ads

Search This Blog

Friday, 21 February 2025

ಗುರುದ್ರೋಹಿ ಕನ್ಹೇರಿ ಸ್ವಾಮಿಗಳು: ಬಹಿರಂಗ ಕ್ಷಮೆ ಯಾಚಿಸಲಿ : ಡಾ. ಚನ್ನಬಸವಾನಂದ ಜಗದ್ಗುರುಗಳು

 

ಬೀದರ: ಮಹಾರಾಷ್ಟçದ ಕೋಲ್ಹಾಪುರ ಸಮೀಪದ ಕನ್ಹೇರಿ ಮಠವು ೧೨ನೇ ಶತಮಾನದಲ್ಲಿ ಬಸವಾದಿ ಶರಣರ ಮತ್ತು ಶೂನ್ಯ ಪೀಠದ  ಪರಂಪರೆಯ ಮಠ. ಶರಣರಾದ ಶ್ರೀ ಕನ್ಹೇರಿ ಕಾಡಸಿದ್ದೇಶ್ವರರು ಅಪ್ಪಟ ಬಸವ ಭಕ್ತರು. ಆದರೆ ಆ ಶರಣ ಪರಂಪರೆಯ ಪೀಠದ ಮೇಲೆ ಕುಳಿತಿರುವ ಈಗಿನ ಮಠಾಧೀಶರಾದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಗಳು ಶರಣರ ಪರಂಪರೆಯನ್ನೇ ಅದೃಶ್ಯಗೊಳಿಸಿದ್ದಾರೆ. ಇತ್ತಿಚಿಗೆ ಖಾಸಗಿ ಟಿವಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನವೊAದರಲ್ಲಿ ಬಸವ ಭಕ್ತರನ್ನು ತಾಲಿಬಾನಿಗಳೆಂದು ಆರೋಪಿಸಿದ್ದು, ಭಕ್ತರೋಬ್ಬರು ನಿಮ್ಮ ಮಠವು ವೈದಿಕವೋ ಅಥವಾ ಅವೈದಿಕವೋ ಎಂದು ಪ್ರಶ್ನೆ ಕೇಳಿದಾಗ ಅದನ್ನು ಕೇಳಲು ನೀಯಾರು? ಎಂದು ಸ್ವಾಮಿಗಳು ಉದ್ಧಟತನ ಪ್ರದರ್ಶಿಸಿದ್ದಾರೆ. ವಚನಗಳನ್ನು ಬೊಗಳು ಬರೀ ಹಂಗೆ ಪ್ರಶ್ನೆ ಕೇಳುತ್ತಿದ್ದಿಯಲ್ಲ ಎಂದು ದುರಹಂಕಾರದಿAದ ಪ್ರಶ್ನೆ ಕೇಳಿದ ವ್ಯಕ್ತಿಯನ್ನು ಅವಮಾನ ಮಾಡಿದ್ದಾರೆ.

ಈ ಕನ್ಹೇರಿ ಮಠವು ವೈದಿಕ ಮಠವೋ ಅಥವಾ ಲಿಂಗಾಯತ ಧರ್ಮದ ಮಠವೋ ಎಂಬುದಕ್ಕೆ ಈ ಮಠದ ಕರ್ತೃ ಅಥವಾ ಮೂಲಪುರುಷ ಕಾಡಸಿದ್ದೇಶ್ವರ ವಚನಗಳಿಂದಲೇ ತಿಳಿದುಕೊಳ್ಳೋಣ.
ಗುರು ಲಿಂಗ ಜಂಗಮ ವಿಭೂತಿ ರುದ್ರಾಕ್ಷಿ ಮಂತ್ರ ಪಾದೋದಕ ಪ್ರಸಾದ ಇವು ಲಿಂಗಾಯತ ಧರ್ಮದ ಅಂಗವಾಗಿವೆ. ಲಿಂಗಾಚಾರ ಸದಾಚಾರ ಶಿವಾಚಾರ ಗಣಾಚಾರ ಮತ್ತು ಭೃತ್ಯಾಚಾರ ಪ್ರಾಣ ಸ್ವರೂಪವಾಗಿವೆ. ಭಕ್ತ ಮಹೇಶ್ವರ ಪ್ರಸಾದಿ ಪ್ರಾಣಲಿಂಗಿ ಶರಣ ಐಕ್ಯ ಆರು ಸ್ಥಲಗಳು ಲಿಂಗಾಯತ ಧರ್ಮ ಪುರುಷನ ಆತ್ಮದಂತಿವೆ. ಬಸವ ತತ್ವನಿಷ್ಠರಾದ ಕಾಡಸಿದ್ದೇಶ್ವರ ಶರಣರು ಸಹ ಈ ವಿಷಯ ಕುರಿತು ೫೦೦ ವಚನಗಳನ್ನು ರಚಿಸಿದ್ದಾರೆ. ಮತ್ತು ಅದರಂತೆ ನಡೆದುಕೊಂಡಿದ್ದಾರೆ. ಆದರೆ ಅದೇ ಮಠದ ಮಠಾಧೀಶರಾಗಿರುವ ಈ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮಿಗಳು ಲಿಂಗಾಯತ ಧರ್ಮದ ಸಿದ್ದಾಂತಗಳನ್ನು ಗಾಳಿಗೆ ತೂರಿ ಸಂಪೂರ್ಣವಾಗಿ ಈ ಮಠವನ್ನು ಕಟ್ಟಾ ವೈದಿಕ ಮಠವನ್ನಾಗಿ ಬದಲಿಸಿದ್ದಾರೆ.
ಹಣೆಯ ಮೇಲೆ ವಿಭೂತಿಯಿಲ್ಲ. ಸದಾವಕಾಲ ಕುಂಕುಮ ಧರಿಸಿ ವೈದಿಕನಂತೆ ಪ್ರದರ್ಶಿಸುವ ಈ ಸ್ವಾಮಿಗಳ ಕೊರಳಲ್ಲಿ ಇಷ್ಟಲಿಂಗವಿದೆಯೋ ಇಲ್ಲವೋ ಅನುಮಾನವಿದೆ. ಶ್ರೀ ಕಾಡಸಿದ್ದೇಶ್ವರ ಶರಣರು ಬರೆದ ವಚನಗಳು ಗಣಾಚಾರ ತತ್ವದಿಂದ ಕೂಡಿವೆ.
ಮಣ್ಣ ಮೆಚ್ಚಿ ಗುರುವಿಗೆ ಹೊರತಾದೆ
ಹೆಣ್ಣ ಮೆಚ್ಚವಿ ಲಿಂಗಕ್ಕೆ ಹೊರತಾದೆ
ಹೊನ್ನ ಮೆಚ್ಚಿ ಜಂಗಮಕ್ಕೆ ಹೊರತಾದೆ………
ಎಂಬ ವಚನದಲ್ಲಿ ಬಸವೇಶ್ವರಾದಿಯಾಗಿ ಏಳ್ನೂರೆಪ್ಪತ್ತು ಶರಣರು ಹೇಳಿದ ತತ್ವಗಳು ಅಲ್ಲಗಳೆದರೆ ಅಂತಹ ಮತಿಭ್ರಷ್ಟರನ್ನು ಕಾಲು ಮೇಲಕ್ಕೆ ತಲೆ ಕೆಳಕ್ಕೆ ಮಾಡಿ ಅವರಂಗದ ಮೇಲಿನ ಚರ್ಮವ ಹೋತ ಕುರಿತಗಳ ಚರ್ಮ ಹರಿದ ಹಾಗೆ ಹರಿದು ಹದ್ದು ಕಾಗೆ ನಾಯಿ ನರಿಗಳಿಗೆ ಹಾಕೆಂದ ಕಾಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬ ಲಿಂಗ ನಿರ್ಮಾಯ ಪ್ರಭುವೆ. – ಕಾಡಸಿದ್ದೇಶ್ವರ ವಚನ ೨೬
ಇಷ್ಟಲಿಂಗಕ್ಕೆ ರೂಪು ಮೊದಲಾದ ಪದಾರ್ಥವ ಕೊಟ್ಟು ಸೇವಿಸಬೇಕು. ಪ್ರಾಣಲಿಂಗಕ್ಕೆ ರುಚಿ ಪದಾರ್ಥವ ನರ್ಪಿಸಿ ಸೇವಿಸಬೇಕು. ಭಾವಲಿಂಗಕ್ಕೆ ತೃಪ್ತಿ ಪದಾರ್ಥವ ನರ್ಪಿಸಿ ಸೇವಿಸಬೇಕು ಅವನೇ ಶರಣ ಸತಿ ಲಿಂಗಪತಿ ಎಂದು ಶರಣರು ತಮ್ಮ ೧೦೫ ನೇ ವಚನದಲ್ಲಿ ಹೇಳುತ್ತಾರೆ.
ಲಿಂಗ ಜಂಗಮ ಒಂದೆAದರಿಯದೆ
ಭಿನ್ನವಿಟ್ಟು ಅರ್ಚಿಸುವರು
ದೇಹಕ್ಕೆ ಪ್ರಾಣಕ್ಕೆ ಭೇದ ಉಂಟೇ?
ಲಿAಗವೇ ಅಂಗ ಜಂಗಮವೇ ಪ್ರಾಣ ಎಂದು ಶ್ರೀ ಕಾಡಸಿದ್ದೇಶ್ವರರು ತಮ್ಮ ೯೭ನೇ ವಚನದಲ್ಲಿ ಹೇಳಿದ್ದಾರೆ. ಇಷ್ಟಲಿಂಗದ ಹೊರತು ಅನ್ಯದೇವತೆಗಳ ಪೂಜೆಯನ್ನು ಖಂಡಿಸಿದ್ದಾರೆ.
ಇಷ್ಟಲಿAಗದ ಮಹತ್ವ ಅರಿಯದೆ ದೇವರನ್ನು ಹೊರಗೆ ಹುಡುಕುವವರ ಕುರಿತು ಕಾಡಸಿದ್ದೇಶ್ವರ ಶರಣರು ಕುರುಡನ ಕೈಯಲ್ಲಿ ಕನ್ನಡಿಯ ಕೊಟ್ಟರೆ ನೋಡಬಲ್ಲನೇ? ಎಂದು ನೋವಿನಿಂದ ಹೇಳಿದ್ದಾರೆ. ಅಂತಹ ಮಹಾನ್ ಶರಣರ ಸ್ಥಾನದಲ್ಲಿ ಕುಳಿತ ಸ್ವಾಮಿಗಳು ಇಷ್ಟಲಿಂಗದ ಮಹತ್ವ ಅರಿಯದೆ ವೈದಿಕರ ಬೆನ್ನು ಹತ್ತಿರುವುದು ಲಿಂಗಾಯತರ ದುರ್ದೈವ ಸರಿ. ಕಾಡಸಿದ್ದೇಶ್ವರ ಶರಣರು ತಮ್ಮ ಇನ್ನೊಂದು ವಚನ ಸಂ. ೪೨೭ ರಲ್ಲಿ ಲೌಕಿಕ ಯಾರು ಎಂಬುದನ್ನು ವಿವರಿಸುತ್ತ
ಹೊನ್ನು ಹೆಣ್ಣು ಮಣ್ಣನ್ನು ಹಿಡಿದು
ಆಚರಿಸುವುದು ಲೌಕಿಕವಲ್ಲ
ಸತಿಸುತರ ಹಿಡಿದು ಮನೆಮಾರು ಕಟ್ಟಿ
ಪ್ರಪಂಚ ಮಾಡುವುದು ಲೌಕಿಕವಲ್ಲ
ಯಾವುದು ಲೌಕಿಕವೆಂದರೆ ಶ್ರೀ ಗುರು ಕರುಣದಿಂದ ಪಡಕೊಂಡ ಕರಕಮಲದ ಲಿಂಗಾAಗ ಸಮರಸವನರಿಯದೆವರು ಲೌಕಿಕರು ನೋಡೆಂದನಯ್ಯ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿAಗ – ಕಾಡಸಿದ್ದೇಶ್ವರ ವಚನ ಈಗಿನ ಸ್ವಾಮಿಗಳು ಇಷ್ಟಲಿಂಗ ಯೋಗದ ಮರ್ಮವನರಿಯದೆ ಲೌಕಿಕವಾಗಿ ತಿರುಗುತ್ತಿರುವುದು ಮಹಾದುರಂತವೆAದೇ ಹೇಳಬೇಕಾಗುತ್ತದೆ
ಗುರುವಿನಿಂದ ಇಷ್ಟಲಿಂಗ ಧರಿಸಿ ಕಲ್ಲು ಕಟ್ಟಿಗೆ ಮಣ್ಣನ್ನು ಪೂಜಿಸುವವರು ಹುಟ್ಟು ಕುರುಡರು ಎಂದು ಶರಣ ಕಾಡಸಿದ್ದೇಶ್ವರರು ಕುಟುಕಿದ್ದಾರೆ. ತಮ್ಮ ಮಠದ ಮೂಲ ಕರ್ತೃಗಳ ಆಶಯಕ್ಕೆ ತತ್ವಸಿದ್ದಾಂತಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿರುವ ಈ ಅದೃಶ್ಯ ಸ್ವಾಮಿಗಳು ಬಸವ ಭಕ್ತರಿಗೆ ತಾಲಿಬಾನಿಗಳು ಎಂದು ಹೇಳುವುದು ಹಾಸ್ಯಾಸ್ಪದ. ಗುರುಲಿಂಗ ಜಂಗಮಕ್ಕೆ ದ್ರೋಹ ಮಾಡಿ ಬಸವಾದಿ ಶರಣರ ಮಠವನ್ನು ವೈದಿಕ ಮಠವನ್ನಾಗಿ ಮಾಡಿ ತಾನೂ ವೈದಿಕನಾವುಗುವುದು ಧರ್ಮದ್ರೋಹದ ಕೆಲಸ.
ಅದೃಶ್ಯ ಕಾಡಸಿದ್ದೇಶ್ವರ ಸ್ವಾಮಿಗಳು ಬಸವ ಭಕ್ತರಲ್ಲಿ ಬಹಿರಂಗ ಕ್ಷಮೆ ಯಾಚಿಸಿ ಇನ್ನು ಮುಂದೆ ಲಿಂಗಾಯತ ಧರ್ಮದಂತೆ ನಡೆಯುತ್ತೇನೆಂದು ಮಾತು ಕೊಡಬೇಕು. ಇಲ್ಲವಾದರೆ ಲಿಂಗಾಯತರು ಮಠ ಬಿಟ್ಟು ತೊಲಗಿ ಎಂದು ಚಳುವಳಿ ಮಾಡಬೇಕಾದೀತು…!

Thursday, 13 February 2025

ಧರ್ಮಾಚರಣೆಗಳು ಬೇರೆಯಾದರೂ ಆತ್ಮ ಚೈತನ್ಯ ಒಂದೆ - ಹಾರಕೂಡ ಶ್ರೀ

 ಚಿಂಚೋಳಿ : ನಾವು ಆಚರಿಸುವ, ಅನುಸರಿಸುವ, ಧರ್ಮಾಚರಣೆಗಳು ಬೇರೆ ಬೇರೆಯಾದರೂ ಎಲ್ಲರೊಳಗಿರುವ ಆತ್ಮ ಚೈತನ್ಯ ಒಂದೆ ಆಗಿರುತ್ತದೆ ಎಂದು ಹಾರಕೂಡದ ಡಾ. ಚನ್ನವೀರ ಶಿವಾಚಾರ್ಯರು ನುಡಿದರು.

ಚಿಂಚೋಳಿ ತಾಲೂಕಿನ ಸಾಲೆ ಬೀರನಳ್ಳಿ ಗ್ರಾಮದಲ್ಲಿ ಆಯೋಜಿಸಿದ ಪಾಂಡುರಂಗ ವಿಠಲನ ಮೂರ್ತಿ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಸಮಾರಂಭದ ಪಾವನ ಸಾನಿಧ್ಯ ವಹಿಸಿ ಮಾತನಾಡಿದ ಶ್ರೀಗಳು ಬಹುತ್ವ ನಮ್ಮ ದೇಶದ ವೈಶಿಷ್ಟ್ಯ 
 ಆಧ್ಯಾತ್ಮ ಸಾಧನೆಗಾಗಿ, ಆರಾಧನೆಗಾಗಿ ವಿಭಿನ್ನ ಮಾರ್ಗಗಳನ್ನು ಅನುಸರಿಸಿದರೂ ದೈವತ್ವದ ವಾರಿಧಿ ಒಂದೆ ಆಗಿರುತ್ತದೆ.
ಕಷ್ಟದುಳಿಯ ಸಹಸ್ರ ಪೆಟ್ಟು ಸಹಿಸಿದವನೇ ನಿಜವಾದ ಸಾಧಕನಾಗಿ ಹೊರಹೊಮ್ಮುತ್ತಾನೆ.
 ಲೋಕ ನಿಂದೆಗಳಿಗೆ ಕಿವಿಗೊಡದೆ, ಆತ್ಮ ಸಾಕ್ಷಿಯಿಂದ ಪ್ರಯತ್ನ ಶೀಲನಾದರೆ ಯಶಸ್ಸು ಲಭಿಸುತ್ತದೆ.
 ಭಾರತೀಯ ಪರಂಪರೆಯಲ್ಲಿ ವಾರಕಾರಿ ಭಕ್ತಿ ಪಂಥ ಒಂದು ವಿಶೇಷವಾದ ಆರಾಧನಾ ಪಂಥವಾಗಿದ್ದು ಪಂಡರಪುರ ವಿಠಲನ ನಾಮಸ್ಮರಣೆಯಿಂದ ಶಾಶ್ವತ ಶಾಂತಿ ಪಡೆಯಬಹುದಾಗಿದೆ.
 ಭಕ್ತಿಯಲ್ಲಿ ದೃಢತೆ ಇದ್ದರೆ ನಮ್ಮ ಹೃದಯ ವಿಠಲನ ಆವಾಸಸ್ಥಾನವಾಗಿರುತ್ತದೆ.
 ಸೌಹಾರ್ದತೆಯ ತೊಟ್ಟಿಲಿನಂತಿರುವ ಸಾಲೆ ಬೀರನಳ್ಳಿ ಗ್ರಾಮದ ಜನತೆ ಬದುಕು ಯಾವತ್ತೂ ಶ್ರೇಯಸ್ಸಿನಿಂದ ಕೂಡಿರಲಿ, ಈ ನಿಟ್ಟಿನಲ್ಲಿ ಹಾರಕೂಡ ಚೆನ್ನಬಸವರ ಆಶೀರ್ವಾದ ಸದಾ ಎಲ್ಲರನ್ನೂ ಕಾಪಾಡಲಿ ಎಂದು ಶುಭ ಹಾರೈಸಿದರು.
ವೀರೇಶ್ವರ ಶಿವಾಚಾರ್ಯರು ಧನಶ್ರೀ ಹಾಗೂ  ಸುಭಾಷ ರಾಥೋಡ ಮಾತನಾಡಿದರು.
ಪೂಜ್ಯಶ್ರೀ ಶಿವಕುಮಾರ ಶಿವಾಚಾರ್ಯರು ನರನಾಳ, ಬಸವರಾಜ ಮಾಲಿ, ಪ್ರಭುಲಿಂಗ ಲೇವಡಿ, ವಿಕ್ರಮ ಪಾಟೀಲ, ಬಾಬುರಾವ ಪಾಟೀಲ, ಗೌತಮ ಪಾಟೀಲ ಮುಂತಾದವರು ಉಪಸ್ಥಿತರಿದ್ದರು.
 ಜಗನ್ನಾಥ ರೆಡ್ಡಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
 ರೇವಣಸಿದ್ದಯ್ಯ ಸ್ವಾಮಿ ಪ್ರಾರ್ಥನಾ ಗೀತೆ ನಡೆಸಿಕೊಟ್ಟರು.
 ನವಲಿಂಗ ಪಾಟೀಲ ನಿರೂಪಿಸಿದರು.



ಚಿಂಚೋಳಿ ತಾಲೂಕಿನ ಸಾಲೆ ಬೀರನಳ್ಳಿ ಗ್ರಾಮದಲ್ಲಿ ಆಯೋಜಿಸಿದ ಪಾಂಡುರಂಗ ವಿಠಲನ ಮೂರ್ತಿ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಸಮಾರಂಭವನ್ನು ಹಾರಕೂಡದ ಪೂಜ್ಯಶ್ರೀ ಡಾ. ಚನ್ನವೀರ ಶಿವಾಚಾರ್ಯರು ದೀಪ ಬೆಳಗಿಸಿ ಉದ್ಘಾಟಿಸಿದರು.
ಶ್ರೀ ವೀರೇಶ್ವರ ಶಿವಾಚಾರ್ಯರು ಧನಶ್ರೀ, ಪೂಜ್ಯಶ್ರೀ ಶಿವಕುಮಾರ ಶಿವಾಚಾರ್ಯರು ನರನಾಳ, ಸುಭಾಷ ರಾಥೋಡ, ಬಸವರಾಜ ಮಾಲಿ, ಪ್ರಭುಲಿಂಗ ಲೇವಡಿ, ವಿಕ್ರಮ ಪಾಟೀಲ, ಬಾಬುರಾವ ಪಾಟೀಲ, ಗೌತಮ ಪಾಟೀಲ, ಜಗನ್ನಾಥ ರೆಡ್ಡಿ ಮುಂತಾದವರು ಉಪಸ್ಥಿತರಿದ್ದರು.

Friday, 7 February 2025

ಡಾ. ಬಸವಲಿಂಗ ಪಟ್ಟದ್ದೆವರು ಲಿಂಗಾಯತ ಧರ್ಮಕ್ಕೆ ದ್ರೋಹ: ತಕ್ಷಣ ಒಕ್ಕೂಟ ಅಧ್ಯಕ್ಷಕ್ಕೆ ರಾಜೀನಾಮೆ ನೀಡಲಿ – ಶಿವರಾಜ ಪಾಟೀಲ್ ಅತಿವಾಳ ಆಕ್ರೋಶ


ಬೀದರ : ಲಿಂಗಾಯತ ಮಠಾಧೀಶರ ಒಕ್ಕೂಟದ ಅಧ್ಯಕ್ಷರಾದ ಪೂಜ್ಯ ಡಾ. ನಾಡೋಜ ಬಸವಲಿಂಗ ಪಟ್ಟದ್ದೆವರು ಲಿಂಗಾಯತ ಧರ್ಮದ ತತ್ವ ಸಿದ್ಧಾಂತಗಳಿಗೆ ವಿರುದ್ಧವಾಗಿ ನಡೆದುಕೊಂಡು ಸಮಾಜಕ್ಕೆ ದ್ರೋಹ ಮಾಡುತ್ತಿದ್ದಾರೆ ಎಂದು ಹಿರಿಯ ಲಿಂಗಾಯತ ನಾಯಕ ಶಿವರಾಜ ಪಾಟೀಲ್ ಅತಿವಾಳ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವರು ತಕ್ಷಣವೇ ನೈತಿಕ ಹೊಣೆ ಹೊತ್ತು ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಅವರು ಇಂದು ಶೋಧವಾಣಿ ಯೊಂದಿಗೆ ಮಾತನಾಡುತ್ತ ಭಾಲ್ಕಿ ಹಿರೇಮಠ ಸಂಸ್ಥಾನದ ಗೌರವವನ್ನು ಪೂಜ್ಯ ಬಸವಲಿಂಗ ಪಟ್ಟದ್ದೆವರು ಕಳೆಯುತ್ತಿರುವುದು ಖೇದಕರ ಸಂಗತಿ. ಇತ್ತೀಚೆಗೆ ಕಲಬುರಗಿಯಲ್ಲಿ ನಡೆದ ಬಹುತ್ವ ಭಾರತ ಸಮಾವೇಶದಲ್ಲಿ ಭಾಗವಹಿಸಿ ಅವರೆ ಸಮಾವೇಶ ಉದ್ದೇಶಿಸಿ ಮಾತನಾಡುತ್ತಾ ಯಾರು ಭಾರತೀಯ ಸಂಸ್ಕೃತಿಯ ಉತ್ಸವಕ್ಕೆ ಹೋಗಬಾರದು ಎಂದು ನುಡಿದರು.  ಮುಂದುವರೆದು ಯಾರು ಭಾಗವಹಿಸುತ್ತಾರೋ ಅವರು ಕೊರಳಿನಲ್ಲಿ ಕಟ್ಟಿರುವ ಲಿಂಗವನ್ನು ಬಿಚ್ಚಿಟ್ಟು ಹೋಗಬೇಕು ಹಾಗೂ ವಚನ ಸಾಹಿತ್ಯವನ್ನು ಬಳಸುವಂತಿಲ್ಲ ಎಂದು ತಾಕ್ಕಿತು ಮಾಡಿರುವ ಮಾತು ಪಟ್ಟದ್ದೆವರು ಮರೆತ್ತಿದ್ದಾರೆಯೇ ಎಂದು ಅತಿವಾಳ ಆಕ್ರೋಶ ವ್ಯಕ್ತಪಡಿಸಿದರು. ಆರೆಸಸ್ ಪ್ರಾಯೋಜಿತ ಭಾರತೀಯ ಸಂಸ್ಕೃತಿ ಉತ್ಸವ ಪ್ರಚಾರ ವಾಹನದ ಪೂಜೆ ಅವರ ಉತ್ತರಾಧಿಕಾರಿ ಪೂಜ್ಯ ಶ್ರೀ ಗುರುಬಸವ ಪಟ್ಟದೇವರು ಭಾಲ್ಕಿ ತಮ್ಮ ಮಠದ ಎದುರುಗಡೆ ಚಾಲನೆ ಕೊಟ್ಟರು, ಎಂತಹ ದ್ರೋಹ ವಿಡಂಬನೆ ಅಂದರೆ ಭಾರತೀಯ ಸಂಸ್ಕೃತಿ ಉತ್ಸವಕ್ಕೆ ಸಾನಿಧ್ಯ ಪೂಜ್ಯ ಶ್ರೀ ಡಾ ಬಸವಲಿಂಗ ಪಟ್ಟದೇವರು ವಹಿಸಿದರು. 

ಲಿಂಗಾಯತ ಮಠಾಧೀಶರ ಒಕ್ಕೂಟದ ಅಧ್ಯಕ್ಷರಾಗಿ ಮಾಡಿದು ಬಸವಣ್ಣನವರ ತತ್ವ ಸಿದ್ಧಾಂತಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಪ್ರಚಾರ ಮಾಡುವ ಉದ್ದೇಶದಿಂದ ಆದರೆ ಬಸವಲಿಂಗ ಪಟ್ಟದ್ದೆವರು ತಮ್ಮ ಮಠದ ಅಭಿವೃದ್ಧಿ ಯೋಜನೆ ಮೂಲ ಮಂತ್ರವಾಗಿಸಿಕೊಂಡು ಇಂದು ಎಲ್ಲರ ಕೆಂಗಣ್ಣಿಗೆ ಗುರಿಯಾದರು, ಆರೆಸಸ್ ಮುಖಂಡ ಶ್ರೀ ಬಸವರಾಜ ಪಾಟಿಲ ಸೇಡಂ ಅವರ ಸಂಸ್ಥೆಯ ಫಲಾನುಭವಿಗಳು ಆದ ಭಾಲ್ಕಿ ಮಠ ಇಂದು ಲಿಂಗಾಯತ ಧರ್ಮ ಮತ್ತು ಬಸವ ತತ್ವ ಸಿದ್ದಾಂತ ಹಾಳು ಸ್ವಾರ್ಥಕ್ಕಾಗಿ ಮಾಡುತ್ತಿದೆ. ಈ ಪದ್ದತಿಯನ್ನು ಅನುಸರಿಸಿದರೆ ಮುಂದಿನ ದಿನಗಳಲ್ಲಿ ಬೀದಿಗಿಳಿದು ಪಟ್ಟದ್ದೆವರ ವಿರುದ್ಧ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಶಿವರಾಜ ಪಾಟೀಲ್ ಅತಿವಾಳ ಎಚ್ಚರಿಕೆ ನೀಡಿದರು. 

     ಶೋಧವಾಣಿಯೊಂದಿಗೆ ಮಾತನಾಡಿದ ಪಾಟೀಲ್, “ಬಸವಣ್ಣನವರ ಸಂಸ್ಕೃತಿಯನ್ನು ಬಿಟ್ಟು, ಆರಎಸ್‌ಎಸ್ ಸಂಸ್ಕೃತಿಯನ್ನು ತಮ್ಮ ಮಠದಲ್ಲಿ ಅಳವಡಿಸಿಕೊಂಡು, ಲಿಂಗಾಯತ ಧರ್ಮದ ತತ್ವಗಳನ್ನು ಗಾಳಿಗೆ ತೂರುತ್ತಿರುವ ಬಸವಲಿಂಗ ಪಟ್ಟದ್ದೆವರು ಸಮಾಜಕ್ಕೆ ದ್ರೋಹ ಮಾಡುತ್ತಿದ್ದಾರೆ. ಇಂತಹ ವ್ಯಕ್ತಿಯು ಲಿಂಗಾಯತ ಸಮುದಾಯದ ಕ್ಷೇಮವನ್ನು ನೋಡಲು ಸಾಧ್ಯವಿಲ್ಲ” ಎಂದು ಕಿಡಿಕಾರಿದರು. ಲಿಂಗಾಯತ ಸ್ವತಂತ್ರ ಧರ್ಮದ ಹೋರಾಟದಲ್ಲಿಯೂ ಭಾಗವಹಿಸಲು ಹಿಂದೇಟು ಹಾಕಿದರು, ಬೀದರ ಹೋರಾಟದಲ್ಲಿ ಮುಂಚೂಣಿಯಲ್ಲಿ ಇರಬೇಕಾದ ಇವರು ಭಾಲ್ಕಿಯ ತಮ್ಮ ಮಠದಲ್ಲಿ ಪ್ರಚಾರ ಸಭೆ ಇಟ್ಟುಕೊಂಡು ತಾವಿಬ್ಬರೂ ಗುರು ಶಿಷ್ಯ ತಮ್ಮ ಮಠದಲ್ಲಿಯೇ ಇರಲಿಲ್ಲ ಗೈರಾದರು, ಇದು ಇವರ ಇಬ್ಬಂಗಿ ತನ ,ಹೀಗಾಗಿ ಅವರ ಮುಖವಾಡವನ್ನು ಸಮಾಜದ ಮುಂದೆ ಕಳಚಿ ಬಿದ್ದಿದೆ ಎಂದು ಶಿವರಾಜ ಪಾಟೀಲ್ ಅತಿವಾಳ ಪಟ್ಟದ್ದೆವರ ವಿರುದ್ಧ ಹರಿಹಾಯಿದರು. 

“ಒಕ್ಕೂಟದ ಉದ್ದೇಶವನ್ನು ಮರೆತು, ವ್ಯಕ್ತಿಗತ ಲಾಭದ ಕಡೆಗೆ ಗಮನ ಹರಿಸುವ ಈ ನಡೆ ಅಸ್ಥಿರತೆಯನ್ನು ಉಂಟುಮಾಡುತ್ತದೆ. ಲಿಂಗಾಯತ ಧರ್ಮದ ಹಿತವನ್ನು ಕಾಯುವುದಾದರೆ, ಅವರು ತಕ್ಷಣ ರಾಜೀನಾಮೆ ನೀಡಿ ತಮ್ಮ ಗೌರವ ಉಳಿಸಿಕೊಳ್ಳಬೇಕು” ಎಂದು ಪಾಟೀಲ್ ಒತ್ತಾಯಿಸಿದರು.

ಈ ಬೆಳವಣಿಗೆಯ ಹಿನ್ನೆಲೆ ಲಿಂಗಾಯತ ಸಮುದಾಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಮಠಾಧೀಶರ ಒಕ್ಕೂಟದ ಮುಂದಿನ ನಡೆಯ ಬಗ್ಗೆ ಕುತೂಹಲ ಮೂಡಿಸಿದೆ. ಶೀಘ್ರವೇ ಈ ಬಗ್ಗೆ ಮಹತ್ವದ ತೀರ್ಮಾನ ಕೈಗೊಳ್ಳುವ ಸಾಧ್ಯತೆಯಿದೆ. ಈ ನಿಟ್ಟಿನಲ್ಲಿ ಪೂಜ್ಯ ಡಾ ಬಸವಲಿಂಗ ಪಟ್ಟದ್ದೆವರು ಕೂಡಲೇ ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಎಲ್ಲಾ ಲಿಂಗಾಯತ ಮುಖಂಡರು ಆಗ್ರಹಿಸುತ್ತಿರುವುದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ ಸಂದೇಶಗಳನ್ನು. ಪಟ್ಟದ್ದೆವರ ನಿಲುವು ಕಾದು ನೋಡೋಣ..

Thursday, 6 February 2025

ಪೂಜ್ಯ ಗಂಗಾ0ಬಿಕೆಯ ವಚನವಿಜಯೋತ್ಸವಕ್ಕೆ ಧಿಕ್ಕಾರ : ಬಸವಣ್ಣನವರ ಹೆಸರಿಗೆ ಕಳಂಕ: ಶಿವರಾಜ ಪಾಟೀಲ್ ಅತಿವಾಳ ಎಚ್ಚರಿಕೆ

ಬೀದರ : ಇತ್ತಿಚೆಗೆ ಕಲಬುರಗಿಯಲ್ಲಿ ಆಯೋಜಿಸಿದ ಬಹುತ್ವ ಭಾರತ ಸಮಾವೇಶದಲ್ಲಿ ಒಂದು ಮಾತನಾಡಿ ಇಂದು ನುಡಿದಂತೆ ನಡೆಯದ ಪೂಜ್ಯರು ಮೊದಲು ತಾವು ಬಸವಣ್ಣನವರು ಕೊಟ್ಟ ವಚನವನ್ನು ಪಾಲಿಸಲಿ ಆ ಮೇಲೆ ಸಮಾಜಕ್ಕೆ ಮಾರ್ಗದರ್ಶನ ನೀಡಲಿ ಎಂದು ಲಿಂಗಾಯತ ಧರ್ಮದ ತತ್ವ ಸಿದ್ಧಾಂತಗಳಿಗೆ ವಿರುದ್ಧವಾಗಿ ನಡೆಯುತ್ತಿರುವ ಪೂಜ್ಯ ಗಂಗಾ0ಬಿಕೆಯ ವಚನ ವಿಜಯೋತ್ಸವವನ್ನು ತೀವ್ರವಾಗಿ ಖಂಡಿಸಿರುವ ಹಿರಿಯ ಲಿಂಗಾಯತ ನಾಯಕ ಅಖಿಲ ಭಾರತ ಲಿಂಗಾಯತ ಮಹಾಸಭಾದ ರಾಷ್ಟಿçಯ ಉಪಾಧ್ಯಕ್ಷ ಶಿವರಾಜ ಪಾಟೀಲ್ ಅತಿವಾಳ ಈ ಕಾರ್ಯಕ್ರಮ ಲಿಂಗಾಯತ ಧರ್ಮದ ಮೌಲ್ಯಗಳಿಗೆ ಧಕ್ಕೆ ತರುತ್ತದೆ ಒಳಗೊಳಗೆ ರಾಷ್ಟಿçಯ ಸ್ವಯಂ ಸೇವಕರ ಧ್ಯೇಯೋಧ್ಯೆಶ್ಯ ಇಟ್ಟುಕೊಂಡು ಬಸವಣ್ಣನವರ ಹೆಸರಿನಲ್ಲಿ ವ್ಯವಹಾರ ಮಾಡುತ್ತಿದ್ದಾರೆ ಸಮಾಜವು ತೀವೃವಾಗಿ ಖಂಡಿಸುತ್ತದೆ ಎಂದು ಶಿವರಾಜ ಪಾಟೀಲ ಕಿಡಿಕಾರಿದ್ದಾರೆ.

    ಅವರು ಇಂದು ಶೋಧವಾಣಿಯೊಂದಿಗೆ ಮಾತನಾಡಿದ ಪಾಟೀಲ್, “ಬಸವಣ್ಣನವರ ತತ್ವಗಳು ಸಮಾನತೆ, ಸತ್ಯ ಮತ್ತು ಧರ್ಮನಿಷ್ಠೆಯ ಮೇಲೆ ಆಧಾರಿತವಾಗಿವೆ. ಆದರೆ, ಗಂಗಾAಬಿಕೆಯ ಈ ನಡೆ ಲಿಂಗಾಯತ ಸಮಾಜವನ್ನು ತಪ್ಪು ದಾರಿಗೆ ತಳ್ಳುವ ಪ್ರಯತ್ನವಾಗಿದೆ. ಇದು ಧರ್ಮದ ಮೂಲಭೂತ ತತ್ವಗಳಿಗೆ ವಿರುದ್ಧವಾಗಿದ್ದು, ಸ್ವಾರ್ಥ ಮತ್ತು ರಾಜಕೀಯ ಉದ್ದೇಶ ಹೊಂದಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

“ಗಂಗಾAಬಿಕೆ ಬಸವಣ್ಣನವರ ಹೆಸರಿಗೆ ಕಳಂಕ ತರುತ್ತಿರುವ ಈ ಕೆಲಸವನ್ನು ತಕ್ಷಣವೇ ನಿಲ್ಲಿಸಬೇಕು. ಲಿಂಗಾಯತ ಧರ್ಮದ ಶುದ್ಧತೆಯನ್ನು ಕಾಪಾಡಲು, ಸಮಾಜದ ಎಲ್ಲರೂ ಈ ರೀತಿಯ ದೋಷಯುಕ್ತ ಕಾರ್ಯಕ್ರಮಗಳನ್ನು ಖಂಡಿಸಬೇಕು” ಇತ್ತಿಚಿಗೆ ಭಾರತೀಯ ಉತ್ಸವ ರಥಕ್ಕೆ ಪೂಜೆ ಮಾಡಿ ಬೀದರನಲ್ಲಿ ಆರ್‌ಎಸ್‌ಎಸ್ ಪ್ರಾಯೋಜಿತ ಕಾರ್ಯಕ್ರಮಕ್ಕೆ ಚಾಲನೇ ನೀಡಿದು ಇವರ ನಡೆಯನ್ನು ಸಂದೇಹಕ್ಕೆ ಎಡೆ ಮಾಡಿಕೊಟ್ಟಿದೆ, ಹೀಗಾಗಿ ಮುಂದಿನ ದಿನಗಳಲ್ಲಿ ನಡೆಯುವ ವಚನ ವಿಜಯೋತ್ಸವಕ್ಕೆ ಯಾರು ಸಹಕಾರ ನೀಡದೆ ಲಿಂಗಾಯತ ಸಮಾಜದ ಬಾಂಧವರು ವಿರೋಧಿಸಿ ಧಿಕ್ಕರಿಸಬೇಕು ಎಂದು ಅವರು ಕರೆ ನೀಡಿದರು.

ಇದೇ ತಿಂಗಳ ೧೦ ಮತ್ತು ೧೧, ೧೨ ರಂದು ಬೀದರ್ ಜಿಲ್ಲೆಯಲ್ಲಿ ಬಸವಗಿರಿಯಲ್ಲಿ ನಡೆಯಲಿರುವ ವಚನ ವಿಜಯೋತ್ಸವಕ್ಕೆ ಯಾವುದೇ ವ್ಯಕ್ತಿಗಳು ಅಥವಾ ಸಂಘಟನೆಗಳು ಸಹಕರಿಸಬಾರದು ಎಂದು ಮನವಿ ಮಾಡಿರುವ ಪಾಟೀಲ್, “ಲಿಂಗಾಯತ ಧರ್ಮದ ಶುದ್ಧತೆ ಉಳಿಯಬೇಕಾದರೆ, ಈ ಕಾರ್ಯಕ್ರಮವನ್ನು ಬಹಿಷ್ಕರಿಸಬೇಕು” ಎಂದು ಒತ್ತಾಯಿಸಿದರು.

ಹಾಗೇ ಗಂಗಾAಬಿಕೆ ಅವರಿಗೆ ಸಹಕರಿಸುತ್ತಿರುವ ದುಷ್ಟ ಶಕ್ತಿಗಳಿಗೆ ಮುಂದಿನ ದಿನಗಳಲ್ಲಿ ಬುದ್ಧಿ ಕಲಿಸಲಾಗುವುದು ಎಂದು ತೀವ್ರ ಎಚ್ಚರಿಕೆ ನೀಡಿದ ಶಿವರಾಜ ಪಾಟೀಲ್, “ಲಿಂಗಾಯತ ಧರ್ಮದ ವಿರುದ್ಧ ನಡೆಯುವ ಪ್ರತಿಯೊಂದು ಚಟುವಟಿಕೆಗೆ ತಕ್ಕ ಪ್ರತಿರೋಧ ನೀಡಲಾಗುವುದು” ಎಂದು ತಿಳಿಸಿದ್ದಾರೆ.

ಬಸವಣ್ಣನ ದ್ರೋಹಿಗಳು

ಬಹುತ್ವ ಸಂಸ್ಕೃತಿ ಸಮಾವೇಶದಲ್ಲಿ ಕಲಬುರ್ಗಿಯಲ್ಲಿ ಭಾಗವಹಿಸಿ ಮಾತನಾಡಿ ಸೇಡಂ ಅವರ ಆರೆಸಸ್ ಪ್ರೋತ್ಸಾಹಿತಾ ಭಾರತೀಯ ಸಂಸ್ಕೃತಿ ಉತ್ಸವಕ್ಕೆ ಯಾರು ಹೋಗಬಾರದು ಎಂದು ೧೯ ನೇ ಜನವರಿ ಭಾಷಣ ಮಾಡಿ ಮರು ದಿವಸ ೨೦ ನೇ ಜನವರಿ ಬೀದರದಲ್ಲಿ ಭಾರತೀಯ ಸಂಸ್ಕೃತಿ ಉತ್ಸವ ವಾಹನಕ್ಕೆ ಪೂಜೆ ಮಾಡಿ ಚಾಲನೆ ಕೊಟ್ಟು ಬಸವ ತತ್ವ ಸಿದ್ದಾಂತಕ್ಕೆ ದ್ರೋಹ ಬಗೆದಿದ್ದಾರೆ. ಅದು ಸಾಕಾಗಿಲ್ಲ ಎಂದು ಮತ್ತೆ ಸೇಡಂ ನಗರದಲ್ಲಿ ಹಮ್ಮಿಕೊಂಡಿದ್ದ ಆರೆಸಸ್ ಪ್ರಾಯೋಜಿತ ಭಾರತೀಯ ಸಂಸ್ಕೃತಿ ಉತ್ಸವ ಸಾನಿಧ್ಯ ವಹಿಸಿದ್ದರು. ಅದೇ ಉತ್ಸವದಲ್ಲಿ ಡಾ ಎಂಎ ಕಲ್ಬುರ್ಗಿ ಹತ್ಯ ಮಾಡಿದ್ದವರು ಕೂಡ ವೇದಿಕೆ ಮೇಲೆ ಉಪಸ್ಥಿತರಿದ್ದರು ಎಂದು ಸುದ್ದಿ ಇದೆ. ಇಂತಹ ಮನಸ್ಥಿತಿ ಅಕ್ಕಂದಿರು ಯಾವ ಮುಖ ಇಟ್ಟುಕೊಂಡು ವಚನ ವಿಜಯೋತ್ಸವ ಆಚರಿಸುತ್ತಾರೆ ಅನ್ನೋದು ಸೋಜಿಗ. ಇಂತಹ ಬಹುಮುಖಿ ನಾಟಕ ಆಡಿ ಲಿಂಗಾಯತರಿAದ ದೇಣಿಗೆ ಪಡೆದು ಬಸವ ದ್ರೋಹ ಮಾಡುತ್ತಿದ್ದಾರೆ. ಇವರ ಮಾತು ಯಾರು ಕೇಳುತ್ತಿಲ್ಲ, ಅದಕ್ಕೆ ಆರೆಸಸ್ ಪ್ರಾಯೋಜಿತ ಸೇಡಂ ಉತ್ಸವಕ್ಕೆ ಲಿಂಗಾಯತರು ಬೆಂಬಲ ಕೊಟ್ಟಿಲ್ಲ, ಅದನ್ನು ಸಂಪೂರ್ಣ ವಿಫಲ ಆಗಿದೆ ಸನ್ಮಾನ್ಯ ಶೋಭಾ ಕರಂದ್ಲಾಜೆ ಅವರು ವ್ಯಥೆ  ಪಟ್ಟಿದ್ದಾರೆ. ಆರೆಸಸ್ ಕುತಂತ್ರಕ್ಕೆ ಲಿಂಗಾಯತರು ತಕ್ಕ ಉತ್ತರ ಕೊಟ್ಟಿದ್ದಾರೆ. ಅದೇ ರೀತಿ ಮೋಸದ ವಚನ ವಿಜಯೋತ್ಸವ ಆಚರಿಸುತ್ತಿರುವ ಕುತಂತ್ರಿ ಗಂಗಾ0ಬಿಕೆ ಅವರಿಗೆ ಮುಖವಾಡ ಕಳಚಿ ಬೀದರ ಲಿಂಗಾಯತರು ಬುದ್ಧಿ ಕಲಿಸುತ್ತಾರೆ .

ಇದೇ ಸಂದರ್ಭದಲ್ಲಿ, ಈ ವಚನ ವಿಜಯೋತ್ಸವದಲ್ಲಿ ಯಾವುದೇ ಶಿಕ್ಷಣ ಸಂಸ್ಥೆಗಳು ಭಾಗವಹಿಸಬಾರದು. ವಿದ್ಯಾರ್ಥಿಗಳಿಗೆ ಭಾಗವಹಿಸಲು ಅವಕಾಶ ನೀಡಬಾರದು ಎಂದು ಪಾಟೀಲ್ ಒತ್ತಾಯಿಸಿದ್ದು, ಶಿಕ್ಷಣ ಇಲಾಖೆಯ ಡಿಡಿಪಿಐ, ಆಯುಕ್ತರು ತಕ್ಷಣವೇ ಈ ಕುರಿತಾದ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ. ಮತ್ತು ಶುಕ್ರವಾರ ಜಿಲ್ಲಾಧಿಕಾರಿಗಳಿಗೆ ಖುದ್ದು ಭೇಟಿಯಾಗಿ ಮಕ್ಕಳ ಶಿಕ್ಷಣಕ್ಕೆ ಇಂಥಹ ಸಮಾರಂಭಗಳು ಬೀದರನಲ್ಲಿ ಬಳಸಿಕೊ ಳ್ಳುತ್ತಿರುವುದು  ಹಾಗೂ ಮಕ್ಕಳಿಗೆ ಪರೀಕ್ಷೆ ಸಮೀಪಿಸುತ್ತಿರುವ ಹಿನ್ನಲೆಯಲ್ಲಿ ಕಠಿಣ ಕ್ರಮಕೈಗೊಳ್ಳಬೇಕು ಎಂದು ಮನವಿ ಮಾಡಲಾಗುತ್ತದೆ ಎಂದು ಶಿವರಾಜ ಪಾಟೀಲ ತಿಳಿಸಿದರು. ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಲಿಂಗಾಯತ ಸಮುದಾಯದಲ್ಲಿ ತೀವ್ರ ಚರ್ಚೆ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಲಿಂಗಾಯತ ಮುಖಂಡರು ಸಭೆ ಸೇರಿ ಮಹತ್ವದ ತೀರ್ಮಾನ ಕೈಗೊಳ್ಳುವ ನಿರೀಕ್ಷೆ ಇದೆ. ಬಸವಣ್ಣನವರು ಯಾವ ಸಂಘಟನೆ ವಿರೋಧ ಮಾಡುತ್ತ ಬಂದಿದ್ದೇಯೋ ಆ ಸಂಘಟನೆಯ ಪರವಾಗಿ ಇಂದು ಅನೇಕ ಮಠಾಧೀಶರು ಕಾರ್ಯ ಮಾಡುತ್ತಿದು ಇದು ನಿಲ್ಲಬೇಕು ಎಂದು ಪರೋಕ್ಷವಾಗಿ ಬಸವಣ್ಣನವರ ತತ್ವ ಸಿದ್ದಾಂತವು ವಿರೋಧಿಸುತ್ತಿರುವವರಿಗೆ ಎಚ್ಚರಿಕೆ ನೀಡಿದರು. ಮುಂದಿನ ದಿನಗಳಲ್ಲಿ ಬೃಹತ ಪ್ರತಿಭಟನೆ ಮಾಡಲಾಗುತ್ತದೆ ಎಂದು ತಿಳಿಸಿದರು. ಬಸವಂತರಾವ ಬಿರಾದಾರ. ರವಿಕುಮಾರ ಹಾಜರಿದರು.

ಗ್ಯಾರಂಟಿ ಯೋಜನೆಗಳು ಮಹಿಳೆಯರ ಹಾಗೂ ಯುವ ಜನರ ಅಭಿವೃದ್ಧಿಗೆ ಸಹಕಾರಿ - ಎಸ್.ಆರ್.ಮೆಹರೋಜ್ ಖಾನ್

 ಕೊಪ್ಪಳ  : ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಮಹಿಳೆಯರ ಹಾಗೂ ಯುವ ಜನರ ಅಭಿವೃದ್ಧಿಗೆ ಬಹಳಷ್ಟು ಸಹಕರಿಯಾಗಿವೆ ಎಂದು ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರಾದ ಎಸ್.ಆರ್.ಮೆಹರೋಜ್ ಖಾನ್ ಹೇಳಿದರು.

ಅವರು ಬುಧವಾರ ಕುಷ್ಟಗಿ ತಾಲ್ಲೂಕಿನ ಹಿರೇಮನ್ನಾಪುರ ಗ್ರಾ.ಪಂ ವ್ಯಾಪ್ತಿಯ ಹಂಚಿನಾಳ ಗ್ರಾಮದ ಗ್ರಾಮಸ್ಥರೊಂದಿಗೆ ಗೃಹಲಕ್ಷ್ಮಿ ಯೋಜನೆ ಸೇರಿ ಪಂಚ ಗ್ಯಾರಂಟಿ ಯೋಜನೆಗಳ ಸಂಬಂಧ ಮುಕ್ತವಾಗಿ ಚರ್ಚೆ ನಡೆಸಿ ಮಾತನಾಡಿದರು.
ಪಂಚ ಗ್ಯಾರಂಟಿ ಯೋಜನೆಗಳನ್ನು ವಿಶೇಷವಾಗಿ ನಮ್ಮ ರಾಜ್ಯದ ಮಹಿಳೆಯರ ಸಬಲೀಕರಣಕ್ಕಾಗಿಯೇ ಅನುಷ್ಠಾನ ಮಾಡಿದೆ. ಪ್ರಮುಖವಾಗಿ ಅನ್ನ ಭಾಗ್ಯ ಯೋಜನೆಯಲ್ಲಿ 5ಕೆಜಿ ಅಕ್ಕಿ ಜತೆಗೆ 170ಹಣವನ್ನ ಕುಟುಂಬದ ಮುಖ್ಯಸ್ಥರ ಖಾತೆಗೆ ಜಮಾ ಮಾಡಿದೆ. ಅಂಬೇಡ್ಕರ್ ಮತ್ತು ಮಹಾತ್ಮಾ ಗಾಂಧೀಜಿಯವರ ಕನಸಿನನಂತೆ ದೇಶದ ಅಭಿವೃದ್ಧಿ ಯಾಗಬೇಕಾದರೆ, ಆ ದೇಶದ ಮಹಿಳೆಯರು ಮತ್ತು ಯುವಕರ ಸಬಲೀಕಾರಣದಿಂದ ಮಾತ್ರ ಸಾಧ್ಯವಾಗಿದೆ. ಈ ಹಿನ್ನೆಲೆಯಲ್ಲಿ ನಮ್ಮ ಸರ್ಕಾರ ಗೃಹಲಕ್ಷ್ಮಿ, ಶಕ್ತಿ, ಗೃಹಜ್ಯೋತಿ, ಅನ್ನಭಾಗ್ಯ ಹಾಗೂ ಯುವನಿಧಿ ಯೋಜನೆಗಳನ್ನು ಜಾರಿಗೆ ತಂದಿದೆ ಎಂದರು.
ಗೃಹಲಕ್ಷ್ಮಿ ಹಣ ಮಹಿಳೆಯರಿಗೆ ತಮ್ಮ ಮನೆಯನ್ನು ನಿಭಾಯಿಸಲು ಬಹಳಷ್ಟು ಉಪಯುಕ್ತವಾಗಿದ್ದು, ಈ ಯೋಜನೆಯ ಹಣವನ್ನು ಉಳಿತಾಯ ಮಾಡಿಕೊಂಡು ಸ್ವಯಂ ಉದ್ಯೋಗ ಮಾಡುವ ಕೊಪ್ಪಳ ಜಿಲ್ಲೆಯ ಮಹಿಳೆಯರ ಆಸಕ್ತಿಯು ತುಂಬಾ ಹೆಮ್ಮೆಯಾಗಿದೆ. ನಮ್ಮ ರಾಜ್ಯದಲ್ಲಿ ಶೇ.12 ರಷ್ಟು ಸ್ವಯಂ ಉದ್ಯೋಗ ಹೆಚ್ಚಾಗಿದ್ದು, ಕೆಲವರು ಬಟ್ಟೆ ಅಂಗಡಿ, ಜೆರಾಕ್ಸ್ ಸೆಂಟರ್, ಹೀಗೆ ಹಲವಾರು ಸ್ವಯಂ ಉದ್ಯೋಗವನ್ನ ಮಾಡುತ್ತಿದ್ದಾರೆ. ಇದರಿಂದ ಜನರಿಗೂ ಅನುಕೂಲವಾಗುತ್ತಿದೆ. ಇದರ ಜೊತೆಗೆ ಯಾರಿಗೆ ಯೋಜನೆಯ ಉಪಯೋಗ ದೊರೆಯುತ್ತಿಲ್ಲ, ಅವರಿಗೂ ಈ ಯೋಜನೆಗಳ ಅನುಕೂಲವಾಗುವಂತೆ ಮಾಡಬೇಕು ಎಂದು ಹೇಳಿದರು.
ಹಂಚಿನಾಳ ಗ್ರಾಮದ ಮುದುಕಮ್ಮ ಮೌಲಪ್ಪ ಮಾದರ್ ಎಂಬ ಮಹಿಳೆಯು ಗೃಹಲಕ್ಷ್ಮಿ ಹಣದಿಂದ ಒಂದು ಹಸು ಪಡೆದು, ಹಾಲನ್ನು ಮಾರಿ, ಪ್ರತಿ ತಿಂಗಳಿಗೆ 9 ಸಾವಿರ ದುಡಿಯುತ್ತಿದ್ದಾರೆ. ಇದರ ಜೊತೆಗೆ ಗೃಹಲಕ್ಷ್ಮಿಯ 2 ಸಾವಿರ ಸೇರಿ ಒಂದು ತಿಂಗಳಿಗೆ 10 ರಿಂದ 12 ಸಾವಿರ ಹಣ ಸಂಪಾದಿಸುತಿದ್ದಾರೆ. ಹಾಗೆ ಗಂಗಮ್ಮ ದೊಡ್ಡಯ್ಯ ಹಿರೇಮಠ್ ರವರು, ಗೃಹಲಕ್ಷ್ಮಿ ಹಣದಿಂದ ಹೊಸದಾಗಿ ಬಟ್ಟೆ ಅಂಗಡಿಯನ್ನ ತೆಗೆದು ಸ್ವಯಂ ಉದ್ಯೋಗವನ್ನು ಪ್ರಾರಂಭ ಮಾಡಿರುವುದು ತುಂಬಾ ಸಂತೋಷವಾಗಿದೆ. ಶಕ್ತಿ ಯೋಜನೆಯನ್ನ ಉಪಯೋಗಿಸಿಕೊಂಡು ಮಹಿಳೆಯರು, ವಿವಿಧ ದೇವಸ್ಥಾನಗಳ ವೀಕ್ಷಣೆಗೆ ತೆರಳುತ್ತಿದ್ದಾರೆ. ಇದರಿಂದ ಸಣ್ಣ ಸಣ್ಣ ವ್ಯಾಪಾರವು ಆಗುತ್ತದೆ. ಚಿಕ್ಕ ವ್ಯಾಪಾರದಿಂದ ಹೆಚ್ಚಿನ ಜಿಎಸ್ಟಿ ಸಂಗ್ರಹಣೆಯಾಗುತ್ತಿದೆ. ಸರ್ಕಾರದ ಯೋಜನೆಗಳನ್ನು ಬಳಸಿಕೊಂಡು ಯಾವಾಗ ಮಹಿಳೆಯರು ಸ್ವಯಂ ಅಭಿವೃದ್ಧಿಯಾಗುತಾರೆ, ಅವಾಗ ಹಳ್ಳಿ, ರಾಜ್ಯ, ದೇಶದ ಅಭಿವೃದ್ಧಿಯಾಗುತ್ತದೆ. ವಿಷೇಶವಾಗಿ ಯುವಕರು, ಮಹಿಳೆಯರು ಯಾವಾಗ ಸ್ವಯಂ ಉದ್ಯೋಗವಂತರಗುತ್ತಾರೆ, ಅವಾಗ ದೇಶದ ಅಭಿವೃದ್ಧಿ ಸಾಧ್ಯ ಎಂದರು.
ಕೊಪ್ಪಳ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ರೆಡ್ಡಿ ಅವರು ಮಾತನಾಡಿ, ಸಮಾಜದ ಕಟ್ಟಕಡೆ ವ್ಯಕ್ತಿಗೂ ಆರ್ಥಿಕ ಸಬಲೀಕರಣಕ್ಕೆ ತುಂಬಾ ಸಹಕಾರಿಯಾಗಿರುವ ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನವಾಗಬೇಕು. ಅರ್ಹ ಫಲಾನುಭವಿಗಳಿಗೆ ಯೋಜನೆಗಳು ತಲುಪುತ್ತಿವೆಯೇ, ಅಧಿಕಾರಿಗಳು ಸರಿಯಾಗಿ ಸ್ಪಂದಿಸುತ್ತಿದ್ದಾರೆಯೇ ಎಂಬುದರ ಬಗ್ಗೆ ಪರಿಶೀಲಿಸಲು ಈ ಸಂವಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಗೃಹಲಕ್ಷ್ಮಿ ಹಣದಿಂದ ಹಸು ತಂದು ಹೈನುಗಾರಿಕೆ ಪ್ರಾರಂಭಿಸಿರುವುದು, ಬಟ್ಟೆ ಅಂಗಡಿ ತೆರೆದಿದ್ದು ಹಾಗೂ ಮಕ್ಕಳ ಶಿಕ್ಷಣಕ್ಕೆ‌ ಬಳಕೆ ಮಾಡಿರುವುದು ಮತ್ತು ಶಕ್ತಿ ಯೋಜನೆಯಡಿ ಉಚಿತ ಬಸ್ ಪ್ರಯಾಣದ ಮೂಲಕ ವಿವಿಧ ದೇವಸ್ಥಾನಗಳು ಹಾಗೂ ಪ್ರವಾಸಿ ತಾಣಗಳನ್ನು ನೋಡೊರುವ ಬಗ್ಗೆ ಮಹಿಳಾ ಫಲಾನುಭವಿಗಳು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.
ಗೃಹಲಕ್ಷ್ಮಿ ಹಣದಿಂದ ಫಲಾನುಭವಿ ಆರಂಭಿಸಿರುವ ಬಟ್ಟೆ ಅಂಗಡಿಗೆ ಭೇಟಿ: ಹಂಚಿನಾಳ ಗ್ರಾಮದ ಗಂಗಮ್ಮ ದೊಡ್ಡಯ್ಯ ಹಿರೇಮಠ ಎಂಬುವವರು ಗೃಹಲಕ್ಷ್ಮಿ ಯೋಜನೆಯ ಹಣದಿಂದ ತಮ್ಮ ಮನೆಯಲ್ಲೇ ಆರಂಭಿಸಿರುವ ಬಟ್ಟೆ ಅಂಗಡಿಗೆ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರಾದ ಎಸ್.ಆರ್.ಮೆಹರೋಜ್ ಖಾನ್ ಅವರು ಭೇಟಿ ನೀಡಿ, ಅಂಗಡಿಯನ್ನು ನೋಡಿ ಸಂತಸ ವ್ಯಕ್ತಪಡಿಸಿದರು. ಬಳಿಕ ಬಟ್ಟೆ ಖರೀದಿಸಿ ಪ್ರೋತ್ಸಾಹಿಸಿದರು.
ಈ ಸಂದರ್ಭದಲ್ಲಿ ಕೊಪ್ಪಳ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರಾದ ಮಂಜುನಾಥ ಗೊಂಡಬಾಳ, ನಾಗರಜ ಅರಳಿ ಹಾಗೂ ಅಮರೇಶ ಗಾಂಜಿ, ಕುಷ್ಟಗಿ ತಾಲ್ಲೂಕ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಫಾರೂಖ್ ದಲಾಯತ್, ಜಿಲ್ಲಾ ಸಮಿತಿ ಸದಸ್ಯರಾದ ಶಾರದಾ ಕಟ್ಟಿಮನಿ, ಕುಷ್ಟಗಿ ತಾ.ಪಂ ಇಓ ಪಂಪಾಪತಿ ಹಿರೇಮಠ ಸೇರಿದಂತೆ ತಾಲ್ಲೂಕು ಸಮಿತಿ ಸದಸ್ಯರು, ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು, ಫಲಾನುಭವಿಗಳು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

Monday, 27 January 2025

ವಿದ್ಯಾರ್ಥಿಗಳನ್ನು ಸಮಾಜದ ಉತ್ತಮ ಪ್ರಜೆಗಳನ್ನಾಗಿ ರೂಪಿಸುವುದು ಶಿಕ್ಷಕರ ಕರ್ತವ್ಯ–ಡಿ.ಕೆ.ಶಿವಕುಮಾರ

ಬೆಂಗಳೂರು :ವಿದ್ಯಾರ್ಥಿಗಳನ್ನು ಸಮಾಜದ ಉತ್ತಮ ಪ್ರಜೆಗಳನ್ನಾಗಿ ರೂಪಿಸುವುದು ಶಿಕ್ಷಕರ ಕರ್ತವ್ಯ. ಶಿಕ್ಷಣದ ಜೊತೆ ಜೊತೆಯಲ್ಲಿಯೇ ಸಮಾಜದಲ್ಲಿ ಹೇಗೆ ಬದುಕಬೇಕೆಂಬ ಮಾರ್ಗದರ್ಶನವನ್ನು ಶಿಕ್ಷಕರು ನೀಡಿ ವಿದ್ಯಾರ್ಥಿಗಳನ್ನು ಸತ್ಪ್ರಜೆಗಳನ್ನಾಗಿ ರೂಪಿಸಿಬೇಕು. ಅವರನ್ನು ದೇಶದ ಆಸ್ತಿಯನ್ನಾಗಿ ತಯಾರು ಮಾಡಬೇಕು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.


ಇಂದು ಸೆಂಟ್ರಲ್ ಕಾಲೇಜು ಕ್ಯಾಂಪಸ್‍ನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಕಾಲೇಜು ಶಿಕ್ಷಣ ಇಲಾಖೆಯ ವತಿಯಿಂದ ಹಮ್ಮಿಕೊಳ್ಳಲಾದ ನೂತನವಾಗಿ ನೇಮಕವಾಗಿರುವ ಸಹಾಯಕ ಪ್ರಾಧ್ಯಾಪಕರುಗಳಿಗೆ  “ಹೊಸ ಹಾದಿ” ಒಂದು ದಿನದ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಉಪ ಮುಖ್ಯಮಂತ್ರಿಗಳು ಶಿಕ್ಷಕರು ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯವನ್ನು ರೂಪಿಸಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ, ಮಾಧ್ಯಮಗಳು ಪ್ರಮುಖವಾದ ನಾಲ್ಕು ಅಂಗಗಳು.  ಅದೇ ರೀತಿ ಶಿಕ್ಷಕ, ರೈತ, ಸೈನಿಕ, ಕಾರ್ಮಿಕರು ಸಮಾಜದ ಅಂಗಗಳು ಎಂದು ಶ್ಲಾಘಿಸಿದರು.

ಶಿಕ್ಷಣ ಎಂದರೆ ಜ್ಞಾನ, ಕೌಶಲ್ಯ, ಬೋಧನೆ, ಸಂಶೋಧನೆಗಳ ಮೂಲಕ ಮುಂದಿನ ಪೀಳಿಗೆಗೆ ವರ್ಗಾಯಿಸುವ ವ್ಯವಸ್ಥೆ ಇದರಲ್ಲಿ ಕಲಿಕೆಯೂ ಒಂದು. ಇಂತಹ ಶಿಕ್ಷಣ ವೃತ್ತಿಯನ್ನು ಆಯ್ಕೆ ಮಾಡಿಕೊಂಡು ಹೆಚ್ಚಿನ ಸಂಖ್ಯೆಯಲ್ಲಿ ಪ್ರಾಧ್ಯಾಪಕರುಗಳಾಗಿರುವುದು ಹೆಮ್ಮೆಯ ವಿಷಯ. ನಮ್ಮ ರಾಜ್ಯದಲ್ಲಿ 200ಕ್ಕೂ ಹೆಚ್ಚು ಇಂಜಿನಿಯರ್ ಕಾಲೇಜು, 70 ಮೆಡಿಕಲ್ ಕಾಲೇಜುಗಳಿವೆ. ನಮ್ಮ ರಾಜ್ಯದಲ್ಲಿ ಶಿಕ್ಷಣವು ಉತ್ತಮ ಗುಣಮಟ್ಟದಿಂದ ಕೂಡಿದೆ. ನೆರೆ ರಾಜ್ಯಗಳಾದ ತಮಿಳುನಾಡು, ಕೇರಳದಲ್ಲೂ ಸಹ ಗುಣಮಟ್ಟದಿಂದಲೇ ಕೂಡಿದೆ. ಗ್ರಾಮೀಣ ಪ್ರದೇಶದ ಮಕ್ಕಳೂ ಕೂಡ ಇಂದು ಇಂಜಿನಿಯರ್, ಡಾಕ್ಟರ್ ಕೋರ್ಸ್‍ಗಳನ್ನು ಓದುತ್ತಿದ್ದಾರೆ ಹಾಗೂ ಐಎಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.

ಪ್ರಾಧ್ಯಾಪಕರುಗಳು ತಮ್ಮ ವಾಕ್‍ಚಾತುರ್ಯದ ಮೂಲಕ ವಿದ್ಯಾರ್ಥಿಗಳ ಗಮನ ಸೆಳೆದು ಅವರಿಗೆ ಜ್ಞಾನಾರ್ಜನೆಯನ್ನು ನೀಡಬೇಕು. ಅವರಲ್ಲಿ ಸಕಾರತ್ಮಾಕವಾಗಿ ಚಿಂತನೆ ಮಾಡುವ ಮನೋಭಾವ, ಆತ್ಮವಿಶ್ವಾಸ ತುಂಬಬೇಕು ಹಾಗೂ ನಮ್ಮ ಸಂಸ್ಕøತಿಯ ಬಗ್ಗೆ ಅರಿವು ಮೂಡಿಸಬೇಕು. ವಿದ್ಯಾರ್ಥಿಗಳು ಮುಂದೆ ಮಾಲೀಕರಾಗಿ ಬೇರೆಯವರಿಗೆ ಉದ್ಯೋಗವಕಾಶವನ್ನು ನೀಡುವಂತವರಾಗಬೇಕು ಎಂದು ಪ್ರಾಧ್ಯಾಪಕರಿಗೆ ಕಿವಿಮಾತು ಹೇಳಿದರು.

ನಾನು ಪದವೀಧರನಾದಾಗ ಆದ ಸಂತೋಷ ಕ್ಯಾಬಿನೇಟ್ ಮಂತ್ರಿಯಾದಾಗ, ಉಪಮುಖ್ಯಮಂತ್ರಿ ಆದಾಗ ನನಗೆ ದೊರಯಲಿಲ್ಲ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಶಿಕ್ಷಕರು ಸರ್ಕಾರದ ರಾಯಭಾರಿಗಳಾಗಬೇಕು ಎಂದು ತಿಳಿಸಿದರು.

ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ ಸುಧಾಕರ್ ಮಾತನಾಡಿ, ಇಲಾಖೆಯಲ್ಲಿ  ಸಹಾಯಕ ಪ್ರಾಧ್ಯಾಪಕರುಗಳಿಗೆ ನೇಮಕಾತಿ ಆದೇಶ ನೀಡುವವರೆಗೆ ಇದ್ದ ಸವಾಲುಗಳ ಕುರಿತು ವಿವರಿಸಿದರು. ನ್ಯಾಯಾಲಯದ ತಡೆಯಾಜ್ಞೆಯನ್ನು  ಶೀಘ್ರವಾಗಿ ಬಗೆಹರಿಸಿ ಪ್ರಾಧ್ಯಾಪಕರುಗಳಿಗೆ ನೇಮಕಾತಿ ಆದೇಶವನ್ನು ನೀಡಲಾಯಿತು ಎಂದು ತಿಳಿಸಿದರು.

ಉನ್ನತ ಶಿಕ್ಷಣ ಇಲಾಖೆಯು ಅಪ್ರೆಂಟಿಶಿಪ್ ಎಂಬೆಡೆಟ್ ಡಿಗ್ರಿ ಪ್ರೋಗ್ರಾಮ್ ಪ್ರಾರಂಭ ಮಾಡಿದೆ.  ಬಿಕಾಂ ಕೋರ್ಸ್‍ನ ಮೊದಲನೆ ಹಂತದಲ್ಲಿ ಪ್ರಾರಂಭ ಮಾಡಲಾಗಿದ್ದು, ರಾಜ್ಯದಲ್ಲಿ ಪ್ರಥಮ ಬಾರಿಗೆ 45 ಸರ್ಕಾರಿ ಪ್ರಥಮ ದರ್ಜೆ ಪಿಯು ಕಾಲೇಜುಗಳಲ್ಲಿ  ಅನುಷ್ಠಾನಕ್ಕೆ ತರಲಾಗಿದೆ. ಎರಡು ವರ್ಷ ಕಾಲೇಜಿನಲ್ಲಿ ವ್ಯಾಸಂಗ ಮಾಡಿ ನಂತರ 5 ಮತ್ತು 6ನೇ ಸೆಮಿಸ್ಟರ್‍ಗಳಲ್ಲಿ ಕಂಪೆನಿಗಳಲ್ಲಿ ನಿಯೋಜನೆ ಮಾಡಲಾಗುತ್ತದೆ. ಅವರಿಗೆ ಸ್ಟೈಫಂಡ್‍ಅನ್ನು ನೀಡಲಾಗುತ್ತದೆ. ಪದವಿ ಮುಗಿಯುವುದರೊಳಗೆ ವಿದ್ಯಾರ್ಥಿಗಳು ತಮಗೆ ಇಷ್ಟವಾದ ಕ್ಷೇತ್ರದಲ್ಲಿ ತರಬೇತಿ ಪಡೆದು ಮುಂದಿನ ಉದ್ಯೋಗವಕಾಶಕ್ಕೆ ಸನ್ನದ್ದನಾಗಿರುತ್ತಾನೆ. ಮುಂದಿನ ಶೈಕ್ಷಣಿಕ ವರ್ಷದಲ್ಲಿ 60 ಸರ್ಕಾರಿ ಕಾಲೇಜುಗಳಿಗೆ ವಿಸ್ತರಣೆ ಮಾಡುವ ಯೋಜನೆ ಇದೆ ಎಂದು ತಿಳಿಸಿದರು.

310 ಪ್ರಾಂಶುಪಾಲರ ನೇಮಕಾತಿ ಪ್ರಕ್ರಿಯೆಯು ಪ್ರಾರಂಭವಾಗಿದ್ದು, ಅಂತಿಮ ಹಂತದಲ್ಲಿ ತಾಂತ್ರಿಕ ಸಮಸ್ಯೆ ನಿವಾರಣೆಯನ್ನು ಮುಂದಿನ ತಿಂಗಳ ಅಂತ್ಯದೊಳಗೆ ಪೂರ್ಣ ಮಾಡುವ ಭರವಸೆ ನೀಡಿದರು. ಧಾರವಾಡದ ಉನ್ನತ ಶಿಕ್ಷಣ ಅಕಾಡೆಮಿಯ ಆಯುಕ್ತಾಲಯದಿಂದ 21 ದಿನಗಳ ಕಾಲ ಸಹಾಯಕ ಪ್ರಾಧ್ಯಾಪಕರುಗಳಿಗೆ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು. ಈ ತರಬೇತಿಯಲ್ಲಿ ಭಾಗವಹಿಸಿ  ಖಾಸಗಿ ಕ್ಷೇತ್ರದ ಸ್ಪರ್ಧೆಗೆ ತಾವುಗಳು ಸಕಲ ಸನ್ನದ್ದರಾಗಬೇಕು. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ತಮ್ಮ ಜ್ಞಾನರ್ಜನೆಯ ಲಾಭವಾಗಬೇಕು ಎಂದರು.

ಕೆಸೆಟ್ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲಾಗಿದೆ. 10 ವರ್ಷ ಶಿಕ್ಷಕನಾಗಿ ಕಾರ್ಯನಿರ್ವಹಿಸಿರುತ್ತೇನೆ. ಅನುಭವವಿದೆ. ಶಿಕ್ಷಕರ ಕಷ್ಟವೇನಿದೆ ಎಂದು ತಿಳಿದಿದೆ. ಕೌಶಲ್ಯ ತರಬೇತಿಗೆ ಹೆಚ್ಚು ಪ್ರಾಮುಖ್ಯತೆ ನೀಡಲಾಗುತ್ತಿದೆ. ಈ ನಿಟ್ಟಿನಲ್ಲಿ 2024 ರಲ್ಲಿ 6 ವಿಶ್ವವಿದ್ಯಾಲಯದ ಆಯ್ದ 30 ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರವಾಸ ಹಮ್ಮಿಕೊಳ್ಳಲಾಯಿತು. ಈಸ್ಟ್ ಲಂಡನ್ ಆಫ್ ಯೂನಿವರ್ಸಿಟಿಗೆ ಹೋಗಿ ಶೈಕ್ಷಣಿಕ ಜ್ಞಾನ ಪಡೆದಿದ್ದಾರೆ ಎಂದು ತಿಳಿಸಿದರು.

ಶಿಕ್ಷಣ ಕ್ಷೇತ್ರದಲ್ಲಿ ಸುಮಾರು 450 ರಿಂದ 500 ಮಂಜೂರಾದ ಹುದ್ದೆಗಳು ತುಂಬುವುದರ ಜೊತೆಗೆ ಹೊಸದಾಗಿ ಹುದ್ದೆಗಳನ್ನು ಮಂಜೂರು ಮಾಡಲು ಪ್ರಯತ್ನ ಮಾಡಲಾಗುತ್ತಿದೆ.  ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಹೊಸ ಹುದ್ದೆಯ ಸೃಷ್ಟಿಯ ಜೊತೆಗೆ ಹಳೆಯ ಹುದ್ದೆಗಳು ಭರ್ತಿ ಮಾಡುವ ಜವಾಬ್ದಾರಿ ಇದೆ ಎಂದರು.

ಹೊಸದಾಗಿ ನೇಮಕಾತಿ ಹೊಂದಿದ ಸಹಾಯಕ ಪ್ರಾಧ್ಯಾಪಕ ಚಲುವರಾಜು ಮಾತನಾಡಿ, ಕಾಯ ಅಳಿದರೂ ಕಾಯಕ ಉಳಿಯುತ್ತದೆ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಸಚಿವರು, ಇಲಾಖೆ ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪ್ರಕ್ರಿಯೆಯಲ್ಲಿ ಯಾವುದೇ ಭ್ರಷ್ಟಾಚಾರವೆಸಗದೆ  ನಮಗೆಲ್ಲ ನೇಮಕಾತಿ ಪತ್ರವನ್ನು ಮನೆಬಾಗಿಲಿಗೆ ತಲುಪಿಸಿದ್ದಾರೆ. ನೇಮಕಾತಿ ಪ್ರಕ್ರಿಯೆಯಲ್ಲಿ ಶ್ರಮಿಸಿದ ಎಲ್ಲರಿಗೂ ಧನ್ಯವಾದಗಳನ್ನು ಸಮರ್ಪಿಸಿದರು. ಮುಖ್ಯಮಂತ್ರಿಗಳ ಗ್ಯಾರಂಟಿ ಯೋಜನೆಯನ್ನು ಶ್ಲಾಘಿಸಿದರು.

ಹೊಸದಾಗಿ ನೇಮಕಾತಿ ಹೊಂದಿದ ಸಹಾಯಕ ಪ್ರಾಧ್ಯಾಪಕ ಶ್ರೀಮತಿ ನಾಗಲಕ್ಷ್ಮಿ ಜಿ. ಮಾತನಾಡಿ  ಸಹಾಯಕ ಪ್ರಾಧ್ಯಾಪಕ ಹುದ್ದೆಯ ನೇಮಕಾತಿ ಆದೇಶ ಪತ್ರವು ಸಿಗಬೇಕಾದರೆ ಸಮಸ್ಯೆ ಸವಾಲುಗಳನ್ನು ಎದುರಿಸಬೇಕಾಯಿತು. ನಮ್ಮ ಜೊತೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಸಚಿವರು ನ್ಯಾಯಾಲಯದ ತಡಯಾಜ್ಞೆಯನ್ನು ಶೀಘ್ರವಾಗಿ ಬಗೆಹರಿಸಿ, ಶೀಘ್ರವಾಗಿ ಪರಿಶೀಲನಾ ಕಾರ್ಯವನ್ನು ಮುಗಿಸಿ ನಮಗೆ ನೇವiಕಾತಿ ಪತ್ರವನ್ನು ನೀಡಿರುವುದು ಅಭಿನಂದನೀಯ ಎಂದು ತಿಳಿಸಿ, ಸರ್ಕಾರಕ್ಕೆ ಕೃತಜ್ಞತೆಗಳನ್ನು ಸಲ್ಲಿಸಿದರು.

ಕಾರ್ಯಕ್ರಮದಲ್ಲಿ  ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಆಯುಕ್ತರಾದ  ಕುಮಾರಿ ಮಂಜುಶ್ರೀ ಎನ್. ಅವರು ಸ್ವಾಗತ ಭಾಷಣ ಮಾಡಿದರು. ಕಾಲೇಜು ಶಿಕ್ಷಣ ಇಲಾಖೆಯ ಮುಖ್ಯ ಆಡಳಿತಾಧಿಕಾರಿ ಶ್ರೀಮತಿ ಶೋಭಾ ಅವರು ವಂದನಾರ್ಪಣೆ ಮಾಡಿದರು. ಕಾರ್ಯಕ್ರಮದಲ್ಲಿ ಉನ್ನತ ಶಿಕ್ಷಣ ಇಲಾಖೆಯ  ಪ್ರಧಾನ ಕಾರ್ಯದರ್ಶಿ ಶ್ರೀಕರ್, ಕಾಲೇಜು ಶಿಕ್ಷಣ ಇಲಾಖೆಯ ನಿರ್ದೇಶಕ ಪ್ರೊ. ಶೋಭಾ .ಜಿ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Sunday, 26 January 2025

ಸಂವಿಧಾನದ ಆಶಯಗಳನ್ನು ನೆಲೆಗೊಳಿಸಲು ಜಾರಿಗೊಳಿಸಿರುವ ಐದು ಗ್ಯಾರಂಟಿ ಯೋಜನೆಗಳು ದೇಶದ ಗಮನ ಸೆಳೆದಿವೆ-ರಾಜ್ಯಪಾಲ ಥಾವರ್‍ಚಂದ್ ಗೆಹ್ಲೋಟ್

 
ಬೆಂಗಳೂರು : ಕರ್ನಾಟಕ ಸರ್ಕಾರವು ಸಂವಿಧಾನದ ಆಶಯಗಳಿಗೆ ಅನುಗುಣವಾಗಿ, ಒಕ್ಕೂಟ ಸಿದ್ಧಾಂತಗಳ ರೀತಿ ರಿವಾಜುಗಳಿಗೆ ಬದ್ಧವಾಗಿ ದೇಶದ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಸಂವಿಧಾನದ ಮಹತ್ವದ ಆಶಯವಾದ ಸಾಮಾಜಿಕ, ಆರ್ಥಿಕ ನ್ಯಾಯ ನೆಲೆಗೊಳಿಸಲು ಶಕ್ತಿ ಮೀರಿ ರಾಜ್ಯ ಸರ್ಕಾರ ಶ್ರಮಿಸುತ್ತಿದೆ. ಐದು ಗ್ಯಾರಂಟಿ ಕಲ್ಯಾಣ ಯೋಜನೆಗಳು ಯಶಸ್ವಿಯಾಗಿ ಜಾರಿಗೊಂಡು ದೇಶದ ಗಮನ ಸೆಳೆದಿವೆ ಎಂದು ರಾಜ್ಯಪಾಲರಾದ ಥಾವರ್‍ಚಂದ್ ಗೆಹ್ಲೋಟ್ ಹೇಳಿದರು.

76 ನೇ ಗಣರಾಜ್ಯೋತ್ಸವ ಅಂಗವಾಗಿ ಫೀಲ್ಡ್ ಮಾರ್ಷಲ್ ಮಾಣಿಕ್μÁ ಪರೇಡ್ ಮೈದಾನದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ, ಗೌರವ ವಂದನೆ ಸ್ವೀಕರಿಸಿ ಮಾತನಾಡಿದರು.


76 ವರ್ಷಗಳ ಹಿಂದೆ ಇದೇ ದಿನದಂದು ಭಾರತೀಯರಾದ ನಾವು ನಮಗೆ ನಾವೇ ಅರ್ಪಿಸಿಕೊಂಡ ಸಂವಿಧಾನದ ಮೂಲಕ ಈ ದೇಶದಲ್ಲಿ ಸಾಮ್ರಾಜ್ಯಶಾಹಿ, ವಸಾಹತುಶಾಹಿ ಆಡಳಿತಕ್ಕೆ ಇತಿಶ್ರೀ ಹಾಡಿ ಜನಾಡಳಿತದ ಹೊಸ ಪರ್ವ ಪ್ರಾರಂಭಿಸಿದೆವು. ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ ನೇತೃತ್ವದಲ್ಲಿ ಸಂವಿಧಾನ ರಚಿಸಿದ ಎಲ್ಲ ಮಹನೀಯರನ್ನು ಸ್ಮರಿಸೋಣ ಎಂದರು.

ವಿವಿಧ ಗ್ಯಾರೆಂಟಿ ಯೋಜನೆಯಡಿ ಆರ್ಥಿಕ ನೆರವು :
ಗೃಹಲಕ್ಷ್ಮಿ ಯೋಜನೆಯಡಿ ಪ್ರತಿ ಕುಟುಂಬದ ಯಜಮಾನಿಗೆ ಮಾಸಿಕ 2 ಸಾವಿರ ರೂ.ಗಳಂತೆ 2023 ರ ಆಗಸ್ಟ್‍ನಿಂದ ಇಲ್ಲಿಯವರೆಗೆ ಒಟ್ಟು 35,180.20 ಕೋಟಿ ರೂ. ಆರ್ಥಿಕ ನೆರವು ನೀಡಲಾಗಿದೆ.
ಗೃಹಜ್ಯೋತಿ ಯೋಜನೆಯಡಿ 1.62 ಗ್ರಾಹಕರು ಪ್ರಯೋಜನ ಪಡೆಯುತ್ತಿದ್ದು ವಿದ್ಯುತ್ ಸರಬರಾಜು ಕಂಪನಿಗಳಿಗೆ 13,409 ಕೋಟಿ ರೂ.ಸಬ್ಸಿಡಿ ಮೊತ್ತ ನೀಡಲಾಗಿದೆ.

ಶಕ್ತಿ ಯೋಜನೆಯಡಿ ಮಹಿಳೆಯರ ಉಚಿತ ಪ್ರಯಾಣಕ್ಕಾಗಿ 9,051 ಕೋಟಿ ರೂ. ವಿನಿಯೋಗಿಸಲಾಗಿದೆ.
ಯುವನಿಧಿ ಯೋಜನೆಯಡಿ 2,18,214 ಜನ ನೋಂದಣಿ ಮಾಡಿಕೊಂಡಿದ್ದು ಈವರೆಗೆ 1,24,176 ಅರ್ಹರಿಗೆ ನೇರ ನಗದು ವರ್ಗಾವಣೆ ಮಾಡಲಾಗಿದೆ. ಯುವನಿಧಿ ಪ್ಲಸ್ ಉಪಕ್ರಮದಡಿ ಯುವಜನರ ಉದ್ಯೋಗ ಸಾಮಥ್ರ್ಯ ಹೆಚ್ಚಿಸಲು ಕೌಶಲ್ಯಾಭಿವೃದ್ಧಿ ತರಬೇತಿ ನೀಡಲಾಗುವುದು ಎಂದರು.

ಜನರ ಹಸಿವನ್ನು ನೀಗಿಸುವ ಅನ್ನಭಾಗ್ಯ ಯೋಜನೆಯಡಿ ಪಡಿತರ ಚೀಟಿಯಲ್ಲಿನ ಪ್ರತಿ ಫಲಾನುಭವಿಗೆ 5 ಕೆಜಿ ಅಕ್ಕಿ ಜೊತೆಗೆ ಹೆಚ್ಚುವರಿ 5 ಕೆಜಿ ಅಕ್ಕಿಗೆ ಬದಲಾಗಿ ಪ್ರತಿ ಸದಸ್ಯರಿಗೆ 170 ರೂ.ಗಳಂತೆ 4,48,12,382 ಫಲಾನುಭವಿಗಳಿಗೆ 9,775 ಕೋಟಿ ರೂ.ಗಳನ್ನು ವರ್ಗಾವಣೆ ಮಾಡಲಾಗಿದೆ ಎಂದರು.

ರಾಜ್ಯದ ಹಣಕಾಸು ವ್ಯವಸ್ಥೆ ಉತ್ತಮವಾಗಿ ನಿರ್ವಹಿಸಿರುವ ಆದಾಯ ಸಂಗ್ರಹದಲ್ಲಿ ಶೇ.13 ರಷ್ಟು ಪ್ರಗತಿ ಸಾಧಿಸಿದೆ. ರಾಜ್ಯಗಳು ಸಂಗ್ರಹಿಸುವ ಜಿಎಸ್‍ಟಿ ಆದಾಯದಲ್ಲಿ ಕರ್ನಾಟಕವು ದೇಶದಲ್ಲಿ ಎರಡನೇ ಸ್ಥಾನದಲ್ಲಿದೆ. ಪ್ರಾಥಮಿಕ ಹಾಗೂ ಉನ್ನತ ಶಿಕ್ಷಣ ಬಲಪಡಿಸಲು ಹೊಸ ಶಿಕ್ಷಣ ನೀತಿ ಜಾರಿಗೊಳಿಸಲಾಗುತ್ತಿದೆ. ಕಳೆದ ಒಂದೂವರೆ ವರ್ಷದ ಅವಧಿಯಲ್ಲಿ 13 ಸಾವಿರಕ್ಕೂ ಅಧಿಕ ಬೋಧಕ ಹುದ್ದೆಗಳನ್ನು ಭರ್ತಿ ಮಾಡಲಾಗಿದೆ. ಆರೋಗ್ಯ ವ್ಯವಸ್ಥೆ ಸುಧಾರಣೆಗೆ ಹಾಸನದಲ್ಲಿ 142 ಕೋಟಿ ರೂ.ವೆಚ್ಚದಲ್ಲಿ 450 ಹಾಸಿಗೆ ಸಾಮಥ್ರ್ಯದ ಆಸ್ಪತ್ರೆ, ಕಲಬುರ್ಗಿಯಲ್ಲಿ 54 ಕೋಟಿ ರೂ. ವೆಚ್ಚದಲ್ಲಿ ಟ್ರಾಮಾ ಕೇರ್ ಆಸ್ಪತ್ರೆ, ಕೆಕೆಆರ್‍ಡಿಬಿಯ 304 ಕೋಟಿ ರೂ.ವೆಚ್ಚದಲ್ಲಿ ಜಯದೇವ ಹೃದ್ರೋಗ ಹಾಗೂ ಸಂಶೋಧನಾ ಸಂಸ್ಥೆ ನಿರ್ಮಿಸಲಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಮೂಲಗಳ ಗುಣಮಟ್ಟ ಕಾಪಾಡಿಕೊಳ್ಳಲು ರಾಜ್ಯದಲ್ಲಿ 79 ಪ್ರಯೋಗಾಲಗಳನ್ನು ಸ್ಥಾಪಿಸಲಾಗಿದೆ ಎಂದು ವಿವರಿಸಿದರು.

ರಾಜ್ಯದ ಸಮತೋಲಿತ, ಸಮಗ್ರ ಅಭಿವೃದ್ಧಿಗಾಗಿ ಡಾ.ಡಿ.ಎಂ.ನಂಜುಂಡಪ್ಪ ವರದಿ ಅನುμÁ್ಠನ ಮಾಡಲಾಗಿದೆ. ಉದ್ದೇಶಿತ ಗುರಿಗಳ ಸಾಧನೆ ಮಾಡಲಾಗಿದೆಯೆ ಎಂಬುದನ್ನು ಅರಿಯಲು ಪೆÇ್ರ.ಗೋವಿಂದರಾವ್ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ. ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ಸಂವಿಧಾನದ 371(ಜೆ) ಅನುಚ್ಛೇದ ಜಾರಿಗೊಳಿಸಲಾಗಿದೆ.

ಬೆಂಗಳೂರು ಮೆಟ್ರೊ ರೈಲು ಯೋಜನೆಯ ‘ಹಂತ 2ಎ’ ದಲ್ಲಿ ಸೆಂಟ್ರಲ್ ಸಿಲ್ಕ್ ಬೋರ್ಡಿನಿಂದ ಕೃಷ್ಣರಾಜಪುರದವರೆಗೆ, ‘ಹಂತ 2 ಬಿ’ ಯಡಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದವರೆಗೆ ಒಟ್ಟು 58 ಕಿ.ಮೀ.ಉದ್ದದ ಕಾಮಗಾರಿಯನ್ನು 14,788 ರೂ.ವೆಚ್ಚದಲ್ಲಿ ಕೈಗೊಳ್ಳಲಾಗಿದೆ. “ಹಂತ 3” ರಲ್ಲಿ 76 ಕಿ.ಮೀ.ಉದ್ದದ ಕಾಮಗಾರಿಯನ್ನು 15,611 ಕೋಟಿ ರೂ.ವೆಚ್ಚದಲ್ಲಿ ಕೈಗೊಳ್ಳಲಾಗಿದೆ.

ರೈತರ ಆದಾಯ ಹೆಚ್ಚಿಸಲು ಕಾರ್ಬನ್ ಹೀರಿಕೊಳ್ಳುವ ತೋಟಗಾರಿಕೆ ಬೆಳೆಗಳನ್ನು ಗುರುತಿಸುವ ಕಾರ್ಬನ್ ಕ್ರೆಡಿಟ್ ಫ್ರೇಮ್‍ವರ್ಕ್ (ಸಿಸಿಎಫ್) ಹೊಸ ಕಾರ್ಯಕ್ರಮ ಪರಿಚಯಿಸಲಾಗಿದೆ. 2024-25 ನೇ ಸಾಲಿನಲ್ಲಿ ಸುಮಾರು ರೂ. 16,700 ಕೋಟಿಗೂ ಅಧಿಕ ಮೊತ್ತದ ಅಲ್ಪಾವಧಿ ಬೆಳೆ ಹಾಗೂ ಮಧ್ಯಮ ಮತ್ತು ದೀರ್ಘಾವಧಿ ಕೃಷಿ ಸಾಲಗಳನ್ನು ವಿತರಿಸಲಾಗಿದೆ. ಹಾಲು ಉತ್ಪಾದಕರ ಪೆÇ್ರೀತ್ಸಾಹ ಯೋಜನೆಯಡಿ ರಾಜ್ಯದ ಸುಮಾರು 9 ಲಕ್ಷ ಹಾಲು ಉತ್ಪಾದಕರಿಗೆ 1124 ಕೋಟಿ ರೂ. ಪೆÇ್ರೀತ್ಸಾಹ ಧನ ವರ್ಗಾವಣೆ ಮಾಡಲಾಗಿದೆ ಎಂದರು.

ಮಕ್ಕಳಲ್ಲಿ ಪೌಷ್ಠಿಕತೆ ಹೆಚ್ಚಿಸಲು ಒತ್ತು:
ಮಕ್ಕಳಲ್ಲಿ ಪೌಷ್ಠಿಕತೆ ಹೆಚ್ಚಿಸಲು ಅಜೀಂ ಪ್ರೇಮ್ ಜಿ ಫೌಂಡೇಷನ್ ಸಹಯೋಗದೊಂದಿಗೆ ಸರ್ಕಾರಿ ಮತ್ತು ಅನುದಾನಿತ ಶಾಲಾ ಮಕ್ಕಳಿಗೆ ವಾರದಲ್ಲಿ ಆರು ದಿನಗಳ ಕಾಲ ಮೊಟ್ಟೆ ವಿತರಣೆ ಮಾಡಲಾಗುತ್ತಿದೆ.

ದೇಶದಲ್ಲಿಯೇ ಮೊದಲ ಬಾರಿಗೆ ಕೆಎಸ್‍ಆರ್‍ಟಿಸಿ ನೌಕರರಿಗೆ 1 ಕೋಟಿ ರೂ.ಮೌಲ್ಯದ ಅಪಘಾತ ವಿಮಾ ಯೋಜನೆ ಸೌಲಭ್ಯ ಒದಗಿಸಲಾಗಿದೆ ರಾಜ್ಯದ ಅಭಿವೃದ್ಧಿಯ ಅಂಶಗಳ ಮೇಲೆ ವಿಸ್ತøತವಾಗಿ ಬೆಳಕು ಚೆಲ್ಲಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ, ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್, ಕರ್ನಾಟಕ ಪೆÇಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್, ಬಿಬಿಎಂಪಿ ಮುಖ್ಯ ಆಯುಕ್ತ ತುμÁರ್ ಗಿರಿನಾಥ್, ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ.ಜಗದೀಶ್ ಮತ್ತಿತರರು ಉಪಸ್ಥಿತರಿದ್ದರು.

ದೇಶದ ಐಕ್ಯತೆ, ಸಮಗ್ರತೆ ಬಿಂಬಿಸಿದ ಸಾಂಸ್ಕøತಿಕ ಕಾರ್ಯಕ್ರಮಗಳು:

ಬೆಂಗಳೂರಿನ ಅಗರದ ಕರ್ನಾಟಕ ಪಬ್ಲಿಕ್ ಶಾಲೆಯ ಸುಮಾರು 800 ಮಕ್ಕಳು ಪ್ರದರ್ಶಿಸಿದ ನಾವೆಲ್ಲರೂ ಒಂದೇ ನಾವು ಭಾರತೀಯರು, 4/8 ಗೋರ್ಖಾ ರೈಫಲ್ಸ್‍ನ ಖುಕ್ರಿ ನೃತ್ಯ, ಪಂಜಾಬ್ ಪರಂಪರೆ ಬಿಂಬಿಸುವ ಭಾಂಗ್ರ ನೃತ್ಯ, ಹೇರೋಹಳ್ಳಿ ಸಂಯುಕ್ತ ಪ.ಪೂ.ಕಾಲೇಜಿನ 650 ಮಕ್ಕಳಿಂದ ಅರಿವೇ ಅಂಬೇಡ್ಕರ್ ನೃತ್ಯರೂಪಕ, ಮೈಸೂರು ಕೆಎಸ್‍ಆರ್‍ಪಿ ಮೌಂಟೆಡ್ ಪೆÇಲೀಸ್ ತಂಡದ ಟೆಂಟ್ ಪೆಗ್ಗಿಂಗ್, ಪೆÇಲೀಸ್ ಗರುಡ ಪಡೆಯಿಂದ ಭಯೋತ್ಪಾದಕರಿಂದ ಹೈಜಾಕ್ ಆದ ಬಸ್ ಪ್ರಯಾಣಿಕರ ರಕ್ಷಣೆ ಸೇರಿದಂತೆ ದೇಶದ ಐಕ್ಯತೆ, ಸಮಗ್ರತೆ, ಸಾರ್ವಭೌಮತ್ವ ಅಂಶಗಳನ್ನು ಸಾರಿದವು. ವಿವಿಧ ತುಕಡಿಗಳು ನಡೆಸಿದ ಆಕರ್ಷಕ ಪಥಸಂಚಲನ ಗಮನ ಸೆಳೆಯಿತು.

ಮಾಣಿಕ್ ಷಾ ಪೆರೇಡ್ ಮೈದಾನದಲ್ಲಿ ನಡೆದ ಸಾಂಸ್ಕøತಿಕ ಕಾರ್ಯಕ್ರಮಗಳಲ್ಲಿ ಬೆಂಗಳೂರಿನ ಅಗರದ ಕರ್ನಾಟಕ ಪಬ್ಲಿಕ್ ಶಾಲೆಯ ಸುಮಾರು 800 ಮಕ್ಕಳು ಪ್ರದರ್ಶಿಸಿದ “ನಾವೆಲ್ಲರೂ ಒಂದೇ ನಾವು ಭಾರತೀಯರು” ತಂಡಕ್ಕೆ ಪ್ರಥಮ ಬಹುಮಾನ, ಬಿಬಿಎಂಪಿ ಹೇರೋಹಳ್ಳಿ ಸಂಯುಕ್ತ ಪ.ಪೂ.ಕಾಲೇಜಿನ 650 ಮಕ್ಕಳಿಂದ ಅರಿವೇ ಅಂಬೇಡ್ಕರ್ ನೃತ್ಯರೂಪಕಕ್ಕೆ ದ್ವಿತೀಯ ಬಹುಮಾನ ದೊರೆತಿದೆ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಪ್ರಕಟಣಾ ಶಾಖೆಯ ಜಂಟಿ ನಿರ್ದೇಶಕರಾದ ಪಲ್ಲವಿ ಹೊನ್ನಾಪುರ ಅವರು ಸಾಂಸ್ಕøತಿಕ ಕಾರ್ಯಕ್ರಮಗಳ ತೀರ್ಪುಗಾರರಾಗಿ ಭಾಗವಹಿಸಿದ್ದರು.

2025 ನೇ ಗಣರಾಜ್ಯೋತ್ಸವ ದಿನಾಚರಣೆ ಕವಾಯತಿನಲ್ಲಿ ಭಾಗವಹಿಸಿದ ಗ್ರೂಪ್ -1 ಆರ್ಮಿ ತಂಡಕ್ಕೆ ಪ್ರಥಮ ಬಹುಮಾನ, ಬಿಎಸ್‍ಎಫ್ ತಂಡಕ್ಕೆ ದ್ವಿತೀಯ ಬಹುಮಾನ, ಏರ್‍ಪೋರ್ಸ್ ತಂಡಕ್ಕೆ ತೃತೀಯ ಬಹುಮಾನ ಹಾಗೂ ಕೆಎಸ್‍ಆರ್‍ಪಿ ತಂಡಕ್ಕೆ ನಾಲ್ಕನೇ ಬಹುಮಾನ ದೊರೆತಿದೆ.

ಗ್ರೂಪ್-2 ರಲ್ಲಿ ಅಗ್ನಿಶಾಮಕ ದಳ ತಂಡಕ್ಕೆ ಪ್ರಥಮ ಬಹುಮಾನ, ನ್ಯಾಷನಲ್ ಕೆಡಿಟ್ ಕ್ರಾಫ್ಸ್ (ಎನ್‍ಸಿಸಿ) ದ್ವಿತೀಯ ಬಹುಮಾನ, ಅಬಕಾರಿ ದಳಕ್ಕೆ ತೃತೀಯ ಬಹುಮಾನ, ನ್ಯಾಷನಲ್ ಸರ್ವೀಸ್ ಸ್ಕೀಂ (ಎನ್‍ಎಸ್‍ಎಸ್) ನಾಲ್ಕನೇ ಬಹುಮಾನ ದೊರೆತಿದೆ.

ಗ್ರೂಪ್ -3 ನಲ್ಲಿ ರಾಷ್ಟ್ರೀಯ ಮಿಲಿಟರಿ ಸ್ಕೂಲ್ ಪ್ರಥಮ ಬಹುಮಾನ, ಮಿತ್ರ ಅಕಾಡೆಮಿ ದ್ವಿತೀಯ ಬಹುಮಾನ ಪಡೆದಿದೆ.

ಗ್ರೂಪ್ -4 ರಲ್ಲಿ ಬಾಪು ಹೈಸ್ಕೂಲ್ ಪ್ರಥಮ ಬಹುಮಾನ, ಲಿಟಲ್ ಫ್ಲವರ್ ಪಬ್ಲಿಕ್ ಸ್ಕೂಲ್ ದ್ವಿತೀಯ ಬಹುಮಾನ ಪಡೆದಿದೆ.

ಗ್ರೂಪ್-6 ರಲ್ಲಿ ಧಾರವಾಡದ ಎನ್.ಎ.ಮುತ್ತಣ್ಣ ಮೆಮೋರಿಯಲ್ ಸ್ಕೂಲ್ ಪ್ರಥಮ ಬಹುಮಾನ, ನಂದಿನಿ ಲೇಔಟ್‍ನ ಪ್ರೆÀ್ರಸಿಡೆನ್ಸಿ ಶಾಲೆ ದ್ವಿತೀಯ ಬಹುಮಾನ ಪಡೆದಿದೆ.

ಗ್ರೂಪ್ -7 ಬ್ಯಾಂಡ್ ತಂಡಗಳಲ್ಲಿ ನಾರಾಯಣಪುರದ ಕ್ರಿಸ್ತೂ ಜಯಂತಿ ಸ್ಕೂಲ್ ಪ್ರಥಮ ಬಹುಮಾನ, ಕೋರಮಂಗಲ ಪೊಲೀಸ್ ಪಬ್ಲಿಕ್ ಶಾಲೆ ದ್ವಿತೀಯ ಬಹುಮಾನ ಪಡೆದಿದೆ.


ಪ್ರೇಮ ಕಾಶ್ಮೀರದಲ್ಲಿ ರಕ್ತದೋಕುಳಿ; ಹಿಂದೂಗಳೇ ಟಾರ್ಗೆಟ...!

  ಪ್ರೇಮ ಕಾಶ್ಮೀರದಲ್ಲಿ ರಕ್ತದೋಕುಳಿ; ಹಿಂದೂಗಳೇ ಟಾರ್ಗೆಟ್. ಭೂಲೋಕದ ಸ್ವರ್ಗವೆಂದೇ ಕರೆಯುವ ಜಮ್ಮು-ಕಾಶ್ಮೀರದ ಪೆಹಲ್ಗಾಮ್ ಸಮೀಪದ ಬೈಸರನ್ ಹುಲ್ಲುಗಾವಲಿನಲ್ಲಿ ಪಾಕ್ ಪ್...