ads

Search This Blog

Friday, 3 January 2025

ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿಯ ಹಣ ಕೆಯುಡಬ್ಲೂಜೆ ದತ್ತಿಗೆ ಡಾ.ರಾಜಾ ರಾಮಣ್ಣ ಪ್ರಶಸ್ತಿ ಸ್ಥಾಪನೆಗೆ ನಿರ್ಧರಿಸಿದ ಗಿರೀಶ್ ಲಿಂಗಣ್ಣ

ಬೆಂಗಳೂರು: ವಾರ್ತಾ ಇಲಾಖೆ ಕೊಡ ಮಾಡುವ ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿಗೆ ಭಾಜನರಾಗಿರುವ ಅಂಕಣಕಾರ ಗಿರೀಶ್ ಲಿಂಗಣ್ಣ ಅವರು ಪ್ರಶಸ್ತಿ ಮೊತ್ತ ಒಂದು ಲಕ್ಷ ರೂಗಳನ್ನು ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ದ್ತತಿನಿಧಿ ಪ್ರಶಸ್ತಿಗೆ ನೀಡಲು ನಿರ್ಧರಿಸಿದ್ದಾರೆ.


ಅಂಕಣಕಾರ ಗಿರೀಶ್ ಲಿಂಗಣ್ಣ


ಈ ಬಗ್ಗೆ ಸಂಘಕ್ಕೆ ಅಧಿಕೃತವಾಗಿ ಪತ್ರ ಬರೆದು ತಮ್ಮ ನಿರ್ಧಾರ ತಿಳಿಸಿರುವುದನ್ನು ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರು ಸ್ವಾಗತಿಸಿದ್ದಾರೆ.
ಕರ್ನಾಟಕದಲ್ಲಿ ವಿಜ್ಞಾನ ಬರಹಗಾರರಿಗೆ, ವಿಜ್ಞಾನ ಸಂವಾಹಕರಿಗೆ ಹೆಚ್ಚಿನ ಉತ್ತೇಜನ, ಬೆಂಬಲ ನೀಡುವ ನಿಟ್ಟಿನಲ್ಲಿ, ನಾನು ಈ ಪ್ರಶಸ್ತಿಯೊಡನೆ ನೀಡಲಾಗುವ ಒಂದು ಲಕ್ಷ ರೂ ಮೊತ್ತವನ್ನು
ಕರ್ನಾಟಕ ವೃತ್ತಿನಿರತ ಪತ್ರಕರ್ತರ ಸಂಘಕ್ಕೆ (ಕೆಯುಡಬ್ಲ್ಯುಜೆ) ಹಸ್ತಾಂತರಿಸುತ್ತೇನೆ. ಈ ಮೊತ್ತದಿಂದ ನಮ್ಮ ರಾಜ್ಯದ ಪ್ರಸಿದ್ಧ ವಿಜ್ಞಾನಿ ಡಾ. ರಾಜಾ ರಾಮಣ್ಣನವರ ಹೆಸರಿನಲ್ಲಿ ದತ್ತಿ ನಿಧಿ ಪ್ರಶಸ್ತಿಯನ್ನು ಸ್ಥಾಪಿಸಬೇಕೆಂದು ಗಿರೀಶ್ ಲಿಂಗಣ್ಣ ಮನವಿ ಮಾಡಿದ್ದಾರೆ.
ವಿಜ್ಞಾನ, ರಕ್ಷಣೆ, ಬಾಹ್ಯಾಕಾಶದಂತಹ ಸಂಕೀರ್ಣ ವಿಚಾರಗಳನ್ನು ಜನಸಾಮಾನ್ಯರಿಗೆ ಅರ್ಥವಾಗುವ ರೀತಿಯಲ್ಲಿ ಬರೆಯುವ (ಕನ್ನಡ ಅಥವಾ ಇಂಗ್ಲೀಷ್)ಪತ್ರಕರ್ತರು, ಅಂಕಣಕಾರರಿಗೆ ಪ್ರತಿ ವರ್ಷ ಪ್ರಶಸ್ತಿ ನೀಡಬೇಕು. ಹೆಚ್ಚು ಬರಹಗಾರರು ಇಂತಹ ಪ್ರಮುಖ ವಿಚಾರಗಳ ಕುರಿತು ಬರೆಯುವಂತೆ ಮಾಡುವುದು ಮತ್ತು ಯುವ ಮನಸ್ಸುಗಳನ್ನು ಆಸಕ್ತಿಕರ ವೈಜ್ಞಾನಿಕ ಬರಹಗಳಿಂದ ಸೆಳೆಯುವಂತೆ ಮಾಡುವುದು ತಮ್ಮ ಉದ್ದೇಶವಾಗಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಡಾ.ರಾಜರಾಮಣ್ಣ ಪ್ರಶಸ್ತಿ ಕೆಯುಡಬ್ಲೂಜೆ ಅಭಿನಂದನೆ:
ಅಂಕಣಕಾರ ಗಿರೀಶ್ ಲಿಂಗಣ್ಣ ಅವರ ಆಶಯದಂತೆಯೇ ಕೆಯುಡಬ್ಲೂಜೆ ಡಾ.ರಾಜರಾಮಣ್ಣ ಹೆಸರಿನಲ್ಲಿ ದತ್ತಿನಿಧಿಯನ್ನು ಸ್ಥಾಪಿಸಲಾಗುವುದು ಎಂದು ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ತಿಳಿಸಿದ್ದಾರೆ.
ಕರ್ನಾಟಕದ ಹೆಮ್ಮೆಯ ಪುತ್ರರಾದ ಡಾ. ರಾಜಾ ರಾಮಣ್ಣ ಜಗತ್ತು ಕಂಡ ಶ್ರೇಷ್ಠ ಪರಮಾಣು ವಿಜ್ಞಾನಿಗಳಲ್ಲಿ ಒಬ್ಬರು. ಭಾರತದ ವೈಜ್ಞಾನಿಕ ಪ್ರಗತಿಯ ಹಿಂದೆ ಡಾ. ರಾಜಾ ರಾಮಣ್ಣನವರ ಕೊಡುಗೆ ಅಪಾರವಾಗಿದೆ. ಈ ಬಹುಮಾನವನ್ನು ವಿಜ್ಞಾನ ವಿಚಾರಗಳು ಎಲ್ಲರಿಗೂ ತಲುಪುವಂತೆ ಮಾಡುವ ಪತ್ರಕರ್ತರಿಗೆ ಪ್ರತಿ ವರ್ಷವೂ ನೀಡಲಾಗುವುದು ಎಂದು ತಿಳಿಸಿರುವ ತಗಡೂರು,  ಗಿರೀಶ್ ಲಿಂಗಣ್ಣ ಅವರನ್ನು ಅಭಿನಂದಿಸಿದ್ದಾರೆ.

"ಅಲ್ನೋಡಿ ಮತ್ತೆ ಕಲ್ಯಾಣಕ್ಕೆ ಬರುತ್ತಿರುವ ಶರಣರು" ಸಂಪಾದಿತ ಕವನ ಸಂಕಲನ ಪುಸ್ತಕ ಬಿಡುಗಡೆ

ಬಸವಕಲ್ಯಾಣ : ಸ್ಥಳೀಯ ತ್ರಿಪುರಾಂತ ಗವಿಮಠದಲ್ಲಿ ಶರಣ ಕಾಯಕ ಪ್ರಶಸ್ತಿ ಹಾಗೂ ವೀರಶೆಟಿ ಪಾಟೀಲ ಅವರ ಸಂಪಾದಿತ ಕವನ ಸಂಕಲನ ಅಲ್ನೋಡಿ ಮತ್ತೆ ಕಲ್ಯಾಣಕ್ಕೆ ಬರುತ್ತಿರುವ ಶರಣರು ಪುಸ್ತಕ ವನ್ನು ಪೂಜ್ಯ ಘನಲಿಂಗ ರುದ್ರಮೂನಿ ಶಿವಾಚಾರ್ಯ  ಮಹಾಸ್ವಾಮಿಗಳು ಬಿಡುಗಡೆ ಮಾಡಿದರು. 

ಬಸವಕಲ್ಯಾಣ ಗವಿಮಠದಲ್ಲಿ "ಶರಣ ಕಾಯಕ ಪ್ರಶಸ್ತಿ " ಹಾಗೂ ವೀರಶೆಟ್ಟಿ ಎಂ.ಪಾಟೀಲ್  ಅವರ ಅಗೋ "ಅಲ್ನೋಡಿ ಮತ್ತೆ ಕಲ್ಯಾಣಕ್ಕೆ ಬರುತ್ತಿರುವ ಶರಣರು" ಸಂಪಾದಿತ ಕವನ ಸಂಕಲನ ಪುಸ್ತಕ ಬಿಡುಗಡೆ ಸಮಾರಂಭ ಜರುಗಿತು. ಸಮಾರಂಭದಲ್ಲಿ ವೀರಶೆಟ್ಟಿ ಪಾಟೀಲ್ ಹಾಗೂ ಅನೇಕ ಸಾಹಿತಿಗಳು ಭಾಗವಹಿಸಿದ್ದರು.  


ಬಸವಕಲ್ಯಾಣ : ಸ್ಥಳೀಯ ತ್ರಿಪುರಾಂತ ಗವಿಮಠದಲ್ಲಿ ಶರಣ ಕಾಯಕ ಪ್ರಶಸ್ತಿ ಹಾಗೂ ವೀರಶೆಟಿ ಪಾಟೀಲ ಅವರ ಸಂಪಾದಿತ ಕವನ ಸಂಕಲನ ಅಲ್ನೋಡಿ ಮತ್ತೆ ಕಲ್ಯಾಣಕ್ಕೆ ಬರುತ್ತಿರುವ ಶರಣರು ಪುಸ್ತಕ ವನ್ನು ಪೂಜ್ಯ ಘನಲಿಂಗ ರುದ್ರಮೂನಿ ಶಿವಾಚಾರ್ಯ ಮಹಾಸ್ವಾಮಿಗಳು ಬಿಡುಗಡೆ ಮಾಡಿದರು. 

ಮನಸ್ಸಿದ್ದರೆ ಮಾರ್ಗ ಉಂಟು : ಶ್ರೀ ರಂಭಾಪುರಿ ಜಗದ್ಗುರುಗಳು

ಕೊಲನಪಾಕ (ತೆಲಂಗಾಣ) ಜನೆವರಿ ೩ : ಸತ್ಯ ಮನುಷ್ಯನನ್ನು ಬದಲಿಸುತ್ತದೆ. ನಮ್ಮ ನಡೆ ನುಡಿಗಳು ಯಾವಾಗಲೂ ಸತ್ಯದ ಪರವಾಗಿರಬೇಕು. ಕೆಲಸ ಮಾಡಲು ಮನಸ್ಸಿದ್ದರೆ ಮಾರ್ಗಗಳು ಕಾಣುತ್ತವೆ. ಮನಸ್ಸಿಲ್ಲದಿದ್ದರೆ ನೂರಾರು ನೆಪಗಳು ಮುಂದೆ ಬರುತ್ತವೆ ಎಂದು  ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.


ಕೊಲನಪಾಕ ಸ್ವಯಂಭು ಶ್ರೀ ಸೋಮೇಶ್ವರ ಕ್ಷೇತ್ರದಲ್ಲಿ ವಿಶೇಷ ಪೂಜಾ


ಅವರು ಶುಕ್ರವಾರ ಭುವನಗಿರಿ ತಾಲೂಕಿನಶ್ರೀ ಜಗದ್ಗುರು ರೇಣುಕಾಚಾರ್ಯರು ಅವತರಿಸಿದ ಕೊಲನಪಾಕ ಸ್ವಯಂಭು ಶ್ರೀ ಸೋಮೇಶ್ವರ ಕ್ಷೇತ್ರದಲ್ಲಿ ವಿಶೇಷ ಪೂಜಾ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು. 

ಮನುಷ್ಯನ ವ್ಯಕ್ತಿತ್ವ ಗಟ್ಟಿಗೊಳಿಸುವುದಕ್ಕೆ ಹೊಗಳಿಕೆಗಿಂತಲೂ ತೆಗಳಿಕೆಗೆ ಹೆಚ್ಚು ಗಮನಿಸಿದರೆ ಮಾಡಿದ ತಪ್ಪುಗಳು ತಿಳಿಯುತ್ತದೆ. ಯಾವುದೇ ಒಂದು ಒಳ್ಳೆಯ ಕೆಲಸ ಮಾಡುವಾಗ ತೊಡಕು ತೊಂದರೆಗಳು ಮಹಾತ್ಮರಿಗೂ ಬಿಟ್ಟಿಲ್ಲ. ಸಂಪತ್ತಿನ ಬದುಕಿನಲ್ಲಿ ಬಾಳುವ ಮನುಷ್ಯನಿಗೆ ಗುಣವಂತರ ಗುಣಾದರ್ಶಗಳು ಕಾಣಲಾರವು. ಅನ್ಯಾಯ ಅಸತ್ಯ ಹೇಳುವ ಜನರು ಹೆಚ್ಚಿರುವಾಗ ಸತ್ಯವಂತರು ಸುಮ್ಮನಿರುವ ಕಾಲ ಇದಾಗಿದೆ. ಜೀವನ ಹೂದೋಟದಲ್ಲಿ ಅರಳುವ ಹೂಗಳೆಷ್ಟೋ ಬಾಡುವ ಹೂಗಳೆಷ್ಟೋ ಹೇಳಲಾಗದು. ಭೌತಿಕ ಸಿರಿ ಸಂಪತ್ತು ಮನುಷ್ಯನಿಗೆ ನಿಜವಾದ ಸಂತೃಪ್ತಿ ತರಲಾರವು. ಇವುಗಳ ಜೊತೆಗೆ ಆಧ್ಯಾತ್ಮದ ಹಸಿವು ಇರಬೇಕೆಂದು ಶ್ರೀ ಜಗದ್ಗುರು ರೇಣುಕಾಚಾರ್ಯರು ಮಹಾಮುನಿ ಅಗಸ್ತö್ಯರನ್ನು ನಿಮಿತ್ಯ ಮಾಡಿ ಸಕಲರಿಗೂ ಬೋಧಿಸಿದ್ದಾರೆ. ಕೊಲನಪಾಕ ಸ್ವಯಂಭು ಶ್ರೀ ಸೋಮೇಶ್ವರ ಕ್ಷೇತ್ರ ಬಹಳ ಪ್ರಾಚೀನ ಇತಿಹಾಸವನ್ನು ಹೊಂದಿರುವುದಷ್ಟೇ ಅಲ್ಲ. ವೀರಶೈವ ಧರ್ಮ ಸಿದ್ಧಾಂತ ಸ್ಥಾಪಕರಾದ ಶ್ರೀ ಜಗದ್ಗುರು ರೇಣುಕಾಚಾರ್ಯರು ಆವಿರ್ಭವಿಸಿದ ಪಾವನ ಕ್ಷೇತ್ರವಾಗಿದೆ ಎಂದರು.

ಮೇಹಕರ ಹಿರೇಮಠದ ರಾಜೇಶ್ವರ ಶಿವಾಚಾರ್ಯ ಸ್ವಾಮಿಗಳು ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿದ್ಧರಬೆಟ್ಟದ ವೀರಭದ್ರ ಶಿವಾಚಾರ್ಯ ಸ್ವಾಮಿಗಳು ಶ್ರೀ ಜಗದ್ಗುರು ರೇಣುಕಾಚಾರ್ಯರ ಧಾರ್ಮಿಕ ಮತ್ತು ಸಾಮಾಜಿಕ ಸತ್ಕಾçಂತಿಯ ಬಗೆಗೆ ಉಪದೇಶಾಮೃತವನ್ನಿತ್ತರು. ಎಡೆಯೂರು ಕ್ಷೇತ್ರದ ರೇಣುಕ ಶಿವಾಚಾರ್ಯ ಸ್ವಾಮಿಗಳು, ಮಳಲಿ ಸಂಸ್ಥಾನಮಠದ ಡಾ|| ನಾಗಭೂಷಣ ಶಿವಾಚಾರ್ಯ ಸ್ವಾಮಿಗಳು, ಸಂಗೊಳ್ಳಿ ಹಿರೇಮಠದ ಗುರುಲಿಂಗ ಶಿವಾಚಾರ್ಯ ಸ್ವಾಮಿಗಳು, ಲಿಂಗಸುಗೂರು ಮಾತಾ ಮಾಣಿಕ್ಕೇಶ್ವರಿ ಆಶ್ರಮದ ನಂದಿಕೇಶ್ವರಿ ಅಮ್ಮನವರು ಉಪಸ್ಥಿತರಿದ್ದರು. 

ಈ ಪವಿತ್ರ ಸಮಾರಂಭದಲ್ಲಿ ಹೈದರಾಬಾದ ವೀರಶೈವ ಸಮಾಜದ ಅಧ್ಯಕ್ಷ ವೀರಮಲ್ಲೇಶ, ವಿಜಯಶಂಕರ, ಪಂಡಿತ ಆರ್.ಎಂ.ಪ್ರಭುಲಿAಗಶಾಸ್ತಿçಗಳು, ಗುರುಪಾದಪ್ಪ ಕಿಣಗಿ, ಶಕುಂತಲಾ ಶಿವಶರಣಪ್ಪ ಸೀರಿ, ಸರೋಜಾ ಹಿರೇಮಠ, ಕಸ್ತೂರಮ್ಮ ಉಳ್ಳಾಗಡ್ಡಿ ಮೊದಲಾದವರು ಪಾಲ್ಗೊಂಡಿದ್ದರು. 

ಪ್ರಾತ:ಕಾಲ ಸ್ವಯಂಭು ಶ್ರೀ ಸೋಮೇಶ್ವರ ಮಹಾಲಿಂಗಕ್ಕೆ ವಿಶೇಷ ಪೂಜಾಭಿಷೇಕ, ಶಕ್ತಿಮಾತೆ ಚಂಡಿಕಾAಬಾ ದೇವಿಗೆ ಕುಂಕುಮಾರ್ಚನೆ ಹಾಗೂ ಶ್ರೀ ವೀರಭದ್ರಸ್ವಾಮಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಪೂಜೆ ಸಲ್ಲಿಸಿದರು. ಕಲಬುರ್ಗಿಯ ಗಿರಿಯಪ್ಪ ಮುತ್ಯಾ ಬಂದ ಎಲ್ಲ ಸದ್ಭಕ್ತರಿಗೂ ಅನ್ನ ದಾಸೋಹ ಸೇವೆ ಸಲ್ಲಿಸಿದರು. 


"ಜ್ಞಾನ ಇಲ್ಲ ಅಂತಾನೇ ಪಶು, ಪಕ್ಷಿ, ಪ್ರಾಣಿಗಳು, ಮೂಕ ಆಗಿದ್ದಾವೆ! ಪ್ರಥಮ ಮಹಿಳಾ ಶಿಕ್ಷಕಿ ಸಾವಿತ್ರಿಬಾಯಿ ಫುಲೆ"

 "ಜ್ಞಾನ ಇಲ್ಲ ಅಂತಾನೇ ಪಶು, ಪಕ್ಷಿ, ಪ್ರಾಣಿಗಳು, ಮೂಕ ಆಗಿದ್ದಾವೆ! ನಿಲ್ಬೇಡ ಓಡು ವಿದ್ಯಾ ಗಳಿಸಕ್ಕೆ! ಅವಕಾಶ ಬಂದಿದೆ ಶಾಲೆಯಲ್ಲಿ ಕಲಿಯಕ್ಕೆ ತೆರೆದಿದೆ ಶಾಲೆ ನಿಮಗಾಗಿ ಅಕ್ಷರದ ಜ್ಞಾನ ಬೆಳಗಾಕ್ಕೆ"!

" ಜ್ಞಾನ  ಇಲ್ದಿದ್ರೆ  ಸರ್ವನಾಶ  ಆಗೋಗುತೇವೇ ವಿವೇಕ ಇಲ್ದಿದ್ರೆ  ಆಗುತ್ತೀರಿ  ಪಶುಗಳ  ಹಂಗೆ" ಸಾವಿತ್ರಿಬಾಯಿಫುಲೆ ಶಿಕ್ಷಣದ ಸಂದೇಶವಾಣಿಯಾಗಿದೆ.!





 ಮಹಾರಾಷ್ಟ್ರದ "ಸತಾರ" ಜಿಲ್ಲೆಯ ಖಂಡಾಲ ತಾಲೂಕಿನ ಒಂದು ಪುಟ್ಟ ಹಳ್ಳಿಯಾದ ನಯಿಗಾಂವ ಖಂಡೋಜಿ  ನೆವಸೆ ಪಾಟೀಲರ  ಪತ್ನಿ ಲಕ್ಷ್ಮಿ ಬಾಯಿ ದಂಪತಿಗಳಿಗೆ ೩ನೇ ಜನವರಿ ೧೮೩೧ ರಲ್ಲಿ ಮೊದಲನೆಯ ಹೆಣ್ಣು ಮಗಳಾಗಿ ಜನಿಸಿದಳು. ತಂದೆ-ತಾಯಿ ತುಂಬಾ ಸಂತೋಷದಿಂದ "ಸಾವಿತ್ರಿ "ಎಂದು ನಾಮಕರಣ ಮಾಡಿದ್ದರು. ಇವಳ ತಂದೆಯಾದ ಖಂಡೋಜಿ ನವಸೆ ಪಾಟೀಲರು ಮಾಲಿ ಸಮುದಾಯದವರಾಗಿದ್ದರು. ಪ್ರತಿಷ್ಠಿತ ವ್ಯಕ್ತಿಯಾದ ಇವರು ಜಮೀನ್ದಾರರು ಹಾಗೂ ಸಿರಿವಂತರು ಕುಟುಂಬದವರು .ಇವರ ಕಸುಬು ವ್ಯವಸಾಯವಾಗಿತ್ತು .ಸಾವಿತ್ರಿಬಾಯಿ ತಂದೆ ಅತೀ  ಪ್ರೀತಿಯಿಂದ ಮಗಳನ್ನು ಬೆಳೆಸಿದ್ದರು. ಸಾವಿತ್ರಿ ಬಾಲ್ಯದಿಂದಲೇ ಚುರುಕು ಹಾಗೂ ಧೈರ್ಯವಂತೆಯಾಗಿದ್ದಳು . ಇವಳ ಧೈರ್ಯ ಮತ್ತು ಬುದ್ಧಿಯನ್ನು ನೋಡಿ ಮಿಶನರಿಯೊಬ್ಬರು ಒಂದು ಪುಸ್ತಕವನ್ನು ಕಾಣಿಕೆಯಾಗಿ ಕೊಟ್ಟಿದ್ದರು. ಆದರೆ ಸಾವಿತ್ರಿ ಗೆ ಓದಲು, ಬರೆಯಲು, ಬರುತ್ತಿರಲಿಲ್ಲ .ದೊಡ್ಡವರು ಕಾಣಿಕೆಯಾಗಿ ನೀಡಿದ ಪುಸ್ತಕವನ್ನು ಬಿಸಾಡದೇ ಜೋಪಾನವಾಗಿ ಇಡಬೇಕೆಂದು ಸಾವಿತ್ರಿಗೆ ಅನಿಸಿತ್ತು. 

"ಧೈರ್ಯಂ ಸರ್ವತ್ರ ಸಾಧನಂ" ಮನಸಿನ ಮಾತು ಕೇಳುವುದಕ್ಕೆ ತುಂಬಾ ಧೈರ್ಯಬೇಕು ಯಾಕೆಂದರೆ ಮನಸ್ಸು ಯಾವಾಗಲೂ ನಿಜ ಹೇಳುತ್ತದೆ. ಇಂತಹ ಧೈರ್ಯ ಸಾವಿತ್ರಿ ಬಳಿ ಇತ್ತು. ಆದರೆ ಸಾವಿತ್ರಿ ಹುಟ್ಟೂರಿನಲ್ಲಿ ಹೆಣ್ಣು ಮಕ್ಕಳು ಶಾಲೆ ಹೋಗುವಂತಿರಲಿಲ್ಲ ಅಕ್ಷರ ವಂಚಿತ ಮಹಿಳೆಯರು ಶೂದ್ರರು ಓದುವಂತಿರಲಿಲ್ಲ. ಓದಿದ್ದರೆ ಶ್ಲೋಕ ಕೇಳಿದ್ದರೇ ಕಿವಿಯಲ್ಲಿ ಕಾದ "ಸೀಸ" ಸುರಿದು ನಾಲಿಗೆ ಕತ್ತರಿಸುವ ಶಿಕ್ಷೆಯಿತ್ತು. ಮಹಿಳೆಯರು  ಅನಕ್ಷರತೆಯ ರೂಪದಲ್ಲಿ ಬಡತನದ  ಬೇಗೆಯಲ್ಲಿ ನೆರಳುತ್ತಿದ್ದರು. ಹೆಣ್ಣು ಮಕ್ಕಳು ಶಾಲೆ ಕಲಿಯುವ ಪದ್ಧತಿಯೇ ಇರಲಿಲ್ಲ ಊರಿನ ಶ್ರೀಮಂತರ ಮಕ್ಕಳು ಮಾತ್ರ ಮನೆಗಳಲ್ಲಿಯೇ ಶಿಕ್ಷಣ ಪಡೆದುಕೊಳ್ಳುತ್ತಿದ್ದರು. ಉಳಿದವರು ತಮ್ಮ ಕುಲ ಕಸಬು ಮಾಡಿಕೊಂಡು ಇರುತ್ತಿದ್ದರು. ಹೆಣ್ಣು ಮಕ್ಕಳು ಮನೆ ಕೆಲಸ ಮಾಡಿಕೊಂಡರೆ ಸಾಕು .ಚಿಕ್ಕ ವಯಸ್ಸಿನಲ್ಲಿಯೇ ಮದುವೆ ಮಾಡಿ ಗಂಡನ ಮನೆಗೆ ಕಳುಹಿಸಿ ಬಿಡುತ್ತಿದ್ದರು. ಹಾಗೆಯೇ ಬಾಲಕಿ ಸಾವಿತ್ರಿ ಅನಕ್ಷರಸ್ಥಳವಾಗಿದ್ದು ಒಂಭತ್ತನೆಯ (೯) ವಯಸ್ಸಿಗೆ ೧೩ನೇ ವಯಸ್ಸಿನ ಜ್ಯೋತಿಬಾಪುಲೆ ಅವರ ಜೊತೆಗೆ ವಿವಾಹ ಮಾಡಿದ್ದರು. ಇವಳ ಧೈರ್ಯ  ಶಿಕ್ಷಣ  ಕಲಿಯಬೇಕು  ಎಂಬ  ಹಂಬಲ ಕಂಡು  ಜ್ಯೋತಿಬಾಪುಲೆ  ಅವರು  ಪ್ರಥಮ ಗುರುಗಳಾಗಿ  ಶಿಕ್ಷಣವನ್ನು  ಕಲಿಸುತ್ತಾರೆ. ಔಪಚಾರಿಕವಾಗಿ ಓದು, ಬರಹ, ಕಲಿಯದ ಜೀವನ ಸಂಗಾತಿಗೆ ತಾನೇ ಅಕ್ಷರ ಕಲಿಸುತ್ತಾ ಒಟ್ಟೊಟ್ಟಿಗೆ ವಿದ್ಯಾಭ್ಯಾಸ ಕಲಿಯುತ್ತಿದ್ದರು. ಫುಲೆ  ದಂಪತಿಗಳು ಪರಸ್ಪರ ಹೊಂದಾಣಿಕೆಯಿಂದ ಜೀವನ ನಡೆಸುತ್ತಿದ್ದರು. ಜ್ಯೋತಿಬಾಪುಲೆ ತನ್ನ ಹೆಂಡತಿ ಸಾವಿತ್ರಿಬಾಯಿಯನ್ನು ವಿದ್ಯಾವಂತಳನಾಗಿ ಮಾಡಿ ಅಪಾರವಾದ ಆತ್ಮಾಭಿಮಾನ ಸ್ವಶಕ್ತಿಯುಳ್ಳ ಮಹಿಳೆಯನಾಗಿ ಪರಿವರ್ತಿಸಿದ್ದರು.  ಸಾವಿತ್ರಿಬಾಯಿಗೆ  ಮಿಷನರಿಯೊಬ್ಬರು ಕಾಣಿಕೆಯಾಗಿ ನೀಡಿದ ಪುಸ್ತಕವನ್ನು ತೆಗೆದುಕೊಂಡು ಗಂಡನ ಮನೆಗೆ ಬಂದಾಗ ಅದನ್ನು ನೋಡಿ ಹೆಚ್ಚು ಸಂತೋಷಪಟ್ಟ  ವ್ಯಕ್ತಿ ಎಂದರೆ ಜ್ಯೋತಿಬಾಪುಲೆಯವರು. 

ಸಾವಿತ್ರಿಬಾಯಿ ಮನೆಯಲ್ಲಿ ಅಕ್ಷರ ಅಭ್ಯಾಸ ಕಲಿತು ಓದುತ್ತಿರುವಾಗ ಜ್ಯೋತಿಬಾಪುಲೆ ಅವರು ಪುಣೆಯ ಸ್ಕಾಟಿಷ್ ಮಿಷನ್ ಸ್ಕೂಲಿನಲ್ಲಿ ಓದಲು ಮುಂದುವರಿಸಿದರು. ಜ್ಯೋತಿಬಾಪುಲೆ ಅವರ ಗೆಳೆಯರಾದ ಸದಾಶಿವ ಗೋವಿಂದ ವಾಲ್ವೇಕರ  ಮತ್ತಿತ್ತರು ಗೆಳೆಯರ ಜೊತೆಗೆ ಓದುತ್ತಿರುವಾಗ ತಮ್ಮ ಪತ್ನಿಯಿಂದ ಹೆಣ್ಣು ಮಕ್ಕಳಿಗೆ ಅಕ್ಷರ ಅಭ್ಯಾಸ ಕಲಿಸುವಂತೆ ಸಲಹೆ ನೀಡಿದರು .ಇದೇ ಸಮಯದಲ್ಲಿ ಸ್ತ್ರೀಯವಾದ ಎಂಬ ಪದ ಮತ್ತು ಪರಿಭಾಷೆ ಭಾರತೀಯ ಸಮಾಜದ ಮಹಿಳೆಯರಿಗೆ ತೋರುತ್ತಿರುವ ತಾರತಮ್ಯದ ಬಗೆಗೆ ಧ್ವನಿಯೆತ್ತಿದ್ದು ಇದು ಜ್ಯೋತಿಬಾಪುಲೆ ಅವರಿಗೆ ಸ್ಪೂರ್ತಿದಾಯಕಯಾಯಿತು. 

"ಶಿಕ್ಷಣವೇ ಶಕ್ತಿ' ಶಿಕ್ಷಣವೇ ಯುಕ್ತಿ" ಶಿಕ್ಷಣ ಸಂಘಟನೆ ಹೋರಾಟ ಡಾ. ಬಿ.ಆರ್ ಅಂಬೇಡ್ಕರ್ ಅವರ ತತ್ವ ಎಲ್ಲ ಕಾಲಕ್ಕೂ ಸೀಮಿತ.

 ಸಾವಿತ್ರಿಬಾಯಿ  ಅನಕ್ಷರಸ್ಥಳಾಗಿ ಫುಲೆ ಮನೆಗೆ ಕಾಲಿಟ್ಟಾಗ ಕೇವಲ ಒಂಭತ್ತು ವರ್ಷ  ೧೭ ವರ್ಷ ತುಂಬುವಷ್ಟರಲ್ಲಿ ಅಕ್ಷರ ವಿದ್ಯಾಭ್ಯಾಸ ಮಾಡುತ್ತಾ  ಶಿಕ್ಷಕರ ತರಬೇತಿ ಪಡೆದು ಸ್ವಾತಂತ್ರ್ಯ ಪೂರ್ವದಲ್ಲಿ ಭಾರತದ ಪ್ರಥಮ ಮಹಿಳಾ ಶಿಕ್ಷಕಿಯಾದರು. ತನ್ನ ವಿದ್ಯಾಭ್ಯಾಸವನ್ನು ಮುಗಿಸಿ ಸಾಧನೆಗೈದ ಅಪ್ರತಿಮ ಭಾರತೀಯ ಮಹಿಳೆ ಎನಿಸಿಕೊಂಡರು. ಅಂದು ಬ್ರಿಟಿಷ್ ಸರ್ಕಾರವು ಇಂಡಿಯನ್ "ಫಸ್ಟ್ ಲೇಡೀಸ್ ಟೀಚರ್" ಎಂಬ ಬಿರುದನ್ನು ಕೊಟ್ಟು ಸನ್ಮಾನಿಸಿದ್ದರು. ಫುಲೆ ದಂಪತಿಗಳು ತೆರೆದಿದ್ದ ಶಾಲೆಗೆ ತಾವೇ ಶಿಕ್ಷಕಿಯಾಗಿ ಮಕ್ಕಳಿಗೆ ಪಾಠ ಹೇಳಿಕೊಡುತ್ತಿದ್ದರು. ಶಾಲೆಗೆ ಪ್ರತಿದಿನ ಹೋಗುವಾಗ ಕೆಸರಿನಿಂದ ಸಗಣಿಯಿಂದ ಮೈ ಮೇಲೆ ಎಸೆಯುತ್ತಿದ್ದರು. ಕೆಟ್ಟ ಪದಗಳಿಂದ ನಿಂದನೆಗಳು ಮಾಡುತ್ತಿದ್ದರು  ಸವರ್ಣೀಯರು. ಇದೆಲ್ಲ ಸಹಿಸಲಾಗದೆ ನಾನು ಶಾಲೆಗೆ ಹೋಗಿ ಪಾಠ ಮಾಡುವುದಿಲ್ಲ ಎನ್ನುತ್ತಿದ್ದರು. ಜ್ಯೋತಿಬಾಪುಲೆ ಅವರು ಕಿಡಿಗೇಡಿಗಳ ಬೇಜವಾಬ್ದಾರಿಯ  ನಡವಳಿಕೆಗಳಿಗೆ ಹೆದರಬಾರದು ನೀನು ತುಂಬಾ ಧೈರ್ಯವಂತೆ ಎಂದು ಹೇಳಿ ಧೈರ್ಯ ತುಂಬಿ ಸಮಾಧಾನ ಮಾಡಿದರು. ಅವಮಾನಿಸಿದ್ದರೆ ಆತ್ಮಸ್ಥೈರ್ಯ ಕಳೆದುಕೊಳ್ಳಬಾರದು ನಮ್ಮ ದೀರ್ಘ ಹೋರಾಟದ ದಾರಿಯಲ್ಲಿ ಇಂತಹ ಸಣ್ಣಪುಟ್ಟ ಕಿರಿಕಿರಿಗಳು ಪರೀಕ್ಷೆಯೆಂದು ಸಾವಿತ್ರಿಯೂ ಅನಿಸಿತು. ಸಾವಿತ್ರಿಬಾಯಿ ತುಂಬಾ ಉದಾರಿಯಾಗಿದ್ದರು. ಅವರ ಹೃದಯ ಕರುಣಾಮಯವಾಗಿತ್ತು. ಬಡವರ ಅಸಹಾಯಕರ ಕುರಿತು ಬಹಳ ಸಹಾನುಭೂತಿ ಹೊಂದಿದ್ದರು. ತಾನು ಹರಿದ ಸೀರೆವುಟ್ಟು   ಬಡವರಿಗೆ ತನ್ನ ಹೊಸ ಸೀರೆಯನ್ನು ಬೇರೆ ಹೆಣ್ಣು ಮಕ್ಕಳಿಗೆ ಕೊಡುತ್ತಿದ್ದರು. ಸಾವಿತ್ರಿಬಾಯಿ ಶಿಸ್ತಿನ  ಕೆಲಸಗಾರರು ಸೂರ್ಯೋದಯಕ್ಕೆ ಮೊದಲೆ ಎದ್ದು ಸ್ನಾನಮಾಡಿ  ಮನೆ ಸ್ವಚ್ಛವಾಗಿಡುತ್ತಿದ್ದರು. ಫುಲೆ ದಾಂಪತಿಗಳು  ಒಂದನೇ ಜನೆವರಿ ೧೮೪೮ ರಲ್ಲಿ ಪ್ರಥಮ ಕನ್ಯಾ ಶಾಲೆ ಪ್ರಾರಂಭಿಸಿದ್ದರು. ಸುಮಾರು ೧೮ ಶಾಲೆಗಳನ್ನು ತೆರೆದಿದ್ದರು . ಸನಾತನ ಧರ್ಮದ ಪ್ರಬಲ ವಿರೋಧವಿದ್ದರೂ ಶಾಲೆಗಳನ್ನು ತೆರೆದು ಇತಿಹಾಸ ಸೃಷ್ಟಿಸಿದ್ದರು.‌ ಸಾವಿತ್ರಿಬಾಯಿ ಅವರ ಗಮನ ಹೆಚ್ಚು ಹೆಚ್ಚಾಗಿ ಹೆಣ್ಣು ಮಕ್ಕಳ ಮೇಲೆ ಕೇಂದ್ರಕೃತವಾಗಿತ್ತು. "ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ" ಎಂಬ ಗಾದೆಯಂತೆ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಿದರೆ ತನ್ನ ಕುಟುಂಬದ ಜೊತೆಗೆ ಸಮಾಜದಲ್ಲಿ ಪ್ರಗತಿಯನ್ನು ಕಾಣಬಹುದೆಂಬ  ಸತ್ಯವನು ಅರಿತುಕೊಂಡಿದ್ದರು. ಫುಲೆ ದಂಪತಿಗಳು "ಜ್ಞಾನವನ್ನು ಮೂರನೇ ಕಣ್ಣು" ಎನ್ನುತ್ತಿದ್ದರು. ಈ ಭೂಮಿ ಮೇಲೆ ಹುಟ್ಟುವ ಪ್ರತಿಯೊಂದು ಮಗು ವಿಶೇಷವಾದದ್ದು ಮಕ್ಕಳು ಭೂಮಿಯ ಮೇಲಿನ ನಕ್ಷತ್ರಗಳು ಎಂದಿದ್ದಾರೆ. "ಥಾಮ್ ವುಲ್ಫ್" ಸಾವಿತ್ರಿಬಾಯಿ ಫುಲೆ ಬಗ್ಗೆ ಹೀಗೆ ಹೇಳುತ್ತಾರೆ ಸಾವಿರಾರು ಮಕ್ಕಳಿಗೆ ಶಿಕ್ಷಣದ ದೀಪವನ್ನು ಹಚ್ಚಿದ ಆಧುನಿಕ ಶಿಕ್ಷಣದ ತಾಯಿ ಸಾವಿತ್ರಿಬಾಯಿಫುಲೆ ಎಂದಿದ್ದಾರೆ. ಹೀಗೆ ಸಾವಿತ್ರಿಬಾಯಿಫುಲೆಯವರು ಒಬ್ಬ ಸ್ತ್ರೀಯಾಗಿ, ಒಬ್ಬರ ಹೆಂಡತಿಯಾಗಿ, ಶಿಕ್ಷಕಿಯಾಗಿ ,ಮುಖೋ ಪಾಧ್ಯಾಯನಿಯಾಗಿ ,ಸಮಾಜ ಸೇವಕಿಯಾಗಿ ಕೆಲಸ  ನಿರ್ವಹಿಸಿದ್ದ ಮಹಾತಾಯಿ ಸಾವಿತ್ರಿಬಾಯಿ ಫುಲೆ....!

 "ಕೈಯಲ್ಲಿ ಹಿಡಿದರೆ ಲೇಖನಿ ಮೂಡುವುದು ಅಕ್ಷರದ ಖನಿ !ಕೈಯಲ್ಲಿ ಹಿಡಿದರೆ ಲೇಖನಿ ಮೂಡುವುದು ಚಿತ್ತಾರದ ಗಣಿ" ಎಂದು ಹೇಳುತ್ತ  ಶಿಕ್ಷಕರ ದಿನಾಚರಣೆಯ ಹಾರ್ದಿಕ ಶುಭಾಶಯಗಳು!

  -ಶ್ರೀಮತಿ ಬುದ್ಧದೇವಿ ಅಶೋಕ್ ಸಂಗಮ  ತಾ:ಜಿಲ್ಲೆ :ಬೀದರ್

ಶತಮಾನದ ಸಂತ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಶ್ರೀಗಳ ಪುಣ್ಯ ಸ್ಮರಣೆ:

 ಈ ಜಗತ್ತಿನಲ್ಲಿ ಅನೇಕ ಸಾಧು ಸಂತ ಮಹನೀಯರನ್ನು ನೋಡಿದ್ದೇವೆ ಕೇಳಿದ್ದೇವೆ, ಆದರೆ ಈಗಿನ ಕಾಲದಲ್ಲಿ ಜನರಿಗೆ ಸಾಧು ಸಂತ ಎಂದರೆ ಯಾರು ಎಂಬುದು ಸರಿಯಾಗಿ ತಿಳಿದಿಲ್ಲ. ಜಗತ್ತಿನ ಎಲ್ಲಾ ಕಾಮನೆಗಳನ್ನು ತೊರೆದು ಜಗತ್ತಿನ ಕಲ್ಯಾಣಕ್ಕಾಗಿ ಜನರ ಸೇವೆಗಾಗಿ ಸದಾ ತಮ್ಮನ್ನು ತಾವು ತೊಡಗಿಸಿಕೊಂಡು ಅದರ ಜೊತೆಗೆ ಆತ್ಮ ಪರಮಾತ್ಮನ ಸಾಕ್ಷಾತ್ಕಾರಕ್ಕೆ ಹಂಬಲಿಸುವವರೆ ಸಾಧು ಸಂತರು ಶರಣರು ಸನ್ಯಾಸಿಗಳು ದಾರ್ಶನಿಕರು. ಹೇಗೆ ಒಂದು ಜೇನುಹುಳು ಹೂವಿನ ಮೇಲೆ ಕುಳಿತು ಮಕರಂದವನ್ನು ಮಾತ್ರ ಹಿರಿಕೊಳ್ಳುವವೋ ಹಾಗೆಯೇ ಒಬ್ಬ ಸಂತ ಮಹನೀಯನು ಸಹ ಬೇರೆಯಾವ ವಿಷಯಗಳ ಬಗ್ಗೆ ಯೋಚಿಸದೆ ಸದಾ ಲೋಕಕಲ್ಯಾಣಕ್ಕಾಗಿ ತಮ್ಮನ್ನು ತಾವು ಸಂಪೂರ್ಣವಾಗಿ  ಅಂತಃಕರಣ ಶುದ್ಧಿಯಿಂದ ತೊಡಗಿಸಿಕೊಂಡವರೆ ಸಂತ ಶರಣ ದಾರ್ಶನಿಕ. ಅವರ ಸಾಲಿನಲ್ಲಿ ಮೊದಲಪಂಕ್ತಿಯಲ್ಲಿ ಬರುವವರೇ ಈ ಶತಮಾನದ  ಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳು.




ಸಿದ್ಧೇಶ್ವರ ಸ್ವಾಮೀಜಿ ಕರುನಾಡ ಕಂಡ ಅತ್ಯಂತ ಸರಳ ಸಜ್ಜನಿಕೆಯ ಸಾಕಾರ ಮೂರ್ತಿ, ನನ್ನದು-ತನ್ನದೆಂಬ ಆಸೆಯನ್ನು ತೊರೆದ ಮಹಾಪುರುಷರೇ ಶ್ರೀ ಸಿದ್ಧೇಶ್ವರ ಸ್ವಾಮಿಗಳವರು, ಇವರು ಸಂತರಷ್ಟೇ ಅಲ್ಲ ಜ್ಞಾನೋಪಾಸಕರು ಕೂಡ. ಈ ನಾಡಿನಲ್ಲಿ ಅನೇಕ ಸಂತರು ಸಾಧುಗಳು ಸತ್ಪುರುಷರು ಇದ್ದಾರೆ, ಇಂದಿನ ಪೀಳಿಗೆಯಲ್ಲಿ ಜ್ಞಾನಯೋಗಿಗಳು ಬಹಳ ಅಪರೂಪ. ಜಗತ್ತಿನ ಕಲ್ಯಾಣಕ್ಕಾಗಿ ಜನರ ಸೇವೆಗಾಗಿ ಸದಾ ಸಮರ್ಪಿತಭಾವದಿಂದ ಬದುಕಿದ ಯೋಗಿ, ಇವರ ಮಾತು ಎಂತಹ ಕಲ್ಲು ಮನಸ್ಸಿನವರನ್ನು ಸನ್ಮಾರ್ಗ ದೆಡೆಗೆ ಕರೆದೊಯ್ಯುವ ಶಕ್ತಿಯುಳ್ಳ ಮಹಾನ್ ಸಂತರಾಗಿದ್ದರು.

ಶ್ರೀ ಸಿದ್ದೇಶ್ವರ ಸ್ವಾಮಿಜಿಗಳ ಬಾಲ್ಯ ಜೀವನ:
ಶ್ರೀಗಳು ವಿಜಯಪೂರ ಜಿಲ್ಲೆ ಬಿಜ್ಜರಗಿ ಗ್ರಾಮದ ಸಾಮಾನ್ಯ ರೈತ ಕುಟುಂಬದಲ್ಲಿ 1941 ಅಕ್ಟೋಬರ್ 24 ರಂದು ಜನಿಸಿದರು.  ಸಿದ್ದಗೊಂಡಪ್ಪ ಇವರ ಬಾಲ್ಯದ ಹೆಸರು.
ಊರಿನಲ್ಲಿಯೇ ಪ್ರಾಥಮಿಕ ಶಿಕ್ಷಣ ನಾಲ್ಕನೇ ತರಗತಿವರೆಗೆ ಓದಿದ ನಂತರ ಅವರು ಮಲ್ಲಿಕಾರ್ಜುನ ಸ್ವಾಮಿಗಳ ಬಳಿ ಹೋದರು.
'ಬೆಳೆಯುವ ಪೈರು ಮೊಳಕೆಯಲ್ಲೇ’ ಎಂಬಂತೆ ಬಾಲಕ ಸಿದ್ಧೇಶ್ವರರ  ಚುರುಕುತನ ಮಲ್ಲಿಕಾರ್ಜುನ ಸ್ವಾಮಿಗಳ ಗಮನಕ್ಕೆ ಬರಲು ತಡವಾಗಲಿಲ್ಲ. ತಾವು ಪ್ರವಚನ ಮಾಡುವ ಸ್ಥಳಗಳಿಗೆ ಮಲ್ಲಿಕಾರ್ಜುನ ಸ್ವಾಮಿಗಳು ಸಿದ್ಧೇಶ್ವರರನ್ನು ಕರೆದೊಯ್ಯ ತೊಡಗಿದರು. ಜೊತೆಯಲ್ಲಿಯೇ ಅವರ ಶಾಲಾ ಕಾಲೇಜುಗಳ ವಿದ್ಯಾಭ್ಯಾಸವೂ ಮುಂದುವರಿಯುವಂತೆ ನೋಡಿಕೊಂಡರು. ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪದವಿ ನಂತರ ಸ್ನಾತಕೋತ್ತರ ವಿದ್ಯಾಭ್ಯಾಸಕ್ಕೆ ಕೊಲ್ಹಾಪುರ ವಿಶ್ವವಿದ್ಯಾನಿಲಯದಿಂದ ತತ್ವಶಾಸ್ತ ವಿಷಯದಲ್ಲಿ ಎಂ.ಎ ಪದವಿಯನ್ನು ಮುಗಿಸಿದರು.

ಜ್ಞಾನಯೋಗಾಶ್ರಮ:
ವಿಜಯಪುರದ ಜ್ಞಾನಯೋಗಾಶ್ರಮ ಜನತೆಗೆ ಜ್ಞಾನದಾಸೋಹ ನೀಡುವ ವಿಶಿಷ್ಟ ಕೇಂದ್ರ. ಗದುಗಿನ ಶಿವಾನಂದ ಶ್ರೀಗಳ ಪರಂಪರೆಯಲ್ಲಿ ಬಂದ ಈ ಆಶ್ರಮ ಇವರ ಗುರುಗಳಾದ ವೇದಾಂತ ಕೇಸರಿ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳ ಕಾಲದಲ್ಲಿ ಅತ್ಯಂತ ಹೆಸರುವಾಸಿಯಾಗಿತ್ತು.  ಉತ್ತರ ಕರ್ನಾಟಕದ ಜನಮಾನಸದಲ್ಲಿ ಅತ್ಯಂತ ಮಹತ್ವ ಪಡೆಯಿತು. ನಿಸ್ವಾರ್ಥ ಸೇವೆ, ಜಾತಿ ಮತ ಕೀಳು ಮೇಲು ಎಂಬ ಭೇದಭಾವಗಳಿಲ್ಲದೆ, ಯಾರ ಹಂಗಿಗೂ ಒಳಗಾಗದೆ ಸರ್ವಜನರಿಂದಲೂ ಪ್ರೀತಿ, ವಿಶ್ವಾಸದ ಆಶ್ರಯತಾಣವಾಗಿ ಬೆಳೆಯಿತು. ಪೂಜ್ಯ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು ಪ್ರವಚನದ ಮೂಲಕ ಜನರಲ್ಲಿ ಜ್ಞಾನದ ಜ್ಯೋತಿಯನ್ನು ಬೆಳಗುತ್ತಿದ್ದರು. ಕರ್ನಾಟಕವಲ್ಲದೆ ಮಹಾರಾಷ್ಟ್ರದ ಪ್ರಮುಖ ನಗರಗಳಲ್ಲಿ ತಿಂಗಳುಗಟ್ಟಲೆ ಪ್ರವಚನ ನೀಡುತ್ತಿದ್ದರು. ಇವರ ಗಾಢ ಪ್ರಭಾವ ಸುತ್ತಮುತ್ತಲ ಜನರ ಮೇಲೆ ಉಂಟಾಗಿ ಕ್ರಮೇಣ ಶ್ರೀಗಳು ಗ್ರಾಮೀಣ ಪ್ರದೇಶದ ಮಕ್ಕಳು ವಿದ್ಯೆಗಾಗಿ ಕಷ್ಟಪಡುತ್ತಿದ್ದುದನ್ನು ಗಮನಿಸಿ ಅವರಿಗಾಗಿ ವಿದ್ಯಾಸಂಸ್ಥೆಗಳನ್ನು ಪ್ರಾರಂಭಿಸಿ ಅವರಿಗೆ ಊಟ, ವಸತಿಗಳಿಗೆ ವ್ಯವಸ್ಥೆ ಮಾಡಿದ್ದರು. ಇದರಿಂದಾಗಿ ಸಾವಿರಾರು ಮಕ್ಕಳು ವಿದ್ಯಾವಂತರಾದರು. ಹಾಗೆ ವಿದ್ಯೆ ಕಲಿಯಲು ಬಂದ ಸಾವಿರಾರು ಮಕ್ಕಳಲ್ಲಿ ಶ್ರೀ ಸಿದ್ದೇಶ್ವರರೂ ಒಬ್ಬರಾಗಿದ್ದರು.
ಪರಮ ಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳು ಆಧ್ಯಾತ್ಮದ ಬಗ್ಗೆ ತುಂಬ ಆಳವಾದ ಅಧ್ಯಯನ ಚಿಂತನೆಗಳನ್ನು ನಡೆಸಿರುವ ಶ್ರೇಷ್ಠ ಅನುಭಾವಿಗಳೂ, ಮಧುರ ಸ್ವಭಾವದವರೂ ಆಗಿದ್ದು ಪಂಚಭಾಷಾ ನಿಪುಣರಾಗಿದ್ದರು. ಕನ್ನಡ ಸಂಸ್ಕೃತ ಹಿಂದಿ ಮರಾಠಿ ಇಂಗ್ಲಿಷ್ ಭಾಷೆಗಳ ಜ್ಞಾನವನ್ನು ಹೊಂದಿರುವ ಇವರು
ಆಧ್ಯಾತ್ಮಿಕದಂತೆ ಲೌಕಿಕ ವಿಷಯಗಳಲ್ಲೂ ವಿಶೇಷ ಜ್ಞಾನ ಹೊ0ದಿದ್ದ ಶ್ರೀಗಳು ಮುಂದೆ ಜಗತ್ತಿಗೇ ದೊಡ್ಡವನಾಗುತ್ತಾನೆ ಎಂದು ವಿಶ್ವಾಸದಿಂದ ಎಲ್ಲರೆದುರು ಹೇಳುತ್ತಿದ್ದರು. ಸ್ನಾತಕೋತ್ತರ ಪದವಿ ಪಡೆದು ಬಿಜಾಪುರಕ್ಕೆ ಹಿಂದಿರುಗಿದ ನಂತರ ಸಿದ್ದೇಶ್ವರರಿಗೆ ಭಗವದ್ಗೀತೆಯ ಬಗ್ಗೆ, ಉಪನಿಷತ್ತುಗಳ ಬಗ್ಗೆ ಮಲ್ಲಿಕಾರ್ಜುನ ಸ್ವಾಮಿಗಳು ಸವಿಸ್ತಾರವಾಗಿ ಅಭ್ಯಾಸವನ್ನು ನೀಡಿ ಅವರ ಜ್ಞಾನದಿಂಗಿತವನ್ನು ವಿಸ್ತರಿಸಿದರು. ಪೂಜ್ಯರು ಉಪನಿಷತ್ತುಗಳು, ಭಗವದ್ಗೀತೆ, ಯೋಗಸೂತ್ರ, ವಚನಶಾಸ್ತ್ರ ಮುಂತಾದ ವಿಷಯಗಳ ಬಗೆಗೆ ತಾವು ಹೇಗೆ ಗುರುಗಳಿಂದ ಕಲಿತ ಜ್ಞಾನವನ್ನು ಬಳಸಿಕೊಂಡು ಪ್ರವಚನಗಳನ್ನು ನೀಡುತ್ತಿದ್ದರು. ಸೂಕ್ಷ್ಮ ವಿಚಾರಗಳನ್ನು, ವೇದಾಂತ ತತ್ವಗಳನ್ನು ಅತ್ಯಂತ ಸರಳವಾಗಿ ಜನರ ಮನಸ್ಸಿನಲ್ಲಿ  ಉಳಿಯುವಂತೆ ಅತ್ಯಂತ ಸರಳವಾಗಿ ವಿವರಿಸುವುದೇ ಅವರ ವೈಶಿಷ್ಟ್ಯ.

ಪ್ರಶಸ್ತಿ ಗೌರವಗಳು ಬೇಕೆಂದು ವಿಧಾನಸೌಧದಲ್ಲಿ ಎಲ್ಲಾ ಮಂತ್ರಿಗಳ ಕೈ ಕಾಲು ಹಿಡಿದು , ಧನ ದ್ರವ್ಯವನ್ನು ಕೊಟ್ಟು ಅನೇಕರಿಂದ ಶಿಫಾರಸ್ಸು ಪಡೆದು ಪ್ರಶಸ್ತಿ ಕೇಳುವ ಜನರನ್ನು ನಾವು ನೋಡಿದ್ದೇವೆ ಪ್ರಶಸ್ತಿಗಾಗಿ ಗಲ್ಲಿ ಗಲ್ಲಿಗಳಲ್ಲಿ ಸುತ್ತಾಡಿ ಪ್ರಶಸ್ತಿಯನ್ನು ಸ್ವೀಕರಿಸುತ್ತಾರೆ. ಪ್ರಶಸ್ತಿ ಗೌರವ ಮನ್ನಣೆಗಾಗಿ ಹಪಹಪಿಸುವ ಜನರ ನಡುವೆ ಪ್ರಶಸ್ತಿ ಪುರಸ್ಕಾರಗಳನ್ನು  ನಗುನಗುತ್ತಲೇ ತಿರಸ್ಕರಿಸಿದ ಸರಳ ವ್ಯಕ್ತಿಯನ್ನು ಎಲ್ಲೂ ಕಾಣಲು ಸಾಧ್ಯವಿಲ್ಲ. ಅವರು ಆಧ್ಯಾತ್ಮ, ಆದರ್ಶ ಮತ್ತು ನೈತಿಕತೆ ಬಗ್ಗೆ ಕೇವಲ ಬೋಧನೆ ಮಾಡುವುದಷ್ಟೇ ಅಲ್ಲ. ಅವುಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದ್ದ ಅವರು ನುಡಿದಂತೆ ನಡೆಯುವ ಮತ್ತು ನಡೆದಂತೆಯೇ ನುಡಿಯುವ ವ್ಯಕ್ತಿತ್ವದವರಾಗಿದ್ದರು.
ಭಾರತ ಸರಕಾರ ಇವರ ಕಾರ್ಯವನ್ನು ಗುರುತಿಸಿ ಇವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಲು ಹೆಸರು ಘೋಷಿಸಿತ್ತು ಆದರೆ ಶ್ರೀಗಳು "ಭಾರತ ಸರಕಾರ ನೀಡುವ ಅತ್ಯುನ್ನತ ನಾಗರಿಕ ಗೌರವ ಪ್ರಶಸ್ತಿಗಳ ಮೇಲೆ ನನಗೆ ಅಪಾರ ಗೌರವವಿದೆ. ಪದ್ಮಶ್ರೀ ಪ್ರಶಸ್ತಿ ಘೋಷಿಸಿದ್ದಕ್ಕೆ ಧನ್ಯವಾದಗಳು. ಆದರೆ ನಾನೊಬ್ಬ ಸರಳ ವ್ಯಕ್ತಿ. ಸಾಮಾನ್ಯ ಜೀವನ ನಡೆಸುತ್ತ, ಆಧ್ಯಾತ್ಮಿಕ ಬೋಧನೆಯ ಮೂಲಕ ಜನರ ಜೀವನ ಉದಾತ್ತಗೊಳಿಸುವುದು ಉದ್ದೇಶ ನನ್ನದು ಹಾಗಾಗಿ ಪ್ರಶಸ್ತಿಗಳ ಅವಶ್ಯಕತೆಯು ನನಗಿಲ್ಲ. ಎಲ್ಲ ಗೌರವಾದರಗಳೊಂದಿಗೆ ಈ ಪ್ರಶಸ್ತಿಯನ್ನು ಹಿಂದಿರುಗಿಸುತ್ತಿದ್ದೇನೆ. ಅನ್ಯಥಾ ಭಾವಿಸದಿರಿ" ಎಂದು ಸಿದ್ದೇಶ್ವರ ಸ್ವಾಮೀಜಿಗಳು ಪದ್ಮಶ್ರೀ ಪ್ರಶಸ್ತಿಯನ್ನು ನಿರಾಕರಿಸಿದ್ದರು. ಅದೇರೀತಿಯಾಗಿ ಕರ್ನಾಟಕ ವಿಶ್ವವಿದ್ಯಾನಿಲಯ ಅವರಿಗೆ ಗೌರವ ಡಾಕ್ಟರೇಟ್ ಪ್ರಕಟಿಸಿತ್ತು. ಅದನ್ನೂ ಸಹ ಶ್ರೀಗಳು ಸ್ವೀಕರಿಸಿರಲಿಲ್ಲ. ಹೀಗೆ ತಮಗೆ ಒದಗಿ ಬಂದ ಎಷ್ಟೋ ಪ್ರಶಸ್ತಿ ಪುರಸ್ಕಾರಗಳನ್ನು ಅವರು ವಿನಮೃವಾಗಿಯೇ ನಿರಾಕರಿಸಿದ್ದರು. ಇವರ ಜ್ಞಾನ ದೇಶ ವಿದೇಶಗಳಲ್ಲಿ ಪಸರಿಸಿದೆ. ಸಿದ್ಧೇಶ್ವರ ಸ್ವಾಮೀಜಿ ಎಂತಹ ಸರಳ ವ್ಯಕ್ತಿಯನ್ನು ಎಲ್ಲಿಯೂ ನೋಡಲು ಸಾಧ್ಯವಿಲ್ಲ. ಇವರು ಕಿಸೆ ಇಲ್ಲದ ಸ್ವಾಮೀಜಿ ಎಂದೇ ಹೆಸರು ವಾಸಿಯಾಗಿದ್ದವರು. ಜ್ಞಾನದಲ್ಲಿ ಬೃಹತ್ ಪರ್ವತದಂತೆ ಕಾಣುತ್ತಿದ್ದರು. ಅತ್ಯಂತ ಸುಂದರ ಸರಳ ರೀತಿಯಲ್ಲಿ ಪ್ರವಚನ ಹೇಳುತ್ತಿದ್ದ  ಇವರು ಜ್ಞಾನದ ನಿಧಿಯಾಗಿದ್ದರು. ಶತಮಾನದ ಸಂತ ಸಿದ್ಧೇಶ್ವರ ಶ್ರೀಗಳು ದಿನಾಂಕ 2 ಜನೆವರಿ 2023 ರಂದು ವಿಜಯಪುರದ ಜ್ಞಾನಯೋಗಾಶ್ರಮದಲ್ಲಿ ಇಹಲೋಕ ತ್ಯಜಿಸಿದರು. ನಮ್ಮನ್ನಗಲಿ ಇಂದಿಗೆ 2 ವರ್ಷ ಕಳೆದರೂ ಅವರು ಹೇಳಿಕೊಟ್ಟ  ನೀತಿಪಾಠ ಅಧ್ಯಾತ್ಮದ ಅರಿವು, ಸರಳತೆಯ ಸೂತ್ರ, ವಿಶ್ವ ಶಾಂತಿ, ಪರಸ್ಪರ ಪ್ರೇಮದ ಸಾಲುಗಳು ಇಂದಿಗೂ ನಮ್ಮ ಮನ ಮನದಲ್ಲಿ ಅಚ್ಚಳಿಯದೆ ಉಳಿದಿವೆ. ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿಗಳ 2ನೆಯ ವಾರ್ಷಿಕ ಪುಣ್ಯಸ್ಮರಣೆ ನಿಮಿತ್ತ ಈ ಲೇಖನ.
-ಸಿದ್ಧಲಿಂಗ ಶಿವಯೋಗಿ ಮಠಪತಿ ಸ್ವಾಮಿ ಉಚ್ಚಾ ತಾ. ಭಾಲ್ಕಿ ಜಿ. ಬೀದರ್

2024ರ ಲೋಕಸಭಾ ಚುನಾವಣೆಯ ಕುರಿತು ವಿಶೇಷ ಲೇಖನ ವಿಶ್ವದ ಅತಿದೊಡ್ಡ ಚುನಾವಣೆಯ ಕುರಿತು ಭಾರತ ಚುನಾವಣಾ ಆಯೋಗದಿಂದ ದತ್ತಾಂಶ ಪ್ರಕಟ

 ಬೀದರ :- 2024ರ ಲೋಕಸಭಾ ಚುನಾವಣೆ ಮತ್ತು ಜೊತೆಯಲ್ಲಿ ನೆಡೆದ 4 ರಾಜ್ಯಗಳ ವಿಧಾನಸಭಾ ಚುನಾವಣೆಗಳ ಸಂಕ್ಷಿಪ್ತ ಡೇಟಾವನ್ನು ಆಯೋಗ ಬಿಡುಗಡೆ ಮಾಡಿದೆ. ವಿಶ್ವಾದ್ಯಂತ ಶಿಕ್ಷಣ ತಜ್ಞರು, ಸಂಶೋಧಕರು, ಚುನಾವಣಾ ವೀಕ್ಷಕರು ಸೇರಿದಂತೆ ಮತದಾರರಿಗೆ ಇದು ಅನುಕೂಲವಾಗಬಲ್ಲದು ಎಂದು ಭಾರತ ಚುನಾವಣಾ ಆಯೋಗವು ಪ್ರಕಟಣೆಯಲ್ಲಿ ತಿಳಿಸಿದೆ.

ಭಾರತದ ಚುನಾವಣಾ ಆಯೋಗವು 2024 ರ ಲೋಕಸಭಾ ಚುನಾವಣೆಗೆ ಸಂಬAಧಿಸಿದAತೆ 42 ಅಂಕಿ ಅಂಶಗಳ ವರದಿಗಳು ಮತ್ತು ಆಂಧ್ರಪ್ರದೇಶ, ಅರುಣಾಚಲ ಪ್ರದೇಶ, ಒಡಿಶಾ ಮತ್ತು ಸಿಕ್ಕಿಂ ಸೇರಿ ನಾಲ್ಕು ರಾಜ್ಯಗಳಲ್ಲಿ ಏಕಕಾಲದಲ್ಲಿ ನಡೆದ ವಿಧಾನಸಭಾ ಚುನಾವಣೆಗಳಿಗೆ ಸಂಬAಧಿಸಿದAತೆ 14 ಅಂಕಿಅAಶಗಳ ವರದಿಗಳ ಸಮಗ್ರ ದತ್ತಾಂಶಗಳನ್ನು ಬಿಡುಗಡೆ ಮಾಡಿದೆ. ಆಯೋಗದ ಈ ಸ್ವಯಂ ಪ್ರೇರಿತ ಕಾರ್ಯವು ಭಾರತದ ಚುನಾವಣಾ ವ್ಯವಸ್ಥೆಯ ಆಧಾರವಾಗಿರುವ ಸಾರ್ವಜನಿಕ ನಂಬಿಕೆಯನ್ನು ಹೆಚ್ಚಿಸುವ ಉದ್ದೇಶವನ್ನು ಹೊಂದಿದ್ದು, ವ್ಯಾಪಕವಾದ, ಸವಿವರವಾದ ದತ್ತಾಂಶ ಬಿಡುಗಡೆಯು, ಶೈಕ್ಷಣಿಕ, ಸಂಶೋಧನೆ ಮತ್ತು ಸಾರ್ವಜನಿಕರು ಸೇರಿದಂತೆ ಎಲ್ಲಾ ಪಾಲುದಾರರಿಗೆ ಚುನಾವಣೆಗೆ ಸಂಬAಧಿಸಿದ ದತ್ತಾಂಶದ ಪ್ರತಿ ವಿವರಗಳನ್ನು ಬಹಿರಂಗಪಡಿಸುವಿಕೆಯ ಮೂಲಕ ಹೆಚ್ಚಿನ ಪಾರದರ್ಶಕತೆ ಕಾಪಾಡಿಕೊಳ್ಳುವುದು ಆಯೋಗದ ನೀತಿಯ ಮುಂದುವರಿಕೆಯಾಗಿದೆ.
ಈ ದತ್ತಾಂಶ ವಿವರಗಳು ವಿವಿಧ ರೀತಿಯ ಮಾಹಿತಿಗಳನ್ನು ಒಳಗೊಂಡಿವೆ, ಉದಾಹರಣೆಗೆ ಲೋಕಸಭಾ ಕ್ಷೇತ್ರ, ವಿಧಾನಸಭಾ ಕ್ಷೇತ್ರ, ರಾಜ್ಯವಾರು ಮತದಾರರ ವಿವರಗಳು, ಮತದಾನ ಕೇಂದ್ರಗಳ ಸಂಖ್ಯೆ ರಾಜ್ಯ, ಲೋಕಸಭಾ ಕ್ಷೇತ್ರವಾರು ಮತದಾರರ ಮತದಾನ, ಪಕ್ಷವಾರು ಮತ ಹಂಚಿಕೆ, ಲಿಂಗ ಆಧಾರಿತ ಮತದಾನದ ನಡವಳಿಕೆ, ರಾಜ್ಯವಾರು ಮಹಿಳಾ ಮತದಾರರ ಭಾಗವಹಿಸುವಿಕೆ, ಪ್ರಾದೇಶಿಕ ವ್ಯತ್ಯಾಸಗಳು, ಕ್ಷೇತ್ರವಾರು ದತ್ತಾಂಶ ಸಾರಾಂಶ ವರದಿ, ರಾಷ್ಟ್ರೀಯ, ರಾಜ್ಯ ಪಕ್ಷಗಳು, ಆರ್ಯುಪಿಪಿಗಳ ಕಾರ್ಯಕ್ಷಮತೆ, ವಿಜೇತ ಅಭ್ಯರ್ಥಿಗಳ ವಿಶ್ಲೇಷಣೆ, ಕ್ಷೇತ್ರವಾರು ಸೇರಿದಂತೆ ವಿವರವಾದ ಫಲಿತಾಂಶಗಳು ಮತ್ತು ಇನ್ನೂ ಅನೇಕ ಆಳವಾದ ಒಳನೋಟಗಳು ಮತ್ತು ವಿಶ್ಲೇಷಣೆಗಳನ್ನು ನಡೆಸಲು ಸಿದ್ಧಪಡಿಸಲಾದ ಈ ದತ್ತಾಂಶವನ್ನು ಸಂಶೋಧಕರು, ನೀತಿ ನಿರೂಪಕರು ಮತ್ತು ಪತ್ರಕರ್ತರು ಈಗ ಬಳಸಿಕೊಳ್ಳಬಹುದಾಗಿದೆ.
2024 ರ ಸಾರ್ವತ್ರಿಕ ಲೋಕಸಭಾ ಚುನಾವಣೆ ದತ್ತಾಂಶಗಳ ಸವಿವರವಾದ ವರದಿ ಮತ್ತು ಅಂಕಿ-ಅAಶಗಳನ್ನು ಭಾರತ ಚುನಾವಣಾ ಆಯೋಗದ ವೆಬ್ ಸೈಟ್  https://www.ect.gov.in/statistical-reports     ಮೂಲಕ ಪಡೆದುಕೊಳ್ಳಬಹುದು. ಲೋಕಸಭಾ ಸಾರ್ವತ್ರಿಕ ಚುನಾವಣೆ 2024 ಕ್ಕೆ ಸಂಬAಧಿಸಿದAತೆ ಕೆಲವು ಮುಖ್ಯ ಅಂಶಗಳನ್ನು ವರದಿಯಲ್ಲಿ ಗಮನಿಸಬಹುದಾಗಿದೆ.
ಮತದಾರರ ವಿವರ: ಲೋಕಸಭೆ ಚುನಾವಣೆ 2019 ರಲ್ಲಿ 91,19,50,734 ಕ್ಕೆ ಹೊಲಿಸಿದರೆ, 2024 ರಲ್ಲಿ 97,97,51,847 ನೋಂದಾಯಿತ ಮತದಾರರಿದ್ದಾರೆ. 2019 ಕ್ಕಿಂತ 2024 ರಲ್ಲಿ ಒಟ್ಟು ಮತದಾರರಲ್ಲಿ ಶೇ. 7.43 ರಷ್ಟು ಹೆಚ್ಚಳವಾಗಿದೆ. 2024 ರಲ್ಲಿ 64.64 ಕೋಟಿ ಮತಗಳು ಚಲಾವಣೆಯಾಗಿವೆ. ಆದರೆ 2019 ರಲ್ಲಿ 61.4 ಕೋಟಿ ಮತಗಳು ಚಲಾವಣೆಯಾಗಿದ್ದವು. ಇವಿಎಂ ಮತ್ತು ಅಂಚೆ ಮತಗಳು ಸೇರಿ 64,64,20,869 ಮತಗಳು ಚಲಾವಣೆಯಾಗಿದ್ದವು ಇದರಲ್ಲಿ 64,21,39,275 ಇವಿಎಂ ಮತಗಳು ಇದರಲ್ಲಿ 32,93,61,948 ಪುರುಷರು ಮತ್ತು 31,27,64,269 ಮಹಿಳೆಯರು ಮತ್ತು 13,058 ತೃತೀಯ ಲಿಂಗ ಮತದಾರರು ಮತ ಚಾಲಿಯಿಸಿದ್ದಾರೆ. 42,81,594 ಅಂಚೆ ಮತ ಪತ್ರಗಳು ಬಂದಿವೆ.
ಆಸ್ಸಾಂ ರಾಜ್ಯದ ಧುಬ್ರಿ ಲೋಕಸಭಾ ಮತಕ್ಷೇತ್ರದಲ್ಲಿ ಅತಿ ಹೆಚ್ಚು ಶೇ. 92.3 ರಷ್ಟು ಮತದಾನವಾಗಿದೆ. ಹಾಗೂ ಜಮ್ಮು ಮತ್ತು ಕಾಶ್ಮೀರದ ಶ್ರೀನಗರ ಲೋಕಸಭಾ ಮತಕ್ಷೇತ್ರದಲ್ಲಿ ಅತಿ ಕಡಿಮೆ ಶೇ. 38.7 ರಷ್ಟು ಮತದಾನವಾಗಿದೆ. ಇಲ್ಲಿ 2019 ರ ಲೋಕಸಭಾ ಚುನಾವಣೆಯಲ್ಲಿ ಶೇ. 14.4 ರಷ್ಟು ಮತದಾನವಾಗಿತ್ತು. ದೇಶದಲ್ಲಿ 11 ಲೋಕಸಭಾ ಮತಕ್ಷೇತ್ರದಲ್ಲಿ ಶೇ. 50 ಕ್ಕಿಂತ ಕಡಿಮೆ ಮತದಾನವಾಗಿದೆ. 2024 ರಲ್ಲಿ 63,71,839 (ಶೇ.0.99) ನೋಟಾ ಮತಗಳಾಗಿವೆ. ಇದು 2019 ರಲ್ಲಿ ಶೇ. 1.06 ರಷ್ಟಿತ್ತು. ಶೇ. 27.09 ರಷ್ಟು ಲಿಂಗ ಪರಿವರ್ತಿತ ಮತದಾರರು ಮತದಾನ ಮಾಡಿದ್ದಾರೆ.
ಮತದಾನ ಕೇಂದ್ರಗಳು: 2019 ರಲ್ಲಿ 10,37,848 ಕ್ಕೆ ಹೋಲಿಸಿದರೆ 2024 ರಲ್ಲಿ 10,52,664 ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. 40 ಮತಗಟ್ಟೆಗಳಲ್ಲಿ ಮಾತ್ರ ಮರುಮತದಾನ ಮಾಡಲಾಗಿದೆ. ಒಂದು ಮತಗಟ್ಟೆಗೆ ಮತದಾರರ ಸರಾಸರಿ ಸಂಖ್ಯೆ, 931 ಆಗಿದೆ. ಅತಿ ಹೆಚ್ಚು ಮತಗಟ್ಟೆ 1,62,069 ಹೊಂದಿರುವ ರಾಜ್ಯ ಉತ್ತರ ಪ್ರದೇಶವಾಗಿದ್ದು, ಕಡಿಮೆ ಸಂಖ್ಯೆಯ 55 ಮತಗಟ್ಟೆ ಹೊಂದಿರುವ ಲಕ್ಷದ್ವೀಪ ಕೇಂದ್ರಾಡಳಿತ ಪ್ರದೇಶವಾಗಿದೆ. 1000 ಗಿಂತ ಕಡಿಮೆ ಮತಗಟ್ಟೆ ಇರುವ ಸಂಸದೀಯ ಕ್ಷೇತ್ರಗಳ ಸಂಖ್ಯೆ, 11 ಆಗಿದೆ. 3000 ಗಿಂತ ಹೆಚ್ಚಿನ ಮತಗಟ್ಟೆ ಇರುವ ಸಂಸದೀಯ ಕ್ಷೇತ್ರಗಳ ಸಂಖ್ಯೆ, 3 ಆಗಿದ್ದು, 2019 ಕ್ಕೆ ಹೋಲಿಸಿದರೆ 2024 ರಲ್ಲಿ ಅತಿ ಹೆಚ್ಚು ಹೊಸ ಮತದಾನ ಕೇಂದ್ರಗಳನ್ನು ಹೊಂದಿರುವ ಬಿಹಾರ (4739) ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಾಗಿವೆ (1731).
ನಾಮನಿರ್ದೇಶನಗಳು: 2019 ರಲ್ಲಿ ಸಲ್ಲಿಕೆಯಾಗಿದ್ದ 11,692 ನಾಮಪತ್ರಗಳಿಗೆ ಹೋಲಿಸಿದರೆ 2024 ರಲ್ಲಿ 12,459 ನಾಮಪತ್ರಗಳು ಸಲ್ಲಿಕೆಯಾಗಿವೆ. ದೇಶದಲ್ಲಿಯೇ ಅತಿ ಹೆಚ್ಚು ನಾಮಪತ್ರಗಳನ್ನು ತೆಲಂಗಾಣ ಜಿಲ್ಲೆಯ ಮಲ್ಕಾಜ್ಗಿರಿ ಲೋಕಸಭಾ ಮತಕ್ಷೇತ್ರದಲ್ಲಿ 114 ನಾಮಪತ್ರಗಳು ಸ್ವೀಕೃತವಾಗಿದ್ದರೆ. ಆಸ್ಸಾಂ ರಾಜ್ಯದ ದಿಬ್ರುಗಡ್ ಲೋಕಸಭಾ ಕ್ಷೇತ್ರದಲ್ಲಿ 3 ನಾಮಪತ್ರಗಳು ಸಲ್ಲಿಕೆಯಾಗಿವೆ.
ಮಹಿಳಾ ಶಕ್ತಿ: ನೋಂದಾಯಿತ ಮತದಾರರು: 2024 ರಲ್ಲಿ ಒಟ್ಟು 97,97,51,847 ಮತದಾರರಿದ್ದು, ಇದರಲ್ಲಿ ಮಹಿಳಾ ಮತದಾರರಿದ್ದರು. 2019 ರಲ್ಲಿ ಶೇ. 48.09 (43,85,37,911) ರಷ್ಟು ಇದ್ದ ಒಟ್ಟು ಮಹಿಳಾ ಮತದಾರರಿಗೆ ಹೋಲಿಸಿದರೆ 2024 ರಲ್ಲಿ ಶೇ. 48.62 (47,63,11,240) ಮಹಿಳಾ ಮತದಾರರಿದ್ದರು. 2024 ರಲ್ಲಿ ಅತಿ ಹೆಚ್ಚು ಮಹಿಳಾ ಮತದಾರರನ್ನು ಪುದುಚೇರಿ (53.03%), ಕೇರಳ (51.56%) ರಾಜ್ಯಗಳು ಹೊಂದಿವೆ. 2024 ರಲ್ಲಿ, ಪ್ರತಿ 1000 ಪುರುಷ ಮತದಾರರಿಗೆ ಮಹಿಳಾ ಮತದಾರರ ಸಂಖ್ಯೆ ಗರಿಷ್ಠ ಅಂದರೆ 946 ಆಗಿದ್ದು, ಅದು 2019 ರಲ್ಲಿ ಪ್ರತಿ ಸಾವಿರ ಪುರುಷರಿಗೆ 926 ಮಹಿಳಾ ಮತದಾರರಾಗಿತ್ತು.
ಮಹಿಳಾ ಮತದಾನ: ಶೇ. 65.55 ರಷ್ಟಿರುವ ಪುರುಷ ಮತದಾರರಿಗೆ ಹೋಲಿಸಿದರೆ ಶೇ. 65.78 ಮಹಿಳಾ ಮತದಾರರು 2024 ರಲ್ಲಿ (ಸೂರತ್ ಹೊರತುಪಡಿಸಿ) ಮತ ಚಲಾಯಿಸಿದ್ದಾರೆ. 2019 ರಂತೆಯೇ 2024 ರಲ್ಲಿಯೂ ಮಹಿಳೆಯರ ಸಂಖ್ಯೆಯು ಪುರುಷರಿಗಿಂತ ಹೆಚ್ಚಾಗಿದೆ. ಸಾರ್ವತ್ರಿಕ ಲೋಕಸಭಾ ಚುನಾವಣೆಯ ಇತಿಹಾಸದಲ್ಲಿ ಇದು ಎರಡನೇ ಬಾರಿ. ಮಹಿಳಾ ಮತದಾರರಲ್ಲಿ ಅತಿ ಹೆಚ್ಚು ವಿಟಿಆರ್ ಹೊಂದಿರುವ ಸಂಸದೀಯ ಕ್ಷೇತ್ರ ಶೇ. 92.17 ರಷ್ಟು ಮಹಿಳಾ ಮತದಾನದೊಂದಿಗೆ ಧುಬಿ (ಅಸ್ಸಾಂ), ಶೇ. 87.57 ರೊಂದಿಗೆ ತಮ್ಮುಕ್ (ಪಶ್ಚಿಮ ಬಂಗಾಳ) ಸ್ಥಾನ ಪಡೆದಿದೆ.
ಮಹಿಳಾ ಅಭ್ಯರ್ಥಿಗಳು: 2019 ರಲ್ಲಿ 726 ಮಹಿಳಾ ಸ್ಪರ್ಧಿ ಅಭ್ಯರ್ಥಿಗಳಿಗೆ ಹೋಲಿಸಿದರೆ, 2024 ರಲ್ಲಿ ಮಹಿಳಾ ಸ್ಪರ್ಧಿ ಅಭ್ಯರ್ಥಿಗಳ ಸಂಖ್ಯೆ 800 ಆಗಿತ್ತು. ಅತಿ ಹೆಚ್ಚು ಮಹಿಳಾ ಅಭ್ಯರ್ಥಿಗಳನ್ನು ಹೊಂದಿರುವ ರಾಜ್ಯ ಮಹಾರಾಷ್ಟ್ರ ಆಗಿತ್ತು.
ಎಲ್ಲರನ್ನೂ ಒಳಗೊಳ್ಳುವ ಚುನಾವಣೆಗಳು: 2019 ರಲ್ಲಿ 39,075 ರಷ್ಟಿದ್ದ ತೃತೀಯ ಲಿಂಗ ಮತದಾರರನ್ನು 2024 ರಲ್ಲಿ 48,272 ಹೊಸದಾಗಿ ತೃತೀಯ ಲಿಂಗ ಮತದಾರರನ್ನು ನೋಂದಾಯಿಸಲಾಗಿದೆ. ಐದು ವರ್ಷಗಳ ಅವಧಿಯಲ್ಲಿ ಶೇ. 23.5 ರಷ್ಟು ಹೆಚ್ಚಳವಾಗಿದೆ. ಅತಿ ಹೆಚ್ಚು ನೋಂದಾಯಿತ ತೃತೀಯ ಲಿಂಗ ಮತದಾರರನ್ನು (8,467) ಹೊಂದಿರುವ ರಾಜ್ಯ ತಮಿಳುನಾಡು ಆಗಿದೆ. 2019 ರಲ್ಲಿ 61,67,482 ಇದ್ದ ನೋಂದಾಯಿತ ದಿವ್ಯಾಂಗ ಮತದಾರರ ಸಂಖ್ಯೆ 2024 ರಲ್ಲಿ 90,28,696 ಕ್ಕೆ ಆಗಿದೆ. 2019 ರಲ್ಲಿದ್ದ ಶೇ. 14.64 ಕ್ಕೆ ಹೋಲಿಸಿದರೆ 2024 ರ ಲೋಕಸಭಾ ಚುನಾವಣೆಯಲ್ಲಿ ಶೇ. 27.09 ತೃತೀಯ ಲಿಂಗ ಮತದಾರರು ಮತ ಚಲಾಯಿಸಿದ್ದಾರೆ. ಇದು ಬಹುತೇಕ ದ್ವಿಗುಣವಾಗಿದೆ. 2019 ರಲ್ಲಿ 99,844 ನೋಂದಾಯಿತ ಸಾಗರೋತ್ತರ ಮತದಾರರಿಗೆ ಹೋಲಿಸಿದರೆ 2024 ರಲ್ಲಿ 1,19,374 (ಪುರುಷ: 1,06,411; ಮಹಿಳೆ: 12,950; ತೃತೀಯ ಲಿಂಗ:13) ನೋಂದಾಯಿತ ಸಾಗರೋತ್ತರ ಮತದಾರರು ಆಗಿದ್ದಾರೆ.
ಫಲಿತಾಂಶಗಳು: 2024 ರ ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ದೇಶದಲ್ಲಿ ಒಟ್ಟು 6 ರಾಷ್ಟ್ರೀಯ ಪಕ್ಷಗಳು ಭಾಗವಹಿಸಿದ್ದವು. ಈ 6 ಪಕ್ಷಗಳ ಒಟ್ಟು ಮತ ಹಂಚಿಕೆಯು ಒಟ್ಟು ಮಾನ್ಯ ಮತಗಳ ಶೇ. 63.35 ರಷ್ಟು ಆಗಿತ್ತು. 2019 ರಲ್ಲಿ 6,923 ಅಭ್ಯರ್ಥಿಗಳಿಗೆ ಹೋಲಿಸಿದರೆ 2024 ರ ಚುನಾವಣೆಯಲ್ಲಿ 7,190 ಅಭ್ಯರ್ಥಿಗಳು ಠೇವಣಿಗಳನ್ನು ಕಳೆದುಕೊಂಡಿದ್ದಾರೆ. ಮತ್ತು ಗುಜರಾತ್ ರಾಜ್ಯದ ಸೂರತ್ (ಒಂದು) ಲೋಕಸಭಾ ಕ್ಷೇತ್ರಕ್ಕೆ ಅವಿರೋಧ ಆಯ್ಕೆಯಾಗಿತ್ತು. 3,921 ಸ್ವತಂತ್ರ ಅಭ್ಯರ್ಥಿಗಳು ಸ್ಪರ್ಧಿಸಿದ್ದು, 7 ಮಂದಿ ಮಾತ್ರ ಆಯ್ಕೆಯಾಗಿದ್ದಾರೆ. ಅದರಲ್ಲಿ 3,905 ಸ್ವತಂತ್ರ ಅಭ್ಯರ್ಥಿಗಳು ಠೇವಣಿ ಕಳದುಕೊಂಡಿದ್ದಾರೆ. ಸ್ವತಂತ್ರ ಅಭ್ಯರ್ಥಿಗಳು ಪಡೆದ ಮತ ಹಂಚಿಕೆ ಒಟ್ಟು ಮಾನ್ಯ ಮತಗಳಲ್ಲಿ ಶೇ. 2.79 ಆಗಿತ್ತು. ಇದರಲ್ಲಿ 279 ಸ್ವತಂತ್ರ ಮಹಿಳಾ ಅಭ್ಯರ್ಥಿಗಳಿದ್ದರು.
ಈ ಮೇಲೆ ನೀಡಿರುವ ಪ್ರತಿ ದತ್ತಾಂಶಗಳ ಸ್ವವಿವರವಾದ ವರದಿ ಮತ್ತು ಅಂಕಿ ಅಂಶಗಳನ್ನು ಭಾರತ ಚುನಾವಣಾ ಆಯೋಗದ  MEDIA & PUBLICATIONS>>Election Results & Statics<https://www.eci.in/staticals-reporsts ದಲ್ಲಿ ಪಡೆದುಕೊಳ್ಳಬಹುದಾಗಿದೆ ಎಂದು ಆಯೋಗವು ಪ್ರಕಟಣೆಯಲ್ಲಿ ತಿಳಿಸಿದೆ.

ಸಮಾಜದ ಕಟ್ಟಕಡೆಯ ಮಗುವಿಗೂ ಶಿಕ್ಷಣ ದೊರೆಯಲಿ: ಶಶಿಧರ್ ಕೋಸಂಬೆ

 ಬಳ್ಳಾರಿ : ಶಿಕ್ಷಣ ಮೂಲಭೂತ ಹಕ್ಕಾಗಿದ್ದು, ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ-2009ರ ಅನ್ವಯ ಸಮಾಜದಲ್ಲಿನ 6-14 ವಷದೊಳಗಿನ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ದೊರೆಯಬೇಕು ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಶಶಿಧರ್ ಕೋಸಂಬೆ ಅವರು ಹೇಳಿದರು.




ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಬೆಂಗಳೂರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಕ್ಕಳ ವಿಶೇಷ ಪೊಲೀಸ್ ಘಟಕ, ಕಾರ್ಮಿಕ ಇಲಾಖೆ, ಶಾಲಾ ಶಿಕ್ಷಣಾ ಮತ್ತು ಸಾಕ್ಷಾರತಾ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಇವರ ಸಂಯುಕ್ತಾಶ್ರಯದಲ್ಲಿ ನಗರದ ಜಿಲ್ಲಾ ಪಂಚಾಯತ್‌ನ ನಜೀರ್ ಸಭಾಂಗಣದಲ್ಲಿ  ‘ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ-2009’ ರ ಕುರಿತು ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಗುರುವಾರ ಏರ್ಪಡಿಸಿದ್ದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳ ಹಕ್ಕುಗಳ ರಕ್ಷಣೆಗೆ ಪ್ರತಿಯೊಬ್ಬರೂ ಮುಂದಾಗಬೇಕಿದ್ದು, ಮಕ್ಕಳ ಹಕ್ಕುಗಳಿಗೆ ಚ್ಯುತಿಯಾಗದಂತೆ ಕಾರ್ಯನಿರ್ವಹಿಸುವುದು ವಿವಿಧ ಇಲಾಖೆ ಅಧಿಕಾರಿಗಳ ಜವಬ್ದಾರಿಯಾಗಿದೆ ಎಂದರು.
ಆರ್‌ಟಿಇ-2009 ಸೆಕ್ಸನ್ 10 ಪ್ರಕಾರ ಪ್ರತಿಯೊಬ್ಬ ಪೋಷಕರೂ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಬೇಕು. ಇಲ್ಲವಾದಲ್ಲಿ ಆರ್‌ಟಿಇ ಕಾಯ್ದೆ ಸೆಕ್ಷನ್ 11ರ ಪ್ರಕಾರ ಶಿಕ್ಷಣ ಇಲಾಖೆಯ ಅಧಿಕಾರಿಗಳು ಶಾಲೆಗೆ ಕರೆತರುವ ಕೆಲಸ ಮಾಡಬೇಕು. ಜೊತೆಗೆ ಯಾವ ಪಾಲಕರು ಮಕ್ಕಳನ್ನು ಶಾಲೆಗೆ ಕಳುಹಿಸಲು ವಿಫಲಗೊಂಡಲ್ಲಿ ಶಿಸ್ತು ಕ್ರಮಕೈಗೊಳ್ಳಲು ಕಾನೂನಿನಲ್ಲಿ ಅವಕಾಶವಿದೆ ಎಂದು ಜನಸಾಮಾನ್ಯರಿಗೆ ಮನವರಿಕೆ ಮಾಡಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.
ಮಕ್ಕಳ ಮೇಲಿನ ದೌರ್ಜನ್ಯ, ಹಲ್ಲೆ, ಶೋಷಣೆ ತಾರತಮ್ಯ ಹಾಗೂ ಮಕ್ಕಳ ರಕ್ಷಣೆಗಾಗಿ ಮಕ್ಕಳ ರಕ್ಷಣಾ ನೀತಿ-2016, ತಿದ್ದುಪಡಿ ಕಾಯ್ದೆ-2023ರ ನಿಯಮಗಳನ್ನು ಪಾಲಿಸಬೇಕು. ಗ್ರಾಮ ಪಂಚಾಯತ್ ಮಟ್ಟದಿಂದ ಜಿಲ್ಲಾ ಮಟ್ಟದ ಅಧಿಕಾರಿಗಳು ಸಕಾಲದಲ್ಲಿ ಸಭೆ ನಡೆಸಿ, ಮಕ್ಕಳ ಶಿಕ್ಷಣ ಕಾರ್ಯಪಡೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಮಕ್ಕಳ ರಕ್ಷಣೆಯಲ್ಲಿ ಕಾರ್ಯ ಪ್ರವೃತ್ತರಾಗಬೇಕು ಎಂದು ಹೇಳಿದರು.
ಮಕ್ಕಳ ರಕ್ಷಣಾ ನೀತಿ ಅನ್ವಯ ಪ್ರತಿಯೊಂದು ಶಾಲಾ-ಕಾಲೇಜು, ವಸತಿ ನಿಲಯಗಳಲ್ಲಿ ಮಕ್ಕಳ ಸಹಾಯವಾಣಿ 1098 ಫಲಕ ಹಾಗೂ ಸಲಹಾ ಪೆಟ್ಟಿಗೆ ಅಳವಡಿಸಬೇಕೆಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಶಶಿಧರ್ ಕೋಸಂಬೆ ಅವರು ಸಂಬAಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ರಾಜ್ಯ ಮಕ್ಕಳ ರಕ್ಷಣಾ ಆಯೋಗದ ಮಾಜಿ ಸದಸ್ಯರಾದ ಹೆಚ್.ಸಿ ರಾಘವೇಂದ್ರ ಅವರು ಉಪನ್ಯಾಸದಲ್ಲಿ ಮಾತನಾಡುತ್ತಾ, ಮಕ್ಕಳ ಬಾಲ್ಯ ಅಮೂಲ್ಯವಾಗಿದ್ದು, ಅವರ ಬಾಲ್ಯತನವನ್ನು ಸುಂದರಗೊಳಿಸಲು ಶಿಕ್ಷಣ ಮುಖ್ಯವಾಗಿದೆ ಎಂದರು.
ಜೀವಿಸುವ ಹಕ್ಕು ಪ್ರತಿಯೊಬ್ಬರಿಗೂ ಇದೆ. ಸ್ವಾತಂತ್ರö್ಯ, ಸಮಾನತೆ, ಆರೋಗ್ಯ, ವಸತಿ ಸೇರಿದಂತೆ ಸಂವಿಧಾನದಲ್ಲಿ 21ಎ ಅಡಿ ಶಿಕ್ಷಣವೂ ಸೇರ್ಪಡೆಯಾಗಿದೆ. ಈ ನಿಟ್ಟಿನಲ್ಲಿ ಯಾವುದೇ ಮಕ್ಕಳು ಶಿಕ್ಷಣ ವಂಚಿತರಾಗದAತೆ ನೋಡಿಕೊಳ್ಳಬೇಕು ಎಂದು ಹೇಳಿದರು.
ಮಕ್ಕಳಿಗೆ ದೈಹಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸೇರಿದಂತೆ ಇತರೆ ವಿಷಯಗಳಲ್ಲಿ ವಂಚನೆಗೆ ಒಳಗಾದಲ್ಲಿ, ಅಭಿಪ್ರಾಯ ವ್ಯಕ್ತ ಪಡಿಸುವ ಮುಕ್ತ ಅವಕಾಶದ ವಾತವರಣ ಹಾಗೂ ಪ್ರಶ್ನೆ ಕೇಳುವ ಮನೋಭಾವನೆ ಬೆಳೆಸಿಕೊಳ್ಳಲು ಮಕ್ಕಳಿಗೆ ಧೈರ್ಯ ತುಂಬಬೇಕು ಎಂದು ಹೇಳುತ್ತಾ, ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ-2009 ಹಾಗೂ ವಿವಿಧ ವಿಷಯಗಳು ಕುರಿತು ವಿವರಿಸಿದರು.
ಈ ಸಂದರ್ಭದಲ್ಲಿ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರಾದ ವಿಜಯಲಕ್ಷಿö್ಮ ಮೈದೂರು, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಎಳೆನಾಗಪ್ಪ, ಜಿಲ್ಲಾ ಕಾರ್ಮಿಕ ಅಧಿಕಾರಿ ಸಿದ್ದಪ್ಪ ಖೈನೂರು, ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ದಲಿಂಗಮೂರ್ತಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿಗಳು ಮತ್ತು ಸರ್ಕಾರಿ ಮಕ್ಕಳ ಪಾಲನಾ ಸಂಸ್ಥೆಯ ಅಧೀಕ್ಷಕರುಗಳು ಹಾಗೂ ಇತರರು ಉಪಸ್ಥಿತರಿದ್ದರು.

ಪ್ರೇಮ ಕಾಶ್ಮೀರದಲ್ಲಿ ರಕ್ತದೋಕುಳಿ; ಹಿಂದೂಗಳೇ ಟಾರ್ಗೆಟ...!

  ಪ್ರೇಮ ಕಾಶ್ಮೀರದಲ್ಲಿ ರಕ್ತದೋಕುಳಿ; ಹಿಂದೂಗಳೇ ಟಾರ್ಗೆಟ್. ಭೂಲೋಕದ ಸ್ವರ್ಗವೆಂದೇ ಕರೆಯುವ ಜಮ್ಮು-ಕಾಶ್ಮೀರದ ಪೆಹಲ್ಗಾಮ್ ಸಮೀಪದ ಬೈಸರನ್ ಹುಲ್ಲುಗಾವಲಿನಲ್ಲಿ ಪಾಕ್ ಪ್...