ಬೀದರ : ಲಿಂಗಾಯತ ಮಠಾಧೀಶರ ಒಕ್ಕೂಟದ ಅಧ್ಯಕ್ಷರಾದ ಪೂಜ್ಯ ಡಾ. ನಾಡೋಜ ಬಸವಲಿಂಗ ಪಟ್ಟದ್ದೆವರು ಲಿಂಗಾಯತ ಧರ್ಮದ ತತ್ವ ಸಿದ್ಧಾಂತಗಳಿಗೆ ವಿರುದ್ಧವಾಗಿ ನಡೆದುಕೊಂಡು ಸಮಾಜಕ್ಕೆ ದ್ರೋಹ ಮಾಡುತ್ತಿದ್ದಾರೆ ಎಂದು ಹಿರಿಯ ಲಿಂಗಾಯತ ನಾಯಕ ಶಿವರಾಜ ಪಾಟೀಲ್ ಅತಿವಾಳ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವರು ತಕ್ಷಣವೇ ನೈತಿಕ ಹೊಣೆ ಹೊತ್ತು ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಅವರು ಇಂದು ಶೋಧವಾಣಿ ಯೊಂದಿಗೆ ಮಾತನಾಡುತ್ತ ಭಾಲ್ಕಿ ಹಿರೇಮಠ ಸಂಸ್ಥಾನದ ಗೌರವವನ್ನು ಪೂಜ್ಯ ಬಸವಲಿಂಗ ಪಟ್ಟದ್ದೆವರು ಕಳೆಯುತ್ತಿರುವುದು ಖೇದಕರ ಸಂಗತಿ. ಇತ್ತೀಚೆಗೆ ಕಲಬುರಗಿಯಲ್ಲಿ ನಡೆದ ಬಹುತ್ವ ಭಾರತ ಸಮಾವೇಶದಲ್ಲಿ ಭಾಗವಹಿಸಿ ಅವರೆ ಸಮಾವೇಶ ಉದ್ದೇಶಿಸಿ ಮಾತನಾಡುತ್ತಾ ಯಾರು ಭಾರತೀಯ ಸಂಸ್ಕೃತಿಯ ಉತ್ಸವಕ್ಕೆ ಹೋಗಬಾರದು ಎಂದು ನುಡಿದರು. ಮುಂದುವರೆದು ಯಾರು ಭಾಗವಹಿಸುತ್ತಾರೋ ಅವರು ಕೊರಳಿನಲ್ಲಿ ಕಟ್ಟಿರುವ ಲಿಂಗವನ್ನು ಬಿಚ್ಚಿಟ್ಟು ಹೋಗಬೇಕು ಹಾಗೂ ವಚನ ಸಾಹಿತ್ಯವನ್ನು ಬಳಸುವಂತಿಲ್ಲ ಎಂದು ತಾಕ್ಕಿತು ಮಾಡಿರುವ ಮಾತು ಪಟ್ಟದ್ದೆವರು ಮರೆತ್ತಿದ್ದಾರೆಯೇ ಎಂದು ಅತಿವಾಳ ಆಕ್ರೋಶ ವ್ಯಕ್ತಪಡಿಸಿದರು. ಆರೆಸಸ್ ಪ್ರಾಯೋಜಿತ ಭಾರತೀಯ ಸಂಸ್ಕೃತಿ ಉತ್ಸವ ಪ್ರಚಾರ ವಾಹನದ ಪೂಜೆ ಅವರ ಉತ್ತರಾಧಿಕಾರಿ ಪೂಜ್ಯ ಶ್ರೀ ಗುರುಬಸವ ಪಟ್ಟದೇವರು ಭಾಲ್ಕಿ ತಮ್ಮ ಮಠದ ಎದುರುಗಡೆ ಚಾಲನೆ ಕೊಟ್ಟರು, ಎಂತಹ ದ್ರೋಹ ವಿಡಂಬನೆ ಅಂದರೆ ಭಾರತೀಯ ಸಂಸ್ಕೃತಿ ಉತ್ಸವಕ್ಕೆ ಸಾನಿಧ್ಯ ಪೂಜ್ಯ ಶ್ರೀ ಡಾ ಬಸವಲಿಂಗ ಪಟ್ಟದೇವರು ವಹಿಸಿದರು.
ಲಿಂಗಾಯತ ಮಠಾಧೀಶರ ಒಕ್ಕೂಟದ ಅಧ್ಯಕ್ಷರಾಗಿ ಮಾಡಿದು ಬಸವಣ್ಣನವರ ತತ್ವ ಸಿದ್ಧಾಂತಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಪ್ರಚಾರ ಮಾಡುವ ಉದ್ದೇಶದಿಂದ ಆದರೆ ಬಸವಲಿಂಗ ಪಟ್ಟದ್ದೆವರು ತಮ್ಮ ಮಠದ ಅಭಿವೃದ್ಧಿ ಯೋಜನೆ ಮೂಲ ಮಂತ್ರವಾಗಿಸಿಕೊಂಡು ಇಂದು ಎಲ್ಲರ ಕೆಂಗಣ್ಣಿಗೆ ಗುರಿಯಾದರು, ಆರೆಸಸ್ ಮುಖಂಡ ಶ್ರೀ ಬಸವರಾಜ ಪಾಟಿಲ ಸೇಡಂ ಅವರ ಸಂಸ್ಥೆಯ ಫಲಾನುಭವಿಗಳು ಆದ ಭಾಲ್ಕಿ ಮಠ ಇಂದು ಲಿಂಗಾಯತ ಧರ್ಮ ಮತ್ತು ಬಸವ ತತ್ವ ಸಿದ್ದಾಂತ ಹಾಳು ಸ್ವಾರ್ಥಕ್ಕಾಗಿ ಮಾಡುತ್ತಿದೆ. ಈ ಪದ್ದತಿಯನ್ನು ಅನುಸರಿಸಿದರೆ ಮುಂದಿನ ದಿನಗಳಲ್ಲಿ ಬೀದಿಗಿಳಿದು ಪಟ್ಟದ್ದೆವರ ವಿರುದ್ಧ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಶಿವರಾಜ ಪಾಟೀಲ್ ಅತಿವಾಳ ಎಚ್ಚರಿಕೆ ನೀಡಿದರು.
ಶೋಧವಾಣಿಯೊಂದಿಗೆ ಮಾತನಾಡಿದ ಪಾಟೀಲ್, “ಬಸವಣ್ಣನವರ ಸಂಸ್ಕೃತಿಯನ್ನು ಬಿಟ್ಟು, ಆರಎಸ್ಎಸ್ ಸಂಸ್ಕೃತಿಯನ್ನು ತಮ್ಮ ಮಠದಲ್ಲಿ ಅಳವಡಿಸಿಕೊಂಡು, ಲಿಂಗಾಯತ ಧರ್ಮದ ತತ್ವಗಳನ್ನು ಗಾಳಿಗೆ ತೂರುತ್ತಿರುವ ಬಸವಲಿಂಗ ಪಟ್ಟದ್ದೆವರು ಸಮಾಜಕ್ಕೆ ದ್ರೋಹ ಮಾಡುತ್ತಿದ್ದಾರೆ. ಇಂತಹ ವ್ಯಕ್ತಿಯು ಲಿಂಗಾಯತ ಸಮುದಾಯದ ಕ್ಷೇಮವನ್ನು ನೋಡಲು ಸಾಧ್ಯವಿಲ್ಲ” ಎಂದು ಕಿಡಿಕಾರಿದರು. ಲಿಂಗಾಯತ ಸ್ವತಂತ್ರ ಧರ್ಮದ ಹೋರಾಟದಲ್ಲಿಯೂ ಭಾಗವಹಿಸಲು ಹಿಂದೇಟು ಹಾಕಿದರು, ಬೀದರ ಹೋರಾಟದಲ್ಲಿ ಮುಂಚೂಣಿಯಲ್ಲಿ ಇರಬೇಕಾದ ಇವರು ಭಾಲ್ಕಿಯ ತಮ್ಮ ಮಠದಲ್ಲಿ ಪ್ರಚಾರ ಸಭೆ ಇಟ್ಟುಕೊಂಡು ತಾವಿಬ್ಬರೂ ಗುರು ಶಿಷ್ಯ ತಮ್ಮ ಮಠದಲ್ಲಿಯೇ ಇರಲಿಲ್ಲ ಗೈರಾದರು, ಇದು ಇವರ ಇಬ್ಬಂಗಿ ತನ ,ಹೀಗಾಗಿ ಅವರ ಮುಖವಾಡವನ್ನು ಸಮಾಜದ ಮುಂದೆ ಕಳಚಿ ಬಿದ್ದಿದೆ ಎಂದು ಶಿವರಾಜ ಪಾಟೀಲ್ ಅತಿವಾಳ ಪಟ್ಟದ್ದೆವರ ವಿರುದ್ಧ ಹರಿಹಾಯಿದರು.
“ಒಕ್ಕೂಟದ ಉದ್ದೇಶವನ್ನು ಮರೆತು, ವ್ಯಕ್ತಿಗತ ಲಾಭದ ಕಡೆಗೆ ಗಮನ ಹರಿಸುವ ಈ ನಡೆ ಅಸ್ಥಿರತೆಯನ್ನು ಉಂಟುಮಾಡುತ್ತದೆ. ಲಿಂಗಾಯತ ಧರ್ಮದ ಹಿತವನ್ನು ಕಾಯುವುದಾದರೆ, ಅವರು ತಕ್ಷಣ ರಾಜೀನಾಮೆ ನೀಡಿ ತಮ್ಮ ಗೌರವ ಉಳಿಸಿಕೊಳ್ಳಬೇಕು” ಎಂದು ಪಾಟೀಲ್ ಒತ್ತಾಯಿಸಿದರು.
ಈ ಬೆಳವಣಿಗೆಯ ಹಿನ್ನೆಲೆ ಲಿಂಗಾಯತ ಸಮುದಾಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಮಠಾಧೀಶರ ಒಕ್ಕೂಟದ ಮುಂದಿನ ನಡೆಯ ಬಗ್ಗೆ ಕುತೂಹಲ ಮೂಡಿಸಿದೆ. ಶೀಘ್ರವೇ ಈ ಬಗ್ಗೆ ಮಹತ್ವದ ತೀರ್ಮಾನ ಕೈಗೊಳ್ಳುವ ಸಾಧ್ಯತೆಯಿದೆ. ಈ ನಿಟ್ಟಿನಲ್ಲಿ ಪೂಜ್ಯ ಡಾ ಬಸವಲಿಂಗ ಪಟ್ಟದ್ದೆವರು ಕೂಡಲೇ ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಎಲ್ಲಾ ಲಿಂಗಾಯತ ಮುಖಂಡರು ಆಗ್ರಹಿಸುತ್ತಿರುವುದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ ಸಂದೇಶಗಳನ್ನು. ಪಟ್ಟದ್ದೆವರ ನಿಲುವು ಕಾದು ನೋಡೋಣ..
No comments:
Post a Comment