ads

Search This Blog

Saturday, 22 February 2025

ಸಂತೋಷಕ್ಕೆ ಸ್ವಾಗತಿಸಿ, ಒತ್ತಡಕ್ಕೆ ಅಂತ್ಯ ಹಾಡಬೇಕಿದೆ: ಬಿ.ಕೆ ಶಕ್ತಿಕಾಂತ

 


ಬೀದರ್: ನಿತ್ಯ ಜೀವನದಲ್ಲಿ ಸಂತೋಷಕ್ಕೆ ಸ್ವಾಗತಿಸಿ, ಒತ್ತಡಕ್ಕೆ ಅಂತ್ಯ ಹಾಡಬೇಕಾಗಿದೆ ಎಂದು ರಾಜಸ್ಥಾನ ಮೌಂಟ್ ಅಬುದ ಅಂತರಾಷ್ಟ್ರೀಯ ಪ್ರೇರಣಾದಾಯಿ ಪ್ರವಚನಕಾರರಾದ ಬಿ.ಕೆ ಶಕ್ತಿಕಾಂತ ಭಾಯಿ ಜಿ ಹೇಳಿದರು.
ನಗರದ ಸಾಯಿ ಸ್ಕೂಲ್ ಅವರಣದಲ್ಲಿ ಸಂಜೆ ಬ್ರಹ್ಮಾಕುಮಾರಿಸ್ ಕೇಂದ್ರ ಪಾವನಧಾಮ ವತಿಯಿಂದ ಮೂರು ದಿವಸಗಳ ವರೆಗೆ ಜರುಗಲಿರುವ ಜೀವನೋತ್ಸವ ಪ್ರವಚನ ಮಾಲೆ ಕಾರ್ಯಕ್ರಮದ ಮುಖ್ಯ ಕೇಂದ್ರ ಬಿಂದುಗಳಾಗಿ ಮಾತನಾಡಿದ ಅವರು, ನಿತ್ಯ 75 ಪ್ರತಿಶತದಷ್ಟು ರೋಗಗಳು ಮಾನಸಿಕ ಖಿನ್ನತೆಯಿಂದಲೇ ಬರುತ್ತವೆ ಎಂದರು.
ನಾವು ನಮ್ಮಲ್ಲಿ ಕೆಲಸಕ್ಕೆ ಬಾರದಷ್ಟು ಅದೆಷ್ಟೊ ಚಿಂತೆಗಳಳನ್ನು ಮನಸ್ಸಿನಲ್ಲಿ ಹಿಡಿದಿಟ್ಟು, ನಮ್ಮ ಮನಸ್ಸಿನ ಕಂಟ್ರೋಲ್ ಇನ್ಯಾರಿಗೊ ಕೊಟ್ಟು ಒದ್ದಾಡುತ್ತಿರುತ್ತೇವೆ. ಇಂದು ಒತ್ತಡದ ಬದುಕಿನಿಂದ ಹೃದಯರೋಗ, ಸಿಟ್ಟಿನಿಂದ ಕ್ಯಾನ್ಸರ್, ಗರ್ವದಿಂದ ವರ್ತಿಸುತ್ತಿದ್ದರೆ ಕುತ್ತಿಗೆ ನೋವು ಬರುವ ಸಂಭೌ ಇರುತ್ತದೆ. ಆದ್ದರಿಂದ ನಿತ್ಯ ಖುಷಿ, ಪ್ರೇಮ, ಆನಂದ, ಶಕ್ತಿ, ಶಾಂತಿ, ಜ್ಞಾನ, ಪವಿತ್ರತೆ ಎಂಬ ಸಪ್ತ ಗುಣಗಳನ್ನು ನಿತ್ಯ ಧರಿಸಿದಲ್ಲಿ ಒತ್ತಡ ಮುಕ್ತ ಬದುಕು ಸಾಧ್ಯವಿದೆ ಎಂದರು.
ನಾವು ಭೂತಕಾಲದೆಲ್ಲವನ್ನು ನೆನಪು ಮಾಡಿ ಚಿಂತೆಗೊಳಗಾತ್ತೇವೆ. ಆದರೆ ಅದು ಯಾವ ಪ್ರಯೊಜನವಿಲ್ಲ. ಸುಮ್ಮನ್ನೆ ಭವಿಷ್ಯದ ಕನಸ್ಸು ಕಾಣಿ ವರ್ತಮಾನದಲ್ಲಿ ಆಗುವ ಅದೆಷ್ಟೊ ಸತ್ಯ ಘಟನೆಗಳನ್ನು ಮರೆತು ಪಶ್ಚಾತ್ತಾಪ ಪಡುತ್ತೇವೆ. ಸದಾ ಪ್ರಸ್ತುತತೆಗೆ ಒತ್ತು ನೀಡಬೇಕು, ನಮ್ಮ ಬದುಕಿನಲ್ಲಿ ಧನಾತ್ಮಕವೆಂಬ ಚೆಂಡನ್ನು ಎಸೆದರೆ ನಮಗೆ ಸದಾ ಧನಾತ್ಮಕ ಶಕ್ತಿ ದೊರಕುತ್ತದೆ. ಕೆಲಸಕ್ಕೆ ಬಾರದ ಸಾವಿರಾರು ಮಾತುಗಳು ನಮ್ಮಲ್ಲಿ ಶೇಖರಿಸಿಕೊಂಡು ನಮ್ಮ ಮನಸ್ಸನ್ನು ಕಸದ ಪೆಟ್ಟಿಗೆಯನ್ನಾಗಿ ಮಾಡಿಕೊಂಡಿದ್ದೇವೆ. ಇದು ಹಾರ್ಟ್ ಬ್ಲಾಕೆಜ್‌ಗೆ ಕಾರಣವಾಗುತ್ತದೆ. ನಮ್ಮಲ್ಲಿ ಪರಮಾತ್ನ ಶಕ್ತಿ ಅಡಗಿದ್ದು, ಅದನ್ನು ಹೊರಗಡೆ ತರುವ ಅರಿವು ಬೆಳೆಸಿಕೊಳ್ಳಬೇಕು. ಎದುರಿನವರು ನಮಗೆ ಏನೆ ಜರಿದರೂ ನಾವು ಪ್ರತಿಕ್ರಿಯಿಸದೇ ಮುಗುಳ್ನಗುತ್ತ ಸಾಗಿದರೆ ಎದುರಿನವನ ಸಿಟ್ಟು ತಣ್ಣದಾಗಿ, ನಮಗೂ ಯಾವುದೇ ಒತ್ತಡವಾಗದೇ ನಿರಾಯಾಸವಾಗಿ ಮುಂದೆ ಸಾಗಬಹುದಾಗಿದೆ ಎಂದವರು ತಿಳಿಸಿದರು.
ಅಧ್ಯಾತ್ಮವಲ್ಲಿ ಆತ್ಮವನ್ನು 6ನೇ ಇಂದ್ರಿಯಕ್ಕೆ ಹೋಲಿಸಲಾಗುತ್ತದೆ. ತಾಯಿಯ ಗರ್ಭದಲ್ಲಿದ್ದಾಗಲೇ 4ನೇ ತಿಂಗಳಲ್ಲಿ ಒಳಗಿರುವ ಶರೀರಕ್ಕೆ ಆತ್ಮ ಸೇರಿಕೊಳ್ಳುತ್ತದೆ. ಆಗ ಆ ಶರೀರ ಎಕ್ಟಿವ್ ಆಗುತ್ತದೆ. ಅಲ್ಲಿಯ ವರೆಗೆ ಕೇವಲ ನಿರ್ಜಿವದ ಮುದ್ದೆಯಾಗಿರುತ್ತದೆ. ಹಿಂದಿನ ಜನ್ಮದ ನಮ್ಮ ಎಲ್ಲ ನೆನಹುಗಳು ಖಾಲಿಯಾಗಿ ಹೊಸ ಚೈತನ್ಯವಾಗಿ ಹೊರ ಹೊಮ್ಮುತ್ತದೆ. ಅಷ್ಟು ಪರಿಶುದ್ದವಿರುವ ನಮ್ಮ ಹೂವಿನಂಥ ಮನಸ್ಸಿನಲ್ಲಿ ಸಾವಿರಾರು ಚಿಂತೆಗಳು ತುಂಬಿ ಒತ್ತಡಯುಕ್ತ ಜೀವನಕ್ಕೆ ಜೋತು ಬಿಳುತ್ತೇವೆ. ಇದನ್ನು ದೂರ ಮಾಡಲು ಋಣಾತ್ಮಕ ಆಲೋಚನೆಗಳನ್ನು ಕ್ಯಾನ್ಸಲ್ ಮಾಡಿ ಕೇವಲ ಧನಾತ್ಮಕ ವಿಚಾರಗಳನ್ನು ಮನದಲ್ಲಿ ಭರಿಸಿ ಶಕ್ತಿಭರಿತ ಹಾಗೂ ಸಪ್ತಗುಣಲಕ್ಷಣಗಳನ್ನು ಮೈಗೂಡಿಸಿಕೊಂಡು ಸಂತೋಷದ ಬದುಕು ನಮ್ಮದಾಗಿಸಿಕೊಳ್ಳುವಂತೆ ಶಕ್ತಿಕಾಂತ ಭಾಯಿ ಜಿ ಕರೆ ನೀಡಿದರು.
ನಿವೃತ್ತ ಜಿಲ್ಲಾ ಶಸ್ತ್ರ ಚಿಕಿತ್ಸೆಕ ಡಾ.ಚಂದ್ರಕಾAತ ಗುದಗೆ, ಹಿರಿಯ ಪತ್ರಕರ್ತ ಶಿವಶರಣಪ್ಪ ವಾಲಿ, ಉದ್ಯಮಿ ಬಸವರಾಜ ಧನ್ನುರ್, ರಮೇಶ ಗೋಯಲ್, ಕರ್ನಾಟಕ ರಾಷ್ಟ್ರೀಯ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಸತೀಶ ಪಾಟೀಲ, ಬ್ರಹ್ಮಾಕುಮಾರಿ ಕೇಂದ್ರ ಪಾವನಧಾಮದ ಪ್ರವರ್ತಕರಾದ ಬಿ.ಕೆ ಪ್ರಭಾಕರ ಕೋರವಾರ ಹಾಗೂ ಇತರರು ವೇದಿಕೆಯಲ್ಲಿದ್ದರು.
ಆರಂಭದಲ್ಲಿ ನಾಸಿಕ್ ನ ಶಾಸ್ತ್ರೀಯ ಸಂಗೀತಗಾರರಾದ ಬಿ.ಕೆ ಓಂಕಾರ ಭಾಯಿ ಜಿ ಸಂಗೀತ ಸಂಜೆ ಕಾರ್ಯಕ್ರಮ ಜರುಗಿತು. ಕು. ಸಂಯುಕ್ತಾ ಹಾಗೂ ಕು.ಅನನ್ಯಾ ಸ್ವಾಗತ ನೃತ್ಯಗೈದರು. ಬ್ರಹ್ಮಾಕುಮಾರಿ ಕೇಂದ್ರ ಪಾಚನದಸಾಮ ಸಂಚಾಲಕಿ ಬಿ.ಕೆ ಪ್ರತಿಮಾ ಬಹೆನ್ ಜಿ ಸರ್ವರನ್ನು ಸ್ಚಾಗತಿಸಿದರು. ನೌಬಾದ್ ಬ್ರಹ್ಮಾಕುಮಾರಿ ಕೇಂದ್ರದ ಬಿ.ಕೆ ಜ್ಯೋತಿ ಬಹೆನ್ ಕಾರ್ಯಕ್ರಮ ನಿರೂಪಿಸಿದರು.
ಇದಕ್ಕೂ ಮುನ್ನ ಆಗಮಿಸಿದ ಅತಿಥಿ ಗಣ್ಯರು ಆರತಿ ಬೆಳಗಿ ಸಹಸ್ರ ಜ್ಯೋತಿರ್ಲಿಂಗ ದರುಶನಕ್ಕೆ ಚಾಲನೆ ನೀಡಿದರು. ಬ್ರಹ್ಮಾಕುಮಾರಿಸ್ ಕೇಂದ್ರ ಶಿವಶಕ್ತಿ ಭವನದ ಬಿ.ಕೆ ಸುಮಂಗಲಾ ಬಹೆನ್ ಜಿ ಹಾಗೂ ಬಿ.ಕೆ ಸುನಂದಾ ಬಹೆನ್ ಜಿ, ಡಾ.ಎಸ್.ಎಸ್ ಸಿದ್ದಾರೆಡ್ಡಿ ಫೌಂಡೇಶನ್ ಗೌರವಾಧ್ಯಕ್ಷೆ ಡಾ.ಗುರಮ್ಮ ಸಿದ್ದಾರಡ್ಡಿ, ಬಿ.ಕೆ ಗುರುದೇವಿ ಅಕ್ಕನವರು ಸೇರಿದಂತೆ ನೂರಾರು ಬಿ.ಕೆ ಸಹೋದರ, ಸಹೋದರಿಯರು, ಸಾವಿರಾರು ಭಕ್ತಾದಿಗಳು ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

No comments:

ಪ್ರೇಮ ಕಾಶ್ಮೀರದಲ್ಲಿ ರಕ್ತದೋಕುಳಿ; ಹಿಂದೂಗಳೇ ಟಾರ್ಗೆಟ...!

  ಪ್ರೇಮ ಕಾಶ್ಮೀರದಲ್ಲಿ ರಕ್ತದೋಕುಳಿ; ಹಿಂದೂಗಳೇ ಟಾರ್ಗೆಟ್. ಭೂಲೋಕದ ಸ್ವರ್ಗವೆಂದೇ ಕರೆಯುವ ಜಮ್ಮು-ಕಾಶ್ಮೀರದ ಪೆಹಲ್ಗಾಮ್ ಸಮೀಪದ ಬೈಸರನ್ ಹುಲ್ಲುಗಾವಲಿನಲ್ಲಿ ಪಾಕ್ ಪ್...