ads

Search This Blog

Sunday, 5 January 2025

ದೇವಸ್ಥಾನಗಳ ಮೂಲಕ ಧರ್ಮಪ್ರಚಾರ ಮಾಡಲು ಕರ್ನಾಟಕ ರಾಜ್ಯ ದ್ವಿತೀಯ ಮಂದಿರ ಅಧಿವೇಶನದಲ್ಲಿ ೮೦೦ಕ್ಕೂ ಹೆಚ್ಚು ವಿಶ್ವಸ್ಥರ ನಿರ್ಧಾರ

ಬೆಂಗಳೂರು : ಸಾಮಾಜಿಕನ್ಯಾಯ , ಕುಟುಂಬಶಿಕ್ಷಣ ವ್ಯವಸ್ಥೆಯನ್ನು ಒಂದೊಂದಾಗಿ ನಾವೇ ಸರ್ಕಾರಕ್ಕೆ ಒಪ್ಪಿಸಿದ್ದೇವೆಸಮಾಜ ಸರಕಾರದ ಅಧೀನವಾಗುವುದು ದೈನ್ಯ ಪರಿಸ್ಥಿತಿಯಾಗಿದೆಪ್ರತಿಯೊಂದು ವ್ಯವಸ್ಥೆಯಲ್ಲಿ ಸಮಾಜದ ಜನರು ಧರ್ಮದ ಆಧಾರವನ್ನು ಇಟ್ಟುಕೊಂಡು ಜೀವನ ನಡೆಸಿದರೆ ನಮ್ಮ ಸರ್ವಾಂಗೀಣ ಉನ್ನತಿಯಾಗುತ್ತದೆಸರಕಾರದ ಹಸ್ತಕ್ಷೇಪದಿಂದ ದೇವಸ್ಥಾನಗಳನ್ನು ಹಿಂಪಡೆದರ ಮಾತ್ರ ಪುನಃ ಸಮಾಜದ ಅಭಿವೃದ್ಧಿಯನ್ನು ಮಾಡಲು ಸಾಧ್ಯವಾಗಬಹುದು ಎಂದು ಉಪಸ್ಥಿತರಿಗೆ ಶ್ರೀ ಅಭಿನವ ಶಂಕರ ಭಾರತಿ ಮಹಾಸ್ವಾಮೀಜಿ ಮಾರ್ಗದರ್ಶನವನ್ನು ಮಾಡಿದರು.

ದೇವಸ್ಥಾನಗಳ ಸಂಸ್ಕೃತಿಯ ರಕ್ಷಣೆಗಾಗಿ ಕರ್ನಾಟಕ ಮಂದಿರ ಮಹಾಸಂಘ ಮತ್ತು ಹಿಂದೂ ಜನಜಾಗೃತಿ ಸಮಿತಿಯ ಆಯೋಜಿತ ‘ಕರ್ನಾಟಕ ರಾಜ್ಯ ದ್ವಿತೀಯ ಮಂದಿರ ಅಧಿವೇಶನವು ಗಂಗಮ್ಮ ತಿಮ್ಮಯ್ಯ ಕನ್ವೆಂಷನ್ ಹಾಲ್‌, ಬಸವೇಶ್ವರ ನಗರಬೆಂಗಳೂರಿನಲ್ಲಿ ಎರಡನೆಯ ದಿನವು  ಯಶಸ್ವಿಯಾಗಿ ನಡೆಯುತ್ತಿದೆ ಸಮಯದಲ್ಲಿ ಸನಾತನ ಪಂಚಾಂಗ ಆ್ಯಂಡ್ರಾಯ್ಡ್ ಆ್ಯಪ್ 2025 ಇದರ ಲೋಕಾರ್ಪಣೆ ಮಾಡಲಾಯಿತು  (ಸನಾತನ ಪಂಚಾಂಗ ಆ್ಯಪ್ ನಲ್ಲಿ ಆಯಾದಿನದ ಮಾಹಿತಿಪಂಚಾಂಗಮುಹೂರ್ತ ಮಾತ್ರವಲ್ಲದ  ಹಬ್ಬ  ಉತ್ಸವಗಳು,  ಆಧ್ಯಾತ್ಮಆಯುರ್ವೇದ ಮತ್ತು ಧರ್ಮಶಿಕ್ಷಣಕ್ಕೆ ಸಂಬಂಧಿಸಿದ ಲೇಖನಗಳು ಲಭ್ಯವಿರುವುದು )  ನಂತರ ಸನಾತನದ ಗ್ರಂಥವಾದ 'ಆಯುರ್ವೇದವನ್ನು ಪಾಲಿಸಿ ಔಷಧಿಗಳಿಲ್ಲದೇ ಆರೋಗ್ಯವಂತರಾಗಿಇದರ -ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.

ಧರ್ಮ ಪಾಲನೆಯಿಂದಲೇ ವಿಶ್ವದ ಶಾಂತಿ ಸಾಧ್ಯ ! - ಪೂಜ್ಯ ಸಿಧ್ಧಲಿಂಗ ಸ್ವಾಮಿಜಿ

ಸಂಸ್ಕೃತಿಯನ್ನು ಬೆಳೆಸುವ ಕಾರ್ಯ ದೇವಸ್ಥಾನ ಮಾಡಬಲ್ಲದುವೇದ ಪಾರಾಯಣ , ಸಾಮೂಹಿಕ ಪೂಜೆಯಜ್ಞ ಇತ್ಯಾದೆಗಳ ಮೂಲಕ ದೇವಸ್ಥಾನ ಮತ್ತು ಮಠಗಳಲ್ಲಿ ಜಾಗೃತಿ ಮೂಡಿಸಬೇಕುಧರ್ಮದಿಂದಲೇ ವಿಶ್ವದಶಾಂತಿಮಾನವ ಧರ್ಮದ ಮೌಲ್ಯವನ್ನು  ಎತ್ತಿಹಿಡಿದಾಗ ವಿಶ್ವಕಲ್ಯಾಣ ಸಾಧ್ಯವಿಶ್ವವೇ ನಮ್ಮ ಮನೆಲೋಕಾ ಸಮಸ್ತಾ ಸುಖಿನೋ ಭವಂತು ಎಂಬ ಧ್ಯೇಯವನ್ನಿಟ್ಟು ಧರ್ಮದ ರಕ್ಷಣೆ ಮಾಡಲು ಸ್ಕಂದೇಶ್ವರ ಸ್ವಾಮಿ ದೇವಸ್ಥಾನದ ಪೂಜ್ಯ ಸಿಧ್ಧಲಿಂಗ ಸ್ವಾಮಿಜಿ ಮಾರ್ಗದರ್ಶನ ಮಾಡಿದರು.

ಹಿಂದೂ ಸಂಸ್ಕೃತಿಯ ಉಳಿವಿಗಾಗಿ ಜಾಗೃತಿ ಅಗತ್ಯ - ವೇದ ಬ್ರಹ್ಮ  ಶ್ರೀ ಇಂದ್ರಾಚಾರ್ಯ

ಹಿಂದೂ ಧರ್ಮ , ಮತ್ತು ಸಂಸ್ಕೃತಿ ಉಳಿಸಿ ಬೆಳೆಸುವ ಮತ್ತು ಹಿಂದೂ ಧರ್ಮ ಜಾಗೃತಿ  ಕಾರ್ಯ ಪ್ರತಿಯೊಂದು ದೇವಸ್ಥಾನದಲ್ಲಿ ಆಗಬೇಕೆಂಬುದರ ಮಹತ್ವವನ್ನು ವೇದ ಬ್ರಹ್ಮ ಶ್ರೀ ಇಂದ್ರಾಚಾರ್ಯ ಇವರು  ಉಪಸ್ಥಿತರಿಗೆ ತಿಳಿಸಿದರು.

ಪಾಕಿಸ್ತಾನದಲ್ಲಿ ಸನಾತನ ಬೋರ್ಡ್ ಇಲ್ಲಬಾಂಗ್ಲಾದೇಶದಲ್ಲಿ ಸನಾತನ ಬೋರ್ಡ್ ಇಲ್ಲಹಾಗಿದ್ದರೆ ಭಾರತದಲ್ಲಿ ವಕ್ಫ್ ಬೋರ್ಡ್ ಯಾಕೆ ? - ಶ್ರೀ.ಸುನಿಲ್ ಘನವಟ್

ಇಂದು ದೇವಸ್ಥಾನಗಳ ಪವಿತ್ರ ಭೂಮಿ ಒಂದು ರಾಕ್ಷಸಿ ಕಾನೂನಿನ ಮೂಲಕ ವಕ್ಫ್ ಬೋರ್ಡ್ ವಶವಾಗುತ್ತಿದೆವಕ್ಫ್ ಬೋರ್ಡ್ ಮೂಲಕ ಯಾರ ಭೂಮಿಯೇ ಇರಲಿಅದಕ್ಕೆ ಒಂದು ನೋಟಿಸ್ ಕೊಟ್ಟು ಭೂಮಿಯನ್ನು ವಕ್ಫ್ ವಶಪಡಿಸಿಕೊಳ್ಳಬಹುದುಕೇವಲ ನಾಗರಿಕರದ್ದಲ್ಲಕರ್ನಾಟಕ ರಾಜ್ಯದ ಸುಮಾರು ೨೫೦೦೦ ಎಕ್ರೆ ಭೂಮಿಯ ಮೇಲೆ ವಕ್ಫ್ ದಾವೆ ಹೂಡಿದೆಭಾರತದಲ್ಲಿ ಇಂತಹ ಅನೇಕ ಕ್ಷೇತ್ರಗಳನ್ನು ವಕ್ಫ್ ಬೋರ್ಡ್ ಅನಧಿಕೃತವಾಗಿ ವಶಪಡಿಕೊಂಡಿದೆಭಾರತದಲ್ಲಿ  ಲಕ್ಷ ೫೦ ಸಾವಿರ ಎಕರೆ ಜಾಮೀನು ವಕ್ಫ್ ಬೋರ್ಡ್ ದ್ದಾಗಿದೆದೇವಸ್ಥಾನಕ್ಕೆ ಸಂಬಂಧಿಸಿದ ಕಾಗದಪತ್ರಗಳನ್ನುದಾಖಲೆಗಳನ್ನು ನವೀಕರಿಸಿ ವಕ್ಫ್ ಬೋರ್ಡ್  ಸಂಕಟದಿಂದ ದೇವಸ್ಥಾನಗಳನ್ನು ರಕ್ಷಿಸಿ ಎಂದು ಶ್ರೀ.ಸುನಿಲ್ ಘನವಟ್ ಇವರು ಕರೆ ನೀಡಿದರು.

ಕರ್ನಾಟಕ ಮಂದಿರ ಅಧಿವೇಶನಕ್ಕೆ ತುಮಕೂರು ಮತ್ತು ಬೆಂಗಳೂರು ಜಿಲ್ಲೆಯಿಂದ 34 ಕ್ಕೂ ಅಧಿಕ ದೇವಸ್ಥಾನದ  ವಿಶ್ವಸ್ಥರು ಪಾಲ್ಗೊಂಡಿದ್ದು ಇಲ್ಲಿ ನಡೆದ ಗುಂಪು ಚರ್ಚೆಗಳಲ್ಲಿ ತಮ್ಮ ತಮ್ಮ ಜಿಲ್ಲೆಯಲ್ಲಿನ ಮಂದಿರಗಳಲ್ಲಿ ಧರ್ಮ ಶಿಕ್ಷಣ ವರ್ಗಗಳನ್ನು ಪ್ರಾರಂಭಿಸುವುದು, ಧರ್ಮ ಶಿಕ್ಷಣ ನೀಡುವ ಫಲಕಗಳನ್ನು ಅಳವಡಿಸುವುದು, ಸರಕಾರೀಕರಣದ ವಿರುದ್ಧ ಹೋರಾಡುವುದು, ಮಂದಿರ ಮಹಾಸಂಘದೊಂದಿಗೆ ಕೈಜೋಡಿಸಿ ಪ್ರತಿಯೊಂದು ಉಪಕ್ರಮಗಳಲ್ಲಿ ಸಹಭಾಗಿ ಆಗುವಂತೆ ಸಂಕಲ್ಪ ಮಾಡಿದರು. ತುಮಕೂರು  ಜಿಲ್ಲೆಯ ಡಾ.ಅರ್.ಎಲ್.ರಮೇಶ್ ಬಾಬು, ಸಿ.ಆರ್. ಮೋಹನ್ ಕುಮಾರ್,  ಎಂ.ಮನೋಜ್, ಆನಂದ್ ಗುರೂಜೀ ಹಾಗೂ ಇತರ ಗಣ್ಯರು  ಉಪಸ್ಥಿತರಿದ್ದರು.

ಅಪ್ಪಟ ಕನ್ನಡಿಗ ಸಮಾಜ ಜೀವಿ ಶ್ರೀನಿವಾಸ ತೇಲಂಗಗೆ ಮುಡಿಗೆರಿದ ಗೌರವ ಡಾಕ್ಟರೇಟ್ ಪದವಿ

ಶೋಧವಾಣಿ ಜಾಲಲೋಕ

ಬೆಂಗಳೂರು : ಅಪ್ಪಟ ಕನ್ನಡಿಗ ಮಹಾರಾಷ್ಟ್ರ ಮರಾಠಿ ನಾಡಿನಲ್ಲಿ ಕನ್ನಡ ಕೈಂಕರ್ಯ ಗೈಯುತ್ತ ಮರಾಠವಾಡ ಪ್ರಾಂತ್ಯದಲ್ಲಿ ಅನೇಕ ಸಾಮಾಜಿ. ಸಾಂಸ್ಕೃತಿಕ ಕನ್ನಡ ಸಮಾರಂಭ ಆಯೋಜನೆ ಮಾಡುತ್ತ ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ ಔರಂಗಾಬಾದ್ ಮರಾಠವಾಡ ಕನ್ನಡ ಸಾಂಸ್ಕೃತಿಕ ಸಂಘದ ಸಂಸ್ಥಾಪಕ ಶ್ರೀನಿವಾಸ ತೇಲಂಗ ಅವರಿಗೆ ತಮಿಳನಾಡಿನ ಅಸೀಯನ ಅಂತರರಾಷ್ಟ್ರೀಯ ಸಂಸ್ಕೃತ ಸಂಶೋಧನೆ ವಿಶ್ವವಿದ್ಯಾಲಯ ಅವರ ಸಮಾಜಿಕ ಕೊಡುಗೆಯನ್ನು ಗುರುತಿಸಿ ಶನಿವಾರ ಬೆಂಗಳೂರನಲ್ಲಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. 

ಶ್ರೀನಿವಾಸ ತೇಲಂಗಗೆ ತಮಿಳನಾಡಿನ ಅಸೀಯನ ಅಂತರರಾಷ್ಟ್ರೀಯ ಸಂಸ್ಕೃತ ಸಂಶೋಧನೆ ವಿಶ್ವವಿದ್ಯಾಲಯ  ಶನಿವಾರ ಬೆಂಗಳೂರನಲ್ಲಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. 

ಶ್ರೀನಿವಾಸ ತೇಲಂಗ ಮೂಲತ ಬೀದರ ಜಿಲ್ಲೆಯ ಬಸವಕಲ್ಯಾಣ ತಾಲೂಕಿನಲ್ಲಿ ಬರುವ  ಇಸ್ಲಾಂಪುರ ಎಂಬ ಕುಗ್ರಾಮದಲ್ಲಿ ಜನಿಸಿದರು. ಚಿಕ್ಕ ವಯಸ್ಸಿನಲ್ಲೇ ಬಡತನದ ಬೇಗೆಯಿಂದ ಬಳಲಿ. ಜೀವನದಲ್ಲಿ ಬಡತನ ಹೋಗಲಾಡಿಸಲು ಶಿಕ್ಷಣ ಒಂದೇ ಉಪಾಯ ಎಂದು ತಿಳಿದು ಹುಮನಾಬಾದನಲ್ಲಿ ಐಟಿಐ ಮುಗಿಸಿ ಇಂದು ಚೈನಾ ಎಂಬ ದೊಡ್ಡ ದೇಶದ ಕಂಪನಿಯಲ್ಲಿ ಭಾರತದ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸುತ್ತಲೇ ಇಂದು ಔರಂಗಾಬಾದ್ ನಲ್ಲಿ ಕನ್ನಡಿಗರನ್ನು ಸಂಘಟಿಸಿ ಅನೇಕ ಮಾದರಿಯ ಕಾರ್ಯಕ್ರಮ ನೀಡಿದ ಹೆಗ್ಗಳಿಕೆ ತೇಲಂಗ ಅವರದು. 

ಶೋಧವಾಣಿ ನ್ಯೂಸ್ ನಿಂದಿಗೆ ಮಾತನಾಡಿದ ತೇಲಂಗ ನಮ್ಮ ಚಿಕ್ಕ ವಯಸ್ಸಿನಲ್ಲೇ ಎಲ್ಲವನ್ನೂ ಕಂಡುಕೊಂಡೆ ಗ್ರಾಮದಲ್ಲಿ ಜೀವನ ನಡೆಸಲು ಆಗದಂತಹ ಪರಿಸ್ಥಿತಿಯಲ್ಲಿ ನಮಗೆ ಅನೇಕರು ಗ್ರಾಮದ ಪ್ರಮುಖ ವ್ಯಕ್ತಿಗಳು ನನ್ನ ಜೀವನದ ತಿರುವಿಗೆ ಸಹಕಾರ ನೀಡಿದ ಎಲ್ಲಾ ಆತ್ಮೀಯ ಹಿರಿಯರಿಗೆ ಈ ಗೌರವ ಡಾಕ್ಟರೇಟ್ ಪ್ರಶಸ್ತಿಯನ್ನು ಅರ್ಪಿಸುತ್ತೇನೆ ಎಂದು ಭಾವುಕರಾಗಿ ನುಡಿದರು.  ನನಗೆ ಕಾಲೇಜು ಫೀಸ್ ಕಟ್ಟಲು ಆಗದ ಪರಿಸ್ಥಿತಿಯಲ್ಲಿ ನನಗೆ ಸಹಾಯ ಮಾಡಿದ ಹಿರಿಯರಿಗೆ ಯಾವತ್ತೂ ಜೀವನದಲ್ಲಿ ಮರೆಯುವುದಿಲ್ಲ. ಅವರ ಋಣಭಾರದಿಂದ ಮಾತ್ರ ನಾನು ಇಂದು ಒಬ್ಬ ಉನ್ನತವಾದ ಮಟ್ಟಕ್ಕೆ ಬೆಳೆಯಲು ಕಾರಣರಾದರು. ಅವರು ನನಗೆ ಸಹಾಯ ಮಾಡಲಿಲ್ಲ ಅಂದು ಅಂದರೆ ಇಂದು ನಾನು ಗ್ರಾಮದಲ್ಲಿಯೇ ಕುರಿಯೋ ದನವನ್ನೋ ಕಾಯುತ್ತಾ ಬಂದುಕಬೇಕಾಗಿತು ಹೀಗಾಗಿ ನನಗೆ ಜೀವನದಲ್ಲಿ ಸಹಾಯ ಸಹಕಾರ ನೀಡಿದ ಎಲ್ಲಾ ಮಹನೀಯರಿಗೂ ತುಂಬುಹೃದಯದಿಂದ ಧನ್ಯವಾದಗಳು ತಿಳಿಸುವೆ ಎಂದು ನುಡಿದರು.

ತೇಲಂಗ ಅವರು ಅನೇಕ ದೇಶಕ್ಕೆ ಭೇಟಿ ನೀಡಿದ್ದಾರೆ. ಹಾಗೂ ದೇಶದ ಅನೇಕ ರಾಜ್ಯಗಳಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಅನೇಕ ಕಂಪನಿಯು ಇಂದು ಅವರ ಅನುಭವಕ್ಕೆ ಕೈಬಿಸಿ ಕರೆಯುತ್ತಿವೆ ಹೀಗಾಗಿ ಇಂದು ಯುವ ಜನಾಂಗಕ್ಕೆ ಶ್ರೀನಿವಾಸ ತೇಲಂಗ ಅವರು ಮಾದರಿಯ ವ್ಯಕ್ತಿಯಾಗಿದ್ದಾರೆ. ತಮ್ಮನ್ನು ಕಾಣಲು ಬಂದ ಜನ ಸಾಮಾನ್ಯರಿಗೂ ತಮ್ಮ ಕೈಲಾದ ಸಹಾಯವನ್ನು ಮಾಡುವುದು ಮರೆಯುವುದಿಲ್ಲ. ಎಲ್ಲರೊಂದಿಗೆ ತಾವೊಬ್ಬರು ಎಂದು ಎಲ್ಲರೊಂದಿಗೆ ಬೆರೆಯುವ ಮನೋಭಾವ ಹೊಂದಿದ್ದ ಶ್ರೀನಿವಾಸ ತೇಲಂಗ ಮಾದರಿ ವ್ಯಕ್ತಿ ಎಂದರು ಉತ್ಪ್ರೇಕ್ಷೆ ಯಾಗದು.. ಹಾಗೇ ತೇಲಂಗ ಅವರ ಸೇವೆಗೆ ಇನ್ನೂ ಅನೇಕ ಪ್ರಶಸ್ತಿಗಳನ್ನು ಬರಲಿ ಎಂದು ಶುಭೋದಯ ಮೀಡಿಯಾ ಹಾರೈಸುತ್ತದೆ.

-----------------------------------------------------------------------------

ಶ್ರೀನಿವಾಸ ತೇಲಂಗ ಪ್ರತಿಭಾವಂತ ಎಂದು ಊಹಿಸಿರಲಿಲ್ಲ -ಬಸವರಾಜ

ಇಂತಹ ಕೂಗ್ರಾಮದಲ್ಲಿ ಇಂತಹ ಪ್ರತಿಭೆಯನ್ನು ನಾನು ಊಹಿಸಿರಲಿಲ್ಲ. ಶ್ರೀನಿವಾಸ ಶ್ಯಾಮರಾವ ತೇಲಂಗ ಅವನ್ನು ಹತ್ತನೇ ತರಗತಿಯಲ್ಲಿ ತೇರ್ಗಡೆ ಯಾಗಿ ನಂತರ ಪಿಯುಸಿ ಓದುತ್ತಿದ್ದಾಗ ನನ್ನ ಕಣ್ಣಿಗೆ ಬಿದ್ದ ಹುಡುಗ ನಂತರ ಅವನ ಜೀವನದಲ್ಲಿ ದಾರಿ ದೀಪವಾಗಿ ನಾನು ಸಿಕ್ಕೆ. ಮುಂದೆ ಅವನನ್ನು ಶ್ರೀ ಬಸವೇಶ್ವರ ಕೈಗಾರಿಕಾ ತರಬೇತಿ ಕೇಂದ್ರದಲ್ಲಿ ಸೇರಿಸಿ ಜೊಡಣೆಗಾರ ವಿಭಾಗದಲ್ಲಿ ಪ್ರವೇಶ ನೀಡಿದೆ. ಶ್ರೀನಿವಾಸ ನನ್ನ ನೆರಳಲ್ಲಿ ಸತತವಾಗಿ ಎರಡು ವರ್ಷಗಳ ಕಾಲ ಕೈಗಾರಿಕಾ ತರಬೇತಿ ಪಡೆದುಕೊಂಡು ತೇರ್ಗಡೆಯಾಗಿ ಉದ್ಯೋಗಕ್ಕೋಸ್ಕರ ಅವನನ್ನು ಔರಂಗಾಬಾದ್ ನಗರದ ಪ್ರಮುಖ ಎಂಎನಸಿ ಕಂಪನಿಯಲ್ಲಿ ಕೆಲಸ ಕೊಡಿಸಿದೆ. ನಂತರ ಅವನು ಔರಂಗಾಬಾದ್ ನಲ್ಲಿಯೇ ಉಳಿದುಕೊಂಡು ಕೆಲಸದ ಜೊತೆಗೆ ಹೆಚ್ಚಿನ ವಿದ್ಯಾಭ್ಯಾಸದ ಕಡೆಗೆ ಒಲವು ತೊರಿಸಿ DME (Diploma in mechanical engineer) ನಲ್ಲಿ ವ್ಯಾಸಂಗವನ್ನು ಮಾಡಿ ಇಂದು ಒಂದು ವಿದೇಶಿ ಕಂಪನಿಯ ಭಾರತದ ಪ್ರತಿನಿಧಿಯಾಗಿ ಕೆಲಸ ಮಾಡುತ್ತಿರುವುದು ಹೆಮ್ಮೆಯ ವಿಷಯ. ಕೆಲಸದ ಜೊತೆಗೆ ಶ್ರೀನಿವಾಸ ಸಾಮಾಜಿಕ ಕಾರ್ಯ ಕ್ರಮದಲ್ಲಿ ಒಲವು ತೊರಿಸತೊಡಗಿದನು. ಇಂತಹ ಒಂದು ಪ್ರತಿಭೆಯನ್ನು ಹೊಂದಿರುವ ವ್ಯಕ್ತಿ ಎಂಬುದು ನಾನು ಸಹ ಊಹಿಸಿರಲಿಲ್ಲ. ನನ್ನ ಮಾರ್ಗದರ್ಶನದಲ್ಲಿ ಅವನು ಛಲ ಬಿಡದೆ ಒಂದು ಸಾಧನೆಯ ಶಿಖರವನ್ನು ಮುಟ್ಟಿರುವುದು ಖುಷಿ ತಂದಿದೆ. ಕೆಲಸದ ಜೊತೆಯಲ್ಲಿ ಸಾಮಾಜಿಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾಡುತ್ತ ಇಂದು ಔರಂಗಾಬಾದ್ ನಲ್ಲಿ ಹೆಮ್ಮೆಯ ಕನ್ನಡಿಗನಾಗಿ ಗುರುತಿಸಿಕೊಂಡಿರುವುದು ನಮ್ಮ ಗ್ರಾಮದ ಹೆಮ್ಮೆಯ. ಅವರ ಕಾರ್ಯವನ್ನು ಕಂಡು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿದಕ್ಕೆ ನನಗೆ ಬಹಳಷ್ಟು ಸಂತೋಷವಾಗಿದೆ. ಇಂತಹ ಪ್ರತಿಭೆಯನ್ನು ಮುಂದೆಯೂ ನಮ್ಮೂರಲ್ಲಿ ಹುಟ್ಟಿಬರಬೇಕು. ಹಾಗೂ ಅಂತಹ ಪ್ರತಿಭೆಗಳನ್ನು ಗುರುತಿಸಿ ಗ್ರಾಮದ ಹಿರಿಯ ಅನುಭವಿಗಳು ಸಹಾಯ ಸಹಕಾರ ನೀಡಿದರೆ ಗ್ರಾಮದ ಹೆಸರು ಸ್ಥಿರ ಸ್ಥಾಯಿಯಾಗಿ ಬೆಳೆಯಲು ನಮಗೆ ಶ್ರೀನಿವಾಸ ಸಾಕ್ಷಿಯಾಗಿದ್ದಾನೆ. ಇಂತಹ ಅನೇಕ ಪ್ರತಿಭಾವಂತರ ಜನ್ಮ ಆಗಬೇಕು ಎಂಬುದೇ ನನ್ನ ಆಸೆ..

  - ಬಸವರಾಜ ರಾಚಪ್ಪ  ಬಯನ Junior training officer,

     -----------------------------------------------------------------

ದೂರದೃಷ್ಟಿ ಹೊಂದಿರುವ ಪುಸ್ತಕ ಪ್ರೀಯ ಹಾಗೂ ಆಧ್ಯಾತ್ಮಿಕ ಜೀವಿ ಶ್ರೀನಿವಾಸ

ಪ್ರತಿಯೊಂದು ಗ್ರಾಮದಲ್ಲಿ ಶ್ರೀನಿವಾಸ ತೇಲಂಗ ಅಂತಹ ವ್ಯಕ್ತಿಗಳ ಜನನವಾದರೆ ಪ್ರತಿಯೊಂದು ರಾಜ್ಯ ಮತ್ತು ರಾಷ್ಟ್ರಕ್ಕೆ ಅಮೋಘವಾದ ಸೇವೆ ಮಾಡಿದರೆ ಯಾವುದೇ ರಾಷ್ಟ್ರ ಹಿಂದೆ ಬಿಳುವುದಿಲ್ಲ ಈ ನಿಟ್ಟಿನಲ್ಲಿ ದೂರದೃಷ್ಟಿ ಹೊಂದಿರುವ ಆಧುನಿಕ ಮಾದರಿ ವ್ಯಕ್ತಿಯಾಗಿ. ಪುಸ್ತಕ ಪ್ರೀಯರಾಗಿ. ಆಧ್ಯಾತ್ಮಿಕ ಜೀವಿಯಾಗಿ ಪ್ರತಿಯೊಬ್ಬರೊಂದಿಗೆ ಬೆರೆತು ಹೋಗುವ ಅಪರೂಪದ ಗುಣವನ್ನು ಹೊಂದಿದ್ದಾರೆ. ಹೊಸತನವನ್ನು ಕಲಿಯುವ ಗುಣ ಹೊಂದಿ ಇಂದು ಪ್ರತಿಯೊಬ್ಬರ ಮನಸ್ಸು ಗೆಲ್ಲುವ ಮೂಲಕ ಅಜಾತಶತ್ರುವಾಗಿ ಶ್ರೀನಿವಾಸ ತೇಲಂಗ ಗುರುತಿಸಿಕೊಂಡಿದು. ಅವರ ಸೇವೆಯನ್ನು ಕಂಡ ವಿಶ್ವವಿದ್ಯಾಲಯ ನೀಡಿದ ಗೌರವ ಡಾಕ್ಟರೇಟ್ ಪ್ರಶಸ್ತಿಯ ಮೌಲ್ಯವನ್ನು ಹೆಚ್ಚಿಸಿಕೊಂಡಿದೆ. 

ಬಡತನದಲ್ಲಿ ಬೆಳೆದ ವ್ಯಕ್ತಿ ಶಾಲೆಯಲ್ಲಿ ಓದಲು ಆಗದಂತಹ ಬಡತನವನ್ನು ಆವರಿಸಿದ ಪರಿಸ್ಥಿತಿಯಲ್ಲಿ ತನ್ನ ಸಾಮಾರ್ಥ್ಯ ದಿಂದ ಶಿಕ್ಷಣ ಮಾಡಿ ಇಂದು ಗ್ರಾಮಕ್ಕೆ ಒಂದು ಮಾದರಿ ವ್ಯಕ್ತಿಯಾಗಿ ಬೆಳೆದಿರುವುದು ಗ್ರಾಮವೇ ಹೆಮ್ಮೆಯ ಪಡುವ ಸಂಗತಿ. 

ಕನ್ನಡ ಸಮಾರಂಭವನ್ನು ಜ್ಯೋತಿ ಬೆಳಗಿಸುತ್ತಿರುವ ಶ್ರೀನಿವಾಸ ತೇಲಂಗ, ಅನೇಕ ಗಣ್ಯರು

ಜನ್ಮ ನೀಡಿದ ಗ್ರಾಮಕ್ಕೆ ಏನಾದರೂ ಮಾಡಬೇಕು ಎಂಬ ತೂಡಿತ ಸಮಯ ಪರಿಪಾಲನೆಯೇ ಇಂದು ಶ್ರೀನಿವಾಸ  ಮಾಡುವಲ್ಲಿ ಯಶಸ್ವಿಯಾದರು. ಸಾಧನೆಯ ಮಾರ್ಗದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಇಂದು ಸಾಧನೆ ಶಿಖರವನ್ನು ತಲುಪಿ ಗ್ರಾಮಕ್ಕೆ ಹೆಸರು ತಂದಿದ್ದಾರೆ.

 ಶ್ರೀನಿವಾಸ ಕಡುಬಡತನದಲ್ಲಿ ಇರುವಾಗ ಅವರ ಸೋದರಮಾವನ ಆಶ್ರಯದಲ್ಲಿ ಬೆಳೆದರು. ಸೋದರ ಮಾವನ ಸೇವೆ ಸ್ಮರಿಸಿ ಅವರ ವೃದ್ಧಾಪ್ಯದ ಜೀವನದಲ್ಲಿ ಸೇವೆ ಮಾಡಿದ್ದಾರೆ. ಔರಂಗಾಬಾದ್ ನಲ್ಲಿ ಅನೇಕ ನಮ್ಮ ಭಾಗದ ಯುವಕರಿಗೆ ಮಾರ್ಗದರ್ಶನ ನೀಡುವ ಮೂಲಕ ಉದ್ಯೋಗ ನೀಡುವಲ್ಲಿ ಶ್ರಮಿಸಿ ಅನೇಕರಿಗೆ   ಆಶ್ರಯದಾತನಾಗಿದ್ದಾರೆ.  ತೇಲಂಗ ಅವರ ಸೇವೆ ಅನನ್ಯ ವಾಗಿದೆ. ಅಮೋಘವಾಗಿದೆ. ಅಭಿನಂದನೀಯ ಕಾರ್ಯ ಮರೆಯಲಾಗದು. ಅವರು ಇಂಜಿನಿಯರಿಂಗ್ ವೃತ್ತಿ ಯವರು ಆದರು ಗ್ರಾಮದ ಆಗು ಹೋಗುಗಳ ಬಗ್ಗೆ ಹಾಗೂ ಕನ್ನಡ ಭಾಷೆ ಸಂಸ್ಕೃತಿ ಸಂಪ್ರದಾಯ ಹಾಗೂ ಹಿರಿಯರಿಗೆ ಗೌರವ ನೀಡುವ ಸಂಪ್ರದಾಯ ಬೆಳೆಸಿಕೊಂಡಿರುವ ಕಾರಣ ಇಂದು ಶ್ರೀನಿವಾಸ ಎತ್ತರದ ಮಟ್ಟದಲ್ಲಿ ಬೆಳೆಯಲು ಸಾಧ್ಯವಾಗಿದೆ. 

ಪ್ರತಿ ಮೂರು ವರ್ಷಗಳ ನಂತರ ನಡೆಯುವ ಲಕ್ಷ್ಮಿ ಕಾರ್ಯವನ್ನು ಶ್ರದ್ಧೆ ಭಕ್ತಿಯಿಂದ ನಡೆದುಕೊಳ್ಳುತ್ತಾರೆ. ತಮ್ಮನ್ನು ತಾವು ದೇವರ ಕಾರ್ಯದಲ್ಲಿ ತೊಡಗಿಸಿಕೊಂಡ ಬಂದಿರುವುದೇ ಇಂದು ಆ ದೇವಿಯ ಆಶೀರ್ವಾದ ಪಡೆದ ಪುಣ್ಯವಂತರು.

  -ರುಕ್ಮುದ್ದೀನ ಇಸ್ಲಾಂಪುರ ಹಿರಿಯ ಸಾಹಿತಿಗಳು ಬೀದರ

--------------------------------------------------------------------------------------------


ಶ್ರೀನಿವಾಸ ತೇಲಂಗಗೆ ತಮಿಳನಾಡಿನ ಅಸೀಯನ ಅಂತರರಾಷ್ಟ್ರೀಯ ಸಂಸ್ಕೃತ ಸಂಶೋಧನೆ ವಿಶ್ವವಿದ್ಯಾಲಯ  ಶನಿವಾರ ಬೆಂಗಳೂರನಲ್ಲಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. 

Saturday, 4 January 2025

ಭೂ ಕಬಳಿಕೆ ಮಾಡಿದ ಆರೋಪಿಗಳಿಗೆ ಶಿಕ್ಷೆ

ಬೆಂಗಳೂರು :ತುಮಕೂರು ಜಿಲ್ಲೆಯ ತುಮಕೂರು ತಾಲೂಕಿನ ಬೆಳ್ಳಾವಿ ಹೋಬಳಿ, ದೊಡ್ಡನಾರವಂಗಲ ಗ್ರಾಮದ ಖಾತಾ ನಂ.35, ಸರ್ವೆ ನಂ.21 ಇದು ಸರ್ಕಾರಿ ಜಮೀನಾಗಿದ್ದು, ಒಟ್ಟು ವಿಸ್ತೀರ್ಣ 07 ಎಕರೆ 33 ಗುಂಟೆಯಿದ್ದು, ಅದರ ಪೈಕಿ ಆರೋಪಿಯು 01 ಎಕರೆ 13 1/2 ಗುಂಟೆ ಜಾಗವನ್ನು ಅನಧಿಕೃತವಾಗಿ ಒತ್ತುವರಿ ಮಾಡಿ ಸಾಗುವಳಿ ಮಾಡುತ್ತಿದ್ದು, ನಂತರ 1ನೇ ದೂರುದಾರರಾದ ಡಿ.ಗಂಗಣ್ಣ ಇವರು ಕರ್ನಾಟಕ ಭೂ ಕಬಳಿಕೆ ನಿμÉೀಧ ವಿಶೇಷ ನ್ಯಾಯಾಲಯಕ್ಕೆ ದೂರನ್ನು ನೀಡಿರುತ್ತಾರೆ.


ಸದರಿ ದೂರಿನ ಆಧಾರದ ಮೇಲೆ ಕರ್ನಾಟಕ ಭೂ ಕಬಳಿಕೆ ನಿμÉೀಧ ವಿಶೇಷ ನ್ಯಾಯಾಲಯವು ಈ ಪ್ರಕರಣವನ್ನು ಸ್ವೀಕರಿಸಿ ಎಲ್.ಜಿ.ಸಿ. (ಪಿ) ಸಂಖ್ಯೆ: 1369/2017 ಎಂದು ದಾಖಲಿಸಿಕೊಂಡು, ಆರೋಪಿ ವಿರುದ್ಧ ಆಪಾದನೆ ರಚಿಸಿ, ಸಂಪೂರ್ಣ ಸಾಕ್ಷ್ಯ ವಿಚಾರಣೆಯನ್ನು ನಡೆಸಿದ ನಂತರ ಸರ್ಕಾರಿ ಜಮೀನನ್ನು ಭೂ ಕಬಳಿಕೆ ಮಾಡಿರುವುದು ಸಾಬೀತಾದ ಕಾರಣ ಅವರಿಗೆ 01 ವರ್ಷ ಸಾದಾ ಶಿಕ್ಷೆ ಮತ್ತು ರೂ.10.000/- ರೂಪಾಯಿ ದಂಡವನ್ನು ವಿಧಿಸಿ, ದಂಡ ಪಾವತಿಸಲು ತಪ್ಪಿದ್ದಲ್ಲಿ 03 ತಿಂಗಳ ಸಾದಾ ಶಿಕ್ಷೆಯನ್ನು 01ನೇ ವಿಶೇಷ ನ್ಯಾಯಾಲಯದ ಮಾನ್ಯ ಅಧ್ಯಕ್ಷರಾದ ನ್ಯಾಯಮೂರ್ತಿ ಬಸವರಾಜ ಅಂದಾನಪ್ಪ ಪಾಟೀಲ್ ಮತ್ತು ಕಂದಾಯ ಸದಸ್ಯರಾದ ಎಸ್.ಪಾಲಯ್ಯ ರವರು ಇದ್ದ ಪೀಠವು 2024 ನೇ ಡಿಸೆಂಬರ್ 10 ರಂದು ತೀರ್ಪು ನೀಡಿರುತ್ತದೆ. ಆರೋಪಿಯು ಒತ್ತುವರಿ ಮಾಡಿಕೊಂಡ ಸರ್ಕಾರಿ ಜಾಗವನ್ನು ಕಾನೂನಿನ ಪ್ರಕಾರ ರಕ್ಷಿಸುವಂತೆ ತುಮಕೂರಿನ ತಹಶೀಲ್ದಾರ್ ಅವರಿಗೆ ನಿರ್ದೇಶಿಸಿ ತೀರ್ಪನ್ನು ನೀಡಿರುತ್ತದೆ


ತುಮಕೂರು ಜಿಲ್ಲೆಯ ತುಮಕೂರು ತಾಲೂಕಿನ ಬೆಳ್ಳಾವಿ ಹೋಬಳಿ, ದೊಡ್ಡನಾರವಂಗಲ ಗ್ರಾಮದ ಖಾತಾ ನಂ.35, ಸರ್ವೆ ನಂ.21 ಇದು ಸರ್ಕಾರಿ ಜಮೀನಾಗಿದ್ದು, ಒಟ್ಟು ವಿಸ್ತೀರ್ಣ 07 ಎಕರೆ 33 ಗುಂಟೆಯಿದ್ದು, ಅದರ ಪೈಕಿ ಆರೋಪಿಯು 01 ಎಕರೆ 13 1/2 ಗುಂಟೆ ಜಾಗವನ್ನು ಅನಧಿಕೃತವಾಗಿ ಒತ್ತುವರಿ ಮಾಡಿ ಸಾಗುವಳಿ ಮಾಡುತ್ತಿದ್ದು, ನಂತರ 1ನೇ ದೂರುದಾರರಾದ ಡಿ.ಗಂಗಣ್ಣ ಇವರು ಕರ್ನಾಟಕ ಭೂ ಕಬಳಿಕೆ ನಿμÉೀಧ ವಿಶೇಷ ನ್ಯಾಯಾಲಯಕ್ಕೆ ದೂರನ್ನು ನೀಡಿರುತ್ತಾರೆ.

ಸದರಿ ದೂರಿನ ಆಧಾರದ ಮೇಲೆ ಕರ್ನಾಟಕ ಭೂ ಕಬಳಿಕೆ ನಿμÉೀಧ ವಿಶೇಷ ನ್ಯಾಯಾಲಯವು ಈ ಪ್ರಕರಣವನ್ನು ಸ್ವೀಕರಿಸಿ ಎಲ್.ಜಿ.ಸಿ. (ಪಿ) ಸಂಖ್ಯೆ: 1369/2017 ಎಂದು ದಾಖಲಿಸಿಕೊಂಡು, ಆರೋಪಿ ವಿರುದ್ಧ ಆಪಾದನೆ ರಚಿಸಿ, ಸಂಪೂರ್ಣ ಸಾಕ್ಷ್ಯ ವಿಚಾರಣೆಯನ್ನು ನಡೆಸಿದ ನಂತರ ಸರ್ಕಾರಿ ಜಮೀನನ್ನು ಭೂ ಕಬಳಿಕೆ ಮಾಡಿರುವುದು ಸಾಬೀತಾದ ಕಾರಣ ಅವರಿಗೆ 01 ವರ್ಷ ಸಾದಾ ಶಿಕ್ಷೆ ಮತ್ತು ರೂ.10.000/- ರೂಪಾಯಿ ದಂಡವನ್ನು ವಿಧಿಸಿ, ದಂಡ ಪಾವತಿಸಲು ತಪ್ಪಿದ್ದಲ್ಲಿ 03 ತಿಂಗಳ ಸಾದಾ ಶಿಕ್ಷೆಯನ್ನು 01ನೇ ವಿಶೇಷ ನ್ಯಾಯಾಲಯದ ಮಾನ್ಯ ಅಧ್ಯಕ್ಷರಾದ ನ್ಯಾಯಮೂರ್ತಿ ಬಸವರಾಜ ಅಂದಾನಪ್ಪ ಪಾಟೀಲ್ ಮತ್ತು ಕಂದಾಯ ಸದಸ್ಯರಾದ ಎಸ್.ಪಾಲಯ್ಯ ರವರು ಇದ್ದ ಪೀಠವು 2024 ನೇ ಡಿಸೆಂಬರ್ 10 ರಂದು ತೀರ್ಪು ನೀಡಿರುತ್ತದೆ. ಆರೋಪಿಯು ಒತ್ತುವರಿ ಮಾಡಿಕೊಂಡ ಸರ್ಕಾರಿ ಜಾಗವನ್ನು ಕಾನೂನಿನ ಪ್ರಕಾರ ರಕ್ಷಿಸುವಂತೆ ತುಮಕೂರಿನ ತಹಶೀಲ್ದಾರ್ ಅವರಿಗೆ ನಿರ್ದೇಶಿಸಿ ತೀರ್ಪನ್ನು ನೀಡಿರುತ್ತದೆ.

ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲ್ಲೂಕಿನ ಸಬಗೇರಿ ಗ್ರಾಮದ ಸರ್ವೆ ನಂ.6/4ರಲ್ಲಿನ ಸರ್ಕಾರಿ ಜಾಗ ಇದ್ದು, ಅದರಲ್ಲಿ ಆರೋಪಿ 1 ಮತ್ತು 2 ಇವರು ಒಟ್ಟಾಗಿ 01 ಎಕರೆ 31 ಗುಂಟೆ ಜಾಗವನ್ನು ಒತ್ತುವರಿ ಮಾಡಿ ಅನಧಿಕೃತವಾಗಿ ಮನೆಯನ್ನು ನಿರ್ಮಿಸಿದ್ದು, ಅದನ್ನು ದಿನಾಂಕ 20.05.2016ರಂದು ತೆರವುಗೊಳಿಸಿದ್ದರೂ ಸಹ ಪುನ: ಆರೋಪಿತರು ದಿನಾಂಕ 05.08.2016ರಂದು ಒತ್ತುವರಿ ಮಾಡಿದ್ದರಿಂದ ಆರಕ್ಷಕ ಉಪ-ನಿರೀಕ್ಷಕರು, ಯಲ್ಲಾಪುರ ಇವರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಪೂರ್ಣಗೊಳಿಸಿ ಆರೋಪಿತರ ವಿರುದ್ಧ ಕರ್ನಾಟಕ ಭೂ ಕಂದಾಯ ಅಧಿನಿಯಮ 1964 ಕಲಂ 192(ಎ) ಅಡಿಯಲ್ಲಿ ಯಲ್ಲಾಪುರದ ಸಿವಿಲ್ ಜಡ್ಜ್ ಮತ್ತು ಜೆ.ಎಂ.ಎಫ್.ಸಿ. ಇವರ ಮುಂದೆ ದೋμÁರೋಪಣಾ ಪತ್ರವನ್ನು ಸಲ್ಲಿಸಿದ್ದರು. ತದನಂತರ ಸದರಿ ಸಿವಿಲ್ ಜಡ್ಜ್ ಆರೋಪಿ 1 ಮತ್ತು 2ರ ವಿರುದ್ಧ ಸಿ.ಸಿ. ನಂ. 99/2017ರಂತೆ ಪ್ರಕರಣ ದಾಖಲಿಸಿ ನಂತರ ಕರ್ನಾಟಕ ಭೂ ಕಬಳಿಕೆ ನಿμÉೀಧ ವಿಶೇಷ ನ್ಯಾಯಾಲಯಕ್ಕೆ ಪ್ರಕರಣವನ್ನು ವರ್ಗಾಯಿಸಿರುತ್ತಾರೆ.

ಕರ್ನಾಟಕ ಭೂ ಕಬಳಿಕೆ ನಿμÉೀಧ ವಿಶೇಷ ನ್ಯಾಯಾಲಯವು ಈ ಪ್ರಕರಣವನ್ನು ಸ್ವೀಕರಿಸಿ ಎಲ್.ಜಿ.ಸಿ. (ಟಿ) ಸಂಖ್ಯೆ: 145/2019 ಎಂದು ದಾಖಲಿಸಿಕೊಂಡು, ಆರೋಪಿತರ ವಿರುದ್ಧ ಕರ್ನಾಟಕ ಭೂ ಕಬಳಿಕೆ ನಿμÉೀಧ ಅಧಿನಿಯಮದನ್ವಯ ಆಪಾದನೆ ರಚಿಸಿ, ನೋಟೀಸ್ ನೀಡಿದರು. ತದನಂತರ 2ನೇ ಆರೋಪಿ ಮರಣ ಹೊಂದಿದ್ದರಿಂದ ಅವರ ವಿರುದ್ಧ ಪ್ರಕರಣವನ್ನು ಕೈಬಿಡಲಾಯಿತು. 1ನೇ ಆರೋಪಿ ವಿರುದ್ಧ ಸಂಪೂರ್ಣ ಸಾಕ್ಷ್ಯ ವಿಚಾರಣೆಯನ್ನು ನಡೆಸಿದ ನಂತರ 1ನೇ ಆರೋಪಿಗೆ 02 ವರ್ಷ ಸಾದಾ ಶೆಕ್ಷೆ ಮತ್ತು ರೂ.25,000/- ರೂಪಾಯಿ ದಂಡವನ್ನು ವಿಧಿಸಿ, ದಂಡ ಪಾವತಿಸಲು ತಪ್ಪಿದ್ದಲ್ಲಿ 06 ತಿಂಗಳ ಸಾದಾ ಶಿಕ್ಷೆಯನ್ನು 01ನೇ ವಿಶೇಷ ನ್ಯಾಯಾಲಯದ ಮಾನ್ಯ ಅಧ್ಯಕ್ಷರಾದ ನ್ಯಾಯಮೂರ್ತಿ ಬಸವರಾಜ ಅಂದಾನಪ್ಪ ಪಾಟೀಲ್ ಮತ್ತು ಕಂದಾಯ ಸದಸ್ಯರಾದ ಎಸ್.ಪಾಲಯ್ಯ ರವರು ಇದ್ದ ಪೀಠವು ದಿನಾಂಕ 28.11.2024ರಂದು ತೀರ್ಪು ನೀಡಿರುತ್ತದೆ.ಆರೋಪಿಯು ಒತ್ತುವರಿ ಮಾಡಿಕೊಂಡ ಸರ್ಕಾರಿ ಜಾಗವನ್ನು ಕಾನೂನಿನ ಪ್ರಕಾರ ರಕ್ಷಿಸುವಂತೆ ತಹಶೀಲ್ದಾರ್, ಯಲ್ಲಾಪುರ ಇವರಿಗೆ ನಿರ್ದೇಶಿಸಿ ತೀರ್ಪನ್ನು ನೀಡಿರುತ್ತದೆ.
 
ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲ್ಲೂಕಿನ ಅತ್ತಿಬೆಲೆ ಹೋಬಳಿ, ಹೆಬ್ಬಗೋಡಿ ಗ್ರಾಮದ ಸರ್ವೆ ನಂ. 159ರ ಊರು ಮುಂದಿನ ಸರ್ಕಾರಿ ಕೆರೆ ಜಮೀನಿನ ಒಟ್ಟು ವಿಸ್ತೀರ್ಣ 32 ಎಕರೆ 13 ಗುಂಟೆ ಪೈಕಿ 0-38.12 ಗುಂಟೆ/ಆಣೆ ಸರ್ಕಾರಿ ಕೆರೆ ಜಮೀನಿನ ಬಾಜುದಾರರಾದ ಒಟ್ಟು 9 ಜನ ಆರೋಪಿತರು ಒತ್ತುವರಿ ಮಾಡಿ ಶೌಚಾಲಯ ಹಾಗೂ ಮನೆ ನಿರ್ಮಾಣ ಮಾಡಿದ್ದು, ಅದರಲ್ಲಿ 1 ರಿಂದ 3 ಹಾಗೂ 7 ರಿಂದ 9 ಮೃತರಾಗಿರುತ್ತಾರೆ ಎಂದು ವರದಿ ಮಾಡಿದ ಕಾರಣ ಅವರ ವಿರುದ್ಧದ ಕ್ರಿಮಿನಲ್ ಪ್ರಕರಣವು abate ಆಗಿರುತ್ತದೆ.

ಉಳಿದ 4 ರಿಂದ 6ನೇ ಆರೋಪಿತರಾದ, 4ನೇ ಆರೋಪಿ ಎಂ. ವೆಂಕಟೇಶ್ ಬಿನ್ ಲೇಟ್ ಮುನಿಯಪ್ಪ ಇವರು 0-06 1/2 ಗುಂಟೆ, 5ನೇ ಆರೋಪಿತರಾದ ಹೆಚ್.ಎಂ. ಸುಬ್ಬಣ್ಣ ಬಿನ್ ಲೇಟ್ ಮುನಿಯಪ್ಪ ಇವರು 0-07 1/2 ಗುಂಟೆ ಹಾಗೂ 6ನೇ ಆರೋಪಿತರಾದ ಶ್ರೀಮತಿ ಲಕ್ಷ್ಮೀದೇವಿ ಕೋಂ ವೆಂಕಟೇಶ್ ಇವರು 0.01 ಗುಂಟೆ, ಹೆಬ್ಬಗೋಡಿ ಗ್ರಾಮ ಇವರು ಸರ್ಕಾರಿ ಊರು ಮುಂದಿನ ಕೆರೆ ಜಮೀನನ್ನು ಒತ್ತುವರಿ ಮಾಡಿ, ಶೌಚಾಲಯ ಹಾಗೂ ಮನೆ ನಿರ್ಮಾಣ ಮಾಡಿದ್ದು, ಗ್ರಾಮಸ್ಥರು ನೀಡಿದ ದೂರು ಮನವಿ ಮೇರೆಗೆ ಆನೇಕಲ್ ತಾಲ್ಲೂಕು ತಹಶೀಲ್ದಾರ್ ಇವರು ಆಪಾದಿತರಿಗೆ ಕೆರೆ ಒತ್ತುವರಿ ಸಂಬಂಧ ತೆರವುಗೊಳಿಸಲು ನೋಟಿಸ್ ನೀಡಿದ್ದರೂ ಸಹ ತೆರವುಗೊಳಿಸದ ಕಾರಣ ದೂರುದಾರರಾದ ರಾಜಸ್ವ ನಿರೀಕ್ಷಕರು ಇವರು ನೀಡಿದ ದೂರಿನ ಅನ್ವಯ ಬೆಂಗಳೂರು ನಗರ ಬಿ.ಎಂ.ಟಿ.ಎಫ್. ಪೆÇಲೀಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಪೂರ್ಣಗೊಳಿಸಿ ಆರೋಪಿತರ ವಿರುದ್ಧ ಕರ್ನಾಟಕ ಭೂ ಕಂದಾಯ ಅಧಿನಿಯಮ 1964 ಕಲಂ 192(ಎ) ಅಡಿಯಲ್ಲಿ ಬೆಂಗಳೂರಿನ ಸಿ.ಎಂ.ಎಂ. ನ್ಯಾಯಾಲಯಕ್ಕೆ ದೋμÁರೋಪಣಾ ಪತ್ರವನ್ನು ಸಲ್ಲಿಸಿದ್ದರು.

ತದನಂತರ  ನ್ಯಾಯಾಲಯವು ಆರೋಪಿತರ ವಿರುದ್ಧ ಸಿ.ಸಿ. ಸಂಖ್ಯೆ: 7246/2013 ರಂತೆ ದಾಖಲಿಸಿ ನಂತರ ಕರ್ನಾಟಕ ಭೂ ಕಬಳಿಕೆ ನಿμÉೀಧ ವಿಶೇಷ ನ್ಯಾಯಾಲಯಕ್ಕೆ ಪ್ರಕರಣವನ್ನು ವರ್ಗಾಯಿಸಿರುತ್ತಾರೆ.
ಕರ್ನಾಟಕ ಭೂ ಕಬಳಿಕೆ ನಿμÉೀಧ ವಿಶೇಷ ನ್ಯಾಯಾಲಯವು ಈ ಪ್ರಕರಣವನ್ನು ಸ್ವೀಕರಿಸಿ ಎಲ್.ಜಿ.ಸಿ.(ಟಿ) ಸಂಖ್ಯೆ: 882/2017 ಎಂದು ದಾಖಲಿಸಿಕೊಂಡು, 1 ರಿಂದ 3 ಹಾಗೂ 7 ರಿಂದ 9ನೇ ಆರೋಪಿತರು ಮೃತರಾಗಿದ್ದು ಅವರ ವಿರುದ್ಧದ ವಿಚಾರಣೆ abate ಆಗಿರುತ್ತದೆ. ಉಳಿದ ಆರೋಪಿತರ ವಿರುದ್ಧ ಆಪಾದನೆಯನ್ನು ರಚಿಸಿ ಸಂಪೂರ್ಣ ಸಾಕ್ಷ್ಯ ವಿಚಾರಣೆಯನ್ನು ನಡೆಸಿದ ನಂತರ 4, 5 ಮತ್ತು 6ನೇ ಆರೋಪಿತರು ಊರು ಮುಂದಿನ ಸರ್ಕಾರಿ ಕೆರೆ ಜಮೀನನ್ನು ಭೂ ಕಬಳಿಕೆ ಮಾಡಿರುವುದು ಸಾಬೀತಾದ ಕಾರಣ ಆರೋಪಿತರಿಗೆ 01 ವರ್ಷ ಸಾದಾ ಶಿಕ್ಷೆ ಮತ್ತು 5,000/- ರೂಪಾಯಿ ದಂಡವನ್ನು ವಿಧಿಸಿ, ದಂಡ ಪಾವತಿಸಲು ತಪ್ಪಿದ್ದಲ್ಲಿ 03 ತಿಂಗಳ ಸಾದಾ ಶಿಕ್ಷೆಯನ್ನು 02ನೇ ವಿಶೇಷ ನ್ಯಾಯಾಲಯದ ನ್ಯಾಯಿಕ ಸದಸ್ಯರಾದ ಪಾಟೀಲ ನಾಗಲಿಂಗನಗೌಡ ಮತ್ತು ಕಂದಾಯ ಸದಸ್ಯರಾದ ಕೆ.ಹೆಚ್. ಅಶ್ವತ್ಥ ನಾರಾಯಣಗೌಡ ರವರು ಇದ್ದ ಪೀಠವು ದಿನಾಂಕ: 13.12.2024 ರಂದು ತೀರ್ಪು ನೀಡಿರುತ್ತದೆ.

ಆರೋಪಿತರು ಒತ್ತುವರಿ ಮಾಡಿಕೊಂಡ ಊರು ಮುಂದಿನ ಸರ್ಕಾರಿ ಕೆರೆ ಜಮೀನನ್ನು ಕೂಡಲೇ ತೆರವುಗೊಳಿಸಿ ಸರ್ಕಾರದ ವಶಕ್ಕೆ ಪಡೆಯುವಂತೆ ಆದೇಶಿಸಿ, 60 ದಿನಗಳ ಒಳಗಾಗಿ ನ್ಯಾಯಾಲಯಕ್ಕೆ ವರದಿ ಸಲ್ಲಿಸುವಂತೆ ತಹಶೀಲ್ದಾರ್, ಆನೇಕಲ್ ತಾಲ್ಲೂಕು ಇವರಿಗೆ ನಿರ್ದೇಶಿಸಿ ತೀರ್ಪನ್ನು ನೀಡಿರುತ್ತದೆ. ಅಲ್ಲದೇ ಮೃತ ಆರೋಪಿತರಾದ 1 ರಿಂದ 3 ಹಾಗೂ 7 ರಿಂದ 9 ರವರು ಒತ್ತುವರಿ ಮಾಡಿಕೊಂಡ ಜಮೀನಿನ ಪ್ರಸ್ತುತ ವಸ್ತುಸ್ಥಿತಿಯನ್ನು ಗಮನಿಸಿ ಒತ್ತುವರಿ ಇದ್ದಲ್ಲಿ ಸಂಬಂಧಪಟ್ಟ ಒತ್ತುವರಿದಾರರ ವಿರುದ್ಧ ನಮೂನೆ-1 ರಲ್ಲಿ 60 ದಿನಗಳ ಒಳಗಾಗಿ ದೂರು ಸಲ್ಲಿಸುವಂತೆ ಆದೇಶಿಸಿರುತ್ತದೆ ಎಂದು ಬೆಂಗಳೂರಿನ ಕರ್ನಾಟಕ ಭೂಕಬಳಿಕೆ ನಿμÉೀಧ ವಿಶೇಷ ನ್ಯಾಯಾಲಯದ ವಿಲೇಖನಾಧಿಕಾರಿಗಳು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೆಕೆಆರ್‌ಡಿಬಿ ಕಾಮಗಾರಿಗಳನ್ನು ಯುದ್ಧೊಪಾದಿಯಲ್ಲಿ ಪೂರ್ಣಗೊಳಿಸಿ -ಸಚಿವ ಈಶ್ವರ ಖಂಡ್ರೆ

 ಬೀದರ :- ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯಿAದ ಬೀದರ ಜಿಲ್ಲೆಯಲ್ಲಿ ಕೈಗೊಂಡ ಎಲ್ಲ ಕಾಮಗಾರಿಗಳನ್ನು ಯುದ್ಧೋಪಾದಿಯಲ್ಲಿ ಪೂರ್ಣಗೊಳಿಸುವಂತೆ ಅರಣ್ಯ, ಪರಿಸರ ಮತ್ತು ಜೀವಿಶಾಸ್ತç ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಬಿ.ಖಂಡ್ರೆ ಎಲ್ಲ ಅಧಿಕಾರಿಗಳಿಗೆ ಸೂಚಿಸಿದರು.


 ಇಂದು ಬೀದರ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಹಮ್ಮಿಕೊಂಡ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
 ಕಳೆದ 2018-19 ರಿಂದ 2023 ರವರೆಗೆ ವಿವಿಧ ಇಲಾಖೆಗಳಲ್ಲಿ ಕೆಕೆಆರ್‌ಡಿಬಿ ಕಾಮಗಾರಿಗಳು ಅಪೂರ್ಣ ಹಂತದಲ್ಲಿವೆ. ಮೆಕ್ರೋ ಹಾಗೂ ಮೈಕ್ರೋ ಯೋಜನೆಯ ಎಲ್ಲ ಕಾಮಗಾರಿಗಳನ್ನು ಸಂಬAಧಿಸಿದ ಅಧಿಕಾರಿಗಳು ಈ ಮಾರ್ಚ ಒಳಗಾಗಿ ಪೂರ್ಣಗೊಳಿಸುವಂತೆ ಸಚಿವರು ಖಡಕ್ ಸೂಚನೆ ನೀಡಿದರು.
 ಈವರೆಗೆ ಒಟ್ಟು 3564 ಕಾಮಗಾರಿಗಳು ಪೂರ್ಣಗೊಂಡಿದ್ದು, 708 ಕಾಮಗಾರಿಗಳು ಪ್ರಗತಿಯಲ್ಲಿವೆ. 436 ಇನ್ನು ಆರಂಭಿಸಬೇಕಿದೆಯೆAದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು. ಎಲ್ಲ ಕಾಮಗಾರಿಗಳ ಗುಣಮಟ್ಟ ಥರ್ಡ ಪಾರ್ಟಿ ಮೂಲಕ ಪರೀಕ್ಷೆ ಮಾಡುವಂತೆ ಜಿಲ್ಲಾಧಿಕಾರಿಗಳಾದ ಶಿಲ್ಪಾ ಶರ್ಮಾ ಹಾಗೂ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ ಬದೋಲೆ ಅವರಿಗೆ ಸಚಿವರು ಸೂಚಿಸಿದರು.
 ವೈದ್ಯಕೀಯ ನಿರ್ದೇಶನಾಲಯಕ್ಕೆ 2020 ರಲ್ಲಿಯೇ 11 ಕೋಟಿ ನೀಡಿದ್ದು ಈವರೆಗೆ ಖರ್ಚು ಮಾಡದೇ ಇದ್ದು ಹಣ ಮರಳಿಸಲು ಪತ್ರ ಬರೆಯುವಂತೆ ಸಚಿವರು ಸೂಚಿಸಿದರು.
 ನಿರ್ಮಿತಿ ಕೇಂದ್ರದಿAದ 118 ಅಂಗನವಾಡಿ ಕಾಮಗಾರಿಗಳು ಪೂರ್ಣಗೊಂಡಿದ್ದು ಉಳಿದವುಗಳು ಪ್ರಗತಿಯಲ್ಲಿವೆ. ಶಿಕ್ಷಣ ಇಲಾಖೆಗೆ ಮೈಕ್ರೋ ಯೋಜನೆಯಡಿ 2023 ರಲ್ಲಿ 37 ಕಾಮಗಾರಿಗಳಿಗೆ 4.65 ಕೋಟಿ ರೂ. ನೀಡಲಾಗಿದ್ದು ಪೂರ್ಣಗೊಳಿಸುವಂತೆ ಸಚಿವರು ಸೂಚಿಸಿದರು.
 ಜಿಲ್ಲೆಯಲ್ಲಿ ಪ್ಲೊರೈಡ್ ಹಾಗೂ ನೈಟ್ರೆಟ್ ರಸಾಯನ ಅಂಶಗಳು ಹೆಚ್ಚಿರುವ ಗ್ರಾಮಗಳ ಪಟ್ಟಿ ಮಾಡಿ ವರದಿ ಪಡೆಯುವಂತೆ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ಸೂಚಿಸಲಾಯಿತು. ಅಗತ್ಯವಿದ್ದಲ್ಲಿ ಆರ್.ಓ.ಪ್ಲಾಂಟ್ ಅಳವಡಿಸಿ ಈ ರಸಾಯನಿಕ ಅಂಶಗಳು ಹೆಚ್ಚಿನ ಪ್ರಮಾಣದಲ್ಲಿದ್ದರೆ ಮಾತ್ರ ಆರ್.ಓ.ಪ್ಲಾಂಟ್‌ಗಳನ್ನು ಹಾಕಬಹುದು. ಈ ಬಗ್ಗೆ ಆರೋಗ್ಯ ಇಲಾಖೆಯಿಂದ ವರದಿ ತರಿಸಿಕೊಳ್ಳುವಂತೆ ಸಚಿವರು ಸೂಚಿಸಿದರು.
 ಆರೋಗ್ಯ ಇಲಾಖೆಗೆ 11 ಅಂಬುಲೆನ್ಸ್ಗಳನ್ನು ಒದಗಿಸಲಾಗಿದ್ದು, 11 ಚಾಲಕರನ್ನು ಸಹ ಕೆಕೆಆರ್‌ಡಿಬಿ ಅಡಿ ಒದಗಿಸಲು ಕ್ರಮ ಕೈಗೊಳ್ಳಲಾಗುವುದೆಂದು ಸಚಿವರು ತಿಳಿಸಿದರು. ಎಲ್ಲ ಕೆಕೆಆರ್‌ಡಿಬಿ ಕಾಮಗಾರಿಗಳನ್ನು ಅಧಿಕಾರಿಗಳು ಯುದ್ಧೋಪಾದಿಯಲ್ಲಿ ಪೂರ್ಣಗೊಳಿಸುವಂತೆ ಸಚಿವರು ಸೂಚಿಸಿದರಲ್ಲದೇ ಜಿಲ್ಲಾಧಿಕಾರಿಗಳು ಹಾಗೂ ಸಿಇಓ ಈ ಕಾಮಗಾರಿಳ ಗುಣಮಟ್ಟ ಪರೀಕ್ಷಿಸುವಂತೆ ತಿಳಿಸಿದರು.
ಎಸ್.ಎಸ್.ಎಲ್.ಸಿ. ಫಲಿತಾಂಶ ಹೆಚ್ಚಿಸುವ ಕ್ರಮ: ಇದೇ ಮಾರ್ಚ.21 ರಂದು ರಾಜ್ಯಾದ್ಯಂತ ಎಸ್.ಎಸ್.ಎಲ್.ಸಿ. ಪರೀಕ್ಷೆಗಳು ಜರುಗಲಿದ್ದು, ವಿದ್ಯಾರ್ಥಿಗಳ ಫಲಿತಾಂಶ ಹೆಚ್ಚಿಸಲು ಹಾಗೂ ಜಿಲ್ಲೆಯ ರ‍್ಯಾಂಕ್ ಹೆಚ್ಚಳಕ್ಕೆ ಅಧಿಕಾರಿಗಳು ವಿಶೇಷ ಕಾಳಜಿ ವಹಿಸಿ ವಿಶೇಷ ಕಾರ್ಯಾಗಾರ ತರಬೇತಿ ತರಗತಿ ಹಮ್ಮಿಕೊಂಡ ಬಗ್ಗೆ ವಿವರಣೆ ಕೇಳಿದರು. ಡಿಡಿಪಿಐ ಮಾತನಾಡಿ ಈಗಾಗಲೇ ಎಲ್ಲ ಶಾಲೆಗಳಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ದಿನಕ್ಕೆರಡು ವಿಶೇಷ ತರಗತಿ, ಕಾರ್ಯಾಗಾರ ಹಮ್ಮಿಕೊಂಡು ಅಗತ್ಯವಿರುವ ಎಲ್ಲ ಪರೀಕ್ಷೆಗಳನ್ನು ಸಹ ಹಮ್ಮಿಕೊಳ್ಳಲಾಗಿದೆ ಎಂದರು. ಎಲ್ಲ ಉಪವಿಭಾಗಾಧಿಕಾರಿಳು ಹಾಗೂ ತಹಸೀಲ್ದಾರರು ತಮ್ಮ ವ್ಯಾಪ್ತಿಯ ಪ್ರೌಢ ಶಾಲೆಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುವಂತೆ ಸಚಿವರು ಸೂಚಿಸಿದರು. 



 ಬಸವಕಲ್ಯಾಣದಲ್ಲಿ ಗೋಶಾಲೆ ನಿರ್ಮಾಣಕ್ಕೆ ಸರಕಾರವು 50 ಲಕ್ಷ ಅನುದಾನ ನೀಡಿದ್ದು ಆರಂಭಿಸುವAತೆ ಪಶು ಸಂಗೋಪನಾ ಇಲಾಖೆ ಉಪ ನಿರ್ದೇಶಕರಿಗೆ ಸೂಚಿಸಲಾಯಿತು.
 ಜಿಲ್ಲಾ ಪಂಚಯತ, ತಾಲ್ಲೂಕು ಪಂಚಾಯತ, ಗ್ರಾಮ ಪಂಚಾಯತಗಳಲ್ಲಿ 2023-24ನೇ ಸಾಲಿನ ಎಲ್ಲಾ ಯೋಜನಾ ಕಾರ್ಯಕ್ರಮಗಳನ್ನು ತಪ್ಪದೇ ಮಾರ್ಚ ಒಳಗಾಗಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸದರು. ಜಿಲ್ಲಾ ಪಂಚಾಯತನಲ್ಲಿ ಯಾವುದೇ ಕ್ರೀಯಾ ಯೋಜನೆ ಬಾಕಿ ಉಳಿಯದಂತೆ ನೋಡಿಕೊಳ್ಳಬೇಕೆಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿವಾಹಕ ಅಧಿಕಾರಿಗಳಿಗೆ ಸೂಚಿಸಿದರು. ಇಲ್ಲವಾದಲ್ಲಿ ಅಧಿಕಾರಿಗಳನ್ನೆ ಜವಾಬ್ದಾರರನ್ನಾಗಿ ಮಾಡಲಾಗುವುದೆಂದು ಸಚಿವರು ತಿಳಿಸಿದರು.
 ಈ ಸಭೆಯಲ್ಲಿ ಜಿಲ್ಲಾಧಿಕಾರಿಗಳಾದ ಶಿಲ್ಪಾ ಶರ್ಮಾ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾಇ ಡಾ.ಗಿರೀಶ ಬದೋಲೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಪ್ರದೀಪ ಗುಂಟಿ, ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ವಾನತಿ ಎಂ.ಎA., ಅಪರ ಜಿಲ್ಲಾಧಿಕಾರಿಗಳಾದ ಶಿವಕುಮಾರ ಶೀಲವಂತ, ಬೀದರ ಸಹಾಯಕ ಆಯುಕ್ತರಾದ ಎಂ.ಡಿ.ಶಖೀಲ್, ಬಸವಕಲ್ಯಾಣ ಸಹಾಯಕ ಆಯಕ್ತರಾದ ಮುಕುಲ್ ಜೈನ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಕನ್ನಡಿಗರ ವರ್ತಮಾನದ ಸಂಕಷ್ಟಕ್ಕೆ ಗಡಿ ರೇಖೆಗಳಿಲ್ಲ - ಡಾ.ಪುರುಷೋತ್ತಮ ಬಿಳಿಮಲೆ

 

ಶೋಧವಾಣಿ ಜಾಲಲೋಕ

ಹೈದರಾಬಾದ್ : ಸಂಘಟಿತ ಹೋರಾಟ ಇಂದಿನ ದಿನಮಾನದ ಜರೂರು ಹೊರನಾಡು ಗಡಿನಾಡಿನ ಕನ್ನಡಿಗರ ಹಿತಕಾಯಲು ಯಾರೂ ಇಲ್ಲವೆನ್ನುವ ಅನಾಥಪ್ರಜ್ಞೆ ಸರಿಯಲ್ಲ. ಭಾಷೆಯ ಕುರಿತಂತೆ ಹೆಮ್ಮೆಯನ್ನು ಹೊಂದಿರುವ ಕನ್ನಡಿಗರು ಒಳನಾಡಿನಲ್ಲಿಯೂ ಸಂಕಷ್ಟದಲ್ಲಿದ್ದು, ಕನ್ನಡದ ಸಮಸ್ಯೆಗಳನ್ನು ಎಲ್ಲ ಕನ್ನಡಿಗರು ಸಂಘಟಿತರಾಗಿ ಪರಿಹರಿಸಿಕೊಳ್ಳಬೇಕಾದ ಸಂದರ್ಭ ಇದಾಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಅಭಿಪ್ರಾಯ ವ್ಯಕ್ತಪಡಿಸಿದರು.  ಹೊರರಾಜ್ಯದಲ್ಲಿ ನಿಜವಾದ ಕನ್ನಡ ಉಳಿಯುತ್ತಿದೆ. ಹಾಗೂ ಕನ್ನಡ ಭಾಷೆಯನ್ನು ದೇವರಿಗೆ ಕಲಿಸಿದವರು ವಚನಕಾರರು ಎಂದು ಕನ್ನಡ ಭಾಷೆಯ ಬಗ್ಗೆ ಹೆಮ್ಮೆಯ ವಿಷಯ ಎಂದು ಡಾ ಪುರುಷೋತ್ತಮ ಬಿಳಿಮಲೆ ನುಡಿದರು. ನಾವು ವೇಗವಾಗಿ ಬೆಳೆಯುತ್ತಿರುವ ಸಂದರ್ಭಗಳಲ್ಲಿ ನಾವು ಹಿಂದಿನ ನೆನಪುಗಳ ಮಾಡಿಕೊಳ್ಳುವ ಇದು ಸಂದರ್ಭ ಹೀಗಾಗಿ ನಮ್ಮ ಕನ್ನಡ ಭಾಷೆಯ ಬೆಳವಣಿಗೆಯ ವೇಗವನ್ನು 3 ಪ್ರತಿಶತ ಇರುವುದು ಕಳವಳಕಾರಿ ವಿಷಯವಾಗಿದೆ ಎಂದರು.



ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಶನಿವಾರ ಹೈದರಾಬಾದಿನ ಉಸ್ಮಾನಿಯ ವಿಶ್ವವಿದ್ಯಾಲಯದ ಸಿಲ್ವರ್ ಜೂಬಿಲಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ 2023-24ನೇ ಸಾಲಿನ ಕನ್ನಡ ಮಾಧ್ಯಮ ಪ್ರಶಸ್ತಿ ಸಮಾರಂಭದಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ದೇಶದ ಯಾವುದೇ ಭಾಗದಲ್ಲಿ ವಾಸಿಸುತ್ತಿರುವ ಕನ್ನಡಿಗರ ಹಿತಕಾಯಲು ಸಿದ್ಧವಿದ್ದು, ಕನ್ನಡ ಅಭಿವೃದ್ಧಿ ಪ್ರಾಧಿಕಾರ ತನ್ನ ಸಂಪರ್ಕಕೊಂಡಿಯ ಕೆಲಸವನ್ನು ಮುಂದುವರೆಸಲಿದೆ ಎಂದರು.


ರಾಜ್ಯದಲ್ಲಿ ಏಳು ಸಾವಿರ ಏಕೋಪಾಧ್ಯಾಯ ಶಾಲೆಗಳು, ಐವತ್ತೈದು ಸಾವಿರ ಶಿಕ್ಷಕರ ಖಾಲಿ ಹುದ್ದೆಗಳು, ಆಂಗ್ಲ ಮಾಧ್ಯಮ ಶಾಲೆಗಳಾಗಿ ಪರಿವರ್ತಿತವಾಗುತ್ತಿರುವ ಸರ್ಕಾರಿ ಕನ್ನಡ ಶಾಲೆಗಳನ್ನು ಗಮನಿಸಿದಲ್ಲಿ ಕನ್ನಡದ ಮುಂದಿನ ದಿನಗಳ ಸ್ಥಿತಿ ಕಳವಳಕಾರಿ ಎಂದು ಆತಂಕ ವ್ಯಕ್ತಪಡಿಸಿದ ಡಾ.ಬಿಳಿಮಲೆ, ಇದು ಪ್ರವಾಹದ ವಿರುದ್ಧ ಈಜುವ ಕೆಲಸವಾಗಿದ್ದು, ಸಂಘಟಿತ ಹೋರಾಟವೇ ಪರಿಣಾಮಕಾರಿಯಾದ ಫಲಿತಾಂಶವನ್ನು ಒದಗಿಸಲು ಸಾಧ್ಯವೆಂದರು.



ದೇಶದ ಯಾವುದೇ ಮೂಲೆಯಲ್ಲಿ ವಾಸಿಸುತ್ತಿರುವ ಕನ್ನಡಿಗ ವಿದ್ಯಾರ್ಥಿಗಳಿಗೆ ಹಿಂದುಳಿದ ವರ್ಗಗಳ ವಸತಿನಿಲಯಗಳಲ್ಲಿ ಉಚಿತ ಪ್ರವೇಶ ಕರ್ನಾಟಕದಲ್ಲಿ ತಮ್ಮ ವ್ಯಾಸಂಗವನ್ನು ಮುಂದುವರೆಸ ಬಯಸುವ ಗಡಿನಾಡು, ಹೊರನಾಡು ವಿದ್ಯಾರ್ಥಿಗಳಿಗೆ ಸಮಾಜ ಕಲ್ಯಾಣ ಇಲಾಖೆಯ ಹಿಂದುಳಿದ ವರ್ಗಗಳ ವಿದ್ಯಾರ್ಥಿ ವಸತಿ ನಿಲಯಗಳಲ್ಲಿ ಯಾವುದೇ ನಿರ್ಬಂಧಗಳನ್ನು ಹೇರದೆ ಅವಕಾಶ ಕಲ್ಪಿಸಿಕೊಡಲು ಈಗಾಗಲೇ ರಾಜ್ಯ ಸರ್ಕಾರವು ತೀರ್ಮಾನಿಸಿದೆ ಎಂಬ ಮಾಹಿತಿಯನ್ನು ಹಂಚಿಕೊಂಡ ಡಾ.ಬಿಳಿಮಲೆ, ಈ ಕುರಿತಂತೆ ಸಮಾಜ ಕಲ್ಯಾಣ ಸಚಿವರಾದ ಡಾ.ಎಚ್.ಸಿ.ಮಹದೇವಪ್ಪನವರು ತಮಗೆ ಸ್ಪಷ್ಟ ಭರವಸೆಯನ್ನು ನೀಡಿದ್ದು, ಮುಂಬರುವ ಶೈಕ್ಷಣಿಕ ಸಾಲಿನಲ್ಲಿ ಇದು ಅನುಷ್ಠಾನಗೊಳ್ಳಲಿದೆ ಎಂದರು




ಆಂಗ್ಲ ಭಾಷೆಯ ವ್ಯಾಮೋಹ ಬೇಡ- ಡಾ. ಬೈರಮಂಗಲ ರಾಮೇಗೌಡ

ಕನ್ನಡದ ಪ್ರಾಚೀನತೆಗೆ ಮತ್ತು ಅದರ ಶ್ರೀಮಂತಿಕೆಗೆ ಯಾವುದೇ ಸಾಟಿಯಲ್ಲದ ಇಂಗ್ಲಿಷ್ ಭಾಷೆಯನ್ನು ಓಲೈಸುವ ವಾತಾವರಣ ಎಲ್ಲ ಕಡೆ ಸೃಷ್ಟಿಯಾಗಿರುವುದು ದುರದೃಷ್ಟಕರವೆಂದ ಸಾಹಿತಿ ಡಾ.ಬೈರಮಂಗಲ ರಾಮೇಗೌಡ, ಎಲ್ಲ ಭಾಷೆಗಳಿಗೆ ಕಂಟಕಪ್ರಾಯವಾಗಿರುವ ಇಂಗ್ಲಿಷ್ ಅನ್ನು ಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ವಿಶೇಷ ಮಹತ್ವ ಹೊಂದಿದೆ. ಕನ್ನಡ ಭಾಷೆಯ ಜೀವಂತಿಕೆಯನ್ನು ಉಳಿಸುವ ಮೂಲಕ ಮುಂದಿನ ಪೀಳಿಗೆಗೆ ಅದನ್ನು ದಾಟಿಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ಸಹಕಾರಿಯಾಗುತ್ತದೆ ಎಂದರು. 


ಕನ್ನಡದಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಕಬ್ಬಿಣದ ಕಡಲೆಯಲ್ಲ -ಶ್ರೀ ರಾಜಶೇಖರ .ಎನ್

ಹೈದರಾಬಾದ್ ನ ಕೇಂದ್ರೀಯ ಪತ್ತೇದಾರಿ ತರಬೇತಿ ಸಂಸ್ಥೆಯ ನಿರ್ದೇಶಕ ಶ್ರೀ ರಾಜಶೇಖರ .ಎನ್ (ಭಾ.ಪೋ.ಸೇ.) ರವರು, ಕನ್ನಡ ಮಾಧ್ಯಮದಲ್ಲಿ ಓದಿದರೆ ಉನ್ನತ ವ್ಯಾಸಂಗವಾಗಲಿ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತೀರ್ಣವಾಗಲಿ ಸಾಧ್ಯವಿಲ್ಲವೆನ್ನುವ ನಂಬಿಕೆಯನ್ನು ಮಕ್ಕಳು ಮತ್ತು ಪೋಷಕರು ಬಿಡಬೇಕು. ಕನ್ನಡದ ಮೂಲಕವೂ ಯಶಸ್ಸು ಸಾಧ್ಯವೆನ್ನುವುದಕ್ಕೆ ಮಾದರಿಯಾಗಿ ತಾನೇ ಇದ್ದೇನೆಂದರು.


ಇಂದು ಸಾಕ್ಷಿಯಾಗಿದ್ದೇನೆ. ಮಕ್ಕಳು ಕನ್ನಡ ಮಾಧ್ಯಮ ಎಂಬ ಕಿಳರಿಮೆಯನ್ನು ಮನಸ್ಸಿನಿಂದ ಕಿತೊಗೆಯಬೇಕು. ಕನ್ನಡ ಭಾಷೆಯಲ್ಲಿ ನೀವು ಓದಿದರೆ ಏನೆಲ್ಲವೂ ಸಾಧಿಸಲು ಸಾಧ್ಯವಾಗುತ್ತದೆ. ವಚನ ಕಾರರು ಕನ್ನಡ ಭಾಷೆಯನ್ನು ಜನಸಾಮಾನ್ಯರ ಭಾಷೆಯಾಗಿ ಮಾಡಿದರು. ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ ಎಂಬ ಬಸವೇಶ್ವರ ವಚನವನ್ನು ಉಲ್ಲೇಖಿಸಿದರು. ಕನ್ನಡ ಭಾಷೆಯು ಸರಳ ಸುಲಭವಾದ ಭಾಷೆಯಾಗಿದೆ ಕವಿಯು ಹೇಳುವಂತೆ ಸುಲಿದ ಬಾಳೆಯ ಹಣ್ಣಿನಂತೆ ಕನ್ನಡ ಭಾಷೆ ಎಂದು ರಾಜಶೇಖರ ನುಡಿದರು. 

ಹಾಗೆ ಕನ್ನಡ ಮಾಧ್ಯಮದಲ್ಲಿ ಓದುತ್ತಿರುವ ವಿದ್ಯಾರ್ಥಿಗಳಲ್ಲಿ ಧೈರ್ಯ ಸಾಹಸ ಒಳಗೊಂಡಿರುತ್ತದೆ. ಯಾವುದೇ ಪರಿಸ್ಥಿತಿಯನ್ನು ಎದುರಿಸುವ ಎದೆಗಾರಿಕೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಮಾತ್ರ ಇರುವುದು.. ಹೀಗಾಗಿ ವಿದ್ಯಾರ್ಥಿಗಳು ದಿನನಿತ್ಯದಲ್ಲಿ ಒಂದು ಶಿಕ್ಷಣ ಮಾಡುವುದು. ಪ್ರತಿನಿತ್ಯ ದಿನಪತ್ರಿಕೆ ಓದುವುದು. ಟಿವಿಯಲ್ಲಿ ಪ್ರಸಾರವಾಗುವ ವರದಿಯನ್ನು ನೋಡುವುದರಿಂದ ನೀವು ಯಾವುದೇ ಸ್ಪರ್ಧಾತ್ಮಕ ಪರೀಕ್ಷೆ ಬರೆದು ಉದ್ಯೋಗ ಪಡೆದುಕೊಳ್ಳಬಹುದು ಹೀಗಾಗಿ ಕಿಳರಿಮೆಯನ್ನು ಮನಸ್ಸಿನಿಂದ ತೆಗೆದು ಹಾಕಿ ನಿರಂತರವಾಗಿ ಅಧ್ಯಯನ ಮಾಡಿ ಎಂದು ಕಿವಿ ಮಾತು ಹೇಳಿದರು.

ಇದೇ ಸಂದರ್ಭದಲ್ಲಿ ಎಸ್.ಎಸ್.ಸಿ ಹಾಗೂ ಎಚ್.ಎಸ್.ಸಿ ತರಗತಿಗಳನ್ನು ಕನ್ನಡ ಮಾಧ್ಯಮದಲ್ಲಿ ಅಭ್ಯಸಿಸಿ ಅತಿಹೆಚ್ಚು ಅಂಕಗಳಿಸಿದ ಆಂಧ್ರ ಪ್ರದೇಶ ರಾಜ್ಯದ 52 ಹಾಗೂ ತೆಲಂಗಾಣ ರಾಜ್ಯದ 17 ವಿದ್ಯಾರ್ಥಿಗಳು ಸೇರಿ 69 ವಿದ್ಯಾರ್ಥಿಗಳಿಗೆ ನಗದು ಪ್ರಶಸ್ತಿ ನೀಡಿ ಪ್ರೋತ್ಸಾಹಿಸಲಾಯಿತು.


ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ.ಸಂತೋಷ ಹಾನಗಲ್ಲ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನಾಮನಿರ್ದೇಶಿತ ಸದಸ್ಯ ಶ್ರೀ ಟಿ. ತಿಮ್ಮೇಶ್, ಡಾ.ರವಿಕುಮಾರ್ ನೀಹ, ಹೈದರಾಬಾದ್ ಉಸ್ಮಾನಿಯ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಎಂ.ಲಿಂಗಪ್ಪ ಗೋನಾಳ್, ತೆಲಂಗಾಣ ಘಟಕದ ಕಸಾಪ ಅಧ್ಯಕ್ಷ ಡಾ. ವಿಠ್ಠಲ ಜೋಶಿ, ಗಡಿನಾಡು ಕನ್ನಡ ಸಂಘ (ಕೃಷ್ಣಾ) ಗೌರವಾಧ್ಯಕ್ಷ ಶ್ರೀ ಎಸ್.ರಾಮಲಿಂಗಪ್ಪ, ಅನಂತಪುರ ಜಿಲ್ಲೆಯ ಜಿಲ್ಲಾ ಪರಿಷತ್ ಪ್ರೌಢಶಾಲೆ ಶಿಕ್ಷಕ ಶ್ರೀ ಗಿರಿಜಾಪತಿ ಮಠ್ ಮಾತನಾಡಿದರು,  ಉಪನ್ಯಾಸಕ ಶ್ರೀ ಎಲ್. ಅಕ್ಷಯ್ ಕುಮಾರ್, ಕರ್ನಾಟಕ ಸಾಹಿತ್ಯ ಮಂದಿರದ ಕಾರ್ಯದರ್ಶಿ ನರಸಿಂಹ ಮೂರ್ತಿ ಜೋಯಿಸ.  ಹಾಜರಿದ್ದರು. ಹೈದರಾಬಾದ್ ಕನ್ನಡಿಗರ ಕಲ್ಯಾಣ ಅಭಿವೃದ್ಧಿ ಸಂಘದ ಅಧ್ಯಕ್ಷ ಶ್ರೀ ಧರ್ಮೇಂದ್ರ ಪೂಜಾರಿ ಬಗ್ದೂರಿ ವಂದಿಸಿದರು. ಪರಿಮಳ ದೇಶಪಾಂಡೆ ನಿರೂಪಿಸಿದರು. ಸಮಾರಂಭದಲ್ಲಿ ಡಾ. ವಿನಯ ನಾಯರ ಅವರಿಂದ ಸುಗಮ ಸಂಗೀತ ನಡೆಯಿತು. ಕನ್ನಡ ಗೀತೆಗೆ  ಚನ್ನರಾಯಪಟ್ಟಣದ ಬಿ.ವಿ. ಶೈಲಜಾ ಮತ್ತು ತಂಡದಿಂದ ಅದ್ಭುತ ನೃತ್ಯ ಪ್ರದರ್ಶನ ನೀಡಿದರು.

Friday, 3 January 2025

2025ನೇ ಸಾಲಿನ ವರ್ಷದ ಕನ್ನಡಿಗ ಪ್ರಶಸ್ತಿಗೆ ಸಂಗಮೇಶ ಎನ್ ಜವಾದಿ ಆಯ್ಕೆ

ಬೆಂಗಳೂರು : ಸರಳ ಸಜ್ಜನಿಕೆಯ ವ್ಯಕ್ತಿತ್ವದವರು,  ಕಲ್ಯಾಣ ಕರ್ನಾಟಕದ ಹೆಮ್ಮೆಯ ಸಾಹಿತಿಗಳು, ಸಂವೇದನಾಶೀಲ ಬರಹಗಾರರು , ವೈಚಾರಿಕ ಚಿಂತಕರು, ಅಂಕಣಕಾರರು, ಪತ್ರಕರ್ತರು, ಸಂಘಟಕರು , ಪರಿಸರ ಸಂರಕ್ಷಕರು, ಹೋರಾಟಗಾರರು, ಸಾಂಸ್ಕೃತಿಕ ಸಂಘಟಕರಾದ ಸಂಗಮೇಶ ಎನ್ ಜವಾದಿ ರವರನ್ನು 2025ನೇ ಸಾಲಿನ ವರ್ಷದ ಕನ್ನಡಿಗ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಕರ್ನಾಟಕ ಸಂಯುಕ್ತ ರಂಗ ಬೆಂಗಳೂರು ಅಧ್ಯಕ್ಷ ಹೆಚ್ ಸದಾಶಿವ ತಿಳಿಸಿದರು.

 


ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು  ಜವಾದಿಯವರ ವಿಶಿಷ್ಟ ಪ್ರಗತಿಪರ ವಿಚಾರಧಾರೆಗಳ ಸಂವೇದನ ಶೀಲತೆಯಿಂದ ಈ ನಾಡಿನಲ್ಲಿ ತಮ್ಮದೇ ಆದಂತ ವೈಚಾರಿಕ ಛಾಪು ಮೂಡಿಸಿದ ಹೊಸ ತಲೆಮಾರಿನ ಬರಹಗಾರರು,ಚಿಂತಕರು.
ಮೂಲತ ಸಾಮಾಜಿಕ ಸೇವಕರು, ಪರಿಸರ ಸಂರಕ್ಷಕರು, ಹೋರಾಟಗಾರರಾಗಿ ಗುರುತಿಸಿಕೊಂಡರೂ ಅದರಾಚೆಗೆ ವೈಜ್ಞಾನಿಕ ಲೇಖನಗಳನ್ನು, ಜೀವನಚರಿತ್ರೆ ವಿಮರ್ಶೆ ಸಂಶೋಧನೆಗಳಲ್ಲೂ ಕಾರ್ಯನಿರ್ವಹಿಸಿ ಬಹುಶ್ರುತ ಬರಹಗಾರರು ಎನಿಸಿದ್ದಾರೆ. ಸತ್ಯ ತತ್ವ ಪರ ನೆಲೆಗಳಲ್ಲಿ  ವ್ಯಾಖ್ಯಾನ ಮಾಡುವ ಮುಖಾಂತರ ಪ್ರಖರ ವಿಚಾರವಾದಿ ಎನಿಸಿದ್ದಾರೆ. ಒಂದು ದಶಕಗಳಿಂದ ಸಾಹಿತ್ಯ ರಚನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ದುಡಿಯುತ್ತಿದ್ದಾರೆ. ಅವರಿಗೆ ಸಂದ ಪ್ರಶಸ್ತಿ ಪುರಸ್ಕಾರ ಬಹುಮಾನಗಳು ಅನೇಕ.  ಶ್ರೀಯುತ ಸಂಗಮೇಶ ಎನ್ ಜವಾದಿ ಅವರು ಅನೇಕ ಸಾಹಿತ್ಯ,ಸಾಂಸ್ಕೃತಿಕ, ಶೈಕ್ಷಣಿಕ ಕ್ಷೇತ್ರಗಳ ಪದಾಧಿಕಾರಿಗಳಾಗಿ ಕಾರ್ಯ ನಿರ್ವಹಿಸಿದ್ದಾರೆ ಮತ್ತು ಪ್ರಸ್ತುತ ನಿರ್ವಹಣೆ ಮಾಡುತ್ತಿದ್ದಾರೆ. ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತಿನ ಬೀದರ್ ಜಿಲ್ಲಾಧ್ಯಕ್ಷ, ರಾಷ್ಟ್ರೀಯ ದೇಹಾಂಗದಾನ ಜಾಗೃತಿ ಸಮಿತಿ ಬೀದರ ಜಿಲ್ಲೆಯ ಅಧ್ಯಕ್ಷರಾಗಿ, ಬೀದರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಹಾಗೂ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಬೀದರ್ ಜಿಲ್ಲೆಯ ಕಾರ್ಯದರ್ಶಿಯಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ. 
 
ಕವಿತೆ , ಲೇಖನ, ಅಂಕಣ, ವೈಜ್ಞಾನಿಕ ವಿಮರ್ಶೆ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಂಗಮೇಶ ಎನ್ ಜವಾದಿ  ಅವರು ವೈಚಾರಿಕ ಲೇಖನಗಳು ಬರೆಯುವ ಮೂಲಕ ತಮ್ಮ ಛಾಪನ್ನು ಮೂಡಿಸಿದ್ದಾರೆ.ಈದಿಗ ಇವರ ಎರಡು ದಶಕಗಳ ಜನಪರ ನಿಸ್ವಾರ್ಥ ಸೇವೆಯನ್ನು ಗುರುತಿಸಿ ಕರ್ನಾಟಕ ಸಂಯುಕ್ತ ರಂಗ ಬೆಂಗಳೂರು ರವರು ಕೊಡುಮಾಡುವ 2025ನೇ ಸಾಲಿನ ವರ್ಷದ ಕನ್ನಡಿಗ ಪ್ರಶಸ್ತಿಗೆ ಸಂಗಮೇಶ ಎನ್ ಜವಾದಿ ರವರನ್ನು ಆಯ್ಕೆ ಮಾಡಲಾಗಿದೆ.  
ದಿ.08-01-2025 ರಂದು ಬೆಂಗಳೂರಿನಲ್ಲಿ ನಡೆಯಲಿರುವ ಐತಿಹಾಸಿಕ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಹೇಳಿದರು.

ಮಲ್ಲಣ್ಣ ದೇವರ ಜಾತ್ರೆಗೆ ಸಂಭ್ರಮದ ತೆರೆ

ಬೀದರ್: ಭಾಲ್ಕಿ ತಾಲ್ಲೂಕಿನ ಖಾನಾಪುರ ಗ್ರಾಮದಲ್ಲಿ ಒಂದು ತಿಂಗಳ ಮಲ್ಲಣ್ಣ ದೇವರ ಜಾತ್ರಾ ಮಹೋತ್ಸವ ಶುಕ್ರವಾರ ಸಂಭ್ರಮದ ಮಧ್ಯೆ ತೆರೆ ಕಂಡಿತು.

ಜಾತ್ರೆಯ ಕೊನೆಯ ದಿನ ವಿಶೇಷ ಪೂಜೆ, ಅಭಿಷೇಕ ಸೇರಿದಂತೆ ದೇಗುಲದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ವಿವಿಧೆಡೆಯ ಅಪಾರ ಭಕ್ತರು ದೇವರ ದರ್ಶನ ಪಡೆದರು.


ಭಾಲ್ಕಿ ತಾಲ್ಲೂಕಿನ ಖಾನಾಪುರದ ಮಲ್ಲಣ್ಣ ದೇವರ ಜಾತ್ರೆಯ ಅಂತಿಮ ದಿನವಾದ ಶುಕ್ರವಾರ ಪೂಜೆ ಕಾರ್ಯಕ್ರಮ ನೆರವೇರಿತು

ಪ್ರೇಮ ಕಾಶ್ಮೀರದಲ್ಲಿ ರಕ್ತದೋಕುಳಿ; ಹಿಂದೂಗಳೇ ಟಾರ್ಗೆಟ...!

  ಪ್ರೇಮ ಕಾಶ್ಮೀರದಲ್ಲಿ ರಕ್ತದೋಕುಳಿ; ಹಿಂದೂಗಳೇ ಟಾರ್ಗೆಟ್. ಭೂಲೋಕದ ಸ್ವರ್ಗವೆಂದೇ ಕರೆಯುವ ಜಮ್ಮು-ಕಾಶ್ಮೀರದ ಪೆಹಲ್ಗಾಮ್ ಸಮೀಪದ ಬೈಸರನ್ ಹುಲ್ಲುಗಾವಲಿನಲ್ಲಿ ಪಾಕ್ ಪ್...