ads

Search This Blog

Wednesday, 5 March 2025

ಏಪ್ರಿಲ್ 5 ಹಾಗೂ 6 ರಂದು ತೃತೀಯ ಶರಣ ಸಮಾಗಮ. ಶರಣ ಜ್ಞಾನ ಶಿಬಿರ. ಶರಣೆ ದಾನಮ್ಮ ಉತ್ಸವಕ್ಕೆ ಪೂಜ್ಯ ಬಸವಪ್ರಭು ಸ್ವಾಮಿ ಕರೆ


ಬಸವಕಲ್ಯಾಣ : ಬರುವ ಏಪ್ರಿಲ್ ತಿಂಗಳ ಮೊದಲನೆಯ ವಾರದಲ್ಲಿ ಎರಡು ದಿನಗಳ ಶರಣ ಸಮಾಗಮ ಹಾಗೂ ಶರಣೆ ದಾನಮ್ಮ ಉತ್ಸವವನ್ನು ಪ್ರತಿ ವರ್ಷ ದಂತೆ ಈ ವರ್ಷ ಸಹ ಎರಡು ದಿನ ಶರಣ ಜ್ಞಾನ ಶಿಬಿರವನ್ನು ಆಯೋಜನೆ ಮಾಡಲಾಗಿದೆ ಎಂದು ಪೂಜ್ಯ ಬಸವಪ್ರಭು ಸ್ವಾಮಿಜಿಯರು ತಿಳಿಸಿದರು.

       ಅವರು ಶೋಧವಾಣಿಯೊಂದಿಗೆ ಮಾತನಾಡುತ್ತ ವಿವರ ಮಾಹಿತಿ ನೀಡಿದರು. ಎರಡು ದಿನಗಳ ಕಾಲ ಅನೇಕ ಸಂಸ್ಕಾರ ಮತ್ತು ಸಂಸ್ಕೃತಿ ಹಿನ್ನೆಲೆ ಇಟ್ಟುಕೊಂಡು   ಗುಣ ತೀರ್ಥ ವಾಡಿಯ ಕಲ್ಯಾಣ ಮಹಾಮನೆಯಲ್ಲಿ ಏಪ್ರಿಲ್ ೫ ಹಾಗೂ ೬ ರಂದು ತೃತೀಯ ಶರಣ ಸಮಾಗಮ ಹಾಗೂ ದಾನಮ್ಮ ಉತ್ಸವ ನಡೆಯುತ್ತದೆ ಎಂದು ಪೂಜ್ಯ ರು ನುಡಿದರು.

     ಈ ವರ್ಷ ಅನೇಕ ಸಾಮಾಜಿಕ ಹಾಗೂ ಸಾಹಿತಿಕವಾಗಿ ಸೇವೆ ಸಲ್ಲಿಸಿದವರನ್ನು ಗುರುತಿಸಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ. ಈ ಸಮಾರಂಭದಲ್ಲಿ ಕರ್ನಾಟಕದ ಅನೇಕ ಜಿಲ್ಲೆಯಿಂದ ಮತ್ತು ಮಹಾರಾಷ್ಟ್ರ. ತೆಲಂಗಾಣ ರಾಜ್ಯದಿಂದ ಸಹ ಶರಣರು ಪಾಲ್ಗೊಳ್ಳಲಿದ್ದಾರೆ ಎಂದು ಪೂಜ್ಯ ಬಸವಪ್ರಭು ಸ್ವಾಮಿ ಜಿಯವರು ತಿಳಿಸಿದರು. 

       ಈ ಉತ್ಸವಕ್ಕೆ ದಾನಮ್ಮ ಜ್ಯೋತಿ ಯಾತ್ರೆಯನ್ನು ಮೆರಗು ನೀಡಲಿದೆ. ೧೩ ವರ್ಷಗಳ ಕಾಲ ನಿರಂತರವಾಗಿ ಗುಡ್ಡಾಪುರ ಶರಣೆ ದಾನಮ್ಮ ಜ್ಯೋತಿ ಯಾತ್ರೆಯನ್ನು  ಜ್ಯೋತಿ ಹೊತ್ತಿಸಿಕೊಂಡು ಬೀದರ. ಕಲಬುರಗಿ. ವಿಜಯಪುರ. ಸೋಲಾಪುರ. ಸಾಂಗಲಿ ಕೊಲ್ಲಾಪುರ.ಮೂಲಕ ಬಸವಕಲ್ಯಾಣ ಕಲ್ಯಾಣ ಮಹಾಮನೆಗೆ ಬರುತ್ತದೆ ಈ ಜ್ಯೋತಿ ಯಾತ್ರೆ ಯಲ್ಲಿ ಭಕ್ತರು ಭಕ್ತಿ ನಿಷ್ಠೆ ಶ್ರದ್ಧೆ ಆಸಕ್ತಿ ಹೊಂದಿ ಈ ಸಮಾರಂಭದಲ್ಲಿ ಸಾವಿರಾರು ಭಕ್ತರು ಭಾಗವಹಿಸಲಿದ್ದಾರೆ ಎಂದು ನುಡಿದರು.

     ಈ ಉತ್ಸವದಲ್ಲಿ ಅನೇಕ ಹಿರಿಯ ಸಾಹಿತಿಗಳು. ಜನ ನಾಯಕರು. ಬಸವ ಅನುಯಾಯಿಗಳು ಪಾಲ್ಗೊಂಡು ದಾನಮ್ಮನ ಭಕ್ತಿಗೆ ಕೃಪೆಯಾಗಲಿದ್ದಾರೆ‌ ಹಾಗೂ ಈ ಎರಡು ದಿನಗಳ ಉತ್ಸವದಲ್ಲಿ ಭಕ್ತರು ಹೆಚ್ಚಿನ ಪ್ರಮಾಣದಲ್ಲಿ ಆಗಮಿಸಿ ಯಶಸ್ವಿಗೊಳ್ಳಿಸಬೇಕೆಂದು ಪೂಜ್ಯ ಬಸವಪ್ರಭು ಸ್ವಾಮಿಜಿ ಮನವಿ ಮಾಡಿದರು.

No comments:

ಪ್ರೇಮ ಕಾಶ್ಮೀರದಲ್ಲಿ ರಕ್ತದೋಕುಳಿ; ಹಿಂದೂಗಳೇ ಟಾರ್ಗೆಟ...!

  ಪ್ರೇಮ ಕಾಶ್ಮೀರದಲ್ಲಿ ರಕ್ತದೋಕುಳಿ; ಹಿಂದೂಗಳೇ ಟಾರ್ಗೆಟ್. ಭೂಲೋಕದ ಸ್ವರ್ಗವೆಂದೇ ಕರೆಯುವ ಜಮ್ಮು-ಕಾಶ್ಮೀರದ ಪೆಹಲ್ಗಾಮ್ ಸಮೀಪದ ಬೈಸರನ್ ಹುಲ್ಲುಗಾವಲಿನಲ್ಲಿ ಪಾಕ್ ಪ್...