ಕಾರ್ಯಕ್ರಮ ಉದ್ಘಾಟಿಸಿದ ತೊನಸನಳ್ಳಿ ಅಲ್ಲಮಪ್ರಭು ಮಠಾಧೀಶರಾದ ಡಾ. ಮಲ್ಲಣಪ್ಪ ಸ್ವಾಮಿಗಳು ಮಾತನಾಡುತ್ತಾ, ಇತಿಹಾಸದಲ್ಲಿ ವೇದವ್ಯಾಸ ಅಗಸ್ತö್ಯ ವಾಲ್ಮಿಕಿರಂತಹ ಅಸಂಖ್ಯ ಋಷಿಮುನಿಗಳು ಈ ಜನಾಂಗದಲ್ಲಿ ಆಗಿ ಹೋಗಿದ್ದಾರೆ. ಈಗಲೂ ಯಾನಾಗುಂದಿಯ ಮಾತೆ ಮಾಣಿಕೇಶ್ವರಿ ಹಾಗೂ ಬಿಜಾಪೂರ ಜಿಲ್ಲೆಯ ದೂಡಿಹಾಳದ ಸಮರ್ಥ ಸದ್ಗುರು ಭೀಮಾಶಂಕರರAತಹ ಅನೇಕ ಯೋಗಿ, ಯೋಗಿಣಿಯರು ಈ ಜನಾಂಗದಲ್ಲಿ ಈಗಲೂ ಆಗಿ ಹೋಗುತ್ತಿದ್ದಾರೆ. ದಿವ್ಯ ಜ್ಞಾನಿಗಳು, ದಿವ್ಯ ಯೋಗಿಗಳನ್ನು ನೀಡಿದ ಶ್ರೇಯ ಈ ಜನಾಂಗಕ್ಕಿದೆ. ಭಾರತದ ಸಾಂಸ್ಕೃತಿಕವಾದ ಇತಿಹಾಸ ಬೆಳವಣಿಗೆಯಲ್ಲಿ ಈ ಜನಾಂಗದ ಕೊಡುಗೆ ಅಪಾರವಾದುದಾಗಿದೆ. ಹಾಗಾಗಿ ಈ ಜನಾಂಗದವರು ತಮ್ಮ ಇತಿಹಾಸ ಮತ್ತು ತಮ್ಮ ಚರಿತ್ರೆಯ ಬಗ್ಗೆ ಆಳವಾದ ತಿಳುವಳಿಕೆ ಹೊಂದಿ, ತಮ್ಮ ಜನಾಂಗದ ಬಗ್ಗೆ ಹೆಮ್ಮೆ ಪಡಬೇಕು ಮತ್ತು ತಮ್ಮ ಇತಿಹಾಸ ಪುರುಷರ ಹಾದಿಯಲ್ಲಿ ಸಾಗಬೇಕು. ರತ್ನಕಾಂತ ಶಿವಯೋಗಿಗಳು ಮೌನಸಾಧಕರು ಮತ್ತು ಮಿತಭಾಷಿಗರು ಆಗಿದ್ದಾರೆ. ಇವರು ಏಕಾಂತ ಪ್ರೀಯರು, ಪೂಜಾನಿಷ್ಠರು ಆಗಿದ್ದಾರೆ. ತಾವು ಸ್ಥಾಪಿಸಿದ ಈ ಪೀಠಕ್ಕೆ ಜಾಗೃತ ಆಶ್ರಮವೆಂದು ಸೂಕ್ತ ಹೆಸರಿಟ್ಟು ಕಾರ್ಯತತ್ಪರಾಗಿದ್ದಾರೆ. ಬಿಜಾಪುರದಿಂದ ಕಲ್ಯಾಣದ ಈ ನೆಲಕ್ಕೆ ಬಂದು ಇವರು ಸಾಮಾಜಿಕ ಕ್ರಾಂತಿಗೈಯುತ್ತಿರುವುದು ಸಕಾಲಿಕವಾದುದಾಗಿದೆ. ಇವರ ಜನಜಾಗೃತಿ ಮತ್ತು ಸಮಾಜದ ಅಭಿವೃದ್ಧಿ ಕಾರ್ಯಗಳು ನಿರಂತರವಾಗಿ ನಡೆಯುತ್ತಿವೆ. ಇವರು ಸ್ವತ: ಕ್ರಿಯಾಶೀಲರು ಸಜ್ಜನ ಸಾತ್ವಿಕರು ಸಚ್ಚಾರಿತ್ರö್ಯರು ಆಗಿದ್ದಾರೆ. ತಮ್ಮ ಸಂಪರ್ಕದ ಎಲ್ಲರಿಗೂ ತಮ್ಮ ಈ ಮಾರ್ಗ ಅನುಸರಿಸಲು ಪ್ರೇರೇಪಿಸುತ್ತಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ಮಾತನಾಡಿದ ರತ್ನಕಾಂತ ಶಿವಯೋಗಿಗಳು ಮಾತನಾಡುತ್ತಾ, ಈ ಮಠದ ಬೆಳವಣಿಗೆಯಲ್ಲಿ ಅನೇಕರ ಅನನ್ಯವಾದ ಯೋಗದಾನವಿದೆ. ಈ ಮಠ ದೇಶಪ್ರೇಮ ಸಂಸ್ಕೃತಿಪ್ರೇಮ ಜಾಗೃತಿಗೊಳಿಸುವ ಮಠವಾಗಿದೆ. ಈ ಮಠದ ಒಡನಾಟಕ್ಕೆ ಬಂದವರು ತಾವು ಒಳ್ಳೆಯವರಾಗಿ ಬದಲಾಗುತ್ತಿದ್ದಾರಲ್ಲದೇ, ಬೇರೆಯವರಿಗೂ ಒಳ್ಳೆಯರನ್ನಾಗಿಸಲು ಪ್ರಯತ್ನಿಸುತ್ತಿದ್ದಾರೆ. ಈ ಮಠ ಆಧುನಿಕ ಕಲ್ಯಾಣದಲ್ಲಿ ಅದ್ಭುತ ಕಲ್ಯಾಣಕರ ಕೆಲಸ ಮಾಡುತ್ತಲಿದೆ. ಇದರ ಜನೋಪಯೋಗಿ ಕಾರ್ಯಗಳು ಸಮಾಜದಲ್ಲಿ ಸತ್ಪರಿಣಾಮ ಬೀರುವಂತಹವುಗಳಾಗಿವೆ. ಸರ್ವರ ಕಲ್ಯಾಣವಾಗಬೇಕೆಂಬುದು ಈ ಮಠದ ಸದಾಶಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ನಾಗನಾಥ ಚಾಮಲೆ ಇವರು ಮಾತನಾಡುತ್ತಾ ಈಗಿನ ಕಾಲದಲ್ಲಿ ಯುವಜನರು ಆಧುನಿಕ ಆಶಾಪಾಶಗಳಿಗೆ ಬಲಿಬಿದ್ದು, ತಮ್ಮ ಜೀವನ ದುರಂತವಾಗಿಸಿಕೊಳ್ಳುತ್ತಿದ್ದಾರೆ. ತಮ್ಮ 30 ವರ್ಷ ವಯಸ್ಸಿನ ಒಳಗಡೆಯೇ ಅಪಘಾತ ಆಘಾತಕ್ಕೊಳಪಟ್ಟು ಸಾವನ್ನಪ್ಪಿ ತಮ್ಮ ಮನೆತನವನ್ನು ಕಷ್ಠನಷ್ಠಕೀಡು ಮಾಡುತ್ತದ್ದಾರೆ. ಈಗಿನ ಯುವಕರು ದುಶ್ಚಟಗಳು, ದುರ್ವ್ಯವಹಾರಗಳಿದಾಗಿ ಇವರು ಮುಂದೆ ಬರಲು ಆಗುತ್ತಿಲ್ಲ. ಹಾಗಾಗಿ ಸಮಾಜದ ಹಿರಿಯ ಬಾಂಧವರು ತಮ್ಮ ಪೀಳಿಗೆಯ ದುಶ್ಚಟಗಳನ್ನು, ಹಿಂಸೆಗಳನ್ನು, ದ್ವೇಷಗಳನ್ನು ಅಜ್ಞಾನವನ್ನು ತೊಲಗಿಸಿಕೊಂಡು ಮನೆಯೊಳಗಡೆ ಮನೆ ಹೊರಗಡೆ ಶಾಸ್ತೊçÃಕ್ತ ಜೀವನ ನಡೆಸಬೇಕು ಎಂದರು.
ಅತಿಥಿಗಳಾಗಿ ಆಗಮಿಸಿದ ಸಾಹಿತಿ ರುಕ್ಮೊದ್ದೀನ್ ಇಸ್ಲಾಂಪೂರ ಅವರು ಮಾತನಾಡುತ್ತಾ, ರತ್ನಾಕರ ಶಿವಯೋಗಿಗಳು ಜ್ಞಾನಿಗಳನ್ನು ಸಾಧಕರನ್ನು ಕಲಾವಿದರನ್ನು ಅಪಾರವಾಗಿ ಪ್ರೀತಿಸುತ್ತಾರೆ ಗೌರವಿಸುತ್ತಾರೆ ಆಶ್ರಯವಿಯುತ್ತಾರೆ. ಇವರಿಂದಾಗಿ ಅನೇಕರು ದುಶ್ಚಟ ದುರ್ಭಾವ ತೊರೆದು ಸರಿ ದಾರಿ ಹಿಡಿದಿದ್ದಾರೆ. ಇಲ್ಲಿನ ಪರಿಸರ ಅಧ್ಯಾತ್ಮ ಸಾಧನೆಗೆ ಯೋಗ್ಯ ಸ್ಥಳವಾಗಿದೆತಿ ಈ ಪೀಠವಿರುವ ಸ್ಥಳದಲ್ಲಿ ಲಾಲಧರಿ ಶ್ರೀಗಳು ಕಠೀಣ ತಪಸ್ಸು ಗೈದಿದ್ದಾರೆ. ಈ ಅಂಬಿಗರ ಚೌಡಯ್ಯ ಮಠದ ಹತ್ತಿರದಲ್ಲೇ ಬಂದವರ ಓಣಿ ಎನ್ನುವ ಐತಿಹಾಸಿಕ ಸುಕ್ಷೇತ್ರವಿದೆ. ರತ್ನಕಾಂತ ಶಿವಯೋಗಿಗಳು ತಪೋನಿಷ್ಠರಾಗಿದ್ದಾರೆ ಅಧ್ಯಾಯನಶೀಲರಾಗಿದ್ದಾರೆ. ಇವರಲ್ಲಿ ಅಪರಿಮಿತವಾದ ಸಂಘಟನಾಶಕ್ತಿ ವಾಕ್ಶಕ್ತಿ ಯೋಗಶಕ್ತಿ ಇದೆ. ಇವರ ಈ ಕಲ್ಯಾಣ ಪರಿಸರದಲ್ಲಿ ನೆಲೆ ನಿಂತು ಸತ್ಕಾರ್ಯ ಗೈಯುತ್ತಿರುವುದು ಶ್ಲಾಘ್ಯವಾದುದಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ ಸಮಾಜ ಮುಖಂಡರಾದ ತುಕಾರಾಮ ರೊಡ್ಡೆ ರವರು ಮಾತನಾಡುತ್ತಾ, ವಾಲ್ಮಿಕಿ ಜನಾಂಗದವರು ಮುಂದೆ ಬರಬೇಕಾದರೆ ತಮ್ಮ ಮನೆಗಳನ್ನು ಸಂಸ್ಕಾರ ಕೇಂದ್ರಗಳನ್ನಾಗಿಸಿಕೊಳ್ಳಬೇಕು. ತಮ್ಮ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸಬೇಕು. ಮನೆಯಲ್ಲಿ ನಿರಂತರ ಪೂಜೆ, ಪುನಸ್ಕಾರಗಳು ಗೈಯಬೇಕು. ಮತ್ತು ಮನೆಯಲ್ಲಿ ಗ್ರಂಥಾಲಯ ಇಟ್ಟುಕೊಳ್ಳಬೇಕು. ಅಧ್ಯಾತ್ಮಿಕಕೇಂದ್ರಗಳಿಗೆ ಸತ್ಸಂಗಗಳಿಗೆ ಕಲಾಕೇಂದ್ರಗಳಿಗೆ ಶಿಕ್ಷಣಕೇಂದ್ರಗಳಿಗೆ ಹಾಜರಾಗಿ ಸದಾ ಸೇವೆ ಸಲ್ಲಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ರತ್ನಕಾಂತ ಶಿವಯೋಗಿಗಳಿಗೆ ಮುದ್ರಿಕಾ ಷಣ್ಮುಖಪ್ಪ ಬೊಕ್ಕೆ ದಂಪತಿಗಳಿ0ದ ಕಡಿಸಕ್ಕರೆಯಲ್ಲಿ ತುಲಾಭಾರ ನಡೆಯಿತು ಹಾಗೂ ವಿದ್ಯಾವತಿ ಸೋಮು ಪರಂಡೆ ದಂಪತಿಗಳಿ0ದ ಹಣದಿಂದ ತುಲಾಭಾರ ನಡೆಯಿತು.
ಕಾರ್ಯಕ್ರಮದಲ್ಲಿ ಖ್ಯಾತ ಸಂಗೀತ ಕಲಾವಿದರಾದ ಸುಭಾಷ ಕಲಖೋರಾ, ಮಾರುತಿ ಚಿಕನಾಗಾಂವ ವಾಡಿ ರವರಿಂದ ಸಂಗೀತ ಕಾರ್ಯಕ್ರಮ ನಡೆಯಿತು. ವಿದ್ಯಾರ್ಥಿಗಳಿಂದ ಕೋಲಾಟ, ನೃತ್ಯ ನಡೆದವು. ಕಾರ್ಯಕ್ರಮದಲ್ಲಿ ಉನ್ನತ ಶಿಕ್ಷಣದಲ್ಲಿ ಸಾಧನೆಗೈದ ಜಯಶ್ರೀ ಹಣಮಂತ ದೇವುಬಾ ಗದ್ಲೆಗಾಂವ(ಬಿ), ಅಕ್ಷತಾ ತುಕಾರಾಮ ರೊಡ್ಡೆ, ಮಹೇಶ್ವರಿ ಮಾಣಿಕರಾವ ಗೋರಮುಡೆರವರಿಗೆ ಸತ್ಕರಿಸಲಾಯಿತು, ಹಾಗೂ ವಿವಿಧ ಕ್ಷೇತ್ರದ ಸಾಧಕರನ್ನು, ಸೇವಕರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಸಸ್ತಾಪೂರದ ಬಂಗ್ಲಾದ ಯಲ್ಲಾಲಿಂಗ ಮಠದ ಮಾತಾ ಮಹಾದೇವಿ, ಹಳ್ಳಿಖೇಡ (ಕೆ) ವಾಲ್ಮೀಕಿರಾಮ ಮಹಾರಾಜ, ಕೌಡಿಯಾಳ (ಎಸ್)ನ ಭಾಗ್ಯವಂತಿ ದೇವಿ, ನಗರಸಭೆ ಅಧ್ಯಕ್ಷ ಸಗಿರೊದ್ದೀನ್,ಉಪಾಧ್ಯಕ್ಷರಾದ ಲಕ್ಷಿö್ಮಬಾಯಿ ಭೀಮಾಪುಲೆ, ಅಝರ ಅಲಿ, ಪಿಂಟು ಜಮಾದಾರ, ಸಿದ್ರಾಮ ದೇವಬಾ, ಪೀರಪ್ಪಾ ಶಣಮೆ, ಪ್ರಕಾಶ ನಾಗೂರೆ, ವಾಲ್ಮಿಕಿ ಕೊಂಡಗೆ, ಸಂಜುಕುಮಾರ ಸುಣಗಾರ, ಮಲ್ಲಿಕಾರ್ಜುನ ನರನಾಳ, ಬಾಬುರಾವ ಚೆಂಗಟಾ, ತಿಮ್ಮಣ್ಣಾ ಮುಸ್ತಾಪೂರ, ಅನೀಲಕುಮಾರ ಯರಬಾಗ, ದತ್ತು ಪದ್ಮೆ, ಗೋವಿಂದ ಚಾಮಲೆ, ಚನ್ನವೀರ ಜಮಾದಾರ, ಮಲ್ಲಿಕಾರ್ಜುನ ಬೊಕ್ಕೆ, ಗೋವಿಂದ ಗುರೂಜಿ, ದಿಲಿಪ ಗಿರಗಂಟೆ, ರಾಮಣ್ಣಾ ಮಂಠಾಳೆ, ಚಂದ್ರಕಾAತ ಮೇತ್ರೆ ಮುಂತಾದವರು
No comments:
Post a Comment