದು ಶ್ಲಾಘನೀಯ. ಸಣ್ಣ ನಾವದಗೇರಿ ಗ್ರಾಮದಲ್ಲಿ ಜನಿಸಿ, ದೆಹಲಿವರೆಗೆ ಬೆಳೆದ ರಾಜಕುಮಾರ ಅವರು ಕಲಾವಿದರ ಬಾಳಿನ ಬೆಳಕಾಗಿದ್ದಾರೆ. ನಗರದಲ್ಲಿ ಅಂತರಾಷ್ಟಿçÃಯ ಜನಪದ ಸಮ್ಮೇಳನ ಆಯೋಜನೆ, ಗಡಿಯಲ್ಲಿ ಕಲ್ಚರಲ್ ಹಬ್ ಸ್ಥಾಪನೆ ಕುರಿತು ಸಚಿವರೊಂದಿಗೆ ನಾವೆಲ್ಲರೂ ಹೋಗಿ ಚರ್ಚಿಸೋಣ. ಕೇಂದ್ರ ಸರ್ಕಾರದ ಸೌಲಭ್ಯಗಳನ್ನು ಜಿಲ್ಲೆಯ ಜನತೆಗೆ ತಲುಪಿಸುವ ನಿಟ್ಟಿನಲ್ಲಿ ನಾವೆಲ್ಲರೂ ಪ್ರಯತ್ನಿಸೋಣ. ಡಾ. ರಾಜಕುಮಾರ ಹೆಬ್ಬಾಳೆ ಉತ್ತರೋತ್ತರವಾಗಿ ಬೆಳೆಯಲೆಂದು ಶುಭ ಹಾರೈಸಿದರು.
 ದಿವ್ಯ ಸಾನಿಧ್ಯ ವಹಿಸಿದ್ದ ಭಾಲ್ಕಿಯ ಹಿರೇಮಠದ ಪೂಜ್ಯ ಶ್ರೀ ಗುರುಬಸವ ಪಟ್ಟದ್ದೇವರು ಮಾತನಾಡಿ ಕಲಾವಿದರ ಕಣ್ಣೀರು ಒರೆಸುವ ಕಾರ್ಯ ಮಾಡುತ್ತಿರುವ ರಾಜಕುಮಾರ ಅವರ ಕಲಾಸೇವೆ ನಿಜಕ್ಕೂ ಯುವಕರಿಗೆ ಮಾದರಿ. ಅವರ ಸಾಧನೆಗೆ ಎಲ್ಲರ ಸಹಕಾರವಿರಲಿ ಎಂದರು.



 ಬೀದರ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ಬಿ.ಎಸ್.ಬಿರಾದಾರ ಮಾತನಾಡಿ ಕಲಾವಿದರು ಬೆಳೆದರೆ ದೇಶದ ಸಂಸ್ಕೃತಿ, ಆಚಾರ ವಿಚಾರಗಳು ಬೆಳೆಯುತ್ತವೆ. ಜನಪದ ಸಂಸ್ಕೃತಿ ಉಳಿಯುತ್ತದೆ. ಈ ನಿಟ್ಟಿನಲ್ಲಿ ದಕ್ಷಿಣ ಭಾರತದ ಕಲಾವಿದರನ್ನು ಉತ್ತರ ಭಾರತದ ಕಡೆಗೆ, ಉತ್ತರ ಭಾರತದ ಕಲಾವಿದರನ್ನು ದಕ್ಷಿಣ ಭಾರತದ ಕಡೆಗೆ ಕಳುಹಿಸುತ್ತಿದ್ದಾರೆ. ಇದರಿಂದ ಸಾಂಸ್ಕೃತಿಕ ವಿನಿಮಯ, ಪರಸ್ಪರ ಪ್ರೀತಿ, ವಿಶ್ವಾಸ ಮತ್ತು ಕಲೆಗಳ ಪರಿಚಯವಾಗುತ್ತದೆ. ಇಂತಹ ಕಲಾವಿದರಿಗೆ ಸರ್ಕಾರಿ ಸೌಲಭ್ಯಗಳನ್ನು ಒದಗಿಸುತ್ತಿರುವ ಡಾ. ರಾಜಕುಮಾರ ಹೆಬ್ಬಾಳೆಯವರ ಮೇಲೆ ಅವರ ಅಜ್ಜಿ ಲಿಂ. ರತ್ನಮ್ಮನವರ ಹಾಗೂ ಕುಟುಂಬದ ಮತ್ತು ಕಲಾವಿದರ ಆಶಿರ್ವಾದವಿದೆ. ಜಾನಪದ ಸಂರಕ್ಷಕ ಡಾ. ರಾಜಕುಮಾರ ಅವರಿಗೆ ದೇವರು ಇನ್ನೂ ಎತ್ತರಕ್ಕೆ ಬೆಳೆಯುವಂತೆ ಮಾಡಲಿ ಎಂದರು.
 ಅಭಿನಂದನಾ ನುಡಿಗಳನ್ನಾಡಿದ ಕ.ಜಾ.ಪ. ಔರಾದ ತಾಲೂಕಾಧ್ಯಕ್ಷ ಡಾ.ಸಂಜೀವಕುಮಾರ ಜುಮ್ಮಾ ಮಾತನಾಡಿ ಡಾ. ರಾಜಕುಮಾರ ಅವರು ಕೇಂದ್ರದ 4 ಅರ್ಹ ಸಾಧಕರಿಗೆ ಜೂನಿಯರ್ ಫೇಲೋಶಿಪ್, 5 ಸಾಧಕರಿಗೆ ಸೀನಿಯರ್ ಫೇಲೋಶಿಪ್, ಕಲಾವೇತನ ಹಾಗೂ ವಿವಿಧ ಪ್ರಶಸ್ತಿಗಳನ್ನು ಕೊಡಿಸಿದ್ದಾರೆ. ವೇದಿಕೆ ಒದಗಿಸಿ ಸಾವಿರಾರು ಕಲಾವಿದರಿಗೆ ರಾಜ್ಯ ಸರ್ಕಾರದ ಮಾಶಾಸನ ಮಾಡಿಸಿದ್ದಾರೆ. ಇದೀಗ ಕೇಂದ್ರದ ಮಾಶಾಸನ ಕೊಡಿಸಲು ಶತಪ್ರಯತ್ನ ಮಾಡುತ್ತಿದ್ದಾರೆ. ಹತ್ತು ಹಲವಾರು ಸಂಘ-ಸAಸ್ಥೆಗಳಿAದ ಪ್ರಶಸ್ತಿಗಳನ್ನು ಗಿಟ್ಟಿಸಿಕೊಂಡ ಇವರು ಹಲವು ಸಂಸ್ಥೆಗಳ ಪದಾಧಿಕಾರಿಯಾಗಿ ಕಲೆ ಸಾಹಿತ್ಯ ಸಂಸ್ಕೃತಿ ಸಂವರ್ಧನೆ ಮಾಡುತ್ತಿದ್ದಾರೆ. ಕ್ರಿಯಾಶೀಲತೆ, ಸಂಘಟನೆ, ಪರಸ್ಪರ ಪ್ರೀತಿ ವಿಶ್ವಾಸ ಇವರ ಗುಟ್ಟು. ಇದುವರೆಗೆ ಕಲಾವಿದರಿಗೆ ಒಟ್ಟು 1 ಕೋಟಿಗೂ ಅಧಿಕ ಸಂಭಾವನೆ ಕೊಡಿಸಿದ್ದಾರೆ ಎಂದರು. 
ಅಭಿನಂದನೆ ಸ್ವೀಕರಿಸಿದ ಡಾ. ರಾಜಕುಮಾರ ಹೆಬ್ಬಾಳೆ ಮಾತನಾಡಿ ಒಂದು ಕಾಲದಲ್ಲಿ ಗಡಿಜಿಲ್ಲೆ ಬೀದರನಲ್ಲಿ ಜನಪದ ಸಾಹಿತ್ಯದ ಪ್ರಚಾರ ಕಡಿಮೆಯಿತ್ತು. ಹೀಗಾಗಿ ಕರ್ನಾಟಕ ಜಾನಪದ ಪರಿಷತ್ತಿನ ಮೂಲಕ ಜಿಲ್ಲೆಯ ಸಾವಿರಾರು ಕಲಾವಿದರನ್ನು ಗುರುತಿಸಿ, ಅವರಿಗೆ ವೇದಿಕೆ ಒದಗಿಸಿ, ಎಲ್ಲರ ಸಹಕಾರದಿಂದ ಕಲೆ ಸಾಹಿತ್ಯ ಸಂಸ್ಕೃತಿ ಸಂವರ್ಧನೆಗಾಗಿ ಶ್ರಮಿಸಲಾಗುತ್ತಿದೆ. ಗಡಿಭಾಗದ ಬೀದರ ಹಾಗೂ ತೆಲಂಗಾಣದ ಕೆಲವು ಗ್ರಾಮಗಳಲ್ಲಿ ಉತ್ತರ ಭಾರತದ ಪಂಜಾಬ, ಹರಿಯಾಣ, ಜಮ್ಮುಕಾಶ್ಮೀರ, ಉತ್ತರ ಪ್ರದೇಶ, ಮಹಾರಾಷ್ಟç, ಆಸ್ಸಾಂ, ತೆಲಂಗಾಣ ಸೇರಿದಂತೆ ಹಲವು ರಾಜ್ಯದ ಕಲಾವಿದರಿಗೆ ಬೀದರ ಜಿಲ್ಲೆಗೆ ಕರೆಸಿ ಉತ್ಸವ ಮಾಡಲಾಗಿದೆ. ಹಲವು ಸೌಲಭ್ಯಗಳ ಬಗ್ಗೆ ನಮ್ಮ ಭಾಗದ ಜನರಿಗೆ, ಕಲಾವಿದರಿಗೆ ಗೊತ್ತಿಲ್ಲ. ಅಂತಹ ಕೇಂದ್ರ ಸರ್ಕಾರ ಸೌಲಭ್ಯ ಜಿಲ್ಲೆಗೆ ತಂದು ಒದಗಿಸಲಾಗುತ್ತಿದೆ ಎಂದರು.
ಕರ್ನಾಟಕ ಸಾಹಿತ್ಯ ಸಂಘದ ಅಧ್ಯಕ್ಷ ಡಾ. ಜಗನ್ನಾಥ ಹೆಬ್ಬಾಳೆ ಮಾತನಾಡಿ ಜನಪದ ಕಲೆ ಉಳಿವೆಗಾಗಿ ನಗರದಲ್ಲಿ ಅಂತರಾಷ್ಟಿçÃಯ ಜನಪದ ಸಮ್ಮೇಳನ ನಡೆಸಬೇಕಾಗಿದೆ. ಕಲಾವಿದರ ಏಳ್ಗೆಗಾಡಿ ಗಡಿಯಲ್ಲಿ ಕಲ್ಚರಲ್ ಹಬ್ ಸ್ಥಾಪಿಸಬೇಕು. ಪ್ರತಿ ತಿಂಗಳಿಗೊಮ್ಮೆ ಆಯ್ದ ತಜ್ಞರ ಸಭೆ ಕರೆಸಿ ಜಿಲ್ಲೆಯ ಆಗುಹೋಗುಗಳ ಬಗ್ಗೆ ಹಾಗೂ ಸಾಧಿಸಬೇಕಾದ ಕಾರ್ಯಗಳ ಬಗ್ಗೆ ಚರ್ಚಿಸಿ, ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಸಾಗರ ಖಂಡ್ರೆಯವರು ಶ್ರಮಿಸಬೇಕು. ಬೀದರ ವಿಶ್ವವಿದ್ಯಾಲಯದ ಏಳ್ಗೆಗೆ ಸಹಕಾರ ನೀಡಬೇಕೆಂದು ಸಂಸದರಲ್ಲಿ ಮನವಿ ಮಾಡಿಕೊಂಡರು.
ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ಡಾ.ಸೋಮನಾಥ ಯಾಳವಾರ್ ಹಾಗೂ ಬಿಡಿಎ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ ಮಾತನಾಡಿದರು. ವೇದಿಕೆ ಮೇಲೆ ಕ.ಸಾ.ಸಂಘದ ಟ್ರಸ್ಟ್ ಅಧ್ಯಕ್ಷ ಶಂಕ್ರೆಪ್ಪ ಹೊನ್ನಾ, ಸಂತೋಷ ಪಾಟೀಲ, ಅಶೋಕ ಹೆಬ್ಬಾಳೆ, ಸಮಿತಿ ಅಧ್ಯಕ್ಷ ಪ್ರೊ.ಎಸ್.ಬಿ.ಬಿರಾದಾರ, ಉಪಾಧ್ಯಕ್ಷ ನಿಜಲಿಂಗಪ್ಪ ತಗಾರೆ, ಪ್ರಧಾನ ಕಾರ್ಯದರ್ಶಿ ಸಂಘಟನಾ ಕಾರ್ಯದರ್ಶಿ ಎಸ್.ಬಿ.ಕುಚಬಾಳ, ಕಾರ್ಯದರ್ಶಿ ಶಿವಶರಣಪ್ಪ ಗಣೇಶಪುರ, ಕೋಶಾಧ್ಯಕ್ಷ ಅಶೋಕ ಹೆಬ್ಬಾಳೆ, ಸಂಚಾಲಕ ವೈಜಿನಾಥ ಪಾಟೀಲ, ಸಂಯೋಜಕಿ ಆಶಾ ರಾಠೋಡ್, ಸದಸ್ಯರಾದ ಪ್ರಕಾಶ ಕನ್ನಾಳೆ, ಧನರಾಜ ಆನೆಕಲೆ, ನೀಲಕಂಠ ಸ್ವಾಮಿ ಸೇರಿದಂತೆ ಸಮಿತಿಯ ಸರ್ವಸದಸ್ಯರು ಹಾಜರಿದ್ದರು. ನವಲಿಂಗ ಪಾಟೀಲ ನಿರೂಪಿಸಿದರೆ, ಸ್ವಾಗತಿಸಿ ಮತ್ತು ಪ್ರಾಸ್ತಾವಿಕವಾಗಿ ಮಹಾರುದ್ರ ಡಾಕುಳಗೆ ಮಾತನಾಡಿದರು. ಡಾ.ಸುನಿತಾ ಕೂಡ್ಲಿಕರ್ ವಂದಿಸಿದರು.

ಮೆರವಣಿಗೆ: ನಗರದ ಬಸವೇಶ್ವರ ವೃತ್ತದಿಂದ ಆರಂಭವಾದ ಶ್ರೀಮತಿ ಮಹಾನಂದ ಡಾ.ರಾಜಕುಮಾರ ಹೆಬ್ಬಾಳೆ ದಂಪತಿಗಳ ಮೆರವಣಿಗೆ ಅಲಂಕೃತ ಸಾರೋಟಿನಲ್ಲಿ ಭವ್ಯ ರೀತಿಯಲ್ಲಿ ಜರುಗಿತು. ಡೊಳ್ಳು ಕುಣಿತ, ಬಂಜಾರಾ ನೃತ್ಯ, ಕೋಲಾಟ ಸೇರಿದಂತೆ ಹಲವು ಜನಪದ ಕಲಾವಿದರ ಕಲಾಪ್ರದರ್ಶನ ಸಭೀಕರ ಗಮನ ಸೆಳೆಯಿತು. ಮೆರವಣಿಗೆಗೆ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸೋಮಶೇಖರ ಬಿರಾದಾರ ಚಿದ್ರಿ ಚಾಲನೆ ನೀಡಿದರು. ಇದೇ ವೇಳೆ ಕಿತ್ತೂರು ರಾಣಿ ಚೆನ್ನಮ್ಮ ಮಹಿಳಾ ಮಂಡಳ ಅಧ್ಯಕ್ಷೆ ಡಾ.ಗುರಮ್ಮಾ ಸಿದ್ದಾರೆಡ್ಡಿ, ಪ್ರಮುಖರಾದ ದಿಲಿಪಕುಮಾರ ಡೊಂಗರಗೆ, ಕೆ.ಸತ್ಯಮೂರ್ತಿ, ಚಂದ್ರಶೇಖರ ಹೆಬ್ಬಾಳೆ, ಸುಧಾಕರ ಹೆಬ್ಬಾಳೆ, ಬಸವರಾಜ ಹೆಬ್ಬಾಳೆ, ಡಾ.ಸುನಿತಾ ಕೂಡ್ಲಿಕರ, ಮಹಾನಂದ ಮಡಕಿ, ಡಾ.ಸಾವಿತ್ರಿಬಾಯಿ ಹೆಬ್ಬಾಳೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಪ್ರೇಮ ಕಾಶ್ಮೀರದಲ್ಲಿ ರಕ್ತದೋಕುಳಿ; ಹಿಂದೂಗಳೇ ಟಾರ್ಗೆಟ...!

  ಪ್ರೇಮ ಕಾಶ್ಮೀರದಲ್ಲಿ ರಕ್ತದೋಕುಳಿ; ಹಿಂದೂಗಳೇ ಟಾರ್ಗೆಟ್. ಭೂಲೋಕದ ಸ್ವರ್ಗವೆಂದೇ ಕರೆಯುವ ಜಮ್ಮು-ಕಾಶ್ಮೀರದ ಪೆಹಲ್ಗಾಮ್ ಸಮೀಪದ ಬೈಸರನ್ ಹುಲ್ಲುಗಾವಲಿನಲ್ಲಿ ಪಾಕ್ ಪ್...