ಬೀದರ: ಮರಾಠಾ ಸಮಾಜದ ಅಭಿವೃದ್ಧಿಗೆ ನಾನು ನಿರಂತರವಾಗಿ ಶ್ರಮಿಸುವೆ. ಮರಾಠಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನವನ್ನು ಬೀದರ ಜಿಲ್ಲೆಗೆ ನೀಡಬೇಕೆಂದು ಹೈಕಮಾಂಡ್ ಮಟ್ಟದಲ್ಲಿ ಚರ್ಚಿಸಲು ಪ್ರಯತ್ನಿಸುವೆ ಎಂದು ಲೋಕಸಭಾ ಸದಸ್ಯರಾದ ಸಾಗರ ಖಂಡ್ರೆ ತಿಳಿಸಿದರು.
ಸಕಲ ಮರಾಠಾ ಸಮಾಜದ ವತಿಯಿಂದ ಪ್ರತಾಪ ನಗರದ ಸರ್ಕಾರಿ ನೌಕರರ ಸಮುದಾಯ ಭವನದ ಸಭಾಂಗಣದಲ್ಲಿ ಆಯೋಜಿಸಿದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಕ್ಷತ್ರೀಯ ಮರಾಠಾ ಸಮುದಾಯದ ಭವನ ನಿರ್ಮಾಣ ಅರ್ಧಕ್ಕೆ ನಿಂತಿದ್ದು, ಕೂಡಲೇ ಈ ಭವನಕ್ಕೆ ಸಂಸದರ ಅನುದಾನದಲ್ಲಿ ರೂ. ೨೫ ಲಕ್ಷ ನೀಡುವುದಾಗಿ ಭರವಸೆ ನೀಡಿದರು.
ಸಮಾಜವನ್ನು ಸಮಾಜದ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಈ ಮರಾಠಾ ಸಮಾಜವನ್ನು ೨ಎ ಪ್ರವರ್ಗಕ್ಕೆ ಸೇರಿಸಬೇಕಾಗಿರುವುದು ಅತಿ ಅವಶ್ಯಕತೆಯಿದೆ. ಹಾಗಾಗಿ ಲೋಕಸಭೆಯಲ್ಲಿ ಈ ಕುರಿತು ಅಧಿವೇಶನದ ಸಂದರ್ಭದಲ್ಲಿ ಧ್ವನಿ ಎತ್ತುತ್ತೇನೆ ಎಂದು ಸಂಸದ ಸಾಗರ ಖಂಡ್ರೆ ತಿಳಿಸಿದರು. ಬೀದರ ನಗರದಲ್ಲಿ ಮರಾಠಾ ಸಮುದಾಯ ಭವನಕ್ಕೆ ೨ ಎಕರೆ ಜಮೀನು ನೀಡಬೇಕೆಂಬ ಬೇಡಿಕೆ ಈಡೇರಿಸುವೆ ಜೊತೆಗೆ ಪ್ರತಿಯೊಂದು ತಾಲೂಕಿನಲ್ಲಿ ಶಿವಸೃಷ್ಟಿ ಹೆಸರಿನ ಶಿವಾಜಿ ಮಹಾರಾಜರ ಸಾಧನೆಗಳನ್ನು ತಿಳಿಸುವ ವಸ್ತುಪ್ರದರ್ಶನ ನಿರ್ಮಾಣ ಮಾಡಲು ಪ್ರಯತ್ನಿಸುವೆ ಎಂದು ಸಾಗರ ಖಂಡ್ರೆ ಹೇಳಿದರು.
ಅಭಿನಂದನಾ ಸಮಾರಂಭದ ಸ್ವಾಗತ ಸಮಿತಿ ಅಧ್ಯಕ್ಷರಾದ ಅಶೋಕಕುಮಾರ ಕಣಜಿಕರ್ ಅವರು ಸಂಸದ ಸಾಗರ ಖಂಡ್ರೆಯವರಿಗೆ ಹಲವು ಬೇಡಿಕೆಗಳುಳ್ಳ ಮನವಿ ಪತ್ರವನ್ನು ಸಲ್ಲಿಸಿದರು.
ವಿಧಾನ ಪರಿಷತ್ ಸದಸ್ಯರಾದ ಡಾ. ಎಂ.ಜಿ.ಮೂಳೆ ಮಾತನಾಡಿ ಮರಾಠಾ ಸಮಾಜವನ್ನು ೨ಎಗೆ ಸೇರ್ಪಡೆ ಮಾಡಬೇಕು. ಕರ್ನಾಟಕ ಮರಾಠ ಅಭಿವೃದ್ಧಿ ನಿಗಮಕ್ಕೆ ಅಧ್ಯಕ್ಷ ಸ್ಥಾನದ ಭರ್ತಿ ಮಾಡಬೇಕು. ಮರಾಠಾ ಸಮುದಾಯದ ಮಕ್ಕಳು ಉನ್ನತ ವ್ಯಾಸಂಗಕ್ಕಾಗಿ ವಿದೇಶಕ್ಕೆ ತೆರಳಿದರೆ ನಿಗಮದ ವತಿಯಿಂದ ರೂ. ೫೦ ಲಕ್ಷ ಅನುದಾನವಿದೆ. ಈಗಾಗಲೇ ಬೀದರ ಜಿಲ್ಲೆಯ ಒಬ್ಬ ವಿದ್ಯಾರ್ಥಿಗೆ ಹಣ ಬಿಡುಗಡೆ ಸರ್ಕಾರ ಮಾಡಿದೆ. ಹೀಗಾಗಿ ಅವಶ್ಯಕತೆ ಇರುವ ವಿದ್ಯಾರ್ಥಿಗಳು ಅರ್ಜಿ ಭರ್ತಿ ಮಾಡಿ ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು. ಮರಾಠ ನಿಗಮ ಮಂಡಳಿ ವತಿಯಿಂದ ಅನೇಕ ಸೌಲಭ್ಯಗಳನ್ನು ಸಮಾಜದ ಜನರಿಗೆ ಸರ್ಕಾರ ನೀಡುತ್ತಿದ್ದು, ಸಮಾಜದ ಜನರು ಈ ಕುರಿತು ತಿಳಿದುಕೊಂಡು ಸದುಪಯೋಗ ಪಡೆದುಕೊಳ್ಳಬೇಕು. ಅರ್ಥವಾಗದಿದ್ದರೆ ನಾನು ಜನರಿಗೆ ಮಾರ್ಗದರ್ಶನ ಮಾಡಲು ಸದಾ ಸಿದ್ಧನಿದ್ದೇನೆ ಎಂದು ಮೂಳೆ ತಿಳಿಸಿದರು.
ಬೆಂಗಳೂರಿನ ಪೂಜ್ಯ ಶ್ರೀ ಜಗದ್ಗುರು ವೇದಾಚಾರ್ಯ ಮಂಜುನಾಥ ಭಾರತಿ ಸ್ವಾಮೀಜಿ ಮಾತನಾಡಿ ಮರಾಠ ಸಮಾಜದ ಇದೊಂದು ಕ್ಷತ್ರೀಯ ಸಮಾಜವಾಗಿದ್ದು, ಇದು ಎಲ್ಲರನ್ನೂ ಇಂಬಿಟ್ಟುಕೊAಡು ಸಮಾನತೆಯಿಂದ ಸಾಗುವ ಸಮಾಜವಾಗಿದೆ. ಎಲ್ಲರೂ ಐಕ್ಯತೆಯಿಂದ ಬದುಕಬೇಕು. ಪರಸ್ಪರ ಪ್ರೀತಿ ವಿಶ್ವಾಸ ಮತ್ತು ನಂಬಿಕೆಯಿAದ ಸಮಾಜದ ಏಳ್ಗೆಗೆ ಶ್ರಮಿಸಬೇಕು. ಪ್ರತಿಯೊಬ್ಬರೂ ತಮ್ಮ ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಬೇಕು. ಸದಾ ಜಾಗೃತರಾಗಿ ಸಮಾಜದ ಸೇವೆಯ ಜೊತೆಗೆ ಸ್ವಯಂ ಏಳ್ಗೆಗೆ ಸಮಯ ನೀಡಬೇಕೆಂದು ತಿಳಿಸಿದರಲ್ಲದೆ, ಕಾರವಾರ ಜಿಲ್ಲೆಯ ಹಳಿಯಾಳ ತಾಲೂಕಿನಲ್ಲಿ ಶ್ರೀಹರಿ ಛತ್ರಪತಿ ಶಿವಾಜಿ ಮಹಾರಾಜ ಗುರುಕುಲ ಸ್ಥಾಪಿಸಲಾಗುತ್ತಿದೆ. ಅಲ್ಲಿ ಸಮಾಜದ ಮಕ್ಕಳಿಗೆ ಶಿಕ್ಷಣ, ಸಂಗೀತ, ವೇದಾಂತ, ಸಂಸ್ಕೃತ, ಸಂಸ್ಕಾರ, ಭಾಷಾ ಜ್ಞಾನ ಸೇರಿದಂತೆ ಮಕ್ಕಳ ಏಳ್ಗೆಗೆ ಬೇಕಾಗುವ ಸಂಸ್ಕಾರ ಇಲ್ಲಿ ನೀಡಲಾಗುವುದು ಎಂದು ತಿಳಿಸಿದರು.
ವೇದಿಕೆ ಮೇಲೆ ಕರ್ನಾಟಕ ಕ್ಷತ್ರೀಯ ಮರಾಠಾ ಪರಿಷತ್ ಅಧ್ಯಕ್ಷ ದಿಗಂಬರರಾವ ಮಾನಕಾರಿ, ಸ್ವಾಗತ ಮತ್ತು ಸತ್ಕಾರ ಸಮಿತಿ ಕಾರ್ಯದರ್ಶಿ ವೆಂಕಟರಾವ ಮಾಯಿಂದೆ, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಬಾಬುರಾವ ಮಾನಕಾರಿ, ಸಕಲ ಮರಾಠಾ ಸಮಾಜದ ಮುಖಂಡರಾದ ಜನಾರ್ಧನ ಬಿರಾದಾರ, ಪಂಚಶೀಲ ಪಾಟೀಲ, ಜನಾರ್ಧನ ವಾಘಮಾರೆ, ಸಕಲ ಮರಾಠಾ ಸಮಾಝದ ಸಂಯೋಜಕರಾದ ಪ್ರದೀಪ ಬಿರಾದಾರ, ಪ್ರಮುಖರಾದ ಪ್ರಕಾಶ ಪಾಟೀಲ, ಕಿರಣ ಬಿರಾದಾರ, ತಾತ್ಯಾರಾವ ಪಾಟೀಲ ಬಸವಕಲ್ಯಾಣ, ರಘುನಾಥರಾವ ಜಾಧವ್, ಪಾಂಡುರAಗ ಕಣಜಿ, ಮೀನಾಕ್ಷಿ ಕಾಳೆ, ಹಣಮಂತರಾವ ಚವ್ಹಾಣ, ಸತೀಶ ಪಾಟೀಲ, ಕಿಶನರಾವ ಪಾಟೀಲ, ಬನಸಿಲಾಲ್ ಬೊರೊಳೆ, ನಾರಾಯಣ ಪಾಟೀಲ, ವಿದ್ಯಾವಾನ್ ಪಾಟೀಲ, ಶಾಹುರಾಜ್ ಪವಾರ್, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಇದೇ ವೇಳೆ ಲೋಕಸಭಾ ಸದಸ್ಯ ಸಾಗರ ಖಂಡ್ರೆ ಹಾಗೂ ವಿಧಾನ ಪರಿಷತ್ ಸದಸ್ಯರಾದ ಡಾ. ಎಂ.ಜಿ.ಮೂಳೆ ಅವರನ್ನು ಸಕಲ ಮರಾಠಾ ಸಮಾಜದ ವತಿಯಿಂದ ಅದ್ಧೂರಿಯಾಗಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲೆಯ ಮರಾಠಾ ಸಮಾಜದ ಸುಮಾರು ೫ ಸಾವಿರಕ್ಕೂ ಅಧಿಕ ಜನರು ಪಾಲ್ಗೊಂಡಿದ್ದರು.
No comments:
Post a Comment