ಪತ್ರಿಕೆ ಓದುವ ಮೂಲಕ ಜಿಲ್ಲಾ ಮಟ್ಟದ ಪತ್ರಿಕೆಗಳ ಓದುಗರ ಸಮಾವೇಶಕ್ಕೆ ಚಾಲನೆ
ಕಲಬುರಗಿ: ಪತ್ರಿಕೆ ಓದುವುದರಿಂದ ಜ್ಞಾನ ಹೆಚ್ಚಳವಾಗಲಿದೆ ಎಂದು ಪತ್ರಕರ್ತ- ಲೇಖಕ ಡಾ. ಶಿವರಂಜನ ಸತ್ಯಂಪೇಟೆ ತಿಳಿಸಿದರು.
ಕಲಬುರಗಿಯ ಪತ್ರಕರ್ತರ ಸಭಾಂಗಣದಲ್ಲಿ ಸೋಮವಾರ ಜರುಗಿದ ಪ್ರಜಾ ಸುದ್ದಿ ಕನ್ನಡ ದಿನಪತ್ರಿಕೆ ಜಿಲ್ಲಾ ಮಟ್ಟದ ಪತ್ರಿಕೆಗಳ ಓದುಗರ ಸಮಾವೇಶ ಹಾಗೂ ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದರು.
ಕಷ್ಟಪಟ್ಟು ಸಂಪಾದಿಸಿದ ಜ್ಞಾನ ಗಳಿಸಿದ ಸಂಪತ್ತಿಗಿಂತ ಮಿಗಿಲಾದುದಾಗಿದೆ. ಪತ್ರಿಕೆಗಳನ್ನು ಓದುವುದರಿಂದ ಐಎಎಸ್ ಮತ್ತು ಕೆಎಎಸ್ ಮತ್ತಿತರ ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಸಾಕಷ್ಟು ನೆರವಾಗಲಿದೆ ಎಂದು ಹೇಳಿದರು.
ಸಮಾಜ ಪರಿವರ್ತನೆಯಲ್ಲಿ ಸಮೂಹ ಮಾಧ್ಯಮಗಳ ಪಾತ್ರ ಮಹತ್ತರವಾಗಿದ್ದು, ಈ ನಿಟ್ಟಿನಲ್ಲಿ ಜನರನ್ನು ಜಾಗೃತಗೊಳಿಸಿ ವೈಚಾರಿಕತೆಯನ್ನು ಬೆಳೆಸಬೇಕು ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಜಾ ಸುದ್ದಿ ಪತ್ರಿಕೆಯ ಸಂಪಾದಕ ಶರಣಬಸಪ್ಪ ಕೆ.ಸೂಗೂರ ಮಾತನಾಡಿ, ಓದುಗರ ಸಮಾವೇಶ ಮಾಡುವ ಮೂಲಕ ಸಮಾಜಕ್ಕೆ ಅಗತ್ಯವಾದ ಕೊಡುಗೆಯನ್ನು ನೀಡಬೇಕು ಎಂದು ವಿವರಿಸಿದರು.
ಸಾಮಾಜಿಕ ಕಾರ್ಯಕರ್ತ ಬಾವರಾಜ ಎಂ. ರಾವೂರ ಮುಖ್ಯ ಅತಿಥಿಯಾಗಿದ್ದರು. ಇದೇವೇಳೆಯಲ್ಲಿ ವಿವಿಧ ಕ್ಷೇತ್ರದ ಸಾಧಕರಾದ ಪ್ರಭು ಸೋನಿ, ಶೇಖರ್ ಸೇಡಂ, ದೇವೇಂದ್ರಪ್ಪ ಕಟ್ಟಿಮನಿ, ಅಯಾಜುದ್ದೀನ್, ಧನರಾಜ್ ದೊಡ್ಡಮನಿ, ರಾಜಕುಮಾರ ದಣ್ಣೂರ, ರವಿ ಪೂಜಾರಿ, ಬಸವರಾಜ್ ಪಾಸ್ವಾನ್ , ಸುರೇಶ್ ದೇವಿಂದ್ರಪ್ಪ, ಅವಿನಾಶ್ ದೇವನೂರ್ ಅವರನ್ನು ಸತ್ಕರಿಸಲಾಯಿತು. ಡಾ. ಸುಖದೇವಿ ಗಂಟೆ ನಿರೂಪಿಸಿ ವಂದಿಸಿದರು. ಸೈದಮ್ಮ ಶಿವಗಂಗಾ ಪ್ರಾರ್ಥನೆಗೀತೆ ಹಾಡಿದರು.
ಪತ್ರಿಕೆ ಓದುವ ಮೂಲಕ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಬಿಇಡಿ ಪ್ರಶಿಕ್ಷಣಾರ್ಥಿಗಳು ದಿನಪತ್ರಿಕೆ ಓದುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿರುವುದು ವಿನೂತನವೆನಿಸಿತು. ಇದಕ್ಕೂ ಮುನ್ನ ನಮಗೆಷ್ಟು ಗೊತ್ತು ಕನ್ನಡ ದಿನಪತ್ರಿಕೆ ಓದುಗರ ಮಾದರಿ ಸ್ಪರ್ಧೆ ನಡೆಸಿದ್ದು ಕೂಡ ವಿಶೇಷವೆನಿಸಿತು.
No comments:
Post a Comment