ads

Search This Blog

Friday, 3 January 2025

ಆಧುನಿಕ ಹಾಗೂ ಪಾರಂಪರಿಕ ವೈದ್ಯ ಪದ್ದತಿಯ ಮಿಶ್ರಣದಿಂದ ಮಾನಸಿಕ ಕಾಯಿಲೆಗಳ ಚಿಕಿತ್ಸೆ ಫಲಕಾರಿ – ರಾಷ್ಟ್ರಪತಿ ದ್ರೌಪದಿ ಮುರ್ಮು

ಬೆಂಗಳೂರು : ಮನುಷ್ಯ ಆರೋಗ್ಯಕರ ಮನಸ್ಸನ್ನು ಹೊಂದಿದ್ದಲ್ಲಿ ಸ್ವಾಸ್ಥ್ಯ ಸಮಾಜ ನಿರ್ಮಾಣವಾಗುವುದರಲ್ಲಿ ಸಂದೇಹವಿಲ್ಲ. ಆಧುನಿಕ ಮತ್ತು ಪಾರಂಪರಿಕ ವೈದ್ಯ ಪದ್ದತಿಗಳ ಮಿಶ್ರಣದಿಂದಾಗಿ ಮಾನವನ ಮಾನಸಿಕ ಕಾಯಿಲೆಗಳಿಗೆ ನೀಡುವ ಚಿಕಿತ್ಸೆ ಫಲಕಾರಿಯಾಗುವುದು ಎಂದು ಭಾರತದ ಗೌರವನ್ವಿತ ರಾಷ್ಟ್ರಪತಿಗಳಾದ ಶ್ರೀಮತಿ ದ್ರೌಪದಿ ಮುರ್ಮು ಅವರು ತಿಳಿಸಿದರು.



ಇಂದು ಬೆಂಗಳೂರಿನ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (ನಿಮ್ಹಾನ್ಸ್)ನ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು, ನಿಮ್ಹಾನ್ಸ್ ಸುವರ್ಣ ಮಹೋತ್ಸವ ಆಚರಿಸುತ್ತಿರುವುದು ಹೆಮ್ಮೆ ತಂದಿದೆ. ಇಡೀ ದೇಶದಲ್ಲಿಯೇ ಇದು ಒಂದು ಉತ್ಕøಷ್ಟ ಸಂಸ್ಥೆಯಾಗಿ ಹೆಸರು ಮಾಡಿದೆ ಎಂದರು.

ಶಿಕ್ಷಣ, ಸಂಶೋಧನೆ,  ರೋಗಿಗಳ ಚಿಕಿತ್ಸೆ, ಪುರ್ನವಸತಿ ಕಲ್ಪಿಸುವ ನಿಟ್ಟಿನಲ್ಲಿ ನಿಮಾನ್ಸ್ ಸಂಸ್ಥೆಯು ನಿಸ್ವಾರ್ಥ ಸೇವೆಯನ್ನು ಸಲ್ಲಿಸುತ್ತಿದೆ. ದೇಶದಲ್ಲಿ 53 ಟೆಲಿ ಮಾನಸ್ ಸಹಾಯವಾಣಿ ಕಾರ್ಯ ನಿರ್ವಹಿಸುತ್ತಿದ್ದು, ಸಾರ್ವಜನಿಕರು ಇದರ ಪ್ರಯೋಜನ ಪಡೆಯುತ್ತಿದ್ದಾರೆ. ನಿಮ್ಹಾನ್ಸ್‍ಗೆ ವಿಶ್ವ ಆರೋಗ್ಯ ಸಂಸ್ಥೆಯಿಂದ ನೆಲ್ಸನ್ ಮಂಡೇಲಾ ಪ್ರಶಸ್ತಿ ಸಹ ಲಭಿಸಿರುವುದು ಸಂತೋಷಕರ ವಿಷಯವಾಗಿದೆ ಎಂದರು.

ಯೋಗ ಹಾಗೂ ಆರ್ಯುವೇದ ಪದ್ದತಿಗಳು ಮಾನಸಿಕ ವ್ಯಾಧಿಗಳನ್ನು ಹತೋಟಿಗೆ ತರುವಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿತ್ತಿವೆ. ನಾವು ಮನಸ್ಸನ್ನು ಸಮಚಿತ್ತದಿಂದ ಇಟ್ಟುಕೊಳ್ಳಬೇಕು. ಇಂದು ಗೃಹಣಿಯರು, ಉದ್ಯೋಗಸ್ಥರು, ವಿದ್ಯಾರ್ಥಿಗಳು, ವಯೋವೃದ್ಧರು ತಮ್ಮದೇ ಆದ ಮಾನಸಿಕ ಒತ್ತಡದಿಂದ ಬಳಲುತ್ತಿದ್ದಾರೆ. ಕೋವಿಡ್ – 19ರ ನಂತರ ಜನರಿಗೆ ಮಾನಸಿಕ ಒತ್ತಡಗಳು ಹೆಚ್ಚಿವೆ. ನಿಮಾನ್ಸ್‍ನಲ್ಲಿ ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ವ್ಯಾಸಂಗ ಮಾಡುತ್ತಿರುವವರಲ್ಲಿ ಹೆಚ್ಚು ಮಹಿಳೆಯರೇ ಇರುವುದು ಸಂತಸದ ಸಂಗತಿ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ನಿಮ್ಹಾನ್ಸ್‍ನಲ್ಲಿ ಕೇಂದ್ರೀಯ ಪ್ರಯೋಗಾಲಯ ಸಂಕೀರ್ಣ, ವಿಶೇಷ ಮನೋಶಾಸ್ತ್ರ ಬ್ಲಾಕ್, ಭೀಮಾ ಹಾಸ್ಟೆಲ್, ಅತ್ಯಾಧುನಿಕ ರೋಗ ಪತ್ತೆ ಸೌಲಭ್ಯಗಳ ಸುಧಾರಿತ ಐಟಿಎಂ, ಆರ್‍ಐ ಸ್ಕ್ಯಾನರ್ ಮತ್ತು ಅತ್ಯಾಧುನಿಕ ಡಿ.ಎನ್.ಎ ವ್ಯವಸ್ಥೆ ಘಟಕ ಮುಂತಾದುವುಗಳನ್ನು ಗೌರವಾನ್ವಿತ ರಾಷ್ಟ್ರಪತಿಗಳು ಉದ್ಘಾಟಿಸಿದರು.

ಮಾನಸಿಕ ಆರೋಗ್ಯ ಹಾಗೂ ನರ ರೋಗಗಳ ಕ್ಷೇತ್ರದಲ್ಲಿ ನಿಮಾನ್ಸ್ ಸಂಸ್ಥೆಯಿಂದ ಅಪರಿಮಿತ ಸಾಧನೆ – ಮುಖ್ಯಮಂತ್ರಿ ಸಿದ್ದರಾಮಯ್ಯ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾತನಾಡಿ ನಿಮ್ಹಾನ್ಸ್ ಐದು ದಶಕಗಳಿಂದ ಮಾನಸಿಕ ಆರೋಗ್ಯ ಹಾಗೂ ನರರೋಗಗಳ ಕ್ಷೇತ್ರದಲ್ಲಿ ಅಪರಿಮಿತ ಸಾಧನೆ ಮಾಡಿದೆ, ನಿಮಾನ್ಸ್ ಮಾನಸಿಕ ಆರೋಗ್ಯ ಮತ್ತು ಶಿಕ್ಷಣಕ್ಕೆ ಮೀಸಲಾದ ಭಾರತದ ಪ್ರಪ್ರಥಮ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಮಾನಸಿಕ ರೋಗ, ರೋಗಿ ಹಾಗೂ ಆರೈಕೆಯ ಕುರಿತಾದ ಜನರ ನಕಾರಾತ್ಮಕ ದೃಷ್ಟಿಕೋನವನ್ನು ನಿವಾರಿಸುವಲ್ಲಿ ನಿಮಾನ್ಸ್ ಶ್ರಮಿಸುತ್ತಿದೆ ಎಂದು ತಿಳಿಸಿದರು.




ಮೆದುಳು, ನರಗಳ ಖಾಯಿಲೆಗಳಿಗೆ ಅತ್ಯುತ್ತಮ ಚಿಕಿತ್ಸೆ ನೀಡುವಲ್ಲಿ ನಿಮಾನ್ಸ್ ಸಂಸ್ಥೆ ಹೆಸರುವಾಸಿಯಾಗಿದೆ. ರಾಜ್ಯದಲ್ಲಿ ಟೆಲಿ ಮಾನಸ್ ಸಹಾಯವಾಣಿ ಯಶಸ್ವಿಯಾಗಿದ್ದು, ದೂರವಾಣಿ ಆಪ್ತ ಸಮಾಲೋಚನೆ ಮೂಲಕ ಸುಮಾರು 17 ಲಕ್ಷ ಜನರು ಪ್ರಯೋಜನ ಪಡೆದಿದ್ದಾರೆ. ಜಿಲ್ಲಾ ಮಟ್ಟದಲ್ಲಿ ಸಹ ನರರೋಗ ಮತ್ತು ಇತರ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ತಜ್ಞರ ಸೇವೆಯನ್ನು ವಿಸ್ತರಿಸಲಾಗಿದೆ. ಸರ್ಕಾರವು ನಿಮ್ಹಾನ್ಸ್ ಸಂಸ್ಥೆಯ ಕಾರ್ಯನಿರ್ವಹಣೆಗಾಗಿ ಪ್ರತಿ ವರ್ಷ 137 ಕೋಟಿ ರೂಪಾಯಿಗಳನ್ನು ಒದಗಿಸುತ್ತಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಆಲದ ಮರ ಪೌಂಡೇಷನ್ ಸಹಯೋಗದಲ್ಲಿ ನಗರದ ಸಿ.ವಿ. ರಾಮನ್ ಆಸ್ಪತ್ರೆಯಲ್ಲಿ 25 ಹಾಸಿಗೆ ಸಾಮಥ್ರ್ಯದ ತುರ್ತು ಚಿಕಿತ್ಸೆ ಮತ್ತು ರಿಕವರಿ ಕೇಂದ್ರದಲ್ಲಿ ಮಾನಸಿಕ ಕಾಯಿಲೆಯಿಂದ ಬಳಲುತ್ತಿರುವ ಬಡವರಿಗೆ ಪುನರ್ವಸತಿ ಸ್ಥಾಪಿಸಲಾಗಿದೆ. ಜಿಲ್ಲಾ ಉಪ ಕೇಂದ್ರ ಆಸ್ಪತ್ರೆಗಳಲ್ಲಿ ಮನೋ ಚೈತನ್ಯ ಮಾನಸಿಕ ಆರೋಗ್ಯ ಚಿಕಿತ್ಸಾ ಕಾರ್ಯಕ್ರಮಗಳ ಮೂಲಕ 146 ತಾಲ್ಲೂಕುಗಳ 5 ಲಕ್ಷ ಜನರು ಪ್ರಯೋಜನ ಪಡೆದಿದ್ದಾರೆ. ಒಟ್ಟನಲ್ಲಿ ಈ ಸಂಸ್ಥೆಯ ಸರ್ವತೋಮುಖ ಬೆಳವಣಿಗೆಗೆ ಸರ್ಕಾರ ಬದ್ದವಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಜನರ ಮಾನಸಿಕ ರೋಗಕ್ಕೆ ಚಿಕಿತ್ಸೆ ನೀಡುವಲ್ಲಿ ನಿಮಾನ್ಸ್‍ನಿಂದ ಹೊಸ ಮೈಲುಗಲ್ಲು ಸೃಷ್ಟಿ -  ಜೆ.ಪಿ. ನಡ್ಡಾ
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ರಸಗೊಬ್ಬರ ಮತ್ತು ರಾಸಾಯನಿಕ ಖಾತೆ ಸಚಿವರಾದ ಜಗತ್ ಪ್ರಕಾಶ್ ನಡ್ಡಾ ಅವರು ಮಾತನಾಡಿ ನಿಮ್ಹಾನ್ಸ್ ಜನರಿಗೆ ಮಾನಸಿಕ ರೋಗ ಚಿಕಿತ್ಸೆಗೆ ಸಂಬಂಧಿಸಿದಂತೆ ಹೊಸ ಮೈಲುಗಲ್ಲು ಸೃಷ್ಟಿಸಿದೆ. ದೇಶದ ಉನ್ನತ ಮಟ್ಟದ 200 ಆಸ್ಪತ್ರೆಗಳಲ್ಲಿ ನಿಮಾನ್ಸ್ ಸಹ ಒಂದು ಸ್ಥಾನ ಅಲಂಕರಿಸಿದೆ. ಲಕ್ಷಾಂತರ ಜನರು ಇಲ್ಲಿ ಮಾನಸಿಕ ಖಾಯಿಲೆಗಳಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಲ್ಲಿಯ ಉತ್ತಮ ಪ್ರಯೋಗಾಲಯ ಮತ್ತು ಅತ್ಯಾಧುನಿಕ ಚಿಕಿತ್ಸೆಗಳು ಜನರಿಗೆ ಲಭ್ಯವಾಗಿದೆ. ದೇಶದಲ್ಲಿಯೇ ಈ ಸಂಸ್ಥೆ ಹೆಸರು ಮಾಡಿದ್ದು, ಮುಂದೆ ಜಾಗತಿಕ ಮಟ್ಟದಲ್ಲೂ ಸಹ ಗುರುತಿಸಲ್ಪಡುತ್ತದೆ ಎಂದು ತಿಳಿಸಿದರು.
 
ಕಾರ್ಯಕ್ರಮದಲ್ಲಿ ವೈದ್ಯಕೀಯ ಶಿಕ್ಷಣ ಸಚಿವರಾದ ಡಾ. ಶರಣ ಪ್ರಕಾಶ್ ರುದ್ರಪ್ಪ ಪಾಟೀಲ್, ಸಂಸದರಾದ ತೇಜಸ್ವಿ ಸೂರ್ಯ, ಯಧುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಪಿ.ಸಿ.ಮೋಹನ್, ಡಾ. ಸಿ.ಎನ್. ಮಂಜುನಾಥ್, ನಿಮ್ಹಾನ್ಸ್  ನಿರ್ದೇಶಕಿ ಡಾ. ಪ್ರತಿಮಾ ಮೂರ್ತಿ ಸೇರಿದಂತೆ ಗಣ್ಯರುಗಳು ಹಾಗೂ ನಿಮ್ಹಾನ್ಸ್ ಸಮಸ್ಥೆಯ ಹಿರಿಯ ಅಧಿಕಾರಿಗಳು, ವೈದ್ಯರುಗಳು ಉಪಸ್ಥಿತರಿದ್ದರು.

ಭಾರತದ ಗೌರವಾನ್ವಿತ ರಾಷ್ಟ್ರಪತಿಗಳಾದ ಶ್ರೀಮತಿ ದ್ರೌಪದಿ ಮುರ್ಮು ಅವರನ್ನು  ಹೆಚ್.ಎ.ಎಲ್ ವಿಮಾನ ನಿಲ್ದಾಣದಿಂದ ಆತ್ಮೀಯವಾಗಿ ಬೀಳ್ಕೊಟ್ಟ  ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು : ಭಾರತದ ಗೌರವಾನ್ವಿತ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಇಂದು  ಜನವರಿ 03 ರಂದು ಕರ್ನಾಟಕ ಪ್ರವಾಸ ಕೈಗೊಂಡಿದ್ದು, ಬೆಂಗಳೂರಿನ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆ  (ನಿಮಾನ್ಸ್) ಯಿಂದ ಆಯೋಜಿಸಲಾದ  ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ  ವಾಯು ಸೇನೆಯ ವಿಶೇಷ ವಿಮಾನದ ಮೂಲಕ ಹೆಚ್.ಎ.ಎಲ್ ವಿಮಾನ ನಿಲ್ದಾಣದಿಂದ ಬೆಳಗಾವಿಗೆ ಪ್ರಯಾಣಿಸಿದರು.  

ಗೌರವಾನ್ವಿತ ರಾಷ್ಟ್ರಪತಿಗಳನ್ನು ಸನ್ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆತ್ಮೀಯವಾಗಿ ಬೀಳ್ಕೊಟ್ಟರು
ಈ ಸಮಯದಲ್ಲಿ ವೈದ್ಯಕೀಯ ಶಿಕ್ಷಣ ಸಚಿವರಾದ ಡಾ. ಶರಣಪ್ರಕಾಶ್ ರುದ್ರಪ್ಪ ಪಾಟೀಲ್, ಏರ್ ಮಾರ್ಷಲ್ ನಾಗೇಶ್ ಕಪೂರ್, ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾದ ಡಾ. ಶಾಲಿನಿ ರಜನೀಶ್, ಲೆಫ್ಟಿನೆಂಟ್ ಜನರಲ್ ಜಿತೇಂದ್ರ ಕುಮಾರ್ ಗೇರಾ, ಕರ್ನಾಟಕ ಪೆÇಲೀಸ್ ಮಹಾನಿರ್ದೇಶಕರಾದ ಡಾ. ಅಲೋಕ್ ಮೋಹನ್, ಬೆಂಗಳೂರು ನಗರ  ಪೆÇಲೀಸ್ ಆಯುಕ್ತರಾದ ಬಿ. ದಯಾನಂದ್, ಮತ್ತು ಬೆಂಗಳೂರು ನಗರ ಜಿಲ್ಲಾಧಿಕಾರಿಗಳಾದ ಜಗದೀಶ್. ಜಿ ಸೇರಿದಂತೆ ಇತರೆ ಗಣ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು.

ಪೂಜ್ಯಶ್ರೀ ಸದ್ಗುರು ಬಸವ ಪ್ರಭು ಸ್ವಾಮೀಜಿಗೆ ಮಹಾತ್ಮ ಜ್ಯೋತಿ ಬಾ ಫುಲೆ ಪ್ರಶಸ್ತಿ ಪ್ರಧಾನ

ರಾಯಚೂರು : ಸಮತಾ ಗ್ರಾಮೀಣಾಭಿವೃದ್ಧಿ ಸಂಘ ಮತ್ತು ಶಿಕ್ಷಣ ಸಂಸ್ಥೆ ವತಿಯಿಂದ "ಸಂವಿದಾನದ ಕಡೆ ವಿದ್ಯಾರ್ಥಿಗಳ ನಡೆ" ಕಾರ್ಯಕ್ರಮದಲ್ಲಿ ಮಹಾತ್ಮ ಜ್ಯೋತಿ ಬಾ ಫುಲೆ ಪ್ರಶಸ್ತಿಯನ್ನು ಸಮಾಜ ಸೇವೆ ಗುರುತಿಸಿ ಬಸವಕಲ್ಯಾಣ ಗುಣತೀರ್ಥ ವಾಡಿಯ ಕಲ್ಯಾಣ ಮಹಾಮನೆಯ ಪೂಜ್ಯಶ್ರೀ ಸದ್ಗುರು ಬಸವ ಪ್ರಭು ಸ್ವಾಮೀಜಿ ಅವರಿಗೆ ನೀಡಲಾಯಿತು. ರಾಯಚೂರು ಸಂಸದರಾದ ಕುಮಾರ ನಾಯಕರು ಪ್ರಧಾನ ಮಾಡಿದರು. ಅನೇಕ ನಾಯಕರು ಹಾಜರಿದ್ದರು.


ಪೂಜ್ಯಶ್ರೀ ಸದ್ಗುರು ಬಸವ ಪ್ರಭು ಸ್ವಾಮೀಜಿಗೆ ಮಹಾತ್ಮ ಜ್ಯೋತಿ ಬಾ ಫುಲೆ ಪ್ರಶಸ್ತಿ ಪ್ರಧಾನ

ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿಯ ಹಣ ಕೆಯುಡಬ್ಲೂಜೆ ದತ್ತಿಗೆ ಡಾ.ರಾಜಾ ರಾಮಣ್ಣ ಪ್ರಶಸ್ತಿ ಸ್ಥಾಪನೆಗೆ ನಿರ್ಧರಿಸಿದ ಗಿರೀಶ್ ಲಿಂಗಣ್ಣ

ಬೆಂಗಳೂರು: ವಾರ್ತಾ ಇಲಾಖೆ ಕೊಡ ಮಾಡುವ ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿಗೆ ಭಾಜನರಾಗಿರುವ ಅಂಕಣಕಾರ ಗಿರೀಶ್ ಲಿಂಗಣ್ಣ ಅವರು ಪ್ರಶಸ್ತಿ ಮೊತ್ತ ಒಂದು ಲಕ್ಷ ರೂಗಳನ್ನು ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ದ್ತತಿನಿಧಿ ಪ್ರಶಸ್ತಿಗೆ ನೀಡಲು ನಿರ್ಧರಿಸಿದ್ದಾರೆ.


ಅಂಕಣಕಾರ ಗಿರೀಶ್ ಲಿಂಗಣ್ಣ


ಈ ಬಗ್ಗೆ ಸಂಘಕ್ಕೆ ಅಧಿಕೃತವಾಗಿ ಪತ್ರ ಬರೆದು ತಮ್ಮ ನಿರ್ಧಾರ ತಿಳಿಸಿರುವುದನ್ನು ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರು ಸ್ವಾಗತಿಸಿದ್ದಾರೆ.
ಕರ್ನಾಟಕದಲ್ಲಿ ವಿಜ್ಞಾನ ಬರಹಗಾರರಿಗೆ, ವಿಜ್ಞಾನ ಸಂವಾಹಕರಿಗೆ ಹೆಚ್ಚಿನ ಉತ್ತೇಜನ, ಬೆಂಬಲ ನೀಡುವ ನಿಟ್ಟಿನಲ್ಲಿ, ನಾನು ಈ ಪ್ರಶಸ್ತಿಯೊಡನೆ ನೀಡಲಾಗುವ ಒಂದು ಲಕ್ಷ ರೂ ಮೊತ್ತವನ್ನು
ಕರ್ನಾಟಕ ವೃತ್ತಿನಿರತ ಪತ್ರಕರ್ತರ ಸಂಘಕ್ಕೆ (ಕೆಯುಡಬ್ಲ್ಯುಜೆ) ಹಸ್ತಾಂತರಿಸುತ್ತೇನೆ. ಈ ಮೊತ್ತದಿಂದ ನಮ್ಮ ರಾಜ್ಯದ ಪ್ರಸಿದ್ಧ ವಿಜ್ಞಾನಿ ಡಾ. ರಾಜಾ ರಾಮಣ್ಣನವರ ಹೆಸರಿನಲ್ಲಿ ದತ್ತಿ ನಿಧಿ ಪ್ರಶಸ್ತಿಯನ್ನು ಸ್ಥಾಪಿಸಬೇಕೆಂದು ಗಿರೀಶ್ ಲಿಂಗಣ್ಣ ಮನವಿ ಮಾಡಿದ್ದಾರೆ.
ವಿಜ್ಞಾನ, ರಕ್ಷಣೆ, ಬಾಹ್ಯಾಕಾಶದಂತಹ ಸಂಕೀರ್ಣ ವಿಚಾರಗಳನ್ನು ಜನಸಾಮಾನ್ಯರಿಗೆ ಅರ್ಥವಾಗುವ ರೀತಿಯಲ್ಲಿ ಬರೆಯುವ (ಕನ್ನಡ ಅಥವಾ ಇಂಗ್ಲೀಷ್)ಪತ್ರಕರ್ತರು, ಅಂಕಣಕಾರರಿಗೆ ಪ್ರತಿ ವರ್ಷ ಪ್ರಶಸ್ತಿ ನೀಡಬೇಕು. ಹೆಚ್ಚು ಬರಹಗಾರರು ಇಂತಹ ಪ್ರಮುಖ ವಿಚಾರಗಳ ಕುರಿತು ಬರೆಯುವಂತೆ ಮಾಡುವುದು ಮತ್ತು ಯುವ ಮನಸ್ಸುಗಳನ್ನು ಆಸಕ್ತಿಕರ ವೈಜ್ಞಾನಿಕ ಬರಹಗಳಿಂದ ಸೆಳೆಯುವಂತೆ ಮಾಡುವುದು ತಮ್ಮ ಉದ್ದೇಶವಾಗಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಡಾ.ರಾಜರಾಮಣ್ಣ ಪ್ರಶಸ್ತಿ ಕೆಯುಡಬ್ಲೂಜೆ ಅಭಿನಂದನೆ:
ಅಂಕಣಕಾರ ಗಿರೀಶ್ ಲಿಂಗಣ್ಣ ಅವರ ಆಶಯದಂತೆಯೇ ಕೆಯುಡಬ್ಲೂಜೆ ಡಾ.ರಾಜರಾಮಣ್ಣ ಹೆಸರಿನಲ್ಲಿ ದತ್ತಿನಿಧಿಯನ್ನು ಸ್ಥಾಪಿಸಲಾಗುವುದು ಎಂದು ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ತಿಳಿಸಿದ್ದಾರೆ.
ಕರ್ನಾಟಕದ ಹೆಮ್ಮೆಯ ಪುತ್ರರಾದ ಡಾ. ರಾಜಾ ರಾಮಣ್ಣ ಜಗತ್ತು ಕಂಡ ಶ್ರೇಷ್ಠ ಪರಮಾಣು ವಿಜ್ಞಾನಿಗಳಲ್ಲಿ ಒಬ್ಬರು. ಭಾರತದ ವೈಜ್ಞಾನಿಕ ಪ್ರಗತಿಯ ಹಿಂದೆ ಡಾ. ರಾಜಾ ರಾಮಣ್ಣನವರ ಕೊಡುಗೆ ಅಪಾರವಾಗಿದೆ. ಈ ಬಹುಮಾನವನ್ನು ವಿಜ್ಞಾನ ವಿಚಾರಗಳು ಎಲ್ಲರಿಗೂ ತಲುಪುವಂತೆ ಮಾಡುವ ಪತ್ರಕರ್ತರಿಗೆ ಪ್ರತಿ ವರ್ಷವೂ ನೀಡಲಾಗುವುದು ಎಂದು ತಿಳಿಸಿರುವ ತಗಡೂರು,  ಗಿರೀಶ್ ಲಿಂಗಣ್ಣ ಅವರನ್ನು ಅಭಿನಂದಿಸಿದ್ದಾರೆ.

"ಅಲ್ನೋಡಿ ಮತ್ತೆ ಕಲ್ಯಾಣಕ್ಕೆ ಬರುತ್ತಿರುವ ಶರಣರು" ಸಂಪಾದಿತ ಕವನ ಸಂಕಲನ ಪುಸ್ತಕ ಬಿಡುಗಡೆ

ಬಸವಕಲ್ಯಾಣ : ಸ್ಥಳೀಯ ತ್ರಿಪುರಾಂತ ಗವಿಮಠದಲ್ಲಿ ಶರಣ ಕಾಯಕ ಪ್ರಶಸ್ತಿ ಹಾಗೂ ವೀರಶೆಟಿ ಪಾಟೀಲ ಅವರ ಸಂಪಾದಿತ ಕವನ ಸಂಕಲನ ಅಲ್ನೋಡಿ ಮತ್ತೆ ಕಲ್ಯಾಣಕ್ಕೆ ಬರುತ್ತಿರುವ ಶರಣರು ಪುಸ್ತಕ ವನ್ನು ಪೂಜ್ಯ ಘನಲಿಂಗ ರುದ್ರಮೂನಿ ಶಿವಾಚಾರ್ಯ  ಮಹಾಸ್ವಾಮಿಗಳು ಬಿಡುಗಡೆ ಮಾಡಿದರು. 

ಬಸವಕಲ್ಯಾಣ ಗವಿಮಠದಲ್ಲಿ "ಶರಣ ಕಾಯಕ ಪ್ರಶಸ್ತಿ " ಹಾಗೂ ವೀರಶೆಟ್ಟಿ ಎಂ.ಪಾಟೀಲ್  ಅವರ ಅಗೋ "ಅಲ್ನೋಡಿ ಮತ್ತೆ ಕಲ್ಯಾಣಕ್ಕೆ ಬರುತ್ತಿರುವ ಶರಣರು" ಸಂಪಾದಿತ ಕವನ ಸಂಕಲನ ಪುಸ್ತಕ ಬಿಡುಗಡೆ ಸಮಾರಂಭ ಜರುಗಿತು. ಸಮಾರಂಭದಲ್ಲಿ ವೀರಶೆಟ್ಟಿ ಪಾಟೀಲ್ ಹಾಗೂ ಅನೇಕ ಸಾಹಿತಿಗಳು ಭಾಗವಹಿಸಿದ್ದರು.  


ಬಸವಕಲ್ಯಾಣ : ಸ್ಥಳೀಯ ತ್ರಿಪುರಾಂತ ಗವಿಮಠದಲ್ಲಿ ಶರಣ ಕಾಯಕ ಪ್ರಶಸ್ತಿ ಹಾಗೂ ವೀರಶೆಟಿ ಪಾಟೀಲ ಅವರ ಸಂಪಾದಿತ ಕವನ ಸಂಕಲನ ಅಲ್ನೋಡಿ ಮತ್ತೆ ಕಲ್ಯಾಣಕ್ಕೆ ಬರುತ್ತಿರುವ ಶರಣರು ಪುಸ್ತಕ ವನ್ನು ಪೂಜ್ಯ ಘನಲಿಂಗ ರುದ್ರಮೂನಿ ಶಿವಾಚಾರ್ಯ ಮಹಾಸ್ವಾಮಿಗಳು ಬಿಡುಗಡೆ ಮಾಡಿದರು. 

ಮನಸ್ಸಿದ್ದರೆ ಮಾರ್ಗ ಉಂಟು : ಶ್ರೀ ರಂಭಾಪುರಿ ಜಗದ್ಗುರುಗಳು

ಕೊಲನಪಾಕ (ತೆಲಂಗಾಣ) ಜನೆವರಿ ೩ : ಸತ್ಯ ಮನುಷ್ಯನನ್ನು ಬದಲಿಸುತ್ತದೆ. ನಮ್ಮ ನಡೆ ನುಡಿಗಳು ಯಾವಾಗಲೂ ಸತ್ಯದ ಪರವಾಗಿರಬೇಕು. ಕೆಲಸ ಮಾಡಲು ಮನಸ್ಸಿದ್ದರೆ ಮಾರ್ಗಗಳು ಕಾಣುತ್ತವೆ. ಮನಸ್ಸಿಲ್ಲದಿದ್ದರೆ ನೂರಾರು ನೆಪಗಳು ಮುಂದೆ ಬರುತ್ತವೆ ಎಂದು  ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.


ಕೊಲನಪಾಕ ಸ್ವಯಂಭು ಶ್ರೀ ಸೋಮೇಶ್ವರ ಕ್ಷೇತ್ರದಲ್ಲಿ ವಿಶೇಷ ಪೂಜಾ


ಅವರು ಶುಕ್ರವಾರ ಭುವನಗಿರಿ ತಾಲೂಕಿನಶ್ರೀ ಜಗದ್ಗುರು ರೇಣುಕಾಚಾರ್ಯರು ಅವತರಿಸಿದ ಕೊಲನಪಾಕ ಸ್ವಯಂಭು ಶ್ರೀ ಸೋಮೇಶ್ವರ ಕ್ಷೇತ್ರದಲ್ಲಿ ವಿಶೇಷ ಪೂಜಾ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು. 

ಮನುಷ್ಯನ ವ್ಯಕ್ತಿತ್ವ ಗಟ್ಟಿಗೊಳಿಸುವುದಕ್ಕೆ ಹೊಗಳಿಕೆಗಿಂತಲೂ ತೆಗಳಿಕೆಗೆ ಹೆಚ್ಚು ಗಮನಿಸಿದರೆ ಮಾಡಿದ ತಪ್ಪುಗಳು ತಿಳಿಯುತ್ತದೆ. ಯಾವುದೇ ಒಂದು ಒಳ್ಳೆಯ ಕೆಲಸ ಮಾಡುವಾಗ ತೊಡಕು ತೊಂದರೆಗಳು ಮಹಾತ್ಮರಿಗೂ ಬಿಟ್ಟಿಲ್ಲ. ಸಂಪತ್ತಿನ ಬದುಕಿನಲ್ಲಿ ಬಾಳುವ ಮನುಷ್ಯನಿಗೆ ಗುಣವಂತರ ಗುಣಾದರ್ಶಗಳು ಕಾಣಲಾರವು. ಅನ್ಯಾಯ ಅಸತ್ಯ ಹೇಳುವ ಜನರು ಹೆಚ್ಚಿರುವಾಗ ಸತ್ಯವಂತರು ಸುಮ್ಮನಿರುವ ಕಾಲ ಇದಾಗಿದೆ. ಜೀವನ ಹೂದೋಟದಲ್ಲಿ ಅರಳುವ ಹೂಗಳೆಷ್ಟೋ ಬಾಡುವ ಹೂಗಳೆಷ್ಟೋ ಹೇಳಲಾಗದು. ಭೌತಿಕ ಸಿರಿ ಸಂಪತ್ತು ಮನುಷ್ಯನಿಗೆ ನಿಜವಾದ ಸಂತೃಪ್ತಿ ತರಲಾರವು. ಇವುಗಳ ಜೊತೆಗೆ ಆಧ್ಯಾತ್ಮದ ಹಸಿವು ಇರಬೇಕೆಂದು ಶ್ರೀ ಜಗದ್ಗುರು ರೇಣುಕಾಚಾರ್ಯರು ಮಹಾಮುನಿ ಅಗಸ್ತö್ಯರನ್ನು ನಿಮಿತ್ಯ ಮಾಡಿ ಸಕಲರಿಗೂ ಬೋಧಿಸಿದ್ದಾರೆ. ಕೊಲನಪಾಕ ಸ್ವಯಂಭು ಶ್ರೀ ಸೋಮೇಶ್ವರ ಕ್ಷೇತ್ರ ಬಹಳ ಪ್ರಾಚೀನ ಇತಿಹಾಸವನ್ನು ಹೊಂದಿರುವುದಷ್ಟೇ ಅಲ್ಲ. ವೀರಶೈವ ಧರ್ಮ ಸಿದ್ಧಾಂತ ಸ್ಥಾಪಕರಾದ ಶ್ರೀ ಜಗದ್ಗುರು ರೇಣುಕಾಚಾರ್ಯರು ಆವಿರ್ಭವಿಸಿದ ಪಾವನ ಕ್ಷೇತ್ರವಾಗಿದೆ ಎಂದರು.

ಮೇಹಕರ ಹಿರೇಮಠದ ರಾಜೇಶ್ವರ ಶಿವಾಚಾರ್ಯ ಸ್ವಾಮಿಗಳು ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿದ್ಧರಬೆಟ್ಟದ ವೀರಭದ್ರ ಶಿವಾಚಾರ್ಯ ಸ್ವಾಮಿಗಳು ಶ್ರೀ ಜಗದ್ಗುರು ರೇಣುಕಾಚಾರ್ಯರ ಧಾರ್ಮಿಕ ಮತ್ತು ಸಾಮಾಜಿಕ ಸತ್ಕಾçಂತಿಯ ಬಗೆಗೆ ಉಪದೇಶಾಮೃತವನ್ನಿತ್ತರು. ಎಡೆಯೂರು ಕ್ಷೇತ್ರದ ರೇಣುಕ ಶಿವಾಚಾರ್ಯ ಸ್ವಾಮಿಗಳು, ಮಳಲಿ ಸಂಸ್ಥಾನಮಠದ ಡಾ|| ನಾಗಭೂಷಣ ಶಿವಾಚಾರ್ಯ ಸ್ವಾಮಿಗಳು, ಸಂಗೊಳ್ಳಿ ಹಿರೇಮಠದ ಗುರುಲಿಂಗ ಶಿವಾಚಾರ್ಯ ಸ್ವಾಮಿಗಳು, ಲಿಂಗಸುಗೂರು ಮಾತಾ ಮಾಣಿಕ್ಕೇಶ್ವರಿ ಆಶ್ರಮದ ನಂದಿಕೇಶ್ವರಿ ಅಮ್ಮನವರು ಉಪಸ್ಥಿತರಿದ್ದರು. 

ಈ ಪವಿತ್ರ ಸಮಾರಂಭದಲ್ಲಿ ಹೈದರಾಬಾದ ವೀರಶೈವ ಸಮಾಜದ ಅಧ್ಯಕ್ಷ ವೀರಮಲ್ಲೇಶ, ವಿಜಯಶಂಕರ, ಪಂಡಿತ ಆರ್.ಎಂ.ಪ್ರಭುಲಿAಗಶಾಸ್ತಿçಗಳು, ಗುರುಪಾದಪ್ಪ ಕಿಣಗಿ, ಶಕುಂತಲಾ ಶಿವಶರಣಪ್ಪ ಸೀರಿ, ಸರೋಜಾ ಹಿರೇಮಠ, ಕಸ್ತೂರಮ್ಮ ಉಳ್ಳಾಗಡ್ಡಿ ಮೊದಲಾದವರು ಪಾಲ್ಗೊಂಡಿದ್ದರು. 

ಪ್ರಾತ:ಕಾಲ ಸ್ವಯಂಭು ಶ್ರೀ ಸೋಮೇಶ್ವರ ಮಹಾಲಿಂಗಕ್ಕೆ ವಿಶೇಷ ಪೂಜಾಭಿಷೇಕ, ಶಕ್ತಿಮಾತೆ ಚಂಡಿಕಾAಬಾ ದೇವಿಗೆ ಕುಂಕುಮಾರ್ಚನೆ ಹಾಗೂ ಶ್ರೀ ವೀರಭದ್ರಸ್ವಾಮಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಪೂಜೆ ಸಲ್ಲಿಸಿದರು. ಕಲಬುರ್ಗಿಯ ಗಿರಿಯಪ್ಪ ಮುತ್ಯಾ ಬಂದ ಎಲ್ಲ ಸದ್ಭಕ್ತರಿಗೂ ಅನ್ನ ದಾಸೋಹ ಸೇವೆ ಸಲ್ಲಿಸಿದರು. 


"ಜ್ಞಾನ ಇಲ್ಲ ಅಂತಾನೇ ಪಶು, ಪಕ್ಷಿ, ಪ್ರಾಣಿಗಳು, ಮೂಕ ಆಗಿದ್ದಾವೆ! ಪ್ರಥಮ ಮಹಿಳಾ ಶಿಕ್ಷಕಿ ಸಾವಿತ್ರಿಬಾಯಿ ಫುಲೆ"

 "ಜ್ಞಾನ ಇಲ್ಲ ಅಂತಾನೇ ಪಶು, ಪಕ್ಷಿ, ಪ್ರಾಣಿಗಳು, ಮೂಕ ಆಗಿದ್ದಾವೆ! ನಿಲ್ಬೇಡ ಓಡು ವಿದ್ಯಾ ಗಳಿಸಕ್ಕೆ! ಅವಕಾಶ ಬಂದಿದೆ ಶಾಲೆಯಲ್ಲಿ ಕಲಿಯಕ್ಕೆ ತೆರೆದಿದೆ ಶಾಲೆ ನಿಮಗಾಗಿ ಅಕ್ಷರದ ಜ್ಞಾನ ಬೆಳಗಾಕ್ಕೆ"!

" ಜ್ಞಾನ  ಇಲ್ದಿದ್ರೆ  ಸರ್ವನಾಶ  ಆಗೋಗುತೇವೇ ವಿವೇಕ ಇಲ್ದಿದ್ರೆ  ಆಗುತ್ತೀರಿ  ಪಶುಗಳ  ಹಂಗೆ" ಸಾವಿತ್ರಿಬಾಯಿಫುಲೆ ಶಿಕ್ಷಣದ ಸಂದೇಶವಾಣಿಯಾಗಿದೆ.!





 ಮಹಾರಾಷ್ಟ್ರದ "ಸತಾರ" ಜಿಲ್ಲೆಯ ಖಂಡಾಲ ತಾಲೂಕಿನ ಒಂದು ಪುಟ್ಟ ಹಳ್ಳಿಯಾದ ನಯಿಗಾಂವ ಖಂಡೋಜಿ  ನೆವಸೆ ಪಾಟೀಲರ  ಪತ್ನಿ ಲಕ್ಷ್ಮಿ ಬಾಯಿ ದಂಪತಿಗಳಿಗೆ ೩ನೇ ಜನವರಿ ೧೮೩೧ ರಲ್ಲಿ ಮೊದಲನೆಯ ಹೆಣ್ಣು ಮಗಳಾಗಿ ಜನಿಸಿದಳು. ತಂದೆ-ತಾಯಿ ತುಂಬಾ ಸಂತೋಷದಿಂದ "ಸಾವಿತ್ರಿ "ಎಂದು ನಾಮಕರಣ ಮಾಡಿದ್ದರು. ಇವಳ ತಂದೆಯಾದ ಖಂಡೋಜಿ ನವಸೆ ಪಾಟೀಲರು ಮಾಲಿ ಸಮುದಾಯದವರಾಗಿದ್ದರು. ಪ್ರತಿಷ್ಠಿತ ವ್ಯಕ್ತಿಯಾದ ಇವರು ಜಮೀನ್ದಾರರು ಹಾಗೂ ಸಿರಿವಂತರು ಕುಟುಂಬದವರು .ಇವರ ಕಸುಬು ವ್ಯವಸಾಯವಾಗಿತ್ತು .ಸಾವಿತ್ರಿಬಾಯಿ ತಂದೆ ಅತೀ  ಪ್ರೀತಿಯಿಂದ ಮಗಳನ್ನು ಬೆಳೆಸಿದ್ದರು. ಸಾವಿತ್ರಿ ಬಾಲ್ಯದಿಂದಲೇ ಚುರುಕು ಹಾಗೂ ಧೈರ್ಯವಂತೆಯಾಗಿದ್ದಳು . ಇವಳ ಧೈರ್ಯ ಮತ್ತು ಬುದ್ಧಿಯನ್ನು ನೋಡಿ ಮಿಶನರಿಯೊಬ್ಬರು ಒಂದು ಪುಸ್ತಕವನ್ನು ಕಾಣಿಕೆಯಾಗಿ ಕೊಟ್ಟಿದ್ದರು. ಆದರೆ ಸಾವಿತ್ರಿ ಗೆ ಓದಲು, ಬರೆಯಲು, ಬರುತ್ತಿರಲಿಲ್ಲ .ದೊಡ್ಡವರು ಕಾಣಿಕೆಯಾಗಿ ನೀಡಿದ ಪುಸ್ತಕವನ್ನು ಬಿಸಾಡದೇ ಜೋಪಾನವಾಗಿ ಇಡಬೇಕೆಂದು ಸಾವಿತ್ರಿಗೆ ಅನಿಸಿತ್ತು. 

"ಧೈರ್ಯಂ ಸರ್ವತ್ರ ಸಾಧನಂ" ಮನಸಿನ ಮಾತು ಕೇಳುವುದಕ್ಕೆ ತುಂಬಾ ಧೈರ್ಯಬೇಕು ಯಾಕೆಂದರೆ ಮನಸ್ಸು ಯಾವಾಗಲೂ ನಿಜ ಹೇಳುತ್ತದೆ. ಇಂತಹ ಧೈರ್ಯ ಸಾವಿತ್ರಿ ಬಳಿ ಇತ್ತು. ಆದರೆ ಸಾವಿತ್ರಿ ಹುಟ್ಟೂರಿನಲ್ಲಿ ಹೆಣ್ಣು ಮಕ್ಕಳು ಶಾಲೆ ಹೋಗುವಂತಿರಲಿಲ್ಲ ಅಕ್ಷರ ವಂಚಿತ ಮಹಿಳೆಯರು ಶೂದ್ರರು ಓದುವಂತಿರಲಿಲ್ಲ. ಓದಿದ್ದರೆ ಶ್ಲೋಕ ಕೇಳಿದ್ದರೇ ಕಿವಿಯಲ್ಲಿ ಕಾದ "ಸೀಸ" ಸುರಿದು ನಾಲಿಗೆ ಕತ್ತರಿಸುವ ಶಿಕ್ಷೆಯಿತ್ತು. ಮಹಿಳೆಯರು  ಅನಕ್ಷರತೆಯ ರೂಪದಲ್ಲಿ ಬಡತನದ  ಬೇಗೆಯಲ್ಲಿ ನೆರಳುತ್ತಿದ್ದರು. ಹೆಣ್ಣು ಮಕ್ಕಳು ಶಾಲೆ ಕಲಿಯುವ ಪದ್ಧತಿಯೇ ಇರಲಿಲ್ಲ ಊರಿನ ಶ್ರೀಮಂತರ ಮಕ್ಕಳು ಮಾತ್ರ ಮನೆಗಳಲ್ಲಿಯೇ ಶಿಕ್ಷಣ ಪಡೆದುಕೊಳ್ಳುತ್ತಿದ್ದರು. ಉಳಿದವರು ತಮ್ಮ ಕುಲ ಕಸಬು ಮಾಡಿಕೊಂಡು ಇರುತ್ತಿದ್ದರು. ಹೆಣ್ಣು ಮಕ್ಕಳು ಮನೆ ಕೆಲಸ ಮಾಡಿಕೊಂಡರೆ ಸಾಕು .ಚಿಕ್ಕ ವಯಸ್ಸಿನಲ್ಲಿಯೇ ಮದುವೆ ಮಾಡಿ ಗಂಡನ ಮನೆಗೆ ಕಳುಹಿಸಿ ಬಿಡುತ್ತಿದ್ದರು. ಹಾಗೆಯೇ ಬಾಲಕಿ ಸಾವಿತ್ರಿ ಅನಕ್ಷರಸ್ಥಳವಾಗಿದ್ದು ಒಂಭತ್ತನೆಯ (೯) ವಯಸ್ಸಿಗೆ ೧೩ನೇ ವಯಸ್ಸಿನ ಜ್ಯೋತಿಬಾಪುಲೆ ಅವರ ಜೊತೆಗೆ ವಿವಾಹ ಮಾಡಿದ್ದರು. ಇವಳ ಧೈರ್ಯ  ಶಿಕ್ಷಣ  ಕಲಿಯಬೇಕು  ಎಂಬ  ಹಂಬಲ ಕಂಡು  ಜ್ಯೋತಿಬಾಪುಲೆ  ಅವರು  ಪ್ರಥಮ ಗುರುಗಳಾಗಿ  ಶಿಕ್ಷಣವನ್ನು  ಕಲಿಸುತ್ತಾರೆ. ಔಪಚಾರಿಕವಾಗಿ ಓದು, ಬರಹ, ಕಲಿಯದ ಜೀವನ ಸಂಗಾತಿಗೆ ತಾನೇ ಅಕ್ಷರ ಕಲಿಸುತ್ತಾ ಒಟ್ಟೊಟ್ಟಿಗೆ ವಿದ್ಯಾಭ್ಯಾಸ ಕಲಿಯುತ್ತಿದ್ದರು. ಫುಲೆ  ದಂಪತಿಗಳು ಪರಸ್ಪರ ಹೊಂದಾಣಿಕೆಯಿಂದ ಜೀವನ ನಡೆಸುತ್ತಿದ್ದರು. ಜ್ಯೋತಿಬಾಪುಲೆ ತನ್ನ ಹೆಂಡತಿ ಸಾವಿತ್ರಿಬಾಯಿಯನ್ನು ವಿದ್ಯಾವಂತಳನಾಗಿ ಮಾಡಿ ಅಪಾರವಾದ ಆತ್ಮಾಭಿಮಾನ ಸ್ವಶಕ್ತಿಯುಳ್ಳ ಮಹಿಳೆಯನಾಗಿ ಪರಿವರ್ತಿಸಿದ್ದರು.  ಸಾವಿತ್ರಿಬಾಯಿಗೆ  ಮಿಷನರಿಯೊಬ್ಬರು ಕಾಣಿಕೆಯಾಗಿ ನೀಡಿದ ಪುಸ್ತಕವನ್ನು ತೆಗೆದುಕೊಂಡು ಗಂಡನ ಮನೆಗೆ ಬಂದಾಗ ಅದನ್ನು ನೋಡಿ ಹೆಚ್ಚು ಸಂತೋಷಪಟ್ಟ  ವ್ಯಕ್ತಿ ಎಂದರೆ ಜ್ಯೋತಿಬಾಪುಲೆಯವರು. 

ಸಾವಿತ್ರಿಬಾಯಿ ಮನೆಯಲ್ಲಿ ಅಕ್ಷರ ಅಭ್ಯಾಸ ಕಲಿತು ಓದುತ್ತಿರುವಾಗ ಜ್ಯೋತಿಬಾಪುಲೆ ಅವರು ಪುಣೆಯ ಸ್ಕಾಟಿಷ್ ಮಿಷನ್ ಸ್ಕೂಲಿನಲ್ಲಿ ಓದಲು ಮುಂದುವರಿಸಿದರು. ಜ್ಯೋತಿಬಾಪುಲೆ ಅವರ ಗೆಳೆಯರಾದ ಸದಾಶಿವ ಗೋವಿಂದ ವಾಲ್ವೇಕರ  ಮತ್ತಿತ್ತರು ಗೆಳೆಯರ ಜೊತೆಗೆ ಓದುತ್ತಿರುವಾಗ ತಮ್ಮ ಪತ್ನಿಯಿಂದ ಹೆಣ್ಣು ಮಕ್ಕಳಿಗೆ ಅಕ್ಷರ ಅಭ್ಯಾಸ ಕಲಿಸುವಂತೆ ಸಲಹೆ ನೀಡಿದರು .ಇದೇ ಸಮಯದಲ್ಲಿ ಸ್ತ್ರೀಯವಾದ ಎಂಬ ಪದ ಮತ್ತು ಪರಿಭಾಷೆ ಭಾರತೀಯ ಸಮಾಜದ ಮಹಿಳೆಯರಿಗೆ ತೋರುತ್ತಿರುವ ತಾರತಮ್ಯದ ಬಗೆಗೆ ಧ್ವನಿಯೆತ್ತಿದ್ದು ಇದು ಜ್ಯೋತಿಬಾಪುಲೆ ಅವರಿಗೆ ಸ್ಪೂರ್ತಿದಾಯಕಯಾಯಿತು. 

"ಶಿಕ್ಷಣವೇ ಶಕ್ತಿ' ಶಿಕ್ಷಣವೇ ಯುಕ್ತಿ" ಶಿಕ್ಷಣ ಸಂಘಟನೆ ಹೋರಾಟ ಡಾ. ಬಿ.ಆರ್ ಅಂಬೇಡ್ಕರ್ ಅವರ ತತ್ವ ಎಲ್ಲ ಕಾಲಕ್ಕೂ ಸೀಮಿತ.

 ಸಾವಿತ್ರಿಬಾಯಿ  ಅನಕ್ಷರಸ್ಥಳಾಗಿ ಫುಲೆ ಮನೆಗೆ ಕಾಲಿಟ್ಟಾಗ ಕೇವಲ ಒಂಭತ್ತು ವರ್ಷ  ೧೭ ವರ್ಷ ತುಂಬುವಷ್ಟರಲ್ಲಿ ಅಕ್ಷರ ವಿದ್ಯಾಭ್ಯಾಸ ಮಾಡುತ್ತಾ  ಶಿಕ್ಷಕರ ತರಬೇತಿ ಪಡೆದು ಸ್ವಾತಂತ್ರ್ಯ ಪೂರ್ವದಲ್ಲಿ ಭಾರತದ ಪ್ರಥಮ ಮಹಿಳಾ ಶಿಕ್ಷಕಿಯಾದರು. ತನ್ನ ವಿದ್ಯಾಭ್ಯಾಸವನ್ನು ಮುಗಿಸಿ ಸಾಧನೆಗೈದ ಅಪ್ರತಿಮ ಭಾರತೀಯ ಮಹಿಳೆ ಎನಿಸಿಕೊಂಡರು. ಅಂದು ಬ್ರಿಟಿಷ್ ಸರ್ಕಾರವು ಇಂಡಿಯನ್ "ಫಸ್ಟ್ ಲೇಡೀಸ್ ಟೀಚರ್" ಎಂಬ ಬಿರುದನ್ನು ಕೊಟ್ಟು ಸನ್ಮಾನಿಸಿದ್ದರು. ಫುಲೆ ದಂಪತಿಗಳು ತೆರೆದಿದ್ದ ಶಾಲೆಗೆ ತಾವೇ ಶಿಕ್ಷಕಿಯಾಗಿ ಮಕ್ಕಳಿಗೆ ಪಾಠ ಹೇಳಿಕೊಡುತ್ತಿದ್ದರು. ಶಾಲೆಗೆ ಪ್ರತಿದಿನ ಹೋಗುವಾಗ ಕೆಸರಿನಿಂದ ಸಗಣಿಯಿಂದ ಮೈ ಮೇಲೆ ಎಸೆಯುತ್ತಿದ್ದರು. ಕೆಟ್ಟ ಪದಗಳಿಂದ ನಿಂದನೆಗಳು ಮಾಡುತ್ತಿದ್ದರು  ಸವರ್ಣೀಯರು. ಇದೆಲ್ಲ ಸಹಿಸಲಾಗದೆ ನಾನು ಶಾಲೆಗೆ ಹೋಗಿ ಪಾಠ ಮಾಡುವುದಿಲ್ಲ ಎನ್ನುತ್ತಿದ್ದರು. ಜ್ಯೋತಿಬಾಪುಲೆ ಅವರು ಕಿಡಿಗೇಡಿಗಳ ಬೇಜವಾಬ್ದಾರಿಯ  ನಡವಳಿಕೆಗಳಿಗೆ ಹೆದರಬಾರದು ನೀನು ತುಂಬಾ ಧೈರ್ಯವಂತೆ ಎಂದು ಹೇಳಿ ಧೈರ್ಯ ತುಂಬಿ ಸಮಾಧಾನ ಮಾಡಿದರು. ಅವಮಾನಿಸಿದ್ದರೆ ಆತ್ಮಸ್ಥೈರ್ಯ ಕಳೆದುಕೊಳ್ಳಬಾರದು ನಮ್ಮ ದೀರ್ಘ ಹೋರಾಟದ ದಾರಿಯಲ್ಲಿ ಇಂತಹ ಸಣ್ಣಪುಟ್ಟ ಕಿರಿಕಿರಿಗಳು ಪರೀಕ್ಷೆಯೆಂದು ಸಾವಿತ್ರಿಯೂ ಅನಿಸಿತು. ಸಾವಿತ್ರಿಬಾಯಿ ತುಂಬಾ ಉದಾರಿಯಾಗಿದ್ದರು. ಅವರ ಹೃದಯ ಕರುಣಾಮಯವಾಗಿತ್ತು. ಬಡವರ ಅಸಹಾಯಕರ ಕುರಿತು ಬಹಳ ಸಹಾನುಭೂತಿ ಹೊಂದಿದ್ದರು. ತಾನು ಹರಿದ ಸೀರೆವುಟ್ಟು   ಬಡವರಿಗೆ ತನ್ನ ಹೊಸ ಸೀರೆಯನ್ನು ಬೇರೆ ಹೆಣ್ಣು ಮಕ್ಕಳಿಗೆ ಕೊಡುತ್ತಿದ್ದರು. ಸಾವಿತ್ರಿಬಾಯಿ ಶಿಸ್ತಿನ  ಕೆಲಸಗಾರರು ಸೂರ್ಯೋದಯಕ್ಕೆ ಮೊದಲೆ ಎದ್ದು ಸ್ನಾನಮಾಡಿ  ಮನೆ ಸ್ವಚ್ಛವಾಗಿಡುತ್ತಿದ್ದರು. ಫುಲೆ ದಾಂಪತಿಗಳು  ಒಂದನೇ ಜನೆವರಿ ೧೮೪೮ ರಲ್ಲಿ ಪ್ರಥಮ ಕನ್ಯಾ ಶಾಲೆ ಪ್ರಾರಂಭಿಸಿದ್ದರು. ಸುಮಾರು ೧೮ ಶಾಲೆಗಳನ್ನು ತೆರೆದಿದ್ದರು . ಸನಾತನ ಧರ್ಮದ ಪ್ರಬಲ ವಿರೋಧವಿದ್ದರೂ ಶಾಲೆಗಳನ್ನು ತೆರೆದು ಇತಿಹಾಸ ಸೃಷ್ಟಿಸಿದ್ದರು.‌ ಸಾವಿತ್ರಿಬಾಯಿ ಅವರ ಗಮನ ಹೆಚ್ಚು ಹೆಚ್ಚಾಗಿ ಹೆಣ್ಣು ಮಕ್ಕಳ ಮೇಲೆ ಕೇಂದ್ರಕೃತವಾಗಿತ್ತು. "ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ" ಎಂಬ ಗಾದೆಯಂತೆ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಿದರೆ ತನ್ನ ಕುಟುಂಬದ ಜೊತೆಗೆ ಸಮಾಜದಲ್ಲಿ ಪ್ರಗತಿಯನ್ನು ಕಾಣಬಹುದೆಂಬ  ಸತ್ಯವನು ಅರಿತುಕೊಂಡಿದ್ದರು. ಫುಲೆ ದಂಪತಿಗಳು "ಜ್ಞಾನವನ್ನು ಮೂರನೇ ಕಣ್ಣು" ಎನ್ನುತ್ತಿದ್ದರು. ಈ ಭೂಮಿ ಮೇಲೆ ಹುಟ್ಟುವ ಪ್ರತಿಯೊಂದು ಮಗು ವಿಶೇಷವಾದದ್ದು ಮಕ್ಕಳು ಭೂಮಿಯ ಮೇಲಿನ ನಕ್ಷತ್ರಗಳು ಎಂದಿದ್ದಾರೆ. "ಥಾಮ್ ವುಲ್ಫ್" ಸಾವಿತ್ರಿಬಾಯಿ ಫುಲೆ ಬಗ್ಗೆ ಹೀಗೆ ಹೇಳುತ್ತಾರೆ ಸಾವಿರಾರು ಮಕ್ಕಳಿಗೆ ಶಿಕ್ಷಣದ ದೀಪವನ್ನು ಹಚ್ಚಿದ ಆಧುನಿಕ ಶಿಕ್ಷಣದ ತಾಯಿ ಸಾವಿತ್ರಿಬಾಯಿಫುಲೆ ಎಂದಿದ್ದಾರೆ. ಹೀಗೆ ಸಾವಿತ್ರಿಬಾಯಿಫುಲೆಯವರು ಒಬ್ಬ ಸ್ತ್ರೀಯಾಗಿ, ಒಬ್ಬರ ಹೆಂಡತಿಯಾಗಿ, ಶಿಕ್ಷಕಿಯಾಗಿ ,ಮುಖೋ ಪಾಧ್ಯಾಯನಿಯಾಗಿ ,ಸಮಾಜ ಸೇವಕಿಯಾಗಿ ಕೆಲಸ  ನಿರ್ವಹಿಸಿದ್ದ ಮಹಾತಾಯಿ ಸಾವಿತ್ರಿಬಾಯಿ ಫುಲೆ....!

 "ಕೈಯಲ್ಲಿ ಹಿಡಿದರೆ ಲೇಖನಿ ಮೂಡುವುದು ಅಕ್ಷರದ ಖನಿ !ಕೈಯಲ್ಲಿ ಹಿಡಿದರೆ ಲೇಖನಿ ಮೂಡುವುದು ಚಿತ್ತಾರದ ಗಣಿ" ಎಂದು ಹೇಳುತ್ತ  ಶಿಕ್ಷಕರ ದಿನಾಚರಣೆಯ ಹಾರ್ದಿಕ ಶುಭಾಶಯಗಳು!

  -ಶ್ರೀಮತಿ ಬುದ್ಧದೇವಿ ಅಶೋಕ್ ಸಂಗಮ  ತಾ:ಜಿಲ್ಲೆ :ಬೀದರ್

ಶತಮಾನದ ಸಂತ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಶ್ರೀಗಳ ಪುಣ್ಯ ಸ್ಮರಣೆ:

 ಈ ಜಗತ್ತಿನಲ್ಲಿ ಅನೇಕ ಸಾಧು ಸಂತ ಮಹನೀಯರನ್ನು ನೋಡಿದ್ದೇವೆ ಕೇಳಿದ್ದೇವೆ, ಆದರೆ ಈಗಿನ ಕಾಲದಲ್ಲಿ ಜನರಿಗೆ ಸಾಧು ಸಂತ ಎಂದರೆ ಯಾರು ಎಂಬುದು ಸರಿಯಾಗಿ ತಿಳಿದಿಲ್ಲ. ಜಗತ್ತಿನ ಎಲ್ಲಾ ಕಾಮನೆಗಳನ್ನು ತೊರೆದು ಜಗತ್ತಿನ ಕಲ್ಯಾಣಕ್ಕಾಗಿ ಜನರ ಸೇವೆಗಾಗಿ ಸದಾ ತಮ್ಮನ್ನು ತಾವು ತೊಡಗಿಸಿಕೊಂಡು ಅದರ ಜೊತೆಗೆ ಆತ್ಮ ಪರಮಾತ್ಮನ ಸಾಕ್ಷಾತ್ಕಾರಕ್ಕೆ ಹಂಬಲಿಸುವವರೆ ಸಾಧು ಸಂತರು ಶರಣರು ಸನ್ಯಾಸಿಗಳು ದಾರ್ಶನಿಕರು. ಹೇಗೆ ಒಂದು ಜೇನುಹುಳು ಹೂವಿನ ಮೇಲೆ ಕುಳಿತು ಮಕರಂದವನ್ನು ಮಾತ್ರ ಹಿರಿಕೊಳ್ಳುವವೋ ಹಾಗೆಯೇ ಒಬ್ಬ ಸಂತ ಮಹನೀಯನು ಸಹ ಬೇರೆಯಾವ ವಿಷಯಗಳ ಬಗ್ಗೆ ಯೋಚಿಸದೆ ಸದಾ ಲೋಕಕಲ್ಯಾಣಕ್ಕಾಗಿ ತಮ್ಮನ್ನು ತಾವು ಸಂಪೂರ್ಣವಾಗಿ  ಅಂತಃಕರಣ ಶುದ್ಧಿಯಿಂದ ತೊಡಗಿಸಿಕೊಂಡವರೆ ಸಂತ ಶರಣ ದಾರ್ಶನಿಕ. ಅವರ ಸಾಲಿನಲ್ಲಿ ಮೊದಲಪಂಕ್ತಿಯಲ್ಲಿ ಬರುವವರೇ ಈ ಶತಮಾನದ  ಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳು.




ಸಿದ್ಧೇಶ್ವರ ಸ್ವಾಮೀಜಿ ಕರುನಾಡ ಕಂಡ ಅತ್ಯಂತ ಸರಳ ಸಜ್ಜನಿಕೆಯ ಸಾಕಾರ ಮೂರ್ತಿ, ನನ್ನದು-ತನ್ನದೆಂಬ ಆಸೆಯನ್ನು ತೊರೆದ ಮಹಾಪುರುಷರೇ ಶ್ರೀ ಸಿದ್ಧೇಶ್ವರ ಸ್ವಾಮಿಗಳವರು, ಇವರು ಸಂತರಷ್ಟೇ ಅಲ್ಲ ಜ್ಞಾನೋಪಾಸಕರು ಕೂಡ. ಈ ನಾಡಿನಲ್ಲಿ ಅನೇಕ ಸಂತರು ಸಾಧುಗಳು ಸತ್ಪುರುಷರು ಇದ್ದಾರೆ, ಇಂದಿನ ಪೀಳಿಗೆಯಲ್ಲಿ ಜ್ಞಾನಯೋಗಿಗಳು ಬಹಳ ಅಪರೂಪ. ಜಗತ್ತಿನ ಕಲ್ಯಾಣಕ್ಕಾಗಿ ಜನರ ಸೇವೆಗಾಗಿ ಸದಾ ಸಮರ್ಪಿತಭಾವದಿಂದ ಬದುಕಿದ ಯೋಗಿ, ಇವರ ಮಾತು ಎಂತಹ ಕಲ್ಲು ಮನಸ್ಸಿನವರನ್ನು ಸನ್ಮಾರ್ಗ ದೆಡೆಗೆ ಕರೆದೊಯ್ಯುವ ಶಕ್ತಿಯುಳ್ಳ ಮಹಾನ್ ಸಂತರಾಗಿದ್ದರು.

ಶ್ರೀ ಸಿದ್ದೇಶ್ವರ ಸ್ವಾಮಿಜಿಗಳ ಬಾಲ್ಯ ಜೀವನ:
ಶ್ರೀಗಳು ವಿಜಯಪೂರ ಜಿಲ್ಲೆ ಬಿಜ್ಜರಗಿ ಗ್ರಾಮದ ಸಾಮಾನ್ಯ ರೈತ ಕುಟುಂಬದಲ್ಲಿ 1941 ಅಕ್ಟೋಬರ್ 24 ರಂದು ಜನಿಸಿದರು.  ಸಿದ್ದಗೊಂಡಪ್ಪ ಇವರ ಬಾಲ್ಯದ ಹೆಸರು.
ಊರಿನಲ್ಲಿಯೇ ಪ್ರಾಥಮಿಕ ಶಿಕ್ಷಣ ನಾಲ್ಕನೇ ತರಗತಿವರೆಗೆ ಓದಿದ ನಂತರ ಅವರು ಮಲ್ಲಿಕಾರ್ಜುನ ಸ್ವಾಮಿಗಳ ಬಳಿ ಹೋದರು.
'ಬೆಳೆಯುವ ಪೈರು ಮೊಳಕೆಯಲ್ಲೇ’ ಎಂಬಂತೆ ಬಾಲಕ ಸಿದ್ಧೇಶ್ವರರ  ಚುರುಕುತನ ಮಲ್ಲಿಕಾರ್ಜುನ ಸ್ವಾಮಿಗಳ ಗಮನಕ್ಕೆ ಬರಲು ತಡವಾಗಲಿಲ್ಲ. ತಾವು ಪ್ರವಚನ ಮಾಡುವ ಸ್ಥಳಗಳಿಗೆ ಮಲ್ಲಿಕಾರ್ಜುನ ಸ್ವಾಮಿಗಳು ಸಿದ್ಧೇಶ್ವರರನ್ನು ಕರೆದೊಯ್ಯ ತೊಡಗಿದರು. ಜೊತೆಯಲ್ಲಿಯೇ ಅವರ ಶಾಲಾ ಕಾಲೇಜುಗಳ ವಿದ್ಯಾಭ್ಯಾಸವೂ ಮುಂದುವರಿಯುವಂತೆ ನೋಡಿಕೊಂಡರು. ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪದವಿ ನಂತರ ಸ್ನಾತಕೋತ್ತರ ವಿದ್ಯಾಭ್ಯಾಸಕ್ಕೆ ಕೊಲ್ಹಾಪುರ ವಿಶ್ವವಿದ್ಯಾನಿಲಯದಿಂದ ತತ್ವಶಾಸ್ತ ವಿಷಯದಲ್ಲಿ ಎಂ.ಎ ಪದವಿಯನ್ನು ಮುಗಿಸಿದರು.

ಜ್ಞಾನಯೋಗಾಶ್ರಮ:
ವಿಜಯಪುರದ ಜ್ಞಾನಯೋಗಾಶ್ರಮ ಜನತೆಗೆ ಜ್ಞಾನದಾಸೋಹ ನೀಡುವ ವಿಶಿಷ್ಟ ಕೇಂದ್ರ. ಗದುಗಿನ ಶಿವಾನಂದ ಶ್ರೀಗಳ ಪರಂಪರೆಯಲ್ಲಿ ಬಂದ ಈ ಆಶ್ರಮ ಇವರ ಗುರುಗಳಾದ ವೇದಾಂತ ಕೇಸರಿ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳ ಕಾಲದಲ್ಲಿ ಅತ್ಯಂತ ಹೆಸರುವಾಸಿಯಾಗಿತ್ತು.  ಉತ್ತರ ಕರ್ನಾಟಕದ ಜನಮಾನಸದಲ್ಲಿ ಅತ್ಯಂತ ಮಹತ್ವ ಪಡೆಯಿತು. ನಿಸ್ವಾರ್ಥ ಸೇವೆ, ಜಾತಿ ಮತ ಕೀಳು ಮೇಲು ಎಂಬ ಭೇದಭಾವಗಳಿಲ್ಲದೆ, ಯಾರ ಹಂಗಿಗೂ ಒಳಗಾಗದೆ ಸರ್ವಜನರಿಂದಲೂ ಪ್ರೀತಿ, ವಿಶ್ವಾಸದ ಆಶ್ರಯತಾಣವಾಗಿ ಬೆಳೆಯಿತು. ಪೂಜ್ಯ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು ಪ್ರವಚನದ ಮೂಲಕ ಜನರಲ್ಲಿ ಜ್ಞಾನದ ಜ್ಯೋತಿಯನ್ನು ಬೆಳಗುತ್ತಿದ್ದರು. ಕರ್ನಾಟಕವಲ್ಲದೆ ಮಹಾರಾಷ್ಟ್ರದ ಪ್ರಮುಖ ನಗರಗಳಲ್ಲಿ ತಿಂಗಳುಗಟ್ಟಲೆ ಪ್ರವಚನ ನೀಡುತ್ತಿದ್ದರು. ಇವರ ಗಾಢ ಪ್ರಭಾವ ಸುತ್ತಮುತ್ತಲ ಜನರ ಮೇಲೆ ಉಂಟಾಗಿ ಕ್ರಮೇಣ ಶ್ರೀಗಳು ಗ್ರಾಮೀಣ ಪ್ರದೇಶದ ಮಕ್ಕಳು ವಿದ್ಯೆಗಾಗಿ ಕಷ್ಟಪಡುತ್ತಿದ್ದುದನ್ನು ಗಮನಿಸಿ ಅವರಿಗಾಗಿ ವಿದ್ಯಾಸಂಸ್ಥೆಗಳನ್ನು ಪ್ರಾರಂಭಿಸಿ ಅವರಿಗೆ ಊಟ, ವಸತಿಗಳಿಗೆ ವ್ಯವಸ್ಥೆ ಮಾಡಿದ್ದರು. ಇದರಿಂದಾಗಿ ಸಾವಿರಾರು ಮಕ್ಕಳು ವಿದ್ಯಾವಂತರಾದರು. ಹಾಗೆ ವಿದ್ಯೆ ಕಲಿಯಲು ಬಂದ ಸಾವಿರಾರು ಮಕ್ಕಳಲ್ಲಿ ಶ್ರೀ ಸಿದ್ದೇಶ್ವರರೂ ಒಬ್ಬರಾಗಿದ್ದರು.
ಪರಮ ಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳು ಆಧ್ಯಾತ್ಮದ ಬಗ್ಗೆ ತುಂಬ ಆಳವಾದ ಅಧ್ಯಯನ ಚಿಂತನೆಗಳನ್ನು ನಡೆಸಿರುವ ಶ್ರೇಷ್ಠ ಅನುಭಾವಿಗಳೂ, ಮಧುರ ಸ್ವಭಾವದವರೂ ಆಗಿದ್ದು ಪಂಚಭಾಷಾ ನಿಪುಣರಾಗಿದ್ದರು. ಕನ್ನಡ ಸಂಸ್ಕೃತ ಹಿಂದಿ ಮರಾಠಿ ಇಂಗ್ಲಿಷ್ ಭಾಷೆಗಳ ಜ್ಞಾನವನ್ನು ಹೊಂದಿರುವ ಇವರು
ಆಧ್ಯಾತ್ಮಿಕದಂತೆ ಲೌಕಿಕ ವಿಷಯಗಳಲ್ಲೂ ವಿಶೇಷ ಜ್ಞಾನ ಹೊ0ದಿದ್ದ ಶ್ರೀಗಳು ಮುಂದೆ ಜಗತ್ತಿಗೇ ದೊಡ್ಡವನಾಗುತ್ತಾನೆ ಎಂದು ವಿಶ್ವಾಸದಿಂದ ಎಲ್ಲರೆದುರು ಹೇಳುತ್ತಿದ್ದರು. ಸ್ನಾತಕೋತ್ತರ ಪದವಿ ಪಡೆದು ಬಿಜಾಪುರಕ್ಕೆ ಹಿಂದಿರುಗಿದ ನಂತರ ಸಿದ್ದೇಶ್ವರರಿಗೆ ಭಗವದ್ಗೀತೆಯ ಬಗ್ಗೆ, ಉಪನಿಷತ್ತುಗಳ ಬಗ್ಗೆ ಮಲ್ಲಿಕಾರ್ಜುನ ಸ್ವಾಮಿಗಳು ಸವಿಸ್ತಾರವಾಗಿ ಅಭ್ಯಾಸವನ್ನು ನೀಡಿ ಅವರ ಜ್ಞಾನದಿಂಗಿತವನ್ನು ವಿಸ್ತರಿಸಿದರು. ಪೂಜ್ಯರು ಉಪನಿಷತ್ತುಗಳು, ಭಗವದ್ಗೀತೆ, ಯೋಗಸೂತ್ರ, ವಚನಶಾಸ್ತ್ರ ಮುಂತಾದ ವಿಷಯಗಳ ಬಗೆಗೆ ತಾವು ಹೇಗೆ ಗುರುಗಳಿಂದ ಕಲಿತ ಜ್ಞಾನವನ್ನು ಬಳಸಿಕೊಂಡು ಪ್ರವಚನಗಳನ್ನು ನೀಡುತ್ತಿದ್ದರು. ಸೂಕ್ಷ್ಮ ವಿಚಾರಗಳನ್ನು, ವೇದಾಂತ ತತ್ವಗಳನ್ನು ಅತ್ಯಂತ ಸರಳವಾಗಿ ಜನರ ಮನಸ್ಸಿನಲ್ಲಿ  ಉಳಿಯುವಂತೆ ಅತ್ಯಂತ ಸರಳವಾಗಿ ವಿವರಿಸುವುದೇ ಅವರ ವೈಶಿಷ್ಟ್ಯ.

ಪ್ರಶಸ್ತಿ ಗೌರವಗಳು ಬೇಕೆಂದು ವಿಧಾನಸೌಧದಲ್ಲಿ ಎಲ್ಲಾ ಮಂತ್ರಿಗಳ ಕೈ ಕಾಲು ಹಿಡಿದು , ಧನ ದ್ರವ್ಯವನ್ನು ಕೊಟ್ಟು ಅನೇಕರಿಂದ ಶಿಫಾರಸ್ಸು ಪಡೆದು ಪ್ರಶಸ್ತಿ ಕೇಳುವ ಜನರನ್ನು ನಾವು ನೋಡಿದ್ದೇವೆ ಪ್ರಶಸ್ತಿಗಾಗಿ ಗಲ್ಲಿ ಗಲ್ಲಿಗಳಲ್ಲಿ ಸುತ್ತಾಡಿ ಪ್ರಶಸ್ತಿಯನ್ನು ಸ್ವೀಕರಿಸುತ್ತಾರೆ. ಪ್ರಶಸ್ತಿ ಗೌರವ ಮನ್ನಣೆಗಾಗಿ ಹಪಹಪಿಸುವ ಜನರ ನಡುವೆ ಪ್ರಶಸ್ತಿ ಪುರಸ್ಕಾರಗಳನ್ನು  ನಗುನಗುತ್ತಲೇ ತಿರಸ್ಕರಿಸಿದ ಸರಳ ವ್ಯಕ್ತಿಯನ್ನು ಎಲ್ಲೂ ಕಾಣಲು ಸಾಧ್ಯವಿಲ್ಲ. ಅವರು ಆಧ್ಯಾತ್ಮ, ಆದರ್ಶ ಮತ್ತು ನೈತಿಕತೆ ಬಗ್ಗೆ ಕೇವಲ ಬೋಧನೆ ಮಾಡುವುದಷ್ಟೇ ಅಲ್ಲ. ಅವುಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದ್ದ ಅವರು ನುಡಿದಂತೆ ನಡೆಯುವ ಮತ್ತು ನಡೆದಂತೆಯೇ ನುಡಿಯುವ ವ್ಯಕ್ತಿತ್ವದವರಾಗಿದ್ದರು.
ಭಾರತ ಸರಕಾರ ಇವರ ಕಾರ್ಯವನ್ನು ಗುರುತಿಸಿ ಇವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಲು ಹೆಸರು ಘೋಷಿಸಿತ್ತು ಆದರೆ ಶ್ರೀಗಳು "ಭಾರತ ಸರಕಾರ ನೀಡುವ ಅತ್ಯುನ್ನತ ನಾಗರಿಕ ಗೌರವ ಪ್ರಶಸ್ತಿಗಳ ಮೇಲೆ ನನಗೆ ಅಪಾರ ಗೌರವವಿದೆ. ಪದ್ಮಶ್ರೀ ಪ್ರಶಸ್ತಿ ಘೋಷಿಸಿದ್ದಕ್ಕೆ ಧನ್ಯವಾದಗಳು. ಆದರೆ ನಾನೊಬ್ಬ ಸರಳ ವ್ಯಕ್ತಿ. ಸಾಮಾನ್ಯ ಜೀವನ ನಡೆಸುತ್ತ, ಆಧ್ಯಾತ್ಮಿಕ ಬೋಧನೆಯ ಮೂಲಕ ಜನರ ಜೀವನ ಉದಾತ್ತಗೊಳಿಸುವುದು ಉದ್ದೇಶ ನನ್ನದು ಹಾಗಾಗಿ ಪ್ರಶಸ್ತಿಗಳ ಅವಶ್ಯಕತೆಯು ನನಗಿಲ್ಲ. ಎಲ್ಲ ಗೌರವಾದರಗಳೊಂದಿಗೆ ಈ ಪ್ರಶಸ್ತಿಯನ್ನು ಹಿಂದಿರುಗಿಸುತ್ತಿದ್ದೇನೆ. ಅನ್ಯಥಾ ಭಾವಿಸದಿರಿ" ಎಂದು ಸಿದ್ದೇಶ್ವರ ಸ್ವಾಮೀಜಿಗಳು ಪದ್ಮಶ್ರೀ ಪ್ರಶಸ್ತಿಯನ್ನು ನಿರಾಕರಿಸಿದ್ದರು. ಅದೇರೀತಿಯಾಗಿ ಕರ್ನಾಟಕ ವಿಶ್ವವಿದ್ಯಾನಿಲಯ ಅವರಿಗೆ ಗೌರವ ಡಾಕ್ಟರೇಟ್ ಪ್ರಕಟಿಸಿತ್ತು. ಅದನ್ನೂ ಸಹ ಶ್ರೀಗಳು ಸ್ವೀಕರಿಸಿರಲಿಲ್ಲ. ಹೀಗೆ ತಮಗೆ ಒದಗಿ ಬಂದ ಎಷ್ಟೋ ಪ್ರಶಸ್ತಿ ಪುರಸ್ಕಾರಗಳನ್ನು ಅವರು ವಿನಮೃವಾಗಿಯೇ ನಿರಾಕರಿಸಿದ್ದರು. ಇವರ ಜ್ಞಾನ ದೇಶ ವಿದೇಶಗಳಲ್ಲಿ ಪಸರಿಸಿದೆ. ಸಿದ್ಧೇಶ್ವರ ಸ್ವಾಮೀಜಿ ಎಂತಹ ಸರಳ ವ್ಯಕ್ತಿಯನ್ನು ಎಲ್ಲಿಯೂ ನೋಡಲು ಸಾಧ್ಯವಿಲ್ಲ. ಇವರು ಕಿಸೆ ಇಲ್ಲದ ಸ್ವಾಮೀಜಿ ಎಂದೇ ಹೆಸರು ವಾಸಿಯಾಗಿದ್ದವರು. ಜ್ಞಾನದಲ್ಲಿ ಬೃಹತ್ ಪರ್ವತದಂತೆ ಕಾಣುತ್ತಿದ್ದರು. ಅತ್ಯಂತ ಸುಂದರ ಸರಳ ರೀತಿಯಲ್ಲಿ ಪ್ರವಚನ ಹೇಳುತ್ತಿದ್ದ  ಇವರು ಜ್ಞಾನದ ನಿಧಿಯಾಗಿದ್ದರು. ಶತಮಾನದ ಸಂತ ಸಿದ್ಧೇಶ್ವರ ಶ್ರೀಗಳು ದಿನಾಂಕ 2 ಜನೆವರಿ 2023 ರಂದು ವಿಜಯಪುರದ ಜ್ಞಾನಯೋಗಾಶ್ರಮದಲ್ಲಿ ಇಹಲೋಕ ತ್ಯಜಿಸಿದರು. ನಮ್ಮನ್ನಗಲಿ ಇಂದಿಗೆ 2 ವರ್ಷ ಕಳೆದರೂ ಅವರು ಹೇಳಿಕೊಟ್ಟ  ನೀತಿಪಾಠ ಅಧ್ಯಾತ್ಮದ ಅರಿವು, ಸರಳತೆಯ ಸೂತ್ರ, ವಿಶ್ವ ಶಾಂತಿ, ಪರಸ್ಪರ ಪ್ರೇಮದ ಸಾಲುಗಳು ಇಂದಿಗೂ ನಮ್ಮ ಮನ ಮನದಲ್ಲಿ ಅಚ್ಚಳಿಯದೆ ಉಳಿದಿವೆ. ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿಗಳ 2ನೆಯ ವಾರ್ಷಿಕ ಪುಣ್ಯಸ್ಮರಣೆ ನಿಮಿತ್ತ ಈ ಲೇಖನ.
-ಸಿದ್ಧಲಿಂಗ ಶಿವಯೋಗಿ ಮಠಪತಿ ಸ್ವಾಮಿ ಉಚ್ಚಾ ತಾ. ಭಾಲ್ಕಿ ಜಿ. ಬೀದರ್

ಪ್ರೇಮ ಕಾಶ್ಮೀರದಲ್ಲಿ ರಕ್ತದೋಕುಳಿ; ಹಿಂದೂಗಳೇ ಟಾರ್ಗೆಟ...!

  ಪ್ರೇಮ ಕಾಶ್ಮೀರದಲ್ಲಿ ರಕ್ತದೋಕುಳಿ; ಹಿಂದೂಗಳೇ ಟಾರ್ಗೆಟ್. ಭೂಲೋಕದ ಸ್ವರ್ಗವೆಂದೇ ಕರೆಯುವ ಜಮ್ಮು-ಕಾಶ್ಮೀರದ ಪೆಹಲ್ಗಾಮ್ ಸಮೀಪದ ಬೈಸರನ್ ಹುಲ್ಲುಗಾವಲಿನಲ್ಲಿ ಪಾಕ್ ಪ್...